
ತುಮಕೂರು ಜಿಲ್ಲೆ ತಿಪಟೂರು ಶ್ರೀಸತ್ಯಗಣಪತಿ ಗಣೇಶೋತ್ಸವ ಐತಿಹಾಸಿಕ ಜಾತ್ರಾ ಕಾರ್ಯಕ್ರಮವಾಗಿದ್ದು ನಾಡಿದ ವಿವಿಧ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಜನ ಸೇರುತ್ತಾರೆ, ಜಾತ್ರೆಲ್ಲಿ ಅಮ್ಯೂಸ್ ಮೆಂಟ್ ಪಾರ್ಕ್,ಸೇರಿದಂತೆ ಹಲವುಕಡೆ , ಕಲರ್ ಮಿಶ್ರಿತ ಬಣ್ಣ ಬಣ್ಣದ ಗೋಬಿ ಮಂಚೂರಿ,ಕಲರ್ ಕ್ಯಾಂಡಿ , ಬಾಂಬೆ ಫುಡ್ ಸ್ಟಲ್ ನಲ್ಲಿ ಮಾರಾಟ ಮಾಡುವ, ಆಲೂಕಬಾಬ್,ಬೋಡ,ಪಾಪ್ಕಾನ್,ಪಾಪಡ್,ಸೇರಿದಂತೆ ಆಹಾರ ಪದಾರ್ಥಗಳನ್ನ ಕಳೆಪೆಗುಣಮಟ್ಟದ ವಸ್ತುಗಳನ್ನ ಉಪಯೋಗಿಸಿ ತಯಾರಿಸಲಾಗುತ್ತದೆ,ಸ್ಟಾಲ್ ಗಳಲ್ಲಿ ಬಳಸುವ ಅಡುಗೆ ಎಣ್ಣೆಯೇ ಕಳಪೆಗುಣಮಟ್ಟದಿಂದ ಕೂಡಿರುತ್ತದೆ, ಆದರಿಂದ ನಗರಸಭೆ ಅಧಿಕಾರಿಗಳು ಆಹಾರ ಸುರಕ್ಷತೆಗೆ ಹೆಚ್ಚಿನ ಆಧ್ಯತೆ ವಹಿಸಬೇಕು, ಕಳೆದ ವರ್ಷದ ಜಾತ್ರಾಮಹೋತ್ಸವದಲ್ಲಿ ಕಳಪೆಗುಣಮಟ್ಟದ ಆಹಾರ ಪದಾರ್ಥಗಳು ಮಾರಾಟ ಮಾಡುತ್ತಿರುವ ಬಗ್ಗೆ ನಗರಸಭೆ ಅನೇಕ ದೂರುಗಳು ಬಂದಿದ್ದು, ಅಧಿಕಾರಿಗಳು ಮಾತ್ರ ಜಾಣಕುರುಡುತನ ಪ್ರದರ್ಶನ ಮಾಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಯಿತು.
ಆರೋಗ್ಯ ಇಲಾಖೆಯ ಅಧಿಕಾರಿಗಳು ಅಮ್ಯೂಸ್ ಮೆಂಟ್ ಪಾರ್ಕ್ ಸೇರಿದಂತೆ ಜಾತ್ರೆಯಲ್ಲಿ ಮಾರಾಟ ಮಾಡಲಾಗುವ ವಸ್ತುಗಳ ಗುಣಮಟ್ಟ ಪರೀಕ್ಷೆ ಮಾಡಬೇಕು ಎಂದು ಸಾರ್ವಜನಿಕರ ಒತ್ತಾಯವಾಗಿದೆ.
ಮೊನ್ನೆ ಶಾಸಕ ಕೆ.ಷಡಕ್ಷರಿಯವರ ನೇತೃತ್ವದಲ್ಲಿ ನಡೆದ ಶ್ರೀಸತ್ಯಗಣಪತಿ ವಿಸರ್ಜನಾ ಮಹೋತ್ಸವ ಶಾಂತಿ ಸಭೆಯಲ್ಲಿಯೂ ಸಹ ನಗರಸಭೆ ಸದಸ್ಯರಾದ ಡಾ// ಓಹೀಲಾ ಗಂಗಾಧರ್ , ಕಳಪೆಗುಣಮಟ್ಟದ ವಸ್ತುಗಳ ಮಾರಾಟದ ಮೇಲೆ ನಿಗವಹಿಸಲು ಒತ್ತಾಯಿಸಿದರು. ಭಕ್ತಿಭಾವದಿಂದ ಖುಷಿಯಾಗಿ ಜಾತ್ರೆಗೆ ಬರುವ ಜನರಿಗೆ, ಕಳಪೆ ಆಹಾರದಿಂದ ಆರೋಗ್ಯ ಹಾಳಾದಬಾರದು, ಈ ನಿಟ್ಟಿನಲ್ಲಿ ನಗರಸಭೆ ಕ್ರಮವಹಿಸಬೇಕು
ವರದಿ:ಮಂಜುನಾಥ್ ಹಾಲ್ಕುರಿಕೆ










Leave a Reply