ತಿಪಟೂರು : ತಾಲೂಕಿನಲ್ಲಿ ಶಿಕ್ಷಕರರನ್ನು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ಹಾಗೂ ಮತದಾರರ ಪಟ್ಟಿ ಪರೀಷ್ಕರಣೆ ಕೆಲಸಕ್ಕೆ ನಿಯೋಜನೆ ಮಾಡಲಾಗಿದ್ದು ಎರಡು ಕರ್ತವ್ಯವನ್ನ ಏಕಕಾಲದಲ್ಲಿ ನಿರ್ವಹಣೆ ಕಷ್ಟವಾಗುತ್ತದೆ,ಆದರಿಂದ ಸಮೀಕ್ಷೆ ಕರ್ತವ್ಯದಿಂದ ಬಿಎಲ್ಒ ಗಳನ್ನ ಕೈಬಿಡಬೇಕೆಂದು ತಾಲ್ಲೂಕು ಆಡಳಿತ ಸೌಧದಲ್ಲಿ ತಹಶೀಲ್ದಾರ್ಗೆ ಬಿಎಲ್ಓ ಶಿಕ್ಷಕರು ಮನವಿ ಪತ್ರ ಸಲ್ಲಿಸಿದರು.

ತಾಲೂಕಿನಲ್ಲಿ 136 ಶಿಕ್ಷಕರು ಚುನಾವಣಾ ಬಿಎಲ್ಓಗಳಾಗಿ ಕಾರ್ಯನಿರ್ವಹಿಸುತ್ತಿದ್ದು ಈಗ ಮತದಾರ ಪಟ್ಟಿಯ ಸಮಗ್ರ ಪರಿಷ್ಕರಣಾ ಕಾರ್ಯ ಪ್ರಾರಂಭವಾಗಿದ್ದು ಹಾಗೂ ಬುಧವಾರದಂದು ಚುನಾವಣಾ ಸಂಬಂಧ ತರಬೇತಿಯನ್ನು ಆಯೋಜನೆ ಮಾಡಲಾಗಿದೆ ಇದೇ ಸಮಯದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ಕಾರ್ಯಕ್ಕೂ ನೇಮಕ ಮಾಡಿ ಆದೇಶವನ್ನು ನೀಡಿದ್ದು ಏಕಕಾಲದಲ್ಲಿ ಎರಡು ಕಾರ್ಯಗಳ ನಿರ್ವಹಿಸುವುದು ಕಷ್ಟಕರವಾಗಿದೆ.
ತಾಲೂಕಿನ 663 ಶಿಕ್ಷಕರು ಸಮೀಕ್ಷೆಯ ತರಬೇತಿಯಲ್ಲಿ ಭಾಗಿಯಾಗಿದ್ದು 490 ಜನರನ್ನು ನಿಯೋಜಿಸಲಾಗಿದೆ. ಉಳಿದ 173 ಶಿಕ್ಷಕರಿಗೆ ಯಾವುದೇ ಕಾರಣಕ್ಕೂ ನಿಯೋಜನೆ ಮಾಡಿರುವುದಿಲ್ಲ ಆದ್ದರಿಂದ ದಯವಿಟ್ಟು 136 ಜನ ಬಿಎಲ್ಓ ಶಿಕ್ಷಕರನ್ನು ಹೊರತುಪಡಿಸಿ ಯಾವುದಾದರೂ ಒಂದು ಕಾರ್ಯಕ್ಕೆ ನಿಯೋಜಿಸಬೇಕು ಮತ್ತು 136 ಜನ ಬಿಎಲ್ಒಗಳಲ್ಲಿ ಶೇಕಡ 70ರಷ್ಟು ಜನರು 50 ವರ್ಷದ ಮೇಲ್ಪಟ್ಟವರಾಗಿದ್ದು ಅನೇಕ ಕಾಯಿಲೆಗಳಲ್ಲಿ ಬಳಲುತ್ತಿದ್ದಾರೆ. ಸರ್ಕಾರ ನಡೆಸುತ್ತಿರುವ ಎರಡು ಸಮೀಕ್ಷೆಗಳು ಅತಿ ಸೂಕ್ಷ್ಮವಾಗಿದ್ದು ನಮ್ಮಗಳಿಗೆ ಅಸಾಧ್ಯವಾಗಿರುತ್ತದೆ ಅಥವಾ ಒಂದು ಸಮೀಕ್ಷೆ ಮುಗಿದ ನಂತರ ಮತ್ತೊಂದು ಸಮೀಕ್ಷೆ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇವೆ ಎಂದು ತಿಳಿಸಿದರು.ಬಿಎಲ್ಒ ಶಿಕ್ಷಕರಿಂದ ಮನವಿ ಪತ್ರಸ್ವೀಕರಿಸಿ ಮಾತನಾಡಿದ ತಹಸೀಲ್ದಾರ್ ಮೋಹನ್ ಕುಮಾರ್ ಸಾಮಾಜಿಕ ಹಾಗೂ ಶೈಕ್ಷಣಿಕ ಗಣತಿ ಕಾರ್ಯ ಹಾಗೂ ಬಿಎಲ್ಒ ಕೆಲಸಕ್ಕೆ ಒಬ್ಬರನ್ನೆ ನಿಯೋಜನೆ ಮಾಡಿರುವ ಬಗ್ಗೆ ಕ್ಷೇತ್ರಶಿಕ್ಷಣಾಧಿಕಾರಿಗಳೊಂದಿಗೆ ಮಾತನಾಡಿ ಸೂಕ್ತ ಪರಿಹಾರ ಮಾಡಲಾಗುವುದು, ರಾಜ್ಯದ ಹಲವುಕಡೆ ಇದೇ ರೀತಿ ಸಮಸ್ಯೆಇದ್ದು ಸಮಸ್ಯೆ ಇತ್ಯರ್ಥಪಡಿಸಿ,ಗಣತಿ ಕಾರ್ಯ ಹಾಗೂ ಮತದಾರರ ಪಟ್ಟಿ ಕೆಲಸಕ್ಕೆ ತೊಂದರೆ ಆಗದಂತೆ ಕ್ರಮವಹಿಸುವ ಭರವಣೆ ನೀಡಿದರು.
ವರದಿ:ಮಂಜುನಾಥ್ ಹಾಲ್ಕುರಿಕೆ








