Spread the love

ತಿಪಟೂರು: ನೊಣವಿನಕೆರೆ ಸೋಮೆಕಟ್ಟೆ ಶ್ರೀಕಾಡಸಿದ್ದೇಶ್ವ ಮಠದ ಹೆಸರಿನಲ್ಲಿ ರಾಜ್ಯದ ವಿವಿದಡೆ ಕೆಲವು ಅನಾಮದೇಯ ಕಾವಿಧಾರಿಗಳು,ಮಠದ ಹೆಸರಿನಲ್ಲಿ ಪೂಜೆಸಲ್ಲಿಸುವುದ್ದಾಗಿ ಭಕ್ತರನ್ನ ವಂಚನೆ ಮಾಡುತ್ತಿರುವುದು.ಹಾಗೂ ಶ್ರೀಮಠದ ಉತ್ತರಾಧಿಕಾರಿಗಳು ಎಂಬುದ್ದಾಗಿ ಮಠದ ಹೆಸರಿನಲ್ಲಿ ರಸೀದಿ ಹಾಕುತ್ತಿರುವ ಕೃತ್ಯ ಶ್ರೀಮಠದ ಗಮನಕ್ಕೆ ಬಂದಿದೆ ಬಗ್ಗೆ ಶ್ರೀ ನೊಣವಿನಕೆರೆ ಕಾಡ ಸಿದ್ದೇಶ್ವರ ಮಠಕ್ಕೆ ವಿಷಾದ ವ್ಯಕ್ತಪಡಿಸಿದ್ದು,ಮಠದ ಹೆಸರಿನಲ್ಲಿ ಬರುವ ನಕಲಿ ಕಾವಿಧಾರಿಗಳ ಬಗ್ಗೆ ಭಕ್ತರು ಎಚ್ಚರಿಕೆಯಿಂದ ಇರಬೇಕು.ಮಠದ ಹೆಸರು ಹೇಳಿ ಭಕ್ತರನ್ನ ವಂಚಿಸುವವರ ಬಗ್ಗೆ ಸೂಕ್ತದಂಡನೆ ನೀಡಬೇಕು. ನೊಣವಿನಕೆರೆ ಶ್ರೀಕಾಡಸಿದ್ದೇಶ್ವರ ಮಠಕ್ಕೆ ಭಕ್ತರೇ ಶ್ರೀರಕ್ಷೆಯಾಗಿದ್ದಾರೆ ಸಾಮಾನ್ಯ ಭಕ್ತನು ಹೃದಯವಂತ, ಆರೋಗ್ಯವಂತ, ಸುಖಿ ಕುಟುಂಬಿಯಾಗಿ ಬಾಳಲಿ ಎಂದು ಆಶೀರ್ವಾದ ನೀಡುತ್ತೇವೆ, ನಮ್ಮ ಮಠದಿಂದ ಯಾರು ಸಹ ಪೂಜೆ ಪುನಸ್ಕಾರಗಳ ಹೆಸರಿನಲ್ಲಿ ಎಲ್ಲಿಯೂ ಹಣ ವಸೂಲಿ ಮಾಡುತ್ತಿಲ್ಲ ಇತ್ತೀಚೆಗೆ ಬೆಂಗಳೂರು, ಹಾವೇರಿ, ಕಡೂರು ಭಾಗದ ಸುತ್ತಮುತ್ತ ಹಳ್ಳಿಗಳಲ್ಲಿ ನಮ್ಮ ಶ್ರೀಮಠದ ಭಕ್ತರಿಂದ ಹಣ ವಸೂಲಿ ಮಾಡುತ್ತಿದ್ದಾರೆ ಎಂಬುದು ಬೆಳಕಿಗೆ ಬಂದಿದೆ ಕಪಟಿ, ಸ್ವಯಂಘೋಷಿತ ನಕಲಿ ಕಾವಿಧಾರಿಗಳ ಮೋಸದ ಮಾತಿಗೆ ಮರುಳಾಗಬೇಡಿ ಎಂದು ಶ್ರೀಕಾಡಸಿದ್ದೇಶ್ವರ ಮಠದ ಪೀಠಾಧ್ಯಕ್ಷರಾದ ಶ್ರೀ ಡಾ.ಕರಿವೃಷಬದೇಶಿಕೇಂದ್ರ ಶಿವಯೋಗಿಶ್ವರಸ್ವಾಮೀಜಿ ತಿಳಿಸಿದರು.


ಪತ್ರಿಕೆಯೊಂದಿಗೆ ಮಾತನಾಡಿ ಶ್ರೀ ಮಠಕ್ಕೆ ಹೊರ ರಾಷ್ಟ್ರಗಳಲ್ಲಿ ಅಸಂಖ್ಯಾತ ಭಕ್ತ ಸಂಕುಲವಿದ್ದು ಹೊರರಾಜ್ಯಗಳಿಂದಲೂ ಪ್ರತಿನಿತ್ಯ ಹತ್ತಾರು ಭಕ್ತರು ತಮ್ಮ ಕಷ್ಟ ಕಾರ್ಪಣ್ಯಗಳನ್ನು ಹೊತ್ತು ತಂದು ಇಲ್ಲಿನ ಪೂಜೆ ಪುನಸ್ಕಾರಗಳಿಂದ ಮುಕ್ತಿ ಕಾಣುತ್ತಿದ್ದಾರೆ, ಆದರೆ ಇಂಥ ಸಂದರ್ಭದಲ್ಲಿ ಪ್ರತ್ಯಕ್ಷ ಮಾಹಿತಿಯ ಪ್ರಕಾರ ಮಠದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ ಗುರುಗಳು ಇತ್ತೀಚೆಗೆ ನಮಗೆ ಪಟ್ಟಾಧಿಕಾರ ನೆರವೇರಿಸಿದ್ದಾರೆ, ಎಂದು ಸುಳ್ಳು ಹೇಳುತ್ತಾ ಹತ್ತಾರು ನಕಲಿ ಕಾವಿಧಾರಿಗಳು, ಲಕ್ಷಾಂತರ ಹಣ ವಸೂಲಿ ಮಾಡುತ್ತಿದ್ದಾರೆ, ಮಠಕ್ಕೆ ಬಂದ ಭಕ್ತರಿಗೆ ಮಂತ್ರಾಕ್ಷತೆ ಮಾತ್ರ ನೀಡುತ್ತಿದ್ದೇವೆ, ಯಾರ ಮನೆಗೂ ಹೋಗಿ ಭಿಕ್ಷೆ ಕೇಳಿಲ್ಲ ಶಾಂತಿಪೂಜೆ ಹೆಸರಿನಲ್ಲಿ ಹಣ ವಸೂಲಿ ಮಾಡುತ್ತಿಲ್ಲ .ಭಕ್ತರು ಮಠದ ಮಕ್ಕಳಾಗಿ ಮಾಡುವ ಸೇವೆಯಿಂದ ಶ್ರೀಮಠ ನಡೆಯುತ್ತಿದೆ.ಮಠಕ್ಕೆ ಕಳಂಕ ತರುವ ವ್ಯಕ್ತಿಗಳಿಗೆ ತಕ್ಕದಂಡನೆ ನೀಡಬೇಕು ಹಾಗೂ ಇಂಥವರಿಂದ ಎಚ್ಚರದಿಂದಿರಬೇಕು ಎಂದು ತಿಳಿಸಿದರು
ಕಿರಿಯ ಶ್ರೀಗಳಾದ ಅಭಿನವ ಕಾಡ ಸಿದ್ದೇಶ್ವರ ಸ್ವಾಮೀಜಿ ಮಾತನಾಡಿ ಶ್ರೀ ಮಠದ ಹೆಸರಿನಲ್ಲಿ ಯಾವುದೇ ಶಾಖಾ ಮಠಗಳಾಗಲಿ, ಅಥವಾ ಬೇರೆ ಯಾರಿಗೂ ಪಟ್ಟಾಧಿಕಾರ ನೀಡಿರುವುದಿಲ್ಲ, ಶ್ರೀ ಮಠದ ಹೆಸರಿನಲ್ಲಿ ಎಲ್ಲಿಯೂ ಹಣ ವಸೂಲಿಗೆ ನಮ್ಮ ಮಠದ ವತಿಯಿಂದ ಯಾರನ್ನು ನೇಮಿಸಿಲ್ಲ ಅಭಿವೃದ್ಧಿ ಕಾರ್ಯಗಳು ಶ್ರೀಮಠದ ಭಕ್ತರ ಸಮ್ಮುಖದಲ್ಲಿಯೇ ನಡೆಯುತ್ತಿವೆ, ಇಂಥವರ ವಿರುದ್ಧ ಈಗಾಗಲೇ ಭಕ್ತರು ಸ್ಥಳೀಯ ಪೊಲೀಸ್ ಠಾಣೆಗಳಿಗೆ ದೂರು ದಾಖಲಿಸಿದ್ದಾರೆ ಶ್ರೀ ಮಠದ ಭಕ್ತರು ಮಠಕ್ಕೆ ಆಗಮಿಸಿ ತಮ್ಮ ಭಕ್ತಿ ನೀಡುವದಿದ್ದರೆ ನೀಡಬಹುದು ಎಂದು ಹೇಳಿದರು.

ವರದಿ:ಮಂಜುನಾಥ್ ಹಾಲ್ಕುರಿಕೆ

error: Content is protected !!