ತಿಪಟೂರು: ಹತ್ತುಲಕ್ಷ ಹಣ ನೀಡಿದರೆ 15ಲಕ್ಷ ಹಣ ಕೊಡುತ್ತಾರೆ.ನಿಮ್ಮ ಹಣ ಡಬಲ್ ಮಾಡಿಕೊಡುತ್ತೇವೆ,ಕಪ್ಪುಹಣ ವೈಟ್ ಮನಿ ಮಾಡುತ್ತೇವೆ ಎಂದು ವಂಚನೆ ಮಾಡಿ ಹಣ ಕಸಿದು ಪರಾರಿಯಾಗುತ್ತಿದ್ದ ಖದೀಮರಿಗೆ ಪೊಲೀಸರು ಹೆಡೆಮುರಿಕಟ್ಟಿರುವ ಘಟನೆ ತುಮಕೂರು ಜಿಲ್ಲೆ ತಿಪಟೂರು ತಾಲ್ಲೋಕಿನ ಕಸಬಾ ಹೋಬಳಿ ಕೆರೆಗೋಡಿ ರಂಗಾಪುರದಲ್ಲಿ ನಡೆದಿದೆ.
ಹಾಸನ ಮೂಲದ ಮಂಜುನಾಥ್ ಎನ್ನುವ ವ್ಯಕ್ತಿ ಮಂಡ್ಯ ಜಿಲ್ಲೆ ಬಸರಾಳು ಹೋಬಳಿ ಅಲೇಗೆರೆಯಲ್ಲಿ ಬೇಕರಿ ನಡೆಸುತ್ತಿದ್ದು. ಮಂಜುನಾಥ್ ಹಾಗೂ ಮಂಡ್ಯಜಿಲ್ಲೆ ನಾಗಮಂಗಲ ಮೂಲದ ಸಂತೋಷ್ ಇಬ್ಬರಿಗೆ ಸ್ನೇಹ ಬೆಳೆದು .ಹಣಕಾಸು ಕೊಡುಕೊಳ್ಳುವ ವ್ಯಾವಹಾರದಲ್ಲಿ ತೊಡಗಿದ್ದರೂ ಇಬ್ಬರು ಪರಸ್ಪರ ವ್ಯವಹಾರ ನಡೆಸುತ್ತಿದ್ದು ,ತಿಪಟೂರಿನಲ್ಲಿ 10ಲಕ್ಷ ರೂಪಾಯಿ ವೈಟ್ ಮನಿ ನೀಡಿದರೆ 15ಲಕ್ಷ ಹಣ ಬ್ಲಾಕ್ ಮನಿಯಾಗಿ ಕೊಡುತ್ತೇವೆ.ನಿಮ್ಮ ಹಣ ಡಬಲ್ ಮಾಡಿಕೊಡುತ್ತೇವೆ ಎಂದು ನಂಬಿಸಿ ಆರಂಭದಲ್ಲಿ ಒಂದು ಲಕ್ಷದ ಐವತ್ತು ಸಾವಿರ ಹಣವನ್ನ ಅಡ್ವಾನ್ಸ್ ರೂಪದಲ್ಲಿ ಸಂತೋಷ ಪಡೆದುಕೊಂಡಿದ್ದಾನೆ.ನಂತರ ದಿನಾಂಕ 12ರಂದು ತಿಪಟೂರು ತಾಲ್ಲೋಕಿನ ರಂಗಾಪುರ ಮಠದ ಬಳಿ ಎಂಟುಲಕ್ಷದ ಐವತ್ತು ಸಾವಿರ ಹಣ ತೆಗೆದುಕೊಂಡು ಬರುವಂತ್ತೆ ತಿಳಿಸಲಾಗಿತ್ತು ಎನ್ನಲಾಗಿದ್ದು ಅದರಂತೆ 12ರಂದು ಗುರುವಾರ ರಂಗಾಪುರ ಮಠದ ಬಳಿ ಅಲೇಗೆರೆ ಮಂಜುನಾಥ್ ಮತ್ತು ಆತನ ಮಗ ಅಭಿಷೇಕ್ ಇಬ್ಬರು ತಮ್ಮ ಕಾರಿನಲ್ಲಿ ಬಂದಾಗ ಬೈಕ್ ನಲ್ಲಿ ಹಿಂಬಾಲಿಸಿ ಬಂದ ಸಂತೋಷ್ ಇಲ್ಲಿ ವ್ಯವಹಾರ ಮಾಡುವುದು ಬೇಡ, ಸಿ.ಸಿ.ಟಿವಿ ಕ್ಯಾಮರಗಳಿವೆ. ಜನರು ಇರುತ್ತಾರೆ.ಹಣತೆಗೆದುಕೊಂಡು ತಮ್ಮ ಬೈಕ್ ಹಿಂಬಾಲಿಸು ಎಂದು ನಾರಸೀಕಟ್ಟೆ ರಸ್ತೆ ಕಡೆ ಕರೆದುಕೊಂಡು ಹೋಗಿದ್ದಾರೆ. ಹಣ ತೆಗೆದುಕೊಂಡು ಹೋಗುತ್ತಿದ್ದಂತೆ.ಎಲ್ಲಿ ನೀನು ತಂದಿರುವ ಹಣ ಎಂದು ಕೇಳಿದ್ದಾಗ ಈ ಬ್ಯಾಗ್ ನಲ್ಲಿ ಹಣ ಇದೆ ಎಂದು ಮಂಜುನಾಥ್ ಮಗ ಅಭಿಷೇಕ್ ಬ್ಯಾಗ್ ತೋರಿಸಿದ್ದಾನೆ. ಅಷ್ಟರಲ್ಲಿ 2 ಬೈಕ್ ಗಳಲ್ಲಿ ಸಂತೋಷ್ ಗೆಳೆರು ದಾರಿಯಲ್ಲಿಯೇ ಕಾಯುತ್ತಿರುತ್ತಾರೆ. ನಮ್ಮ ಹಣತಂದಿದ್ದೇವೆ.ನಿಮ್ಮ ಹಣತೋರಿಸಿ ಎಂದಾಗ ನೋಡು ನಮ್ಮ ಬ್ಯಾಗ್ ನಲ್ಲಿ 15ಲಕ್ಷ ಹಣ ಇದೆ ಎಂದು.ಅಭಿಷೇಕ್ ಬಳಿಇದ್ದ ಹಣದ ಬ್ಯಾಗ್ ಕಸಿದುಕೊಂಡು ಬೈಕ್ ನಲ್ಲಿ ಪರಾರಿಯಾಗಲು ಯತ್ನಿಸಿದ ಸಂತೋಷ್ ಯತ್ನಿಸಿದ್ದು ಎಳೆದಿದ್ದು ತಕ್ಷಣ ಅಭಿಷೇಕ್ ಸುರೇಶ್ ನನ್ನು ಹಿಡಿಯಲು ಯತ್ನಿಸಿದರು ಸಂತೋಷ್ .ತಪ್ಪಿಸಿಕೊಂಡು ಹೋಗಿದ್ದಾನೆ.ತಕ್ಷಣ ಅಭಿಷೇಕ್ ಹಾಗೂ ಆತನ ತಂದೆ ತಿಪಟೂರು ಗ್ರಾಮಾಂತರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದು,ಸ್ಥಳಕ್ಕೆ ಬಂದ ಪೊಲೀಸರು ಆರೋಪಿ ಸಂತೋಷ್ ನನ್ನು ಪತ್ತೆ ಹಚ್ಚಿದ್ದು ವಶಕ್ಕೆ ಪಡೆದು ಉಳಿದ ಆರೋಪಿಗಳಿಗಾಗಿ ಡಿವೈಎಸ್ಪಿ ವಿನಾಯಕ ಶೆಟ್ಟಿಗೇರಿ. ಸರ್ಕಲ್ ಇನ್ಪೆಕ್ಟರ್ ಚಂದ್ರಶೇಖರ್ ಸಬ್ ಇನ್ಪೆಕ್ಟರ್ ನಾಗರಾಜು ನೇತೃತ್ವದ ತಂಡ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದು.ತಿಪಟೂರು ಗ್ರಾಮಾಂತರ ಠಾಣೆಯಲ್ಲಿ ಕೇಸ್ ನಂಬರ್ 70/25.ರಂತೆ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ವರದಿ:ಮಂಜುನಾಥ್ ಹಾಲ್ಕುರಿಕೆ




