
ತಿಪಟೂರು ನಗರದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ವಿಶ್ವ ಏಡ್ಸ್ ದಿನದ ಪ್ರಯುಕ್ತ ಹೆಚ್.ಐವಿ ಮುಕ್ತ ಭಾರತ ಸಂಕಲ್ಪ ಜಾಥಕ್ಕೆ ತಿಪಟೂರು ಜೆಎಂಎಫ್ ಸಿ ಮತ್ತು ಸಿವಿಲ್ ನ್ಯಾಯಾಧೀಶರಾದ ಮಹಮದ್ ಅರೀಫ್ ಉಲ್ಲಾ .ರವರು ಚಾಲನೆ ನೀಡಿದರು

ಜಾಥ ಉದ್ಘಾಟಿಸಿದ ತಿಪಟೂರು ಜೆಎಂಎಫ್ ಸಿ & ಸಿವಿಲ್ ನ್ಯಾಯಾಧೀಶರಾದ ಮಹಮದ್ ಅರೀಪ್ ಉಲ್ಲಾ ಮಾತನಾಡಿ ದೇಶದಲ್ಲಿ ಹೆಚ್ ಐವಿ ರೋಗದಿಂದ ಮುಕ್ತವಾಗ ಬೇಕಾದರೇ ಸಮಾಜ ಜಾಗೃತವಾಗಬೇಕು,ಮಾದಕ ವಸ್ತುಗಳಿಂದ ದೂರವಿರಬೇಕು,ನಮ್ಮ ಕಾನೂನು ಹೆಚ್ಐವಿ ಪೀಡಿತರನ್ನ ಗೌರವದಿಂದ ಕಾಣಬೇಕು, ರೋಗಿಗಳನ್ನ ಸಮಾನವಾಗಿ ಬದುಕವಂತೆ ನೋಡಿಕೊಳ್ಳಬೇಕು,ಹೆಚ್ಐವಿ ತಡೆಕಾಯ್ದೆ2017ರೋಗಪೀಡಿತರಿಗೆ ಸಮಾಜದಲ್ಲಿ ಗೌರವದಿಂದ ಬದುಕುವ ಅವಕಾಶ ಕಲ್ಪಿಸಿದೆ,ರೋಗಪೀಡುತರಿಗೆ ಔಷದೋಪಚಾರ ಸೇರಿದಂತೆ ಹಲವಾರು ಸವಲತ್ತುಗಳನ್ನ ನೀಡಿದೆ.ಎಂದು ತಿಳಿಸಿದರು
ತಿಪಟೂರು ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿ ಡಾ//ಶಿವಕುಮಾರ್ ಮಾತನಾಡಿ ಮಾದಕ ವಸ್ತುಗಳ ಬಳಕೆ, ಅಸುರಕ್ಷಿತ ಲೈಂಗಿಕ ಕ್ರಿಯೆಗಳಿಂದ,ದೂರವಿರಬೇಕು, ರೋಗಬಂದಾಗ ತೊಂದರೆ ಅನುಭವಿಸುವ ಬದಲು ರೋಗಬರದಂತೆ ಎಚ್ಚರವಹಿಸಬೇಕು.ಹೆಚ್ಐ ಪೀಡಿತರು ಸಮಾನ್ಯ ಮನುಷ್ಯರಂತೆ ಬದುಕ ಬಹುದು, ಅನೇಕರು ಈ ರೋಗಪೀಡಿತರು ಸಮಾನ್ಯ ಜೀವನ ನಡೆಸುತ್ತಿದ್ದಾರೆ,ಎಂದು ತಿಳಿಸಿದರು
ಕಾರ್ಯಕ್ರಮದಲ್ಲಿ ಕ್ಷೇತ್ರಶಿಕ್ಷಣಾಧಿಕಾರಿ ಚಂದ್ರಯ್ಯ ಖ್ಯಾತವೈದ್ಯರಾದ ಡಾ//ವಿವೇಚನ್.ಡಾ//ರಕ್ಷಿತ್ ಗೌಡ,ಡಾ//ರವಿ ಸಿಂಡಿಕೇಟ್ ಸದಸ್ಯ ನಾಗರಾಜು.ರೇಣುಕಾರಾಧ್ಯ ಮುಂತ್ತಾದವರು ಉಪಸ್ಥಿತರಿದರು
ವರದಿ: ಮಂಜುನಾಥ್ ಹಾಲ್ಕುರಿಕೆ