ತಿಪಟೂರು:ನಗರದ ಜನರಿಗೆ ಮೂಲಭೂತ ಸೌಕರ್ಯ ಒದಗಿಸಬೇಕಾಗಿರುವುದು ನಗರಸಭೆ ಹಾಗೂ ಶಾಸಕನಾದ ನನ್ನ ಜವಾಬ್ದಾರಿ ಈ ನಿಟ್ಟಿನಲ್ಲಿ ತಿಪಟೂರು ನಗರಕ್ಕೆ 2ಹಂತದ ಕುಡಿಯುವ ನೀರಿನ ಯೋಜನೆಗೆ ಸರ್ಕಾರದ ತಾಂತ್ರಿಕ ತಜ್ಞರ ವರದಿಯಂತೆ ಪರಿಶೀಲನೆ ನಡೆಸಿ ನೊಣವಿನಕೆರೆ ಯಿಂದ ನೀರು ತರಲು ಡಿಪಿಆರ್ ಸಿದ್ದಪಡಿಸಿದೆ,ತಿಪಟೂರು ನಗರ ವೇಗವಾಗಿ ಬೆಳವಣಿಗೆ ಹೊಂದುತ್ತಿದ್ದು ನಗರದ ಜನಸಂಖ್ಯೆ 1ಲಕ್ಷದ ಗಡಿದಾಟಿದು,ಪ್ರತಿದಿನ ನಗರದ ಜನರ ಕುಡಿಯುವ ನೀರಿಗೆ 140ರಿಂದ160ಎಂಸಿಎಫ್ಟಿ ನೀರು ಬೇಕು. ಈಚನೂರು ಕೆರೆ ಕುಡಿಯುವ ನೀರಿನ ಸಾಮರ್ಥ್ಯ 30ಎಂಸಿಎಫ್ಟಿ ಆಗಿದ್ದು, ನೊಣವಿನಕೆರೆ ನೈಸರ್ಗಿಕವಾಗಿ 350ಎಂಸಿಎಫ್ಟಿ ನೀರಿನ ಸಾಮರ್ಥ್ಯ ಹೊಂದಿದೆ, ನೊಣವಿನಕೆರೆ ಅಚ್ಚುಕಟ್ಟು ಭಾಗದ ಜನರಿಗೆ 190ಎಂಸಿಎಫ್ಟಿ ನೀರು ಉಪಯೋಗವಾದರು,140ರಿಂದ 160ಎಂಸಿಎಫ್ಟಿ ನೀರು ತಿಪಟೂರು ನಗರದ ಕುಡಿಯುವ ನೀರಿನ ಯೋಜನೆಗೆ ದೊರೆಯುತ್ತದೆ.ಈ ಯೋಜನೆಯಿಂದ ನೊಣವಿನಕೆರೆ ಭಾಗದ ರೈತರಿಗೆ ಯಾವುದೇ ತೊಂದರೆಯಾಗುವುದಿಲ್ಲ.ನಗರದ ಜನರಿಗೂ ಶಾಶ್ವತ ಕುಡಿಯುವ ನೀರು ದೊರೆಯುತ್ತದೆ ಎಂದು ತಿಳಿಸಿದರು.

ನಗರಸಭೆ ಶಾಸಕರ ಕಚೇರಿಯಲ್ಲಿ ಆಯೋಜಿಸಿದ ಪತ್ರಿಕಾ ಘೋಷ್ಠಿಯಲ್ಲಿ ಮಾತನಾಡಿದ ಅವರು ನಗರದ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬೇಕು ಎನ್ನುವ ನಿಟ್ಟಿನಲ್ಲಿ ಸರ್ಕಾರಕ್ಕೆ ನಿವೇದನೆ ಮಾಡಿಕೊಂಡಿದ್ದೆ, ಅದರಂತೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಪೌರಾಡಳಿತ ಸಚಿವರು ಹಾಗೂ ಅಧಿಕಾರಿಗಳು ಸಭೆ ನಡೆಸಿ ತಂತ್ರಿಕ ತಜ್ಞರ ಸಲಹೆಯಂತೆ,ಯೋಜನೆ ರೂಪಿಸಿದ್ದು.ಇನ್ನು ಒಂದು ವರ್ಷದಲ್ಲಿ ಯೋಜನೆ ಪೂರ್ಣಗೊಳಿಸಿ,ನಗರಕ್ಕೆ ಕುಡಿಯುವ ನೀರು ಒದಗಿಸಲಾಗುವುದು. ನೊಣವಿನಕೆರೆ ಜೊತೆಗೆ ಈಚನೂರು ಕೆರೆ ನೀರನ್ನೂ ಸಹ ಯೋಜನೆಗೆ ಬಳಸಿಕೊಳ್ಳುತ್ತೇವೆ.ತಿಪಟೂರು ನಗರದ ಅಮಾನೀಕೆರೆ ಪೂರಾತನಕೆರೆಯಾಗಿದ್ದು,ಕೆರೆ ಏರಿ ಶೀಥಿಲಾವಸ್ಥೆ ತಲುಪಿದು,ಕೆರೆಯ ನೀರು ಸೋರಿಕೆಯಾಗುತ್ತಿದೆ, ಅಲ್ಲದೆ,ಕೆರೆ ಏರಿ ಹೊಡೆದರೆ ಈಡೇನಹಳ್ಳಿ,ಕೊಪ್ಪ,ಈಡೇನಹಳ್ಳಿ ಪಾಳ್ಯ ಸೇರಿ ನಾಲ್ಕೈದು ಹಳ್ಳಿಗಳು ಮುಳುಗಡೆಯಾಗಿ, ಅಪಾಯಕ್ಕೆ ಸಿಲುಕಬಹುದು,ಈ ಬಗ್ಗೆ ಕೃಷ್ಣರಾಜ ಸಾಗರ ತಂತ್ರಿಕ ತಜ್ಞರ ತಂಡ ಭೇಟಿ ನೀಡಿ ಪರಿಶೀಲನೆ ಮಾಡಿ ಏರಿ ದುರಸ್ಥಿಗೆ ಸೂಚನೆ ನೀಡಿರುವ ಕಾರಣ,ತುರ್ತಾಗಿ 19ಕೋಟಿ ವೆಚ್ಚ ದುರಸ್ಥಿ ಕೈಗೊಳ್ಳುತ್ತಿದ್ದು ,ದುರಸ್ಥಿಯ ನಂತರ ತಿಪಟೂರು ಅಮಾನೀಕೆರೆ ನೀರು ಹರಿಸಲಾಗುವುದು ಎಂದು ತಿಳಿಸಿದರು.

ಪೌರಾಯುಕ್ತ ವಿಶ್ವೇಶ್ವರಯ್ಯ ಬದರಗಡೆ,ಮಾತನಾಡಿ ತಿಪಟೂರು ನಗರಕ್ಕೆ ಕುಡಿಯುವ ನೀರಿಗೆ ಶಾಶ್ವತ ಪರಿಹಾರ ಕಂಡುಕೊಳ್ಳ ಸಾಮಾನ್ಯ ಸಭೆ ನಿರ್ಣಯದಂತೆ ಸರ್ಕಾರ ತಜ್ಞರ ಅಭಿಪ್ರಾಯದಂತೆ ನೊಣವಿನಕೆರೆಯಿಂದ ಕುಡಿಯುವ ನೀರಿನ ಯೋಜನೆ ರೂಪಿಸಿದೆ,ನಗರ ಹೆಚ್ಚುವರಿ ತ್ಯಾಜ್ಯ ನೀರು ಸಂಸ್ಕರಣ ಒಳಚರಂಡಿ ಯೋಜನೆ ರೂಪಿಸಲಾಗಿದೆ,ಈಡೇನಹಳ್ಳಿ,ಹಾಗೂ ಗೊರಗೊಂಡನಹಳ್ಳಿ ವೆಟ್ ವೆಲ್ ನಲ್ಲಿ ಶೇಖರಣೆ ಮಾಡಿ ಅಲ್ಲಿಂದ ಕಲ್ಲೇಗೌಡನಪಾಳ್ಯ ಸಂಸ್ಕರಣ ಘಟಕದಲ್ಲಿ ಸಂಸ್ಕರಣೆ ಮಾಡುವುದು,ಹಾಗೂ ಯುಜಿಡಿ ಸಂಪರ್ಕದಿಂದ ಬಿಟ್ಟಿರುವ ವಸತಿ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸಿ ಪೈಪ್ ಲೈನ್ ನಿರ್ಮಾಣ ಹಾಗೂ3 ಎಂ ಎಲ್.ಡಿ ತೊಟ್ಟಿ ನಿರ್ಮಾಣ ಮಾಡಿ ಸಂಸ್ಕರಣೆ ಮಾಡು ಕಾಮಗಾರಿ ಅನುಮೋದನೆ ಹಂತದಲ್ಲಿ ಎಂದು ತಿಳಿಸಿದರು.
ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್ ದೊಡ್ಡಯ್ಯ ಮಾತನಾಡಿ ತಿಪಟೂರು ಅಮಾನೀಕೆರೆಯಿಂದ ನೀರು ಸೋರಿಕೆಯಾಗುತ್ತಿದ್ದು ಕೆರೆ ಏರಿ ಹಿಂಭಾಗದ ಬಡಾವಣೆ ನಿವಾಸಿಗಳು ಅನೇಕ ಭಾರೀ ಏರಿ ದುರಸ್ಥಿಗೆ ಸರ್ಕಾರಕ್ಕೆ ಮನವಿ ಮಾಡಿದರು.ಅದರಂತೆ ಕೆ.ಆರ್ ಎಸ್ ತಜ್ಞರ ತಂಡ ನಾಲ್ಕೈದು ಬಾರೀ ಭೇಟಿ ನೀಡಿ ಕೆರೆ ಏರಿ ಮಣ್ಣು ಪರಿಶೀಲನೆ ನಡೆಸಿದ್ದು, ಏರಿಯ ಕೆಲ ಭಾಗದಲ್ಲಿ ಮಣ್ಣಿನ ಗುಣಮಟ್ಟ ಕಡಿಮೆಯಾಗಿದ್ದು,ಏರಿದುರಸ್ಥಿಗೆ ಸೂಚನೆ ನೀಡಿರುವ ಕಾರಣ ಕೆರೆ ಏರಿ ದುರಸ್ಥಿ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಸಭೆಯಲ್ಲಿ ನಗರಸಭೆ ಅಧ್ಯಕ್ಷೆ ಶ್ರೀಮತಿ ಯಮುನಾಧರಣೇಶ್ ಉಪಸ್ಥಿತರಿದರು
ವರದಿ:ಮಂಜುನಾಥ್ ಹಾಲ್ಕುರಿಕೆ




