
ಕಾಂಗ್ರೇಸ್ ಪಕ್ಷದ ಹಿರಿಯ ಮುತ್ಸದಿ ರಾಜಕಾರಣಿ ಹಾಗೂ ತಿಪಟೂರು ಶಾಸಕರು ಹಾಗೂ ರಾಜ್ಯ ಭೂ ಅಭಿವೃದ್ದಿ ಬ್ಯಾಂಕ್ ಅಧ್ಯಕ್ಷರಾದ ಕೆ.ಷಡಕ್ಷರಿ ಯವರಿಗೆ ಸಚಿವ ಸ್ಥಾನ ಕೈ ತಪ್ಪಲು ಸಮುದಾಯದ ಪ್ರಭಾವಿ ಸ್ವಾಮೀಜಿಯೊಬ್ಬರ ಒತ್ತಡ ಕಾರಣವಾಗಿದೆ ಎನ್ನುವ ಸುದ್ದಿ ಕೆ.ಷಡಕ್ಷರಿ ಅಭಿಮಾನಿಗಳು ಹಾಗೂ ತಿಪಟೂರು ಜನತೆಯ ಬೇಸರಕ್ಕೆ ಕಾರಣವಾಗಿದೆ.

ಕಳೆದ ಕಾಂಗ್ರೇಸ್ ಜೆಡಿಎಸ್ ಮೈತ್ರಿ ಸರ್ಕಾರದ ಅವಧಿಯಲ್ಲಿ ಹಿರಿತನ ಹಾಗೂ ಲಿಂಗಾಯಿತ ಸಮುದಾಯದ ಪ್ರಭಾವಿ ಶಾಸಕ ಎನ್ನುವ ಕಾರಣಕ್ಕೆ ಸಚಿವ ಸ್ಥಾನ ನೀಡಲಾಗುದು ಎನ್ನುವ ಮಾತು ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತು,ಶಾಸಕ ಕೆ.ಷಡಕ್ಷರಿಯವರು ಸಹ ತಮಗೆ ಸಚಿವ ಸ್ಥಾನ ದೊರೆಯುತ್ತದೆ ಎನ್ನುವ ಆಶಾವಾದದ ಮಾತುಗಳನಾಡಿದರೂ, ಆದರೆ ಪ್ರಮಾಣವಚನದ ಕೊನೆಕ್ಷಣದಲ್ಲಿ ಸಚಿವ ಸ್ಥಾನದ ಪಟ್ಟಿಯಲ್ಲಿ ಶಾಸಕ .ಕೆ.ಷಡಕ್ಷರಿ ಹೆಸರು ಇಲ್ಲದೇ ಇರುವುದು ತಾಲ್ಲೋಕಿನ ಜನತೆ ಹಾಗೂ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿತ್ತು, ಆದರೆ ಸಿದ್ದರಾಮಯ್ಯ ನವರ ನೇತೃತ್ವದ ಸರ್ಕಾರದಲ್ಲಿ ಶಾಸಕ ಕೆ.ಷಡಕ್ಷರಿ ಸಚಿವರಾಗುತ್ತಾರೆ ಎನ್ನುವ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿಬಂದವು,ಜಿಲ್ಲೆಯಿಂದ ಗೃಹ ಸಚಿವ ಡಾ//ಜಿ.ಪರಮೇಶ್ವರ್ ಹಾಗೂ ಸಹಕಾರಿ ಸಚಿವ ಕೆ.ಎನ್ ರಾಜಣ್ಣ ಮಂತ್ರಿಗಳಾದ ಕಾರಣ ಸಚಿವ ಸ್ಥಾನ ಕೈ ತಪ್ಪಿತು, ಪಕ್ಷ ನಿಷ್ಟೆ,ಹಿರಿತನ ಎಲ್ಲಾ ಇದ್ದರು, ನಮ್ಮ ಶಾಸಕರಿಗೆ ಸಚಿವ ಸ್ಥಾನದೊರೆಯುತ್ತಿಲ್ಲ,ಎಂದು ಹಲವಾರು ಸಭೆ ಸಮಾರಂಭಗಳಲ್ಲಿ ಬೇಸರ ವ್ಯಕ್ತಪಡಿಸಿ ,ಸಚಿವ ಸ್ಥಾನಕ್ಕೆ ಒತ್ತಾಯ ಮಾಡುತ್ತಿರುವ ಅಭಿಮಾನಿಗಳು ಇಂದು ತಿಪಟೂರು ಎಪಿಎಂಸಿ ಆವರಣದಲ್ಲಿ ನಡೆದ ನಂದಿನಿ ಕ್ಷೀರಭವನ ಉದ್ಘಾಟನೆ ಸಾರ್ವಜನಿಕ ಸಮಾರಂಭದಲ್ಲಿ ಮುಖ್ಯಾತಿಥಿಗಳಾಗಿದ ಕೆ.ಎನ್ ರಾಜಣ್ಣ ಮಾತನಾಡುವಾಗ ಸಾರ್ವಜನಿಕರು ಹಾಗೂ ಕೆ.ಷಡಕ್ಷರಿ ಅಭಿಮಾನಿಗಳು ಶಾಸಕ ಕೆ.ಷಡಕ್ಷರಿ ಯವರಿಗೆ ಸಚಿವ ಸ್ಥಾನ ನೀಡಿ ಎಂದು ಕೂಗಿದ್ದಾಗ, ಸಚಿವ ಕೆ.ಎನ್ ರಾಜಣ್ಣ ನಿಮ್ಮ ಶಾಸಕ ಕೆ.ಷಡಕ್ಷರಿಯವರಿಗೆ ಸಚಿವ ಸ್ಥಾನ ಕೈತಪ್ಪಲು ನನಾಗಲಿ ಅಥವಾ ಗೃಹ ಸಚಿವರಾದ ಡಾ//ಜಿ ಪರಮೇಶ್ವರ್ ಅವರಾಗಲಿ ಕಾರಣರಲ್ಲ,ನಿಮ್ಮ ಸಮುದಾಯದ ಪ್ರಭಾವಿ ಮಠಾಧೀಶರೊಬ್ಬರ ಒತ್ತಡದ ಕಾರಣದಿಂದ ಸಚಿವ ಸ್ಥಾನ ಕೈ ತಪ್ಪಿದೆ. ಶಾಸಕ ಕೆ.ಷಡಕ್ಷರಿಯವರಿಗೆ ಸಚಿವ ಸ್ಥಾನದೊರೆತರೆ, ನಮಗೂ ಸಂತೋಷ,ಎಂದರು ಕೆ.ಎನ್ ರಾಜಣ್ಣ ನವರ ಮಾತಿನಿಂದ ಶಾಸಕರ ಅಭಿಮಾನಿಗಳಿಗೆ ಆತಂಕ ಹಾಗೂ ನಿರಾಸೆ ಉಂಟುಮಾಡಿದೆ, ಸಮುದಾಯದ ಪ್ರಭಾವಿ ಸ್ವಾಮೀಜಿಗಳಿಗೆ ನಮ್ಮ ಶಾಸಕರ ಮೇಲೆ ಏಕೆ ಬೇಸರ ,ಅಸಮಾಧಾನ,ಸಮುದಾಯವನ್ನ ತಿದ್ದಿ ಮುನ್ನಡೆಸಬೇಕಾದ ಮಠಾಧೀಶರೇ ಜನನಾಯಕರ ಕಾಲೆಳೆದರೆ,ಮುಂದೆ ಬೆಳೆಯುವ ಮುಖಂಡರ ಪಾಡೇನು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ವರದಿ:ಮಂಜುನಾಥ್ ಹಾಲ್ಕುರಿಕೆ