Month: March 2025

ತುಮಕೂರು ಜಿಲ್ಲೆ ತಿಪಟೂರು ತಾಲ್ಲೋಕಿನ ಕಸಬಾ ಹೋಬಳಿ ಕಲ್ಲಯ್ಯನಪಾಳ್ಯ ಗ್ರಾಮದಲ್ಲಿ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡು 4 ಮನೆಗಳು ಸಂಪೂರ್ಣ ಭಸ್ಮವಾಗಿದ್ದು ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಬೆಂಕಿಗೆ ಆಹುತಿಯಾದ ಘಟನೆ ನಡೆದಿದೆ,


ಕಲ್ಲಯ್ಯನಪಾಳ್ಯ ಗ್ರಾಮದ ಗಂಗಾಧರ ,ಮತ್ತು ಅವರ ತಂಗಿ ರೂಪ,ಗೌರಮ್ಮ ಇವರ ಮನೆಗಳು ಸುಟ್ಟುಹೋಗಿವೆ,ಮನೆಯಲ್ಲಿ ಇಟ್ಟಿದ ಚಿನ್ನಾಭರಣ,ಹಟ್ಟದಲ್ಲಿ ಹಾಕಿದ ಕೊಬ್ಬರಿ ಧವಸ ಧಾನ್ಯ ಸೇರಿ ಲಕ್ಷಾಂತರ ರೂಪಾಯಿ ಬೆಂಕಿಗೆ ಆಹುತಿಯಾಗಿದ್ದು ನಾಲ್ಕು ಕುಟುಂಬಗಳು ಬೀದಿಗೆ ಬಿದ್ದಿವೆ.


ಬದುಕನ್ನೆ ಬೀದಿಗೆ ತಳ್ಳಿದ ಯುಗಾದಿ ಸಂಭ್ರಮ:
ಕಲ್ಲಯ್ಯನಪಾಳ್ಯದ ಗಂಗಾಧರ್ ರವರ ಮನೆಯಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಸಹ ಇಡೀ ಕುಟುಂಬ ಒಬಟ್ಟು ಸೇರಿದಂತೆ ಸಿಹಿ ಖ್ಯಾದ್ಯಗಳನ್ನ ಮಾಡಿ ಊಟದ ಸಂಭ್ರಮದಲ್ಲಿ ಇದ್ದರೂ ಅಷ್ಟರಲ್ಲಿ ಅಡುಗೆ ಮನೆಯಲ್ಲಿ ಗ್ಯಾಸ್ ಸೋರಿಕೆಯಾಗಿ ವಾಸನ ಬರಲು ಆರಂಬಿಸಿದೆ ,ಬೆಂಕಿ ಕಾಣಿಸಿಕೊಂಡ ಹಿನ್ನೆಲೆ ಮನೆಯಲ್ಲಿಇದ್ದವರೆಲ್ಲ,ಮನೆ ಬಿಟ್ಟು ಹೊರಗೆ ಓಡಿಬಂದಿದ್ದಾರೆ,ಹೊರಗೆ ಬಿಸಿಲಿನ ಧಗೆ ಒಳಗೆ ಗ್ಯಾಸ್ ಆವರಿಸಿ ಬೆಂಕಿ ಕೆನ್ನಾಲಿಗೆ ಕ್ಷಣಾರ್ಧದಲ್ಲಿ ಮನೆಯನ್ನೆಲ್ಲ ಆವರಿಸಿದ ,ಗ್ರಾಮಸ್ಥರ ನೆರವಿನಿಂದ ಬೆಂಕಿ ನಂದಿಸಲು ಪ್ರಯತ್ನಸಿಸಿದರು ಸಾಧ್ಯವಾಗಿಲ್ಲ ,ಬೆಂಕಿ ಕೆನ್ನಾಲಿಗೆ ಗಂಗಾಧರ್ ಸೋದರಿ ಹಾಗೂ ರೂಪ, ಹಾಗೂ ಪಕ್ಕದ ಮನೆ ಗೌರಮ್ಮನ ಮನೆಗೂ ವ್ಯಾಪಿಸಿದೆ ನೋಡ ನೋಡುವಷ್ಟರಲ್ಲಿ ನಾಲ್ಕು ಮನೆಗಳು ಬೆಂಕಿಗಾಹುತಿಗಾತಿದ್ದು ಇಡೀ ಕುಟುಂಬಗಳು ಬೀದಿಗೆ ಬಿದ್ದಿವೆ ಸ್ಥಳಕ್ಕೆ ನೊಣವಿನಕೆರೆ ಪೊಲೀಸರು ಭೇಟಿ ನೀಡಿದ್ದು,ತಿಪಟೂರು ಅಗ್ನಿಶಾಮಕ ಠಾಣೆ ಸಿಬ್ಬಂದಿ, ಹಾಗೂ ತುರುವೇಕೆರೆ ಅಗ್ನಿಶಾಮಕ ವಾಹನ ಭೇಟಿ ನೀಡಿದ್ದಾರೆ.

ಕಲ್ಲಯ್ಯನಪಾಳ್ಯ ಗ್ರಾಮದಲ್ಲಿ ಮನೆಗಳಿಗೆ ಬೆಂಕಿಹತ್ತಿಕೊಂಡ ಬಗ್ಗೆ ತಿಪಟೂರು ಅಗ್ನಿ ಶಾಮಕ ಠಾಣೆಗೆ ಮಾಹಿತಿ ನೀಡಿದ್ದಾರೆ,ಸ್ಥಳಕ್ಕೆ ಬಂದ ಅಗ್ನಿಶಾಮಕ ಠಾಣೆ ಸಿಬ್ಬಂದಿ ಸಣ್ಣ ವಾಹನವೇನೊ ಸ್ಥಳಕ್ಕೆ ಹೋಗಿದೆ ಆದರೆ ವಾಹನದಲ್ಲಿ ನೀರಿಲ್ಲ, ಸೂಕ್ತ ಪರಿಕರಗಳಿಲ್ಲದೆ ಸಿಬ್ಬಂದಿ ಅಸಹಾಯಕರಾಗಿ ನಿಲ್ಲ ಬೇಕಾಯಿತು.ಆದರೆ ಗ್ರಾಮಸ್ಥರು ತಾಲ್ಲೋಕು ಆಡಳಿತಕ್ಕೆ ಹಿಡಿಶಾಪಹಾಕುತ್ತಲೇ.ತಮ್ಮ ಮನೆಗಳಲ್ಲಿ ಬಳಕೆಗೆ ಸಂಗ್ರಹಿಸಿದ ನೀರನ್ನೆ ತಂದು, ಬೆಂಕಿನಂದಿಸಲು ಸಹಾಯಮಾಡಿದರು ಅಷ್ಟರಲ್ಲಿ ತುರುವೇಕೆರೆ ಅಗ್ನಿಶಾಮಕ ವಾಹನ ಸ್ಥಳಕ್ಕೆ ಬಂದಿದೆ.,ಗ್ರಾಮಸ್ಥರು ಸ್ವಲ್ಪ ಎಚ್ಚರ ತಪ್ಪಿದರೂ ಸುಮಾರು 20ಕ್ಕೂ ಮನೆಗಳಿಗೆ ಬೆಂಕಿತಗುಲುವ ಅಪಾಯವಿತ್ತು ಆದರೆ ಗ್ರಾಮಸ್ಥರ ಮುಂಜಾಗ್ರತೆಯಿಂದ ಅಪಾಯ ತಪ್ಪಿದೆ, ಜಿಲ್ಲಾ ಕೇಂದ್ರವಾಗ ಬೇಕಾದ ತಿಪಟೂರಿನಲ್ಲಿ ಸೂಕ್ತ ಅಗ್ನಿಶಾಮಕವಾಹವನಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಿಪಟೂರು:ನಗರದ ವಿನಾಯಕ ನಗರದ ಈದ್ಗಾ ಮೈದಾನದಲ್ಲಿ ರಂಜಾನ್ ಸಾಮೂಹಿಕ ಪ್ರಾರ್ಥನೆ ವೇಳೆ ಯುವಕರ ಗುಂಪೊಂದು ರಿಜೆಕ್ಟ್ ಫಾರ್ ವಕ್ಫ್ ಅಮೈಂಡ್ ಮೆಂಟ್ 2024 ಭಿತ್ತಿಪತ್ರ ಪ್ರದರ್ಶನ ಮಾಡುವ ಮೂಲಕ ಕೇಂದ್ರ ಸರ್ಕಾರ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಲಾಯಿತು.


ಭಿತ್ತಿಪತ್ರ ಪ್ರದರ್ಶನ ಮಾಡಿದ ಯುವಕರು ಕೇಂದ್ರ ಸರ್ಕರ ತಿದ್ದುಪಡಿ ಮಾಡಲು ಹೊರಟಿರುವ ವಕ್ಫ್ ಕಾಯ್ದೆ 2024. ಮುಸ್ಲೀಂ ವಿರೋದಿಯಾಗಿದೆ,ನಮ್ಮ ಸಮುದಾಯ ಯಾವುದೇ ಕಾರಣಕ್ಕೂ ತಿದ್ದುಪಡಿಯನ್ನ ಒಪ್ಪುವುದಿಲ್ಲ, ತಿದ್ದುಪಡಿಗೆ ನಮ್ಮ ವಿರೋದವಿದೆ,ಆದರೆ ಕೇಂದ್ರಸರ್ಕಾರ ನಮ್ಮ ಹಕ್ಕುಗಳನ್ನ ಕಸಿದುಕೊಳ್ಳುವ ಉದೇಶದಿಂದ ಕಾಯ್ದೆ ತಿದ್ದುಪಡಿಗೆ ಮುಂದಾಗಿದೆ,ನಾವೂ ಯಾವುದೇ ಕಾರಣಕ್ಕೂ ಈ ಬಿಲ್ ಒಪ್ಪುವುದಿಲ್ಲ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ಈ ಕಾಯ್ದೆ ವಿರುದ್ದ ಉಗ್ರಹೋರಾಟ ಮಾಡುತ್ತೇವೆ ಎಂದು ತಿಳಿಸಿದರು.

ವರದಿ:ಮಂಜುನಾಥ್ ಹಾಲ್ಕುರಿಕೆ

ತಿಪಟೂರು ನಗರದ ಈದ್ಗಾ ಮೈದಾನದಲ್ಲಿ ರಂಜಾನ್ ಮಾಸಚರಣೆ ಅಂಗವಾಗಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿದ ಶಾಸಕ ಕೆ.ಷಡಕ್ಷರಿ ಯವರಿರು ಮುಸ್ಲೀಂ ಭಾಂದವರೊಂದಿಗೆ ರಂಜಾನ್ ಶುಭಾಷಯ ವಿನಿಯಮ ಮಾಡಿಕೊಂಡು ಶುಭಾಷಯ ತಿಳಿಸಿದರು


ನಂತರ ಮಾತನಾಡಿದ ಅವರು ವಿಶ್ವದಾದ್ಯಂತ ಆಚರಣೆ ಮಾಡುತ್ತಿರುವ ರಂಜಾನ್ ನಿಮ್ಮೆಲ್ಲರಿಗೂ ಶುಭುಂಟುಮಾಡಲಿ , ಮುಸ್ಲೀಂ ಸಮಾಜ ನನ್ನ ಕೈ ಹಿಡಿದಿದೆ. ನಾನೂ ಯಾವಾಗಲೂ ನಿಮ್ಮ ಜೊತೆಇರುತ್ತೇನೆ,ನಿಮ್ಮ ಹೇಳಿಗೆಗೆ ಅಗತ್ಯವಾದ ನೆರವು ನೀಡುತ್ತೇನೆ,ತಿಪಟೂರು ನಗರದಲ್ಲಿ ಮುಸ್ಲೀಂ ಶಾದಿ ಮಹಲ್ ನಿರ್ಮಾಣಕ್ಕೆ 2ಕೋಟಿ ಅನುದಾನ ನೀಡಲಾಗುವುದು, ನಗರದ ಈದ್ಗ ಮೈದಾನದಲ್ಲಿ ಸ್ವಚ್ಚತೆ ಅನುಕೂಲವಾಗುವಂತೆ ಇಂಟರ್ ಲಾಕ್ ನೆಲಹಾಸು ಹಾಕಿಸಿ ಮುಂದಿನ ರಂಜಾನ್ ಪ್ರಾರ್ಥನೆ ಅವಕಾಶ ಮಾಡಲಾಗುವುದು,ಈದ್ಗಾ ಸುತ್ತಲು,ಕಾಂಪೌಂಡ್ ನಿರ್ಮಾಣ ಮಾಡಿ ಮೂಲ ಸೌಕರ್ಯ ಒದಗಿಸಲಾಗುವುದು, ಲಿಂಗದಹಳ್ಳಿ ಬಳಿ ಇರುವ ಮುಸ್ಲಿಂ ಖಬರ್ ಸ್ತಾನಕ್ಕೆ ಕಾಂಪೌಂಡ್ ನಿರ್ಮಾಣ ಮಾಡಲಾಗುವುದು,

ಮುಸ್ಲೀಂ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ಉರ್ದು ಶಾಲೆಗೆ ಕಾಂಪೌಂಡ್ ನಿರ್ಮಾಣ ಮಾಡಲಾಗುವುದು,ಮುಸ್ಲೀಂ ಮಹಿಳೆಯರು ಹಾಗೂ ಮಕ್ಕಳಿಗೆ ಅನುಕೂಲವಾಗುವಂತೆ ಪ್ರತ್ಯೇಕ ಹಾಸ್ಟೇಲ್ ನಿರ್ಮಾಣ ಮಾಡಲಾಗಿವುದು,ನಿಮ್ಮ ಎಲ್ಲಾ ಬೇಡಿಕೆಗಳನ್ನ ಹಂತಹಂತವಾಗಿ ಈಡೇರಿಸುತ್ತೇನೆ, ನಿಮ್ಮ ಸಹಕಾರ ಈಗೇ ಇರಲಿ ನಾನೂ ನಿಮ್ಮ ಹೇಳಿಗೆಗೆ ನಿಮ್ಮ ಜೊತೆಇರುತ್ತೇನೆ ಎಂದು ತಿಳಿಸಿದರು
ಪ್ರಾರ್ಥನಾ ಸಭೆಯಲ್ಲಿ ಮುಖಂಡರಾದ ಮುನಾವರ್ ಪಾಷಾ,ಮಹಮದ್ ದಸ್ತಗೀರು,ಷಫಿಉಲ್ಲಾ ಷರೀಪ್,ಮಹಮದ್ ಜುಬೇರ್,ಷಫಿಉಲ್ಲ ,ಸುಜೀತ್ ಭೂಷಣ್ ಮುಂತ್ತಾದವರು ಉಪಸ್ಥಿತರಿದರು.

ವರದಿ:ಮಂಜುನಾಥ್ ಹಾಲ್ಕುರಿಕೆ

ತಿಪಟೂರು: ವಿಧಾನ ಪರಿಷತ್ ಸದಸ್ಯ ಎನ್ .ರವಿಕುಮಾರ್ ತಮ್ಮ ಶಾಸಕರ ಪ್ರದೇಶಾಭಿವೃದ್ದಿ ಯೋಜನೆಯಿಂದ ಮುಂಜೂರು ಮಾಡಿರುವ ತ್ರಿಚಕ್ರವಾಹನವನ್ನ ಫಲಾನುಭವಿಗಳಿಗೆ ವಿತರಣೆ ಮಾಡಲಾಯಿತು
ತಿಪಟೂರು ನಗರದ ಆಡಳಿತ ಸೌಧದ ಆವರಣದಲ್ಲಿ ತುಮಕೂರು ವಿಶ್ವವಿದ್ಯಾನಿಲಯ ಮಾಜಿ ಸಿಂಡಿಕೇಟ್ ಸದಸ್ಯ ರಾಜು, ಮಾಜಿ ನಗರಸಭಾ ಸದಸ್ಯ ಪ್ರಸನ್ನ ಕುಮಾರ್ ವಿತರಣೆ ಮಾಡಿದರು.
ಹುಣಸೇಘಟ್ಟ ಗ್ರಾಮಪಂಚಾಯ್ತಿ ವ್ಯಾಪ್ತಿಯ ಮಾಚುಕಟ್ಟೆ ಗ್ರಾಮದ ಚನ್ನೆಗೌಡ ಮತ್ತು ಮಹೇಶ್ ಎಂಬುವವರಿಗೆ ತ್ರಿಚಕ್ರವಾಹನ ವಿತರಿಸಲಾಯಿತು
ಕಾರ್ಯಕ್ರಮದಲ್ಲಿ ತಿಪಟೂರು ತಾಲ್ಲೋಕು ವಿಕಲಚೇತನರ ಸಂಘದ ಅಧ್ಯಕ್ಷ ಇನಾಯತ್,ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಉಪಸ್ಥಿತರಿದರು

ವರದಿ:ಮಂಜುನಾಥ್ ಹಾಲ್ಕುರಿಕೆ

ತುಮಕೂರು ಜಿಲ್ಲೆ ತಿಪಟೂರು ತಾಲ್ಲೋಕಿನ ಪ್ರಸಿದ್ದ ಯಾತ್ರಾಕ್ಷೇತ್ರ ಕಲ್ಪತರು ನಾಡಿನ ಶಕ್ತಿಪೀಠ ದಸರೀಘಟ್ಟ ಶ್ರೀ ಚೌಡೇಶ್ವರಿ ದೇವಾಲಯದಲ್ಲಿ ಯುಗಾದಿ ಹಬ್ಬದ ಅಂಗವಾಗಿ ಶ್ರೀ ಚೌಡೇಶ್ವರಿ ದೇವಾಲಯದಲ್ಲಿ ವಿಶೇಷ ಹೋಮ , ದೀಪಾರಾಧನೆ,ಪ್ರಾಕಾರೋತ್ಸವ ನೆರವೇರಿಸಲಾಯಿತು.

ಆದಿಚುಂಚನಗಿರಿ ದಸರೀಘಟ್ಟ ಶಾಖಾಮಠದ ಶ್ರೀ ಚಂದ್ರಶೇಖರನಾಥ ಮಹಾಸ್ವಾಮೀಜಿ ಶ್ರೀ ಚೌಡೇಶ್ವರಿ ದೇವಿ ಹಾಗೂ ಶ್ರೀ ಕರಿಯಮ್ಮ ದೇವಿಯವರಿಗೆ ವಿಶೇಷ ಅಲಂಕಾರ ಹಾಗೂ ದೀಪಾರಾಧನೆ ನೆರವೇರಿಸಿದರು.ಯುಗಾದಿ ಹಬ್ಬದ ಅಂಗವಾಗಿ ಸಾವಿರಾರು ಜನಭಕ್ತಾಧಿಗಳು ದೇವಾಲಯಕ್ಕೆ ಭೇಟಿ ನೀಡಿ ಪೂಜೆಸಲ್ಲಿಸಿದರು.

ವರದಿ :ಮಂಜುನಾಥ್ ಹಾಲ್ಕುರಿಕೆ

ಸಿರಾ: ನಗರದ ಡಾ. ಬಿ.ಆರ್ ಅಂಬೇಡ್ಕರ್ ಭವನದ ಸಭಾಂಗಣದಲ್ಲಿ ಮಾ.23 ರಂದು ಛಲವಾದಿ ಮಠದ 11ನೇ ವರ್ಷದ ವಾರ್ಷಿಕೋತ್ಸವ ಮತ್ತು ಶ್ರೀ ಬಸವಲಿಂಗಮೂರ್ತಿ ಸ್ವಾಮೀಜಿಯವರ 51ನೇ ವರ್ಧಂತ್ಸೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ನೆರೆವೇರಿತು, ಸದರಿ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಛಲವಾದಿ ಮಠದ ಪರಮಪೂಜ್ಯ ಶ್ರೀ ಬಸವಲಿಂಗಮೂರ್ತಿ ಸ್ವಾಮೀಜಿಯವರು ನಮ್ಮ ಛಲವಾದಿ ಸಮುದಾಯದ ಹಿತ ದೃಷ್ಟಿಗೆ 15 ವರ್ಷಗಳ ಹಿಂದೆಯೇ ಚಲವಾದಿ ಮಹಾಸಭಾ ಸ್ಥಾಪನೆಯಾಗಬೇಕು ಎಂದು ಐ.ಎ.ಎಸ್ ಅಧಿಕಾರಿ ದಿವಂಗತ ಕೆ ಶಿವರಾಮ್ ತಿಳಿಸಿದ್ದರು ಅಂತೆಯೇ ತಾಲ್ಲೂಕಿನ ಚೆನ್ನೇನಹಳ್ಳಿಯಲ್ಲಿ ಸ್ಥಾಪನೆಯಾಗಿ 12 ವರ್ಷಗಳಿಂದ ನಿರಂತರವಾಗಿ ಧಾರ್ಮಿಕ ಮತ್ತು ಸಾಮಾಜಿಕ ಸೇವೆಯಲ್ಲಿ ತೊಡಗಿದೆ ನಮ್ಮ ಸಮುದಾಯದ ಸಂಸ್ಕೃತಿ ಅರೆವಾದ್ಯ ಮತ್ತು ಕಹಳೆ ಊದುವುದು ನಮ್ಮ ಛಲವಾದಿ ಸಮುದಾಯದ ಹೆಗ್ಗುರುತಾಗಿದೆ, ಕಹಳೆ ಊದುವ ಉದ್ದೇಶ ಎಚ್ಚರಿಕೆಯ ಸಂದೇಶವಾಗಿದೆ ಇವೆಲ್ಲವೂ ನಮ್ಮ ಭಾರತೀಯ ಸಂಸ್ಕೃತಿಯ ಪ್ರತೀಕವಾಗಿದೆ ನಮ್ಮ ಸಮುದಾಯದ ಏಳಿಗೆಗೆ ನಮ್ಮಲ್ಲಿ ಸಹಕಾರ ಮನಭಾವ ಬೆಳೆದು ಬುದ್ದ ಬಸವಾದಿ ಶರಣರು ಮತ್ತು ಬಾಬಾ ಸಾಹೇಬ್ ಡಾ. ಬಿ.ಆರ್ ಅಂಬೇಡ್ಕರ್ ಹಾಕಿಕೊಟ್ಟ ಹಾದಿಯನ್ನು ಹಿಡಿದು ಸಮಾಜದಲ್ಲಿ ಬೆಳೆಯಬೇಕಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷೀಯ ಭಾಷಣ ಮಾಡಿದ ವಿಧಾನ ಪರಿಷತ್ ಹಾಗೂ ಛಲವಾದಿ ಮುಖಂಡರಾದ ಶ್ರೀ ಛಲವಾದಿ ನಾರಾಯಣಸ್ವಾಮಿ ಮಾತನಾಡಿ ನಮ್ಮ ಸಮುದಾಯ ಸ್ವಾಮೀಜಿಯ ಹೊಂದುವ ಸಂಸ್ಕೃತಿಯಲ್ಲ ಡಾ. ಬಿ.ಆರ್ ಅಂಬೇಡ್ಕರ್ ಅವರಲ್ಲೇ ನಾವು ಎಲ್ಲವನ್ನೂ ಕಾಣುತಿದ್ದೆವೆ , ಆದರೆ ಪ್ರಸ್ತುತ ದಿನಮಾನಗಳಲ್ಲಿ ಸ್ವಾಮೀಜಿಗಳ ಅನಿವಾರ್ಯತೆ ಇದೆ ನಮ್ಮನ್ನೂ ತಿದ್ದಿ ತೀಡಿ ಸಮುದಾಯಕ್ಕೆ ಕೊಡಿಗೆಗಳನ್ನು ಕೊಡಲು ಸ್ವಾಮೀಜಿಗಳ ಮಾರ್ಗದರ್ಶನ ಬೇಕಾಗಿದೆ ಈ ಹಿನ್ನೆಲೆಯಲ್ಲಿ ನಮ್ಮ ಸಮುದಾಯದಲ್ಲಿ ಮತ್ತಷ್ಟು ಬಲ ಗಟ್ಟಿಯಾಗಬೇಕಿದೆ, ಮೀಸಲಾತಿ ಪಡೆದು ಸ್ವ ಹಿತ ಪಡೆದುಕೊಳ್ಳಲು ಅಷ್ಟೇ ಅಲ್ಲ ಬದಲಾಗಿ ಸಮಾಜದ ಹಿತ ಕಾಪಾಡುವುದು ಅಗತ್ಯವಾಗಿದೆ ಎಂದರು.ಕಾರ್ಯಕ್ರಮದಲ್ಲಿ ಛಲವಾದಿ ಜಗದ್ಗುರು ಪೀಠ ಚನ್ನೇನಳ್ಳಿಯ ಪರಮಪೂಜ್ಯ ಶ್ರೀ ಬಸವಲಿಂಗಮೂರ್ತಿ ಸ್ವಾಮೀಜಿಯವರು, ವಿಧಾನ ಪರಿಷತ್ ಸದಸ್ಯರಾದ ಹಾಗೂ ಛಲವಾದಿ ಮುಖಂಡರಾದ ಶ್ರೀ ಛಲವಾದಿ ನಾರಾಯಣಸ್ವಾಮಿ, ವಿಶ್ವ ಮೈತ್ರಿ ಬುದ್ಧ ವಿಹಾರ ಮೈಸೂರು ಹಾಗೂ ಪ್ರಧಾನ ಕಾರ್ಯದರ್ಶಿಗಳು ಕರ್ನಾಟಕ ಬೌದ್ಧ ಮಹಾಸಭಾದ ಪರಮಪೂಜ್ಯ ಡಾ.ಕಲ್ಯಾಣದಸಿರಿ ಬಂತೇಜಿಯವರು, ಅಲ್ಲಮಪ್ರಭು ಮಠ ಡಿ ಕಲ್ಕೆರೆಯ ಪರಮಪೂಜ್ಯ ಶ್ರೀ ತಿಪ್ಪೇರುದ್ರ ಸ್ವಾಮೀಜಿಯವರು ಉಪಸ್ಥಿತರಿದ್ದರು ಹಾಗೂ ಛಲವಾದಿ ಸಮುದಾಯದ ಮುಖಂಡರು, ಹಿರಿಯರು ಅಧಿಕಾರಿಗಳು ಮತ್ತು ಸಾರ್ವಜನಿಕರು ಸದರಿ ಕಾರ್ಯಕ್ರಮದಲ್ಲಿ ಹಾಜರಾಗಿದ್ದರು.

ವರದಿ: ಸಂತೋಷ್ ಓಬಳ. ಗುಬ್ಬಿ

ತುಮಕೂರು ಗ್ರಾಮಾಂತರ: ತಾಲೂಕಿನ ಉಡುಗೆರೆ ಹೋಬಳಿಕೆ ಒಳಪಡುವ ಕೊಡಗೇನಹಳ್ಳಿ ಗ್ರಾಮದ ಭಕ್ತರ ಆರಾಧ್ಯ ದೇವಿ ಶ್ರೀ ಕಬ್ಬಾಳ ದುರ್ಗಿ ವಾರ್ಷಿಕ ಜಾತ್ರಾ ಮಹೋತ್ಸವ ಮಾ.24 ರಿಂದ ಮಾ.26 ರವರೆಗೆ ವಿಜೃಂಭಣೆಯಿಂದ ಜರುಗಿತು. ಸದರಿ ಜಾತ್ರೆಯು ಮೂರು ದಿನಗಳ ಕಾಲ ಹಲವಾರು ಧಾರ್ಮಿಕ ಪದ್ಧತಿಗಳೊಂದಿಗೆ ಜರುಗುತ್ತದೆ, ಅದರಲ್ಲಿ ಪ್ರಮುಖವಾಗಿ ಹೊನ್ನಾರ ಮತ್ತು ಜಾಗರಣೆ ಇಲ್ಲಿಯ ವಿಶೇಷ ಆಚರಣೆಯಾಗಿದೆ ತಾಲೂಕು ಜಿಲ್ಲೆಯಾದ್ಯಂತ ನೂರಾರು ಭಕ್ತಾದಿಗಳು ಸದರಿ ಜಾತ್ರೆಗೆ ಆಗಮಿಸುತ್ತಾರೆ. ಗ್ರಾಮಸ್ಥರೂಬ್ಬರು ಮಾತನಾಡಿ ನಮ್ಮ ಗ್ರಾಮದಲ್ಲಿ ಪ್ರತಿವರ್ಷವು ಶ್ರೀ ಕಬ್ಬಾಳ ದುರ್ಗಿ ಜಾತ್ರೆಯನ್ನು ಅದ್ದೂರಿಯಾಗಿ ಮಾಡಲಾಗುತ್ತದೆ ಕೊರೋನಾದಂತಹ ಸಂಕಷ್ಟದಲ್ಲಿಯೂ ಕೂಡ ನಮ್ಮ ಗ್ರಾಮವು ಕೂಡ ಜಾತ್ರೆಯನ್ನು ಕೈ ಬಿಟ್ಟಿಲ್ಲ ನಿರಂತರವಾಗಿ ನಡೆಯುತ್ತಿದೆ, ಈ ದೇವಿಯ ಅನುಗ್ರಹದಿಂದ ಹಲವಾರು ಸಂಕಟಗಳಿಂದ ಹೊರಬಂದಿದ್ದೇವೆ ನಮ್ಮ ಗ್ರಾಮವು ದೇವರಾಯನದುರ್ಗ, ನಾಮದ ಚಿಲುಮೆ, ಗೊರವನಹಳ್ಳಿ ಶ್ರೀ ಮಹಾಲಕ್ಷ್ಮಿ ಪುಣ್ಯಕ್ಷೇತ್ರಗಳಿಗೆ ಸಮೀಪವಾಗಿರುವುದರಿಂದ ಮುಂದಿನ ದಿನಗಳಲ್ಲಿ ನಮ್ಮ ಗ್ರಾಮವು ಕೂಡ ಪ್ರಮುಖ ಪುಣ್ಯ ಕ್ಷೇತ್ರವಾಗುವ ಎಲ್ಲಾ ಸಾಧ್ಯತೆಗಳಿವೆ ಎಂದರು. ಗ್ರಾಮಸ್ಥರು ಹಾಗೂ ಅಬಕಾರಿ ಇಲಾಖೆ ಸಿಬ್ಬಂದಿ ಜಗದೀಶ್ ಮಾತನಾಡಿ ಪ್ರತಿ ವರ್ಷವೂ ಜಾತ್ರೆಯ ಆಚರಣೆಯು ವಿಜೃಂಭಣೆಯಿಂದ ಆಗುತ್ತಿದೆ ಅದಕ್ಕೆ ಕಾರಣ ಈ ದೇವಿಯಲ್ಲಿ ಇಟ್ಟ ನಂಬಿಕೆಗಳು ಫಲಿಸುತ್ತಿರಿವ ಪರಿಣಾಮವೇ ಆಗಿದೆ ಅಲ್ಲದೆ ನಮ್ಮ ಈ ಗ್ರಾಮದ ಜಾತ್ರೆಯನ್ನು ಎಲ್ಲರೂ ಒಗ್ಗಟ್ಟಾಗಿ ಜಾತ್ಯಾತೀತವಾಗಿ ಜಾತ್ರೆಯನ್ನು ಆಚರಿಸಲಾಗುತ್ತದೆ ಇದು ನಮಗೆ ಹೆಮ್ಮೆಯ ವಿಷಯವಾಗಿದೆ. ಇದೇ ರೀತಿ ಈ ದೇವಿಯ ಜಾತ್ರೆ ಮಾಡಲು ಎಲ್ಲರಿಗೂ ಶಕ್ತಿ ನೀಡಲಿ ಎಂದು ಆಶಯ ವ್ಯಕ್ತಪಡಿಸಿದರು.ಗ್ರಾಮಸ್ಥರಾದ ಕಿರಣ್ ಮಾತನಾಡಿ ನಮ್ಮ ಗ್ರಾಮದ ಜಾತ್ರೆಯಲ್ಲಿ ಪ್ರಮುಖವಾಗಿ 2 ವಿಶೇಷ ಆಚರಣೆಗಳಿವೆ, ಅದರಲ್ಲಿ ಮೊದಲನೆಯದಾಗಿ ಹೊನ್ನಾರ ಇದರಲ್ಲಿ ಚಿಕ್ಕ ಮಕ್ಕಳಿಗೆ ಪುರೋಹಿತರ ವೇಷ ಧರಿಸಿ ಅವರ ಮೂಲಕ ಗ್ರಾಮದ ಮಳೆ ಬೆಳೆ ಆರೋಗ್ಯ ಕುರಿತು ಗ್ರಾಮದ ಭವಿಷ್ಯವನ್ನು ನುಡಿಸಲಾಗುತ್ತದೆ. ಎರಡನೇದಾಗಿ ಜಾಗರಣೆ ಎಂಬುದಾಗಿದೆ ಈ ಆಚರಣೆಯಲ್ಲಿ ಇದು ಕೂಡ ಚಿಕ್ಕ ಮಕ್ಕಳ ಮುಖಾಂತರ ಹೋಳಿ ಪರಾಕ್ ಹಾಕಿಸಲಾಗುತ್ತದೆ ಈ ಎರಡು ಪದ್ಧತಿಗಳು ಸುತ್ತಮುತ್ತಲ ಗ್ರಾಮದ ಜಾತ್ರೆಗಳಿಗೆ ವಿಭಿನ್ನವಾಗಿದೆ ಎಂದರು.ಸದರಿ ಜಾತ್ರಾ ಮಹೋತ್ಸವದಲ್ಲಿ ಗ್ರಾಮದ ಗೌಡರು, ಮುಖಂಡರು, ಹಿರಿಯರು , ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ನೂರಾರು ಭಕ್ತಾದಿಗಳು ನೆರೆದಿದ್ದರು.

ವರದಿ: ಸಂತೋಷ್ ಓಬಳ. ಗುಬ್ಬಿ


ತಿಪಟೂರು :ನಗರದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಕಚೇರಿಯಲ್ಲಿ ಸರಸ್ಪತಿ ಪೂಜೆ
ಹಾಗೂ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ತಿಪಟೂರು ಯೋಜನೆ ವ್ಯಾಪ್ತಿಯ ಸಾಧನಾ ಸಂಚಿಕೆಯನ್ನ ಮಾಜಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಬಿಡುಗಡೆಗೊಳಿಸಿದರು.


ಸಾಧನಾ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿದ ಮಾಜಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಗ್ರಾಮೀಣ ಭಾಗದ ಜನರಿಗೆ ವರದಾನವಾಗಿದೆ, ಸಂಕಷ್ಟದಲ್ಲಿ ಇರುವ ಮಹಿಳೆಯರಿಗೆ ಆರ್ಥಿಕ ನೆರವು ನೀಡಿ ಆರ್ಥಿಕ ಸಬಲೀಕರಣಕ್ಕೆ ಅವಕಾಶ ಕಲ್ಪಿಸಿದ್ದಾರೆ ಶ್ರೀವೀರೇಂದ್ರ ಹೆಗಡೆಯವರ ದೂರದೃಷ್ಠಿ ಯೋಜನೆಗಳು ಗ್ರಾಮೀಣ ಭಾಗದ ರೈತರಿಗೆ ವರದಾನ ಎಂದು ತಿಳಿಸಿದರು.


ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ತಿಪಟೂರು ತಾಲ್ಲೋಕು ಯೋಜನಾಧಿಕಾರಿ ಉದಯ್ ಮಾತನಾಡಿ ಶ್ರೀಕ್ಷೇತ್ರಗ್ರಾಮಾಭಿವೃದ್ದಿ ಯೋಜನೆ ಬಡವರು, ನಿರ್ಗತಿಕರು, ಸಮಾಜದಹಿಂದುಳಿದ ಜನರ ಅಭಿವೃದ್ಧಿಗಾಗಿ ವೀರೇಂದ್ರ
ಹೆಗ್ಗಡೆಯವರು ವಿಭಿನ್ನ ಕಾರ್ಯಕ್ರಮಗಳುರೂಪಿಸಿ ಸಮಾಜದ ಮುಖ್ಯವಾಹಿನಿಗೆ ತರಲುಪ್ರಯತ್ನಿಸುತ್ತಿದ್ದಾರೆ,
ನಮ್ಮ ಯೋಜನೆಯಿಂದಸಾಲಸೌಲಭ್ಯ ಪಡೆದ ಸಾವಿರಾರು ಜನರುಸ್ವಾವಲಂಬಿಗಳಾಗಿ ಜೀವನ ಕಟ್ಟಿಕೊಂಡುಸಮಾಜದಲ್ಲಿ ಧೈರ್ಯದಿಂದ ಜೀವನ ನಡೆಸುತ್ತಿದ್ದಾರೆ102ಕೋಟಿ ರೂ. ಸಾಲ ಸೌಲಭ್ಯ: ಎರಡುಸಾವಿರಕ್ಕೂ ಅಧಿಕಸಂಘಗಳಿದ್ದು, ಪ್ರಸ್ತುತ ವರ್ಷಬ್ಯಾಂಕ್ ಮೂಲಕ 102ಕೋಟಿ ರೂ. ಸಾಲ ಸೌಲಭ್ಯ ಜನಮರಿಗಳ ಕಾರ್ಯಕ್ರಮದಲ್ಲಿ 136
ನೀಡಲಾಗಿದೆ. 106 ನಿರ್ಗತಿಕ ಕುಟುಂಬಕ್ಕೆ ವಿಕಲಚೇತನರಿಗೆ ವೀಲ್ ಚೇರ್, ವಾಟರ್ ಬೆಡ್ ರಚನೆ, ಸಮುದಾಯ ಭವನ, ದೇವಸ್ಥಾನಬದುಕನ್ನ ತಿಪಟೂರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಚೇರಿಯಲ್ಲಿ ನಡೆದಕಾರ್ಯಕ್ರಮದಲ್ಲಿ ಯೋಜನಾಧಿಕಾರಿ ಕೆ. ಉದಯ್‌ ಹಾಗೂ ಸಿಬ್ಬಂದಿ ಇದ್ದರು.
ಮಾಸಾಶನ, 106 ಕುಟುಂಬಗಳಿಗೆ ವಾತ್ಸಲ್ಯ ಕಿಟ್,ವಿದ್ಯಾರ್ಥಿಗಳಿಗೆ ಸುಜ್ಞಾನನಿಧಿ ಶಿಷ್ಯ ವೇತನ,
ಆರು ವಾತ್ಸಲ್ಯ ಮನೆ ನಿರ್ಮಾಣ, 432 ಮತ್ತಿತರ ಪರಿಕರ ನೀಡಲಾಗಿದೆ.ನಮ್ಮೂರು ನಮ್ಮ
ರೈತರ ಕೃಷಿಗೆ ಅನುಕೂಲಮಾಡಿ ಕೊಡಲು ಯೋಜನೆಯಡಿ 9ಕೆರೆ ಹೂಳೆತ್ತುವ ಮೂಲಕ ಅನುಕೂಲ ಕಲ್ಪಿಸಿದೆ, ಉತ್ಪಾದಕರ ಸಹಕಾರ ಸಂಘಗಳ ಕಟ್ಟಡ• ಹಿಂದುಳಿದ ಜನರ ಅಭಿವೃದ್ಧಿಗಾಗಿ ಶ್ರೀವೀರೇಂದ್ರ ಹೆಗ್ಗಡೆ ಅವರಿಂದವಿಭಿನ್ನ ಯೋಜನೆ
ಜೀರ್ಣೋದ್ಧಾರ, ಸ್ವ ಉದ್ಯೋಗ ತರಬೇತಿ,ಮಹಿಳೆಯರ ಸಬಲೀಕರಣಕ್ಕಾಗಿ ಹಲವು ಕಾರ್ಯ
ಕಾರ್ಯಕ್ರಮಗಳನ್ನು ಜಾರಿಗೆ ತರಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಜ್ಞಾನವಿಕಾಸ ಸಮನ್ವಯಾಧಿಕಾರಿ ಎಂ.ಡಿ.ಪರಶಿವಮೂರ್ತಿ, ದಿನೇಶ್, ಅನಿತಾ, ಸಿಎಸ್ಸಿಪದ್ಮಾವತಿ, ಮೇಲ್ವಿಚಾರಕ ಪ್ರದೀಪ್, ಪ್ರಮೋದ್,ವಿಭಾಗ ಶೋಭಾ, ಆಡಿಟರ್ ವಿನೋದ್ ಕುಡಿಯುವ ನೀರಿನಘಟಕದನಿರ್ವಾಹಕ ಲೋಕೇಶ್ ಸೇರಿದಂತೆ ಕಚೇರಿ ಸಿಬ್ಬಂದಿವರ್ಗದವರಿದ್ದರು.

ವರದಿ :ಮಂಜುನಾಥ್ ಹಾಲ್ಕುರಿಕೆ

ತಿಪಟೂರು :ತಾಲ್ಲೋಕಿನ ಹೊನ್ನವಳ್ಳಿ ಹೋಬಳಿ ಮಣಕಿನಕೆರೆ ಗ್ರಾಮಪಂಚಾಯ್ತಿ ವ್ಯಾಪ್ತಿಯ ಹಾಲೇನಹಳ್ಳಿ ಗ್ರಾಮದಲ್ಲಿ ಹಾಲ್ಕುರಿಕೆ ಕೆರೆ ಹಳ್ಳ ಜಲಾನಯನ ಅನುಷ್ಠಾನಕಚೇರಿಯಿಂದ ಗಣಿ ಬಾಧಿತ ಪ್ರದೇಶಗಳಲ್ಲಿ ಸಮಗ್ರ ಪರಿಸರ ಯೋಜನೆಯ
ಅರಿವು ಮೂಡಿಸುವ ಗ್ರಾಮ ಸಭೆಯನ್ನ ಹಾಗೂ ಜಾಥ ಕಾರ್ಯಕ್ರಮವನ್ನ ಹಾಲೇನಹಳ್ಳಿ ಗ್ರಾಮದಲ್ಲಿ ನಡೆಯಿತು.


ತಿಪಟೂರು ತಾಲ್ಲೋಕು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಪವನ್ ಡಿ.ಆರ್ . ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ರೈತರೊಂದಿಗೆ ಸಂವಾದ
ನಡೆಸಿದ ಅವರು ಮಾತನಾಡಿ ಗಣಿಬಾಧಿತ ಪ್ರದೇಶ ಅಭಿವೃದ್ದಿ ಯೋಜನೆ ಸಿಇಪಿಎಂಐ ಝಡ್ ಅಡಿ , ರೈತರು ತಮ್ಮ ಕೃಷಿ ಜಮೀನಿನ ಅಭಿವೃದ್ದಿಗೆ ಕೃಷಿ ಇಲಾಖೆ ಅನುದಾನ ನೀಡುತ್ತಿದ್ದೆ ,ರೈತರು ಸಹಕಾರ ಸಂಘಗಳನ್ನ ರಚಿಸಿಕೊಂಡು 10 ಸಾವಿರ ರೂಪಾಯಿಯಿಂದ 10 ಲಕ್ಷ ರೂ.ವರೆಗೂ ವಿವಿಧ ಕಾಮಗಾರಿಗಳನ್ನು
‘ರೈತರ ಜಮೀನಿನಲ್ಲಿ ಕೈಗೊಳ್ಳಲು ಅವಕಾಶವಿದ್ದು, ಒಟ್ಟು ಅನುದಾನದ ಶೇ.10ರಷ್ಟು
ವಂತಿಕೆಯನ್ನಷ್ಟೇ ರೈತರಿಂದ ಕಟ್ಟಿಸಿಕೊಳ್ಳಲಾಗುವುದು ಎಂದು ತಿಳಿಸಿದರು. ಬಾಳೆ ಮತ್ತು
ಅಡಕೆ ಸಸಿಗಳನ್ನು ಹೊರತುಪಡಿಸಿ ಎಲ್ಲ ಹಣ್ಣಿನ ಸಸಿಗಳನ್ನು ಗಣಿ ಬಾಧಿತ ಸಮಗ್ರ
ಪರಿಸರ ಯೋಜನೆಯಿಂದ ರೈತರ ಜಮೀನುಗಳಲ್ಲಿ ನೆಟ್ಟು ಕೊಡಲಾಗುವುದು. ಕೃಷಿ
ಹೊಂಡ, ಗೋಕಟ್ಟೆ, ನಾಲಾ, ಬದು ಸೇರಿ ಒಟ್ಟಾರೆ ಸಮಗ್ರವಾಗಿ ಗಣಿಗಾರಿಕೆಯಿಂದ
ನಷ್ಟವಾಗಿರುವುದನ್ನು ಮರುನಿರ್ಮಿಸಲಾಗುವುದು. ಗಣಿ ದಂಡದಿಂದ ಸಂಗ್ರಹವಾದ ಹಣದಲ್ಲಿಮೀಸಲಾಗಿರುವ ಮೊತ್ತವನ್ನು ಬಳಸಲು ಡಿಪಿಆರ್ ಸಿದ್ಧಪಡಿಸಲು ರೈತರ ಸಹಕಾರ
ಅಗತ್ಯ ಎಂದು ತಿಳಿಸಿದರು.


ಸ್ಕೋಡ್ ವೇಸ್ ಸಂಸ್ಥೆ ಮುಖ್ಯಸ್ಥ ನರಸಪ್ಪ ಮಾತನಾಡಿ ಗಣಿಬಾದಿತ ಪ್ರದೇಶಗಳ ಅಭಿವೃದ್ದಿಗೆ ಕ್ರಿಯಾಯೋಜನೆ ರೂಪಿಸಲು ರೈತರು ಹಾಗೂ ಸಾರ್ವಜನಿಕರ ಸಹಕಾರ ಅಗತ್ಯ, ನಮ್ಮ ಸಿಬ್ಬಂದಿಗಳೊಂದಿಗೆ ಸಹಕಾರ ನೀಡಿ ಯೋಜನೆ ಯಶಸ್ವಿನಿಗೆ ಸಹಕರಿಸಬೇಕು ಎಂದು ತಿಳಿಸಿದರು
ಕಾರ್ಯಕ್ರಮದಲ್ಲಿ ಮಣಕಿಕೆರೆ ಗ್ರಾಮಪಂಚಾಯ್ತಿ ಸದಸ್ಯರಾದ ಶ್ರೀಮತಿ ಮೀನಾಕ್ಷಮ್ಮ ಬಸವರಾಜು,ಹರೀಶ್,ನಾಗರಾಜು,ಮುಂತ್ತಾದವರು ಉಪಸ್ಥಿತರಿದರು

ದಿನಾಂಕ: 30-03-2025 ನಡೆಯುವ ಯುಗಾದಿ ಹಬ್ಬದಆಚರಣೆ ಸಮಯದಲ್ಲಿ ಕಲ್ಯಾಣ ಮಂಟಪ, ಹೋಟೆಲ್, ವಸತಿ ಗೃಹಗಳು, ಮನೆ, ತೋಟದ ಮನೆಗಳು,ರಸ್ತೆಯ ಬದಿಗಳಲ್ಲಿ ಟೆಂಟ್ ನಿರ್ಮಿಸಿಕೊಂಡು ಜೂಜಾಡುವುದನ್ನು ನಿಷೇದಿಸಲಾಗಿದೆ.

ಇಂದಿನಿಂದ ಈ
ಸಂಬಂಧ ಯಾವುದೇ ರೀತಿಯ ಜೂಜಾಟ ಕಂಡುಬಂದಲ್ಲಿ ಅವರ ಮೇಲೆ ಕಠಿಣ ಕಾನೂನು ಕ್ರಮ
ಜರುಗಿಸಲಾಗುತ್ತದೆ. ಹಾಗೂ ಇದಕ್ಕೆ ಪ್ರೋತ್ಸಾಹಿಸಿದ ಸ್ಥಳದ ಮಾಲೀಕರು/ಮಧ್ಯವರ್ತಿಗಳ ಮೇಲು ಕಾನೂನು
ರೀತಿ ಕ್ರಮ ಜರುಗಿಸಲಾಗುವುದು, ಮತ್ತು ಇದಕ್ಕೆ ಸಂಬಂಧಿಸಿದ ಚರ ಮತ್ತು ಸ್ಥಿರಆಸ್ತಿಗಳನ್ನು ಮುಟ್ಟುಗೋಲು
ಹಾಕಿಕೊಳ್ಳಲಾಗುತ್ತದೆ. ಹಾಗೂ ಅಕ್ರಮ ಜೂಜಾಟದಲ್ಲಿ ತೊಡಗುವವರ ವಿರುದ್ಧ ಗೂಂಡಾ ಕಾಯ್ದೆ ಅಡಿಯಲ್ಲಿ
ಕ್ರಮ ಜರುಗಿಸಲಾಗುವುದು.
ಆದ್ದರಿಂದ ಸಾರ್ವಜನಿಕರು ಯಾವುದೇ ರೀತಿಯ ಜೂಜಾಟದಲ್ಲಿ ತೊಡಗುವುದಾಗಲಿ ಅದಕ್ಕೆ
ಅವಕಾಶ ಮಾಡಿಕೊಡುವುದಾಗಲಿ ಪ್ರೋತ್ಸಾಹ ಕೊಡುವುದಾಗಲಿ ಮಾಡಬಾರದಾಗಿ ತುಮಕೂರು ಜಿಲ್ಲಾ ಪೊಲೀಸ್ ಕಛೇರಿ
ತುಮಕೂರು ಎಚ್ಚರಿಕೆ ನೀಡಿದೆ.

error: Content is protected !!