
ತಿಪಟೂರು ನಗರದ ಕಲ್ಪತರು ಮಾಂಟಸರಿ ಶಾಲೆ ಮುಂಭಾಗ ರಾಷ್ಟ್ರೀಯ ಹೆದ್ದಾರಿ 206 ರಸ್ತೆಯಲ್ಲಿ ದಿನಾಂಕ 26-11-2019ರಂದು ಪೂಜಾ ಎಂಬುವವರು ತಮ್ಮ ಹೋಂಡಾ ಆಕ್ಟೀವಾ ಗಾಡಿಯಲ್ಲಿ ತೆರಳುತ್ತಿದ್ದಾಗ ಹಿಂಬದಿಯಿಂದ ಬಂದ NL01AC3803 ಲಾರಿ ಚಾಲಕ ನರಸಿಂಹಪ್ಪ ಅತಿವೇಗ ಅಜಾಗರೂಕತೆಯಿಂದ ಲಾರಿಚಾಲಯಿಸಿಕೊಂಡು ಬಂದು ಹೋಡಾ ಆಕ್ಟೀವಾಗೆ ಡಿಕ್ಕಿ ಹೊಡೆದ ಪರಿಣಾಮ,ಆಕ್ಟೀವಾ ದಲ್ಲಿತೆರಳುತ್ತಿದ್ದ, ಹಿಂಬದಿ ಸವಾರರಾದ ಭಾಗ್ಯಶ್ರೀ ಬಿ.ಎಸ್ ಕೆಳಕ್ಕೆ ಬಿದ್ದು , ಭಾಗ್ಯಶ್ರೀ ತಲೆ ಹಾಗೂ ಎದೆ ಮೇಲೆ ಲಾರಿ ಹರಿದ ಪರಿಣಾಮ, ಮಹಿಳೆ ಸ್ಥಳದಲ್ಲೇ ಮೃತಪಟ್ಟಿದರೂ, ಹೋಡಾ ಆಕ್ಟೀವಾ ಬೈಕ್ ಚಾಲಯಿಸುತ್ತಿದೆ ಪೂಜಾ ಗೆ ರವರು,ಕೆಳಕ್ಕೆ ಬಿದ್ದುಬಲಭಾಗದ ಮಂಡಿ,ಎಡಭುಜಕ್ಕೆ ತೀವ್ರಪೆಟ್ಟಾದ ಕಾರಣ,ಭಾರತೀಯ ದಂಡಸಂಹಿತೆ,279.337.304(ಎ)ಪ್ರಕಾರ ಪ್ರಕರಣದಾಖಲಿಸಿ ತನಿಖೆ ನಡೆಸಲಾಗಿದ್ದು,ತನಿಖೆ ನಡೆಸಿದ,ತಿಪಟೂರು ನಗರಠಾಣೆ ತನಿಖಾಧಿಕಾರಿ,ಸಿ.ಎ ನವೀನ್ ದೋಷಾರೋಪಪಟ್ಟಿ ಸಲ್ಲಿಸಿದರು.ಸಾಕ್ಷಿ ಪುರಾವೆಗಳನ್ನ ಪರಿಶೀಲನೆ ಮಾಡಿ,ವಿಚಾರಣೆ ನಡೆಸಿದ. ತಿಪಟೂರು ಹಿರಿಯ ದಿವಾನಿ&ಜೆಎಂಎಫ್ ಸಿ ನ್ಯಾಯಾಧೀಶರಾದ ಸಿ.ಎಫ್ ಅರೀಪ್ ಉಲ್ಲಾ,ಪ್ರಕರಣದ ಆರೋಪಿತನಾದ ಬಾಗೇಪಲ್ಲಿ ತಾಲ್ಲೋಕು ಗುಟ್ಟಮೇಂಪಲ್ಲಿ ಗ್ರಾಮದ ನರಸಿಂಹಪ್ಪ.ಸಿ ಎಂಬುವವರಿಗೆ 6ತಿಂಗಳ ಜೈಲು ಶಿಕ್ಷೆ ಹಾಗೂ 6500ರೂಪಾಯಿ ದಂಡ ವಿದಿಸಿ,ತೀರ್ಪನೀಡಿರುತ್ತಾರೆ.
ಸರ್ಕಾರಿ ಅಭಿಯೋಜಕರಾಗಿ ಶಿವಬಸಪ್ಪ ಎಸ್ ಹುಕ್ಕೆರಿ ವಾದಮಂಡಿಸಿದರು.
ವರದಿ:ಮಂಜುನಾಥ್ ಹಾಲ್ಕುರಿಕೆ