
ತಿಪಟೂರು ನಗರದ ಡಾ//ಬಿ.ಆರ್ ಅಂಬೇಡ್ಕರ್ ವೃತ್ತದಲ್ಲಿ ನಗರಪೊಲೀಸ್ ಠಾಣೆ ತಿಪಟೂರು ಹಾಗೂ ಎನ್ ಹೆಚ್ ಎಐ ವತಿಯಿಂದ ರಸ್ತೆ ಸುರಕ್ಷತಾ ಸಪ್ತಾಹಕ್ಕೆ ಚಾಲನೆ ನೀಡಲಾಯಿತು.ನಗರಸಭಾ ವೃತ್ತದಲ್ಲಿ ಶಾಲಾಮಕ್ಕಳು ಹಾಗೂ ಪೊಲೀಸ್ ಸಿಬ್ಬಂದಿ ಮಾನವಸರಪಣಿ ನಿರ್ಮಿಸಿ ಜಾಥ ನಡೆಸುವ ಮೂಲಕ ರಸ್ತೆ ಸುರಕ್ಷತಾ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು.

ರಸ್ತೆ ಸುರಕ್ಷತಾ ಸಪ್ತಾಹಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಮನುಷ್ಯನ ಜೀವ ಅಮೂಲ್ಯವಾದದು,ವಾಹನ ಚಾಲಕರು ತಮ್ಮ ನಿರ್ಲಕ್ಷ್ಯದಿಂದ ಜೀವ ಕಳೆದುಕೊಳ್ಳದೆ. ಸರ್ಕಾರ ರೂಪಿಸಿರುವ ರಸ್ತೆ ಸುರಕ್ಷ ನಿಯಮ ಪಾಲಿಸಿದರೆ, ನೀವು, ಹಾಗೂ ನಿಮ್ಮನ್ನ ನಂಬಿರುವ ಕುಟುಂಬ ಸಂತೋಷದಿಂದ ಜೀವನ ನಡೆಸಬಹುದು.
ಬೈಕ್ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಅಪಘಾತಗಳು ಹೇಳಿಕೇಳಿ ಆಗುವುದಿಲ್ಲ, ದ್ವಿಚಕ್ರ ವಾಹನ ಅಪಘಾತದಲ್ಲಿ ವಾಹನ ಸವಾರರ ತಲೆಗೆ ಪೆಟ್ಟು ಬಿದ್ದು ಸಾವು ಸಂಭವಿಸುವ ಸಾಧ್ಯತೆಗಳು ಜಾಸ್ತಿ, ದೇಶದಲ್ಲಿ ದ್ವಿಚಕ್ರ ಅಪಘಾತದಲ್ಲಿ ಸಾವನ್ನಪ್ಪಿತವರಲ್ಲಿ ತಲೆಗೆ ಪೆಟ್ಟು ಬಿದ್ದು ಸಾವನ್ನಪ್ಪಿರುವವರ ಸಂಖ್ಯೆಯೇ ಜಾಸ್ತಿ.ಪ್ರತಿಯೊಬ್ಬರು ವಾಹನಗಳ ಇನ್ಸುರೆನ್ಸ್ ಮಾಡಿಸಿಕೊಳ್ಳಿ, ಇನ್ಸುರೆನ್ಸ್ ಇದ್ದರೆ.ಸಂಕಷ್ಟ ಕಾಲದಲ್ಲಿ ಆರ್ಥಿಕವಾಗಿ,ನೆರವಾಗುತ್ತದೆ, ಅಲ್ಲದೆ, ಆರೋಗ್ಯ ರಕ್ಷಣೆ, ಅಪಘಾತದಲ್ಲಿ ತೊಂದರೆಗೊಳಗಾದ ಎಲ್ಲರಿಗೂ ರಕ್ಷಣೆ ಸಿಗುತ್ತದೆ, ಮಧ್ಯಪಾನ ವಾಹನ ಚಾಲನೆ ಮಾಡಬಾರದು, ಮಧ್ಯಪಾನದ ನಶೆಯಿಂದ, ವಾಹನ ಚಾಲಕ ಹಾಗೂ ಎದುರಿಗೆ ಇರುವ ಅಮಾಯಕರು ಜೀವಕಳೆದುಕೊಳ್ಳುತ್ತಾರೆ,ವಾಹನ ಸಾರ್ಮರ್ಧ್ಯಕಿಂತ ತೂಕ ಹಾಕಬಾರದು,ಸರಕು ಸೇವೆ ವಾಹನದಲ್ಲಿ ಪ್ರಯಾಣಿಕರನ್ನ ಸಾಗಿಸುವುದು ಅಪರಾಧವಾಗುತ್ತದೆ. ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ವಾಹನಗಳನ್ನ ಚಾಲಯಿಸಲು ಕೊಡಬೇಡಿ,ಮಕ್ಕಳು ಮಾಡುವ ಅಪರಾಧಕ್ಕೆ ಪೋಷಕರು ಹೊಣೆಯಾಗಬೇಕಾಗುತ್ತದೆ,ಸರ್ಕಾರ ಕಾನೂನುಗಳನ್ನ ಮಾಡುವುದು ಸಾರ್ವಜನಿಕರ ಉಪಯೋಗಕ್ಕೆ ಹೊರತು ಯಾರಿಗೂ ತೊಂದರೆ ಕೊಡುವುದಕ್ಕಲ್ಲ, ಕಾನೂನನ್ನ ಗೌರವಿಸಿ, ನಿಯಮಗಳನ್ನ ಪಾಲಿಸಿ ಎಂದು ತಿಳಿಸಿದರು
ಕಾರ್ಯಕ್ರಮದಲ್ಲಿ ರಸ್ತೆ ಸುರಕ್ಷತಾ ನಿಯಮಗಳ ಬಗ್ಗೆ ಅರಿವು ಮೂಡಿಸಲು, ಹೆಲ್ಮೆಟ್ ಧರಿಸಿ ಬೈಕ್ ಚಲಾಯಿಸುತ್ತಿದ್ದವರಿಗೆ ಹಾಗೂ ಸೀಟ್ ಬೆಲ್ಟ್ ಹಾಕಿ ವಾಹನ ಚಲಾಯಿಸುತ್ತಿದ್ದ ಚಾಲಕರಿಗೆ ಗುಲಾಖೆ ಹೂ ನೀಡಿ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ನಗರಠಾಣೆ ಸಬ್ ಇನ್ಪೆಕ್ಟರ್ ಕೃಷ್ಣಪ್ಪ.ಎನ್ ಹೆಚ್ ಎಐ ಅಧಿಕಾರಿಗಳಾದ ವಿಶಾಲ್. ರಾಮಲಿಂಗಮ್ ಸೇರಿದಂತೆ ಪೊಲೀಸ್ ಇಲಾಖೆ ಸಿಬ್ಬಂದಿ ಹಾಗೂ ಸಾರ್ವಜನಿಕರು ಉಪಸ್ಥಿತರಿದರು
ವರದಿ:ಮಂಜುನಾಥ್ ಹಾಲ್ಕುರಿಕೆ



