ದೇವಾಲಯದ ಬೀಗ ಮುರಿದು ಚಿನ್ನಾಭರಣ ಕಳವು ,ತಿಪಟೂರು ನಗರಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Spread the love

ತಿಪಟೂರು ನಗರದ ಮಾವಿನತೋಪು ಬಡಾವಣೆಯ ಶ್ರೀ ಪ್ಲೇಗಿನಮ್ಮ ದೇವಿ ದೇವಾಲಯದ ಬೀಗ ಮುರಿದು ಚಿನ್ನಾಭರಣ ಸೇರಿ ಸುಮಾರು ಲಕ್ಷ ಮೌಲ್ಯದ ವಸ್ತುಗಳನ್ನ ಕಳ್ಳತನ ಮಾಡಿರುವ ಘಟನೆ ನಡೆದಿದೆ,
ರಾತ್ರಿ ದೇವಾಲಯದ ಬೀಗ ಮುರಿದ ಕಳ್ಳರು,ಶ್ರೀ ಪ್ಲೇಗಿನಮ್ಮ ದೇವಿಯವರ ಮೇಲಿದ್ದ ಉಂಗುರ, ಬಂಗಾರದ ತಾಳಿ,ತಡೆ ಬಳೆ,ಬೆಳ್ಳಿ ಛತ್ರಿ, ನಗದು ಸೇರಿ ಸುಮಾರು ಒಂದು ಲಕ್ಷ ಮೌಲ್ಯದ ವಸ್ತುಗಳನ್ನ ಕಳ್ಳತನ ಮಾಡಲಾಗಿದೆ, ಸ್ಥಳಕ್ಕೆ ತಿಪಟೂರು ನಗರಠಾಣೆ ಪೊಲೀಸರು ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ,
ಇನ್ನೂ ದೇವಾಲಯದ ಪಕ್ಕದಲ್ಲೆ ಇದ್ದ ಶಿವಣ್ಣ ಎಂಬುವವರ ಮನೆಯಲ್ಲಿ ಯಾರು ಇಲ್ಲ ಎಂಬುದನ್ನ ಗಮನಿಸಿ ಮನೆ ಬೀಗಮುರಿದು ಹಣ ಕಳ್ಳತನ ಮಾಡಲಾಗಿದೆ.

ವರದಿ :ಮಂಜುನಾಥ್ ಹಾಲ್ಕುರಿಕೆ

Leave a Reply

Your email address will not be published. Required fields are marked *

error: Content is protected !!