ತಿಪಟೂರು ನಗರಸಭೆ ಇ -ಸ್ವತ್ತು ಖಾತೆ ಅಭಿಯಾನಕ್ಕೆ ಶಾಸಕ ಕೆ.ಷಡಕ್ಷರಿ ಚಾಲನೆ.ಸಾರ್ವಜನಿಕರು ತಮ್ಮ ಸ್ವತ್ತುಗಳಿಗೆ ಇ-ಸ್ವತ್ತು ಖಾತೆ ಮಾಡಿಸಿಕೊಳ್ಳಲು ಮನವಿ

Spread the love

ತಿಪಟೂರು ನಗರಸಭೆಯ ವ್ಯಾಪ್ತಿಯಲ್ಲಿ ಬರುವಂತಹ ಸ್ವತ್ತುಗಳಿಗೆ ,ಸ್ವತ್ತಿನ ಮಾಲೀಕರು ಇ-ಸ್ವತ್ತು ಖಾತೆ ಮಾಡಿಸಿಕೊಳ್ಳಲು,ಸರ್ಕಾರ ಅವಕಾಶ ನೀಡಿದ್ದು,ನಾಗರೀಕರು ತಮ್ಮ ಸ್ವತ್ತುಗಳನ್ನ ಇ-ಸ್ವತ್ತು ಮಾಡಿಸಿಕೊಳ್ಳಿ ಎಂದು ಮನವಿ ಮಾಡಿದರು.
ನಗರಸಭೆ ಶಾಸಕರ ಕಾರ್ಯಾಲಯದಲ್ಲಿ ಇ-ಸ್ವತ್ತು ಖಾತೆ ಪತ್ರ ವಿತರಿಸಿದ ಶಾಸಕರು ಮಾತನಾಡಿ,ನಗರವ್ಯಾಪ್ತಿಯಲ್ಲಿ ಸಾರ್ವಜನಿಕರು ಸ್ವತ್ತುಗಳ ಮಾಲೀಕತ್ವ ಪಡೆಯಲು ಹಲವಾರು ವರ್ಷಗಳಿಂದ ಪರದಾಡಬೇಕಾಗಿತ್ತು ಹಲವಾರು ಕಾರಣಗಳಿಂದ ಸಾಧ್ಯವಾಗಿರಲ್ಲಿಲ್ಲ,ಸರ್ಕಾರ ಕಾನೂನಿಗೆ ತಿದ್ದುಪಡಿ ಮಾಡುವ ಮೂಲಕ ನಿಯಮಗಳನ್ನ ಸರಳಿಕರಣಗೊಳಿಸಲಾಗಿದೆ,
ಸೌಲಭ್ಯ ವನ್ನು 2016 ರಿಂದ ಜಾರಿಗೊಳಿಸಲಾಗಿದೆ. ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಇ-ಆಸ್ತಿ ತಂತ್ರಾಂಶವನ್ನು ಬಳಸಿ ಇ-ಖಾತಾ ನೀಡುವ,ಇ-ಖಾತಾಗಳನ್ನು ಸೃಜನೆ ಮಾಡಿ ಆಸ್ತಿ ಮಾಲೀಕರಿಗೆ ವಿತರಿಸಲಾಗಿದೆ.

ಅದರಂತೆ ಕಳೆದ 9 ವರ್ಷಗಳಲ್ಲಿ ತಿಪಟೂರು ನಗರಸಭೆ ವ್ಯಾಪ್ತಿಯಲ್ಲಿ 14 ಸಾವಿರ.ಈವರೆಗೆ ಇ-ಆಸ್ತಿ ತಂತ್ರಾಂಶದಲ್ಲಿ ಅಧಿಕೃತ ಆಸ್ತಿಗಳಿಗೆ ಮಾತ್ರ ಇ-ಖಾತಾ ಸೃಜನೆ ಮಾಡಿ,ನೀಡುತ್ತಿದ್ದು, ಯೋಜನಾಪ್ರಾಧಿಕಾರದಿಂದ,ಅನುಮೋದನೆಯಾಗದ ಬಡಾವಣೆಗಳಲ್ಲಿನಆಸ್ತಿಗಳಿಗೆ ಇ-ಖಾತಾ ನೀಡದೇ ಇರುವುದು ಸರ್ಕಾರದ ಗಮನಕ್ಕೆ ಬಂದಿರುತ್ತದೆ.ಸಾರ್ವಜನಿಕರಿಗೆ ಉಂಟಾಗುತ್ತಿದ್ದ ಈ ಸಮಸ್ಯೆ ಬಗೆಹರಿಸಲು ಸಚಿವ ಸಂಪುಟ ಉಪಸಮಿತಿಯನ್ನು ರಚಿಸಿ, ಅಗತ್ಯ ಶಿಫಾರಸ್ಸುಗಳ ಮೇರೆಗೆಅನಧಿಕೃತ ನಿವೇಶನಗಳಿಗೆ ಇ-ಖಾತಾ,ನೀಡಲು ಅನುವಾಗುವಂತೆ ಕರ್ನಾಟಕ

ಮುನಿಸಿಪಲ್‌ ಕಾಯ್ದೆ ಮತ್ತು ನಿಯಮಗಳಿಗೆ ಫೆಬ್ರವರಿ2025ರಲ್ಲಿತಿದ್ದುಪಡಿಯನ್ನು ಅದರಂತೆದಿನಾಂಕ 10-09-20240
ಪೂರ್ವದಲ್ಲಿ ನೋಂದಣಿಯಾದ ಅನಧಿಕೃತ,ಸ್ವತ್ತುಗಳಿಗೆ ಇ-ಖಾತಾ ನೀಡಲು ಅವಕಾಶ ನೀಡಲಾಗಿದೆ.ಈ ಕ್ರಮದಿಂದ, ಅನಧಿಕೃತ ಆಸ್ತಿಗಳನ್ನು ಆಸ್ತಿತೆರಿಗೆ ವ್ಯಾಪ್ತಿಗೆ ಒಳಪಡಿಸಿ, ಪ್ರತ್ಯೇಕ ವಹಿ(ಬಿ-ರಿಜಿಸ್ಟರ್)ಯಲ್ಲಿ ದಾಖಲಿಸಲು ಅವಕಾಶ ಕಲಿಸಿದ್ದು, ಇದರಿಂದ ತಿಪಟೂರು ನಗರಸಭೆಗೆಹೆಚ್ಚಿನ ಆಸ್ತಿತೆರಿಗೆ ಸಂಗ್ರಹಣೆ ಮಾಡಲು ಅನುಕೂಲವಾಗುತ್ತದೆ. ಹಾಗೂ ಸಾರ್ವಜನಿಕರಿಗೆ,ತಮ್ಮಆಸ್ತಿಯಇ-ಖಾತಾದೊರೆಯುವುದರಿಂದವಹಿವಾಟುಗಳನ್ನು ನಡೆಸಲುಕೂಡಅನುಕೂಲವಾಗುತ್ತದೆ.ಇ-ಖಾತಾ ನೀಡುವುದನ್ನು ಅಭಿಯಾನದ ರೂಪದಲ್ಲಿ ಕೈಗೊಂಡು ಮುಂದಿನ 3 ತಿಂಗಳ
ಒಳಗಾಗಿ ತಿಪಟೂರು ನಗರಸಭೆ ವ್ಯಾಪ್ತಿಯ ಎಲ್ಲಾ ಸ್ವತ್ತುಗಳಿಗೂ ಇ-ಖಾತಾ ನೀಡಲು
ಉದ್ದೇಶಿಸಲಾಗಿದೆ.ಸಾರ್ವಜನಿಕರು ತಮ್ಮ ಸ್ವತ್ತುಗಳ ಮೂಲ ದಾಖಲೆಗಳು ಸೇರಿದಂತೆ ಅಗತ್ಯದಾಖಲೆಗಳು ಹಾಗೂ ಕಂದಾಯ ವಗೈರೆಗಳನ್ನ,ಪಾವತಿಮಾಡಿ

ಅರ್ಜಿಸಲ್ಲಿಸಬೇಕು. ನಗರವ್ಯಾಪ್ತಿಯಲ್ಲಿ ಜನರಿಗೆಜನದಟ್ಟಣೆತೊಂದರೆಯಾಗಬಾರದು ಎನ್ನುವ ಕಾರಣಕ್ಕೆ,ತಿಪಟೂರು ನಗರಸಭೆ ಕಚೇರಿ,ಶಾರದ ನಗರ ಬೈಫ್ ಕಚೇರಿ, ಅಣ್ಣಾಪುರ ಶ್ರೀರಾಮದೇವಾಲಯ,ಹೌಸಿಂಗ್ ಬೋರ್ಡ್ ಕಾಲೋನಿ,ಮತ್ತು ಗಾಂಧೀ ನಗರ ಪಾರ್ಕ್ ಬಳಿ ಅರ್ಜಿಸಲ್ಲಿಸಲು ಅವಕಾಶ ನೀಡಲಾಗಿದೆ,ಸಾರ್ವಜನಿಕರುಮಧ್ಯವರ್ತಿಗಳಿಗೆ ಅವಕಾಶ ನೀಡದಂತೆ ನೇರವಾಗಿ ಅರ್ಜಿಸಲ್ಲಿಸಲುಮನವಿ ಮಾಡಿದರು.


ಕಾರ್ಯಕ್ರಮದಲ್ಲಿ ಉಪಸ್ಥಿತರಿದ ನಗರಸಭೆ ಅಧ್ಯಕ್ಷ ಶ್ರೀಮತಿ ಯಮುನಾಧರಣೇಶ್ ಮಾತನಾಡಿ, ಸರ್ಕಾರದ ನಿರ್ದೇಶನದಂತೆ 10.09.2024ರ ಪೂರ್ವದಲ್ಲಿ ಅಧಿಕೃತ ಹಾಗೂ ಅನಾಧಿಕೃತ ಸ್ವತ್ತುಗಳಿಗೆ ಎ.ಖಾತಾ ಮತ್ತು ಬಿ.ಖಾತೆ ಗಳ ಇಸ್ವತ್ತು ಖಾತೆ ಮಾಡಲು ಅವಕಾಶ ನೀಡಿದ್ದು, ಹೊಸ ಇ-ಸ್ವತ್ತು ತಂತ್ರಾಂಶದಲ್ಲಿ ದಾಖಲೆ ಪಡೆಯಲು, ತಮ್ಮ ಸ್ವತ್ತುಗಳ ಮೂಲದಾಖಲೆಗಳು ಹಾಗೂ ತೆರಿಗೆ ಪಾವತಿ ರಸೀತಿ,ಹಾಗೂ ಅಗತ್ಯದಾಖಲೆಗಳಲೊಂದಿಗೆ ಅಧೀಕೃತ ಅರ್ಜಿ ನಮೂನೆಯಲ್ಲಿ ಅರ್ಜಿಸಲ್ಲಿಸಿ,ಇ- ಸ್ವತ್ತು ಖಾತೆ ಮಾಡಿಸಿಕೊಳ್ಳ ಬೇಕು 3ತಿಂಗಳು ಕಾಲಾವಕಾಶ ನೀಡಿದ್ದು, ನಿಗಧಿತ ಕಾಲವಧಿಯಲ್ಲಿ ಅರ್ಜಿಸಲ್ಲಿಸಿ ನಂತರ ಅವಕಾಶವಿರುವುದಿಲ್ಲ ಎಂದು ತಿಳಿಸಿದರು
ಕಾರ್ಯಕ್ರಮದಲ್ಲಿ ಪೌರಾಯುಕ್ತ ವಿಶ್ವೇಶ್ವರಯ್ಯ ಬದರಗಡೆ,ನಗರಸಭೆ ಸದಸ್ಯ ವಿನುತಾ ತಿಲಕ್,ಮುನ್ನಾ,ಮುಂತ್ತಾದವರು ಉಪಸ್ಥಿತರಿದರು

ವರದಿ :ಮಂಜುನಾಥ್ ಹಾಲ್ಕುರಿಕೆ

Leave a Reply

Your email address will not be published. Required fields are marked *

error: Content is protected !!