ತಿಪಟೂರಿನಲ್ಲಿ ತಾಲ್ಲೋಕು ಆಡಳಿತದಿಂದ ಸಂವಿಧಾನ ದಿನ ಆಚರಣೆ

Spread the love

ತಿಪಟೂರು ನಗರದ ಆಡಳಿತ ಸೌಧದದ ಸಭಾಂಗಣದಲ್ಲಿ ತಾಲ್ಲೋಕು ಆಡಳಿತ ಮತ್ತು ಸಮಾಜಕಲ್ಯಾಣ ಇಲಾಖೆ ಯಿಂದ ಸಂವಿಧಾನ ದಿನ ಆಚರಿಸಲಾಯಿತು

ತಿಪಟೂರ್ ಉಪವಿಭಾಗಧಿಕಾರಿ ಶ್ರೀಮತಿ ಸಪ್ತಶ್ರೀ. ಜ್ಯೋತಿ ಬೆಳಗಿಸಿ,ಸಂವಿಧಾನ ಶಿಲ್ಪಿ ಡಾ//ಬಿ.ಆರ್ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಉಪವಿಭಾಗಾಧಿಕಾರಿಗಳು,ನಮ್ಮ ಸಂವಿಧಾನ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಆಶಯಹೊಂದಿಗೆ, ನಮ್ಮದು ಪ್ರಪಂಚದಲ್ಲಿಯೇ ಲಿಖಿತಸಂವಿಧಾನ, ಶ್ರೇಷ್ಠ ಶ್ರೇಷ್ಠ ಸಂವಿಧಾನವಾಗಿದೆ, ನಾವೇಲರೂ ದೇಶದ ಸಂವಿಧಾನ ಕಾನೂನು ಗೌರವಿಸಬೇಕು,ಸಂವಿಧಾನಕ್ಕೆ ತಕ್ಕಂತೆ ನಡೆಯಬೇಕು,ಕಾನೂನಿಗೆ ನಾವು ಗೌರವಿಸಿದರೆ ಕಾನೂನು ನಮ್ಮನು ಗೌರವಿಸುತ್ತದೆ ಎಂದು ತಿಳಿಸಿದರು.

ತಾಲ್ಲೋಕು ಪಂಚಾಯತ್ ಇ .ಓ ಸುದರ್ಶನ್. ತಹಸೀಲ್ದಾರ್ ಪವನಕುಮಾರ್. ಸಮಾಜಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರಾದ ತ್ರಿವೇಣಿ,ಮುಖಂಡರಾದ ಬಜಗೂರು ಮಂಜುನಾಥ್,ನಾಗ್ತೀಹಳ್ಳಿ ಕೃಷ್ಣಮೂರ್ತಿ, ಕುಪ್ಪಾಳು ರಂಗಸ್ವಾಮಿ.ಟಿ.ಕೆ ಕುಮಾರ್.ಬಿಳಿಗೆರೆ ಚಂದ್ರಶೇಖರ್ ಈಚನೂರು ಸೋಮಶೇಖರ್,ಕಂಚಾಘಟ್ಟ ಸುರೇಶ್ ಶಿವಕುಮಾರ್ , ಉಪನ್ಯಾಸಕ ಪ್ರಕಾಶ್ ಮುಂತ್ತಾದವರು ಉಪಸ್ಥಿತರಿದರು

ವರದಿ :ಮಂಜುನಾಥ್ ಹಾಲ್ಕುರಿಕೆ

Leave a Reply

Your email address will not be published. Required fields are marked *

error: Content is protected !!