ತಿಪಟೂರು ನಗರದ ವಿಶ್ವವಿಖ್ಯಾತ ಎಪಿಎಂಸಿ ಕೊಬ್ಬರಿ ಮಾರುಕಟ್ಟೆಯಲ್ಲಿ ಹೆಜ್ಜೆನು ದಾಳಿಯಾಗಿದ್ದು ,ಜೇನುದಾಳಿಗೆ ಇಬ್ಬರು ರೈತರು ತೀವ್ರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ತಿಪಟೂರು ಎಪಿಎಂಸಿ ಯಲ್ಲಿ ಕೊಬ್ಬರಿ ಮಾರುಕಟ್ಟೆಯಲ್ಲಿ ಹಮಾಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ, ತಾಲ್ಲೋಕಿನ ಕಸಬಾ ಹೋಬಳಿ ಬಸವನಹಳ್ಳಿ ವಾಸಿ ಶಂಕರಯ್ಯ 70 ವರ್ಷ ತೀವ್ರವಾಗಿ ಹೆಜ್ಜೆನು ದಾಳಿಗೊಳಗಾಗಿದ್ದು, ಎಪಿಎಂಸಿ ಮಾರುಕಟ್ಟೆ ಜಿ.ರುದ್ರಯ್ಯ ಟ್ರೇಡರ್ಸ್ ಮುಂಭಾಗ ಹೆಜ್ಜೇನುಗಳು ದಾಳಿ ನಡೆಸಿವೆ.
ಹೆಜ್ಜೆನುದಾಳಿಗೆ ಇಬ್ಬರಲ್ಲಿ ಒಬ್ಬರು ಕಡಿಮೆ ಪ್ರಮಾಣದ ಗಾಯವಾದ ಕಾರಣ ಚಿಕಿತ್ಸೆ ಪಡೆದು ಆಸ್ಪತ್ರೆಗೆಯಿಂದ ಮರಳಿರುತ್ತಾರೆ. ತಿಪಟೂರು ತಾಲ್ಲೋಕಿನ ಬಸವನಹಳ್ಳಿ ಗ್ರಾಮದ ವಾಸಿ ಶಂಕರಪ್ಪ ಎಂಬುವವರು ತೀವ್ರ ಅಸ್ಪಸ್ಥಗೊಂಡಿದ್ದು ಗಾಯಳುಗಳನ್ನ ತಿಪಟೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರು ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ.
ವರದಿ :ಮಂಜುನಾಥ್ ಹಾಲ್ಕುರಿಕೆ











Leave a Reply