
ಡಾ//ಬಾಬೂ ಜಗಜೀವನ್ ರಾಮ್ ರವರೂ ದಲಿತರ ಹೇಳಿಗೆಗೆ ಶ್ರಮಿಸಿದ ಅಧಮ್ಯ ಚೇತನ,ರಾಜಕೀಯ ಸಾಮಾಜಿಕ ಬದಲಾವಣೆ ಕೀಳಿಕೈ ಎಂದು ರಾಜಕೀಯದ ಮೂಲಕ ಭಾರತದ ಕ್ರಾಂತಿಕಾರಿ ಬದಲಾವಣೆಗೆ ಕಾರಣವಾಗಿದ್ದಾರೆ ಅವರದಾರಿಯಲ್ಲಿ ನಡೆದು ಜೀವನ ನಡೆಸಿದಾಗ, ಅದೇ ದಿವ್ಯ ಚೇತನಕ್ಕೆ ಕೊಡುವ ಗೌರವ ಎಂದು ಶಾಸಕ ಕೆ.ಷಡಕ್ಷರಿ ತಿಳಿಸಿದರು

ತಿಪಟೂರು ನಗರದ ತಾಲ್ಲೋಕು ಆಡಳಿತ ಕಚೇರಿಯಲ್ಲಿ ತಾಲ್ಲೋಕು ಆಡಳಿತದಿಂದ ಆಯೋಜಿಸಿದ ಡಾ//ಬಾಬೂ ಜಗಜೀವನ್ ರಾಮ್ ಜನ್ಮದಿನಾಚರಣೆ ಅಧ್ಯಕ್ಷತೆ ವಹಿಸಿದ ಅವರು ಮಾತನಾಡಿ ಭಾರತ ರಾಜಕೀಯದಲ್ಲಿ ಬಾಬೂಜಿ ಎಂದೇ ಖ್ಯಾತರಾಗಿದ ಡಾ//ಬಾಬು ಜಗಜೀವನ್ ರಾಮ್ ಹಸಿರು ಕ್ರಾಂತಿ ಮೂಲಕ ಭಾರತದ ಆಹಾರ ಸ್ವಾವಲಂಭನೆಗೆ ಅಡಿಪಾಯಹಾಕಿದರು,ಹಲವಾರು ಕ್ರಾಂತಿಕಾರಿ ನಿರ್ಧಾರಗಳ ಮೂಲಕ ಭಾರತದ ಇತಿಹಾಸದಲ್ಲಿ ಅಜರಾಮರಾಗಿದ್ದಾರೆ, ಸಮಾಜದಲ್ಲಿ ಮೇಲು ಕೀಳು ಎನ್ನುವ ಭಾವನೆ ತೊಡೆದುಹಾಕುವ ಕೆಲಸ ಮಾಡಬೇಕು,ನಾನೂ ಸೇರಿ ಎಲ್ಲಾ ಅಧಿಕಾರಿ ವರ್ಗ ಜನರ ತೆರಿಗೆ ಹಣದಲ್ಲಿ ಸಂಬಳ ಪಡೆಯುತ್ತಿದ್ದೇವೆ, ಪ್ರಮಾಣಿಕವಾಗಿ ಕೆಲಸ ಮಾಡುವ ಜೊತೆಗೆ ಸಮಾಜದಲ್ಲಿನ ತಾರತಮ್ಯ ತೊಡದುಹಾಕುವ ನಿಟ್ಟಿನಲ್ಲಿ ಕೆಲಸ ಮಾಡಿದರೆ, ನಾವು ಪಡೆದ ಶಿಕ್ಷಣ ಸಾರ್ಥಕವಾಗುತ್ತದೆ,ಎಂದು ತಿಳಿಸಿದರು

ಕಾರ್ಯಕ್ರಮದಲ್ಲಿ ಉಪಸ್ಥಿತರಿದ ನಗರಸಭೆ ಅಧ್ಯಕ್ಷೆ ಯಮುನಾಧರಣೇಶ್ ಮಾತನಾಡಿ ಡಾ//ಬಾಬೂ ಜಗಜೀವನ್ ರಾಮ್ ಭಾರತದ ಸ್ವತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಭಾರತಮಾತೆಯ ಬಂದಮುಕ್ತಿಗೆ ಶ್ರಮಿಸುವ ಜೊತೆಗೆ ಸ್ವತಂತ್ರ್ಯ ಭಾರತದಲ್ಲಿ ಹಲವಾರು ಪ್ರಮುಖ ಖಾತೆಗಳನ್ನ ನಿರ್ವಹಿಸಿ,ಹಸಿರು ಕ್ರಾಂತಿ ಸೇರಿದಂತೆ ಹಲವಾರು ಯೋಜನೆ ಜಾರಿಗೊಳಿಸಿದ ಕೀರ್ತಿಪ್ರಾಯರು,ಇವರ ಆದರ್ಶಗಳನ್ನ ಎಲ್ಲರೂ ಪಾಲಿಸೋಣ ಎಂದು ತಿಳಿಸಿದರು
ತಾಲ್ಲೋಕು ಪಂಚಾಯ್ತು ಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ಮಾತನಾಡಿ ಸಮಾಜ ಸುಧಾರಕರ ಚಿಂತನೆಗಳು ಸರ್ವಕಾಲಕ್ಕೂ ಅನುಕರಣೀಯ, ಡಾ//ಬಾಬೂ ಜಗಜೀವನ್ ರಾಮ್ ಹಾಗೂ ಡಾ//ಬಿ.ಆರ್ ಅಂಬೇಡ್ಕರ್ ಶೋಷಿತ ಸಮುದಾಯಗಳನ್ನ ಮೇಲೆತ್ತಲೂ ಅವಿರತವಾಗಿ ಶ್ರಮಿಸಿದ್ದಾರೆ, ಮಹಾನೀಯರ ಹೋರಾಟ ಕಷ್ಟ ನೋವು ನಲಿವಿನ ಫಲವನ್ನ ಭಾತರ ಕೋಟ್ಯಾನು ಕೋಟಿ ಜನ ಅನುಭವಿಸುತ್ತಿದ್ದಾರೆ,ನಾನೂ ಯಾರುಸಹ ರಾಜಕುಟುಂಬದಲ್ಲಿ ಹುಟ್ಟಿದವರಲ್ಲ, ಆದರೆ ಸಮಾನ್ಯ ಕುಟುಂಬದಲ್ಲಿ ಹುಟ್ಟಿದವರು, ಸಮಾಜಕ್ಕೆ ತಮ್ಮಿದ್ದಾದ ಸೇವೆ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡಬೇಕು, ಮಹನೀಯರ ಆದರ್ಶಮಯವಾದ ದಾರಿಯಲ್ಲಿ ನಡೆಯೋಣ ಎಂದು ತಿಳಿಸಿದರು
ಸಭೆಯಲ್ಲಿ ತಿಪಟೂರು ಉಪವಿಭಾಗಾಧಿಕಾರಿ ಶ್ರೀಮತಿ ಸಪ್ತಶ್ರೀ ತಹಸೀಲ್ದಾರ್ ಪವನ್ ಕುಮಾರ್, ಗ್ರೇಡ್ ತಹಸೀಲ್ದಾರ್ ಜಗನ್ನಾಥ್ ಸಮಾಜಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರಾದ ತ್ರಿವೇಣಿ,ಡಿಎಸ್ಎಸ್ ಮುಖಂಡರಾದ ನಾಗ್ತಿಹಳ್ಳಿ ಕೃಷ್ಣಮೂರ್ತಿ,ನರಸಿಂಹಯ್ಯ,ಬಜಗೂರು ಮಂಜುನಾಥ್ ,ಕರಡಾಳು ಚಂದ್ರಶೇಖರ್ ಕುಪ್ಪಾಳು ರಂಗಸ್ವಾಮಿ .ರಾಘವೇಂದ್ರ ಯಗಚೀಕಟ್ಟೆ, ಶಿವಕುಮಾರ್,ಟಿ.ಕೆ ಕುಮಾರ್, ಟಿ.ಕೆ ಶಿವಕುಮಾರ್,ಮೈಲಾರಪ್ಪ.ಮುಂತ್ತಾದವರು ಉಪಸ್ಥಿತರಿದರು.ಉಪಸ್ಥಿತರಿದರು.
ವರದಿ:ಮಂಜುನಾಥ್ ಹಾಲ್ಕುರಿಕೆ

