Year: 2025

ಕೊಲೆಪ್ರಕರಣದಲ್ಲಿ ಯುವಕನ ತಾಯಿಯನ್ನ ಪೊಲೀಸ್ ವಿಚಾರಣೆಗೆ ಒಳಪಡಿಸಿದ ಕಾರಣ ಗಾಬರಿಗೊಳ್ಳಗಾದ ಯುವಕ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ತಿಪಟೂರು ತಾಲ್ಲೋಕಿನ ಕಿಬ್ಬನಹಳ್ಳಿ ಹೋಬಳಿ ಹಟ್ನ ಗ್ರಾಮದ ರೇಣುಕಯ್ಯ 42 ವರ್ಷ ಮೃತ ದುರ್ದೈವಿ.ಕಳೆದ ಅಕ್ಟೋಬರ್ ನಲ್ಲಿ ಹಟ್ನ ಗ್ರಾಮದ ಗೌರಮ್ಮ ಎಂಬ ಮಹಿಳೆಯ ಕೊಲೆ ನಡೆದ್ದಿತ್ತು, ಎನ್ನಲಾಗಿದ್ದು,ಮೃತ ಗೌರಮ್ಮನ ಕೊಲೆ ವಿಚಾರವಾಗಿ ಹಟ್ನ ಗ್ರಾಮದ ಜಯಮ್ಮ ಎಂಬುವವರನ್ನ ಕೆ.ಬಿ ಕ್ರಾಸ್ ಪೊಲೀಸರು ತನಿಖೆಗೆ ಒಳಪಡಿಸಿದ್ದಾರೆ,ತಾಯಿ ಜಯಮ್ಮ ನನ್ನ ತನಿಖೆಗೆ ಒಳಪಡಿಸಿದ ಕಾರಣ,ಗಾಬರಿಗೊಳಗಾದ ಜಯಮ್ಮ ಮಗ ರೇಣುಕಯ್ಯ ಮನೆ ಪಕ್ಕದ ಶೇಡ್ ನಲ್ಲಿ ಡೆತ್ ನೋಟ್ ಬರೆದಿಟ್ಟು, ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.ಸ್ಥಳಕ್ಕೆ ಕೆ.ಬಿ.ಕ್ರಾಸ್ ಪೊಲೀಸ್ ಸಬ್ ಇನ್ಪೆಕ್ಟರ್ ಮಹೇಶ್ ಮೌಳಿ, ತಿಪಟೂರು ಗ್ರಾಮಾಂತರ ವೃತ್ತ ನಿರೀಕ್ಷಕರಾದಚಂದ್ರಶೇಖರ್,ಕುಣಿಗಲ್ ಡಿವೈಎಸ್ಪಿ ಓಂ ಪ್ರಕಾಶ್ ಪರಿಶೀಲನೆ ನಡೆಸಿದ್ದು, ಕೆ.ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗಿದೆ.

ವರದಿ: ಮಂಜುನಾಥ್ ಹಾಲ್ಕುರಿಕೆ

ಕೊಲೆಪ್ರಕರಣದಲ್ಲಿ ಯುವಕನ ತಾಯಿಯನ್ನ ಪೊಲೀಸ್ ವಿಚಾರಣೆಗೆ ಒಳಪಡಿಸಿದ ಕಾರಣ ಗಾಬರಿಗೊಳ್ಳಗಾದ ಯುವಕ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ತಿಪಟೂರು ತಾಲ್ಲೋಕಿನ ಕಿಬ್ಬನಹಳ್ಳಿ ಹೋಬಳಿ ಹಟ್ನ ಗ್ರಾಮದ ರೇಣುಕಯ್ಯ 42 ವರ್ಷ ಮೃತ ದುರ್ದೈವಿ.ಕಳೆದ ಅಕ್ಟೋಬರ್ ನಲ್ಲಿ ಹಟ್ನ ಗ್ರಾಮದ ಗೌರಮ್ಮ ಎಂಬ ಮಹಿಳೆಯ ಕೊಲೆ ನಡೆದ್ದಿತ್ತು, ಎನ್ನಲಾಗಿದ್ದು,ಮೃತ ಗೌರಮ್ಮನ ಕೊಲೆ ವಿಚಾರವಾಗಿ ಹಟ್ನ ಗ್ರಾಮದ ಜಯಮ್ಮ ಎಂಬುವವರನ್ನ ಕೆ.ಬಿ ಕ್ರಾಸ್ ಪೊಲೀಸರು ತನಿಖೆಗೆ ಒಳಪಡಿಸಿದ್ದಾರೆ,ತಾಯಿ ಜಯಮ್ಮ ನನ್ನ ತನಿಖೆಗೆ ಒಳಪಡಿಸಿದ ಕಾರಣ,ಗಾಬರಿಗೊಳಗಾದ ಜಯಮ್ಮ ಮಗ ರೇಣುಕಯ್ಯ ಮನೆ ಪಕ್ಕದ ಶೇಡ್ ನಲ್ಲಿ ಡೆತ್ ನೋಟ್ ಬರೆದಿಟ್ಟು, ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.ಸ್ಥಳಕ್ಕೆ ಕೆ.ಬಿ.ಕ್ರಾಸ್ ಪೊಲೀಸ್ ಸಬ್ ಇನ್ಪೆಕ್ಟರ್ ಮಹೇಶ್ ಮೌಳಿ, ತಿಪಟೂರು ಗ್ರಾಮಾಂತರ ವೃತ್ತ ನಿರೀಕ್ಷಕರಾದಚಂದ್ರಶೇಖರ್,ಕುಣಿಗಲ್ ಡಿವೈಎಸ್ಪಿ ಓಂ ಪ್ರಕಾಶ್ ಪರಿಶೀಲನೆ ನಡೆಸಿದ್ದು, ಕೆ.ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗಿದೆ.

ವರದಿ:ಮಂಜುನಾಥ್ ಹಾಲ್ಕುರಿಕೆ

ತಿಪಟೂರು:ಭಾರತಕಂಡ ಶ್ರೇಷ್ಠ ಸಮಾನತಾವಾದಿ ವಿಶ್ವಜ್ಞಾನಿ ಡಾ// ಬಿ.ಆರ್ ಅಂಬೇಡ್ಕರ್ ರವರು ತಮ್ಮ ಅಗಾಧವಾದ ಅಧ್ಯಯನದ ಮೂಲಕ ವಿಶ್ವಶ್ರೇಷ್ಟ ಸಂವಿಧಾನ ನೀಡಿದ್ದಾರೆ,ಬಹುಸಂಸ್ಕೃತಿಯ ಭಾರತದಲ್ಲಿ ಸರ್ವ ಸಮಾಜಗಳು ಒಟ್ಟಿಗೆ ಬಾಳ್ವೆಮಾಡಲು ಸಂವಿಧಾನದಲ್ಲಿ ಅಡಕವಾಗಿರು ಚಿಂತನೆಗಳೆ ಕಾರಣ ಎಂದು ತಿಳಿಸಿದರು .


ನಗರದ ಕಲ್ಪತರು ಗ್ರ್ಯಾಂಡ್ ಹೋಟೆಲ್ ಸಭಾಂಗಣದಲ್ಲಿ ಗೆಳೆಯರ ಬಳಗ ಮತ್ತು ತಿಪಟೂರು ವಾಯ್ಸ್ ಸಹಯೋಗದಲ್ಲಿ ಸಂವಿಧಾನ ಶಿಲ್ಪಿ ಡಾ//ಬಿ.ಆರ್ ಅಂಬೇಡ್ಕರ್ ಜಯಂತಿ ಅಂಗವಾಗಿ ಆಯೋಜಿಸಿದ ನಮ್ಮೂರ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿದ ನವದೆಹಲಿ ರಂಗಾಯಣದ ರಂಗಕರ್ಮಿ, ಶೃತಿ ಇಂದಿರಾ ಮಾತನಾಡಿ ಸಾಮಾಜಿಕ ವ್ಯವಸ್ಥೆಯಲ್ಲಿ ನಮ್ಮ ಸಂವಿಧಾನ ಸರ್ವಜನರಿಗೂ,ಸಮಾನ ಅವಕಾಶ ನೀಡಿದೆ,ಸಂವಿಧಾನಿಕ ಸವಲತ್ತು ಬಳಸಿಕೊಂಡು ಸಮಾಜದ ಮುಖ್ಯವಾಹಿನಿಯಲ್ಲಿ ಬದುಕುವಂತ್ತಾಗ ಬೇಕು,ನಮ್ಮ ಸರ್ಕಾರಗಳು ಶಿಕ್ಷಣಕ್ಷೇತ್ರಕ್ಕೆ ಹೆಚ್ಚಿನ ಅವಕಾಶ ನೀಡಿದೆ, ಸಾಮಾನ್ಯ ಕುಟುಂಬದಲ್ಲಿ ಬೆಳೆದ,ನಾನೂ ಸಹ ಸರ್ಕಾರದ ವಿದ್ಯಾರ್ಥಿ ವೇತನ ಪಡೆದು ಶಿಕ್ಷಣ ಪಡೆದಿದ್ದೇನೆ,ರಂಗಭೂಮಿಯಲ್ಲಿ ಸೇವೆ ಮಾಡುತ್ತಿದ್ದೇನೆ,ಸಾಮಾಜಿಕ ಬದಲಾವಣೆಗೆ ಶಿಕ್ಷಣವೇ ಕೀಲಿಕೈ ಉತ್ತಮ ಶಿಕ್ಷಣ ಪಡೆದು ಸಾಮಾಜಿಕ ಬದಲಾವಣೆಯಲ್ಲಿ ಕೈ ಜೋಡಿಸಿ ಎಂದು ತಿಳಿಸಿದರು.


ಕಾರ್ಯಕ್ರಮದಲ್ಲಿ ಉಪಸ್ಥಿತರಿದ ಬೆಸ್ಕಾಂ ಇಂಜಿನಿಯರ್ ನರಸಿಂಹಮೂರ್ತಿ ಯಗಚೀಕಟ್ಟೆ ಮಾತನಾಡಿ ಭಾರತದ ಸಂವಿಧಾನ ವಿಶ್ವಶ್ರೇಷ್ಠ ಸಂವಿಧಾನವಾಗಿದ್ದು ಸಮಾಸಮಾಜ ನಿರ್ಮಾಣ ಹಾಗೂ ಸಮಾನತೆಯ ಬದುಕಿಗೆ ದಾರಿ ದೀಪವಾಗಿದೆ,ನಮಗೆ ಹಕ್ಕು ಹಾಗೂ ಸ್ವತಂತ್ರ್ಯದ ಜೊತೆಗೆ ದೇಶಕ್ಕಾಗಿ ನಾವು ಹೊಂದಿರಬೇಕಾದ ಜವಾಬ್ದಾರಿಗಳ ಬಗ್ಗೆಯೂ ಸಹ ತಿಳಿಸಿದ್ದು,ಭಾರತದ ಭವಿಷ್ಯಕ್ಕೆ ಬುದ್ದ ಬಸವ ಅಂಬೇಡ್ಕರ್ ಚಿಂತನೆಗಳೆ ಆಧಾರವಾಗಿದ್ದು ಶಾಂತಿ ಸಹಬಾಳ್ವೆಯಿಂದ ಕೆಲಸ ಮಾಡೋಣ ಎಂದು ತಿಳಿಸಿದರು
ಕಾರ್ಯಕ್ರಮದಲ್ಲಿ ಮಾಜಿ ನಗರಸಭಾ ಸದಸ್ಯ ನಿಜಗುಣ,ಉಪತಹಸೀಲ್ದಾರ್ ರಶ್ಮಿ,ಉಪನ್ಯಾಸಕರಾದ ಎಲ್.ಎಂ ವೆಂಕಟೇಶ್,ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಶಾಂತ್ ಕರೀಕೆರೆ,ತಿಪಟೂರು ವಾಯ್ಸ್ ಹಾಗೂ ತಿಪಟೂರು ಗೆಳೆಯರ ಬಳದಗ ಮುಖ್ಯಸ್ಥ ಎಂ.ಎನ್ ನವೀನ್ ಕುಮಾರ್ ಸಾಹಿತಿ ಡಾ//ಎಸ್.ಕೆ ಮಂಜುನಾಥ್, ಕವಿ ಬಳ್ಳೆಕಟ್ಟೆ ಶಂಕರಪ್ಪ,ಕೇರಾ ಗೌರವಾಧ್ಯಕ್ಷ ಬಾಸ್ಕರ್, ಪ್ರಧಾನ ಕಾರ್ಯದರ್ಶಿ ಧರಣೇಶ್ ಕುಪ್ಪಾಳು,ಡಿಎಸ್ಎಸ್ ಮುಖಂಡ ರಾಜು ಬೆಣ್ಣೆನಹಳ್ಳಿ,ಸೇರಿದಂತೆ ಅನೇಕರು ಉಪಸ್ಥಿತರಿದರು

ವರದಿ:ಮಂಜುನಾಥ್ ಹಾಲ್ಕುರಿಕೆ

ತಿಪಟೂರು ತಾಲ್ಲೋಕಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿಗೆ ದಲಿತರಿಗೆ ನ್ಯಾಯ ದೊರೆಯುತ್ತಿಲ್ಲ ಎಂದು ತಿಪಟೂರಿನಲ್ಲಿ ನಡೆದ ಸಂವಿಧಾನ ಶಿಲ್ಪಿ ಡಾ// ಬಿ.ಆರ್ ಅಂಬೇಡ್ಕರ್ ಜಯಂತಿಯಂದು,ದಲಿತ ಸಂಘಟನೆ ಮುಖಂಡರು ಬಹಿರಂಗ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಮಾಸುವ ಮುನ್ನವೇ ಕಂಚಾಘಟ್ಟ ಗ್ರಾಮದ ದಲಿತರು ನ್ಯಾಯಕ್ಕಾಗಿ ಅರೆ ಬೆತ್ತಲೆ ಪ್ರತಿಭಟನೆ ನಡೆಸಿರುವುದು, ತಾಲ್ಲೋಕಿನ ಕಾನೂನು ಸುವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ, ಎಂದು ಪ್ರತಿಭಟನಾ ನಿರತರು ಆಕ್ರೋಶ ವ್ಯಕ್ತಪಡಿದ್ದಾರೆ.

ತಿಪಟೂರು ತಾಲ್ಲೋಕಿನ ಹಿರೇ ಬಿದಿರೆ ಗ್ರಾಮದ ರಕ್ಷಿತ್ ಎಂಬ ಹುಡುಗ ತಿಪಟೂರು ನಗರದ ಕಂಚಾಘಟ್ಟ ನಗರದವಾಸಿ ರಂಗಸ್ವಾಮಿ ಅವರ ಮಗಳು ಕವನ ಎಂಬ ಯುವತಿ ಪ್ರೇಮಿಸಿದ್ದು, ಕಳೆದ ನಾಲ್ಕೈದು ದಿನಗಳ ಹಿಂದೆ ಕಾಣಿಯಾಗಿರುತ್ತಾರೆ, ಏಪ್ರಿಲ್ 12 ರಂದು ಆಟೋದಲ್ಲಿ ಬಂದ ಯುವಕನ ತಾಯಿ ಹಾಗೂ ಆಕೆ ಸ್ನೇಹಿತರು, ಯುವತಿಯನ್ನ ಆಟೋಗೆ ಹತ್ತಿಸಿಕೊಂಡು ಯುವತಿ ಪೋಷಕರನ್ನ ಮನೆಯಲ್ಲಿ ಕೂಡಿಹಾಕಿ ಪಾರಾರಿಯಾಗಿರುತ್ತಾರೆ,ಈ ಬಗ್ಗೆ ಏಪ್ರಿಲ್ 14ರಂದು ತಿಪಟೂರು ನಗರಠಾಣೆ ದೂರು ನೀಡಲು ಹೋದಾಗ, ಸೂಕ್ತವಾಗಿ ಸ್ಪಂದಿಸದೆ,ನಾನು ಕರೆಸುತ್ತೇವೆ ಮನೆಗೆ ಹೋಗಿ ಎಂದು ಹಾರಿಕೆ ಉತ್ತರನೀಡಿ, ಯುವತಿ ಅಪಹರಣದ ಬಗ್ಗೆ ದೂರು ನೀಡಲು ಬಂದಿದ್ದ ಸಂತ್ರಸ್ಥರಿಂದ ದೂರು ಸಹ ಪಡೆಯದೆ ಮೌಖಿಕವಾಗಿ ಹುಡುಗಿ ಹುಡುಕಿ ಕೊಡುವುದಾಗಿ ಹೇಳಿ ಕಳಿಸಿದ್ದಾರೆ,,ದಲಿತ ಮುಖಂಡರು ಹಾಗೂ ನೊಂದ ಸಂತ್ರಸ್ಥರ ಪೋಟೊ ತೆಗೆಸಿ, ಪೊಲೀಸ್ ಠಾಣೆಯಲ್ಲಿ ಸಭೆ ನಡೆಸಲಾಗಿದೆ., ನಮ್ಮ ಯುವತಿ ಕಾಣಿಯಾಗಿದರೂ ಯಾವುದೇ ನ್ಯಾಯದೊರಕಿಸಿಕೊಟ್ಟಿಲ್ಲ ಅಂದು ಸಂತ್ರಸ್ಥರು ಆರೋಪಿಸಿದ್ದಾರೆ. ಸ್ವಾಮಿ ನಾವು ಅಮಾಯಕರು ನಮ್ಮ ಮಗಳು ಕಾಣಿಯಾಗಿ ನಾಲ್ಕೈದು ದಿನಗಳೆದರು ನಮಗೆ ನ್ಯಾಯದೊರಕಿಸಿಲ್ಲ,ಹುಡುಗನ ಕಡೆಯವರ ರಾಜಕೀಯ ಪ್ರಭಾವಕ್ಕೆ ಒಳಗಾಗಿ ನಮಗೆ ಅನ್ಯಾಯ ಮಾಡುತ್ತಿದ್ದಾರೆ, ಬಡವರಿಗೆ ನ್ಯಾಯವಿಲ್ಲ ಎಂದು ಅಕ್ರೋಶ ವ್ಯಕ್ತಪಡಿಸಿ ತಿಪಟೂರು ನಗರಪೊಲೀಸ್ ಠಾಣೆ ಮುಂದೆ ಅರೆಬೆತ್ತಲೆ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ವರದಿ:ಮಂಜುನಾಥ್ ಹಾಲ್ಕುರಿಕೆ

ತಿಪಟೂರು:ಬೆಂಗಳೂರು ನಗರದಲ್ಲಿ ಸಂವಿಧಾನ ಶಿಲ್ಪಿ ಡಾ// ಬಿ.ಆರ್. ಅಂಬೇಡ್ಕರ್‌ ಮ್ಯೂಸಿಯಂ ಹಾಗೂ ದೇಶದಲ್ಲೇ ಎತ್ತರವಾದ ಅಂಬೇ ಡ್ಕ‌ರ್ ಪ್ರತಿಮೆಯನ್ನು ಸ್ಥಾಪನೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದ ರಾಮಯ್ಯ ಘೋಷಿಸಿರುವುದರಿಂದ ಸ್ವಾಗತರ್ಹ ಅನುಭವ ಮಂಟಪದ ಚಿಂತನೆ ಹಾಗೂ ಮೌಲ್ಯಗಳನ್ನ ಒಳಗೊಂಡ ಸಂವಿಧಾನಿಕ ಚಿಂತನೆಗೆ ನಿಜವಾದ ಶಕ್ತಿ ಈ ಮೂಲಕ ಸಿಕ್ಕಂತಾಗುತ್ತದೆ ಎಂದು ಕಂಚಾಘಟ್ಟ ಶ್ರೀ ಷಡಕ್ಷರ ಮಠದ ಶ್ರೀ ಶ್ರೀ ರುದ್ರಮುನಿ ಸ್ವಾಮೀಜಿ ಹರ್ಷ ವ್ಯಕ್ತಪಡಿಸಿದರು.

ನಗರದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು
ಮೈಸೂರು ವಿಶ್ವವಿದ್ಯಾ ಲಯದಲ್ಲಿ ಸಂವಿಧಾನ ಪೀಠ ಸ್ಥಾಪನೆ ಮಾಡುವುದು ಹಾಗೂ
ಆಂಧ್ರದ ವಿಜಯವಾಡದಲ್ಲಿ ದೇಶ ಹಾಗೂ ವಿಶ್ವದ ಅತಿ ದೊಡ್ಡ ಅಂಬೇಡ್ಕರ್ ಪ್ರತಿಮೆಯಾಗಿದ್ದು
ಆ ಪ್ರತಿಮೆ ಒಟ್ಟು ಎತ್ತರ 206 ಅಡಿಯಾಗಿದ್ದು ಈಗ ಕರ್ನಾಟಕದಲ್ಲಿ ಇದಕ್ಕಿಂತ ಹೆಚ್ಚು ಎತ್ತರದ ಪ್ರತಿಮೆ ನಿರ್ಮಾಣ ಸ್ವಾಗತರ್ಹ, ಸಂವಿಧಾನವು ಅನುಭವ ಮಂಟದ ಶಿವಶರಣರ ಚಿಂತನೆಗಳ ಸಾರವನ್ನ ಒಳಗೊಂಡಿದ್ದು ಸಮಸಮಾಜದ ನಿರ್ಮಾಣ ಹಾಗೂ ಸರ್ವರಿಗೂ ಶಾಂತಿ ಸಮಾನತೆ ಬಯಸುವ ಆಶಯಹೊಂದಿದೆ, ಡಾ//ಅಂಬೇಡ್ಕರ್ ಚಿಂತನೆಗಳು ಬಸವಣ್ಣನವರ ಕಾಯಕ ನಿಷ್ಠೆ,ಸಮಾನತೆ,ಮಹಿಳಾಸ್ವಾತಂತ್ರ್ಯ ಹಾಗೂ ಸರ್ವರ ಹಿತಚಿಂತನೆ ಒಳಗೊಂಡಿರುವ ಕಾರಣ,ಸರ್ಕಾರದ ಚಿಂತನೆಗೆ ನಾವು ಅಭಿನಂದನೆಸಲ್ಲಿಸುತ್ತೇವೆ ಎಂದು ತಿಳಿಸಿದರು

ಕರ್ನಾಟಕ ಭೀಮಸೇನೆ ತಾಲೂಕು ಅಧ್ಯಕ್ಷ ಮಂಜುನಾಥ್ ಆಂಜಿನಪ್ಪ ಮಾತನಾಡಿ • ಆಂಧ್ರದ ಮಾದರಿಯಲ್ಲೇ ಬೆಂಗಳೂರಲ್ಲಿ ಅಂಬೇಡ್ಕರ್ ಮ್ಯೂಸಿಯಂ ನಿರ್ಮಾಣಕ್ಕೆ ಪಣ ತೊಟ್ಟಿರುವ ಮುಖ್ಯಮಂತ್ರಿ ಗಳಿಗೆ ಅಭಿನಂದನೆಗಳು. ಈ ಕಾರ್ಯದಲ್ಲಿ ರಾಜ್ಯಾದ್ಯಂತ ಕರ್ನಾಟಕ ಭೀಮಸೇನಿಯು ಪ್ರತಿ ಜಿಲ್ಲಾವಾರು ಜಿಲ್ಲಾಧಿಕಾರಿಗಳಿಗೆ ರಾಜ್ಯದಲ್ಲಿ ಅತ್ಯಂತ ಎತ್ತರದ ಅಂಬೇಡ್ಕರ್ ಪ್ರತಿಮೆ ನಿರ್ಮಾಣ ಮಾಡಬೇಕೆಂದು ಈಗಾಗಲೇ ಹೋರಾಟ ನಡೆಸಿದ ಫಲವಾಗಿ ಮುಖ್ಯಮಂತ್ರಿಗಳು ಡಾ// ಬಿ.ಆರ್ ಅಂಬೇಡ್ಕರ್ ಅವರ ಜನ್ಮದಿನದಂದೆ ಘೋಷಣೆ ಮಾಡಿರುವುದು ಖುಷಿಯ ವಿಚಾರವೆಂದು ಇದೇ ವೇಳೆ ಅವರು ಹರ್ಷ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಸ್ತಿಹಳ್ಳಿ ರಾಜಣ್ಣ ಕರ್ನಾಟಕ ಭೀಮಸೇನೆಯ ಗೌರವಾಧ್ಯಕ್ಷ ರೇಣುಕ್ ಮೂರ್ತಿ.
ಕಾರ್ಯದರ್ಶಿ ಮೋಹನ್ ಕುಮಾರ್. ಡಾ ಪುನೀತ್ ರಾಜಕುಮಾರ್ ಜನಸೇವಾ ಟ್ರಸ್ಟ್ ಅಧ್ಯಕ್ಷ ಎಸ್ ಜಗದೀಶ್ ಕರ್ನಾಟಕ ಭೀಮಸೇನೆಯ ಬಾಲಾಜಿ ಸುಮಂತ್ ಮೊದಲಾದವರು ಹಾಜರಿದ್ದರು

ದೇಶದ ಅಮೂಲಾಗ್ರ ಬದಲಾವಣೆಗೆ ಡಾ//ಬಿ.ಆರ್ ಅಂಬೇಡ್ಕರ್ ಸಂವಿಧಾನವೇ ದಿವ್ಯಾಔಷಧವಾಗಿದ್ದು ವಿಶ್ವಶ್ರೇಷ್ಠ ಸಂವಿಧಾನ ಬದಲಾವಣೆ ಬಗ್ಗೆ ಮಾತನಾಡುವುದು ಅವಿವೇಕದ ಮಾತು, ಮೂರ್ಖತನದ ಪರಮಾವಧಿ ಎಂದು ಶಾಸಕ ಕೆ.ಷಡಕ್ಷರಿ ತಿಳಿಸಿದರು.


ನಗರದ ನಗರಸಭೆ ಅವರಣದಲ್ಲಿ ಆಯೋಜಿಸಿದ್ದ ಸಂವಿಧಾನ ಶಿಲ್ಪಿ ಡಾ//ಬಿ.ಆರ್ ಅಂಬೇಡ್ಕರ್ ಹಾಗೂ ಹಸಿರು ಕ್ರಾಂತಿಯ ಹರಿಕಾರ ಡಾ//ಬಾಬೂ ಜಗಜೀವನ್ ರಾಮ್ ಜಯಂತಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಭಾರತದ ಸಂವಿಧಾನವೂ ವಿಶ್ವಶ್ರೇಷ್ಠ ಸಂವಿಧಾನವಾಗಿದ್ದು,ಡಾ//ಬಿ.ಆರ್ ಅಂಬೇಡ್ಕರ್ ರವರು ತಮ್ಮ ಜೀವನ ಪೂರ್ತಿ ಅಧ್ಯಯನದ ಮೂಲಕ ಸರ್ವಶ್ರೇಷ್ಠ ಕಾನೂನುಗಳನ್ನ ನೀಡಿದ್ದಾರೆ,ಜಾತಿಗ್ರಸ್ಥ ವ್ಯವಸ್ಥೆಯಲ್ಲಿ ದೇಶದ ಸಮಗ್ರ ಬದಲಾವಣೆಗೆ ಸಂವಿಧಾನವೇ ದಿವ್ಯಾಔಷದವಾಗಿದ್ದು, ಕೆಲವು ಕಿಡಿಗೇಡಿಗಳು ಸಂವಿಧಾನ ಬದಲಾವಣೆ ಮಾತನಾಡುತ್ತಾರೆ,ಇದು ಅವಿವೇಕದ ಪರಮಾವಧಿ, ಭಾರತದ ಸಾಮಾಜಿಕ ಸಮಸ್ಯೆಗಳಿರುವ ದೇಶದಲ್ಲಿ ಸಂವಿಧಾನ ಸಮರ್ಪಕವಾಗಿ ಕೆಲಸ ಮಾಡುತ್ತಿದೆ,ಪ್ರತಿಯೊಬ್ಬರು ಸಂವಿಧಾನದ ಮೌಲ್ಯಗಳನ್ನ ಅಳವಡಿಸಿಕೊಂಡು,ಸಮಾಜದ ಮುಖ್ಯವಾಹಿನಿಯಲ್ಲಿ ಬದುಕಬೇಕು ಆಗಮಾತ್ರ,ಡಾ//ಬಿ.ಆರ್ ಅಂಬೇಡ್ಕರ್ ಹಾಗೂ ಡಾ//ಬಾಬೂ ಜಗಜೀವನ್ ರಾಮ್ ರಂತ ಮಹಾಚೇತನಗಳಿಗೆ ನಿಜವಾದ ಗೌರವ ಸಲ್ಲಿಸಿದಂತೆ.

ಜನಪ್ರತಿನಿಧಿಗಳು ಸಂವಿಧಾನಿಕ ಮೌಲ್ಯಗಳನ್ನ ಎತ್ತಿಹಿಡಿಯುವಂತೆ ಇರಬೇಕು ಆದರೆ ಕಳೆದ ವಿಧಾನ ಸಭೆಯಲ್ಲಿ ನಡೆದ ಘಟನೆ ತೀರ ನಾಚಿಕೆಗೇಡಿನ ವರ್ತನೆಯಾಗಿದ್ದು,ಶ್ರೇಷ್ಠ ಮಹಾನೀಯರು ನೀಡಿರುವ ಕಾನೂನಿನ ಅಡಿಯಲ್ಲಿ ಕೆಲಸ ಮಾಡುತ್ತಿರುವ ನಾವು ಇದೇನಾ ಅವರಿಗೆ ಕೊಡುತ್ತಿರುವ ಗೌರವ ಎನ್ನುವಷ್ಟು ಬೇಜಾರು, ಆಗಿದೆ.ಸಾಮಾಜಿಕ ಜವಾಬ್ದಾರಿ ಹೊತ್ತನಾವು ಬೇರೆಯವರಿಗೆ ಪ್ರೇರಣೆಯಾಗುವಂತ್ತೆ ಬದುಕಬೇಕು, ಇನ್ನೊಬ್ಬರು ನಮ್ಮ ಬಗ್ಗೆ ಹಗುರವಾಗಿ ಮಾತನಾಡುವಂತೆ ಇರಬಾರದು, ಎಂದ ಅವರು ನಮ್ಮಲ್ಲಿ ಈ ಹಿಂದೆ ಇದ್ದ ಜಾತಿಗ್ರಸ್ಥ ವ್ಯವಸ್ಥೆ ಹಂತಹಂತವಾಗಿ ಬದಲಾಗುತ್ತಿದ್ದೆ, ಸಮಾಜದಲ್ಲಿ ಬದಲಾವಣೆಗೆ ಮನುಷ್ಯನ ಮಾನಸಿಕ ಸ್ಥಿತಿಬದಲಾಗಬೇಕು,ಯಾರು ಇಂತಹ ಜಾತಿಯಲ್ಲಿಯೇ ಹುಟ್ಟಬೇಕು ಎಂದು ಅರ್ಜಿಹಾಕಿಕೊಂಡು ಹುಟ್ಟುವುದಿಲ್ಲ,ನಾವು ನಡವಳಿಗೆ ಸಂಸ್ಕಾರದಿಂದ ಗೌರವಗಳಿಸಬೇಕೆ ಹೊರತು ಜಾತಿಯಿಂದಲ್ಲ.ಎಲ್ಲರನ್ನು ಸಮಾನವಾಗಿ ಕಾಣುವ ಉದಾತ್ತ ಗುಣಬೆಳಸಿಕೊಳ್ಳಬೇಕು, ಎಂದು ತಿಳಿಸಿದರು


ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಉಪಸ್ಥಿತರಿದ ಖ್ಯಾತಸಾಹಿತಿ ಡಾ//ವಡ್ಡಗೆರೆ ನಾಗರಾಜಯ್ಯ ಮಾತನಾಡಿ ಭಾರತದ ಸಂವಿಧಾನಕ್ಕೆ ವಿಶ್ವದ ಬೆಳಕು ಗೌತಮಬುದ್ದ ಹಾಗೂ ಬಸವಣ್ಣನವರ ಚಿಂತನೆಗಳೇ ಸ್ಪೂರ್ತಿ,ಡಾ//ಅಂಬೇಡ್ಕರ್ ರವರು ವಿಶ್ವದ ಹಲವಾರು ಸಂವಿಧಾನಗಳನ್ನ ಅಧ್ಯಯನ ಮಾಡಿ ನಮ್ಮ ದೇಶದ ಸಾಮಾಜಿಕ ವ್ಯವಸ್ಥೆಗೆ ಸರಿಯೊಂದುವ ಸಂವಿಧಾನ ನೀಡಿದ್ದಾರೆ,ವಿಶ್ವಗುರು ಬಸವಣ್ಣನವರು ತಮ್ಮ ಅನುಭವಮಂಟಪದ ಮೂಲಕ ಸರ್ವರನ್ನ ಸಮನಾಗಿ ಕಂಡ ಅನುಭವ ಮಂಟಪದ ಮಾದರಿಯೇ ನಾವು ಕಾಣುತ್ತಿರುವ ಸಂಸತ್,ಗೌತಮ ಬುದ್ದ ಬಸವಣ್ಣನವರ ಸ್ಪೂರ್ತಿಯೆ ನಮ್ಮ ಸಂವಿಧಾನ,ವಿಶ್ವಗುರು ಬಸವಣ್ಣನವರ ಬಗ್ಗೆ ಅಧ್ಯಯನ ಮಾಡಿರುವ ಡಾ//ಅಂಬೇಡ್ಕರ್ ಹೇಳಿರುವಂತೆ ಬಸವಣ್ಣ ಶ್ರೇಷ್ಠ ಸಮಾಜ ಸುಧಾರಕ ಸಮಾನತಾವಾದಿ,ಇಂತಹ ಶ್ರೇಷ್ಠ ಶರಣನನ್ನ ವೀರಶೈವ ಲಿಂಗಾಯಿತರು ವೈದಿಕ ಕಟ್ಟುಪಾಡಿನಲ್ಲಿ ಕಟ್ಟಿಹಾಕಿದ್ದಾರೆ,ಬುದ್ದ ಬಸವಣ್ಣ ಅಂಬೇಡ್ಕರ್ ಚಿಂತನೆಗಳಿಲ್ಲದೆ,ಸಾಮಾಜಿಕ ಚಾಲನೆ ಸಾಧ್ಯವಿಲ್ಲ ಎಂದು ತಿಳಿಸಿದರು.


ನಗರಸಭೆ ಅಧ್ಯಕ್ಷೆ ಶ್ರೀಮತಿ ಯಮುನಾಧರಣೇಶ್ ಮಾತನಾಡಿ ಭಾರತದ ಸಾಮಾಜಿಕತೆ ಆರ್ಥಿಕತೆ ಸೇರಿದಂತೆ ನವಭಾರತ ನಿರ್ಮಾಣಕ್ಕೆ ಅಂಬೇಡ್ಕರ್ ಕೊಡುಗೆ ಅಪಾರ, ಶಿಕ್ಷಣದಿಂದ ಬದಲಾವಣೆ ಸಾಧ್ಯ ಎಂದು ನಂಬಿದವರು ಅವರ ಆದರ್ಶಮಯ ಜೀವನ ವಿಶ್ವಕ್ಕೆ ಬೆಳಕು, ಅವರ ಚಿಂತನೆಗಳನ್ನ ಅಳವಡಿಕೊಳೋಣ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ತಿಪಟೂರು ಉಪವಿಭಾಗಾಧಿಕಾರಿ ಶ್ರೀಮತಿ ಸಪ್ತಶ್ರೀ,ಇಒ ಸುದರ್ಶನ್,ತಹಸೀಲ್ದಾರ್ ಪವನ್ ಕುಮಾರ್,ಪೌರಾಯುಕ್ತ ವಿಶ್ವೇಶ್ವರಯ್ಯ ಬದರಗಡೆ,ಡಿವೈಎಸ್ಪಿ ವಿನಾಯಕ ಶೆಟ್ಟಿಗೇರಿ,ದಲಿತ ಮುಖಂಡರಾದ ಪೆದ್ದಿಹಳ್ಳಿ ನರಸಿಂಹಯ್ಯ.ಕುಪ್ಪಾಳು ರಂಗಸ್ವಾಮಿ ಕೊಪ್ಪ ಶಾಂತಪ್ಪ ಬಜಗೂರು ಮಂಜುನಾಥ್ ಸೇರಿದಂತೆ ಅನೇಕರು ಉಪನ್ಯಾಸ ನೀಡಿದರು ಸಾಹಿತಿ ಕಂಟಲಗೆರೆ ಗುರುಪ್ರಸಾದ್ ಡಾ//ಬಾಬೂ ಜಗಜೀವನ್ ರಾಮ್ ಕುರಿತು ಉಪನ್ಯಾಸ ನೀಡಿದರು.
ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನ ಸನ್ಮಾನಿಸಲಾಯಿತು.

ತಿಪಟೂರು ನಗರದ ಗ್ರಾಮದೇವತೆ ಶ್ರೀ ಕೆಂಪಮ್ಮ ದೇವಿ ದೇವಾಲಯದ ಆವರಣದಲ್ಲಿ ಸಂವಿಧಾನ ಶಿಲ್ಪಿ ಡಾ//ಬಿ.ಆರ್ ಅಂಬೇಡ್ಕರ್ ಹಾಗೂ ಭಾರತದ ಉಪಪ್ರಧಾನಿ,ಹಸಿರುಕ್ರಾಂತಿ ಹರಿಕಾರ ಡಾ//ಜಗಜೀವನ್ ರಾಮ್ ಜಯಂತಿ ಅಂಗವಾಗಿ ನಡೆದ ಅದ್ದೂರಿ ಮೆರವಣಿಗೆಗೆ ಶಾಸಕರು ಹಾಗೂ ಕರ್ನಾಟಕ ರಾಜ್ಯ ಭೂ ಅಭಿವೃದ್ದಿ ಬ್ಯಾಂಕ್ ಅಧ್ಯಕ್ಷರಾದ ಕೆ.ಷಡಕ್ಷರಿ ಸಂವಿಧಾನ ಶಿಲ್ಪಿ ಡಾ//ಬಿ.ಆರ್ ಅಂಬೇಡ್ಕರ್ ಹಾಗೂ ಬಾಬು ಜಗಜೀವನ್ ರಾಮ್ ಭಾವಚಿತ್ರಕ್ಕೆ ಪೂಜೆಸಲ್ಲಿಸುವ ಮೂಲಕ ಚಾಲನೆ ನೀಡಿದರು


ತಮಟೆವಾದ್ಯ, ನಾಸಿಕ್ ಡೋಲ್, ಚಿಟ್ಟಿಮೇಳ ವಾದ್ಯ,ಕಹಳೆ,ಸೇರಿದಂತೆ ವಿವಿಧ ಸಾಂಸ್ಕೃತಿಕ ಕಲಾ ತಂಡಗಳೊಂದಿಗೆ, ಪೂರ್ಣಕುಂಭ ಮೆರವಣಿಗೆಯೊಂದಿಗೆ ಕೋಡಿ ಸರ್ಕಲ್ ಮೂಲಕ .ದೊಡ್ಡಪೇಟೆ, ಬಿ.ಹೆಚ್ ರಸ್ತೆ ಮೂಲಕ ಸಾಗಿ ನಗರಸಭೆ ಆವರಣದ ವರೆಗೆ ಮೆರವಣಿಗೆ ನಡೆಸಲಾಯಿತು.

ಮೆರವಣಿಗೆಯಲ್ಲಿ ಶಾಸಕ ಕೆ.ಷಡಕ್ಷರಿ ತಿಪಟೂರು ಉಪವಿಭಾಗಾಧಿಕಾರಿ ಶ್ರೀಮತಿ ಸಪ್ತಶ್ರೀ,ಇಒ ಸುದರ್ಶನ್.ತಹಸೀಲ್ದಾರ್ ಪವನ್ ಕುಮಾರ್ ,ಸಮಾಜಕಲ್ಯಾಣಧಿಕಾರಿ ಶ್ರೀಮತಿ ತ್ರಿವೇಣಿ ನಗರಸಭೆ ಅಧ್ಯಕ್ಷರಾದ ಶ್ರೀಮತಿ ಯಮುನಾಧರಣೇಶ್,ಪೌರಾಯುಕ್ತ ವಿಶ್ವೇಶ್ವರಯ್ಯ ಬದರಗಡೆ,ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ದಲಿತ ಮುಖಂಡರು ಉಪಸ್ಥಿತರಿದರು.

ತಿಪಟೂರು: ರಾಜ್ಯಸರ್ಕಾರಕ್ಕೆ ಸಲ್ಲಿಕೆಯಾಗಿರುವ ಜಾತಿಗಣತಿ ವರದಿಯಲ್ಲಿ ಕೆಲ ಲೋಪಗಳು ಆಗಿರುವ ಬಗ್ಗೆ ವಕ್ಕಲಿಗ ಸಮಾಜಕ್ಕೆ ಆತಂಕವಿದೆ, ಈ ವಿಚಾರವಾಗಿ ಸಮುದಾಯದ ಮುಖಂಡರು ಆತಂಕ ವ್ಯಕ್ತಪಡಿಸಿದ್ದಾರೆ ಎಂದು ಕುಣಿಗಲ್ ಶಾಸಕ ಕೆ.ಹೆಚ್ ರಂಗನಾಥ್ ತಿಳಿಸಿದರು

ತಿಪಟೂರಿನಲ್ಲಿ ಶಾಸಕ ಕೆ.ಷಡಕ್ಷರಿಯವರ ಹುಟ್ಟುಹಬ್ಬದ ತಿಪಟೂರು ಭೇಟಿನೀಡಿದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,ನಾನೂ ಸಹ ವಕ್ಕಲಿಗ ಸಮುದಾಯದ ಶಾಸಕನಾಗಿ ನನ್ನ ಸಮುದಾಯದ ಹಕ್ಕುಗಳ ರಕ್ಷಣೆ ಮಾಡುವುದು,ನನ್ನ ಕರ್ತವ್ಯವಾಗಿದೆ,ಜಾತಿಗಣತಿ ವರದಿಯ ಪ್ರತಿಗಳನ್ನ ಎಲ್ಲರಿಗೂ ನೀಡಲಾಗಿದ್ದು, ವರದಿಯನ್ನ ಸಂಪೂರ್ಣವಾಗಿ ಓದಿ ,ಅಧ್ಯಯನ ಮಾಡಿ, ಸಾಧಕ ಬಾದಕಗಳ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳು ಹಾಗೂ ಮಾನ್ಯ ಉಪಮುಖ್ಯಮಂತ್ರಿಗಳೊಂದಿಗೆ ಚರ್ಚೆ ಮಾಡುತ್ತೇವೆ.ಹತ್ತು ವರ್ಷಗಳ ಹಿಂದೆ ನಡೆದ ಗಣತಿವೇಳೆ ಅನೇಕ ಲೋಪವಿದೆ ಎನ್ನಲಾಗಿದ್ದು ಹೊಸದಾಗಿ ವೈಜ್ಞಾನಿಕವಾಗಿ ಗಣತಿಮಾಡುವುದು ಸೂಕ್ತ ಎನ್ನುವುದು ನನ್ನ ಅಭಿಪ್ರಾಯ,ಆದರೆ ಜಾತ್ಯಾತೀತ ಮನೋಭಾವದ ಸಿದ್ದರಾಮಯ್ಯ ನವರು ವರದಿಬಗ್ಗೆ ಯಾವಕ್ರಮಕೈಗೊಳ್ಳುತ್ತಾರೆ ಎಂಬುದನ ವರದಿ ನೋಡಿದ ನಂತರ ತಿಳಿಸುತ್ತೇವೆ ಎಂದು ತಿಳಿಸಿದರು

ತಿಪಟೂರು: ರಾಜ್ಯಸರ್ಕಾರಕ್ಕೆ ಸಲ್ಲಿಕೆಯಾಗಿರುವ ಜಾತಿಗಣತಿ ವರದಿಯಲ್ಲಿ ಕೆಲ ಲೋಪಗಳು ಆಗಿರುವ ಬಗ್ಗೆ ವಕ್ಕಲಿಗ ಸಮಾಜಕ್ಕೆ ಆತಂಕವಿದೆ, ಈ ವಿಚಾರವಾಗಿ ಸಮುದಾಯದ ಮುಖಂಡರು ಆತಂಕ ವ್ಯಕ್ತಪಡಿಸಿದ್ದಾರೆ ಎಂದು ಕುಣಿಗಲ್ ಶಾಸಕ ಕೆ.ಹೆಚ್ ರಂಗನಾಥ್ ತಿಳಿಸಿದರು

ತಿಪಟೂರಿನಲ್ಲಿ ಶಾಸಕ ಕೆ.ಷಡಕ್ಷರಿಯವರ ಹುಟ್ಟುಹಬ್ಬದ ತಿಪಟೂರು ಭೇಟಿನೀಡಿದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,ನಾನೂ ಸಹ ವಕ್ಕಲಿಗ ಸಮುದಾಯದ ಶಾಸಕನಾಗಿ ನನ್ನ ಸಮುದಾಯದ ಹಕ್ಕುಗಳ ರಕ್ಷಣೆ ಮಾಡುವುದು,ನನ್ನ ಕರ್ತವ್ಯವಾಗಿದೆ,ಜಾತಿಗಣತಿ ವರದಿಯ ಪ್ರತಿಗಳನ್ನ ಎಲ್ಲರಿಗೂ ನೀಡಲಾಗಿದ್ದು, ವರದಿಯನ್ನ ಸಂಪೂರ್ಣವಾಗಿ ಓದಿ ,ಅಧ್ಯಯನ ಮಾಡಿ, ಸಾಧಕ ಬಾದಕಗಳ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳು ಹಾಗೂ ಮಾನ್ಯ ಉಪಮುಖ್ಯಮಂತ್ರಿಗಳೊಂದಿಗೆ ಚರ್ಚೆ ಮಾಡುತ್ತೇವೆ.ಹತ್ತು ವರ್ಷಗಳ ಹಿಂದೆ ನಡೆದ ಗಣತಿವೇಳೆ ಅನೇಕ ಲೋಪವಿದೆ ಎನ್ನಲಾಗಿದ್ದು ಹೊಸದಾಗಿ ವೈಜ್ಞಾನಿಕವಾಗಿ ಗಣತಿಮಾಡುವುದು ಸೂಕ್ತ ಎನ್ನುವುದು ನನ್ನ ಅಭಿಪ್ರಾಯ,ಆದರೆ ಜಾತ್ಯಾತೀತ ಮನೋಭಾವದ ಸಿದ್ದರಾಮಯ್ಯ ನವರು ವರದಿಬಗ್ಗೆ ಯಾವಕ್ರಮಕೈಗೊಳ್ಳುತ್ತಾರೆ ಎಂಬುದನ ವರದಿ ನೋಡಿದ ನಂತರ ತಿಳಿಸುತ್ತೇವೆ ಎಂದು ತಿಳಿಸಿದರು

ತಿಪಟೂರು:ಶಾಸಕ ಕೆ.ಷಡಕ್ಷರಿ ಸರಳ ಸಜ್ಜನಿಕೆ ವ್ಯಕ್ತಿತ್ವದ ಆತ್ಮೀಯ ಸ್ನೇಹಿತ,ಶಾಸಕ ಕೆ.ಷಡಕ್ಷರಿ ಯವರಿಗೆ ಸಚಿವರಾಗುವ ಎಲ್ಲಾ ಅರ್ಹತೆ ಹಾಗೂ ಸಾಮರ್ಥ್ಯವಿದೆ, ಪಕ್ಷದಲ್ಲಿ ಹಿರಿಯರು ಸಹ ಆಗಿದ್ದಾರೆ, ಕಳೆದ ಭಾರಿ ನಮ್ಮ ಸರ್ಕಾರದಲ್ಲಿ ಸಚಿವ ಸ್ಥಾನದ ಅವಕಾಶ ಕೂದಲೆಳೆ ಅಂತರದಲ್ಲಿ ಕೈ ತಪ್ಪಿತು, ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಆಯ್ತು, ಈ ಭಾರಿ ಸಚಿವರಾಗಲಿ, ಅವರ ಇಷ್ಟಾರ್ಥಗಳು ಈಡೇರಲ್ಲಿ,ಅವರಿಗೆ ಆರೋಗ್ಯಭಾಗ್ಯ ಸಚಿವ ಸ್ಥಾನ ಈಡೇರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.

ಶಾಸಕ ಕೆ.ಷಡಕ್ಷರಿ ರಾಜ್ಯದಲ್ಲಿಯೇ ಸಹಕಾರಿ ಕ್ಷೇತ್ರದಲ್ಲಿ ಹೆಚ್ಚು ಅನುಭವ ಇರುವಂತ್ತವರು,ಒಬ್ಬ ಶಾಸಕ ತಮ್ಮ ಕ್ಷೇತ್ರದ ಜನತೆ ಕಷ್ಟ ಕಾರ್ಪಣ್ಯಗಳ,ಗಮನಹರಿಸ ಬೇಕು,ನಿಮ್ಮ ಶಾಸಕರು ಸಹ ದೀನ ದಲಿತರು ಬಡವರು ತೊಂದರೆಯಲ್ಲಿರುವ ಜನರಿಗೆ ಸದಾ ಸೇವೆ ಮಾಡುತ್ತಿದ್ದಾರೆ,ಕ್ಷೇತ್ರದ ಅಭಿವೃದ್ದಿ ಬಗ್ಗೆ ಸದಾ ಚಿಂತಿಸುವ ಕೆ.ಷಡಕ್ಷರಿಯರು,ಕ್ಷೇತ್ರದ ಅಭಿವೃದ್ದಿಯ ಬಗ್ಗೆ ಪಟ್ಟು ಬಿಡದೆ ಸಾಧಿಸುವ ಚಲ ಉಳ್ಳವರು ಇವರ ಸಾರ್ಮರ್ಥ್ಯಕ್ಕೆ ತಕ್ಕ ಅವಕಾಶ ದೊರೆಯಲಿ ತಿಪಟೂರು ಸೇರಿದಂತೆ ರಾಜ್ಯದಲ್ಲಿ ಜನ ಸೇವೆ ಮಾಡುವ ಅವಕಾಶ ಸಿಗಲಿ ಎಂದು ತಿಳಿಸಿದರು.

ಶ್ರೀ ಸಿದ್ದಗಂಗಾ ಮಠದ ಪೀಠಾಧ್ಯಕ್ಷರಾದ ಶ್ರೀ ಸಿದ್ದಲಿಂಗಮಹಾಸ್ವಾಮೀಜಿ, ಕೆರೆಗೋಡಿ ರಂಗಾಪುರ ಭೂಸುಕ್ಷೇತ್ರಾಧ್ಯಕ್ಷರಾದ ಶ್ರೀಶ್ರೀ ಗುರುಪರದೇಶಿಕೇಂದ್ರ ಮಹಾಸ್ವಾಮೀಜಿಗಳು,ಸುತ್ತೂರು ವೀರಸಿಂಹಾಸನಾಧೀಶ್ವರ ಶ್ರೀ ಶ್ರೀ ಶಿವರಾತ್ರೀಶ್ವರ ದೇಶಿಕೇಂದ್ರ ಮಹಾಸ್ವಾಮೀಜಿ ಶಾಸಕ ಕೆ.ಷಡಕ್ಷರಿ ಹುಟ್ಟು ಹಬ್ಬದ ಅಂಗವಾಗಿ ನೂತನವಾಗಿ ನಿರ್ಮಾಣಗೊಂಡಿರುವ ಎನ್ ಆರ್ ಸೆಲ್ಟರ್ ಲೋಕಾರ್ಪಣೆಗೊಳಿಸಿದರು
ಕಾರ್ಯಕ್ರಮದಲ್ಲಿ ಹುಟ್ಟು ಹಬ್ಬದ ಅಂಗವಾಗಿ ತಿಪಟೂರು ಕಾಂಗ್ರೇಸ್ ಪಕ್ಷದಿಂದ ಬೆಳ್ಳಿ ಗದೆ,ನೀಡಿ ಸನ್ಮಾನಿಸಿದರು, ತಮ್ಮಡಿಹಳ್ಳಿ ವಿರಕ್ತ ಮಠದ ಶ್ರೀ ಅಭಿನವ ಮಲ್ಲಿಕಾರ್ಜುನ ದೇಶಿಕೇಂದ್ರ ಮಹಾಸ್ವಾಮೀಜಿ.ಕೃಷ್ಣಯಾದವಾನಂದ ಮಠದ ಶ್ರೀಕೃಷ್ಣಯಾದವಾನಂದ ಮಹಾಸ್ವಾಮೀಜಿ,ಭಗೀರಥ ಉಪ್ಪಾರ ಗುರುಪೀಠದ ಶ್ರೀಪುರುಷೋತ್ತಮಾನಂದ ಪುರಿ ಮಹಾಸ್ವಾಮೀಜಿ.ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಸೇರಿದಂತೆ 30ಕ್ಕೂ ಹೆಚ್ಚು ಮಠಾಧೀಶರು,ಮಾಜಿ ಸಚಿವ ಟಿ.ಬಿ ಜಯಚಂದ್ರ,ಶಾಸಕರಾದ ಹೆಚ್.ಆರ್ ರಂಗನಾಥ್,ತುರುವೇಕೆರೆ ಶಾಸಕ ಎಂ.ಟಿ ಕೃಷ್ಣಪ್ಪ.ಜೆಡಿಎಸ್ ವಿರೋಧ ಪಕ್ಷದ ನಾಯಕ ಸಿ.ಬಿ ಸುರೇಶ್ ಬಾಬು.ತುಮುಲ್ ಅಧ್ಯಕ್ಷ ವೆಂಕಟೇಶ್, ಕಾಂಗ್ರೇಸ್ ಜಿಲ್ಲಾಧ್ಯಕ್ಷ ಚಂದ್ರಶೇಖರ್ ಗೌಡ,ಜಿಲ್ಲಾ ಯುವ ಕಾಂಗ್ರೇಸ್ ಅಧ್ಯಕ್ಷ ನಿಖಿಲ್ ರಾಜಣ್ಣ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದರು, ನೂರಾರು ಜನ ಮುಖಂಡರು ಕಾರ್ಯಕರ್ತರು ಅಭಿಮಾನಿಗಳು ಹಾರ ತುರಾಯಿ ಹೂಗುಚ್ಚ ಅರ್ಪಿಸಿ ಹುಟ್ಟುಹಬ್ಬದ ಶುಭಕೋರಿದರು

ವರದಿ:ಮಂಜುನಾಥ್ ಹಾಲ್ಕುರಿಕೆ

error: Content is protected !!