ಕ್ರೀಡೆ ಸ್ನೇಹ ಸೌಹಾರ್ದತೆ ಬೆಳೆಸುವ ಸಾಧನ :ತಿಪಟೂರು ಡಿವೈಎಸ್ಪಿ ವಿನಾಯಕ್ ಎನ್ ಶೆಟಿಗೇರಿ

Spread the love

ತಿಪಟೂರು: ಕ್ರೀಡೆ ಸ್ನೇಹ ಸೌಹಾರ್ದತೆ ಬೆಳಸುವ ಸಾಧನವಾಗಿಗೆ,ಜಾತಿ ಮತ ಹಾಗೂ ಭಾಷೆ ಗಡಿಗಳ ನಿರ್ಭಂದವಿರುವುದಿಲ್ಲ,ಸತತ ಅಭ್ಯಾಸಹಾಗೂ ಪರಿಶ್ರಮದಿಂದ ಉತ್ತಮ ಸಾಧನೆ ಮಾಡಬೇಕು ಎಂದು ತಿಪಟೂರು ಡಿವೈಎಸ್ಪಿ ವಿನಾಯಕ ಎನ್ ಶೆಟಿಗೇರಿ ತಿಳಿಸಿದರು


ನಗರದ ಕಲ್ಪತರು ಕ್ರೀಡಾಂಗಣದಲ್ಲಿ ಕೆಎಲ್ಎ ಸ್ಕೂಲ್ ಅಫ್ ಲಾ ಕಾಲೇಜು ವತಿಯಿಂದ ಆಯೋಜಿಸಿದ ಅಂತರ ಕಾಲೇಜು ಕೆಎಲ್ಎ ಕಪ್ 2025 ಕ್ರಿಕೇಟ್ ಕ್ರೀಡಾಕೂಟ ಉದ್ಗಾಟಿಸಿದ ಅವರು ಮಾತನಾಡಿ ಕ್ರೀಡೆಯಲ್ಲಿ ಸೋಲು ಗೆಲುವುಗಳು ಸಹಜ ಆದರೆ ಕ್ರೀಡಾ ಸ್ಪೂರ್ತಿಯೊಂದಿಗೆ ಭಾಗವಹಿಸುವುದು ಮುಖ್ಯ,ವಿದ್ಯಾರ್ಥಿಗಳು ಆನ್ ಗೇಮ್ ದಾಸರಾರುತ್ತಿರುವ ಹೊತ್ತಿನಲ್ಲಿ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಆಸಕ್ತಿ ಬೆಳೆಸುವಂತ್ತೆ ಲಾ ಕಾಲೇಜಿ ಕ್ರೀಡಾ ಕೂಟ ಆಯೋಜನೆ ಮಾಡಿರುವುದು ಶ್ಲಾಘನೀಯ ಕ್ರೀಡಾಕೂಟದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಸೋಲು ಗೆಲುವುಗಳನ್ನ ಸಮಾನವಾಗಿ ಸ್ವೀಕರಿಸಿ ಎಂದು ತಿಳಿಸಿದರು


ಎನ್,ಎಸ್ಎಸ್ ಎಜುಕೇಷನ್ ಟ್ರಸ್ಟ್ ಅಧ್ಯಕ್ಷರಾದ ನಾಗೇಂದ್ರ ಜಿ.ಎನ್ ಮಾತನಾಡಿ ವಿದ್ಯಾರ್ಥಿಗಳು ಉತ್ತಮ ಶಿಕ್ಷಣದ ಜೊತೆಗೆ ಕ್ರೀಡೆಗಳಲ್ಲಿ ಆಸಕ್ತಿ ಬೆಳೆಸಿಕೊಳ್ಳವುದು ಮುಖ್ಯ, ಕ್ರೀಡೆ ಮನುಷ್ಯನ ಆರೋಗ್ಯ ವೃದ್ದಿಗೆ ಸಹಕಾರಯಾಗುತ್ತದೆ,ನಮ್ಮ ಕಾಲೇಜಿನಲ್ಲಿ ಕ್ರೀಡಾಕೂಟ ಅಯೋಜನೆಗೆ ವಿದ್ಯಾರ್ಥಿಗಳು ಹಾಗೂ ಬೋಧಕ ಬೋಧಕೇತರ ವರ್ಗದ ಆಸಕ್ತಿ ಪರಿಶ್ರಮದ ಕಾರಣ ಕ್ರೀಡಾಕೂಟ ಉತ್ತಮವಾಗಿ ಜರುಗುತ್ತಿದೆ,ವಿದ್ಯಾರ್ಥಿಗಳಿಗೆ ಕ್ರೀಡೆಗಳ ಬಗ್ಗೆ ಆಸಕ್ತಿ ಬೆಳೆಯುವಂತೆ ಮಾಡುವುದು, ಹಾಗೂ ಕ್ರೀಡಾ ಉತ್ಸಹದೊಂದಿಗೆ ಮನೊರಂಜನೆ ಪಡೆಯಬೇಕು ಎನ್ನುವುದು ನಮ್ಮ ಉದೇಶ,ವಿದ್ಯಾರ್ಥಿಗಳು ಪಠ್ಯಚಟುವಟಿಕೆಗಳ ಜೊತೆ, ಕ್ರೀಡೆಯಲ್ಲೂ ಆಸಕ್ತಿ ಬೆಳೆಸಿಕೊಳ್ಳ ಕ್ರೀಡಾ ಸ್ಪೂರ್ಥಿ ನಿಮ್ಮ ಜೀವನದ ಏಳುಬೀಳುಗಳನ್ನ ಸಮಾನವಾಗಿ ಸ್ವೀಕರಿಸುವ ಮನೋಭಾವನೆ ಬೆಳೆಸುತ್ತದೆ ಎಂದು ತಿಳಿಸಿದರು
ಕಾರ್ಯಕ್ರಮದಲ್ಲಿ ಕೆಎಲ್ಎ ಸ್ಕೂಲ್ ಅಫ್ ಲಾ ಕಾಲೇಜು ಪ್ರಾಚಾರ್ಯರಾದ ಶ್ರೀಮತಿ ವಿನೀತಾ,ಸಹಾಯಕ ಪ್ರಾಧ್ಯಾಪಕರುಗಳಾದ ಪ್ರಸನ್ನ ಕುಮಾರ್,ಎ.ಆರ್ ಪುನಿತ್ ಕುಮಾರ್ ಉಪಸ್ಥಿತರಿದರು
ಕ್ರೀಡಾಕೂಟದಲ್ಲಿ ನಾಣ್ಯ ಚುಮ್ಮುವ ಮೂಲಕ ತಿಪಟೂರು ಡಿವೈಎಸ್ಪಿ ವಿನಾಯಕ ಎನ್ ಶೆಟಿಗೇರಿ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು
ತಿಪಟೂರು ಕೆ.ಎಲ್ ಎ ಸ್ಕೂಲ್ ಅಫ್ ಲಾ ಕಾಲೇಜು ಹಾಗೂ ಹಾಗೂ ಜಿಪಿಟಿ ಕಾಲೇಜು ತುರುವೇಕೆರೆ ವಿರುದ್ದ ನಡೆದ ನೇರಹಣಾಹಣಿಯಲ್ಲಿ ತಿಪಟೂರು ಕೆಎಲ್ಎ ಸ್ಕೂಲ್ ಅಫ್ ಲಾ ಕಾಲೇಜು ಪ್ರಥಮಸ್ಥಾನ ಪಡೆದುಕೊಂಡಿತು, ತುರುವೇಕೆರೆ ಜಿಪಿಟಿ ದ್ವೀತೀಯ ಸ್ಥಾನ ಪಡೆದುಕೊಂಡಿತು,

ವರದಿ :ಸಂತೋಷ್ ಹೋಬಳ

Leave a Reply

Your email address will not be published. Required fields are marked *

error: Content is protected !!