
ತುಮಕೂರು ತಿಪಟೂರು ನಗರದ ಸಂವಿಧಾನ ಶಿಲ್ಪ ಡಾ//ಬಿ.ಆರ್ ಅಂಬೇಡ್ಕರ್ ವೃತ್ತದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ವಿರುದ್ದ ದಲಿತ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಲಾಯಿತು

ಅಮಿತ್ ಷಾ ಭಾವಚಿತ್ರಕ್ಕೆ ಚಪ್ಪಲಿಹಾರ ಹಾಕಿ, ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ, ದಲಿತ ಮುಖಂಡರು ಗೃಹ ಸಚಿವ ಅಮಿತ್ ಷಾ ರಾಜಿನಾಮೇಗೆ ಒತ್ತಾಯಿಸಿ ಉಪವಿಭಾಗಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿಪತ್ರಸಲ್ಲಿಸಿದರು.
ಡಾ//ಬಿ.ಆರ್ ಅಂಬೇಡ್ಕರ್ ವೃತ್ತದಿಂದ ಉಪವಿಭಾಗಾಧಿಕಾರಿಗಳ ಕಚೇರಿಗೆ ತೆರಳಿ ಉಪವಿಭಾಗಾಧಿಕಾರಿಗಳಿಗೆ ಮನವಿಪತ್ರಸಲ್ಲಿಸಿದರು.
ಪ್ರತಿಭಟನೆಯಲ್ಲಿ ಮಾತನಾಡಿದ ಮುಖಂಡರು ಗೃಹಸಚಿವ ಅಮಿತ್ ಷಾ,ಆರ್ ಎಸ್ಎಸ್ ಅಂತರಾಳದ ಮನಸ್ಥಿತಿಯನ್ನ ತಮ್ಮ ಮಾತುಗಳ ಮುಖಾಂತರ ಹೊರಹಾಕಿದ್ದಾರೆ.
ಪ್ರಪಂಚದ ಜ್ಞಾನ ದೀಪವಾದ ಡಾ// ಅಂಬೇಡ್ಕರ್ ರವರ ವಿದ್ವಾತ್ ಸಹಿಸದೆ ಅಸಹನೆಯ ಮಾತನಾಡಿದ್ದಾರೆ, ಈ ದೇಶದ ಬಹುಜನರಿಗೆ, ದಲಿತರು ಹಿಂದುಳಿದವರು, ಆದಿವಾಸಿಗಳು ಅಲ್ಪಸಂಖ್ಯಾತರಿಗೆ, ಡಾ//ಬಿ.ಆರ್ ಅಂಬೇಡ್ಕರ್ ರವರುದೇವರ ಸಮಾನ,ನಮಗೆ ಆತ್ಮಗೌರವ ನೀಡಿದ,ಭೂಮಿಯ ಮೇಲೆ ಸ್ವಾಭಿಮಾನದಿಂದ ಬದುಕಲು ಅವಕಾಶ ಕಲ್ಪಿಸಿದ, ದೇವರು ಅಂಬೇಡ್ಕರ್ ರವರು.ಅವರ ಸ್ಮರಣೆಯಿಂದ ನಮ್ಮ ಜನ್ಮ ಸಾರ್ಥಕ ಎಂದು ಭಾವಿಸಿದ್ದೇವೆ. ನಮ್ಮ ಭಾವನೆ ಹಾಗೂ ಭವ್ಯ ಭಾರತರ ದೇವರು ಅಂಬೇಡ್ಕರ್ ಬಗ್ಗೆ ಅರಿಯದೆ ಅವಿವೇಕದವಮಾತನಾಡಿರುವ ಅಮಿತ್ ಷಾ ಕೂಡಲೇ ರಾಜನಾಮೆ ನೀಡಬೇಕು.ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಮುಖಂಡರಾದ ಡಿಎಸ್ಎಸ್ ಜಿಲ್ಲಾಸಂಘನಾ ಸಂಚಾಲಕ ನಾಗ್ತೀಹಳ್ಳಿ ಕೃಷ್ಣಮೂರ್ತಿ,ಬಜಗೂರು ಮಂಜುನಾಥ್ ಡಿಎಸ್ಎಸ್ ತಾಲ್ಲೋಕು ಅಧ್ಯಕ್ಷ ರಾಜು ಬೆಣ್ಣೆನಹಳ್ಳಿ ದಲಿತವಮುಖಂಡರಾದ,ಪೆದ್ದಿಹಳ್ಳಿ ನರಸಿಂಹಯ್ಯ,ಚಿಗ್ಗಾವಿ ಪುಟ್ಟಸ್ವಾಮಿ, ಜಿ.ಕುಮಾರ್.ಬೆಳಿಗೆರೆ ಚಂದ್ರಶೇಖರ್.ಕುಪ್ಪಾಳು ರಂಗಸ್ವಾಮಿ.ಅರಚನಹಳ್ಳಿ ಮಂಜುನಾಥ್ ,ಈಚನೂರು ಸೋಮಶೆರಖರ್ ರಾಮಾನಾಯ್ಕ, ಕೊರಚ ಮಹಾಸಭಾ ಅಧ್ಯಕ್ಷ ಸತೀಶ್.ಮುಂತ್ತಾದವರು ಉಪಸ್ಥಿತರಿದರು
ವರದಿ:ಮಂಜುನಾಥ್ ಹಾಲ್ಕುರಿಕೆ