
ತಿಪಟೂರು ನಗರದ ದೊಡ್ಡಪೇಟೆ ಶ್ರೀ ಪಾಂಡುರಂಗಸ್ವಾಮಿ ದೇವಾಲಯದಲ್ಲಿ ಶ್ರೀ ಭಾವಸಾರ ಕ್ಷತ್ರಿಯದೈವಮಂಡಳಿ,ಹಾಗೂ ಶ್ರೀ ಭಾವಸಾರ ಕ್ಷತ್ರಿಯ ಭಜನಾ ಮಂಡಳಿಯಿಂದ 44 ನೇ ದಿಂಡೀ ಉತ್ಸವ,ಶ್ರೀ ಹಿಂಗಲಾಂಬಿಕ ದೇವಿ ಹಾಗೂ ನವಗ್ರಹ ಪ್ರತಿಷ್ಠಾಪನೆ ಅದ್ದೂರಿಯಾಗಿ ನೆರವೇರಿಸಲಾಯಿತು.

ಶ್ರೀ ಹಿಂಗಲಾಂಬಿಕ ದೇವಿ ಹಾಗೂ ನವಗ್ರಹ ಪ್ರತಿಷ್ಠಾಪನೆ ಅಂಗವಾಗಿ ಶ್ರೀವಿಠಲರುಕುಮಾಯಿ,ಶ್ರೀಗಣಪತಿ,ಶ್ರೀ ದತ್ತಾತ್ರೇಯಸ್ವಾಮಿ ಯವರಿಗೆ ವಿಶೇಷ ಅಲಂಕಾರ ಹಾಗೂ ಪೂಜೆ ನೆರವೇರಿಸಲಾಯಿತು.ನಂತರ ಪುಷ್ಪಲಂಕೃತ ಮಂಟಪದಲ್ಲಿ ಶ್ರೀಪಾಂಡುರಂಗರುಕ್ಮಾಯಿ ಉತ್ಸವ ಮೂರ್ತಿಯನ್ನ ಕೂರಿಸಿ ನಗರದ ಪ್ರಮುಖ ಬೀದಿಗಳಲ್ಲಿ ಭಜನೆ ಯೊಂದಿಗೆ ಉತ್ಸವ ನಡೆಸಲಾಯಿತು.
ವರದಿ :ಮಂಜುನಾಥ್ ಹಾಲ್ಕುರಿಕೆ

