
ತಿಪಟೂರು :ತಾಲ್ಲೂಕು ಹೊನ್ನವಳ್ಳಿ ಹೋಬಳಿ ಬಿ. ರಂಗಾಪುರ ವಾಸಿಯಾದ ರೇಖಾ ಎಂ. ಎಂಬುವರು ತಿಪಟೂರು ತಾಲೂಕು ಹೊನ್ನವಳ್ಳಿ, ಹೋಬಳಿ ಮರಿಸಿದ್ದಯ್ಯನ ಪಾಳ್ಯ ದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕಿ ಯಾಗಿ ಕಾರ್ಯನಿರ್ವಹಿಸುತ್ತಿದು,ಬೆಳಗ್ಗೆ 9.30 ರಲ್ಲಿ ಕನಕಜಯಂತಿ ಕಾರ್ಯಕ್ರಮ ಮುಗಿಸಿಕೊಂಡು ಮನೆಗೆ ಹಿಂತಿರುಗುವಾಗ ದುಷ್ಕರ್ಮಿಗಳು ಬುಲೆಟ್ ಬೈಕ್ ನಲ್ಲಿ ಬಂದು ಶಿಕ್ಷಕಿಯ ಬೈಕ್ ಅನ್ನು ಅಡ್ಡಗಟಿ
ಎರಡು ಎಳೆ ಚಿನ್ನದ 40 ಗ್ರಾಂ ಮಾಂಗಲ್ಯ ಸರ .ಮತ್ತು 20garm ಚೈನ್ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ನಡೆದಿದೆ.

ತಕ್ಷಣ ಶಿಕ್ಷಕಿ ತನ್ನ ಮೊಬೈಲ್ ಪೋನ್ ನಿಂದ. ಬೈಕಿನ ಫೋಟೋ ತೆಗೆಯಲು ಹೋದಾಗ ಮೊಬೈಲ್ ಕಸಿದುಕೊಂಡು ಪರಾರಿ ಹಾಗಿದ್ದಾರೆ. ಅವರೆ ಬೈಕ್ ಬೇಗ ಸ್ಟಾರ್ಟ್ ಆಗದಿದ್ದ ಕಾರಣ ಬುಲೆಟ್ ಬೈಕ್ ನಂಬರನ್ನು ತನ್ನ ಕೈಗೆ ಬರೆದುಕೊಂಡಿದ್ದಾರೆ.
.ಶಿಕ್ಷಕಿ ಹೊನ್ನವಳ್ಳಿ ಠಾಣೆಯಲ್ಲಿ ದೂರು ನೀಡಿದು,ದೂರಿನನ್ವಯ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಶಿಕ್ಷಕಿಯ ಕುತ್ತಿಗೆ ಭಾಗಕ್ಕೆ ಗಾಯಗಳಾಗಿದ್ದ ಕಾರಣ ತಿಪಟೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಹಾಡು ಆಗಲೇ ಸಿನಿಮೀಯ ರೀತಿಯಲ್ಲಿ ಕೃತ್ಯ ನಡೆದಿರುವುದರಿಂದ ಸಾರ್ವಜನಿಕರು ಆತಂಕಕ್ಕೆ ಒಳಗಾಗಿದ್ದಾರೆ,









Leave a Reply