
ತಿಪಟೂರು ನಗರದ ಹಾಸನ ರಸ್ತೆ ಶಿಲ್ಪ ಬಾರ್ ಸಮೀಪ ಟಿವಿಸ್ ಎಕ್ಸ್ ಎಲ್ ಗೆ ಬೊಲೇರೋ ಟೆಂಪೋ ಡಿಕ್ಕಿ ಹೊಡೆದು ಟಿವಿಎಸ್ ಸವಾರ ಸ್ಥಳದಲ್ಲೆ ಸಾವನ್ನಪಿರುವ ಘಟನೆ ನಡೆದಿದೆ.


ಅರಸೀಕೆರೆ ತಾಲ್ಲೋಕು ಯಡವನಹಳ್ಳಿ ವಾಸಿ 54 ವರ್ಷದ ಕಾಂತರಾಜು ಮೃತ ದುರ್ದೈವಿ
ಯಡವನಹಳ್ಳಿಯಲ್ಲಿ ವೆಲ್ಡಿಂಗ್ ಕೆಲಸ ಮಾಡುತ್ತಿದ್ದ ಕಾಂತರಾಜು ಕೆಲಸಕ್ಕೆಂದು ತಿಪಟೂರಿಗೆ ಬಂದಿದರು ಎನ್ನಲಾಗಿದ್ದು, ಕೆಲಸಮುಗಿಸಿ ಮನೆಗೆ ತೆರಳುವಾಗ ಹಿಂಬದಿಯಿಂದ ಬಂದ ಕುರಿತುಂಬಿದ ಬೋಲೆರೋ ಟೆಂಪೋ ಡಿಕ್ಕಿ ಹೊಡೆದ ಪರಿಣಾಮ ಕಾಂತರಾಜು ಸ್ಥಳದಲ್ಲೇ ಸಾವನ್ನಪ್ಪಿದರೆ
ಸ್ಥಳಕ್ಕೆ ತಿಪಟೂರು ಉಪವಿಭಾಗ ಪೊಲೀಸ್ ಅಧೀಕ್ಷಕರಾದ ವಿನಾಯಕ ಎಸ್ ಶೆಟ್ಟಿಗೆರಿ, ನಗರವೃತ್ತ ನಿರೀಕ್ಷಕ ವೆಂಕಟೇಶ್,ಸಬ್ ಇನ್ಪೆಕ್ಟರ್ ಕೃಷ್ಣಪ್ಪ ಸ್ಥಳಕ್ಕೆ ಭೇಟಿನೀಡಿ ಪರಿಶೀಲನೆ ನಡೆಸಿದ್ದು,ನಗರಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ವರದಿ:ಮಂಜುನಾಥ್ ಹಾಲ್ಕುರಿಕೆ.



