
ತಿಪಟೂರು:ಶಾಸಕ ಕೆ.ಷಡಕ್ಷರಿಯವರ ಹುಟ್ಟು ಹಬ್ಬವನ್ನ ತಿಪಟೂರು ನಗರದ ವೈಭವ ಮಾಲ್ ಹಿಂಬಾಗದ ಆವರಣದಲ್ಲಿ ಏಪ್ರಿಲ್ 13 ರಂದು ಸಮರ್ಥ ಸಂಭ್ರಮವಾಗಿ ಆಚರಿಸಲಾಗುತ್ತಿದೆ.

ತಿಪಟೂರು ನಗರದ ಕೌಸ್ತುಭ ಹೋಟೆಲ್ ಸಭಾಂಗಣದಲ್ಲಿ ಆಯೋಜಿಸಿದ ಪತ್ರಿಕಾ ಘೋಷ್ಟಿಯಲ್ಲಿ ಮಾಜಿ ತಾಲ್ಲೋಕು ಪಂಚಾಯ್ತಿ ಅಧ್ಯಕ್ಷ ನ್ಯಾಕೇನಹಳ್ಳಿ ಸುರೇಶ್ ಮಾತನಾಡಿ ಶಾಸಕ ಕೆ.ಷಡಕ್ಷರಿಯವರು ಮೂರು ಭಾರಿ ಶಾಸಕರಾಗಿ ತಾಲ್ಲೋಕಿನ ಸಮಗ್ರ ಅಭಿವೃದ್ದಿಗೆ ಶ್ರಮಿಸಿದ್ದು ತಮ್ಮದೇ ಅದ ಕೊಡುಗೆ ನೀಡಿದ್ದಾರೆ, ಅವರ ಸೇವೆ ಹಾಗೂ ಜನಪರ ಕಾಳಜಿಯನ್ನ ಗುರ್ತಿಸಿ ಕೆ.ಷಡಕ್ಷರಿ ಅಭಿಮಾನಿ ಬಳಗದಿಂದ ಏಪ್ರಿಲ್ 13 ರಂದು ಹುಟ್ಟುಹಬ್ಬವನ್ನ ಸಮರ್ಥ ಸಂಭ್ರಮವಾಗಿ ಆಚರಿಸಲಾಗುತ್ತಿದೆ, ಶಾಸಕರ 77ನೇ ಹುಟ್ಟು ಹಬ್ಬಕ್ಕೆ ತಾಲ್ಲೋಕಿನ ತಾಲ್ಲೋಕಿನ ಅಭಿಮಾನಿಗಳು ಹಾಗೂ ಸಾರ್ವಜನಿಕರು ಪಕ್ಷಾತೀತವಾಗಿ ಜಾತ್ಯಾತೀತವಾಗಿ ಭಾಗವಹಿಸಿವ ಮೂಲಕ ಆಚರಿಸಲಿದ್ದಾರೆ,ಕಾರ್ಯಕ್ರಮದಲ್ಲಿ ಶ್ರೀಸಿದ್ದಗಂಗ ಮಠದ ಶ್ರೀಸಿದ್ದಲಿಂಗಮಹಾಸ್ವಾಮೀಜಿಗಳು,ಸುತ್ತುರು ಮಠದ ಶ್ರೀ ಶ್ರೀ ಶಿವರಾತ್ರಿಶ್ವರ ದೇಶಿಕೇಂದ್ರ ಮಹಾಸ್ವಾಮೀಜಿಗಳು, ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ನಿರ್ಮಾಲನಂದನಾಥ ಮಹಾಸ್ವಾಮೀಜಿಗಳು,ಸಿರಿಗೆರೆ ತರಳಬಾಳು ಬೃಹನ್ಮಠದ ಶ್ರೀ ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿಗಳು ಸೇರಿದಂತೆ ನಾಡಿನ ಎಲ್ಲಾ ಸಮುದಾಯಗಳ ಹರಗುರು ಚರಮೂರ್ತಿಗಳ ದಿವ್ಯ ಸಾನಿಧ್ಯದಲ್ಲಿ ಕಾರ್ಯಕ್ರಮ ಜರುಗಲಿದ್ದು ,ಶಾಸಕರ ಪಕ್ಷನಿಷ್ಟೆ ಹಾಗೂ ಹಿರಿತನದ ಆಧಾರದ ಮೇಲೆ ಸಚಿವ ಸ್ಥಾನ ನೀಡಬೇಕು ಎಂದುಒತ್ತಾಯಿಸಲಾಗುವುದು. ಎಂದು ತಿಳಿಸಿದರು .

ಪತ್ರಿಕಾ ಘೋಷ್ಠಿಯಲ್ಲಿ ಉಪಸ್ಥಿತರಿದ ನಗರಸಭೆ ಸದಸ್ಯ ಲೋಕನಾಥ್ ಸಿಂಗ್ ಮಾತನಾಡಿ ಶಾಸಕ ಕೆ.ಷಡಕ್ಷರಿಯವರ ಹುಟ್ಟು ಹಬ್ಬದ ಅಂಗವಾಗಿ ಶಾಸಕರ ಮನೆದೇವರು ಶ್ರೀ ಕಲ್ಲೇಶ್ವರ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆಸಲ್ಲಿಸಿ ಬನ್ನಿಪತ್ರೆಗಿಡ ಹಾಗೂ ಬಿಲ್ವಪತ್ರೆ ಸಸಿ ನೆಡಲಾಗುವುದು, ನಂತರ ಎನ್ ಆರ್ ಸೆಲ್ಟರ್ ಉದ್ಘಾಟನೆ ನೆರವೇರಿಸಿ , ಹರಗುರು ಚರಮೂರ್ತಿಗಳು ರಾಜಕೀಯ ನಾಯಕರು, ಚಿಂತರರು ಸಮ್ಮುಖದಲ್ಲಿ ಹುಟ್ಟುಹಬ್ಬವನ್ನ ಸಮರ್ಥ ಸಂಭ್ರಮವಾಗಿ ಆಚರಿಸಲಾಗುವುದು ಎಂದು ತಿಳಿಸಿದರು
ಪತ್ರಿಕಾ ಘೋಷ್ಠಿಯಲ್ಲಿ ಮುಖಂಡರಾದ ಮಾದಿಹಳ್ಳಿ ರೇಣು,ಒಡಪೋನ್ ಚಂದ್ರು,ಮಾಜಿ ನಗರಸಭಾ ಸದಸ್ಯ ಅಣ್ಣಯ್ಯ. ತುಮುಲ್ ನಿರ್ದೇಶಕ ಮಾದಿಹಳ್ಳಿ ಪ್ರಕಾಶ್,ಮುನಿರಾಜ್,ಸಮೀ ಉಲ್ಲಾ,ಸೈಫುಲ್ಲ,ಮಂಜುನಾಥ್ ಗಿರೀಶ್ ಮುಂತ್ತಾದವರು ಉಪಸ್ಥಿತರಿದರು
ವರದಿ :ಮಂಜುನಾಥ್ ಹಾಲ್ಕುರಿಕೆ

