Month: March 2025

ತಿಪಟೂರು ತಾಲ್ಲೂಕಿನ ನೊಣವಿನಕೆರೆಯಲ್ಲಿ ಶ್ರೀ ಕ್ಷೇತ್ರ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ಯಾತ್ರೀಕೃತ ಭತ್ತ ನಾಟಿ ಕಾರ್ಯಕ್ರಮ ನಡೆಸಲಾಯಿತು,

ದಿವ್ಯ ಸಾನಿಧ್ಯವಹಿಸಿದ ವಹಿಸಿದ ನೊಣವಿನಕೆರೆ ಶ್ರೀಕಾಡಸಿದ್ದೇಶ್ವರ ಮಠದ ಅಭಿನವ ಶ್ರೀಕಾಡಸಿದ್ದೇಶ್ವರ ಮಹಾಸ್ವಾಮೀಜಿ ಭತ್ತದ ಪೈರನ್ನು ರೈತರಿಗ ಹಸ್ತಾಂತರ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು, ತುಮಕೂರು ಜಿಲ್ಲೆಯ ನಿರ್ದೇಶಕರಾದ ಯುತ ಸತೀಶ್ ಸುವರ್ಣ ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಮ್ಮೂರು ನಮ್ಮ ಕೆರೆ ಅಭಿವೃದ್ಧಿ ಕಾರ್ಯಕ್ರಮಗಳು ಸಿರಿ ಧಾನ್ಯ ಬೇಸಾಯ ಮತ್ತು ಯೋಜನೆಯ ಸಮುದಾಯ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಮಾತನಾಡಿದರು, ಗ್ರಾಮ ಅಭಿವೃದ್ಧಿ ಯೋಜನೆಯ ಯಂತ್ರಶ್ರೀ ಕಾರ್ಯಕ್ರಮದ ಯೋಜನಾಧಿಕಾರಿಗಳದ ಶ್ರೀಯುತ ಸುಧೀರ್ ಜೈನ್ ಮಾತನಾಡಿ ನೊಣವಿನಕೆರೆ ಭಾಗದ ರೈತರು ಹಲವಾರು ವರ್ಷಗಳಿಂದ ಭತ್ತ ಬೇಸಾಯ ಮಾಡುವುದನ್ನು ಬಿಟ್ಟಿದ್ದರು 2023ರಲ್ಲಿ ಪ್ರಾಯೋಗಿಕವಾಗಿ 20 ರೈತರಲ್ಲಿ 32 ಯಾಂತ್ರಿಕೃತ ಭತ್ತ ಬೇಸಾಯ ಮಾಡಲಾಗಿತ್ತು 2024ರಲ್ಲಿ 450 ಎಕರೆ ಭತ್ತ ಬೇಸಾಯ ಮಾಡಲಾಗಿದ್ದು 2025ರಲ್ಲಿ 650ಕ್ಕೂ ಹೆಚ್ಚಿನ ಎಕ್ರೆಗಳಲ್ಲಿ ಬತ್ತ ಬೇಸಾಯ ಮಾಡಲಾಗುತ್ತಿದೆ, ಆಧುನಿಕ ಕೃಷಿಯತ್ತ ರೈತರು ಒಲವನ್ನು ತೋರಿಸುತ್ತಿರುವುದು. ಒಳ್ಳೆಯ ಬೆಳವಣಿಗೆ ಆಗಿದೆ ಎಂದು ಅಭಿಪ್ರಾಯಪಟ್ಟರು., ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ್ ಪಂಚಾಯತ್ ಅಧ್ಯಕ್ಷ ರಾದ ಶ್ರೀಮತಿ ಜಯಮ್ಮ ಅವರು ವಹಿಸಿದ್ದರು , ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಶ್ರೀಮತಿ ದಿವ್ಯ ಪ್ರಗತಿಪರ ಕೃಷಿಕರಾದ ಶ್ರೀಯುತ ಸ್ವಾಮಿ ಜಮೀನಿನ ಮಾಲೀಕರಾದ ಶ್ರೀಯುತ ಪ್ರಕಾಶ್ ವಲಯದ ಮೇಲ್ವಿಚಾರಕರಾದ ಶ್ರೀಯುತ ಮುನಿಕೃಷ್ಣ JVKಸಮನ್ವಯಾಧಿಕಾರಿ ಶ್ರೀಮತಿ ಭಾಗ್ಯಲಕ್ಷ್ಮಿ ಉಪಸ್ಥಿತರಿದ್ದರು ಯೋಜ ನಾಧಿಕಾರಿ ಶ್ರೀಯುತ ಸುರೇಶ್ ಸ್ವಾಗತಿಸಿದರು

ವರದಿ :ಮಂಜುನಾಥ್ ಹಾಲ್ಕುರಿಕೆ

ತಿಪಟೂರು ತಾಲ್ಲೂಕಿನ ನೊಣವಿನಕೆರೆಯಲ್ಲಿ ಶ್ರೀ ಕ್ಷೇತ್ರ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ಯಾತ್ರೀಕೃತ ಭತ್ತ ನಾಟಿ ಕಾರ್ಯಕ್ರಮ ನಡೆಸಲಾಯಿತು,

ದಿವ್ಯ ಸಾನಿಧ್ಯವಹಿಸಿದ ವಹಿಸಿದ ನೊಣವಿನಕೆರೆ ಶ್ರೀಕಾಡಸಿದ್ದೇಶ್ವರ ಮಠದ ಅಭಿನವ ಶ್ರೀಕಾಡಸಿದ್ದೇಶ್ವರ ಮಹಾಸ್ವಾಮೀಜಿ ಭತ್ತದ ಪೈರನ್ನು ರೈತರಿಗ ಹಸ್ತಾಂತರ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು, ತುಮಕೂರು ಜಿಲ್ಲೆಯ ನಿರ್ದೇಶಕರಾದ ಯುತ ಸತೀಶ್ ಸುವರ್ಣ ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಮ್ಮೂರು ನಮ್ಮ ಕೆರೆ ಅಭಿವೃದ್ಧಿ ಕಾರ್ಯಕ್ರಮಗಳು ಸಿರಿ ಧಾನ್ಯ ಬೇಸಾಯ ಮತ್ತು ಯೋಜನೆಯ ಸಮುದಾಯ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಮಾತನಾಡಿದರು, ಗ್ರಾಮ ಅಭಿವೃದ್ಧಿ ಯೋಜನೆಯ ಯಂತ್ರಶ್ರೀ ಕಾರ್ಯಕ್ರಮದ ಯೋಜನಾಧಿಕಾರಿಗಳದ ಶ್ರೀಯುತ ಸುಧೀರ್ ಜೈನ್ ಮಾತನಾಡಿ ನೊಣವಿನಕೆರೆ ಭಾಗದ ರೈತರು ಹಲವಾರು ವರ್ಷಗಳಿಂದ ಭತ್ತ ಬೇಸಾಯ ಮಾಡುವುದನ್ನು ಬಿಟ್ಟಿದ್ದರು 2023ರಲ್ಲಿ ಪ್ರಾಯೋಗಿಕವಾಗಿ 20 ರೈತರಲ್ಲಿ 32 ಯಾಂತ್ರಿಕೃತ ಭತ್ತ ಬೇಸಾಯ ಮಾಡಲಾಗಿತ್ತು 2024ರಲ್ಲಿ 450 ಎಕರೆ ಭತ್ತ ಬೇಸಾಯ ಮಾಡಲಾಗಿದ್ದು 2025ರಲ್ಲಿ 650ಕ್ಕೂ ಹೆಚ್ಚಿನ ಎಕ್ರೆಗಳಲ್ಲಿ ಬತ್ತ ಬೇಸಾಯ ಮಾಡಲಾಗುತ್ತಿದೆ, ಆಧುನಿಕ ಕೃಷಿಯತ್ತ ರೈತರು ಒಲವನ್ನು ತೋರಿಸುತ್ತಿರುವುದು. ಒಳ್ಳೆಯ ಬೆಳವಣಿಗೆ ಆಗಿದೆ ಎಂದು ಅಭಿಪ್ರಾಯಪಟ್ಟರು., ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ್ ಪಂಚಾಯತ್ ಅಧ್ಯಕ್ಷ ರಾದ ಶ್ರೀಮತಿ ಜಯಮ್ಮ ಅವರು ವಹಿಸಿದ್ದರು , ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಶ್ರೀಮತಿ ದಿವ್ಯ ಪ್ರಗತಿಪರ ಕೃಷಿಕರಾದ ಶ್ರೀಯುತ ಸ್ವಾಮಿ ಜಮೀನಿನ ಮಾಲೀಕರಾದ ಶ್ರೀಯುತ ಪ್ರಕಾಶ್ ವಲಯದ ಮೇಲ್ವಿಚಾರಕರಾದ ಶ್ರೀಯುತ ಮುನಿಕೃಷ್ಣ JVKಸಮನ್ವಯಾಧಿಕಾರಿ ಶ್ರೀಮತಿ ಭಾಗ್ಯಲಕ್ಷ್ಮಿ ಉಪಸ್ಥಿತರಿದ್ದರು ಯೋಜ ನಾಧಿಕಾರಿ ಶ್ರೀಯುತ ಸುರೇಶ್ ಸ್ವಾಗತಿಸಿದರು

ವರದಿ :ಮಂಜುನಾಥ್ ಹಾಲ್ಕುರಿಕೆ

ಗುಬ್ಬಿ: ತಾಲ್ಲೂಕಿನ ಕಡಬ ಹೋಬಳಿಗೆ ಒಳಪಡುವ ತಾಲ್ಲೂಕಿಗೆ ಚಿಟ್ಟೆ ಮೇಳ ಹಾಗೂ ಅರೆ ವಾದ್ಯ ಕಲೆ ಪರಂಪರೆಯ ಹೆಗ್ಗುರುತಾದ ಹರಗಲದೇವಿ ಗುಡ್ಡದ ಕಾವಲ್ ಗ್ರಾಮದ ಛಲವಾದಿ ಚಾಲುಕ್ಯ ವಂಶದವರ ಆರಾಧ್ಯ ದೇವಿ ಶ್ರೀ ಆದಿಶಕ್ತಿ ಮಾರಮ್ಮ ಮತ್ತು ಕಾಳಘಟಮ್ಮ ದೇವಿಯ ವಾರ್ಷಿಕ ಜಾತ್ರಾ ಮಹೋತ್ಸವವು ಮಾ.04 ರಿಂದ ಮಾ.05 ದರ ವರೆಗೆ ಅದ್ದೂರಿಯಾಗಿ ವಿಜೃಂಭಣೆಯಿಂದ ನಡೆಯಿತು,ಮೊದಲ ದಿನ ದೇವಿಯನ್ನು ರಾಜ ಬೀದಿಗಳಲ್ಲಿ ಮೆರವಣಿಗೆಯೊಂದಿಗೆ ಮೆರೆಸಿ ಗಂಗಾ ಪೂಜೆ ಸಲ್ಲಿಸಿ ನಂತರ ಛಲವಾದಿ ಕುಟುಂಬಸ್ಥರ ಆರತಿ ಮೆರವಣಿಗೆನ್ನು ಚಿಟ್ಟೆ ಮೇಳದಿಂದ ಮತ್ತು ಅರೆ ವಾದ್ಯದೊಂದಿಗೆ ದೇವಿಯ ಆರಾಧಿಸಿ, ಶ್ರೀ ಕೆಂಚರಾಯ ಮತ್ತು ಶ್ರೀ ವೀರಭದ್ರ ಸ್ವಾಮಿಯ ಸೋಮನ ಕುಣಿತದೊಂದಿಗೆ ವಿಜೃಂಭಣೆಯಿಂದ ಮೆರವಣೆಗೆ ಮಾಡಿ ದೇವಿಯ ಗದ್ದುಗೆ ಮಾಡಲಾಗಿತ್ತದೆ, ನಂತರ ಎಡೆ ಅರ್ಪಣೆ ಮಾಡಿ ಛಲವಾದಿ ಪ್ರತಿ ಕುಟುಂಬಕ್ಕೆ ಸರಗು ಹಾಗೂ ಪದ್ಧತಿ ರೂಢಿಯಲ್ಲಿದೆ ಎರಡನೇ ದಿನ ದೇವಿಗೆ ಮಡಲಕ್ಕಿ ಸೇವೆಯನ್ನು ಮೆರವಣಿಗೆಯೊಂದಿಗೆ ಪಡೆದು ಭಕ್ತರ ಮನಸೂರೆಗೊಳ್ಳುವ ಸೋಮನ ಕುಣಿತ ನಡೆಸಿ ಭಕ್ತರ ಕೋರಿಕೆ ಈಡೇರಿಕೆಗೆ ಕುರುವು ಕೇಳುವ ವಿಶೇಷ ಆಚರಣೆ ಪದ್ಧತಿ ರೂಢಿಯಲ್ಲಿದೆ ಈ ರೀತಿ ಹಲವಾರು ತಮ್ಮ ಕಷ್ಟಗಳ ನಿವಾರಿಸಲು ಕುರುವನ್ನು ದೇವಿಗೆ ಇಟ್ಟು ಫಲವನ್ನು ಪಡೆದಿದ್ದಾರೆ, ನಂತರ ಅಂತಿಮವಾಗಿ ದೇವಿಗೆ ಮತ್ತೊಂದು ವಿಶೇಷ ಆಚರಣೆ ಮಣೆವು ಮಾಡಿ ದೇವಿಯ ಪೂಜಿಸಿ,ಕುಣಿಸಿ, ಆರಾಧಿಸಿ ಅಂತಿಮಗೊಳಿಸಲಾಗುತ್ತದೆ, ಸದರಿ ಗ್ರಾಮದ ಶ್ರೀ ಮಾರಮ್ಮ ದೇವಿಯ ಅರ್ಚಕರಾದ ಶಿವಣ್ಣ ಮಾತನಾಡಿ ನಮ್ಮ ಛಲವಾದಿ ಸಮುದಾಯದ 24 ಮನೆಗಳು ಇದ್ದು ಪ್ರತಿ ವರ್ಷವೂ ಜಾತ್ರೆಯನ್ನು ಅದ್ದೂರಿಯಾಗಿ ಮಾಡಲಾಗಿತ್ತದೆ ಅಂತೆಯೇ ಈ ವರ್ಷವೂ ಜಾತ್ರೆಯು ವಿಜೃಂಭಣೆಯಿಂದ ನಡೆಯಿತು ನಮ್ಮ ಕುಟುಂಬದ ಮೂರು ತಲೆಮಾರುಗಳಿಂದ ದೇವಿಯ ಅರ್ಚಕರ ವೃತ್ತಿ ಮಾಡುತ್ತಿದ್ದೇವೆ ನಮ್ಮ ಈ ಜಾತ್ರೆಯು ಪ್ರತಿ ಶಿವರಾತ್ರಿ ಹಬ್ಬವಾದ 5 ದಿನಕ್ಕೆ ಪ್ರಾರಂಭವಾಗುತ್ತದೆ ನಮ್ಮ ಗ್ರಾಮದ ಜಾತ್ರೆಗೆ ಸುತ್ತಮುತ್ತಲ ಗ್ರಾಮಸ್ಥರು ಸೇರಿದಂತೆ ಬೇರೆ ತಾಲ್ಲೂಕು ಜಿಲ್ಲೆಗಳಿಂದ ನೂರಾರು ಭಕ್ತರು ಆಗಮಿಸುತ್ತಾರೆ ನಮ್ಮ ಸಮುದಾಯವು ಚಿಟ್ಟೆ ಮೇಳ ಹಾಗೂ ಅರೆ ವಾದ್ಯ ಕಲೆ, ಸಂಸ್ಕೃತಿಗೆ ಹೆಸರಾಗಿದೆ ಸರ್ಕಾರದಿಂದ ನಮ್ಮ ಸಮುದಾಯದ ಕಲಾವಿದರಿಗೆ ನೆರವು ದೊರೆತರೆ ಯುವ ಕಲಾವಿದರು ಹೊರಬರಲು ಹಾಗೂ ನಮ್ಮ ಕಲೆಯನ್ನು ನೆಲೆ ಗೊಳಿಸಲು ಅನುವಾಗುತ್ತದೆ ಎಂದರು.

ಸದರಿ ಶ್ರೀ ಆದಿಶಕ್ತಿ ಮಾರಮ್ಮ ದೇವಿ ಮತ್ತು ಶ್ರೀ ಕಾಳಘಟಮ್ಮ ದೇವಿಯ ಜಾತ್ರಾ ಮಹೋತ್ಸವದಲ್ಲಿ ಗುಡಿ ಗೌಡರಾದ ಯೋಗೀಶ್, ಬಸವರಾಜು , ಭೀಮರಾಜು, ವಾದ್ಯ ಗೋಷ್ಠಿಗೆ ದಿವಂಗತ ವಾದ್ಯ ಶಂಕರಯ್ಯನವರ ಕುಟುಂಬಸ್ಥರಾದ ಸತೀಶ್ ಕುಮಾರ್ ಮತ್ತು ಕಲಾ ತಂಡ, ಸಮುದಾಯದ ಹಿರಿಯ ಮುಖಂಡರು ಹಾಗೂ ಗ್ರಾಮದ ಭಕ್ತರು ಸೇರಿದಂತೆ ನೆರೆ ಹೊರೆಯ ನೂರಾರು ಭಕ್ತರು ಶ್ರೀ ದೇವಿಯ ಕೃಪೆಗೆ ಪಾತ್ರರಾದರು.

ವರದಿ: ಸಂತೋಷ್ ಓಬಳ. ಗುಬ್ಬಿ

ತಿಪಟೂರು ತಾಲ್ಲೂಕಿನ ಮದ್ಲೇಹಳ್ಳಿ ಗ್ರಾಮದಲ್ಲಿ ಅರಣ್ಯ ಇಲಾಖೆ ಇಟ್ಟಿದ ಬೋನಿಗೆ ಆಹಾರ ಅರಸಿಬಂದ ಚಿರತೆ ಸೇರೆಯಾಗಿದ್ದು, ಬೋನಿನಲ್ಲಿ ಸೆರೆಯಾಗಿದ್ದ ಚಿರತೆ, ಅಗ್ನಿಅವಘಡದಲ್ಲಿ ಸಾವನ್ನಪ್ಪಿರುವ ಬಗ್ಗೆ ಕಲ್ಪತರು ಕ್ರಾಂತಿ ಡಾಟ್ ಕಾಂ ನಲ್ಲಿ ವರದಿ ಪ್ರಸಾರವಾಗಿತ್ತು,

ಕಲ್ಪತರು ಕ್ರಾಂತಿ ಸೇರಿದಂತೆ ಮಾಧ್ಯಮಗಳ ವರದಿಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಅರಣ್ಯ ಸಚಿವ ಈಶ್ವರ್ ಖಂಡ್ರೆ ರವರು,ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಕರ್ತವ್ಯ ಲೋಪದ ಬಗ್ಗೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ದರ್ಜೆ ಅಧಿಕಾರಿಗಳಿಂದ ತನಿಖೆಗೆ ಆದೇಶಿಸಿದ್ದಾರೆ,

ಪತ್ರಿಕೆ ಬಳಗವು ಅರಣ್ಯ ಸಚಿವರ ಮಾನವೀಯ ನಡೆತೆ ಹಾಗೂ ಅರಣ್ಯ ಸಂಪತ್ತು,ವನ್ಯಜೀವಿಗಳ ಬಗೆಗಿನ ಕಾಳಜಿಗೆ ಅಭಿನಂದನೆ ಸಲ್ಲಿಸಿದೆ.

ವರದಿ:ಮಂಜುನಾಥ್ ಹಾಲ್ಕುರಿಕೆ

ತಿಪಟೂರು ತಾಲ್ಲೂಕಿನ ಮದ್ಲೇಹಳ್ಳಿ ಗ್ರಾಮದಲ್ಲಿ ಅರಣ್ಯ ಇಲಾಖೆ ಇಟ್ಟಿದ ಬೋನಿಗೆ ಆಹಾರ ಅರಸಿಬಂದ ಚಿರತೆ ಸೇರೆಯಾಗಿದ್ದು, ಬೋನಿನಲ್ಲಿ ಸೆರೆಯಾಗಿದ್ದ ಚಿರತೆ, ಅಗ್ನಿಅವಘಡದಲ್ಲಿ ಸಾವನ್ನಪ್ಪಿರುವ ಬಗ್ಗೆ ಕಲ್ಪತರು ಕ್ರಾಂತಿ ಡಾಟ್ ಕಾಂ ನಲ್ಲಿ ವರದಿ ಪ್ರಸಾರವಾಗಿತ್ತು,

ಕಲ್ಪತರು ಕ್ರಾಂತಿ ಸೇರಿದಂತೆ ಮಾಧ್ಯಮಗಳ ವರದಿಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಅರಣ್ಯ ಸಚಿವ ಈಶ್ವರ್ ಖಂಡ್ರೆ ರವರು,ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಕರ್ತವ್ಯ ಲೋಪದ ಬಗ್ಗೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ದರ್ಜೆ ಅಧಿಕಾರಿಗಳಿಂದ ತನಿಖೆಗೆ ಆದೇಶಿಸಿದ್ದಾರೆ,ಪತ್ರಿಕೆ ಬಳಗವು ಅರಣ್ಯ ಸಚಿವರ ಮಾನವೀಯ ನಡೆತೆ ಹಾಗೂ ಅರಣ್ಯ ಸಂಪತ್ತು,ವನ್ಯಜೀವಿಗಳ ಬಗೆಗಿನ ಕಾಳಜಿಗೆ ಅಭಿನಂದನೆ ಸಲ್ಲಿಸಿದೆ.

ವರದಿ :ಮಂಜುನಾಥ್ ಹಾಲ್ಕುರಿಕೆ

ತಿಪಟೂರು :ತಾಲ್ಲೂಕಿನ ಮತ್ತಿಹಳ್ಳಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ವತಿಯಿಂದ ಕೆರೆ ಜೀರ್ಣೋದಾರ ಕಾಮಗಾರಿಯ ಗುದ್ದಲಿಪೂಜೆಯನ್ನುನೆರವೇರಿಸಲಾಯಿತು.

ತುಮಕೂರು ಹಾಲು ಒಕ್ಕೂಟದ ತಿಪಟೂರು ತಾಲ್ಲೂಕು ನಿರ್ದೇಶಕರಾದ ಮಾದಿಹಳ್ಳಿ ಪ್ರಕಾಶ್ ರವರು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯು ಕೆರೆ ಕಾಮಗಾರಿಗಳನ್ನು ನೆಡಿಸಿ ರಾಜ್ಯದ ಅನೇಕ ರೈತರಕೃಷಿಚಟುವಟಿಕೆಗಳಿಗೆ,ಜೀವಜಂತುಗಳ ಕುಡಿಯುವ ನೀರಿನ ಸೌಕರ್ಯಗಳನ್ನು ಮಾಡಿಕೊಡುವ ಅತ್ಯಂತ ಪುಣ್ಯ ಕೆಲಸವನ್ನು ಮಾಡುತ್ತಿದೆ.ತಾಲ್ಲೂಕಿನಲ್ಲಿ ಯೋಜನೆಯ ವತಿಯಿಂದ ಇದುವರೆಗೂ 9 ಕೆರೆ ಕಾಮಗಾರಿಗಳನ್ನು ಪುನಶ್ಚೇತನಗೊಳಿಸಿದ್ದು ಪ್ರಸ್ತುತ ಮತ್ತಿಹಳ್ಳಿ ಕೆರೆಯು 10 ನೇ ಕೆರೆಯಾಗಿದ್ದು ಎಲ್ಲಾ ಕೆರೆಗಳು ಮಾದರಿ ಕೆರೆಗಳಾಗಿವೆ.ಪೂಜ್ಯ ವೀರೇಂದ್ರ ಹೆಗ್ಗಡೆಯವರ ಇಂತಹ ನಿಸ್ವಾರ್ಥ ಸೇವೆ ನಿಜಕ್ಕೂ ಅತ್ಯದ್ಬುತ ಎಂದು ಶ್ಲಾಘಿಸಿದರು.ಮತ್ತಿಹಳ್ಳಿ ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿಯವರಾದ ಶಿವರಾಜ್ ರವರು ಮಾತನಾಡಿ ಧರ್ಮಸ್ಥಳ ಗ್ರಾಮಭಿವೃದ್ದಿ ಯೋಜನೆಯ ಕಾರ್ಯಗಳು ಅತ್ಯುತ್ತಮವಾಗಿದ್ದು ಗ್ರಾಮಸ್ಥರು ಯಾವುದೇ ರಾಜಕೀಯಕ್ಕೆ ಆಸ್ಪದ ಕೊಡದೆ ಒಗ್ಗಟ್ಟಿನಿಂದ ಸಹಕಾರ ನೀಡಿದರೆ ಕೆರೆ ಅಭಿವೃದ್ದಿ ಶತಸಿದ್ದ ಎಂದು ಶುಭ ಹಾರೈಸಿದರು.


ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ತುಮಕೂರು-1 ಜಿಲ್ಲೆಯ ಜಿಲ್ಲಾ ನಿರ್ದೇಶಕರಾದ ಸತೀಶ್ ಸುವರ್ಣ ರವರು ಮಾತನಾಡಿ ಯೋಜನೆಯ ಕೆರೆ ಅಭಿವೃದ್ದಿಕಾಮಗಾರಿಯ ಕಾರ್ಯವೈಖರಿ ಹಾಗೂ ಕೆರೆ ಸ್ವಚ್ಛತೆಯ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು.ಕೆರೆ ಕಾಮಗಾರಿ ಗುದ್ದಲಿಪೂಜಾ ಕಾರ್ಯಕ್ರಮದಲ್ಲಿ ಮತ್ತಿಹಳ್ಳಿ ಗ್ರಾ.ಪ.ಅದ್ಯಕ್ಷರಾದ ಜ್ಯೋತಿ,ಗ್ರಾ.ಪ.ಸದಸ್ಯರಾದ ಹರೀಶ್ ಗೌಡ,ರೇಣುಕಮ್ಮ,ಹರೀಶ್,ರೂಪ,ಯೋಜನಾಧಿಕಾರಿ ಉದಯ್.ಕೆ,ಕೆರೆ ಸಮಿತಿ ಅದ್ಯಕ್ಷರಾದ ಹರೀಶ್,ಪಟೇಲ್ ಜಯಣ್ಣ,ಕೃಷಿ ಮೇಲ್ವಿಚಾರಕ ಪ್ರಮೋದ್,ಮೇಲ್ವಿಚಾರಕಿ ಅನಿತ,ಜನಜಾಗೃತಿ ವೇದಿಕೆ ಸದಸ್ಯರಾದ ಶ್ಯಾಮ್ ಸುಂದರ್,ಮಲ್ಲಿಗಪ್ಪಾಚಾರ್,ಸೇವಾಪ್ರತಿನಿಧಿ ಕಮಲಮ್ಮ ಹಾಗೂ ಮತ್ತಿಹಳ್ಳಿ ಗ್ರಾಮಸ್ಥರು ಉಪಸ್ಥಿತರಿದ್ದರು.

ವರದಿ :ಮಂಜುನಾಥ್ ಹಾಲ್ಕುರಿಕೆ

ತಿಪಟೂರು ತಾಲ್ಲೋಕಿನ ಹೊನ್ನವಳ್ಳಿ ಹೋಬಳಿ ಹಾಲ್ಕುರಿಕೆ ಗ್ರಾಮದ ಮುಜರೆ ಹೆಚ್ ಮುದ್ದೇನಹಳ್ಳಿ ಪ್ರಸಿದ್ದ ಕ್ಷೇತ್ರ ಶ್ರೀ ರೇವಣ ಸಿದ್ದೇಶ್ವರ ಬೆಟ್ಟದಲ್ಲಿ ಸರ್ಕಾರ ಮಹತ್ವಾಕಾಂಕ್ಷೇಯ ಸೋಲಾರ್ ಪವರ್ ಪ್ರಾಜೆಕ್ಟ್ ಪೂರ್ಣಗೊಳ್ಳುವ ಹಂತದಲ್ಲಿದೆ, ಶ್ರೀ ರೇವಣಸಿದ್ದೇಶ್ವರ ಬೆಟ್ಟದಿಂದ ಸೋಲಾರ್ ಕೇಂದ್ರದಿಂದ ಹಾಲ್ಕುರಿಕೆ ಗ್ರಾಮದ ಉಪಸ್ಥಾವರಕ್ಕೆ ವಿದ್ಯುತ್ ಲೈನ್ ಎಳೆಯಲು ರೈತರು ಭಾರೀ ವಿರೋಧ ವ್ಯಕ್ತಪಡಿಸಿದ್ದು, ರೈತರು ಹಾಗೂ ಬೆಸ್ಕಾಂ ಸಿಬ್ಬಂದಿಯ ನಡುವೆ ವಾಗ್ವಾದಕ್ಕೆ ಕಾರಣವಾಗಿದ್ದು, ವಿದ್ಯುತ್ ಕಂಬ ನೆಡಲು ವಿರೋಧ ವ್ಯಕ್ತಪಡಿಸಿದ ರೈತರು ಬೆಸ್ಕಾಂ ಇಲಾಖೆ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.


ಬೆಸ್ಕಾಂ ಇಲಾಖೆ ಶ್ರೀ ರೇವಣಸಿದ್ದೇಶ್ವರ ಬೆಟ್ಟದ ಸೋಲಾರ್ ಪವರ್ ಪ್ಲಾಂಟ್ ನಿಂದ ಹಾಲ್ಕುರಿಕೆ ಉಪಸ್ಥಾವರಕ್ಕೆ ವಿದ್ಯುತ್ ಲೈನ್ ಎಳೆಯುವುದರಿಂದ ಸಣ್ಣ ಪುಟ್ಟ ರೈತರ ತುಂಡು ಭೂಮಿಗಳು, ವ್ಯವಸಾಯ ಮಾಡದಂತ್ತಾಗುತ್ತದೆ, ಶ್ರೀ ರೇವಣ ಸಿದ್ದೇಶ್ವರ ಬೆಟ್ಟದಿಂದ ಹಾಲ್ಕುರಿಕೆ ವರೆಗೆ ಹತ್ತಾರು ಜನ ಬಡ ರೈತರ ಜಮೀನಿನಲ್ಲಿ ರೈತರಿಗೆ ಯಾವುದೇ ಮಾಹಿತಿ ನೀಡದೇ ಲೈನ್ ಎಳೆಯುತ್ತಿದ್ದಾರೆ,ಇದರಿಂದ ನಮ್ಮ ಭೂಮಿ ಹಾಳಾಗುತ್ತದೆ, ಅಲ್ಲದೇ ತೋಟ ತುಡಿಕೆ ಮಾಡಲು ಸಾಧ್ಯವಾಗುವುದಿಲ್ಲ, ಹಾಗೂ ನಮ್ಮ ಜಮೀನುಗಳು ಹಾಲ್ಕುರಿಕೆ ಗ್ರಾಮಕ್ಕೆ ಹೊಂದಿಕೊಂಡಂತ್ತಿದ್ದು ಇದರಿಂದ ಭೂಮಿಯ ಬೆಲೆ ಕಡಿಮೆಯಾಗುತ್ತದೆ, ಯಾವುದೇ ಕಾರಣಕ್ಕೂ ವಿದ್ಯುತ್ ಕಂಬ ಹಾಕಲು ಬಿಡುವುದಿಲ್ಲ. ಸೋಲಾರ್ ಪವರ್ ಪ್ಲಾಂಟ್ ಗೆ ನಮ್ಮ ವಿರೋಧವಿಲ್ಲ, ಪ್ಲಾಂಟ್ ಸ್ಥಳದಲ್ಲೇ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳ ಬೇಕು, ಒಂದುವೇಳೆ ರೈತರ ಜಮೀನಿನಲ್ಲೇ ವಿದ್ಯುತ್ ಲೈನ್ ತೆಗೆದುಕೊಂಡು ಹೋಗಬೇಕು ಎನ್ನುವುದ್ದಾರೆ, ನಮಗೆ ಸೂಕ್ತ ಪರಿಹಾರ ನೀಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.


ಯೋಜನೆಯಿಂದ ತೊಂದರೆಗೊಳಗಾದ ರೈತ ಪರಮೇಶ್ವರಯ್ಯ ಹೆಚ್.ಇ ಮಾತನಾಡಿ ನಾವೂ ಇಲ್ಲಿ ನಮ್ಮ ಪಿತ್ರಾರ್ಜಿತವಾಗಿ ಬಂದ ತುಂಡುಭೂಮಿ ಹೊಂದಿದ್ದೇವೆ ಇರುವ 20ಗುಂಟೆ ಜಾಗದಲ್ಲಿ ಮೂರ್ನಾಲ್ಕು ವಿದ್ಯುತ್ ಲೈನ್ ಎಳೆದರೆ,ನಾವೂ ಬೆಳೆ ಬೆಳೆಯಲು ಸಾಧ್ಯವಾಗುವುದಿಲ್ಲ, ಅಲ್ಲದೆ ಮನೆ ನಿರ್ಮಾಣೈ೬ಯ ಮಾಡಲು ಉದೇಶಿಸಿದ್ದು ಬೆಸ್ಕಾಂ ಇಲಾಖೆ ಕಂಬ ನೆಟ್ಟು ಲೈನ್ ಎಳೆದು ಕೈ ತೊಳೆದುಕೊಳ್ಳುತ್ತಾರೆ, ಮನೆ ನಿರ್ಮಿಸಿದ್ದಾಗ ,ಲೈನ್ ಅಡ್ಡ ಬಂದರೆ, ನಮಗೆ ತೊಂದರೆಯಾಗುತ್ತದೆ,ಆಗ ನಮಗಾಗುವ ನಷ್ಟಕ್ಕೆಯಾರು ಜವಾಬ್ದಾರರು, ಇರುವ ಭೂಮಿ ಕಳೆದುಕೊಂದು ಬೀದಿಗೆ ಬೀಳಬೇಕ್ಕಾಗುತ್ತದೆ, ಆದರಿಂದ ನಮ್ಮ ಜಮೀನಿನಲ್ಲಿ ಲೈನ್ ಎಳೆಯಲು ಅವಕಾಶ ನೀಡುವುದಿಲ್ಲ, ಸರ್ಕಾರ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು,
ಸ್ಥಳಕ್ಕೆ ಆಗಮಿಸಿದ ಬೆಸ್ಕಾಂ ಇಲಾಖೆ ಕಿರಿಯ ಅಭಿಯಂತರರಾದ ಮಂಜುನಾಥ್ ಮಾತನಾಡಿ ಸೋಲಾರ್ ಪವರ್ ಪ್ರಜೆಕ್ಟ್ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆ,ಸರ್ಕಾರದ ನಿರ್ದೇಶನದಂತೆ ಕಾಮಗಾರಿ ಮಾಡುತ್ತೇವೆ,ವಿದ್ಯುತ್ ಲೈನ್ ನಿಂದ ರೈತರು ತೊಂದರೆಯಾಗುವುದಾಗಿ ಹೇಳಿದ್ದಾರೆ, ರೈತರು ನೀಡುವ ಮಾಹಿತಿಯನ್ನ ಮೇಲಾಧಿಕಾರಿಗಳ ಗಮನಕ್ಕೆ ತಂದು ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದರು

ವರದಿ :ಮಂಜುನಾಥ್ ಹಾಲ್ಕುರಿಕೆ

ತಿಪಟೂರು ತಾಲ್ಲೋಕಿನ ಕಿಬ್ಬನಹಳ್ಳಿ ಹೋಬಳಿ ಮದ್ಲೇಹಳ್ಳಿ ಗ್ರಾಮದಲ್ಲಿ ಅರಣ್ಯ ಇಲಾಖೆಯ ಯಡವಟ್ಟಿನಿಂದ ವನ್ಯಜೀವಿ ಚಿರತೆ ಬಲಿಯಾಗಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ,


ತಿಪಟೂರು ತಾಲ್ಲೋಕಿನ ಕಿಬ್ಬನಹಳ್ಳಿ ಹೋಬಳಿ ಮದ್ಲೇಹಳ್ಳಿ ಚಿರತೆ ಹಾವಳಿ ಹೆಚ್ಚಾದ ಹಿನ್ನೆಲೆ ಅರಣ್ಯ ಇಲಾಖೆ ಮದ್ಲೇಹಳ್ಳಿ ಗ್ರಾಮದ ಸರ್ವೇನಂಬರ್ 10ರಲ್ಲಿ ನಾರಾಯಣಪ್ಪ ಬಿನ್ ಶಂಕರಪ್ಪ ಎಂಬುವವರ ಜಮೀನಿನಲ್ಲಿ ಚಿರತೆ ಸೆರೆಗೆ ಬೋನ್ ಇಡಲಾಗಿತ್ತು,ಅರಣ್ಯ ಇಲಾಖೆ ಇಟ್ಟಿದ ಬೋನಿಗೆ ಚಿರತೆ ಸೇರೆಯಾಗಿದೆ,ಆದರೆ ಈ ಪ್ರದೇಶದಲ್ಲಿ ಆಕಸ್ಮಿಕ ಅಗ್ನಿ ಅವಘಡ ಉಂಟಾಗಿ ಬೋನಿನಲ್ಲಿ ಇಟ್ಟಿದ ಚಿರತೆ ಹೊರಹೋಗಲಾಗದೆ ಬೆಂಕಿ ಕೆನ್ನಾಲಿಗೆಯಿಗೆ ಬಲಿಯಾಗಿದ್ದು ಹುಸಿರುಕಟ್ಟಿ ಸಾವನ್ನಪ್ಪಿದೆ,ವಿಷಯ ತಿಳಿದು ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು.ಹಾಗೂ ಕಿಬ್ಬನಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು,ಕೆ.ಬಿ ಕ್ರಾಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,

ಚಿರತೆ ಮರಣೋತ್ತರ ಪರೀಕ್ಷೆ ನಂತರ ಚಿರತೆ ಕಳೆಬರ, ವಿಲೇವಾರಿ ಮಾಡಲಾಗಿದ್ದು, ಅರಣ್ಯ ಇಲಾಖೆ ಕ್ರಮಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ,ಅರಣ್ಯ ಇಲಾಖೆ ಬೋನ್ ಇಟ್ಟಿದೆ ಆದರೆ ಬೋನಿನಲ್ಲಿ ಚಿರತೆ ಬಿದ್ದಿರುವ ಬಗ್ಗೆ ಮಾಹಿತಿ ಕಲೆಹಾಕಲು ವಿಫಲವಾದ ಹಿನ್ನೆಲೆ ಚಿರತೆ ಸಾವು ಸಂಭವಿಸಿದೆ ಎಂದು ಸಾರ್ವಜನಿಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವರದಿ :ಮಂಜುನಾಥ್ ಹಾಲ್ಕುರಿಕೆ

ತಿಪಟೂರು ಮಾರ್ಚ್ 8 ರಂದು “ರಾಷ್ಟ್ರೀಯ ಲೋಕ ಅದಾಲತ್” ಅನ್ನು ಏರ್ಪಡಿಸಲಾಗಿದ್ದು ಸಾರ್ವಜನಿಕರು ಸದುಪಯೋಗ ಮಾಡಿಕೊಳ್ಳಬೇಕು ಎಂದು ಗೌರವಾನ್ವಿತ ತಿಪಟೂರು ಐದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀಮತಿ ಪುಷ್ಪಾವತಿ ತಿಳಿಸಿದರು


‌ನ್ಯಾಯಾಲಯದ ಆವರಣದಲ್ಲಿ ಸಾರ್ವಜನಿಕ ಪ್ರಕಟಣೆ ನೀಡಿದ ಅವರು ದಿನಾಂಕ: 08.03.2025 ರಂದು “ರಾಷ್ಟ್ರೀಯ ಲೋಕ ಅದಾಲತ್” ಅನ್ನು ಹಮ್ಮಿಕೊಳ್ಳಲಾಗಿದ್ದು, ರಾಜಿ ಸಂಧಾನದ ಮೂಲಕ ಯಾವುದೇ ನ್ಯಾಯಾಲಯದ ಶುಲ್ಕವಿಲ್ಲದೆ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಳ್ಳಲು ಇದು ಬೃಹತ್ ಆಂದೋಲನ ಹಮ್ಮಿಕೊಂಡಿದ್ದು, ನ್ಯಾಯಾಲಯ ನೀಡಿರುವ ಸುವರ್ಣ ಅವಕಾಶವನ್ನ ಸಾರ್ವಜನಿಕರು,ಹಾಗೂ ಕಕ್ಷೀದಾರರು ಬಳಸಿಕೊಳ್ಳ ಬೇಕುಎಂದು ತಿಳಿಸಿದರು.
ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ತಾಲೂಕು ಕಾನೂನು ಸೇವಾ ಸಮಿತಿ, ತಿಪಟೂರು ಅಧ್ಯಕ್ಷರಾದ ಶ್ರೀ ಮಹಮದ್ ಆರಿಪುಲ್ಲ.ಸಿ.ಎಫ್ ಮಾತನಾಡಿ ಈ ರಾಷ್ಟ್ರೀಯ ಲೋಕ ಅದಾಲತ್ನಲ್ಲಿ ಪ್ರಕರಣಗಳು ಹೆಚ್ಚು ಕಾಲಾವಕಾಶ ತೆಗೆದುಕೊಳ್ಳದೆ, ಸೌಹಾರ್ದಯುತವಾಗಿ ಮುಗಿಯಬೇಕು. ಪ್ರಕರಣಗಳನ್ನು ವಕೀಲರ ಮೂಲಕವಾಗಲಿ ಹಾಗೂ ವೈಯಕ್ತಿಕವಾಗಿ ಆಗಲಿ ಬಗೆಹರಿಸಿಕೊಳ್ಳಬಹುದು ಹಾಗೂ ಈ ಲೋಕ ಅದಾಲತ್ ನಲ್ಲಿ ವ್ಯಾಜ್ಯಪೂರ್ವ ಪ್ರಕರಣಗಳನ್ನು ಯಾವುದೇ ಶುಲ್ಕವಿಲ್ಲದೆ ಕಡಿಮೆ ಕಾಲಾವಕಾಶದಲ್ಲಿ ಇತ್ಯರ್ಥ ಪಡಿಸಿಕೊಳ್ಳಬಹುದು,ಕಾನೂನಿನ ಮೂಲಕ ಸಾರ್ವಜನಿಕರು ನ್ಯಾಯದಾನ ಪಡೆಯಬಹುದುಎಂದು ತಿಳಿಸಿದರು.
ಗೌರವಾನ್ವಿತ ಅಧಿಕ ಸಿವಿಲ್ ನ್ಯಾಯಾಧೀಶರು ಹಾಗೂ, ತಾಲೂಕು ಕಾನೂನು ಸೇವಾ ಸಮಿತಿ, ತಿಪಟೂರು ಸದಸ್ಯ ಕಾರ್ಯದರ್ಶಿಗಳಾದ ಶ್ರೀಮತಿ ಮಧುಶ್ರೀ ಜಿ.ಎನ್ ರವರು ಮಾತನಾಡಿ ಸದರಿ ಲೋಕ ಅದಾಲತ್ನಲ್ಲಿ ಕೌಟುಂಬಿಕ ಪ್ರಕರಣಗಳು, ಅಪಘಾತ ಪ್ರಕರಣಗಳು, ವಿಮೆ ಸಂಬಂಧಿತ ಪ್ರಕರಣಗಳು, ಚೆಕ್ ಬೌನ್ಸ್ ಪ್ರಕರಣಗಳು, ಸ್ತ್ರೀಶಕ್ತಿ ಸಂಘದವರು ಬ್ಯಾಂಕುಗಳಿಂದ ಪಡೆದ ಸಾಲದ ಪ್ರಕರಣಗಳು, ಎಂ.ಎಂ.ಡಿ.ಆರ್ ಪ್ರಕರಣಗಳು, ಪಾಲು ವಿಭಾಗ ಪ್ರಕರಣಗಳು, ಎಲ್.ಎ.ಸಿ ಹಾಗೂ ಇನ್ನಿತರ ಪ್ರಕರಣಗಳನ್ನು ಬಗೆಹರಿಸಿಕೊಳ್ಳಬಹುದು. ಈಗಾಗಲೇ ಸದರಿ ಇತ್ಯರ್ಥ ಪಡಿಸಿಕೊಳ್ಳಬಹುದು ಪ್ರಕರಣಗಳಿಗೆ ಸಂಬಂಧಿಸಿದಂತೆ ಪೂರ್ವಭಾವಿ ಬೈಠಕ್ ಗಳು ನಡೆಯುತ್ತಿದ್ದು ತಮ್ಮ ತಮ್ಮ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಸದರಿ ಲೋಕ ಅದಾಲತ್ನಲ್ಲಿ ಪರಿಹರಿಸಿಕೊಳ್ಳುವಂತೆಯೂ ಹಾಗೂ ಹೆಚ್ಚಿನ ಮಾಹಿತಿಗಾಗಿ ತಮ್ಮ ತಮ್ಮ ವ್ಯಾಪ್ತಿಯ ತಾಲೂಕು ಕಾನೂನು ಸೇವಾ ಸಮಿತಿಗಳನ್ನು ಸಂಪರ್ಕಿಸುವಂತೆ ತಿಳಿಸಿದರು.
ಸಭೆಯಲ್ಲಿ ಶ್ರೀ ಬಿ.ಎನ್ ಅಜಯ್., ಅಧ್ಯಕ್ಷರು, ತಾಲೂಕು ವಕೀಲರ ಸಂಘ, ಶ್ರೀ ಬಿ ಮಲ್ಲಿಕಾರ್ಜುನಯ್ಯ., ಕಾರ್ಯದರ್ಶಿಗಳು, ತಾಲೂಕು ವಕೀಲರ ಸಂಘ, ತಿಪಟೂರು ರವರು ಮತ್ತು ವಕೀಲರ ಸಂಘದ ಎಲ್ಲಾ ಸದಸ್ಯ ವಕೀಲರು ಹಾಜರಿದ್ದರು.

ವರದಿ :ಮಂಜುನಾಥ್ ಹಾಲ್ಕುರಿಕೆ

ತಿಪಟೂರು: ಕಲಾಕೃತಿ (ರಿ), ತಿಪಟೂರು, ಕಲ್ಪತರು ವಿದ್ಯಾಸಂಸ್ಥೆ,ಆದಿತ್ಯವಾಣಿ ಕನ್ನಡ ಪತ್ರಿಕೆ ಮತ್ತು ಸತ್ಯಕುಮಾರ್ ರಿಲೀಫ್ ಫೌಂಡೇಷನ್ಇವರ ಸಂಯುಕ್ತಾಶ್ರಯದಲ್ಲಿ
ಕಲಾಕೃತಿಯ 28ನೇ ವರ್ಷದ ವಾರ್ಷಿಕೋತ್ಸವ, ಆದಿತ್ಯವಾಣಿ ಪತ್ರಿಕೆಯ 25ನೇ ವರ್ಷದ ರಜತ ಮಹೋತ್ಸವ, ಅನ್ನಪೂರ್ಣ ಸಂಚಾರಿ ನಿತ್ಯ ಅನ್ನ ದಾಸೋಹ ಕಾರ್ಯಕ್ರಮದ ಪ್ರಥಮ ವಾರ್ಷಿಕೋತ್ಸವ ಸಮಾರಂಭ ಹಾಗೂ ನಾಡಿನ ಸಾಹಿತ್ಯ ದಿಗ್ಗಜ, ಸಾಮಾಜಿಕ ಚಿಂತಕ, ನಾಡೋಜ ಸನ್ಮಾನ್ಯ ಶ್ರೀ ಬರಗೂರು ರಾಮಚಂದ್ರಪ್ಪ ಅವರಿಗೆ ಕಲ್ಪತರು ನಾಡಿನ ಪ್ರತಿಷ್ಠಿತ ನಾಗರಿಕ ಪ್ರಶಸ್ತಿ “ಕಲ್ಪತರು ರತ್ನ” ಪ್ರಶಸ್ತಿ ಪ್ರಧಾನ, ಹಿರಿಯ ಪತ್ರಕರ್ತರಿಗೆ ಸನ್ಮಾನ ಹಾಗೂ ಕಲ್ಪತರು ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗೆ ನವೋದ್ಯಮದ ಬಗ್ಗೆ ಮಾಹಿತಿ ಕಾರ್ಯಾಗಾರ ಹಾಗೂ ಉದ್ಯಮಿಗಳೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು, . ತಿಪಟೂರಿನ ಕಲ್ಪತರು ತಾಂತ್ರಿಕ ಮಹಾವಿದ್ಯಾಲಯದಕೆ.ಐ.ಟಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಾಡೋಜ ಬರಗೂರು ರಾಮಚಂದ್ರಪ್ಪ ನವರಿಗೆ ಕಲ್ಪತರು ರತ್ನ ಪ್ರಶಸ್ತಿ ಪ್ರಧಾನ ಮಾಡಲಾಯಿತು.


ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ನಾಡೋಜ ಬರಗೂರು ರಾಮಚಂದ್ರಪ್ಪ ಕಲ್ಪತರು ವಿದ್ಯಾಸಂಸ್ಥೆಯಲ್ಲಿ ಕೆಲಸಕ್ಕಾಗಿ ಸಂದರ್ಶನಕ್ಕೆ ಬಂದಿದ್ದೆ.ಆಗ ನಾನು ಆಯ್ಕೆಯಾಗಿರಲಿಲ್ಲ. ಈಗ ಅದೇ ಸಂಸ್ಥೆಯಲ್ಲಿ ನನ್ನನ್ನು ಅತಿಥಿಯಾಗಿ ಸನ್ಮಾನ ಮಾಡುತ್ತಿರುವುದು ನನಗೆ ಸಂತೋಷದ ಸಂಗತಿಯಾಗಿದೆ.

ಮೂಢನಂಬಿಕೆಯ ಕಾರಣದಿಂದ ನನ್ನ ಅಕ್ಕ ವೈದ್ಯರಿಗೆ ತೋರಿಸದೆ ತೀರಿಕೊಂಡರು. ತಂಗಿ ಧನುರ್ವಾಯು ಕಾರಣದಿಂದ ತೀರಿಕೊಂಡರು. ಆ ಕಾರಣದಿಂದ ನಾನು ವೈದ್ಯನಾಗಬೇಕೆಂದು ಬಯಸಿದ್ದುಂಟು.
ಶಿಕ್ಷಕರು ವಿದ್ಯಾರ್ಥಿಗಳ ಧರ್ಮ ಜಾತಿಯನ್ನು ನೋಡಬಾರದು.
ಅಂತಹ ಶಿಕ್ಷಕರು ನನಗೆ ಅಕ್ಷರ ಕಲಿಸಿದ್ದರಿಂದ ನನಗೆ ಅಕ್ಷರ ಅಹಂಕಾರವಾಗಲಿಲ್ಲ. ಅಕ್ಷರ ಅಂತಃಕರಣವಾಯಿತು.ಈ ಅಂತಃಕರಣದಿಂದಲೇ ನೀವು ನನಗೆ ಪ್ರಶಸ್ತಿಯನ್ನು ಕೊಟ್ಟಿದ್ದೀರಿ. ಬರಗೂರಿನವರಿಗೆ ತಿಪಟೂರು ಹಸಿರು ಭೂಮಿ ಇದ್ದಂತೆ. ಎರಡು ವರ್ಷಗಳ ಹಿಂದೆ ನಮ್ಮ ಊರಿನ ಕೆರೆ ಕೋಡಿ ಬಿಟ್ಟಿತು. 42 ವರ್ಷಗಳ ನಂತರ ನಮ್ಮ ಊರಿನ ಕೆರೆ ಕೋಡಿ ಬಿದ್ದಿರುವುದು. ನಾನು ಒಣ ಭೂಮಿಗೆ ಸೇರಿದವನು. ಹಸಿರು ಭೂಮಿ ಒಣ ಭೂಮಿಯನ್ನು ಸನ್ಮಾನ ಮಾಡುವುದು,ಪ್ರಶಂಶಿಸುವುದು ಬಹಳ ವಿಶೇಷವಾದದ್ದು.
ಬದುಕಿನಲ್ಲಿ ಕಲ್ಪತರು ಹಾಗೂ ಜಾಲಿ ಮರ ಎರಡು ಇರುತ್ತದೆ ರಾಜ್ಯ ದೇಶ ಏಕಮುಖಿಯಾಗಿರುವುದಿಲ್ಲ.ಅನೇಕ ವೈರುಧ್ಯಗಳಿರುತ್ತವೆ. ಹಸಿರು ಭೂಮಿ ಒಣ ಭೂಮಿ ಒಟ್ಟಿಗೆ ಸೇರುವುದು ವೈರುಧ್ಯಗಳನ್ನು ಒಂದು ಮಾಡುವ ಸಂಕೇತ.ಸೌಹಾರ್ದತೆಯ ಸಂಕೇತ. ಸೃಷ್ಟಿಯಲ್ಲಿ ಶ್ರೇಷ್ಠ ಕನಿಷ್ಠ ಎಂಬುದಿಲ್ಲ.ಎಲ್ಲದಕ್ಕೂ ಅದರದ್ದೆ ಆದ ಕರ್ತವ್ಯವಿದೆ.

ಕಾಗೆ ಕೋಗಿಲೆಯ ಮೊಟ್ಟೆಗೆ ಕಾವು ಕೊಟ್ಟು ಮರಿ ಮಾಡುತ್ತದೆ.ಕೋಗಿಲೆಯ ಸಂತತಿಯನ್ನು ಹೆಚ್ಚಿಸುತ್ತದೆ.ಹಾಗಾದರೆ ಕಾಗೆಯನ್ನು ನಿಕೃಷ್ಟ ಎಂದು ಏಕೆ ಕರೆಯಬೇಕು ?
ಎಲ್ಲರೂ ಅವರವರು ಬೆಳೆದು ಬಂದ ವಾತಾವರಣದಿಂದಲೇ ಪ್ರೇರಣೆ ಪಡೆಯುತ್ತಾರೆ.

ಸೌಹಾರ್ದಕ್ಕೆ ವಿರುದ್ಧವಾದ ವಾತಾವರಣದಲ್ಲಿ ನಾವು ಬದುಕುತ್ತಿದ್ದೇವೆ. ನನ್ನಂತಹ ಅನೇಕರಿಗೆ ಆತಂಕವಾಗಿದೆ ನಮ್ಮ ಪರಂಪರೆಯು ಜಾತಿ,ಧರ್ಮ,ಭೇದ,ಭಾವ ಹೇಳಿಕೊಡಲಿಲ್ಲ. ಪಂಪನೆ ಶತಮಾನದಲ್ಲಿ ಜಾತಿ ಪದ್ಧತಿಯನ್ನು ವಿರೋಧಿಸಿದ. ಬಸವಣ್ಣನವರು ಹೊಸ ಧರ್ಮ ಕಟ್ಟಿದರು. ಕ್ರಿ.ಶ. 850ರಲ್ಲಿ ರಚನೆಯಾದ ಕವಿರಾಜಮಾರ್ಗದಲ್ಲಿ ನಾವು ಹೇಗೆ ಬದುಕಬೇಕೆಂದು ತಿಳಿಸಿದ್ದಾರೆ. ಬಸವಣ್ಣನವರ ದೇಹವೇ ದೇಗುಲವೆಂದು ಹೇಳಿದ್ದಾರೆ. ಗಾಂಧೀಜಿಯವರು ಆಸ್ತಿಕರಾಗಿದ್ದರು.ಆದರೆ ಎಂದಿಗೂ ತಾವು ನಂಬಿದ ದೇವರು ಧರ್ಮವನ್ನು ಸ್ವಾತಂತ್ರ ಹೋರಾಟಕ್ಕೆ ಬಳಸಲಿಲ್ಲ. ಸಾವಿತ್ರಿಬಾಯಿ ಪುಲೆ, ಫಾತಿಮಾ ಶೇಖ್ ರವರು ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಹೋರಾಡಿದರು.

ಯಾವುದು ಪ್ರಜಾಸತ್ತಾತ್ಮಕವಲ್ಲವೋ ಅದು ಸೃಜನಶೀಲತೆಯಲ್ಲ. ಶಿಕ್ಷಣ ಕಲೆ ಸಾಹಿತ್ಯದ ಬಗ್ಗೆ ಮಾತನಾಡುವಾಗಲೆಲ್ಲ ಆತಂಕವಾಗುತ್ತದೆ. ಇಂದು ನಾವು ಮಾರುಕಟ್ಟೆ ಪ್ರಧಾನವಾಗಿರುವ ಸಮಾಜವನ್ನು ನೋಡುತ್ತಿದ್ದೇವೆ. ಮಾರುಕಟ್ಟೆಯು ಮೌಲ್ಯಗಳನ್ನು ನಾಶ ಮಾಡಬಾರದು. ಇಂದು ಶಿಕ್ಷಣವೂ ಉದ್ಯಮವಾಗಿದೆ ಮೌಲ್ಯಗಳು ಬೆಳೆಯಬೇಕಾದರೆ ಸಾಂಸ್ಕೃತಿಕ ಪ್ರಜ್ಞೆ ಇರಬೇಕು.ಸಂವಾದದಿಂದ ಹೆಚ್ಚು ಮೌಲ್ಯಗಳನ್ನು ಕಟ್ಟಿಕೊಳ್ಳಲು ಸಾಧ್ಯ.

ನಮ್ಮ ನಮ್ಮ ನಡುವೆ ಪರಸ್ಪರ ಮಾತು ಕಡಿಮೆಯಾಗುತ್ತಿದೆ ದ್ವೇಷ ವಿರೋಧ ಹೆಚ್ಚಾಗುತ್ತಿದೆ ಸಮಾಜದಲ್ಲಿ ಕಲುಷಿತವಾದ,ಆಘಾತಕಾರಿಯಾದ, ಅಮಾನವೀಯವಾದ ವಾತಾವರಣ ಸೃಷ್ಟಿಯಾಗುತ್ತಿದೆ. ದೇಶದಲ್ಲಿ ದಿನಕ್ಕೆ 85 ಮಹಿಳೆಯರ ಅತ್ಯಾಚಾರವಾಗುತ್ತಿದೆ ಒಂದು ಗಂಟೆಗೆ 51 ಮಹಿಳೆಯರ ಮೇಲೆ ದೌರ್ಜನ್ಯವಾಗುತ್ತಿದೆ ಅತ್ಯಾಚಾರ ಪ್ರಕರಣ ಶೇಕಡ 7.1 ರಷ್ಟಿದೆ. ಈ ಅಂಕಿ ಅಂಶಗಳನ್ನು ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಹೇಳಿದೆ.
ಪ್ರಶಸ್ತಿಗಳು ನಮಗೆ ಬಂದಾಗ ನಾವು ಎಷ್ಟು ಮನುಷ್ಯರು ಎಂದು ಪ್ರಶ್ನಿಸಿಕೊಳ್ಳಬೇಕು.ಇಂದು ವಿವೇಕದ ಭಾಗವನ್ನು ಉದ್ರೇಕ ಆವರಿಸಿಕೊಂಡಿದೆ. ಹಿಂದೂ ಧರ್ಮವನ್ನು ನಂಬಿಯೂ ಸಹ ಎಲ್ಲ ಧರ್ಮದ ಜೊತೆ ಇರಬೇಕು ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದಾರೆ ಸತ್ಯದ ಜಾಗವನ್ನು ಅಸತ್ಯ, ಮಾನವೀಯತೆಯ ಜಾಗವನ್ನು ಮತೀಯತೆ ಆವರಿಸಿಕೊಂಡಿದೆ.ಇಂತಹ ಸಂದರ್ಭದಲ್ಲಿ ನಾವೆಲ್ಲಾ ಮನುಷ್ಯರಾಗಬೇಕು ನಮ್ಮಲ್ಲಿರುವ ಮೃಘೀಯತೆಯನ್ನು ನಾಶ ಮಾಡಿಕೊಳ್ಳಬೇಕು. ನಿಜವಾದ ಮನುಷ್ಯರಾಗಬೇಕು ಎಂದು ಹೇಳಿದರು.

ಕಲಾಕೃತಿ ಅಧ್ಯಕ್ಷರಾದ ಡಾ. ಜಿ.ಎಸ್.ಶ್ರೀಧರ್ ರವರು ಮಾತನಾಡಿ ನಾಡೋಜ ಬರಗೂರು ರಾಮಚಂದ್ರಪ್ಪನವರಿಗೆ ಕಲ್ಪತರು ನಾಡಿನ ಪ್ರತಿಷ್ಠಿತ ನಾಗರಿಕ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ನಮ್ಮೆಲ್ಲರ ಸೌಭಾಗ್ಯ ಎಂದು ಹೇಳಿದರು.ನಮ್ಮ ನಾಡಿನ ಹೇಳಿಗೆಗಾಗಿ ಕಲೆ,ಸಾಹಿತ್ಯ,ಸಂಗೀತ,ಸೇವೆಕಾರ್ಯಗಳ ಜೊತೆ ಹಲವಾರು ರಚನಾತ್ಮಕ ಕಾರ್ಯಗಳು, ನಡೆಯಲಿವೆ, ಸಹೃದ ನಾಗರೀಕರ ಸಹಕಾದಲ್ಲಿ ನಡೆಯುತ್ತಿರುವ ಅನ್ನಪೂರ್ಣ ಸಂಚಾರಿ ನಿತ್ಯ ಅನ್ನದಾಸೋಹ ಕಾರ್ಯಕ್ರಮ ಪ್ರಾರಂಭಿಸಿ ಒಂದು ವರ್ಷವಾಗಿದ್ದು, ಸುಮಾರು 400 ಜನರಿಗೆ ಮಧ್ಯಾಹ್ನ ಅನ್ನದಾಸೋಹ ನಡೆಯುತ್ತಿದ್ದು ಎಲ್ಲರ ಸಹಕಾರದಿಂದ ನಿರಂತರವಾಗಿ ನಡೆಯಲಿದೆ ಎಂದರು,

ಕಾರ್ಯಕ್ರಮದಲ್ಲಿ ಕಲಾಕೃತಿ ಸಂಸ್ಥೆಯ ಅಧ್ಯಕ್ಷರಾದ ಡಾ. ಜಿ.ಎಸ್. ಶ್ರೀಧರ್ ರವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ನಗರಸಭಾ ಅಧ್ಯಕ್ಷರಾದ ಶ್ರೀಮತಿ ಯಮುನಾ ಧರಣೇಶ್, ಕಲ್ಪತರು ವಿದ್ಯಾ ಸಂಸ್ಥೆಯ ಪದಾಧಿಕಾರಿಗಳಾದ ಬಾಗೇಪಲ್ಲಿ ನಟರಾಜು, ಸಂಗಮೇಶ್, ಶಿವಪ್ರಸಾದ್. ಐ.ಎಫ್. ಡಬ್ಲ್ಯೂ. ಜೆ. ಪ್ರಧಾನ ಕಾರ್ಯದರ್ಶಿ ಮಧನ ಗೌಡ,ಕೆ.ಯು. ಡಬ್ಲ್ಯೂ.ಜೆ.ತಾಲ್ಲೂಕು ಅಧ್ಯಕ್ಷರಾದ ಪ್ರಶಾಂತ್ ಕರೀಕೆರೆ,
ಕಲಾಕೃತಿ ಸಂಸ್ಥೆಯ ಪದಾಧಿಕಾರಿಗಳಾದ ಡಿ.ವಿ.ಎಸ್.ಗುಪ್ತ,ಬಿ.ಎಸ್. ಶಿವಪ್ರಸಾದ್, ಜ್ಯೋತಿ ಗಣೇಶ್, ಎ.ಟಿ. ಪ್ರಸಾದ್, ನಿರಂಜನ ಮೂರ್ತಿ, ತಿಪಟೂರು ಕೃಷ್ಣ, ಶೋಭಾ ಜಯದೇವ್, ಪ್ರಭಾ ವಿಶ್ವನಾಥ್ ಮಂಜುಳಾ ತಿಮ್ಮೇಗೌಡ ವೊಡಾಫೋನ್ ಚಂದ್ರು, ತರಕಾರಿ ಗಂಗಾಧರ್, ಕಲ್ಪತರು ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗ ಹಾಗೂ ಮತ್ತಿತರರು ಭಾಗವಹಿಸಿದ್ದರು.

ವರದಿ:ಮಂಜುನಾಥ್ ಹಾಲ್ಕುರಿಕೆ

error: Content is protected !!