ಅಖಿಲ ಭಾರತ ಪರಿಶಿಷ್ಟ ಪಂಗಡ ಅಂಚೆ ನೌಕರರ ಸಂಘದ ರಾಷ್ಟ್ರೀಯ ಸಮಾವೇಶ

Spread the love

ಬೆಂಗಳೂರು: ನಗರದ ಕೆ ಆರ್ ಪೇಟೆಯ ಇಂಜಿನಿಯರ್ ಭವನದಲ್ಲಿ ಡಿಸೆಂಬರ್ 08 ರಂದು ಅಖಿಲ ಭಾರತ ಪರಿಶಿಷ್ಟ ಪಂಗಡ ಅಂಚೆ ನೌಕರರ ಕ್ಷೇಮಾಭಿವೃದ್ಧಿ ಸಂಘದ ಪ್ರಪ್ರಥಮ ರಾಷ್ಟ್ರೀಯ ಸಮಾವೇಶ ಅದ್ದೂರಿಯಾಗಿ ನಡೆಯಿತು, ಹಿಂದುಳಿದ ವರ್ಗಗಳ ಹಾಗೂ ಪರಿಶಿಷ್ಟ ಪಂಗಡದ ಅಂಚೆ ನೌಕರರ ಸಾಮಾಜಿಕ , ಆರ್ಥಿಕ ಹಾಗೂ ರಾಜಕೀಯ ಬಲವರ್ಧನೆಯ ಹಿತಕ್ಕಾಗಿ ನಡೆದ ಮೊಟ್ಟಮೊದಲ ಸಮಾವೇಶವಾಗಿ ಸಾಕ್ಷಿಯಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ನವದೆಹಲಿಯ ಪರಿಶಿಷ್ಟ ಪಂಗಡದ ಆಯೋಗದ ಸದಸ್ಯರಾದ ಹುಸೇನ್ ನಾಯಕ್, ಕರ್ನಾಟಕ ಅಡಾಕ್ ಸಮಿತಿಯ ಅಧ್ಯಕ್ಷರು ಮತ್ತು ಮೈಸೂರು ಸಹಾಯಕ ಅಂಚೆ ಅಧೀಕ್ಷಕರಾದ ಎಮ್ ಜೆ ಶ್ರೀನಿವಾಸ್, ನಂಜನಗೂಡು ವಿಭಾಗದ ಅಂಚೆ ಸಹಾಯಕರಾದ ಮಂಜುನಾಥ್ ನಾಯಕ್ ಉಪಸ್ಥಿತರಿದ್ದರು ಹಾಗೂ ಅಖಿಲ ಭಾರತ ಪರಿಶಿಷ್ಟ ಪಂಗಡದ ಅಂಚೆ ನೌಕರರು ಹಾಗೂ ಸಾರ್ವಜನಿಕರು ಸಮಾವೇಶದಲ್ಲಿ ಭಾಗವಹಿಸಿದ್ದರು.

ವರದಿ: ಸಂತೋಷ್ ಓಬಳ. ಗುಬ್ಬಿ

Leave a Reply

Your email address will not be published. Required fields are marked *

error: Content is protected !!