ತಿಪಟೂರು: ನಗರಸಭೆ ಚುನಾವಣೆ ಅಕ್ಟೋಬರ್ 29ರಂದು.ಆಧ್ಯಕ್ಷಸ್ಥಾನಕ್ಕೆ ನಡೆಯುತ್ತಿರುವ ಚುನಾವಣೆಯಲ್ಲಿ ಬಿಜೆಪಿ ಸದಸ್ಯರಾದ ಶ್ರೀಮತಿ ಓಹೀಲಾ ಎಂ.ಎಸ್ ಹಾಗೂ ವಾರ್ಡ್ ನಂಬರ್ 31ರ ಬಿಜೆಪಿ ಸದಸ್ಯೆ ಶ್ರೀಮತಿ ಎಂ.ಎಸ್ ಅಶ್ವಿನಿ ಎರಡು ನಾಮಪತ್ರಸಲ್ಲಿಸಿದ್ದು ಇಬ್ಬರೂ ಬಿಜೆಪಿ ಸದಸ್ಯರು ನಾಮಪತ್ರಸಲ್ಲಿಸಿದ್ದಾರೆ. ಜೆಡಿಎಸ್ ಹಾಗೂ ಆಡಳಿತರೂಡ ಕಾಂಗ್ರೇಸ್ ಪಕ್ಷದಿಂದ ಯಾವುದೇ ನಾಮಪತ್ರಸಲ್ಲಿಕೆಯಾಗಲಿಲ್ಲ, .ಬಿಜೆಪಿ ಸದಸ್ಯೆಯಾದ ಎಂ.ಎಸ್. ಅಶ್ವಿನಿ ಶಾಸಕ ಕೆ.ಷಡಕ್ಷರಿ ಯವರ ಕಾರಿನಲ್ಲಿ ಬಂದು ನಾಮಪತ್ರಸಲ್ಲಿದ್ದಾರೆ ಎನ್ನಲಾಗಿದ್ದು, ಆಡಳಿತರೂಢ ಸರ್ಕಾರದ ಕಾಂಗ್ರೇಸ್ ಸದಸ್ಯರು ನಾಮಪತ್ರ ಸಲ್ಲಿಸದೇ ಇರುವುದು,ಸಾರ್ವಜನಿಕರಲ್ಲಿ ಕುತೂಹಲ ಉಂಟುಮಾಡಿದೆ. ಒಟ್ಟು 3ನಾಮಪತ್ರಗಳು ಸಲ್ಲಿಕೆಯಾಗಿದ್ದು
ಒಟ್ಟು 31 ಸದಸ್ಯ ಬಲದ ನಗರಸಭೆಯಲ್ಲಿ ಶಾಸಕರು ಹಾಗೂ ಸಂಸದರ ಮತಸೇರಿ 33ಮತಗಳು ಕೃಢೀಕರಗೊಳ್ಳುತ್ತವೆ.

ನಗರಸಭೆಯಲ್ಲಿ ಬಿಜೆಪಿ 11ಸದಸ್ಯರು,ಕಾಂಗ್ರೇಸ್ ಪಕ್ಷದ 09 ಸದಸ್ಯರು ,ಜೆಡಿಎಸ್ ಪಕ್ಷದಿಂದ 05 ಜನ ಸದಸ್ಯರು ಪಕ್ಷೇತರರಾಗಿ 06ಜನ ಶಾಸಕರು ಹಾಗೂ ಸಂಸದರ ಮತ ಸೇರಿ33ಮತಗಳ ಆಗುತ್ತವೆ. ಆದರೆ ಸಂಸದರು ಗೈರುಹಾಜರಿಯಿಂದ 32 ಮತ ಚಲಾವಣೆಯಾಗಿವೆ.ಕಳೆದ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ವಿಪ್ ಉಲ್ಲಂಗಿಸಿ ಅಡ್ಡ ಮತದಾನದ ಮಾಡಿ ಅನಾರ್ಹತೆ ಹೊಂದಿದ್ದ,ನಗರಸಭೆ ಸದಸ್ಯರಾದ ಶ್ರೀಮತಿ ಅಶ್ವಿನಿ ಎಂ.ಎಸ್. ಕಾಂಗ್ರೇಸ್ ಪಾಳಯದಿಂದ ಚುನಾವಣೆಗೆ ಸ್ಪರ್ಧೆ ಮಾಡಿರುವ ರಾಜಕೀಯ ತಂತ್ರಗಾರಿಗೆ ತೀವ್ರ ಕುತೂಹಲಕ್ಕೆ ಕಾರಣವಾದೇ.ಕಳೆದ ಭಾರಿ ಅಡ್ಡಮತದಾನ ಮಾಡಿದ ಎಂ.ಬಿ.ಜಯರಾಮ್ ಬಿಜೆಪಿ ಪಾಳಯದಲ್ಲಿ ಸಕ್ರೀಯರಾಗಿದ್ದಾರೆ. ಆಸೀಫಾ ಬಾನು,ಪದ್ಮ ರವರ ನಡೆ ನಿಗೂಡವಾಗಿದೆ.ಅನರ್ಹತೆ ವಿರುದ್ದ ತಡೆಯಾಜ್ಞೆ ತಂದು ಅಭ್ಯಾರ್ಥಿಯಾಗಿರುವುದಕ್ಕೆ ಬಿಜೆಪಿ ಸದಸ್ಯರು ಆಕ್ಷೇಪಣೆ ಸಲ್ಲಿಸಿದ್ದು,ಮತದಾನಕ್ಕೆ ಮಾತ್ರ ಆದೇಶ ತಂದಿದ್ದು .ಆದರೂ ಅಭ್ಯಾರ್ಥಿಯಾಗಿ ಸಲ್ಲಿಸಿರುವುದು ಸರಿಯಲ್ಲ ಅನೋದು ಬಿಜೆಪಿ ಸದಸ್ಯರ ವಾದ. ಚುನಾವಣೆ ಪ್ರತ್ರಿಯೆ ಮುಕ್ತಾಯಚಾಗಿದ್ದು,ಹೈ ಕೋರ್ಟ್ ಆದೇಶದಂತೆ ಮುಚ್ಚಿದ ಲಾಕೋಟೆಯಲ್ಲಿ ಹೈಕೋರ್ಟ್ ಫಲಿತಾಂಶ ಸಲ್ಲಿಸಿದ್ದು.ಕೋರ್ಟ್ ಆದೇಶದಂತೆ ಫಲಿತಾಂಶ ಘೋಷಣೆಯಾಗಲಿದೆ. ಡಾ//ಓಹೀಲಾ ಗಂಗಾಧರ್ ಹಾಗೂ ಶ್ರೀ ಅಶ್ವಿನಿ ಎಂ.ಎಸ್ ಇಬ್ಬರಲ್ಲಿ ಯಾರು ನಗರಸಭೆ ಅಧ್ಯಕ್ಷರಾಗಿ ಆಯ್ಕೆಯಾಗುತ್ತಾರೆ ಕಾದು ನೋಡಬೇಕಾಗಿದೆ.ನಾಳೆ ಅಕ್ಟೋಬರ್ 30ರಂದೇ ನಗರಸಭೆ ಆಡಳಿತಾವಧಿ ಮುಕ್ತಾಯಗೊಳ್ಳಲಿದ್ದು.ಚುನಾವಣೆ ನೀರಸವಾಗಿ ಮುಕ್ತಾಯಗೊಂಡರೂ ಫಲಿತಾಂಶ ಕುತೂಹಲಕ್ಕೆ ಕಾರಣವಾಗಿದೆ.ರಾಷ್ಟ್ರೀಯ ಪಕ್ಷವಾದ ಆಡಳಿತ ರೂಢ ಕಾಂಗ್ರೇಸ್ ಪಕ್ಷದಿಂದ ಯಾವುದೇ ಅಭ್ಯಾರ್ಥಿ ನಾಮಪಕ್ಷಸಲ್ಲಿಸದೆ ಇರುವುದು.ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದು.ಅಭ್ಯಾರ್ಥಿಗಳ ಅಭಾವವೋ ಅಥವಾ ಒಂದು ದಿನದ ಚುನಾವಣೆ ಅಧ್ಯಕ್ಷರ ಖುರ್ಚಿಯಲ್ಲಿ ಕೂರುವಹಾಗಿಲ್ಲ.ಅನೋ ಕಾರಣಕ್ಕೆ ಯಾರು ನಾಮಪತ್ರಸಲ್ಲಿಸಲು ಮುಂದೆ ಬಂದಿಲ್ಲವೋ ಅನುವುದೇ ನಿಗೂಡವಾಗಿ ಉಳಿದಿದೆ. ಚುನಾವಣಾ ಫಲಿತಾಂಶ ರಾಜ್ಯದ ಗಮನಸೆಳೆಯಲಿದೆ.ಜೊತೆಗೆ ಐತಿಹಾಸಿಕ ಮೈಲುಗಲ್ಲಾಗಿ ಉಳಿಯಲಿದೆ.
ತಿಪಟೂರು ಉಪವಿಭಾಗಾಧಿಕಾರಿಗಳು ಹಾಗೂ ಚುನಾವಣಾಧಿಕಾರಿ ಶ್ರೀಮತಿ ಸಪ್ತಶ್ರೀ ಮಾಧ್ಯಮಗಳೊಂದಿಗೆ ಮಾತನಾಡಿ ನಗರಸಭೆ ಅಧ್ಯಕ್ಷರಾಗಿದ ಯಮುನಾ ಧರಣೇಶ್ ರವರ ರಾಜೀನಾಮೆಯಿಂದ ತೆರವಾಗಿದ ಸ್ಥಾನಕ್ಕೆ ಚುನಾವಣೆ ನಡೆದಿದ್ದು ಶ್ರೀಮತಿ ಡಾ//ಓಹೀಲಾ ಎಂ.ಎಸ್.ಹಾಗೂ ಶ್ರೀಮತಿ ಅಶ್ವಿನಿ ನಾಮಪತ್ರ ಸಲ್ಲಿಸಿದ್ದು.ಚುನಾವಣಾ ಪ್ರಕ್ರಿಯೆ ಪೂರ್ಣಗೊಂಡಿದ್ದು.29ಜನ ಸದಸ್ಯರು ಕೈ ಎತ್ತುವ ಮೂಲಕ ಮತಚಲಾಯಿಸಿದರೆ.4ಜನ ಸದಸ್ಯರು ಗುಪ್ತ ಮತದಾನದ ಮೂಲಕ ಹಕ್ಕು ಚಲಾಯಿಸಿದ್ದಾರೆ.ಹೈ ಕೋರ್ಟ್ ಆದೇಶದಂತೆ ಮುಚ್ಚಿದ ಲಾಕೋಟೆಯಲ್ಲಿ ಕೋರ್ಟ್ ಗೆ ಸಲ್ಲಿಸುತ್ತಿದ್ದು.ಕೋರ್ಟ್ ಆದೇಶದಂತೆ ಚುನಾವಣಾ ಫಲಿತಾಂಶ ಪ್ರಕಟಣೆ ಮಾಡುವುದ್ದಾಗಿ ತಿಳಿಸಿದರು.
ವರದಿ:ಮಂಜುನಾಥ್ ಹಾಲ್ಕುರಿಕೆ









