ಮಲಗಿದ್ದ ನಾಯಿಯನ್ನು ಒತ್ತೊಯ್ದ ಚಿರತೆ.ಗ್ರಾಮಸ್ಥರಲ್ಲಿ ಅತಂಕ.

Spread the love

ತುರುವೇಕೆರೆ, :ತಾಲೂಕಿನ ತೊರೆಮಾವಿನಹಳ್ಳಿ ಗ್ರಾಮದಲ್ಲಿ ನಿನ್ನೆ ತಡರಾತ್ರಿ ಮನೆ ಮುಂದೆ ಮಲಗಿದ್ದ ನಾಯಿಯನ್ನು ಚಿರತೆ ಒತ್ತೊಯ್ದ ಘಟನೆ ನಡೆದಿದೆ

, ತೊರೆಮಾವಿನಹಳ್ಳಿ ಗ್ರಾಮದ ಶಂಕ್ರಯ್ಯ ಎಂಬುವರ ಮನೆ ಮುಂದೆ ನಿನ್ನೆ ತಡರಾತ್ರಿ ಮಲಗಿದ್ದ ನಾಯಿಯನ್ನು ಚಿರತೆ ಒತ್ತೊಯ್ದಿದ್ದು ಇದರ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಗ್ರಾಮಸ್ಥರಲ್ಲಿ ಆತಂಕವು ಸಹ ಹೆಚ್ಚಾಗಿದೆ ಇದೇ ಗ್ರಾಮದ ಸುತ್ತಮುತ್ತ ಕೆಲ ದಿನಗಳ ಹಿಂದೆ ಚಿರತೆ ಕಾಣಿಸಿಕೊಂಡಿದ್ದು ಗ್ರಾಮಕ್ಕೆ ಬಂದು ಮನೆಯ ಮುಂದೆ ಮಲಗಿದ್ದ ನಾಯಿಯನ್ನು ಒತ್ತೊಯ್ದಿದೆ, ಈ ಘಟನೆ ತುರುವೇಕೆರೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದ್ದು ಈಗಾಗಲೇ ಗ್ರಾಮಸ್ಥರು ಇದಕ್ಕೆ ಸಂಬಂಧಪಟ್ಟಂತೆ ಅರಣ್ಯ ಇಲಾಖೆಗೆ ವಿಷಯ ಮುಟ್ಟಿಸಿದ್ದು ಅರಣ್ಯ ಇಲಾಖೆ ಚಿರತೆಯನ್ನು ಸೆರೆಹಿಡಿದು ಗ್ರಾಮಸ್ಥರ ಆತಂಕಕ್ಕೆ ತೆರೆ ಎಳೆಯುತ್ತಾರ ಕಾದುನೋಡಬೇಕು, ಒಟ್ಟಾರೆ ನೆನ್ನೆ ತಡ ರಾತ್ರಿ ಗ್ರಾಮಕ್ಕೆ ಚಿರತೆಯೊಂದು ಬಂದು ನಾಯಿಯನ್ನು ಹೊತ್ತೊಯ್ದ ಹಿನ್ನೆಲೆಯಲ್ಲಿ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿ ಮನೆಯಿಂದ ಹೊರಬರಲು ಭಯಪಡುವಂತಹ ಸ್ಥಿತಿಯಂತು ನಿರ್ಮಾಣವಾಗಿದೆ.

ವರದಿ,ಮಂಜುನಾಥ್ ಕೆ ಎ ತುರುವೇಕೆರೆ.

Leave a Reply

Your email address will not be published. Required fields are marked *

error: Content is protected !!