ತಿಪಟೂರು:ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ವಿಪ್ ಉಲ್ಲಂಗನೆ ಮಾಡಿ ಅಡ್ಡ ಮತದಾನದ ಮೂಲಕ ಕಾಂಗ್ರೇಸ್ ಬೆಂಬಲಿತ ಪಕ್ಷೇತರ ಅಭ್ಯಾರ್ಥಿ ಗೆಲುವಿಗೆಕಾರಣರಾಗಿದ ತಿಪಟೂರು ನಗರಸಭೆಯ ನಾಲ್ಕು ಸದಸ್ಯರನ್ನ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಅನರ್ಹಗೊಳಿಸಿ ತುಮಕೂರು ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

26 ಆಗಸ್ಟ್ 2024ರಂದು ನಗರಸಭೆ ಅಧ್ಯಕ್ಷರು ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೇಸ್ ಪಕ್ಷ ಬೆಂಬಲಿತ ಪಕ್ಷೇತರ ಅಭ್ಯಾರ್ಥಿಯಾಗಿ ಶ್ರೀಮತಿ ಯಮುನಾಧರಣೇಶ್. ಹಾಗೂ ಪ್ರತಿಸ್ಪರ್ಧಿಯಾಗಿ ಬಿಜೆಪಿ ಅಭ್ಯಾರ್ಥಿ ಶ್ರೀಮತಿ ಲತಾ ಲೋಕೇಶ್ ಸ್ಪರ್ಧಿಸಿದರು. ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೇಸ್ ಅಭ್ಯಾರ್ಥಿ ಶ್ರೀಮತಿ ಮೇಘಶ್ರೀ ಭೂಷಣ್ ಹಾಗೂ ಪ್ರತಿಸ್ಪರ್ಧಿಯಾಗಿ ಬಿಜೆಪಿ ಪಕ್ಷದ ಸಂಗಮೇಶ್ ಸ್ವರ್ಧಿಸಿದರು. ಒಟ್ಟು 31 ಸದಸ್ಯ ಬಲದ ನಗರಸಭೆಯಲ್ಲಿ ಶಾಸಕರು ಹಾಗೂ ಸಂಸದರು ಸೇರಿ 33ಸಂಖ್ಯಾಬಲದಲ್ಲಿ ,ಬಿಜೆಪಿ 14ಜನ ಸದಸ್ಯರು 2ಜೆಡಿಎಸ್ ಸದಸ್ಯರು ಹಾಗೂ ಸಂಸದರ ಒಂದು ಮತಸೇರಿ ಬಿಜೆಪಿ 17ಸಂಖ್ಯಾ ಬಲಹೊಂದಿತ್ತು
.ಆದರೆ ತಿಪಟೂರು ನಗರಸಭೆ ವಾರ್ಡ್ 31ರ ಬಿಜೆಪಿ ಸದಸ್ಯೆ ಶ್ರೀಮತಿ ಅಶ್ವಿನಿ ದೇವರಾಜು.
ವಾರ್ಡ್ ನಂಬರ್ 16ರ ಬಿಜೆಪಿ ಸದಸ್ಯೆ ಪದ್ಮ,ಹಾಗೂ ವಾರ್ಡ್ ನಂಬರ್ 11ರ ಸದಸ್ಯ,ಜೆಡಿಎಸ್ ಸದಸ್ಯ ಎಂ.ಬಿ ಜಯರಾಮ್.ವಾರ್ಡ್ ನಂಬರ್ 24ರ ಜೆಡಿಎಸ್ ಸದಸ್ಯೆ ಅಸೀಫ ಬಾನು ಅಡ್ಡಮತದಾನ ಮಾಡಿದ ಪರಿಣಾಮ ಕಾಂಗ್ರೇಸ್ ಬೆಂಬಲಿತ ಪಕ್ಷೇತರ ಅಭ್ಯಾರ್ಥಿ ಶ್ರೀಮತಿ ಯಮುನಾಧರಣೇಶ್ ಅಧ್ಯಕ್ಷರಾಗಿ ಆಯ್ಕೆಯಾದರೆ ಉಪಾಧ್ಯಕ್ಷರಾಗಿ ಕಾಂಗ್ರೇಸ್ ಪಕ್ಷದ ಶ್ರೀಮತಿ ಮೇಘಶ್ರೀ ಭೂಷಣ್ ಆಯ್ಕೆಯಾದರು.ನಗರಸಭೆ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ವಿಪ್ ಜಾರಿಮಾಡಿಲಾಗಿತ್ತು, ವಿಪ್ ಉಲ್ಲಂಗನೆ ಮಾಡಿ ಅಡ್ಡಮತದಾನ ಮಾಡಿದ್ದಾರೆ. ಪಕ್ಷಾಂತರ ಕಾಯ್ದೆ ಅಡಿ ಸದಸ್ಯತ್ವದಿಂದ ಅನರ್ಹಗೊಳಿಸಬೇಕು ಎಂದು ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಮುಖಂಡರು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದರು. ಜಿಲ್ಲಾಧಿಕಾರಿಗಳು ವಿಚಾರಣೆ ನಡೆಸಿ, ಪಕ್ಷಾಂತರ ಕಾಯ್ದೆ ಅಡಿ, ನಾಲ್ಕು ಜನಸದಸ್ಯರನ್ನ ಅನರ್ಹಗೊಳಿಸಿ ಆದೇಶಿಸಿದ್ದಾರೆ.
ನಗರಸಭೆ ಅಧಿಕಾರ ಅವಧಿ ಕೇವಲ ಒಂದುವರೆ ತಿಂಗಳು ಬಾಕಿ ಇರುವ ಹೊತ್ತಿನಲ್ಲಿ ಅಧ್ಯಕ್ಷ ಸ್ಥಾನಕ್ಕೆ ಶ್ರೀಮತಿ ಯಮುನಾಧರಣೇಶ್ ರಾಜೀನಾಮೆ ನೀಡಿದ್ದು,ರಾಜೀನಾಮೆ ಪತ್ರ ಅಗೀಕಾರವಾಗಿಲ್ಲ,ಇಂತಹ ಸಮಯದಲ್ಲಿಯೇ ಸದಸ್ಯರ ಅನರ್ಹತೆ ಆದೇಶ ಭಾರೀ ಸಂಚಲನ ಉಂಟುಮಾಡಿದೆ.
ವರದಿ:ಮಂಜುನಾಥ್ ಹಾಲ್ಕುರಿಕೆ







