ತಿಪಟೂರು ನಗರದ ಬಿ.ಹೆಚ್ ರಸ್ತೆ ಗುರುದರ್ಶನ್ ಹೋಟೆಲ್ ಪಕ್ಕದ ಸಿ.ಕೆ ಮೊಬೈಲ್ ಸೇಲ್ಸ್ & ಸರ್ವೀಸ್ ಅಂಗಡಿ ಬೀಗ ಮುರಿದು ಲಕ್ಷಾಂತರ ರೂಪಾಯಿ ಮೌಲ್ಯದ ಹಣ ಮೊಬೈಲ್ ಗಳನ್ನ ದೋಚಿ ಪರಾರಿಯಾಗಿದ್ದಾರೆ.
ತಿಪಟೂರು ನಗರದ ಜನ ನಿಬೀಡ ಪ್ರದೇಶವಾದ ಲಿಂಗರಾಜಪ್ಪ ಕಾಂಪ್ಲೆಕ್ಸ್ ನಲ್ಲಿ ಗುರುದರ್ಶನ್ ಹೋಟೆಲ್ ಪಕ್ಕದಲ್ಲೆ ಇರುವ ಕೇಶವ ಮೂರ್ತಿ ಎಂಬುವವರಿಗೆ ಸೇರಿದ ಸಿ.ಕೆ ಮೊಬೈಲ್ಸ್ ಸೇಲ್ಸ್ &ಸರ್ವೀಸ್ ನಲ್ಲಿ ಸುಮಾರು 3.ಗಂಟೆ ಸಮಯದಲ್ಲಿ ಮೊಬೈಲ್ ಅಂಗಡಿ ಬೀಗ ಮುರಿದು ಒಳನುಗ್ಗಿದ್ದ ಕಳ್ಳರು, ಅಂಗಡಿಯಲ್ಲಿ ಇದ್ದ ವಿವಿಧ ಕಂಪನಿಗಳ ಲಕ್ಷಾಂತರ ಮೌಲ್ಯದ ಮೊಬೈಲ್ ಹಾಗೂ ಗಲ್ಲಾಪೆಟ್ಟಿಗೆಯಲ್ಲಿ ಇದ್ದ ಹಣ ದೋಚಿದ್ದಾರೆ, ಸ್ಥಳಕ್ಕೆ ತಿಪಟೂರು ನಗರಪೊಲೀಸ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ತನಿಖೆ ನಡೆಸಲಾಗುತ್ತಿದೆ. ನಗರದಲ್ಲಿ ಹೆಚ್ಚುತ್ತಿರುವ ಕಳ್ಳತನ ಪ್ರಕರಣಗಳು ಸಾರ್ವಜನಿಕರಲ್ಲಿ ಆತಂಕ ಉಂಟುಮಾಡಿವೆ.
ತಿಪಟೂರು ನಗರದ ಬಿ.ಹೆಚ್ ರಸ್ತೆ ಗುರುದರ್ಶನ್ ಹೋಟೆಲ್ ಪಕ್ಕದ ಸಿ.ಕೆ ಮೊಬೈಲ್ ಸೇಲ್ಸ್ & ಸರ್ವೀಸ್ ಅಂಗಡಿ ಬೀಗ ಮುರಿದು ಲಕ್ಷಾಂತರ ರೂಪಾಯಿ ಮೌಲ್ಯದ ಹಣ ಮೊಬೈಲ್ ಗಳನ್ನ ದೋಚಿ ಪರಾರಿಯಾಗಿದ್ದಾರೆ.
ತಿಪಟೂರು ನಗರದ ಜನ ನಿಬೀಡ ಪ್ರದೇಶವಾದ ಲಿಂಗರಾಜಪ್ಪ ಕಾಂಪ್ಲೆಕ್ಸ್ ನಲ್ಲಿ ಗುರುದರ್ಶನ್ ಹೋಟೆಲ್ ಪಕ್ಕದಲ್ಲೆ ಇರುವ ಕೇಶವ ಮೂರ್ತಿ ಎಂಬುವವರಿಗೆ ಸೇರಿದ ಸಿ.ಕೆ ಮೊಬೈಲ್ಸ್ ಸೇಲ್ಸ್ &ಸರ್ವೀಸ್ ನಲ್ಲಿ ಸುಮಾರು 3.ಗಂಟೆ ಸಮಯದಲ್ಲಿ ಮೊಬೈಲ್ ಅಂಗಡಿ ಬೀಗ ಮುರಿದು ಒಳನುಗ್ಗಿದ್ದ ಕಳ್ಳರು, ಅಂಗಡಿಯಲ್ಲಿ ಇದ್ದ ವಿವಿಧ ಕಂಪನಿಗಳ ಲಕ್ಷಾಂತರ ಮೌಲ್ಯದ ಮೊಬೈಲ್ ಹಾಗೂ ಗಲ್ಲಾಪೆಟ್ಟಿಗೆಯಲ್ಲಿ ಇದ್ದ ಹಣ ದೋಚಿದ್ದಾರೆ, ಸ್ಥಳಕ್ಕೆ ತಿಪಟೂರು ನಗರಪೊಲೀಸ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ತನಿಖೆ ನಡೆಸಲಾಗುತ್ತಿದೆ. ನಗರದಲ್ಲಿ ಹೆಚ್ಚುತ್ತಿರುವ ಕಳ್ಳತನ ಪ್ರಕರಣಗಳು ಸಾರ್ವಜನಿಕರಲ್ಲಿ ಆತಂಕ ಉಂಟುಮಾಡಿವೆ.
ನಗರದ ಹಿಂಡಿಸ್ಕೆರೆ ಗೇಟ್ ಜಾಕಿ ಹಾಗೂ ವೇರ್ ವೆಲ್ ಗಾರ್ಮೇಂಟ್ಸ್ ಆಟೋ ನಿಲ್ದಾಣದಲ್ಲಿ ,ತಿಪಟೂರು ನಗರಪೊಲೀಸ್ ಠಾಣೆ ಹಾಗೂ ಶ್ರಿಜೈ ಮಾರುತಿ ಆಟೋ ಚಾಲಕರು ಹಾಗೂ ಮಾಲೀಕರ ಸಂಘದಿಂದ, ಆಟೋ ಚಾಲಕರಿಗೆ ರಸ್ತೆ ಸುರಕ್ಷತಾ ಸಪ್ತಹದ ಅಂಗವಾಗಿ ಜಾಗೃತಿ ಕಾರ್ಯಕ್ರಮ ನಡೆಸಲಾಯಿತು. ತಿಪಟೂರು ನಗರಪೊಲೀಸ್ ಠಾಣೆ ಅಸಿಸ್ಟೆಂಟ್ ಸಬ್ ಇನ್ಪೆಕ್ಟರ್ ರಾಮಣ್ಣ ರಸ್ತೆ ಸುರಕ್ಷತಾ ಸಪ್ತಹಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮ ಉದೇಶಿಸಿ ಮಾತನಾಡಿದ ಅವರು ಆಟೋ ಚಾಲಕರು, ಸಂಚಾರಿ ನಿಯಮಗಳನ್ನ ಕಡ್ಡಾಯವಾಗಿ ಪಾಲಿಸಬೇಕು,ಪ್ರಯಾಣಿಕರು ನಿಮಗೆ ಅನ್ನ ಕೊಡುವ ದೇವರಿದ್ದಹಾಗೆ, ಅವರ ಸುರಕ್ಷತೆ ಜೊತೆ ನಿಮ್ಮ ಸುರಕ್ಷತೆಗೂ ಆಧ್ಯತೆ ನೀಡಿ,ಪ್ರತಿಯೊಬ್ಬ ಆಟೋ ಚಾಲಕರು ಕಡ್ಡಾಯವಾಗಿ, ಸಮವಸ್ತ್ರಧರಿಸಿ ಆಟೋ ಚಲಾಯಿಸಬೇಕು,ಆಟೋ ಎಮಿಷನ್ ಟೆಸ್ಟ್,ಮಾಡಿಸಿ,ಕಡ್ಡಾತವಾಗಿ ಇನ್ಸುರೇನ್ಸ್ ಮಾಡಿಸಿ,ಅಪಘಾತಗಳು ಹೇಳಿಕೇಳಿ ಆಗುವುದಿಲ್ಲ ಆಕಸ್ಮಿಕ ಅಪಘಾತ ಸಂದರ್ಭಗಳಲ್ಲಿ ನಿಮ್ಮ ಹಾಗೂ ನಿಮ್ಮ ಕುಟುಂಬಗಳ ಸುರಕ್ಷತೆಗಾಗಿ ನೆರವಾಗುತ್ತವೆ,ಆಟೋ ಚಾಲಕರು ವಾಹನಗಳನ್ನ ಅಡ್ಡಾದಿಡ್ಡಿಯಾಗಿ ಓಡಿಸುತ್ತಾರೆ ಎನ್ನುವ ಸಾರ್ವಜನಿಕರಲಿ ಆಪಾದನೆಗಳಿದ್ದು, ಸಂಚಾರಿ ನಿಯಮ ಪಾಲನೆಮಾಡಿ ಸುರಕ್ಷಿತವಾಗಿ ವಾಹನ ಚಲಾಯಿಸಿ,ನಿಮ್ಮ ವೃತ್ತಿಗೆ ಅಗೌರವ ತಂದುಕೊಳ್ಳ ಬೇಡಿ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿಡಿ.ಎಸ್.ಎಸ್ ತಾಲ್ಲೋಕು ರಾಜು ಬೆಣ್ಣೆನಹಳ್ಳಿ,ಜೈ ಮಾರುತಿ ಆಟೋ ಚಾಲಕರ ಸಂಘದ ಅಧ್ಯಕ್ಷ ಮಹೇಶ್,ಉಪಾಧ್ಯಕ್ಷರಾದ ರಂಗಸ್ವಾಮಿ,ಪುಟ್ಟೆಗೌಡ,ಖಜಾಂಚಿ ಹರ್ಷ,ಜವರೇಗೌಡ,ಯತೀಶ್,ನವೀನ್,ನಾಗೇಶ್,ರಾಜು,ವಸಂತಕುಮಾರ್,ಗಿರೀಶ,ವಿಕಾಸ್,ರಾಮಣ್ಣ,ತೇಜುಅರುಣ್,ನಾಗೇಶ್ ಮುಂತ್ತಾದವರು ಉಪಸ್ಥಿತರಿದರು
ತಿಪಟೂರಿನ ಸಾರ್ವಜನಿಕ ಆಸ್ಪತ್ರೆ ಸಭಾಂಗಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಇಲಾಖೆ, ತಿಪಟೂರು ತಾಲ್ಲೂಕು ಸ್ತ್ರೀಶಕ್ತಿ ಒಕ್ಕೂಟ (ರಿ) ಮತ್ತು ವೈಭವಿ ಆಸ್ಪತ್ರೆ ಇವರ ಸಹಯೋಗದಲ್ಲಿ ಅಪೌಷ್ಟಿಕ ಮಕ್ಕಳ ಆರೋಗ್ಯ ತಪಾಸಣೆ ಶಿಭಿರ ನಡೆಸಲಾಯಿತು
ಶಿಶುಅಭಿವೃದ್ಧಿಇಲಾಖೆ ಯೋಜನಾಧಿಕಾರಿಲೋಕೇಶ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಅಪೌಷ್ಠಿಕ ಮಕ್ಕಳನ್ನು ಬಡತನ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರಬಾರದು ಎನ್ನುವ ದೃಷ್ಠಿಯಿಂದಸರ್ಕಾರ ಗರ್ಭಿಣಿಯರುಹಾಗೂ ಬಾಣಂತಿಯರಿಗೆ ಅಂಗನವಾಡಿ ಕೇಂದ್ರದಲ್ಲಿಪೌಷ್ಠಿಕಆಹಾರ,ಹಾಲುಕೋಳಿಮಟ್ಟೆ ವಿತರಣೆ ನೀಡುತ್ತಿದ್ದು,ನಿಯಮಿತವಾಗಿ ಮಕ್ಕಳ ತಪಾಸಣೆ ಮಹಿಳೆಯರ ಹಾಗೂ ಮಕ್ಕಳ ಆರೋಗ್ಯ ಪರೀಕ್ಷೆ ಮಾಡುತ್ತಿದೆ, ಸರ್ಕಾರದ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಳ್ಳ ಬೇಕು ಎಂದು ತಿಳಿಸಿದರು. ತಾಲ್ಲೂಕು ಆರೋಗ್ಯಾಧಿಕಾರಿಗಳಾದ ಶ್ರೀಮತಿ ಡಾ// ರಾಧಿಕಮಾತನಾಡಿ ಆರೋಗ್ಯ ಇಲಾಖೆಯಿಂದಅನುಷ್ಠಾನಗೊಳ್ಳುತ್ತಿರುವ ಅನೀಮಿಯ ಮುಕ್ತ ಭಾರತ ಕಾರ್ಯಕ್ರಮದಲ್ಲಿರಕ್ತಹೀನತೆ ಯಿಂದ ಬಳಲುತ್ತಿರುವ ಗರ್ಭಿಣಿ ಮತ್ತು ಬಾಣಂತಿ ಮಹಿಳೆಯರು, ಹದಿಹರೆಯದ ಹೆಣ್ಣು ಮಕ್ಕಳು ಹಾಗೂಮಕ್ಕಳ ಆರೋಗ್ಯ ತಪಾಸಣೆಯನ್ನು ಮಾಡಲಾಗುತ್ತಿದ್ದು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿದರು. ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿಗಳಾದ ಡಾllಶಿವಕುಮಾರ್ ಮಾತನಾಡಿ ನಮ್ಮ ಆರೋಗ್ಯ ಸಂಪಾದನೆಗೆ ನಾವು ಯಾವುದೇ ಕಂಪನಿಗಳಿಂದ ದೊರೆಯುವ ಔಷಧಿಗಳ ಮೊರೆಹೋಗುವ ಅಗತ್ಯವಿಲ್ಲ, ಕೇವಲ ಜಾಹಿರಾತುಗಳಿಗೆ ಮರುಳಾಗಿ ಆರೋಗ್ಯ ಹಾಳುಮಾಡಿಕೊಳ್ಳದೆ,ನಿಮ್ಮ ಮನೆಯಲ್ಲಿಯೇ ತಯಾರು ಮಾಡುವ ಮೊಳಕೆ ಕಾಳುಗಳು ಹಾಗೂ ಸ್ಥಳೀಯವಾಗಿ ಸಿಗುವ ಸೊಪ್ಪು ತರಕಾರಿ ಮತ್ತು ಹಣ್ಣುಗಳನ್ನು ಮೊಟ್ಟೆ ಯನ್ನ ಯಥೇಚ್ಛವಾಗಿಉಪಯೋಗಿಸಬೇಕೆಂದು ತಿಳಿಸಿದರು.
ತಿಪಟೂಟೂರು ವೈಭವಿ ಆಸ್ಪತ್ರೆಯ ವೈದ್ಯರಾದ ಡಾ//ಮಧುಸೂಧನ್ ಮಾತನಾಡಿ ತಾಯಿ ಹಾಲು ಅಮೃತಕ್ಕೆ ಸಮಾನ ತಾಯಿ ಹಾಲಿನಲ್ಲಿ ಹೆಚ್ಚು ಹೆಚ್ಚು ರೋಗ ನಿರೋಧಕಶಕ್ತಿಹೆಚ್ಚಿನ ಪ್ರಮಾಣದಲ್ಲಿಪೌಷ್ಠಿಕಾಂಶಗಳಿವೆ,ಮಗು ಹುಟ್ಟಿದ ಅರ್ಧಗಂಟೆಯೊಳಗೆ, ತಾಯಿ ಎದೆಹಾಲನ್ನು ಕೊಡಬೇಕು, ಹಾಗೂ ಮನೆಯಲ್ಲಿ ತಯಾರಿಸಿದ ಪೌಷ್ಠಿಕಆಹಾರ ನೀಡಬೇಕು.ತಾಯಿ ಹಾಗೂ ಮಕ್ಕಳ ಆರೋಗ್ಯ ಹಾಗೂ ಸುರಕ್ಷತೆಗೆ ಹೆಚ್ಚಿನ ಗಮನ ನೀಡಬೇಕು ಎಂದು ತಿಳಿಸಿದ ಅವರು ಆಪೌಷ್ಠಿಕ ಮಕ್ಕಳಿಗೆ ಐರನ್ ಮತ್ತು ಕ್ಯಾಲ್ಸಿಯಂ ಸಿರಪ್ ಗಳನ್ನು ಉಚಿತವಾಗಿ ವಿತರಿಸಿದರು. ಕಾರ್ಯಕ್ರಮದಲ್ಲಿ ಡಾ//ರವಿ, ಡಾ// ರಂಗನಾಥ್, ಡಾ//ಮುಸ್ತಾಫ್ ಆರ್.ಬಿ.ಎಸ್.ಕೆ. ವೈದ್ಯಾಧಿಕಾರಿಗಳಾದ ಡಾ//ರಾಜು ತಿಪಟೂರು ತಾಲ್ಲೂಕು, ಸ್ತ್ರೀಶಕ್ತಿ ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಎಂ.ಮಂಜುಳಾ ಸಹಾಯಕ ಶಿಶು ಅಭಿವೃದ್ದಿಯೋಜನಾಧಿಕಾರಿಗಳಾದ ಶ್ರೀಮತಿ ದೀಪ ಹೆಬ್ಬಳ್ಳಿ, ಶ್ರೀಮತಿ ಮೀನಾಕ್ಷಿ ಬಿ.ಬಟ್ಟೂರ, ಮೇಲ್ವಿಚಾರಕಿಯರಾದ ಶ್ರೀಮತಿ ಬಿ.ಎಸ್. ಪ್ರೇಮ, ಶ್ರೀಮತಿ ಮಂಜುಳಾದೇವಿ,ಭಾಗ್ಯಮ್ಮ,ಉಪಸ್ಥಿತರಿದರು ತಿಪಟೂರು ತಾಲ್ಲೂಕು ಸ್ತ್ರೀಶಕ್ತಿ ಒಕ್ಕೂಟದ ವತಿಯಿಂದ ಶಿಬಿರದಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಲಯನ್ ಡೇಟ್ ಸಿರಪ್ನ್ನು ಉಚಿತವಾಗಿ ಅಪೌಷ್ಠಿಕ ಮಕ್ಕಳಿಗೆ ವಿತರಿಸಿದರು.
ತಿಪಟೂರು : ತಾಲ್ಲೂಕಿನ ಹೊನ್ನವಳ್ಳಿ ಹೋಬಳಿಯ ಹಾಲ್ಕುರಿಕೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ನಡೆದ ನಿರ್ಧೇಶಕರ ಸ್ಥಾನದ ಚುನಾವಣೆಯಲ್ಲಿ ಸಾಲಗಾರರ ಸಾಮಾನ್ಯ ಕ್ಷೇತ್ರದಿಂದ ಬಸವರಾಜು.ಹೆಚ್.ಎನ್, ಉಮಾಮಹೇಶ್.ಬಿ, ಸೋಮಶೇಖರ್.ಹೆಚ್, ರೇವಣ್ಣ.ಹೆಚ್.ಎಸ್, ಚಂದ್ರಶೇಖರಯ್ಯ,ಆರ್,ವಿ, ಮಹಿಳಾ ಮೀಸಲು ಕ್ಷೇತ್ರದಿಂದ ಜಯಂತಿಕುಮಾರಸ್ವಾಮಿ, ಶೋಭಾ ಕೃಷ್ಣಮೂರ್ತಿ, ಹಿಂದುವಳಿದ ವರ್ಗದಿಂದ ರಾಮಣ್ಣ.ಎಂ.ಆರ್, ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಮೋಹನ್ನಾಯ್ಕ, ಪರಿಶಿಷ್ಟ ವರ್ಗದ ಮೀಸಲು ಕ್ಷೇತ್ರದಿಂದ ನಾಗರಾಜು, ಸಾಲಗಾರರಲ್ಲದ ಮೀಸಲು ಕ್ಷೇತ್ರದಿಂದ ಶೀಲಾಸುರೇಶ್ ಚುನಾಯಿತರಾಗಿದ್ದಾರೆ ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ.
ತಿಪಟೂರು: ತಿಪಟೂರು ತಾಲ್ಲೂಕಿನ ಚಿಕ್ಕಮಾರ್ಪನಹಳ್ಳಿ ಹೆಚ್.ಪಿ.ಎಸ್ ಶಾಲೆಯಲ್ಲಿ ಶಾಂತಲಾ ಕೂಚಿಪೂಡಿ ನೃತ್ಯ ಮತ್ತು ಸಂಗೀತ ಶಾಲೆ ಹಾಗೂ ಕನ್ನಡ ಸಂಸ್ಕೃತಿ ಇಲಾಖೆಯ ಸಂಯುಕ್ತಾಶ್ರಮದಲ್ಲಿ ಕೂಚಿಪುಡಿ ನೃತ್ಯ ಪರಂಪರೆಯ ಪ್ರಾತ್ಯಕ್ಷಿತೆಯ ತರಭೇತಿಯನ್ನು ನೀಡಲಾಯಿತು. ಈ ಸಂಧರ್ಬದಲ್ಲಿ ನೃತ್ಯ ಶಾಲೆಯ ಕಾರ್ಯದರ್ಶಿ ವಿ.ವೇದಾವತಿ, ನಿವೃತ್ತ ದೈಹಿಕ ಶಿಕ್ಷಣ ಅಧೀಕ್ಷಕ ಹೆಚ್.ಎಮ್. ನೀಲೇಶ್ಗೌಡ, ಶಮಂತ್, ಶಶಿಕಲಾ, ಭಾಗ್ಯ, ಹರಿಣಾಕ್ಷಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
ವಿನೋದ್ ಬಾಬು.ಟಿ.ಎಸ್ ( ಬಾಬಣ್ಣ) ವಯಸ್ಸು (60) ಲಿಂಗಾಯತ ಸಮುದಾಯಕ್ಕೆ ಸೇರಿದವರಾಗಿದ್ದು,ತಿಪಟೂರು ತಾಲೂಕು,ಹೆಡಗರಹಳ್ಳಿ ಕಾಲೋನಿಯ ವಾಸಿಯಾಗಿದ್ದು ,ಬಸ್ ಏಜೆಂಟರಾಗಿ ಕೆಲಸ ಮಾಡುತ್ತಿದ್ದರು. ಕೆಂಪು ಬಣ್ಣದ ಚೆಕ್ಸ್ ಶರ್ಟ್ ಹಾಗೂ ನೀಲಿ ಬಣ್ಣದ ಪಂಚ ಧರಿಸಿದ್ದಾರೆ.5 ಅಡಿ 11 ಇಂಚು ಎತ್ತರ, ಗೋಧಿ ಮೈಬಣ್ಣ ಹಾಗೂ ದೃಢಕಾಯ ಶರೀರವನ್ನು ಹೊಂದಿದ್ದಾರೆ.ದಿನಾಂಕ 8.10.2024ರಂದು ಕಾಣೆಯಾಗಿದ್ದು, ನೊಣವಿನಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವ್ಯಕ್ತಿಯು ಕಂಡು ಬಂದಲ್ಲಿ ದಯವಿಟ್ಟು ಈ ಕೆಳಗಿನ ಮೊಬೈಲ್ ನಂಬರ್ ಗೆ ಕರೆ ಮಾಡಿ. ಪುನೀತ್. 9844099113,7975650875
ತುಮಕೂರು ಜಿಲ್ಲೆ ತಿಪಟೂರು ನಗರದ ಕೆ.ಆರ್ ಬಡಾವಣೆ ಶಂಕರಪ್ಪ ಲೇಹೌಟ್ ನಲ್ಲಿ ಗೃಹಿಣಿಯೊಬ್ಬರ ಮಾಗಲ್ಯ ಸರಕದ್ದು ಕಳ್ಳರು ಪಾರಾರಿಯಾಗಿದ್ದಾರೆ
ನಗರದ ಕೆ.ಆರ್ ಬಡಾವಣೆ ವಾಸಿಯಾದ ಅನಸೂಯರಾಜ್ ಎನ್ನುವ ಮಹಿಳೆ ಅಂಗಡಿಯಲ್ಲಿ ದಿನಸಿ ಕೊಳ್ಳಲು ಹೋಗಿದ್ದು,ಅಂಗಡಿಯಿಂದ ವಾಪಾಸ್ ಬರುವಾಗ ಹಿಂಬದಿಯಿಂದ ಬೈಕ್ ನಲ್ಲಿ ಬಂದ ಕಳ್ಳರು ಮಹಿಳೆಯ ಮಾಂಗಲ್ಯ ಸರಕಸಿದುಕೊಂಡು ಪಾರಾರಿಯಾಗಿದ್ದಾರೆ.ತಕ್ಷಣ ಮಹಿಳೆ ತಿಪಟೂರು ನಗರಪೊಲೀಸ್ ಠಾಣೆಗೆ ದೂರು ನೀಡಿದ್ದು, ಸ್ಥಳಕ್ಕೆ ತಿಪಟೂರು ನಗರಪೊಲೀಸ್ ಠಾಣೆ ಪೊಲೀಸರು ತಕ್ಷಣ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು ನಗರಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
* ತುಮಕೂರು ಜಿಲ್ಲೆ ತಿಪಟೂರು. ನಗರದ ಕೃಷಿ ಉತ್ವನ್ನ ಮಾರುಕಟ್ಟೆಯಲ್ಲಿ ಸೋಮವಾರ ರಾತ್ರಿ ಕಳ್ಳರು ಲಕ್ಷಾಂತರ ಮೌಲ್ಯದ ಸುಮಾರು 3635 ಕೆಜಿ ಕೊಬ್ಬರಿ ಕಳವು ಮಾಡುವ ಮೂಲಕ ಕೈಚಳಕ ತೋರಿಸಿದ್ದಾರೆ.
ಎಪಿಎಂಸಿ ಮಾರುಕಟ್ಟೆಯ ಮುಖ್ಯ ದ್ವಾರದ ಬೀಗ ಒಡೆದು ಕಳ್ಳರು ಘಟಕಿನಕೆರೆ ಮೂಲದ ನಾಗರಾಜ್ ಎಂಬುವರ ಒಡೆತನಕ್ಕೆ ಸೇರಿದ ಗಂಗಾ ಟ್ರೇಡರ್ಸ್ ನ ಕಂಪೌಂಡ್ ಹಾಗೂ ಅಂಗಡಿ ಬಾಗಿಲು ಬೀಗ ಮುರಿದು 3645 ಕೆ.ಜಿ ತೂಕದ ಕೊಬ್ಬರಿಯನ್ನು ಕಳ್ಳತನ ಮಾಡಲಾಗಿದೆ. ಏಷಿಯಾ ಖಂಡದಲ್ಲಿಯೇ ದೊಡ್ಡ ಮಾರುಕಟ್ಟೆಯ ಕಾವಲುಗಾರರ ಕಣ್ ತಪ್ಪಿಸಿ ಕಳವು ಮಾಡಿರುವುದು ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದು. ಮಾರುಕಟ್ಟೆಯಲ್ಲಿ ಭದ್ರತಾ ವೈಪಲ್ಯಕ್ಕೆ ಸಾಕ್ಷಿಯಾಗಿದೆ ಬಲ್ಲಮೂಲಗಳ ಪ್ರಕಾರ, 4ಟನ್ ಕೊಬ್ಬರಿಯನ್ನ ಲಾರಿಯಲ್ಲಿ ತುಂಬಿ ಸಾಗಿಸಲಾಗಿದೆ ಇಷ್ಟೊಂದು ರಾಜಾರೋಷವಾಗಿ ಕಳ್ಳತನವಾಗಿರುವುದು, ಎಪಿಎಂಸಿ ಮಾರುಕಟ್ಟೆ ವೈಪಲ್ಯವನ್ನ ತೋರಿಸುತ್ತಿದ್ದು, ಕಳ್ಳರು ಪೂರ್ವ ನಿಯೋಜಿತ ಸಂಚುರೂಪಿಸಿ ಕಳ್ಳತನ ಮಾಡಿದ್ದಾರೆ. ಕದಿಯಲು ಬಂದ ಕಳ್ಳರು ಚಾಕು ಹಾಗೂ ಕಾರದ ಪುಡಿಯನ್ನು ತಂದಿದ್ದು, ಕಾರದಪುಡಿಯನ್ನು ಅಲ್ಲೇ ಚೆಲ್ಲಿ ಹೋಗಿದ್ದಾರೆ. ಸ್ಥಳಕ್ಕೆ ಎಪಿಎಂಸಿ ಅಧಿಕಾರಿಗಳು,ತಿಪಟೂರು ಡಿವೈಎಸ್ಪಿ ವಿನಾಯಕ ಶೆಟ್ಟಿಗೇರಿ ನಗರಠಾಣೆ ವೃತ್ತ ನಿರೀಕ್ಷಕ ವೆಂಕಟೇಶ್, ಸಬ್ ಇನ್ಪೆಕ್ಟರ್ ಕೃಷ್ಣಪ್ಪ ಭೇಟಿ ನೀಡಿದ್ದು, ವಿಶೇಷ ತನಿಖಾ ತಂಡ ರಚನೆ ಮಾಡಲಾಗಿದ್ದು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳಲಾಗಿದ್ದು, ಸಿಸಿ ಕ್ಯಾಮರ ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸರು ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ.
ಜನವರಿ 10 ರಂದು ತಿಪಟೂರು ತಾಲ್ಲೋಕಿನ ರಂಗಾಪುರ ಗ್ರಾಮದ ಕವನ ಎನ್ನು ಸುಮಾರು 14 ಹುಡುಗಿ ಚಿಕಿತ್ಸೆಗಾಗಿ ವೈಭವಿ ಮಲ್ಟಿಸ್ಪೆಷಲಿಟಿ ಹಾಸ್ಪೆಟಲ್ ನಲ್ಲಿ ಬಹುಅಂಗಾಗ ವೈಪಲ್ಯ ಚಿಕಿತ್ಸೆಗೆ ಒಳಗಾಗಿದ್ದು, ಮಗುವಿಗೆ ನಮ್ಮ ಹಾಸ್ಪೆಟಲ್ ನಲ್ಲಿ ದೊರೆಯುವ ಎಲ್ಲಾ ಚಿಕಿತ್ಸೆ ಸಹ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು ಉನ್ನತ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸೂಚನೆ ನೀಡದ್ದು ಚಿಕಿತ್ಸೆಯಲ್ಲಿ ಯಾವುದೇ ಲೋಪವಾಗಿರುವುದಿಲ್ಲ, ಕೆಲಮಾಧ್ಯಮಗಳಲ್ಲಿ ಬಂದಿರುವ ಸುದ್ದಿ ನಿರಾಧಾರವಾಗಿದ್ದು ದುರುದೇಶಪೂರಿತವಾಗಿದೆಎಂದು ವೈಭವಿ ಆಸ್ಪತ್ರೆ ವೈದ್ಯಾಧಿಕಾರಿ ಡಾ//ಮಧುಸೂಧನ್ ತಿಳಿಸಿದರು.
ತುಮಕೂರು ಜಿಲ್ಲೆ ತಿಪಟೂರು ನಗರದ ಭಾರತೀಯ ವೈದ್ಯಕೀಯ ಸಂಘದ ಆವರಣದಲ್ಲಿ ಆಯೋಜಿಸಿದ ಪತ್ರಿಕಾ ಘೋಷ್ಠಿಯಲ್ಲಿ ಮಾಧ್ಯಮ ಘೋಷ್ಠಿ ಉದೇಶಿಸಿ ಮಾತನಾಡಿದ ಡಾ// ಮಧುಸೂಧನ್,ನಮ್ಮ ಹಾಸ್ಪೆಟಲ್ ಗೆ ಚಿಕಿತ್ಸೆಗಾಗಿ ಬಂದಿದ್ದ ಕವನ ಎನ್ನುವ ಸುಮಾರು 14 ವರ್ಷದ ಹುಡುಗಿ ಮೊದಲು ಶ್ರೀದೇವಿ ಮಕ್ಕಳ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿ, ವೈದ್ಯರ ಸೂಚನೆ ಮೇರೆಗೆ ವೈಭವಿ ಆಸ್ಪತ್ರೆಗೆ ದಾಖಲಿಸಲಾಗಿದ್ದು,ಮಗು ನಮ್ಮ ಆಸ್ಪತ್ರೆಗೆ ದಾಖಲಿಸಿಕೊಂಡು ತುರ್ತು ಚಿಕಿತ್ಸೆ ಸಹ ,ನೀಡಲಾಗಿದೆ.ಮಗುವಿನ ನಾಡಿಮಿಡಿತ ಹಾಗೂ ತೀವ್ರ ಉಸಿರಾಟದತೊಂದರೆ,ತೊಂದರೆಗೆ ಒಳಗಾಗಿತ್ತು,ತಕ್ಷಣ ತುರ್ತುಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಉನ್ನತ ಆಸ್ಪತ್ರೆಗೆ,ಕರೆದುಕೊಂಡು ಹೋಗಲು ಸೂಚಿಸಿದ್ದೇವು, ಹೆಚ್ಚಿನ ಚಿಕಿತ್ಸೆಗೆ ಕರೆದುಕೊಂಡು ಹೋಗುವ ವೇಳೆ ಹುಡುಗಿ ಸಾವನ್ನಪ್ಪಿದೆ, ಆದರೆ ಕೆಲ ಮಾಧ್ಯಮಗಳು ನಮ್ಮ ಆಸ್ಪತ್ರೆಯಿಂದ ಸೂಕ್ತ ಚಿಕಿತ್ಸೆ ನೀಡದೆ ಕರ್ತವ್ಯ ಲೋಪವೆಸಗಲಾಗಿದೆ ಎಂದು ಸುಳ್ಳು ಸುದ್ದಿ ಮಾಡುತ್ತಿರುವುದು, ಸರಿಯಲ್ಲ, ಪ್ರಾಣಾಪಾಯದಲ್ಲಿ ಇದ್ದ ಹುಡುಗಿಗೆ ನಮ್ಮ ಶಕ್ತಿ ಮೀರಿ ತುರ್ತು ಚಿಕಿತ್ಸೆ ನೀಡಿದ್ದೇವೆ ಆದರೆ ಸುಳ್ಳು ಆರೋಪದ ಸುದ್ದಿ ನೋಡಿ, ನಮಗೆ ಆಘಾತವಾಗಿದೆ, ಪ್ರಾಮಾಣಿಕವಾಗಿ ಕೆಲಸ ಮಾಡುವವರ ಮೇಲೆ ಸುಳ್ಳು ಆರೋಪ ಮಾಡಿದರೆ,ತುರ್ತು ಸಂದರ್ಭದಲ್ಲಿ ಚಿಕಿತ್ಸೆ ನೀಡಲು ಮಾನಸಿಕ ಸ್ಥೈರ್ಯ ಕುಗಿಸುವ ಕೆಲಸವಾಗುತ್ತದೆ,ನಾನು ಆತ್ಮಸಾಕ್ಷಿಯಿಂದ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇವೆ. ನಮ್ಮ ಆಸ್ಪತ್ರೆ ವಿರುದ್ದ ಯಾರಾದರೂ ಪೂರ್ವಾಗ್ರಹ ಪೀಡಿತರಾಗಿ, ದುರುದೇಶಪೂರಕವಾಗಿ ಅಪಪ್ರಚಾರ ಮಾಡಿದರೇ ಕಾನೂನು ಕ್ರಮಕ್ಕೆ ಮುಂದಾಗುತ್ತೇವೆ ಎಂದು ತಿಳಿಸಿದರು. ಪತ್ರಿಕಾ ಘೋಷ್ಠಿಯಲ್ಲಿ ಉಪಸ್ಥಿತರಿದ ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ//ರಾಮೇಗೌಡ ಮಾತನಾಡಿ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದ ಮಗುವಿಗೆ,ತುರ್ತು ಚಿಕಿತ್ಸೆ ನೀಡಲಾಗಿದೆ ಆದರೆ ದುರುದೇಶ ಪೂರಕವಾಗಿ ಮಾಧ್ಯಮಗಳಲ್ಲಿ ನಿರಾಧಾರ ಆರೋಪಮಾಡಿ,ಆತ್ಮಸ್ಥೈರ್ಯ ಕುಗ್ಗಿಸುವ ಕೆಲಸ ಮಾಡಿದರೆ ವೈದ್ಯರು ತುರ್ತು ಸಂದರ್ಭಗಳಲ್ಲಿ ಹೇಗೆ ತಾವೇ ಧೈರ್ಯವಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು,
ಕುಮಾರ್ ಅಸ್ಪತ್ರೆಯ ವೈದ್ಯಾಧಿಕಾರಿ ಡಾ//ಶ್ರೀಧರ್ ಮಾತನಾಡಿ ವೈದ್ಯರು ಸಹ ಮನುಷ್ಯರೇ ನಾವೇನು ದೇವರಲ್ಲ, ನಾವೂ ಪ್ರತಿಯೊಬ್ಬ ರೋಗಿಯನ್ನ ಬದುಕಿಸಬೇಕು ಎನ್ನುವ ಆಸೆಯಿಂದ ಚಿಕಿತ್ಸೆ ನೀಡುತ್ತೇವೆ,ಆದರೆ ನಮ್ಮ ಕೈಮೀರಿ ಸಾವು ನೋವುಗಳು ಸಂಭವಿಸಿದರೆ, ನಾವೇನು ಮಾಡಲು ಸಾಧ್ಯ,ವೈಭವಿ ಆಸ್ಪತ್ರೆಯಲ್ಲಿ ಮಗುವಿಗೆ ಚಿಕಿತ್ಸೆ ನೀಡುವಾಗ ಮಗು ಸಂಪೂರ್ಣ ಅಸ್ವಸ್ಥಗೊಂಡಿದ್ದು ಬಹುಅಂಗಾಗ ವೈಪಲ್ಯಕ್ಕೆ ಒಳಗಾಗಿದ್ದ,ಮಗುವಿಗೆ ಆಸ್ಪತ್ರೆಯಲ್ಲಿ ಇರುವ ಎಲ್ಲಾಸೌಲಭ್ಯ ಬಳಸಿ ಚಿಕಿತ್ಸೆ ನೀಡಿದರು ಮಾಧ್ಯಮಗಳಲ್ಲಿ ಆರೋಪ ಮಾಡಿರುವುದು ಸರಿಯಲ್ಲ ಎಂದು ತಿಳಿಸಿದರು ಡಾ//ವಿವೇಚನ್ ಮಾತನಾಡಿ ವೈಭವಿ ಆಸ್ಪತ್ರೆಯಲ್ಲಿ ಮಗುವಿಗೆ ಎಲ್ಲಾ ರೀತಿ ಚಿಕಿತ್ಸೆ ನೀಡಲಾಗಿದೆ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಯ ಕರ್ತವ್ಯ ಲೋಪವಾಗಿಲ್ಲ,ಎಂದು ತಿಳಿಸಿದರು ಪತ್ರಿಕಾ ಘೋಷ್ಠಿಯಲ್ಲಿ ಉಪಸ್ಥಿತರಿದ ಸ್ತ್ರೀ ಹಾಗೂ ಪ್ರಸೂತಿ ತಜ್ಞ ವೈದ್ಯರಾದ ಡಾ//ರವಿ ಮಾತನಾಡಿ ತಿಪಟೂರಿನಿಂದ ಹಾಸನ ಆಸ್ಪತ್ರೆ ,ತುಮಕೂರು ಆಸ್ಪತ್ರೆ, ಬೆಂಗಳೂರು ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿಯೇ ಅನೇಕ ರೋಗಿಗಳ ಪ್ರಾಣಹಾನಿಯಾಗಿರುವ ಉದಾಹರಣೆಗಳಿವೆ,ವೈಭವಿ ಮಲ್ಟಿ ಸ್ಪೆಷಲಿಟಿ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಸೌಲಭ್ಯವಿದ್ದು, ಮಕ್ಕಳಿಗೆ ಉತ್ತಮ ವೈದ್ಯಕೀಯ ಸೌಲಭ್ಯ ನೀಡಲಾಗುತ್ತಿದೆ,ಆದರೇ ಆಸ್ಪತ್ರೆಗೆ ಬರುವ ಮೊದಲೇ ರೋಗಿ ತೀವ್ರವಾದ ಕಾಯಿಲೆಗೆ ಒಳಗಾಗಿದರೆ ನಮ್ಮ ಅಸ್ಪತ್ರೆಯ ಸೌಲಭ್ಯಗಳು ಹಾಗೂ ವೈದ್ಯರು ಶಕ್ತಿಮೀರಿ ಪ್ರಯತ್ನಿಸಿದರು ಜೀವ ಉಳಿಸಲು ಸಾಧ್ಯವಾಗುವುದಿಲ್ಲ,ಎಂದು ತಿಳಿಸಿದರು ಪತ್ರಿಕಾ ಘೋಷ್ಠಿಯಲ್ಲಿ ವೈದ್ಯರಾದ ಡಾ//ನಟರಾಜ್ ಡಾ//ಅನೀಲ್.ಡಾ//ಕಿರಣ್ ಉಪಸ್ಥಿತರಿದರು