ತಿಪಟೂರಿನಲ್ಲಿ ಮಟ್ಕಾ ಅಡ್ಡೆ ಮೇಲೆ ನಗರಠಾಣೆ ಪೊಲೀಸರ ದಾಳಿ ಪ್ರಕರಣ ದಾಖಲು

Spread the love

ತಿಪಟೂರು ನಗರದ ಕರಿಬಸಪ್ಪ ಕಾಲೋನಿಯಲ್ಲಿ ಗಾಂಧೀನಗರದಲ್ಲಿ ಅಕ್ರಮ ಮಟ್ಕಾ ಅಡ್ಡದ ಮೇಲೆ ತಿಪಟೂರು ನಗರ ಠಾಣೆ ಪೋಲಿಸರು ದಾಳಿ ನಡೆಸಿದ್ದು, ಪ್ರಕರಣ ದಾಖಲಿಸಲಾಗಿದೆ

ಗಾಂಧೀ ನಗರದ ವಾಸಿಯಾದ ರಫೀ ಅಲಿಯಾಸ್ ಡಬ್ಬ ಎಂಬುವವನು ಅಕ್ರಮವಾಗಿ ಗುಂಪುಕಟ್ಟಿಕೊಂಡು ಒಂದು ರೂಪಾಯಿಗೆ 70 ರೂಪಾಯಿ ಹಣ ಕೊಡುವುದ್ದಾಗಿ,ಜನರನ್ನ ಸೇರಿಸಿಕೊಂಡು ಮಟ್ಕಾ ಬರೆಯುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ತಿಪಟೂರು ನಗರಠಾಣೆ ಪೊಲೀಸರು ದಾಳಿ ನಡೆಸಿದ್ದು. ಆರೋಪಿ ರಫೀ ಯನ್ನ ಬಂಧಿಸಿದ್ದು, ಮಟ್ಕಾ ಬರೆಯುತ್ತಿದ್ದ ಮಟ್ಕಾ ಹಾಳೆ,ಪೆನ್ ವಶಕ್ಕೆ ಪಡೆದಿದ್ದು ಆರೋಪಿ ಬಳಿ ಇದ್ದ 300ಹಣ ಸಹ ವಶಪಡಿಸಿಕೊಂಡು. ಪ್ರಕರಣ ದಾಖಲಿಸಲಾಗಿದೆ. ತುಮಕೂರು ಜಿಲ್ಲಾಪೊಲೀಸ್ ವರೀಷ್ಠಾಧಿಕಾರಿ ಅಶೋಕ್, ಡಿವೈಎಸ್ಪಿ ವಿನಾಯಕ ಶೆಟ್ಟಿಗೇರಿ, ನಗರಠಾಣೆ ವೃತ್ತನಿರೀಕ್ಷಕರಾದ ವೆಂಕಟೇಶ್ ನೇತೃತ್ವದಲ್ಲಿ ತನಿಖೆ ಕೈಗೊಂಡಿದ್ದಾರೆ

ವರದಿ:ಮಂಜುನಾಥ್ ಹಾಲ್ಕುರಿಕೆ

Leave a Reply

Your email address will not be published. Required fields are marked *

error: Content is protected !!