ನಿಟ್ಟೂರು ಸಂಪಿಗೆ ಮಾರ್ಗದಲ್ಲಿ ಅಪರಿಚಿತ ವೃದ್ಧೆ ರಕ್ಷಣೆ

Spread the love

ಗುಬ್ಬಿ: ನಿಟ್ಟೂರು ಸಂಪಿಗೆ ಮಾರ್ಗದ ಗಂಗಾ ಕ್ಷೇತ್ರದ ಸಮೀಪ ನೆನ್ನೆ ತಡರಾತ್ರಿ ವೃದ್ಧೆಯೊಬ್ಬರು ರಸ್ತೆಯ ಮಧ್ಯದಲ್ಲಿ ಒಂಟಿಯಾಗಿ ಕುಳಿತು ಆತಂಕ ಮೂಡಿಸಿದ್ದರು. ಈ ಹಿನ್ನೆಲೆಯಲ್ಲಿ ಪತ್ರಕರ್ತ ಮತ್ತು ಸ್ಥಳೀಯ ಸಾರ್ವಜನಿಕರ ಸಹಕಾರದಿಂದ 112 ಪೋಲಿಸ್ ಸೇವೆಗೆ ಕರೆಮಾಡಿದ ಪರಿಣಾಮ ವೃದ್ಧೆಯು ಸಮೀಪದ ನಂದಿಹಳ್ಳಿ ಗ್ರಾಮಸ್ಥರಾಗಿದ್ದು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾರೆ ಎಂದು ವೃದ್ಧೆಯ ಮಗನು ತಿಳಿಸಿದ್ದಾರೆ ಅವರಿಗೆ ಪೋಲಿಸರಿಂದ ತಿಳುವಳಿಕೆ ನೀಡಿ ಅಂತಿಮವಾಗಿ ವೃದ್ಧೆಯನ್ನು ರಕ್ಷಿಸಿ ಮನೆಗೆ ಕಳಿಹಿಸಿ ಕೊಡಲಾಗಿದೆ.

ವರದಿ: ಸಂತೋಷ್ ಓಬಳ . ಗುಬ್ಬಿ

Leave a Reply

Your email address will not be published. Required fields are marked *

error: Content is protected !!