
ತಿಪಟೂರು ನಗರದ ಕಲ್ಪತರು ಇಂಜಿನಿಯರಿಂಗ್ ಕಾಲೇಜು ಆಡಿಟೋರಿಯಂ ಶಾಸಕರಾದ ಕೆ.ಷಡಕ್ಷರಿ ತುಮಕೂರು ಅಡಿಷನಲ್ ಎಸ್ಪಿ ಮರಿಯಪ್ಪ,ಡಿವೈಎಸ್ಪಿ ವಿನಾಯಕ ಶೆಟ್ಟಿಗೇರಿ, ತಿಪಟೂರು ಉಪವಿಭಾಗಾಧಿಕಾರಿ ಸಪ್ತಶ್ರೀ,ನಗರಸಭಾ ಅಧ್ಯಕ್ಷರಾದ ಶ್ರೀಮತಿ ಯಮುನಾಧರಣೇಶ್,ತಿಪಟೂರು ನಗರಠಾಣೆ ವೃತ್ತ ನಿರೀಕ್ಷಕ ವೆಂಕಟೇಶ್ ಪೌರಾಯುಕ್ತ ವಿಶ್ವೇಶ್ವರಯ್ಯ ಬದರಗಡೆ, ಉಪಸ್ಥಿತಿಯಲ್ಲಿ ಶಾಂತಿ ಸಭೆ ನಡೆಸಲಾಯಿತು

ಶಾಂತಿಸಭೆಯಲ್ಲಿ ಮಾತನಾಡಿದ ಶಾಸಕ ಕೆ.ಷಡಕ್ಷರಿ ತಿಪಟೂರುಶ್ರೀಸತ್ಯಗಣಪತಿ ವಿಸರ್ಜನಾ ಮಹೋತ್ಸವ ಶಾಂತಿ ಸೌಹಾರ್ದತೆಗೆ ಹೆಸರಾಗಿದ್ದು, ಹಿಂದೂ ಮುಸ್ಲೀಂ,ಕ್ರೈಸ್ತ ಸೇರಿದಂತೆ ಎಲ್ಲಾ ಸಮುದಾಯಗಳ ಜನರು,ಒಗ್ಗಟಿನಿಂದ ಜಾತ್ರೆ ಆಚರಿಸಲಾಗುತ್ತದೆ, ದೇಶದ ವಿವಿಧ ಭಾಗಗಳಿಂದ ಜನಸೇರುತ್ತಾರೆ, ನಮ್ಮ ಊರಿನ ಗೌರವ ಹೆಚ್ಚುವಂತೆ ಎಲ್ಲರೂ ಸಹಕಾರದಿಂದ ಕೆಲಸ ಮಾಡೋಣ, ತಾಲ್ಲೋಕು ಆಡಳಿತ ಸಂಪೂರ್ಣ ಸಹಕಾರ ನೀಡುತ್ತದೆ,ಬೆಸ್ಕಾಂ ಇಲಾಖೆ ವಿದ್ಯುತ್ ಅವಘಡಗಳು ಆಗದಂತೆ ಕ್ರಮವಹಿಸಿದ್ದು,ಪೋಲಿಸ್ ಇಲಾಖೆ ಕಟ್ಟುನಿಟ್ಟಿನ ಕ್ರಮಕೈಂಡಿದ್ದು, ಪೊಲೀಸ್ ಇಲಾಖೆಯ ಸೂಚನೆಗಳ ಎಲ್ಲರೂ ಪಾಲಿಸಬೇಕು ಎಂದು ತಿಳಿಸಿದರು.
ಮಾಜಿ ನಗರಸಭಾ ಅಧ್ಯಕ್ಷ ರಾಮ್ ಮೋಹನ್ ಮಾತನಾಡಿ ಪ್ರತಿವರ್ಷದ ಸಂಪ್ರದಾಯದಂತೆ ಶ್ರೀಸತ್ಯಗಣಪತಿ ವಿಸರ್ಜನಾ ಮಹೋತ್ಸವ ಜಾತ್ರೆ ನಡೆಯುತ್ತಿದೆ, ತಾಲ್ಲೋಕು ಆಡಳಿತ ಸಹಕಾರ ನೀಡಬೇಕು, ರಾಜ್ಯದ ವಿವಿಧ ಭಾಗಗಳಿಂದ ಬರುವ ಭಕ್ತರಿಗೆ ಟ್ರಾಫಿಕ್ ಸಮಸ್ಯೆ ಎದುರಾಗುತ್ತಿದ್ದು, ನಗರದ ಹೊರವಲಯದಲ್ಲಿ ಬಸ್ ಗಳು ಪ್ರಯಾಣಿಕರನ್ನ ಇಳಿಸುವ ಕಾರಣ ತೊಂದರೆಯಾಗುತ್ತದೆ, ಪೊಲೀಸ್ ಇಲಾಖೆ ನಗರದೊಳಗೆ ವಾಹನಗಳು,ಬರುವಂತೆ ವ್ಯವಸ್ಥೆ ಮಾಡಬೇಕು.ಗಣೇಶ ವಿಸರ್ಜನೆ ವೇಳೆ ಸ್ವಯಂ ಸೇವಕರಿಗೆ ತೊಂದರೆಯಾಗದಂತೆ ಕಲ್ಯಾಣಿ ಬಳಿ ಬರುವುದಕ್ಕೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದರು
ಮಾಜಿ ನಗರಸಭಾ ಸದಸ್ಯ ಪ್ರಸನ್ನಕುಮಾರ್ ಮಾತನಾಡಿ 95 ವರ್ಷಗಳಿಂದ ಅದ್ದೂರಿಯಾಗಿ ಗಣೇಶೋತ್ಸವ ನಡೆಯುತ್ತಿದೆ, ಐತಿಹಾಸಿಕ ಪಾವಿತ್ರತೆ ಪಡೆದಿದೆ,ಪೊಲೀಸ್ ಇಲಾಖೆ ಗಣೇಶ ಸಂಚರಿಸುವ ಮಾರ್ಗಗಳನ್ನ ಸಾರ್ವಜನಿಕರಿಗೆ ತೊಂದರೆಯಾಗದಂತೆ, ವ್ಯವಸ್ಥೆ ಕಲ್ಪಿಸಬೇಕು. ನಗರದಲ್ಲಿ ಅಗತ್ಯವಿರುವಕಡೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕು ಎಂದರೂ.
ಜಾಮೀಯಾ ಮಸೀದಿ ಮುಖಂಡರಾದ ಷಫಿಉಲ್ಲಾ ಷರೀಫ್ ಮಾತನಾಡಿ ತಿಪಟೂರು ಶ್ರೀ ಸತ್ಯಗಣಪತಿ ಸೌಹಾರ್ದತೆ ಸಂಕೇತವಾಗಿದೆ, ಹಿಂದೂ ಮುಸ್ಲೀಂ ರು ಭಾವೈಕ್ಯತೆಯಿಂದ ಹಬ್ಬ ಆಚರಿಸುತ್ತೇವೆ.ಪ್ರತಿವರ್ಷದಂತೆ ಜಾತ್ರೆಗೆ ಎಲ್ಲಾ ಮುಸ್ಲೀಂ ಬಾಂದವರು ಸಹಕಾರ ನೀಡುತ್ತೇವೆ ಎಂದರೂ.
ತುಮಕೂರು ಅಡಿಷನಲ್ ಎಸ್ಪಿ ಮರಿಯಪ್ಪ ಮಾತನಾಡಿ ತಿಪಟೂರು ಶ್ರೀ ಸತ್ಯಗಣಪತಿ ಜಾತ್ರಾಮಹೋತ್ಸವಕ್ಕೆ ಪೊಲೀಸ್ ಇಲಾಖೆ ಸಕಲ ಸಜ್ಜಗಿದೆ, ಜಾತ್ರೆಸೌಹಾರ್ದವಾಗಿ ಆಚರಿಸಲು ಎಲ್ಲರೂ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕು ಪೊಲೀಸ್ ಇಲಾಖೆಯ ಸೂಚನೆಗಳನ್ನ ಪಾಲಿಸಬೇಕು ಎಂದರು.
ಶಾಂತಿ ಸಭೆಯಲ್ಲಿ ಮುಖಂಡರಾದ ರಾಮ್ ಮೋಹನ್. ಶಶಿಕಿರಣ್, ಪ್ರಸನ್ನ ಕುಮಾರ್,ಲಾಯರ್ ನಟರಾಜ್ .ನಗರಸಭೆ ಸದಸ್ಯರಾದ ಮಹೇಶ್,ಯೋಗೀಶ್,ಓಹಿಲಾ ಗಂಗಾಧರ್.ತರಕಾರಿ ಗಂಗಾಧರ್.ನಿಜಗುಣ ಹರಿಬಾಬು,.ಮುಂತ್ತಾದವರು ಉಪಸ್ಥಿತರಿದರು
ವರದಿ:ಮಂಜುನಾಥ್ ಹಾಲ್ಕುರಿಕೆ