
ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕಿನ ಲೋಕಮ್ಮನಹಳ್ಳಿ ದೊಡ್ಡೇನಹಳ್ಳಿ ಮಾರ್ಗ ಮಧ್ಯದ ಬಸವನಹಳ್ಳಿ ಗ್ರಾಮದ ಬಳಿ ಘಟನೆ ದುರ್ಘಟನೆ ನಡೆದಿದೆ.
ತಾಲೂಕಿನ ಸಾರಿಗೆ ಹಳ್ಳಿ ಗ್ರಾಮದ ರೈತ ರವಿಕಿರಣ್ ಎಂಬವರಿಗೆ ಸೇರಿದ ಟ್ರ್ಯಾಕ್ಟರ್ ನಲ್ಲಿ ಸುಮಾರು 40 ರಾಗಿ ಹುಲ್ಲನ್ನು ತೆಗೆದುಕೊಂಡು ಹೋಗುವಾಗ ,ವಿದ್ಯುತ್ ಪ್ರೈಮರಿ ಲೈನ್ ಟ್ರ್ಯಾಕ್ಟರ್ ನಲ್ಲಿದ್ದ ಹುಲ್ಲಿನ ಹೊರೆಗಳಿಗೆ ತಗಲಿದ ಪರಿಣಾಮ
ಬೆಂಕಿ ಹತ್ತಿಕೊಂಡಿದ್ದು ತಕ್ಷಣಕ್ಕೆ ಡ್ರೈವರ್ ಟ್ರ್ಯಾಲಿಯಿಂದ ಇಂಜಿನ್ ಬೇರ್ಪಡಿಸಿದ ಪರಿಣಾವ ಭಾರೀ ಅನಾಹುತ ತಪ್ಪಿದು, ಡ್ರೈವರ್ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ. ಬೆಂಕಿ ಅವಗಡದಿಂದ ಸುಮಾರು 18 ಸಾವಿರ ರೂಗಳ ಮೇವನ್ನು ಕಳೆದುಕೊಂಡಿರುವ ರೈತ ಕಂಗಾಲಾಗಿದ್ದಾನೆ
ಲೋಕಮ್ಮಹಳ್ಳಿ ಹಾಗೂ ದೊಡ್ಡೇನಹಳ್ಳಿ ಮಾರ್ಗದಲ್ಲಿ ವಿದ್ಯುತ್ ತಂತಿಗಳು, ಅತ್ಯಂತ ಕೆಳ ಭಾಗಕ್ಕೆ ಜಗ್ಗಿದ ಕಾರಣ ಅವಗಡ ನಡೆದಿದೆ,ಸ್ಥಳಕ್ಕೆ ತುರುವೇಕೆರೆ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಸಾರ್ವಜನಿಕರ ಸಹಕಾರದಿಂದ ಬೆಂಕಿನಂದಿಸಿದ್ದಾರೆ.
ವರದಿ:ಮಂಜುನಾಥ್ ತುರುವೇಕೆರೆ
ಜಾಹಿರಾತು:


ಜಾಹಿರಾತು:










Leave a Reply