ತಿಪಟೂರು ಶಿವನ ದೇವಾಲಯದಲ್ಲಿ ಪೂಜೆ ರುದ್ರಾಭೀಷೇಕ

Spread the love

ತಿಪಟೂರು : ಶಿವರಾತ್ರಿ ದಿನವಾದ ಇಂದು ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ವಿಶೇಷ ಪೂಜೆ, ನಿತ್ಯಾರುದ್ರಾಭೀಷೇಕ, ಬಿಲ್ವಾರ್ಚನೆ ಕಾರ್ಯಕ್ರಮಗಳು ಜರುಗಲಿವೆ, ನಗರದ ಕಲ್ಲೇಶ್ವರ ದೇವಾಲಯದಲ್ಲಿ ಬೆಳಗ್ಗೆ ೫.೦೦ ಗಂಟೆಗೆ ರುದ್ರಾಭೀಷೇಕ ನಂತರ ಕಲ್ಲೇಶ್ವರ, ದಕ್ಷೀಣಾಮೂರ್ತಿ, ಗಂಗಾಧರೇಶ್ವರ ಸ್ವಾಮಿಗೆ ಸಹಸ್ರ ಸಹಸ್ರ ಬಿಲ್ವ ಪುಪ್ಷಾರ್ಚನಾ ಕಾರ್ಯಕ್ರಮ, ಕಾಶಿ ವಿಶ್ವನಾಥ ದೇವಾಲಯದಲ್ಲಿ ಮಲ್ಲಿಕಾರ್ಜುನ ದೇವಾಲಯ, ವಿಶೇಷ ಪೂಜೆ, ಅರಳಗುಪ್ಪೆ ಗ್ರಾಮದ ಚೋಳರ ಕಾಲದ ಕಲ್ಲೇಶ್ವರ ಷಡ್ಲಿಂಗ ದೇವಾಲಯದಲ್ಲಿ ಅಕ್ಕಿ ಪೂಜೆ ಪ್ರದರ್ಶನ, ಹರಚನಹಳ್ಳಿ ಶಾಲಿವಾಹನ ಶಕ ನಳ ಮಹಾರಾಜರಿಂದ ನಿರ್ಮಾಣವಾದ ಮೂರು ಲಿಂಗವುಳ್ಳ ದೇವಾಲಯದಲ್ಲಿ ಮಕ್ಕಳ ಸಂತತಿಗಾಗಿ ಪೂಜಾಲಂಕಾರ, ಕರಡಾಳು ಪಂಚಲಿAಗೇಶ್ವರ ದೇವಾ¯ಯ, ಹಾಲ್ಕುರಿಕೆ ಕಲ್ಲೇಶ್ವರ, ಪಾರ್ಥೇಶ್ವರ, ವೀರಭದ್ರೇಶ್ವರ ದೇವಾಲಯ, ಬಿಳಿಗೆರೆ ಗ್ರಾಮದ ಕಣೀವೆ ಮಲ್ಲೇಶ್ವರ ದೇವಾಲಯ, ಬಳವನೇರಲು ಈಶ್ವರ ದೇವಾಲಯ, ಕರೀಕೆರೆ ಗ್ರಾಮದ ಬ್ರಹ್ಮಲಿಂಗೇಶ್ವರ. ಕಲ್ಲೇಶ್ವರ ದೇವಾಲಯದಲ್ಲಿ ದಶಏಕಾರುದ್ರಭೀಷೇಕ, ಪ್ರಸಾದ ವಿನಿಯೋಗ, ಚಿಕ್ಕಬಿದರೆ ಗ್ರಾಮದ ಮಲ್ಲೇಶ್ವರ ದೇವಾಲಯ, ಮತ್ತಿಹಳ್ಳಿ ಈಶ್ವರ ದೇವಾಲಯದಲ್ಲಿ ಅಭೀಷೇಕ, ಕೆರಗೋಡಿ-ರಂಗಾಪುರದ ಶಂಕರೇಶ್ವರ ದೇವಾಲಯ, ಹಾಲ್ಕುರಿಕೆ ರೇವಣಸಿದ್ದೇಶ್ವರ ಬೆಟ್ಟ, ಶಿವರದ ಕಲೇಶ್ವರ ದೇವಾಲಯದಲ್ಲಿ ಭಜನೆ, ಹೊಸಹಳ್ಳಿ ಪುರದ ಬಸವಣ್ಣ ದೇವಾಲಯ, ಈಚನೂರು ರುದ್ರೇಶ್ವರ ದೇವಾಲಯ, ನೊಣವಿನಕೆರೆ ಗ್ರಾಮದ ಪಂಚಲಿAಗೇಶ್ವರ ನೊಣಬೇಶ್ವರ ದೇವಾಲಯ, ಚೋಳೇಶ್ವರ, ಗಂಗೇಶ್ವರ, ಶಾಂತೇಶ್ವರ, ಕಲ್ಲೇಶ್ವರ ದೇವಾಲಯ, ಕಾಡಸಿದ್ದೇಶ್ವರ ಮಠದ ಕಾಡಸಿದ್ದೇಶ್ವರ ವಿಶೇಷ ಪೂಜಾ ಕೈಂಕರ್ಯಗಳು, ಚಿಕ್ಕಮಾರ್ಪನಹಳ್ಳಿ ಮಾದೇಶ್ವರ ದೇವಾಲಯ, ರಾಮಚಂದ್ರಪುರ ಕಲ್ಲೇಶ್ವರ, ಹೊನ್ನವಳ್ಳಿ ಭೈರೇಶ್ವರ, ಬಸ್ತಿಹಳ್ಳೀ ಪುರಾತನ ಈಶ್ವರ ಸಾಸಲಹಳ್ಳಿ ಕಲ್ಲೇಶ್ವರ, ಹುಣಸೇಘಟ್ಟ, ಬಜಗೂರು. ಸೂಗೂರು, ಲಿಂಗದೇವರಹಳ್ಳಿ, ಜೈಪುರ ಮುಂತಾದ ಕಡೆ ಅನ್ನ ಸಂತರ್ಪಣೆ ಕಾರ್ಯ ನಡೆಯಲಿದೆ.

ವರದಿ: ಸಂತೋಷ್ ಓಬಳ. ಗುಬ್ಬಿ

Leave a Reply

Your email address will not be published. Required fields are marked *

error: Content is protected !!