Year: 2025

ತುಮಕೂರು: ಪರಿಸರ ಪ್ರತಿಯೊಂದು ಉಚಿತವಾಗಿ ನೀಡಿದೆ ಪ್ರತಿಯೊಂದು ನಾವು ಉಳಿಸಿ ಉಳಿಸಿ ಎಂದು ಹೇಳಲಾಗುತ್ತದೆ ಕಾರಣ ಪರಿಸರ ಮಾನವನ ದುರ್ಬಳಕೆಯಿಂದ ಸ್ಪೋಟವಾಗುತ್ತಿದೆ ಪರಿಸರ ಸಂರಕ್ಷಣೆಯು ಕೇವಲ ಪರಿಸರ ವಿದ್ಯಾರ್ಥಿಗಳಿಗೆ ಸೀಮಿತವಾಗಿಲ್ಲ ಬದಲಾಗಿ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ನಗರದ ತುಮಕೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಪರಿಸರ ಮತ್ತು ಪರಿಸರ ವಿಜ್ಞಾನ ಅಧ್ಯಯನ ಮತ್ತು ಸಂಶೋಧನಾ ವಿಭಾಗ ಆಯೋಜಿಸಿದ್ದ 2025 ನೇ ಸಾಲಿನ ವಿಶ್ವ ಜೌಗು ದಿನದ ಅರಿವು ಕಾರ್ಯಕ್ರಮದಲ್ಲಿ ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಎಂ ವೆಂಕಟೇಶ್ವರಲು ಕಾರ್ಯಕ್ರಮದ ಅಧ್ಯಕ್ಷೀಯ ಭಾಷಣ ವಹಿಸಿ ಮಾತನಾಡಿದರು. ಇಂದು ದೂರಸಂಪರ್ಕ ತಂತ್ರಜ್ಞಾನದ ಪರಿಣಾಮದಿಂದ ಪಕ್ಷಿಗಳ ಉಳಿವಿಗೆ ಅಡ್ಡಿಯಾಗಿದೆ ಪರಿಸರ ವಿದ್ಯಾರ್ಥಿಗಳು ಪರಿಸರದ ಸೂಕ್ಷ್ಮತೆಯನ್ನು ಅರಿತು ಜನರಿಗೆ ಪರಿಸರದ ಅರಿವನ್ನು ಮೂಡಿಸಬೇಕು ಎಂದರು. ಕಾರ್ಯಕ್ರಮದಲ್ಲಿ ತುಮಕೂರು ವಿಶ್ವವಿದ್ಯಾನಿಲಯದ ಕುಲ ಸಚಿವರಾದ ಶ್ರೀಮತಿ ನಾಹೀದಾ ಜಮ್ ಜಮ್ ಮಾತನಾಡಿ ವಿಶ್ವ ಜೌಗು ದಿನದ ಆಚರಣೆಯ ಹಿನ್ನೆಲೆಯನ್ನು ವಿವರಿಸಿ, ನಾವು ಮೊದಲು ಜೌಗು ದಿನದ ಮಹತ್ವವನ್ನು ಅರಿಯಬೇಕು ಅಂತೆಯೇ ಅದನ್ನು ಸಂರಕ್ಷಿಸಬೇಕು ನಮ್ಮ ತುಮಕೂರು ಪ್ರದೇಶದಲ್ಲಿ ಒಂದು ಸ್ಥಳವನ್ನು ರಾಮ್ಸೆಟ್ ಸೈಟಿಗೆ ಸೇರಿಸುವ ಗುರಿಯನ್ನು ಹೊಂದಬೇಕು, ನಿಮ್ಮ ಜ್ಞಾನಮಟ್ಟವನ್ನ ಹೆಚ್ಚಿಸಿ ಕೊಳ್ಳಬೇಕು ಕೇವಲ ಪದವಿಗಳಿಗೋಸ್ಕರ ವ್ಯಾಸಂಗ ಮಾಡಬಾರದು ಉನ್ನತ ಮಟ್ಟಕ್ಕೆ ಸಮಾಜದಲ್ಲಿ ಬೆಳೆಯಬೇಕು ಎಂದು ಪರಿಸರ ವಿದ್ಯಾರ್ಥಿಗಳಿಗೆ ಕಿವಿ ಮಾತನ್ನು ಹೇಳಿದರು. ಕಾರ್ಯಕ್ರಮದಲ್ಲಿ ತುಮಕೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಪರಿಸರ ಮತ್ತು ಪರಿಸರ ವಿಜ್ಞಾನದ ಸಂಯೋಜಕರು ಮತ್ತು ಮುಖ್ಯಸ್ಥರಾದ ಡಾ. ಪೂರ್ಣಿಮಾ ಡಿ ಮಾತನಾಡಿ ಪರಿಸರ ಉಳಿಸುವುದು ಎಲ್ಲರ ಕರ್ತವ್ಯವಾಗಿದೆ ನಮ್ಮ ತುಮಕೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಪರಿಸರ ಮತ್ತು ಪರಿಸರ ವಿಭಾಗವು ಪರಿಸರಕ್ಕೆ ಮೀಸಲಾಗಿದೆ, ಇಂದು ನಮ್ಮ ವಿಭಾಗವು ಒಂದು ಮೈಲುಗಲ್ಲಾಗಿದೆ ಕಾರಣ ಇಂದಿನ ದಿನಮಾನಗಳಲ್ಲಿ ಸಾಮಾಜಿಕ ಜಾಲತಾಣಗಳು ಜನರೊಂದಿಗೆ ಸುದ್ದಿಯನ್ನು ಹರಡುವಲ್ಲಿ ಪ್ರಬಲವಾದ ಮಾಧ್ಯಮವಾಗಿದೆ ಈ ಹಿನ್ನೆಲೆಯಲ್ಲಿ ನಮ್ಮ ಪರಿಸರ ವಿದ್ಯಾರ್ಥಿಗಳು ಅಧಿಕೃತವಾಗಿ ವಿಭಾಗದಿಂದ ಜನರಿಗೆ ಪರಿಸರದ ಮಾಹಿತಿಯ ಜ್ಞಾನಾರ್ಜನೆಗೆ ತ್ವರಿತವಾಗಿ ದೊರಕಿಸುವ ಉದ್ದೇಶದಿಂದ ನೂತನ ಯೂಟ್ಯೂಬ್ ಚಾನೆಲ್ (Dept Of Ecology and Evs Tumkur University Official) ಉದ್ಘಾಟನೆ ಮಾಡಲಾಗಿದೆ ಎಂದರು. ವಿಶ್ವ ಜೌಗು ದಿನದ ಅಂಗವಾಗಿ ಜೌಗು ಪ್ರದೇಶದ ಸಂರಕ್ಷಣೆಗೆ ಒತ್ತನ್ನ ಕೊಡಬೇಕು ಹಾಗೂ ಬೇಸಿಗೆಕಾಲ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಪಕ್ಷಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ನಮ್ಮ ತುಮಕೂರು ವಿಶ್ವವಿದ್ಯಾನಿಲಯದ ಉದ್ಯಾನವನದ ಮರಗಳಲ್ಲಿ ಶೇಖರಣೆ ಮಾಡಲಾಗಿದೆ, ಅಲ್ಲದೆ ಈ ಎಲ್ಲಾ ಕಾರ್ಯಗಳನ್ನು ಯಶಸ್ವಿಯಾಗಿ ಮಾಡಲು ಸಹಕಾರ ಮತ್ತು ಸ್ಪಂದನೆ ನೀಡಿದ ನನ್ನ ಎಲ್ಲಾ ಪರಿಸರ ವಿದ್ಯಾರ್ಥಿಗಳಿಗೆ ಮತ್ತು ಬೋಧಕ ಸಿಬ್ಬಂದಿಗಳಿಗೆ ನಾನು ಧನ್ಯವಾದಗಳು ಹೇಳುತ್ತೇನೆ ಎಂದರು.

ಕಾರ್ಯಕ್ರಮದಲ್ಲಿ ತುಮಕೂರು ವಿಶ್ವವಿದ್ಯಾನಿಲದ ಕುಲಪತಿಗಳಾದ ಎಂ ವೆಂಕಟೇಶ್ವರಲು, ಕುಲ ಸಚಿವರಾದ ಶ್ರೀಮತಿ ನಾಹೀದಾ ಜಮ್ ಜಮ್, ತುಮಕೂರು ವಿಶ್ವವಿದ್ಯಾನಿಲದ ಪ್ರಾಂಶುಪಾಲರಾದ ಪ್ರೊ ಶೇಟ್ ಪ್ರಕಾಶ್, ತುಮಕೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಪರಿಸರ ಮತ್ತು ಪರಿಸರ ವಿಜ್ಞಾನ ವಿಭಾಗದ ಸಂಯೋಜಕರು ಮತ್ತು ಮುಖ್ಯಸ್ಥರಾದ ಶ್ರೀಮತಿ ಡಾ. ಪೂರ್ಣಿಮ ಡಿ, ಉಪನ್ಯಾಸಕರುಗಳಾದ ಡಾ. ಪುಟ್ಟರಾಜು, ಸಮ್ರೀನ್ ನಾಝ್, ಶಾಂಭವಿ ಸಿಂಗ್, ರಮ್ಯಾ, ನಚಿಕೇತ, ಪ್ರಿಯಾಂಕ ಪಟೇಲ್, ಮಧು . ಆರ್ ಮತ್ತು ಪರಿಸರ ವಿದ್ಯಾರ್ಥಿಗಳು ಸದರಿ ಕಾರ್ಯಕ್ರಮದಲ್ಲಿ ಹಾಜರಾಗಿದ್ದರು.

ಇದೇ ಸಂದರ್ಭದಲ್ಲಿ ಬೇಸಿಗೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಪಕ್ಷಿಗಳಿಗೆ ಕುಡಿಯುವ ನೀರಿಗೆ ಅನುಕೂಲವಾಗುವ ಹಿತದೃಷ್ಟಿಯಿಂದ ತುಮಕೂರು ವಿಶ್ವವಿದ್ಯಾನಿಲಯದ ಉದ್ಯಾನವನದ ಮರಗಳಲ್ಲಿ ಕುಲ ಸಚಿವರಾದ ಶ್ರೀಮತಿ ನಾಹೀದಾ ಜಮ್ ಜಮ್ ರವರಿಂದ ನೀರನ್ನು ಶೇಖರಿಸಲಾಯಿತು.

ಇದೇ ಸಂದರ್ಭದಲ್ಲಿ ತುಮಕೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಪರಿಸರ ಮತ್ತು ಪರಿಸರ ವಿಜ್ಞಾನ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಅಧಿಕೃತ ನೂತನ ಯೂಟ್ಯೂಬ್ ಚಾನೆಲ್ ಅನ್ನು ಕುಲಪತಿಗಳಾದ ಪ್ರೊ ಎಂ.ವೆಂಕಟೇಶ್ವರಲು ರವರಿಂದ ಉದ್ಘಾಟಿಸಿದರು.

ಇದೇ ಸಂದರ್ಭದಲ್ಲಿ ತುಮಕೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಪರಿಸರ ಮತ್ತು ಪರಿಸರ ವಿಜ್ಞಾನ ಅಧ್ಯಯನ ಮತ್ತು ಸಂಶೋಧನಾ ವಿಭಾಗ ಆಯೋಜಿಸಿದ್ದ 2025 ನೇ ಜೌಗು ದಿನದ ಅಂಗವಾಗಿ ಗಿಡವನ್ನು ನೆಟ್ಟು ಪ್ರೊ ಎಂ.ವೆಂಕಟೇಶ್ವರಲು ರವರಿಂದ ಮತ್ತು ಕುಲ ಸಚಿವರಾದ ಶ್ರೀಮತಿ ನಾಹೀದಾ ಜಮ್ ಜಮ್ ರವರಿಂದ ಸದರಿ ಕಾರ್ಯಕ್ರಮಕ್ಕೆ ಸಾಕ್ಷಿಯಾಯಿತು.

ವರದಿ: ಸಂತೋಷ್ ಓಬಳ. ಗುಬ್ಬಿ

ತಿಪಟೂರು ತಾಲ್ಲೂಕಿನ ಹೊನ್ನವಳ್ಳಿ ಹೋಬಳಿ ಹಾಲ್ಕುರಿಕೆ ಗ್ರಾಮದ ಹೊರವಲಯದ ಗಂಗೇಬೈಲು ಶ್ರೀ ಜಕ್ಕೆಶ್ವರ ದೇವಾಲಯದ ಬಳಿ ಅಕ್ರಮವಾಗಿ ಗುಂಪುಕಟ್ಟಿಕೊಂಡಿ ಅಂದರ್ ಬಾಹಲ್ ಇಸ್ಪೀಟ್ ಆಡುತ್ತಿದ್ದ ಅಕ್ರಮ ಜೂಜು ಅಡ್ಡೆಯ ಮೇಲೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಹೊನ್ನವಳ್ಳಿ ಪೊಲಿಸ್ ಸಬ್ ಇನ್ಪೆಕ್ಟರ್ ರಾಜೇಶ್ ನೇತೃತ್ವದ ಇಸ್ಪೀಟ್ ಜೂಜಿನಲ್ಲಿ ತೊಡಗಿದ ಸುಮಾರು 4500 ರೂಪಾಯಿ ಹಣ ಹಾಗೂ ಇಸ್ಪೀಟ್ ಎಲೆಗಳು,ಮತ್ತು ಇತರೆ ವಸ್ತುಗಳನ್ನ ವಶಪಡಿಸಿಕೊಂಡಿದ್ದು,
ಇಸ್ಪೀಟ್ ನಲ್ಲಿ ತೊಡಗಿದ್ದ ಹಾಲ್ಕುರಿಕೆ ಗ್ರಾಮದ ಪ್ರದೀಪ್,ಕರಿಯಪ್ಪ.ಸಿರಾಜ್ ಅಹಮದ್,ಮಲ್ಲಿಕಾರ್ಜುನ್.ನಾಗರಾಜು,ಶಿವರಾಜ್,ಶಿವಪ್ಪ,ಗಂಗಧರ್ ನಾಯ್ಕ್ ಇತರರನ್ನ ಬಂಧಿಸಲಾಗಿದೆ.

ವರದಿ :ಮಂಜುನಾಥಗ ಹಾಲ್ಕುರಿಕೆ

ತಿಪಟೂರು : ಅನ್ಯ ವರ್ಗದ ಹಾಗೂ ಧರ್ಮದ ಧಾರ್ಮೀಕ ನಂಬಿಕೆಗಳಿಗೆ ಧಕ್ಕೆ ಬರುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಾಕಾರಿ ಪೋಸ್ಟ್ಗಳನ್ನು ಹಂಚಿಕೆ ಮಾಡುತ್ತಿದ್ದು ಅನ್ಯಕೋಮಿನ ವ್ಯಕ್ತಿಯನ್ನು ತಿಪಟೂರು ನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ,
ನಗರದ ಗಾಂಧೀನಗರ ನಿವಾಸಿ ಉಮರ್ ಫಾರಕ್ (41) ಲಾರಿ ಚಾಲಕನಾಗಿದ್ದು ಫೇಸ್‌ಬುಕ್‌ನಲ್ಲಿ ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿ ಪೋಸ್ಟ್ಗಳನ್ನು ಹಾಕಲಾಗುತ್ತಿದ್ದು ಹಾಗೂ ವಿಕೃತ್ತಿಯನ್ನು ಮೆರೆದಿದ್ದು ಅನ್ಯ ಧರ್ಮಗಳ ಬಗ್ಗೆ ವಿರೋಧಿ ಗುಂಪುಗಳನ್ನು ರಚನೆ ಮಾಡಿರುವುದನ್ನು ಗಮನಿಸಿದ ಪೋಲೀಸ್ ಇಲಾಖೆ ಸ್ವಯಂ ಪ್ರೇರಿತವಾಗಿ ದೂರು ದಾಖಾಲಿಸಿಕೊಂಡು ಬಿಎನ್‌ಎಸ್ ರೀತ್ಯಾ ಕಲಂ 299ರಲ್ಲಿ ಬಂಧಿಸಿ ನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ವರದಿ :ಮಂಜುನಾಥ್ ಹಾಲ್ಕುರಿಕೆ

ತಿಪಟೂರು ನಗರದ ಕಲ್ಪತರು ಕ್ರೀಡಾಂಗಣದಲ್ಲಿ ನಡೆದ ರಾಷ್ಟ್ರೀಯ ಹೊನಲು ಬೆಳಕಿನ ಆಹ್ವಾನಿತ ಪುರುಷ ಹಾಗೂ ಮಹಿಳೆಯರ ವಾಲಿಬಾಲ್ ಕ್ರೀಡಾಕೂಟದಲ್ಲಿ ರಣರೋಚಕವಾಗಿ ನಡೆದ ಫೈನಲ್ ಪಂದ್ಯಾವಳಿಯಲ್ಲಿ ಕೇರಳ ಪೊಲೀಸ್ ಪುರುಷ ಹಾಗೂ ಮಹಿಳಾ ತಂಡಗಳು ತಿಪಟೂರು ಕಪ್ ಚಾಂಪಿಯನ್ಸ್ ಪಟ್ಟಮುಡಿಗೇರಿಸಿಕೊಂಡಿವೆ.

ತಿಪಟೂರು ಕ್ರೀಡಾಂಗಣದ ನಡೆದ ಮಹಿಳೆಯರ ವಿಭಾಗದ ಫೈನಲ್ ಪಂದ್ಯಾವಳಿಯಲ್ಲಿ ಕೇರಳ ಪೊಲೀಸ್ ಹಾಗೂ ಸೌತ್ ವೆಸ್ಟ್ರನ್ ರೈಲ್ವೇಸ್ ನಡುವೆ ರೋಚಕ ಹಣಹಣಿ ನಡೆದು ಕೇರಳ ಪೊಲೀಸ್ ಮಹಿಳಾ ತಂಡ ಜಯಗಳಿಸುವ ಮೂಲಕ ಟ್ರೋಫಿ ಮುಡಿಗೇರಿಕೊಂಡರೆ, ಸೌತ್ ವೆಸ್ಟ್ರನ್ ರೈಲ್ವೇಸ್ ಮಹಿಳಾ ತಂಡ 2 ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು, ಪುರುಷರ ವಿಭಾಗದಲ್ಲಿ ನಡೆದ ಫೈನಲ್ ಪಂದ್ಯಾವಳಿಯಲ್ಲಿ ಸ್ಪಂದನಾ ಕರ್ನಾಟಕ ಹಾಗೂ ಕೇರಳ ಪೊಲೀಸ್ ತಂಡಗಳ ನಡುವೆ ನಡೆದ ರಣರೋಚಕ ಹಣಹಣಿಯಲ್ಲಿ ಕೇರಳ ಪೊಲೀಸ್ ತಂಡ ಜಯಗಳಿಸುವ ಮೂಲಕ ಟ್ರೋಫಿ ಮುಡಿಗೇರಿಕೊಂಡಿತು.ಸ್ಪಂದನಾ ಕರ್ನಾಟಕ 2ನೇ ಸ್ಥಾನ ಪಡೆಯಿತು,
ವಿಜೇತ ತಂಡಗಳಿಗೆ ಕರ್ನಾಟಕ ರಾಜ್ಯ ಯುವಜನ ಹಾಗೂ ಕ್ರೀಡಾ ಇಲಾಖೆ ಆಯುಕ್ತ ಚೇತನ್ ಹಾಗೂ ಶಾಸಕ ಕೆ.ಷಡಕ್ಷರಿ,ಟ್ರೋಫಿ ಹಾಗೂ ನಗದು ಬಹುಮಾನ ವಿತರಿಸಿದರು.


ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಕೆ.ಷಡಕ್ಷರಿ ಮಾತನಾಡಿ ತಿಪಟೂರಿನಲ್ಲಿ ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಸಾರ್ವಜನಿಕರು ಸದಾ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ, ಸ್ಪಂದನಾ ಕ್ರೀಡಾ ಹಾಗೂ ಸಾಂಸ್ಕೃತಿಕ ಸಂಘ ರಾಷ್ಟ್ರೀಯ ಮಟ್ಟದ ವಾಲಿಬಾಲ್ ಕ್ರೀಡಾಕೂಟವನ್ನ ಉತ್ತಮವಾಗಿ ಆಯೋಜನೆ ಮಾಡಿದೆ,ತಿಪಟೂರಿನಲ್ಲಿ ಇನ್ನೂ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಕ್ರೀಡಾಕೂಟಗಳು ನಡೆಯಲಿ ಆ ಮೂಲಕ ನಮ್ಮ ಯುವಕರು ಹಾಗೂ ಮಕ್ಕಳಿಗೆ ಕ್ರೀಡಾಸ್ಪೂರ್ತಿ ದೊರೆಯಲಿ, ತಿಪಟೂರು ಕಲ್ಪತರು ಕ್ರೀಡಾಂಗಣ ದ ಅಭಿವೃದ್ದಿಗೆ ಆಧ್ಯತೆ ನೀಡಬೇಕಿದ್ದು, ಒಳಾಂಗಣ ಕ್ರೀಡಾಗಣಕ್ಕೆ 3ಕೋಟಿ ಹಣ ಮುಂಜೂರಾಗಿದ್ದು ಶೀಘ್ರದಲ್ಲೆ ಕಾಮಗಾರಿ ಆರಂಭಿಸಲಾಗುವುದು, ನೆನೆಗುದಿಗೆ ಬಿದ್ದಿತುವ ವಾಲಿಬಾಲ್ ,ಕ್ರೀಡಾಂಗಣ,ಸೇರಿದಂತೆ ಇತರೆ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು, ಕರ್ನಾಟಕ ರಾಜ್ಯ ಯುವಜನ ಮತ್ತು ಕ್ರೀಡಾ ಇಲಾಖೆ ಆಯುಕ್ತ ಚೇತನ್ ನಮ್ಮ ಊರಿನವರಾಗಿದ್ದು ತಮ್ಮ ಅಧಿಕಾರ ಅವಧಿಯಲ್ಲಿ ತಿಪಟೂರಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಿ ಎಂದು ತಿಳಿಸಿದರು
ಕರ್ನಾಟಕ ರಾಜ್ಯ ಯುವಜನ ಮತ್ತು ಕ್ರೀಡಾ ಇಲಾಖೆ ಆಯುಕ್ತ ಚೇತನ್ ಮಾತನಾಡಿ ತಿಪಟೂರು ಯಾವಾಗಲೂ ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿದೆ,ಕ್ರೀಡಾಕೂಟದಲ್ಲಿ ಕ್ರೀಡಾಸ್ಪೂರ್ತಿಯಿಂದ ಆಟವಾಡಿ,ನಮ್ಮ ಇಲಾಖೆಯಿಂದ ದೊರೆಯುವ ಸವಲತ್ತುಗಳನ್ನ ಹೆಚ್ಚಿನ ಪ್ರಮಾಣದಲ್ಲಿ ನೀಡುವ ಪ್ರಯತ್ನ ಮಾಡುವುದಾಗಿ ತಿಳಿಸಿದರು
ಕಾರ್ಯಕ್ರಮದಲ್ಲಿ ಖ್ಯಾತವೈದ್ಯರಾದ ಡಾ//ಶ್ರೀಧರ್ ಡಾ//ವಿವೇಚನ್, ಯುವಕಾಂಗ್ರೇಸ್ ಮುಖಂಡ ನಿಖಿಲ್ ರಾಜಣ್ಣ,ಪಲ್ಲೆಂದ ವಿಜಯ್ ಕುಮಾರ್,ಮಾಜಿ ನಗರಸಭಾ ಉಪಾಧ್ಯಕ್ಷ ಶಿವಪ್ರಸಾದ್, ಒಹಿಲಾ ಗಂಗಾಧರ್,ಲಾಯರ್ ನಂದಕುಮಾರ್,ಸೇರಿದಂತೆ ಅನೇಕರು ಉಪಸ್ಥಿತರಿದರು

ವರದಿ :ಮಂಜುನಾಥ್ ಹಾಲ್ಕುರಿಕೆ

ತಿಪಟೂರು : ಚುನಾವಣೆಯ ಮತದಾರದ ಪಟ್ಟಿಯಲ್ಲಿ ಹೆಸರನ್ನು ವಜಾಗೊಳಿಸಿರುವ ಹಿನ್ನಲೆಯಲ್ಲಿ ಷೇರುದಾರರು ಹಾಗೂ ಕಾರ್ಯದರ್ಶಿ ಮಧ್ಯೆ ಗಲಾಟೆ ಗದ್ದಲ ನಡೆದ ಘಟನೆ ತಾಲ್ಲೂಕಿನ ಕಸಬಾ ಹೋಬಳಿಯ ಮಡೆನೂರು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಶನಿವಾರ ನಡೆದಿದೆ.ಸಂಘದ ಆಡಳಿತ ಮಂಡಳಿಯ ಚುನಾವಣೆಗಾಗಿ ಫೆ ೧೩ರಿಂದ ಚುನಾವಣಾ ಪ್ರಕ್ರೀಯೆಯು ನಡೆಯುತ್ತಿದ್ದ ಹಿನ್ನಲೆಯಲ್ಲಿ ನಾಮಪತ್ರ ಸಲ್ಲಿಸಲು ಹೋದ ಸಂದರ್ಭದಲ್ಲಿ ಷೇರುದಾರರಾದ ರಘುವೀರ್, ಸತೀಶ್ ಇನ್ನೂ ಮುಂತಾದವರ ಹೆಸರುಗಳನ್ನು ಚುನಾವಣೆಯ ಮತದಾರ ಪಟ್ಟಿಯಿಂದ ಹೆಸರನ್ನು ಹೊರತೆಗೆದ ಹಿನ್ನಲೆಯಲ್ಲಿ ಕಾರ್ಯದರ್ಶಿ ಹಾಗೂ ಷೇರುದಾರರ ಮಧ್ಯೆ ವಾಗ್ವಾದ, ಗಲಾಟೆ ನಡೆದು ಕೈ ಕೈ ಮಿಲಾಯಿಸುವ ಹಂತಕ್ಕೆ ಕಾರಣವಾಯಿತು.ಷೇರುದಾರ ರಘುವೀರ್ ಮಾತನಾಡಿ ಸಂಘದಲ್ಲಿ ನಡೆಯುವ ವಾರ್ಷಿಕ ಸಭೆಯಲ್ಲಿ ಭಾಗವಹಿಸಿದ್ದು ನಾಲ್ಕು ವಾರ್ಷಿಕ ಸಬೆಗೆ ಸಹಿ ಮಾಡಿರುತ್ತೇನೆ ಆದರೂ ಚುನಾವಣಾ ಮತದಾರ ಪಟ್ಟಿಯಿಂದ ಹೆಸರನ್ನು ತೆಗೆಯಲಾಗಿದೆ. ಇದರಿಂದ ನಾವುಗಳು ಚುನಾವಣಾ ಪ್ರಕ್ರೀಯೆಯಲ್ಲಿ ಭಾಗಿಯಾಗಲು ಸಾದ್ಯವಾಗುತ್ತಿಲ್ಲ ಹಾಗೂ ಮತದಾನ ಮಾಡಲು ಸಾದ್ಯವಾಗುತ್ತಿಲ್ಲ ಇದನ್ನು ಪ್ರಶ್ನಿಸಿದರೆ ನಮ್ಮಲ್ಲಿ ಕಾರ್ಯದರ್ಶಿಯು ಹಾಗೂ ಆಡಳಿತ ಮಂಡಳಿಯ ಸದಸ್ಯರು ದೌರ್ಜನ್ಯ ಮಾಡುತ್ತಿದ್ದಾರೆ ಈಗಾಗಲೇ ನಾವುಗಳು ಸಹಕಾರ ಸಂಘಗಳ ನಿಭಂದಕರಿಗೂ ಸಹ ದೂರು ಸಲ್ಲಿಸಲಾಗಿದೆ ಎಂದರು.ಗ್ರಾಮಸ್ಥ ನವೀನ ಮಾತನಾಡಿ ಕಳೆದ ೧೦ ವರ್ಷಗಳಿಂದ ಸಂಘದ ಸದಸ್ಯತ್ವವನ್ನು ಪಡೆಯಲು ಅಂಗಲಾಚುತ್ತಿದ್ದು ನಮ್ಮಿಂದ ಪಹಣಿ, ಆಧಾರ್ ಕಾರ್ಡ್, ಪೋಟೋಗಳನ್ನು ಮೂರು ಬಾರಿ ನೀಡಿದ್ದು ಸದಸ್ಯತ್ವದ ಹಣವನ್ನು ಸಹ ನೀಡಿದದ್ದರೂ ಇಲ್ಲಿಯವರೆಗೂ ಸಹ ನಮ್ಮ ಸದಸ್ಯತ್ವವನ್ನು ನೀಡಲು ನಿರಾಕರಿಸುತ್ತಿದ್ದಾರೆ ನ್ಯಾಯ ಸಮ್ಮತವಾಗಿ ಕೇಳಿದರೆ ನಾಳೆ ಎಂಬುವ ಮಾತುಗಳನ್ನು ನೀಡುತ್ತಾ ಉದಾಸೀನ ಮಾಡುತ್ತಿದ್ದ ನಾವುಗಳು ರೈತರಾಗಿದ್ದು ಪಹಣಿದಾರರಾಗಿದ್ದರೂ ನಮ್ಮಸಂಘದಲ್ಲಿ ಷೇರು ಪಡೆಯಲು ಸಾಧ್ಯವಾಗದಂತಹ ಸ್ಥಿತಿಯನ್ನು ಉಂಟು ಮಾಡಿದ್ದಾರೆ ಇದೇ ರೀತಿಯಲ್ಲಿ ಇನ್ನೂ ಹಲವಾರು ಗ್ರಾಮಸ್ಥರು ಸಂಘದಿಂದ ಅನ್ಯಾಯಕ್ಕೆ ಒಳಗಾಗಿದ್ದಾರೆ ಎಂದರು.

ವರದಿ: ಸಂತೋಷ್ ಓಬಳ. ಗುಬ್ಬಿ

ತಿಪಟೂರು ನಗರದ ಕಲ್ಪತರು ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹೊನಲು ಬೆಳಕಿನ ಪುರುಷ ಮಹಿಳೆಯರ ವಾಲಿಬಾಲ್ ಕ್ರೀಡಾಕೂಟದ 3ನೇ ದಿನದ ಪಂದ್ಯಾವಳಿಯನ್ನ ಜೆಡಿಎಸ್ ಮುಖಂಡ ಎನ್.ಆರ್ ಸಂತೋಷ್ ಉದ್ಘಾಟಿಸಿದರು


ವಾಲಿಬಾಲ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದ ಎನ್.ಆರ್ ಸಂತೋಷ್ ಕ್ರೀಡೆ ಮನುಷ್ಯನ ಆರೋಗ್ಯಕ್ಕೆ ಸಹಕಾರಿ,ದೇಹ ಸದೃಡವಾಗಿದರೆ,ಮನಸ್ಸು,ಆರೋಗ್ಯವಾಗುತ್ತದೆ ಆದರಿಂದ ಕ್ರೀಡೆಗಳಿಗೆ ಹೆಚ್ಚು ಆಸಕ್ತ ಬೆಳಸಿಕೊಳ್ಳಬೇಕು.ತಿಪಟೂರು ಕ್ರೀಡೆಗೆ ಪ್ರೋತ್ಸಹ ನೀಡುತ್ತಾ ಬಂದಿರುವ ಊರು. ನಮ್ಮ ಜನ್ಮ ಭೂಮಿ ತಿಪಟೂರು ಕರ್ಮಭೂಮಿ ಅರಸೀಕೆರೆ,ಜನರ ಜೀವನಾಡಿ ಕೊಬ್ಬರಿ,ಕೊಬ್ಬರಿಗೆ ಜೀಯೋ ಟ್ಯಾಗ್ ದೊರೆಯುವಂತೆ ಹೋರಾಟ ಮಾಡಬೇಕು, ನಮ್ಮ ಕೊಬ್ಬರಿಗೆ ಜಿಯೋ ಟ್ಯಾಗ್ ದೊರೆತರೆ ಬೆಲೆ ಸ್ಥಿರತೆ ದೊರೆಯುತ್ತದೆ, ಈ ನಿಟ್ಟಿನಲ್ಲಿ ನಾವೂ ಕೆಲಸ ಮಾಡೋಣ,ನಮ್ಮ ಸಹಕಾರ ಯಾವಾಲೂ ನಿಮ್ಮ ಜೊತೆಇರುತ್ತೆ,ತಿಪಟೂರು ಜಿಲ್ಲಾ ಕೇಂದ್ರವಾಗುವ ಅರ್ಹತೆಯಿಂದು.ಕೆಲವೇ ವರ್ಷಗಳಲ್ಲಿ ತಿಪಟೂರು ಜಿಲ್ಲಾಕೇಂದ್ರವಾಗುವ ಸಂಶವಿಲ್ಲ,ನಮ್ಮ ಜನನಾಯಕರ ಇಚ್ಚಾಶಕ್ತಿಯ ಕೊರತೆಯಿಂದ ಅರ್ಹತೆಇದ್ದರೂ ಜಿಲ್ಲಾಸ್ಥಾನಮಾನ ದೊರೆಯಲು ಸಾಧ್ಯವಾಗಿಲ್ಲ.ತಿಪಟೂರು ಅರಸೀಕೆರೆಯಲ್ಲಿ ಹೆಚ್ಚು ಹೆಚ್ಚು ಉನ್ನತ ವ್ಯಾಸಂಗದ ಶಾಲಾಕಾಲೇಜುಗಳು ಸ್ಥಾಪನೆತಾಗಬೇಕು, ನಮ್ಮ ಗ್ರಾಮೀಣ ಭಾಗದ ಮಕ್ಕಳು ಹೆಚ್ಚು ಹೆಚ್ಚು ಐಎಎಸ್.ಕೆಎಎಸ್ ಸ್ಥಾನಗಳನ್ನ ಪಡೆಯುವಂತ್ತಾದಲಿ ಎಂದು ತಿಳಿಸಿದರು


ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಶ್ರೀಮತಿ ಯಮುನಾ ಧರಣೇಶ್,ಅಖಿಲ ಭಾರತೀಯ ವೀರಶೈವ ಮಹಾಸಭಾ ಹಾಸನ ಜಿಲ್ಲಾಧ್ಯಕ್ಷ ನವಿಲೆ ಪರಮೇಶ್.ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಯ್ಯ,ನಗರಸಭಾ ಸದಸ್ಯರಾದ ರಾಮ್ ಮೋಹನ್.ಶಶಿಕಿರಣ್.ಮುಖಂಡರಾದ, ವೋಡೊ ಪೋನ್ ಚಂದ್ರು,ರೈತ ಸಂಘದ ಮುಖಂಡ ಯೋಗನಂದಮೂರ್ತಿ ಮುಂತ್ತಾದವರು ಉಪಸ್ಥಿತರಿದರು

ವರದಿ :ಮಂಜುನಾಥ್ ಹಾಲ್ಕುರಿಕೆ

ತಿಪಟೂರು ನಗರದ ಕಲ್ಪತರು ಕ್ರೀಡಾಂಗಣದಲ್ಲಿ ಕರ್ನಾಟಕ ಆದಿಜಾಂಬವ ಅಭಿವೃದ್ದಿ ನಿಗಮದ ಫಲಾನುಭವಿಗಳಿಗೆ ಪಂಪು ಮೋಟರ್ ಹಾಗೂ ಪರಿಕರಗಳನ್ನ ಶಾಸಕ ಕೆ.ಷಡಕ್ಷರಿ ವಿತರಣೆ ಮಾಡಿದರು

ಪಂಪ್ ಸೇಟ್ ಪರಿಕರಗಳನ್ನ ವಿತರಣೆ ಮಾಡಿ ಮಾತನಾಡಿದ ಶಾಸಕ ಕೆ.ಷಡಕ್ಷರಿ ಸರ್ಕಾರ ಹಲವಾರು ಯೋಜನೆಗಳನ್ನ ರೂಪಿಸಿದೆ, ಸರ್ಕಾರದ ಯೋಜನೆಗಳನ್ನ ಫಲಾನುಭವಿಗಳು ಸದ್ಬಳಕೆ ಮಾಡಿಕೊಳ್ಳಬೇಕು,ಸರ್ಕಾರದ ಯೋಜನೆಗಳು ಸದ್ಬಳಕೆಯಾದಾಗ ಮಾತ್ರ, ಸರ್ಕಾರದ ಉದೇಶ ಸಾರ್ಥಕವಾಗುತ್ತದೆ. ಕರ್ನಾಟಕ ಆದಿಜಾಂಬವ ಅಭಿವೃದ್ದಿ ನಿಗಮದಿಂದ 2021 -22ನೇ ಸಾಲಿನ ಫಲಾನುಭವಿಗಳಿಗೆ ಸವಲತ್ತು ವಿತರಿಸಲಾಗಿದೆ,ಪ್ರಕರಣ ಕೋರ್ಟ್ ನಲ್ಲಿ ಇದ್ದಕಾರಣಸವಲತ್ತು ವಿತರಣೆ ಸಾಧ್ಯವಾಗಿರಲ್ಲಿಲ್ಲ ಕೋರ್ಟ್ ಪ್ರಕರಣ ವಿತ್ಯಾರ್ಥವಾದ ಕಾರಣ,ಪಂಪು ಮೋಟರ್ ಪರಿಕರಗಳ ವಿತರಣೆ ಮಾಡಲಾಗಿದೆ, ಫಲಾನುಭವಿಗಳ ಯೋಜನೆ ಸದ್ಬಳಕೆ,ಮಾಡಿಕೊಳ್ಳಿ ಎಂದು ತಿಳಿಸಿದರು.


ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷರಾದ ಶ್ರೀಮತಿ ಯಮುನಾಧರಣೇಶ್, ಕರ್ನಾಟಕ ಆದಿಜಾಂಬವ ಅಭಿವೃದ್ದಿ ನಿಗಮದ ಫಿಲ್ಡ್ ಆಫಿಸರ್,ರಾಜಶೇಖರ್,ಮಾಜಿ ಜಿಲ್ಲಾಪಂಚಾಯ್ತಿ ಸದಸ್ಯ ಕೆ.ಎಂ ಶಾಂತಪ್ಪ,ಡಿಎಸ್ಎಸ್ ಪೆದ್ದಿಹಳ್ಳಿ ನರಸಿಂಹಯ್ಯ,ಹರೀಶ್ ಗೌಡ,ಶಿವಕುಮಾರ್ ರಮೇಶ್ ಸೇರಿದಂತೆ ಯೋಜನೆಫಲಾನುಭವಿಗಳು ಉಪಸ್ಥಿತರು.

ವರದಿ :ಮಂಜುನಾಥ್ ಹಾಲ್ಕುರಿಕೆ


ತಿಪಟೂರು : ನಗರದ ತಾಲೂಕು ಆಡಳಿತ ಕಛೇರಿಯಲ್ಲಿ 286ನೇ ಸಂತ ಸೇವಾಲಾಲ್ ಮಹಾರಾಜರ ಜಯಂತಿ ಕಾರ್ಯಕ್ರಮವನ್ನು ಆಚರಣೆ ಮಾಡಲಾಯಿತು.


ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಕೆ.ಷಡಕ್ಷರಿ ಯಾವ ಸಮಾಜ ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಬೆಳವಣಿಗೆ ಆಗುವುದಿಲ್ಲವೋ ಆ ಸಮಾಜ ಮುಖ್ಯ ವಾಹಿನಿಗೆ ಬರುವುದಿಲ್ಲ. ಆದ್ದರಿಂದ ಎಲ್ಲಾ ಸಮಾಜದವರೂ ಕಡ್ಡಾಯವಾಗಿ ಶಿಕ್ಷಣಕ್ಕೆ ಒತ್ತು ನೀಡಬೇಕು ಸೇವಾಲಾಲ್ ಲಂಬಾಣಿ ತಾಂಡ್ಯಾಗಳನ್ನು ಕಂದಾಯ ಗ್ರಾಮ ಮಾಡಿ ಹಕ್ಕು ಪತ್ರ ವಿತರಿಸಲು ತಹಸೀಲ್ದಾರರಿಗೆ ಸೂಚಿಸಿದ್ದೇನೆ. ಸೇವಾಲಾಲ್ ಸಮಾಜವೂ ಕೂಡ ಆರ್ಥಿಕವಾಗಿ ಬೆಳೆಯುವ ಶಕ್ತಿ ಪಡೆದುಕೊಳ್ಳಬೇಕು ಎಂದರು.
ಸಂತ ಸೇವಾಲಾಲ್ ಜಯಂತಿಯನ್ನು ಸರಕಾರದ ಮಟ್ಟದಲ್ಲಿ ಆಚರಿಸಲಾಗುತ್ತಿದೆ .ಪ್ರತಿಯೊಂದು ಸಮಾಜದಲ್ಲಿ ಸಮಾಜದ ಏಳಿಗೆಗಾಗಿ ದುಡಿದ ಮಹನೀಯರ ಸೇವೆ ಗುರ್ತಿಸಿ, ಅವರು ಸಮಾಜಕ್ಕೆ ನೀಡಿದ ಕೊಡುಗೆ ಹಾಗೂ ಅವರ ಸಾಧನೆ ಮುಂದಿನ ಪೀಳಿಗೆಗೆ ದಾರಿ ದೀಪವಾಗ ಬೇಕು ಅವರ ಆದರ್ಶದ ದಾರಿಯಲ್ಲಿ ನಡೆಯಬೇಕು ಎನ್ನುವುದು ಸಾರ್ಕಾರದ ಉದೇಶ,ದಾರ್ಶನಿಕರ ತತ್ವಗಳು ಸರ್ವ ಸಮಾಜಕ್ಕೂ ಬೆಳಕಾಗ ಬಲವು,ನಾವು ಮೊದಲು ಕೇವಲ ಬಸವಜಯಂತಿ ಮಾತ್ರ ಸರಕಾರದ ಮಟ್ಟದಲ್ಲಿ ಆಚರಿಸಲಾಗುತ್ತಿತ್ತು. ಎಲ್ಲ ಧರ್ಮ ಹಾಗೂ ಸಮುದಾಯಗಳ ಮಹನೀಯರ ಆದರ್ಶಗಳು ಹಾಗೂ ಅವರು ಸಮಾಜಕ್ಕೆ ನೀಡಿದ ಕೊಡುಗೆಯನ್ನು ಈಗಿನ ಪೀಳಿಗೆಯವರಿಗೆ ತಿಳಿಯಪಡಿಸಲು ಈಗ ಜಯಂತಿಗಳನ್ನು ಆಚರಿಸಲಾಗುತ್ತಿದ್ದು, ರಜೆ ನೀಡದೆ ಕಾಯಕ ಮಾಡಲು ತಿಳಿಸಲಾಗಿದೆ ಎಂದರು.
ತಹಸೀಲ್ದಾರ್ ಪವನ್‌ಕುಮಾರ್ ಮಾತನಾಡಿ ವಿಶಿಷ್ಟವಾದ ಸಲೆ ಮತ್ತು ಸಂಸ್ಕೃತಿಯುಳ್ಳ ಬಂಜಾರ, ಲಂಬಾಣಿ ಸಮಾಜದವರು ಹೆಚ್ಚು ಜನರು ಸೇರಿ ಸೇವಾಲಾಲ್ ಜಯಂತಿಯನ್ನು ಆಚರಿಸಲು ಮುಂದೆಬರಬೇಕು. ಇಲ್ಲಿ ವ್ಯಕ್ತವಾಗುವ ಸಮುದಾಯದ ಅಭಿಪ್ರಾಯಗಳಿಗೆ ಆ ಸಮುದಾಯಕ್ಕೆ ಬೇಕಾಗುವು ಸವಲತ್ತುಗಳ ಬಗ್ಗೆ ಸರಕಾರ ತಿಳಿದುಕೊಂಡು ಅವರಿಗೆ ಹೆಚ್ಚಿನ ನೆರವು ಒದಗಿಸಲು ಅನುಕೂಲವಾಗುತ್ತದೆ ಎಂದರು.


ಸಮಾಜನ ಅಧ್ಯಕ್ಷ ಸಿದ್ದಾನಾಯಕ್ ಮಾತನಾಡಿ ಭಾರತದಲ್ಲಿ ಸುಮಾರು 10ರಿಂದ 12ಕೋಟಿಯಷ್ಟು ನಮ್ಮ ಸಮುದಾಯದ ಜನಸಂಖ್ಯೆ ಇದ್ದು ಅತಿದೊಡ್ಡ ಸಮಾಜ ಎನಿಸಿದೆ. ಸ್ಥಳೀಯ 12 ತಾಂಡ್ಯಾಗಳ ಕುಂದು ಕೊರತೆಗಳನ್ನು ಸರಕಾರ ಆಲಿಸಬೇಕು. ತಾಂಡ್ಯಾಗಳಿಗೆ ಹಕ್ಕುಪತ್ರ ನೀಡಿ ಕಂದಾಯ ಗ್ರಾಮಗಳಾಗಿ ಪರಿವರ್ತಿಸಬೇಕು. ನೀರು, ವಿದ್ಯುತ್, ಗ್ರಂಥಾಲಯ, ಬ್ಯಾಂಕ್ ಇತ್ಯಾದಿ ಸೌಲಭ್ಯಗಳನ್ನು ಒದಗಿಸಬೇಕು ಎಂದು ಮನವಿ ಮಾಡಿದರು.
ಗ್ರೇಡ್ 2 ತಹಸೀಲ್ದಾರ್ ಜಗನ್ನಾಥ್, ನಗರಸಭಾ ಸದಸ್ಯ ಮಲ್ಲೇಶ್ ನಾಯ್ಕ.ನಿವೃತ್ತ ಶಿಕ್ಷಕರಾದ ರಾಜಕುಮಾರ್ ತಿಮ್ಮಾಪುರ, ರಂಗನಾಯಕ, ಬಿ.ಟಿ.ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
.

ಮಡೇನೂರು ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯ ಮತದಾರದ ಪಟ್ಟಿಯಲ್ಲಿ ಹೆಸರನ್ನು ವಜಾಗೊಳಿಸಿರುವ ಹಿನ್ನಲೆಯಲ್ಲಿ ಷೇರುದಾರರು ಹಾಗೂ ಕಾರ್ಯದರ್ಶಿ ಸದಸ್ಯರ ಮಧ್ಯೆ ಗಲಾಟೆ ಗದ್ದಲ ನಡೆದ ಘಟನೆ ತಾಲ್ಲೂಕಿನ ಕಸಬಾ ಹೋಬಳಿಯ ಮಡೆನೂರು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಶನಿವಾರ ನಡೆದಿದೆ.

ಸಂಘದ ಆಡಳಿತ ಮಂಡಳಿಯ ಚುನಾವಣೆಗಾಗಿ ಫೆ 13ರಿಂದ ಚುನಾವಣಾ ಪ್ರಕ್ರೀಯೆಯು ನಡೆಯುತ್ತಿದ್ದ ಹಿನ್ನಲೆಯಲ್ಲಿ ನಾಮಪತ್ರ ಸಲ್ಲಿಸಲು ಹೋದ ಸಂದರ್ಭದಲ್ಲಿ ಷೇರುದಾರರಾದ ರಘುವೀರ್, ಸತೀಶ್ ಇನ್ನೂ ಮುಂತಾದವರ ಹೆಸರುಗಳನ್ನು ಚುನಾವಣೆಯ ಮತದಾರ ಪಟ್ಟಿಯಿಂದ ಹೆಸರನ್ನು ಹೊರತೆಗೆದ ಹಿನ್ನಲೆಯಲ್ಲಿ ಕಾರ್ಯದರ್ಶಿ ಹಾಗೂ ಷೇರುದಾರರ ಮಧ್ಯೆ ವಾಗ್ವಾದ, ಗಲಾಟೆ ನಡೆದು ಕೈ ಕೈ ಮಿಲಾಯಿಸುವ ಹಂತಕ್ಕೆ ಕಾರಣವಾಯಿತು.
ಷೇರುದಾರ ರಘುವೀರ್ ಮಾತನಾಡಿ ಸಂಘದಲ್ಲಿ ನಡೆಯುವ ವಾರ್ಷಿಕ ಸಭೆಯಲ್ಲಿ ಭಾಗವಹಿಸಿದ್ದು ನಾಲ್ಕು ವಾರ್ಷಿಕ ಸಬೆಗೆ ಸಹಿ ಮಾಡಿರುತ್ತೇನೆ ಆದರೂ ಚುನಾವಣಾ ಮತದಾರ ಪಟ್ಟಿಯಿಂದ ಹೆಸರನ್ನು ತೆಗೆಯಲಾಗಿದೆ. ಇದರಿಂದ ನಾವುಗಳು ಚುನಾವಣಾ ಪ್ರಕ್ರೀಯೆಯಲ್ಲಿ ಭಾಗಿಯಾಗಲು ಸಾದ್ಯವಾಗುತ್ತಿಲ್ಲ ಹಾಗೂ ಮತದಾನ ಮಾಡಲು ಸಾದ್ಯವಾಗುತ್ತಿಲ್ಲ ಇದನ್ನು ಪ್ರಶ್ನಿಸಿದರೆ ನಮ್ಮಲ್ಲಿ ಕಾರ್ಯದರ್ಶಿಯು ಹಾಗೂ ಆಡಳಿತ ಮಂಡಳಿಯ ಸದಸ್ಯರು ದೌರ್ಜನ್ಯ ಮಾಡುತ್ತಿದ್ದಾರೆ ಈಗಾಗಲೇ ನಾವುಗಳು ಸಹಕಾರ ಸಂಘಗಳ ನಿಭಂದಕರಿಗೂ ಸಹ ದೂರು ಸಲ್ಲಿಸಲಾಗಿದೆ ಎಂದರು.
ಗ್ರಾಮಸ್ಥ ನವೀನ ಮಾತನಾಡಿ ಕಳೆದ 10 ವರ್ಷಗಳಿಂದ ಸಂಘದ ಸದಸ್ಯತ್ವವನ್ನು ಪಡೆಯಲು ಅಂಗಲಾಚುತ್ತಿದ್ದು ನಮ್ಮಿಂದ ಪಹಣಿ, ಆಧಾರ್ ಕಾರ್ಡ್, ಪೋಟೋಗಳನ್ನು ಮೂರು ಬಾರಿ ನೀಡಿದ್ದು ಸದಸ್ಯತ್ವದ ಹಣವನ್ನು ಸಹ ನೀಡಿದದ್ದರೂ ಇಲ್ಲಿಯವರೆಗೂ ಸಹ ನಮ್ಮ ಸದಸ್ಯತ್ವವನ್ನು ನೀಡಲು ನಿರಾಕರಿಸುತ್ತಿದ್ದಾರೆ ನ್ಯಾಯ ಸಮ್ಮತವಾಗಿ ಕೇಳಿದರೆ ನಾಳೆ ಎಂಬುವ ಮಾತುಗಳನ್ನು ನೀಡುತ್ತಾ ಉದಾಸೀನ ಮಾಡುತ್ತಿದ್ದ ನಾವುಗಳು ರೈತರಾಗಿದ್ದು ಪಹಣಿದಾರರಾಗಿದ್ದರೂ ನಮ್ಮಸಂಘದಲ್ಲಿ ಷೇರು ಪಡೆಯಲು ಸಾಧ್ಯವಾಗದಂತಹ ಸ್ಥಿತಿಯನ್ನು ಉಂಟು ಮಾಡಿದ್ದಾರೆ ಇದೇ ರೀತಿಯಲ್ಲಿ ಇನ್ನೂ ಹಲವಾರು ಗ್ರಾಮಸ್ಥರು ಸಂಘದಿಂದ ಅನ್ಯಾಯಕ್ಕೆ ಒಳಗಾಗಿದ್ದಾರೆ ಆರೋಪಿಸಿದರು.

ವರದಿ :ಮಂಜುನಾಥ್ ಹಾಲ್ಕುರಿಕೆ

ಸಂತ ಸೇವಾಲಾಲ್ ಮಹಾರಾಜರ 286ನೇ ಜಯಂತಿ ಅಂಗವಾಗಿ ಸಾರ್ವಜನಿಕ ಆಸ್ಪತ್ರೆ ಹಾಗೂ ಯಶಸ್ವಿನಿ ವೃದ್ದಾಶ್ರಮ ಮತ್ತು ಶ್ರೀ ಶಾರದ ವೃದ್ದಾಶ್ರಮದ ವೃದ್ದರಿಗೆ ಹಾಲು ಹಣ್ಣು ಹಾಗೂ ಬ್ರೇಡ್ ವಿತರಣೆ ಮಾಡುವ ಮೂಲಕ ಜಯಂತಿ ಆಚರಿಸಲಾಯಿತು
ಸಾರ್ವಜನಿಕ ಆಸ್ಪತ್ರೆ ಆವರಣ ನಡೆದ ಸಂತ ಸೇವಾಲಾಲ್ ಜಯಂತಿ ಕಾರ್ಯಕ್ರಮ ಉದೇಶಿಸಿ ಮಾತನಾಡಿದ ಮಾಜಿ ಜಿಲ್ಲಾ ಪಂಚಾಯ್ತಿ ಸದಸ್ಯ ಕೆ.ಎಂ ಶಾಂತಪ್ಪ ಸಂತ ಸೇವಾಲಾಲ್ ಮಹಾರಾಜರು ಕಡುಬಡತನದಲ್ಲಿ ಇದ್ದ ಲಂಬಾಣಿ ಸಮಾಜಕ್ಕೆ ಸನ್ಮಾರ್ಗದ ದಾರಿ ತೋರಿದ ಮಹಾಗುರು, ದೇಶದ ಹಲವಾರು ಭಾಗಗಳಲ್ಲಿ ಹಂಚಿಹೋಗಿರುವ ಲಂಬಾಣಿ ಜನಾಂಗ ಶಿಕ್ಷಣದ ಮಾರ್ಗನೀಡಿದರು, ಡಾ//ಬಿ.ಆರ್ ಅಂಬೇಡ್ಕರ್ ರವರು ಸಂವಿಧಾನದಲ್ಲಿಪ್ರತಿಯೊಂದು ಜನಾಂಗಕ್ಕೂ ಸಮಾನವಾಗಿ ಬದುಕುವ ಹಕ್ಕು ನೀಡಿದ್ದಾರೆ,ಎಲ್ಲಾರೂ ಸಮಾಜದಲ್ಲಿ ಉತ್ತಮ ಶಿಕ್ಷಣ ಪಡೆದು ಸಮಾಜದ ಮುಖ್ಯವಾಹಿನಿಯಲ್ಲಿ ಬದುಕಬೇಕು ಎಂದು ತಿಳಿಸಿದರು


ನಿವೃತ್ತ ಶಿಕ್ಷಕರಾದ ಸೋಮಶೇಖರ್ ಮಡೇನೂರು ಮಾತನಾಡಿ ಸಂತಸೇವಾಲಾಲ್ ದೇವಮಾನವರಾಗಿ ಸಮಾಜಕ್ಕೆ ದಾರಿ ತೋರಿದ್ದಾರೆ,ಗುರಿಇಲ್ಲದ ಜನಾಂಗಕ್ಕೆ ಗುರುವಾಗಿ ದಾರಿತೋರಿದರು ತಮ್ಮ ತತ್ವ ಚಿಂತನೆ ಸರ್ವ ಸಮಾಜದ ಅಭ್ಯದಯಕ್ಕೆ ದಾರಿಯಾಗಿದ್ದು, ಲಂಬಾಣಿ ಸಮಾಜ ಹೆಚ್ಚು ಸಂಘಟಿತರಾಗುವ ಮೂಲಕ ಸಮಾಜದ ಮುಖ್ಯವಾಹಿಯಲ್ಲಿ ಬದುಕಬೇಕು ಎಂದು ತಿಳಿಸಿದರು
ತಾಲ್ಲೋಕು ಲಂಬಾಣಿ ಸಮಾಜದ ಅಧ್ಯಕ್ಷ ಬಿ.ಟಿ ಕುಮಾರ್ ಮಾತನಾಡಿ ಲಂಬಾಣಿ ಸಮಾಜದ ಗುರುಗಳಾದ ಸಂತ ಸೇವಾಲಾಲ್ ಮಹಾರಾಜರು ತಮ್ಮ ಚಿಕ್ಕ ವಯಸ್ಸಿನಲ್ಲಿ ದೇಶಪರ್ಯಟನೆ ಮಾಡಿ ಸಮಾಜ ಉಪದೇಶ ನೀಡಿ ಸಮಾಜದ ಸನ್ಮಾರ್ಗಕ್ಕೆ ದಾರಿಯಾಗಿದ್ದಾರೆ ಎಲ್ಲರೂ ಸೇವಾಲಾಲ್ ಜೀ ರವರ ದಾರಿಯಲ್ಲಿ ನಡೆಯೋಣ ಸಮಾಜವನ್ನ ಕಟ್ಟಿಬೆಳೆಸೋಣ ಎಂದು ತಿಳಿಸಿದರು
ಕಾರ್ಯಕ್ರಮದಲ್ಲಿ ಸಮಾಜದ ಮುಖಂಡರಾದ ನಾಗರಾಜು. ಡಿಎಸ್ಎಸ್ ಮುಖಂಡರಾದ ಹರೀಶ್ ಗೌಡ ರಾಜುಬೆಣ್ಣೆನಹಳ್ಳಿ, ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ//ಸ್ವಾಮಿ.ಡಾ//ರಕ್ಷಿತ್ ಗೌಡ.ಡ//ಶಂಕರಪ್ಪ ಬಳೆಕಟ್ಟೆ,ಜೇಮ್ಸ್ ಫೌಡೇಷನ್ ಅಧ್ಯಕ್ಷ ತರಕಾರಿ ಗಂಗಾಧರ್ ಮುಂತ್ತಾದವರು ಉಪಸ್ಥಿತರಿದರು.

ವರದಿ :ಮಂಜುನಾಥ್ ಹಾಲ್ಕುರಿಕೆ

error: Content is protected !!