
ತಿಪಟೂರು ನಗರದ ಮಾಜಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ರವರ ಗೃಹಕಚೇರಿಯಲ್ಲಿ ತಿಪಟೂರು ತಾಲ್ಲೋಕು ಬಿಜೆಪಿ ವತಿಯಿಂದ ಮಾಜಿ ಪ್ರಧಾನ ಮಂತ್ರಿ ಭಾರತರತ್ನ ಅಟಲ್ ಬಿಹಾರಿ ವಾಜಪೇಯಿ ರವರ ಜನ್ಮ ದಿನವನ್ನ ಆಚರಿಸಲಾಯಿತು.

ಮಾಜಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್, ಅಟಲ್ ಜೀ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿ ಅಟಲ್ ಜೀ ರವರು ಭಾರತಕಂಡ ಆದರ್ಶ ಪ್ರಾಯರಾಜಕಾರಣಿ,ತಮ್ಮ ಇಡೀ ಜೀವನವನ್ನೇ ಭಾರತಮಾತೆಯ ಸೇವೆಗೆ ಮುಡುಪಾಗಿಟ್ಟಿದರು. ಆದರ್ಶ ರಾಜಕಾರಣಿಯಾಗಿ ಸದನಪಟುವಾಗಿ, ದೇಶದ ವಿಚಾರಬಂದಾಗ ಆಡಳಿಪಕ್ಷಕ್ಕೂ ಸಹಕಾರ ನೀಡಿ, ದೇಶಮೊದಲು, ದೇಶದ ವಿಚಾರದಲ್ಲಿ ನಾವೆಲ್ಲರೂ ಒಂದೇ ಎನ್ನುವಭಾವನೆ ಹೊಂದಿದರು,ತಾವು ಪ್ರಧಾನಮಂತ್ರಿಯಾದ ಅಲ್ಪ ಕಾಲಾವಧಿಯಲ್ಲಿ ,ವಿಶ್ವದ ದಿಗ್ಗಜ ರಾಷ್ಟ್ರಗಳ ಬೆದರಿಕೆಗಳಿಗೆ ಜಗ್ಗದೆ, ಪ್ರೋಖ್ರಾನ್ ಅಣುಪರೀಕ್ಷೆ ನಡೆಸಿ,ಭಾರತದ ಶಕ್ತಿಯನ್ನ ಜಗತ್ತಿನ ಮುಂದೆ ತೋರಿಸಿದ, ಅಪ್ರತಿಮ ರಾಜಕಾರಣಿ.ದೇಶದ ಅಭಿವೃದ್ದಿಗೆ ರಸ್ತೆಗಳು ನರನಾಡಿಗಳಂತೆ ಎಂದು ದೇಶದ ದಿಕ್ಕನ್ನೆ ಬದಲಿಸಿದ ಚತುಷ್ಪತ ಹೆದ್ದಾರಿಗಳನ್ನ ನಿರ್ಮಿಸಿದರು, ದಿಟ್ಟಧೀರತನದ ಆಡಳಿತದ ಮೂಲಕವೇ ವಿರೋಧಿಗಳಿಗೆ ಉತ್ತರ ನೀಡಿದ ಪ್ರಮಾಣಿಕ ನಿಷ್ಠಾವಂತ ರಾಜಕಾರಣಿ, ಅವರ ಆದರ್ಶಗಳು ರಾಜಕಾರಣಿಗಳಿಗೆ ಮಾರ್ಗದರ್ಶನ, ಅವರದಾರಿಯಲ್ಲಿ ಎಲ್ಲಾರು ನಡೆಯೋಣ ಎಂದು ತಿಳಿಸಿದರು
ಕಾರ್ಯಕ್ರಮದಲ್ಲಿ ಬಿಜೆಪಿ ತಾಲ್ಲೋಕು ಅಧ್ಯಕ್ಷ ಬಳ್ಳೆಕಟ್ಟೆ ಸುರೇಶ್, ನಗರಾಧ್ಯಕ್ಷ ಗುಲಾಬಿ ಸುರೇಶ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಂಗರಾಜು, ಬಿಸ್ಲೇಹಳ್ಳಿ ಜಗದೀಶ್ ಗ್ರಾಮಾಂತರ ಕಾರ್ಯದರ್ಶಿ ಉಮೇಶ್,ರೈತಮೋರ್ಚ ಅಧ್ಯಕ್ಷ ಹೆಚ್.ವಿ ನಾಗರಾಜು ಮುಂತ್ತಾದವರು ಉಪಸ್ಥಿತರಿದರು
ವರದಿ: ಮಂಜುನಾಥ್ ಹಾಲ್ಕುರಿಕೆ.
ಜಾಹಿರಾತು:

ಜಾಹಿರಾತು:
