Month: February 2025

ತುಮಕೂರು ಜಿಲ್ಲೆ ತಿಪಟೂರು ನಗರದ ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿಯಿಂದ 36ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹಕ್ಕೆ ತಿಪಟೂರು ತಹಸೀಲ್ದಾರ್ ಪವನ್ ಕುಮಾರ್ ಚಾಲನೆ ನೀಡಿದರು.

ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿ ಆವರಣದಲ್ಲಿ ರಸ್ತೆ ಸುರಕ್ಷತಾ ಸಪ್ತಾಹಕ್ಕೆ ಚಾಲನೆ ನೀಡಿ
ಪ್ರತಿಯೊಬ್ಬರು ರಸ್ತೆ ಸುರಕ್ಷತಾ ನಿಯಮಗಳನ್ನ ಪಾಲಿಸಬೇಕು, ಕಡ್ಡಾಯವಾಗಿ ಸಾರಿಗೆ ಇಲಾಖೆಯ ನಿಯಮಗಳನ್ನ ಪಾಲನೆ ಮಾಡಿದರೆ ಅಪಘಾತ ಹಾಗೂ ಅಪಾಯಗಳು ಕಡಿಮೆಯಾಗುತ್ತವೆ.
ರಸ್ತೆ ಸುರಕ್ಷತಾ ನಿಯಮಗಳನ್ನ ಪಾಲಿಸಿ ನೀವೂ ಸುರಕ್ಷಿತವಾಗಿರಿ.
ದ್ವಿಚಕ್ರ ವಾಹನ ಚಾಲನೆ ಮಾಡುವಾಗ ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ದ್ವಿಚಕ್ರ ವಾಹನ ಅಪಘಾತದಲ್ಲಿ ಸಾವನ್ನಪ್ಪಿರುವ ಬಹುತೇಕ ಸಾವುಗಳಲ್ಲಿ ಹೆಲ್ಮೆಟ್ ಧರಿಸದೆ, ತಲೆಗೆ ಪೆಟ್ಟುಬಿದ್ದು ಸಾವನ್ನಪ್ಪಿರುವ ಘಟನೆಗಳೆ ಜಾಸ್ತಿ ಆದರಿಂದ ಪ್ರತಿಯೊಬ್ಬರು ಸುರಕ್ಷತೆಗೆ ಆಧ್ಯತೆ ನೀಡಬೇಕು, ನಿಮ್ಮ ಅಜಾಗರೂಕತೆ ನಿಮ್ಮ ಇಡೀ ಕುಟುಂಬದ ಸಂಕಟಕ್ಕೆ ಕಾರಣವಾಗುತ್ತದೆ ಎಂದು ತಿಳಿಸಿದರು


ಕಾರ್ಯಕ್ರಮದಲ್ಲಿ ಉಪಸ್ಥಿತರಿದ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಭಗವಾನ್ ದಾಸ್ ಮಾತನಾಡಿ ಪ್ರತಿಯೊಬ್ಬ ನಾಗರೀಕರು ರಸ್ತೆ ಸುರಕ್ಷತಾ ನಿಯಮಗಳನ್ನ ಪಾಲಿಸ ಬೇಕು, ಸರ್ಕಾರದ ನಿಯಮಗಳು ಸಾರ್ವಜನಿಕ ರಕ್ಷಣೆಗೆ ಇರುವುದು, ಜವಾಬ್ದಾರಿ ಅರಿತು ವಾಹನ ಚಲಾಯಿಸಿದರೆ ಅಪಘಾತಗಳು ಕಡಿಮೆಯಾಗುತ್ತವೆ, ಪ್ರತಿಯೊಬ್ಬರು ಕಡ್ಡಾಯವಾಗಿ ವಾಹನಗಳ ದಾಖಲೆಗಳನ್ನ ಇಟ್ಟುಕೊಳ್ಳಬೇಕು, ಅಪಘಾತಗಳು ಅಕಸ್ಮಿಕವಾಗಿ ವಾಹನಗಳ ಇನ್ಸುರೆನ್ಸ್ ಮಾಡಿಸಿಕೊಳ್ಳಿ ಅಪಘಾತ ,ಸಂಕಷ್ಟದ ಸಮಯದಲ್ಲಿ ನಿಮಗೆ ನಿಮ್ಮ ಕುಟುಂಬಕ್ಕೆ ನೆರವಾಗುತ್ತವೆ ಎಂದು ತಿಳಿಸಿದರು
ಸಪ್ತಾಹದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕುಮಾರ್ ಆಸ್ಪತ್ರೆ ವೈದ್ಯಾಧಿಕಾರಿ ಡಾ//ಶ್ರೀಧರ್ ಮಾತನಾಡಿ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ವಾಹನ ಚಲಾಯಿಸಿ, ಅಪ್ರಾಪ್ತ ಮಕ್ಕಳಿಗೆ ವಾಹನಗಳನ್ನ ಚಲಾಯಿಸಲು ಕೊಡಬೇಡಿ,ಮಕ್ಕಳು ಅಪಘಾತಕ್ಕೆ ಒಳಗಾದರೆ ಪೋಷಕರು ತೊಂದರೆ ಸಿಲುಕಬೇಕಾಗುತ್ತದೆ, ಎಲ್ಲರೂ ಕಡ್ಡಾಯವಾಗಿ ಇನ್ಸುರೇನ್ಸ್ ಮಾಡಿಸಿಕೊಳ್ಳ ಬೇಕು ಕಷ್ಟಕಾಲದಲ್ಲಿ ಸಮಸ್ಯೆಯಿಂದ ಪರಿಹಾರ ಪಡೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು
ಕಾರ್ಯಕ್ರಮದಲ್ಲಿ ಎಆರ್ ಟಿಒ ಇನ್ಪೆಕ್ಟರ್ ಕಿರಣ್,ತಿಪಟೂರು ನಗರಠಾಣೆ ಸರ್ಕಲ್ ಇನ್ಪೆಕ್ಟರ್ ವೆಂಕಟೇಶ್,ಸಬ್ ಇನ್ಪೆಕ್ಟರ್ ಡಿ.ಕೃಷ್ಣಪ್ಪ,ಸರ್ಕಾರಿ ಬಾಲಕರ ಪದವಿ ಪೂರ್ವಕಾಲೇಜು ಪ್ರಾಚಾರ್ಯ ಶಿವಕುಮಾರ್ ತಾಲ್ಲೋಕು ಆರೋಗ್ಯಾಧಿಕಾರಿ ಕುಸುಮಾ ಮುಂತ್ತಾದವರು ಉಪಸ್ಥಿತರಿದರು

ಶಾಲಾಮಕ್ಕಳು ಹಾಗೂ ಡ್ರೈವಿಂಗ್ ಸ್ಕೂಲ್ ಗಳಿಂದ ಜಾಥ ನಡೆಸಲಾಯಿತು.

ವರದಿ :ಮಂಜುನಾಥ್ ಹಾಲ್ಕುರಿಕೆ

ತಿಪಟೂರು ನಗರಪೊಲೀಸ್ ಠಾಣಾ ವ್ಯಾಪ್ತಿಯ
ಗುರುದರ್ಶನ್ ಹೋಟೆಲ್ ಪಕ್ಕದಲ್ಲಿರುವ ಸಿ.ಕೆ ಮೊಬೈಲ್ಸ್ ಅಂಗಡಿಯ ರೋಲಿಂಗ್ ಶೆಟರ್ ದಿನಾಂಕ: 01/02/2025 ರಂದು
ಕಳ್ಳತನ ಮಾಡಿ 75000/- ರೂ ಬೆಲೆಯುಳ್ಳ 06
ಮೊಬೈಲ್ ಗಳು, ನಗದು 18000/- ರೂ ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಈ ಸಂಬಂದ
ತಿಪಟೂರು ನಗರಪೊಲೀಸ್ ಠಾಣೆಯಲ್ಲಿ ಠಾಣಾ 0.50. 21/2025 00:331(4),305
ಬಿ.ಎನ್.ಎಸ್-2023 ರೀತ್ಯಾ ಪ್ರಕರಣ ದಾಖಲಾಗಿರುತ್ತದೆ.
ಮೇಲ್ಕಂಡ ಪ್ರಕರಣವನ್ನು ಮಾನ್ಯ ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಅಶೋಕ್ ಕೆ.ವಿ
ರವರ ಮಾರ್ಗದರ್ಶನದಲ್ಲಿ, ತುಮಕೂರು ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರವರುಗಳಾದ
ವಿ.ಮರಿಯಪ್ಪ ಹಾಗೂ ಬಿ.ಎಸ್. ಅಬ್ದುಲ್ ಖಾದರ್ ರವರ ನೇತೃತ್ವದಲ್ಲಿದಲ್ಲಿ, ತಿಪಟೂರು ಉಪವಿಭಾಗದ
ಪೊಲೀಸ್‌ ಉಪಾಧೀಕ್ಷಕರವರಾದ ಡಿ.ಎಸ್.ಪಿ ವಿನಾಯಕ ಶೆಟಗೇರಿ ಮಾರ್ಗಸೂಚನೆ ಮೇರೆಗೆ

ತಿಪಟೂರು
ನಗರ ಪೋಲೀಸ್ ಠಾಣೆಯ ಅಧಿಕಾರಿಗಳಾದ ಪಿ.ಐ ವೆಂಕಟೇಶ್.ಸಿ, ಪಿ.ಎಸ್.ಐ ಡಿ.ಕೃಷ್ಣಪ್ಪ ಮತ್ತು
ಸಿಬ್ಬಂದಿಯವರಾದ ಲೋಕೇಶ್ ಜಿ.ಆರ್ ಮತ್ತು ಸಾಗರ್ ಅಂಬಿಗೇರ್, ಚನ್ನೇಗೌಡ, ಯತೀಶ್ ಕುಮಾರ್
ರವರು ಕಾರ್ಯಚರಣೆಯ ಮಾಡಿ ಪ್ರಕರಣ ದಾಖಲಾದ ಎರಡೇ ದಿನದಲ್ಲಿ ದಿನಾಂಕ: 03/02/2025
ರಂದು ಆರೋಪಿತನಾದ ಸುದೀಪ್ ಗಣೇಶ್ ಬಿನ್ ಗಂಗರಾಜು @ ಗಣೇಶ್, 25 ವರ್ಷ, ಗಾರೆ ಕೆಲಸ,
6ನೇ ಕ್ರಾಸ್, ಎನ್.ಆರ್ ಕಾಲೋನಿ, ಕೋತಿತೋಪು, ತುಮಕೂರು ಟೌನ್ ಈತನನ್ನು ಬಂದಿಸಿದ್ದು,
ಆರೋಪಿಯು ಕೊರಟಗೆರೆ ನಗರದಲ್ಲಿ ಕೆ.ಎ-40 ಆರ್-1930 ನೇ ಹೀರೋ ಹೊಂಡಾ ಮೋಟಾರ್
ಸೈಕಲ್ ಅನ್ನು ಕಳ್ಳತನ ಮಾಡಿಕೊಂಡು ತಿಪಟೂರಿಗೆ ಬಂದು ತಿಪಟೂರಿನ ಸಿ.ಕೆ ಮೊಬೈಲ್ ಅಂಗಡಿಯ
ರೋಲಿಂಗ್ ಶೆಟರ್ ಅನ್ನು ಹಾರೆಯಿಂದ ಮೀಟಿ ಒಳಗಡೆ ಹೋಗಿ ಕಳ್ಳತನ ಮಾಡಿರುವುದು ತನಿಖೆಯಿಂದ
ತಿಳಿದು ಬಂದಿರುತ್ತದೆ.
ಆರೋಪಿ ಕಡೆಯಿಂದ ಕಳವು ಮಾಡಿದ್ದ 16000/- ರೂ ನಗದು ಹಣ ಸುಮಾರು 75000/- ರೂ
ಬೆಲಬಾಳುವ 6 Android ಮೊಬೈಲ್‌ಗಳು, ಒಂದು ಪವರ್ ಬ್ಯಾಂಕ್, ಒಂದು ಬ್ಲೂಟೂತ್, ಒಂದು
ಚಾರ್ಜರ್, ಸುಮಾರು 4 ಅಡಿ ಉದ್ದದ ಕಬ್ಬಿಣದ ಹಾರೆ, ಹಾಗೂ ಕೃತ್ಯಕ್ಕೆ ಬಳಿಸಿರುವ ಸುಮಾರು 50000/-
ರೂ ಬೆಲೆ ಬಾಳುವ ಕೆ.ಎ-40 ಆರ್-1930 ನೇ ಹೀರೋ ಹೊಂಡಾ ಸ್ಪೆಂಡರ್ ಬೈಕ್ ಅನ್ನು ಅಮಾನತ್ತು
ಪಡಿಸಿಕೊಂಡು ಘನ ನ್ಯಾಯಾಲಯಕ್ಕೆ ಆರೋಪಿಯನ್ನು ಹಾಜರುಪಡಿಸಿದ್ದು, ನ್ಯಾಯಾಲಯವು
ನ್ಯಾಯಾಂಗ ಬಂಧನಕ್ಕೆ ಆದೇಶ ಮಾಡಿರುತ್ತದೆ. ತನಿಖಾ ತಂಡದ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಮಾನ್ಯ
ಪೊಲೀಸ್ ಅಧೀಕ್ಷಕರಾದ ಕೆ.ವಿ.ಅಶೋಕ್, ಐ.ಪಿ.ಎಸ್ ರವರು ಪ್ರಶಂಸಿರುತ್ತಾರೆ.

ವರದಿ :ಮಂಜುನಾಥ್ ಹಾಲ್ಕುರಿಕೆ

ತಿಪಟೂರು ತಾಲ್ಲೋಕಿನಹೊನ್ನವಳ್ಳಿ ಹೋಬಳಿಯ ಕಂಬದಹಳ್ಳಿ ಗ್ರಾಮದ ಶ್ರೀ ಆಂಜನೇಯಸ್ವಾಮಿ ರಥಸಪ್ತಮಿಯ ಅಂಗವಾಗಿ ರಥೋತ್ಸವವು ಅದ್ದೂರಿಯಾಗಿ ನೆರವೇರಿಸಲಾಯಿತು
ಮಣಕಿಕೆರೆ ಗ್ರಾಮದೇವತೆ ಶ್ರೀ ಕರಿಯಮ್ಮ ದೇವಿ, ಶ್ರೀ ದೂತರಾಯಸ್ವಾಮಿ ಯವರಿಗೆ ವಿಶೇಷ ಅಲಂಕಾರ ಹಾಗೂ ಪೂಜಾ ಕೈಂಕರ್ಯಗಳನ್ನ ನೆರವೇರಿಸಲಾಯಿತು.


ಶ್ರೀ ಕೆಂಚರಾಯ ಸ್ವಾಮಿಯವರಿಗೆ ಬಿಲ್ಗೂಡು ಸೇವೆ, ಮಣೇವು ಸೇವೆ, ನೆರವೇರಿಸಿಲಾಯಿತು ಹಾಲೇನಹಳ್ಳಿ ಗ್ರಾಮದೇವತೆ ಶ್ರೀ ಕರಿಯಮ್ಮ ದೇವಿ, ಶ್ರೀ ಧೂತರಾಯಸ್ವಾಮಿ ಯವರ ಉತ್ಸವ ನೆರವೇರಿಸಲಾಯಿತು. ಸಾವಿರಾರು ಜನ ಭಕ್ತಾಧಿಗಳು ರಥೋತ್ಸವದಲ್ಲಿ ಭಾಗವಹಿಸಿ ಪೂಜೆಸಲ್ಲಿಸಿದರು.

ವರದಿ :ಮಂಜುನಾಥ್ ಹಾಲ್ಕುರಿಕೆ

ಆರೋಗ್ಯ ಇಲಾಖೆ, ಸಾರ್ವಜನಿಕ ಆಸ್ಪತ್ರೆ ತಿಪಟೂರು ವತಿಯಿಂದ ವಿಶ್ವ ಕ್ಯಾನ್ಸರ್ ದಿನದ ಅಂಗವಾಗಿ ಸಾರ್ವಜನಿಕ ಆಸ್ಪತ್ರೆ ತಿಪಟೂರು ಆವರಣದಲ್ಲಿಕ್ಯಾನ್ಸರ್ ರೋಗದ ಕುರಿತು ಅರಿವು ಮತ್ತು ಕ್ಯಾನ್ಸರ್ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮವನ್ನು ತಾಲೂಕು ಆರೋಗ್ಯ ಅಧಿಕಾರಿಗಳಾದ, ಶ್ರೀಮತಿ ಡಾಕ್ಟರ್ ರಾಧಿಕಾ ರವರು ಉದ್ಘಾಟಿಸಿದರು, ಆಸ್ಪತ್ರೆಯ ತಜ್ಞ ವೈದ್ಯರಾದ ಡಾಕ್ಟರ್ ರಕ್ಷಿತ್ ಗೌಡ ಮಾತನಾಡಿ ಕ್ಯಾನ್ಸರ್ ಕಾಯಿಲೆಯನ್ನು ಬೇಗ ಪತ್ತೆ ಹಚ್ಚಿದಲ್ಲಿ ಸೂಕ್ತವಾದ ಚಿಕಿತ್ಸೆಯನ್ನು ನೀಡಿ ಗುಣಪಡಿಸಬಹುದು ಹಾಗೂ ಅಪಾಯದ ತೀವ್ರತೆಯನ್ನು ಕಡಿಮೆ ಮಾಡಬಹುದು,ಸಾರ್ವಜನಿಕರು ಯಾವುದೇ ರೋಗದ ಲಕ್ಷಣಗಳು ಕಂಡ ತಕ್ಷಣ ನಿರ್ಲಕ್ಷ್ಯ ಮಾಡದೆ, ಸಾರ್ವಜನಿಕ ಆಸ್ಪತ್ರೆಗಳಲ್ಲಿ ಪರೀಕ್ಷೆ ಮಾಡಿಸಿಕೊಳ್ಳಿ ,ರೋಗ ಉಲ್ಬಣಗೊಂಡಗ ಪರಿಣಾಮಕಾರಿ ಚಿಕಿತ್ಸೆ ಕೊಡಲು ಸಾಧ್ಯವಾಗುವುದಿಲ್ಲಎಂದು ತಿಳಿಸಿದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನ ವಹಿಸಿದ್ದ ಮುಖ್ಯ ವೈದ್ಯಾಧಿಕಾರಿಗಳಾದ ಡಾ. ಶಿವಕುಮಾರ್ ಮಾತನಾಡಿ ಕ್ಯಾನ್ಸರ್ ಕಾಯಿಲೆ ಪರೀಕ್ಷೆ ಹಾಗೂ ಚಿಕಿತ್ಸೆಗಳು ಸರ್ಕಾರಿ ಆಸ್ಪತ್ರೆಯಾದ ಜಿಲ್ಲಾ ಆಸ್ಪತ್ರೆ ಹಾಗೂ ಕಿದ್ವಾಯಿ ಆಸ್ಪತ್ರೆಯಲ್ಲಿ ಬಡ ರೋಗಿಗಳಿಗೆ ಸರ್ಕಾರದಿಂದ ಉಚಿತ ಚಿಕಿತ್ಸೆಗಳು ದೊರೆಯುತ್ತಿವೆ ಅದರ ಉಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದು ತಿಳಿಸಿದರು ಈ ಕಾರ್ಯಕ್ರಮದಲ್ಲಿ ಆಸ್ಪತ್ರೆಯ ತಜ್ಞ ವೈದ್ಯರುಗಳಾದ ಡಾ//ವಿಜಯ್ ಕುಮಾರ್, ಹಾಗೂ ಶ್ರೀನಿವಾಸ್ ಮುಂತ್ತಾದವರು ಉಪಸ್ಥಿತರಿದರು

ವರದಿ :ಮಂಜುನಾಥ್ ಹಾಲ್ಕುರಿಕೆ

ತುಮಕೂರು ರೈಲು ನಿಲ್ದಾಣದ 4ನೇ ಪ್ಲಾಟ್‌ಫಾರ್ಮ್‌ನಲ್ಲಿ ಈ
ದುರ್ಘಟನೆ ಸಂಭವಿಸಿದ್ದು, ಬೆಂಗಳೂರಿನಿಂದ ತುಮಕೂರಿಗೆ
ಪ್ರಯಾಣಿಸುತ್ತಿದ್ದ ಯುವಕ ಅಪಘಾತಕ್ಕೊಳಗಾಗಿದ್ದಾರೆ. ಪುಷ್ಪಕ್
ಎಕ್ಸ್‌ಪ್ರೆಸ್ ರೈಲಿನಿಂದ ಇಳಿಯುವಾಗ ಅವಾಂತರ ಸಂಭವಿಸಿದೆ.


ಆಯತಪ್ಪಿ ರೈಲ್ವೆ ಟ್ರ್ಯಾಕ್ ಬಿದ್ದ ಯುವಕನ ದೇಹದ ಕಾಲು ತುಂಡಾಗಿದ್ದು ಸಾರ್ವಜನಿಕರ ನೆರವಿನಿಂದ ಮೇಲೆತ್ತಲು ಪ್ರಯತ್ನಿಸಿದರಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.
ಯುವಕನ ಗುರುತು:
ಮೃತ ಯುವಕನು ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ
ಅಮ್ಮಸಂದ್ರ ಗ್ರಾಮದ ಛಾಯಾಂಕ್ (24) ಎಂದು
ಗುರುತಿಸಲಾಗಿದೆ. ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ
ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುತ್ತಿದ್ದ ಛಾಯಾಂಕ್, ತನ್ನ
ಊರಿಗೆ ಆಗಮಿಸುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.
ರಕ್ಷಣೆ ಪ್ರಯತ್ನ ವಿಫಲ:
ಅಪಘಾತದ ತಕ್ಷಣವೇ ಯುವಕನನ್ನು ಆಸ್ಪತ್ರೆಗೆ
ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ
ಕೊನೆಯುಸಿರೆಳೆದಿದ್ದಾರೆ. ದುರ್ಘಟನೆಯ ಸ್ಥಳದಲ್ಲಿ
ಹಾದುಹೋಗುತ್ತಿದ್ದ ಜನರು ತಕ್ಷಣವೇ ಯುವಕನ ಕುಟುಂಬಸ್ಥರ
ಸಂಪರ್ಕವನ್ನು ಮಾಡಿಕೊಂಡು ಮಾಹಿತಿ ನೀಡಿದ್ದಾರೆ.
ಪೊಲೀಸರ ತನಿಖೆ:
ಘಟನೆಯ ಕುರಿತು ತುಮಕೂರು ರೈಲ್ವೆ ಠಾಣೆಯ ಪೊಲೀಸರು
ತನಿಖೆ ಆರಂಭಿಸಿದ್ದು, ಈ ದುರ್ಘಟನೆ ಕುರಿತು ಹೆಚ್ಚಿನ ಮಾಹಿತಿ
ಸಂಗ್ರಹಿಸುತ್ತಿದ್ದಾರೆ.

ವರದಿ :ಮಂಜುನಾಥ್ ಹಾಲ್ಕುರಿಕೆ

ತಿಪಟೂರು ತಾಲ್ಲೋಕಿನ ಕಿಬ್ಬನಹಳ್ಳಿ ಹೋಬಳಿ,ಕರಡಾಳು ಗ್ರಾಮದಲ್ಲಿ 14ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ 110/11ಕೆ.ವಿ ಉಪವಿದ್ಯುತ್ ಸ್ಥಾವರವನ್ನ ತಿಪಟೂರು ಶಾಸಕ ಕೆ.ಷಡಕ್ಷರಿ ಉದ್ಘಾಟಿಸಿದರು.

ಉಪವಿದ್ಯುತ್ ಸ್ಥಾವರ ಉದ್ಘಾಟಿಸಿ ಮಾತನಾಡಿದ ಕೆ.ಷಡಕ್ಷರಿ ತಿಪಟೂರು ತಾಲ್ಲೋಕಿನಲ್ಲಿ ವಿದ್ಯುತ್ ಅಭಾವ ಸರಿಪಡಿಸಲು ಯೋಜನೆ ರೂಪಿಸಿದ್ದು ತಾಲ್ಲೋಕಿನ ಮೀಸೆತಿಮ್ಮನಹಳ್ಳಿ ಬಳಿ 220 ಕೆ.ವಿ ವಿದ್ಯುತ್ ಸ್ಥಾವರ ಹಾಗೂ ಬಿದಿರೆಗುಡಿ, ಬಳುವನೇರಲು,ತಡಸೂರು ಬಳಿ 110ಕೆ.ವಿ ಉಪವಿದ್ಯುತ್ ಸ್ಥಾವರ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ,ಸರ್ಕಾರದಿಂದ ಅನುಮೋದನೆಯಾಗಿದ್ದು, ಶೀಘ್ರವಾಗಿ ಕೆಲಸ ಕೈಗೊಳ್ಳಲಾಗುವುದು, ತಾಲ್ಲೋಕಿನ ವಿದ್ಯುತ್ ನಿಲುಗಡೆ ಸಮಸ್ಯೆ ಪರಿಹಾರ ಮಾಡಲು ಕ್ರಮಕೈಗೊಳ್ಳಲಾಗುತ್ತಿದ್ದು, ರೈತರಿಗೆ ಕನಿಷ್ಟ 8 ಗಂಟೆ ವಿದ್ಯುತ್ ನೀಡಲು ಕ್ರಮಕೈಗೊಳ್ಳಲಾಗಿದೆ, ರೈತರಿಗೆ ನೀರು ,ವಿದ್ಯುತ್ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯ ನೀಡಬೇಕು ಎನ್ನುವುದು, ನಮ್ಮ ಮೊದಲ ಆಧ್ಯತೆಯಾಗಿದೆ ಇ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದು ತಿಪಟೂರು ತಾಲ್ಲೋಕಿಗೆ ಹೇಮಾವತಿ ಹಾಗೂ ತುಂಗಭದ್ರ ಯೋಜನೆಯಿಂದ ನೀರು ತರುವ ಪ್ರಯತ್ನ ನಡೆಯುತ್ತಿದೆ. ತಾಲ್ಲೋಕಿನ 110 ಕೆರೆಗಳಿಗೆ ನೀರು ತುಂಬಿಸಲು ಎತ್ತಿನ ಹೊಳೆಯೋಜನೆಯಿಂದ ಅನುಮೋದನೆ ಪಡೆಯಲಾಗಿದೆ.
ತಿಪಟೂರು ನಗರವು ಸಹ ದಿನೇ ದಿನೇ ವೇಗವಾಗಿ ಬೆಳೆಯುತ್ತಿದ್ದು ನಗರಸಭೆನ್ನ ನಗರಪಾಲಿಕೆ ಮಾಡಲು ಯೋಜನೆ ಹಾಕಿಕೊಂಡಿದ್ದೇವೆ, ಅಭಿವೃದ್ದಿ ವಿಚಾರದಲ್ಲಿ ನಗರದಷ್ಟೆ ಆಧ್ಯತೆಯನ್ನ ಗ್ರಾಮೀಣ ಭಾಗಕ್ಕೂ ನೀಡಲಾಗುವುದು,ನಮ್ಮ ಸರ್ಕಾರ ಗ್ಯಾರಂಟಿ ಯೋಜನೆಗಳ ಮೂಲಕ ಬಡವರು ಹಾಗೂ ಸಾಮಾನ್ಯ ಜನರ ಜೀವನ ಸುಧಾರಣೆಗೆ ಕ್ರಮಕೈಗೊಂಡಿದೆ.ಕೇಂದ್ರ ಸರ್ಕಾರ ಕರ್ನಾಟಕ ರಾಜ್ಯದ ವಿಚಾರದಲ್ಲಿ ಮಲತಾಯಿಧೋರಣೆ ಅನುಸರಿಸುತ್ತಿದ್ದು, ಈ ಭಾರೀಯ ಬಜೆಟ್ ನಲ್ಲಿ ರಾಜ್ಯಕ್ಕೆ ಭಾರೀ ಅನ್ಯಾಯ ಮಾಡಿದ್ದಾರೆ, ನಾನು 100ರೂಪಾಯಿ ತೆರಿಗೆ ಹಣ ನೀಡಿದರೆ ಕೇವಲ 18 ರೂಪಾಯಿ ಹಣವನ್ನ ನಮ್ಮ ರಾಜ್ಯದ ಅಭಿವೃದ್ದಿಗೆ ನೀಡುತ್ತಿದ್ದಾರೆ, ನಮ್ಮ ರಾಜ್ಯದ ಪಾಲನ್ನ ಉತ್ತರ ಭಾರತದ ರಾಜ್ಯಗಳಿಗೆ ನೀಡುವ ಮೂಲಕ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅನ್ಯಾಯ ಮಾಡುತ್ತಿದ್ದು, ನಮ್ಮ ಎಲ್ಲಾ ನಾಯಕರು ಒಗ್ಗಟಿನಿಂದ ನಮ್ಮ ಪಾಲನ್ನು ಪಡೆಯಲು ಹೋರಾಟ ಮಾಡಬೇಕು ಎಂದು ತಿಳಿಸಿದರು


ಕಾರ್ಯಕ್ರಮದಲ್ಲಿ ಉಪಸ್ಥಿತರಿದ ಬೆಸ್ಕಾಂ ಮುಖ್ಯ ಇಂಜಿನಿಯರ್ ಬಿ.ಎನ್ ಸತ್ಯನಾರಾಯಣ್ ಮಾತನಾಡಿ ಸರ್ಕಾರದ ಯೋಜನೆಗಳು ಶೀಘ್ರವಾಗಿ ಕಾರ್ಯಗತವಾಗಲು ರೈತರ ಸಹಕಾರ ಅಗತ್ಯ, ರೈತರು ಯೋಜನೆಗಳಿಗೆ ಭೂಮಿ ಅಗತ್ಯವಿದ್ದಾಗ ಭೂಮಿ ನೀಡಿ ಸೂಕ್ತ ಪರಿಹಾರ ಪಡೆಯುವ ಮೂಲಕ ಸರ್ಕಾರದ ಯೋಜನೆಗಳಿಗೆ ನೆರವಾಗ ಬೇಕು ಎಂದು ತಿಳಿಸಿದರು
ಕಾರ್ಯಕ್ರಮದಲ್ಲಿ ಅಧೀಕ್ಷಕ ಇಂಜಿನಿಯರ್ ಶಿವಕುಮಾರ್, ತಿಪಟೂರು ಉಪವಿಭಾಗಾಧಿಕಾರಿ ಶ್ರೀಮತಿ ಸಪ್ತಶ್ರೀ ತಹಸೀಲ್ದಾರ್ ಪವನ್ ಕುಮಾರ್ ,ಇಒ ಸುದರ್ಶನ್ ಪೌರಾಯುಕ್ತ ವಿಶ್ವೇಶ್ವರಯ್ಯ ಬದರಗಡೆ, ಎಇಇ ಸೋಮನಗೌಡ, ಎಇ ಮನೋಹರ್. ಬೆಸ್ಕಾಂ ಇಂಜಿನಿಯರ್ ನರಸಿಂಹಮೂರ್ತಿ, ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಮುದ್ದಪ್ಪ ಕುಪ್ಪಾಳು ಗ್ರಾಮಪಂಚಾಯ್ತಿ ಅಧ್ಯಕ್ಷೆ ಗಾಯಿತ್ರಿ ಉಪಾಧ್ಯೆಕ್ಷೆ ಮಂಜುಳ ಮುಂತ್ತಾದವರು ಉಪಸ್ಥಿತರಿದರು

ವರದಿ :ಮಂಜುನಾಥ್ ಹಾಲ್ಕುರಿಕೆ

ತಿಪಟೂರು ತಾಲ್ಲೋಕಿನ ಶ್ರೀ ವೀರಭದ್ರಸ್ವಾಮಿ ಹಾಗೂ ಶ್ರೀ ಭದ್ರಕಾಳಿ ಅಮ್ಮನವರ ಪವಾಡ ಶಕ್ತಿಪೀಠ ಹಾಗೂ ಶ್ರೀಕಾಳಿರುದ್ರಪೀಠದ ಪೀಠಾಧ್ಯಕ್ಷರಾದ ಶ್ರೀ ಶ್ರೀ ರೇಣುಕಾ ಗುರೂಜಿ ಸ್ವಾಮೀಜಿಗಳು ಪ್ರಯಾಗ್ ರಾಜ್ ಮಹಾಕುಂಭಮೇಳಕ್ಕೆ ತೆರಳುತ್ತಿರುವ ಹಿನ್ನೆಲೆ ಮಠದ ಭಕ್ತ ಸಮೂಹದಿಂದ ಅದ್ದೂರಿಯಾಗಿ ಭೀಳ್ಕೋಡುಗೆ ನೀಡಲಾಯಿತು,

ಶ್ರೀಶ್ರೀ ರೇಣುಕಾ ಗುರೂಜಿ ಸ್ವಾಮೀಜಿ ಮಾತನಾಡಿ ಹಿಂದೂ ಧರ್ಮ ಪವಿತ್ರಗ್ರಂಥಗಳಲ್ಲಿ ಉಲ್ಲೇಖವಾಗಿರುವಂತೆ ಪ್ರಯಾಗ್ ರಾಜ್ ಮಹಾಕುಂಭಮೇಳದ ಶಾಹಿಸ್ನಾನ ಹಾಗೂ ಪುಣ್ಯ ಸ್ನಾನಗಳಿಗೆ, ವಿಶೇಷ ಸ್ಥಾನಮಾನವಿದ್ದು,ಗಂಗ,ಯಮುನ ಸರಸ್ಪತಿ ನದಿಗಳ ಸಂಗಮ ಭೂಮಿ,ಮಹಾನ್ ಸಾಧು ಸಂತರು,ಪುಣ್ಯಪುರುಷರು ಸಿದ್ದಿಗೈದ ಪುಣ್ಯಭೂಮಿಯಲ್ಲಿ, ಸ್ನಾನಮಾಡುವುದೇ ಪುಣ್ಯದ ಕಾರ್ಯವಾಗಿದ್ದು, ಕಲ್ಪತರು ನಾಡಿನ ಶ್ರೇಯಸ್ಸು ಲಭಿಸಲಿ, ಎಂದು ಭಕ್ತರು ಶ್ರೀಕ್ಷೇತ್ರದೈವ ಶ್ರೀವೀರಭದ್ರಸ್ವಾಮಿ ಹಾಗೂ ಶ್ರೀ ಭದ್ರಕಾಳಿ ಅಮ್ಮನವರ. ಆಗ್ನೆಯಂತೆ ಪ್ರಯಾಗ್ ರಾಜ್ ಮಹಾಕುಂಭಮೇಳಕ್ಕೆ ತೆರಳುತ್ತಿರುವುದ್ದಾಗಿ ತಿಳಿಸಿದರು.ಮಠದ ನೂರಾರು ಭಕ್ತರು ಉಪಸ್ಥಿತರಿದು, ಶ್ರೀ ವೀರಭದ್ರೇಶ್ವರಸ್ವಾಮಿ ಹಾಗೂ ಶ್ರೀ ಭದ್ರಕಾಳಿ ಅಮ್ಮನವರಿಗೆ ವಿಶೇಷ ಪೂಜೆಸಲ್ಲಿಸಿ ಶ್ರೀಗಳಿಗೆ ಭೀಳ್ಕೊಡುಗೆ ನೀಡಿದರು.

ವರದಿ :ಮಂಜುನಾಥ್ ಹಾಲ್ಕುರಿಕೆ

ರಕ್ತದಾನ ಮಹಾದಾನ ರಕ್ತವನ್ನ ಕೃತಕವಾಗಿ ಉತ್ವಾದನೆ ಮಾಡಲು ಸಾಧ್ಯವಿಲ್ಲ,ದಾನಿಗಳು ನೀಡುವ ರಕ್ತವನ್ನ ಸಂಕಷ್ಟದಲ್ಲಿ ಇರುವ ರೋಗಿಗಳಿಗೆ ನೀಡಿ ಜೀವ ಉಳಿಸುವ ಮಹತ್ಕಾರ್ಯಕ್ಕೆ ಎಲ್ಲರೂ ಬೆಂಬಲ ನೀಡಬೇಕು ಎಂದು ಶಾಸಕ ಕೆ.ಷಡಕ್ಷರಿ ತಿಳಿಸಿದರು.


ತಿಪಟೂರು ನೂತನವಾಗಿ ಆರಂಭವಾಗಿರುವ ಶೇಖರ್ ರಕ್ತನಿಧಿ ಕೇಂದ್ರವನ್ನ ಉದ್ಘಾಟಿಸಿದ ಶಾಸಕ ಕೆ.ಷಡಕ್ಷರಿ ಮಾತನಾಡಿ ರಕ್ತ ಕೃತಕವಾಗಿ ಉತ್ಪಾದನೆ ಮಾಡಲಾಗದ ಜೀವಾಮೃತ ರಕ್ತದಾನಿಗಳಿಂದ ಸಂಗ್ರಹಿಸಿದ ರಕ್ತವನ್ನ ಸಂಸ್ಕರಣೆ ಮಾಡಿ ತುರ್ತು ಅಗತ್ಯವಿರುವ ರೋಗಿಗಳಿಗೆ ನೀಡುವುದದಿಂದ ರೋಗಿಗಳ ಉಳಿಸಲು ಸಾಧ್ಯವಾಗುತ್ತದೆ.ತಿಪಟೂರು ದಿನದಿಂದ ದಿನಕ್ಕೆ ಅಭಿವೃದ್ದಿ ಹೊಂದುತ್ತಿದ್ದು,ರಕ್ತ ನಿಧಿಕೇಂದ್ರ ತುರ್ತು ಅಗತ್ಯವಾಗಿತ್ತು, ಡಾ//ಸೋಮಶೇಖರ್ ರಕ್ತನಿಧಿ ಕೇಂದ್ರ ಆರಂಭಿಸಿ ಉತ್ತಮ ಕೆಲಸ ಮಾಡಿದ್ದಾರೆ, ತುರ್ತು ಅನಾರೋಗ್ಯ, ಅಪಘಾತಗಳ ಸಂದರ್ಭದಲ್ಲಿ ರಕ್ತಕ್ಕಾಗಿ ರೋಗಿಗಳು ತುಮಕೂರು ಹಾಸನ ಬೆಂಗಳೂರಿಗೆ ಹೋಗಬೇಕಿತ್ತು. ಎಷ್ಟೊ ರೋಗಿಗಳು ಮಾರ್ಗಮಧ್ಯೆಯೇ ಸಾವನ್ನಪ್ಪಿದ ಉದಾಹರಣೆಗಳುಂಟು, ನಮ್ಮ ತಿಪಟೂರಿನಲ್ಲಿ ರಕ್ತನಿಧಿ ಕೇಂದ್ರ ಆರಂಭವಾಗಿರುವುದು ಶ್ಲಾಘನೀಯ ಎಂದು ತಿಳಿಸಿದರು.


ಕಾರ್ಯಕ್ರಮದಲ್ಲಿ ಉಪಸ್ಥಿತರಿದ ನಿವೃತ್ತ ಪೊಲೀಸ್ ಅಧಿಕಾರಿ ಲೊಕೇಶ್ವರ್ ಮಾತನಾಡಿ ತಿಪಟೂರಿಗೆ ರಕ್ತ ನಿಧಿ ಕೇಂದ್ರ ಅವಶ್ಯಕತೆ ಇತ್ತು,ತುರ್ತು ಸಂದರ್ಭದಲ್ಲಿ ರಕ್ತಕ್ಕಾಗಿ ಸುಮಾರು 70ಕಿಲೋಮೀಟರ್ ಹೋಗಬೇಕಿತ್ತು, ಬ್ಲಡ್ ಬ್ಯಾಂಕ್ ನಿಂದ ಆರಂಭವಾಗಿರುವುದರಿಂದ ರೋಗಿಗಳಿಗೆ ನೆರವಾಗಲಿದೆ.ರಕ್ತದಾನಿಗಳು ಹೆಚ್ಚಿನ ರಕ್ತದಾನ ಮಾಡುವ ಮೂಲಕ ಸಂಕಷ್ಟದಲ್ಲಿ ಇರುವ ರೋಗಿಗಳಿಗೆ ನೆರವಾಗಬೇಕು ಎಂದು ತಿಳಿಸಿದರು.


ಶೇಖರ್ ರಕ್ತನಿಧಿ ಕೇಂದ್ರದ ಮುಖ್ಯಸ್ಥರಾದ ಡಾ//ಸೋಮಶೇಖರ್ ಮಾತನಾಡಿ ತಿಪಟೂರು, ಚಿಕ್ಕನಾಯ್ಕನಹಳ್ಳಿ,ತುರುವೇಕೆರೆ,ಅರಸೀಕೆರೆ,ಹೊಸದುರ್ಗ,ಸೇರಿದಂತೆ ಅಕ್ಕಪಕ್ಕದ ಮೂರ್ನಾಲ್ಕು ಜಿಲ್ಲೆಗಳ ಭಾಗದ ಜನರಿಗೆ,ರಕ್ತನಿಧಿ ಕೇಂದ್ರದಿಂದ ಉಪಯೋಗವಾಗಲಿದೆ, ನಾಲ್ಕುವರ್ಷಗಳಿಂದ ಸತತ ಪ್ರಯತ್ನದಿಂದ ಶಾಸಕರಾದ ಕೆ.ಷಡಕ್ಷರಿ , ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಸಚಿವ ವಿ.ಸೋಮಣ್ಣ,ನಿವೃತ್ತ ಪೊಲೀಸ್ ಅಧಿಕಾರಿ ಲೋಕೇಶ್ವರ್ ರವರ ಪೋತ್ಸಾಹ ಹಾಗೂ ಸಹಕಾರದಿಂದ ರಕ್ತನಿಧಿ ಕೇಂದ್ರಕ್ಕೆ ಅನುಮೋದನೆ ದೊರೆಯಲು ಸಾಧ್ಯವಾಗಿತು,ನಮ್ಮ ರಕ್ತನಿಧಿ ಕೇಂದ್ರದಲ್ಲಿ,ಅತ್ಯಾಧುನಿಕ ಸೌಲಭ್ಯಗಳನ್ನ ಒಳಗೊಂಡ ಉತ್ತಮ ಸೇವೆ ನೀಡಲಾಗುವುದು, ರಕ್ತದಾನಿಗಳು ರಕ್ತವನ್ನ ದಾನಮಾಡುವ ಮೂಲಕ ನೆರವಾಗಬೇಕು ಎಂದು ತಿಳಿಸಿದರು
ಕಾರ್ಯಕ್ರಮದಲ್ಲಿ ನೊಣವಿನಕೆರೆ ಸೋಮಕಟ್ಟೆ ಕಾಡಸಿದ್ದೇಶ್ವರ ಮಠದ ಶ್ರೀಶ್ರೀ ಅಭಿನವ ಕಾಡಸಿದ್ದೇಶ್ವರ ಮಹಾಸ್ವಾಮೀಜಿ, ಹಾಗೂ ತಿಪಟೂರು ಗುರುಕುಲಾನಂದಾಶ್ರಮದ ಶ್ರೀಶ್ರೀ ಕರಿಬಸವ ದೇಶಿಕೇಂದ್ರ ಮಹಾಸ್ವಾಮೀಜಿಗಳು ದಿವ್ಯಸಾನಿಧ್ಯ ವಹಿಸಿದ್ದು, ಶ್ರೀಗಳ ಪಾದಪೂಜೆ ನೆರವೇರಿಸಲಾಯಿತು.ಅರಸೀಕೆರೆ ಶಾಸಕರಾದ ಕೆ.ಎಂ ಶಿವಲಿಂಗೆಗೌಡ .ಮಾಜಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್.ನಗರಸಭೆಅಧ್ಯಕ್ಷರಾದಯಮುನಾಧರಣೇಶ್,ಉಪಾಧ್ಯಕ್ಷರಾದ ಮೇಘನ ಭೂಷಣ್,ಮುಖಂಡರಾದ ಸುಜೀತ್ ಭೂಷಣ್, ಮುಖಂಡರಾದ ಕೆ.ಟಿ ಶಾಂತಕುಮಾರ್ ಪ್ರಕಾಶ್,ರವಿ ಕುಮಾರ್, ಡಾ//ಶ್ರೀಧರ್.ಮಂಜುನಾಥ್ ಮುಂತ್ತಾದವರು ಉಪಸ್ಥಿತರಿದರು.

ವರದಿ :ಮಂಜುನಾಥ್ ಹಾಲ್ಕುರಿಕೆ

ಸಾಮೂಹಿಕ ಶನಿ ಪೂಜೆಧಾರ್ಮಿಕ ಸಭೆ ಕಾರ್ಯಕ್ರಮವನ್ನು ತಿಪಟೂರು ಶಾಸಕರಾದ ಷಡಕ್ಷರಿ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು


ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಕೆ.ಷಡಕ್ಷರಿ ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ದೇಶದಲ್ಲಿಯೇ ಮಾದರಿ ಯೋಜನೆಯಾಗಿದೆ, ರಾಜ್ಯದ ಜನತೆಗೆ ಸರ್ಕಾರದ ಒಟ್ಟೊಟ್ಟಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯು ಜನ ಸಂಘಟನೆಯ ಮುಖೇನ ಅನೇಕ ಕಾರ್ಯಕ್ರಮಗಳನ್ನು ಏರ್ಪಡಿಸಿ ಜನಮನ್ನಣೆಗೆ ಪಾತ್ರವಾಗಿದೆ. 13 ವರ್ಷದ ಹಿಂದೆ ತಾಲ್ಲೂಕಿಗೆ ಯೋಜನೆಯು ಕಾಲಿಟ್ಟಾಗ ತಿಪಟೂರಿನ ವ್ಯಾಪ್ತಿಯಲ್ಲಿ ಮಾತ್ರ ಇದ್ದು ಪ್ರಸ್ತುತ ಶ್ರೀ ಕೆಂಪಮ್ಮ ದೇವಿಯ ಕೃಪೆಯೊಂದಿಗೆ ಯೋಜನೆ ತಾಲ್ಲೂಕಿನ ಪ್ರತಿ ಮೂಲೆ ಮೂಲೆಗೂ ತಲುಪಿ ಬಡ ಜನತೆಗೆ ಆರ್ಥಿಕ ಶಿಸ್ತನ್ನು ಕಲಿಸಿಕೊಡುವುದರೊಂದಿಗೆ ತಾಲ್ಲೂಕಿನ ಜನ ಮನ್ನಣೆಗೆ ಪಾತ್ರವಾಗಿದೆ.ಎಂದು ಸಂತಸ ವ್ಯಕ್ತಪಡಿಸಿದರು.ನೆರೆದ ಎಲ್ಲಾ ಜನತೆಗೆ ಭಗವಾನ್ ಶ್ರೀ ಶನಿದೇವರು ಹಾಗೂ ಮಂಜುನಾಥಸ್ವಾಮಿಯು ನಿಮ್ಮೆಲ್ಲರಿಗೂ ಒಳ್ಳೆಯದು ಮಾಡಲಿ ಎಂದು ಶುಭ ಹಾರೈಸಿದರು.

ಬಳಿಕ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ತುಮಕೂರು-1 ಜಿಲ್ಲಾ ನಿರ್ದೇಶಕರಾದ ಸತೀಶ್ ಸುವರ್ಣರವರು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿ ಗ್ರಾಮಾಭಿವೃದ್ದಿ ಯೋಜನೆಯು ಯಾವುದೇ ಕಾರಣಕ್ಕೂ ಯಾರಿಗೂ ಸಾಲ ಕೊಡುತ್ತಿಲ್ಲ ಬದಲಾಗಿ ರಾಜ್ಯದಲ್ಲಿ ಸರಿಸುಮಾರು 6ಲಕ್ಷ ಸಂಘಗಳನ್ನು ಮಾಡಿ ಬಡವರ್ಗದ ಜನತೆಯ ಏಳಿಗೆಗಾಗಿ ಕೃಷಿ ಕಾರ್ಯಕ್ರಮಗಳು,ಜ್ಞಾನವಿಕಾಸ ಕಾರ್ಯಕ್ರಮಗಳು,ಸಮುದಾಯ ಅಭಿವೃದ್ದಿ ಕಾರ್ಯಕ್ರಮಗಳನ್ನು ಮಾಡುವುದರೊಟ್ಟಿಗೆ ಸಂಘದ 60 ಲಕ್ಷ ಕುಟುಂಬಗಳಿಗೆ ದೇಶದ ಪ್ರತಿಷ್ಟಿತ ರಾಷ್ಟ್ರೀಕೃತ ಬ್ಯಾಂಕುಗಳ ಮುಖಾಂತರ ನೇರ ಸಾಲ ಸೌಲಭ್ಯವನ್ನು ಹೊದಗಿಸಿಕೊಟ್ಟು ರಾಜ್ಯದ 3ಕೋಟಿ ಜನತೆಯ ಮನೆಮನಗಳನ್ನು ಮುಟ್ಟಿದೆ ಎಂದು ತಿಳಿಸಿದರು.ಹೊನ್ನವಳ್ಳಿ ಗ್ರಾಮಪಂಚಾಯತ್ ಅದ್ಯಕ್ಷರಾದ ದೊಡ್ಡಯ್ಯನವರು ಕಾರ್ಯಕ್ರಮದ ಅದ್ಯಕ್ಷತೆಯನ್ನು ವಹಿಸಿದ್ದರು.ಕಾರ್ಯಕ್ರಮದಲ್ಲಿ ಹೊನ್ನವಳ್ಳಿ ಹೋಬಳಿಯ ಸಬ್ ಇನ್ಸ್ಪೆಕ್ಟರ್ ಚಂದ್ರಕಾಂತ್,ಮತ್ತಿಹಳ್ಳಿ ಗ್ರಾಮ ಪಂ.ಸದಸ್ಯರಾದ ಹರೀಶ್ ಗೌಡ,ಹೊನ್ನವಳ್ಳಿ ಗ್ರಾ.ಪಂ.ಮಾಜಿ ಅದ್ಯಕ್ಷರುಗಳಾದ ಶ್ರೀಕಂಠಮೂರ್ತಿ,ಪ್ರಸಾದ್,ರೈತ ಹೋರಾಟಗಾರರಾದ ಮುಪ್ನೇಗೌಡ,ಸಾಮೂಹಿಕ ಶ್ರೀ ಶನಿಪೂಜಾ ಸಮಿತಿ ಅದ್ಯಕ್ಷರಾದ ಜಗದೀಶ್,ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ತಿಪಟೂರು ತಾಲ್ಲೂಕು ಯೋಜನಾಧಿಕಾರಿಗಳಾದ ಉದಯ್.ಕೆ,ತಾಲ್ಲೂಕಿನ ಎಲ್ಲಾ ಕಾರ್ಯಕರ್ತರು ಹಾಗೂ ಹೊನ್ಮವಳ್ಳಿ ಹೋಬಳಿಯ ಸುತ್ತಮುತ್ತಲ ಸಾವಿರಕ್ಕೂ ಅಧಿಕ ಮಂದಿಯ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು.
ಅರ್ಚಕರಾದ ಶ್ರೀ ಅಡವೀಶಪ್ಪನವರ ನೇತೃತ್ವದಲ್ಲಿ ಹೊನ್ನವಳ್ಳಿಯ ನೂರೈವತ್ತೊಂದು ದಂಪತಿಗಳ ಸಮಕ್ಷಮದಲ್ಲಿ ಶ್ರೀ ಸ್ವಾಮಿ ಶನಿದೇವರ ಪೂಜೆ,ನವಗ್ರಹಗಳ ಪೂಜೆ ನೆರವೇರಿತು.ಬಳಿಕ ಕೀರ್ತನಕಾರರಾದ ಡಾ.ಅಶೋಕ್ ಕೆ.ಪಿ ರವರು ಶನಿದೇವರ ಹುಟ್ಟು, ದೇವರು ಹಾಗೂ ಮಾನವನ ಜೀವನದಲ್ಲಿ ಶನಿಮಹಾತ್ಮರ ಕಥಾ ಪರಾಯಣ ನೆಡೆಸಿಕೊಟ್ಟರು.

ವರದಿ :ಮಂಜುನಾಥ್ ಹಾಲ್ಕುರಿಕೆ

ತಿಪಟೂರು ತಾಲ್ಲೋಕಿನ ಹೊನ್ನವಳ್ಳಿ ಹೋಬಳಿ ಹಾಲ್ಕುರಿಕೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ವಿತರಣೆ ಮಾಡುತ್ತಿರುವ ಪಡಿತರ ಆಹಾರ ವಿತರಣೆಯಲ್ಲಿ ಭಾರೀ ಪ್ರಮಾಣದ ಅವ್ಯವಹಾರ ನಡೆಯುತ್ತಿದ್ದು, ಬಡವರು ತಿನ್ನುವ ಆಹಾರಕ್ಕೆ ಕನ್ನ ಹಾಕಲಾಗುತ್ತಿದೆ,ಎಂದು ಹಾಲೇನಹಳ್ಳಿ ಗ್ರಾಮಸ್ಥರು ತಿಪಟೂರು ತಹಸೀಲ್ದಾರ್ ಹಾಗೂ ಆಹಾರ ಇಲಾಖೆಗೆ ದೂರು ನೀಡಿ ಆಕ್ರೋಶ ವ್ಯಕ್ತಪಡಿಸಿದರು

,
ನಂತರ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ ಪತ್ರಿಕಾ ಘೋಷ್ಠಿಯಲ್ಲಿ ಹಾಲೇನಹಳ್ಳಿ ಗ್ರಾಮದ ಬನಶಂಕರ್ ಮಾತನಾಡಿ ಹಾಲ್ಕುರಿಕೆ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಸರ್ಕಾರ ಬಡವರಿಗೆ ನೀಡುವ ಪಡಿತರ ಧಾನ್ಯ ವಿತರಣೆ ಮಾಡಲಾಗುತ್ತುದ್ದು, ಪಡಿತರ ವಿತರಣೆಯಲ್ಲಿ ಭಾರೀ ಪ್ರಮಾಣದ ಅವ್ಯವಹಾರ ನಡೆಸಲಾಗುತ್ತಿದೆ,ಪ್ರತಿ ಪಡಿತರ ಚೀಟಿಗೆ 150ಗ್ರಾಮ ಆಹಾರ ಕಡಿತಗೊಳಿಸಿ ಪಡಿತರ ಧಾನ್ಯ ವಿತರಣೆ ಮಾಡುತ್ತಿದ್ದಾರೆ, ತೂಕದ ತಕ್ಕಡಿಗೆ 150ಗ್ರಾ ರಟ್ಟಿನ ಇಡಲಾಗಿದೆ, ಹಾಲ್ಕುರಿಕೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸುಮಾರು 2 ಸಾವಿರಕ್ಕೂ ಹೆಚ್ಚು ಪಡಿತರ ಚೀಟಿಗಳಿದ್ದು ಪ್ರತಿ ಕಾರ್ಡ್ ಗೆ 150 ಗ್ರಾಂ ನಂತೆ ಆಹಾರಧಾನ್ಯ ಕಡಿತಗೊಳಿಸಿದರೆ,ಪ್ರತಿತಿಂಗಳಲ್ಲಿ 5ರಿಂದ 6ಕ್ವಿಂಟಲ್ ಬಡವರಪಾಲಿನ ಆಹಾರ ಧಾನ್ಯ ಉಳಿತಾಯವಾಗಲಿದ್ದು,ಬಡವರ ಪಾಲಿನ,ಧಾನ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಪಾಲಾಗುತ್ತಿದ್ದು,ಬಡವರಿಂದ ಸಂಗ್ರಹವಾದ ಧಾನ್ಯವನ್ನ ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತದೆ, ಎನ್ನುವ ಆರೋಪಗಳಿದ್ದು,ಬಡವರಿಗೆ ಕಡಿಮೆ ಆಹಾರಧಾನ್ಯ ನೀಡುತ್ತಿರುವ ಬಗ್ಗೆ ಯಾರಾದರು ಪ್ರಶ್ನೆ ಮಾಡಿದರೆ, ಅವರ ಪಡಿತರ ಪಾಲಿನ ಆಹಾರಧಾನ್ಯ ನೀಡುವುದಿಲ್ಲ ಎಂದು ಬೆದರಿಕೆ ಹಾಕಲಾಗುತ್ತದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.ಒಂದು ತಿಂಗಳ ಪಡಿತರ ಧಾನ್ಯ ಪಡೆಯಲು ಕನಿಷ್ಟ ಎರಡರಿಂದ ಮೂರುದಿನ ಕೂಲಿನಾಲಿ ಬಿಟ್ಟುಕಾಯಬೇಕು, ಅವತ್ತು ಟೋಕನ್ ಸಿಗದಿದರೆ, ಮರುದಿನ ಕೂಲಿಬಿಟ್ಟುಕಾಯಬೇಕು, ಇನ್ನೂ ಪಡಿತರ ಧಾನ್ಯ ಪಡೆಯುವ ನಾಗರೀಕರು ಕಡ್ಡಾಯವಾಗಿ ಉಪ್ಪು. ಬಟ್ಟೆಸೋಪು,ಮೈ ಸೋಪು, ಪುಳಿಯೋಗರೇ ಪ್ಯಾಕೇಟ್ ಪಾಮ್ ಆಯಿಲ್,ಕಾರದ ಪುಡಿ ಸೇರಿದಂತೆ ಸೊಸೈಟಿ ಯವರ ಕೊಡುವಂತಹ ವಸ್ತುಗಳನ್ನ ತೆಗೆದುಕೊಳ್ಳಲೇ ಬೇಕು, ಅವರು ನೀಡುವ ವಸ್ತುಗಳನ್ನ ತೆಗೆದುಕೊಳ್ಳದಿದರೆ , ಪಡಿತರ ಧಾನ್ಯ ನೀಡದೆ ವಾಪಾಸ್ ಕಳಿಸುತ್ತಾರೇ , ಆ ತಿಂಗಳು ಬಡವರ ಹೊಟ್ಟೆಗೆ ತಣ್ಣೀರ ಬಟ್ಟೆಯೇ ಗತಿ ಎನ್ನುವಂತ್ತಾಗಿದೆ,ಹಾಲ್ಕುರಿಕೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಕಾರ್ಯಾಲಯದಲ್ಲಿ ನೀಡುವ ಪಡಿತರ ಕೇಂದ್ರದಲ್ಲಿ ಇದೇರೀತಿ ಗೋಲ್ ಮಾಲ್ ನಡೆಯುತ್ತಿದೆ, ಹಾಲ್ಕುರಿಕೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಹಾಲೇನಹಳ್ಳಿ ಗ್ರಾಮದಲ್ಲಿ ಹಾಲೇನಹಳ್ಳಿ. ಹಾಲೇನಹಳ್ಳಿ ಬೋವಿಕಾಲೋನಿ.ಗೊಲ್ಲರಹಟ್ಟಿ,ಹೊಸೂರು,ಗ್ರಾಮಗಳಿಗೆ ಅನುಕೂಲವಾಗುವಂತೆ ಪಡಿತರ ವಿತರಣೆ ಮಾಡುವ ಕೇಂದ್ರದಲ್ಲೂ ಇದೇ ರೀತಿ ಅವ್ಯವಹಾರ ನಡೆಯುತ್ತಿದ್ದು,ಹಾಲ್ಕುರಿಕೆ ಪ್ರಾಥಮಿಕ ಕೃಷಿ ಸಹಕಾರ ಸಂಘದಲ್ಲಿ ನಡೆಯುತ್ತಿರುವ ಅವ್ಯವಹಾರ ಪ್ರಶ್ನೆ ಮಾಡಿದರೆ ಅವರನ್ನ ಬೆದರಿಸಿ ಹತ್ತಿಕ್ಕುವ ಕೆಲಸ ಮಾಡಲಾಗುತ್ತಿದೆ,ನಾವೂ ಬಡವರಿಗೆ ಆಗುತ್ತಿರುವ ಅನ್ಯಾಯ ದೌರ್ಜನ್ಯ ಸರಿಪಡಿಸುವಂತೆ ತಿಪಟೂರು ತಹಸೀಲ್ದಾರ್ ಹಾಗೂ ಆಹಾರ ನಿರೀಕ್ಷಕರಿಗೆ ದೂರು ನೀಡಿದ್ದೇವೆ, ನಮಗೆ ನ್ಯಾಯ ಸಿಗುವವರೆಗೆ ಹೋರಾಡುತ್ತೇವೆ ಎಂದು ಹಾಲ್ಕುರಿಕೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು


ಪತ್ರಿಕಾ ಘೋಷ್ಠಿಯಲ್ಲಿ ಉಪಸ್ಥಿತರಿದ ರವೀಶ್ ಮಾತನಾಡಿ ಹಾಲ್ಕುರಿಕೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಪಡಿತರ ಧಾನ್ಯ ವಿತರಣೆಯಲ್ಲಿ ಆಗುತ್ತಿರುವ ಅನ್ಯಾಯದ ಬಗ್ಗೆ ನಾಲ್ಕೈದು ಭಾರೀ ಪ್ರಶ್ನೆ ಮಾಡಿದ್ದೇವೆ,ಆದರೆ ಅವರು ನಮ್ಮ ಸಹಕಾರ ಸಂಘದ ಸಿಬ್ಬಂದಿಗೆ ಸಂಬಳ ನೀಡಲು, ಕಚೇರಿ ನಿರ್ವಹಣೆಗೆ ಯಾರು ಹಣಕೊಡುತ್ತಾರೆ, ನಾವು ಕೊಟಷ್ಟು ತೆಗೆದುಕೊಂಡುಹೋಗಿ, ಜಾಸ್ತಿ ಮಾತನಾಡಿದರೆ ಪಡಿತರ ಧಾನ್ಯವನ್ನೇ ಕೊಡೋದಿಲ್ಲ ನೀವು ಯಾರಿಗೆ ಬೇಕಾದರೂ ದೂರು ನೀಡಿ ನಾವು ಎದರೋದಿಲ್ಲ ಎಂದು ಉದ್ಗಟತನದಿಂದ ಮಾತನಾಡಿತ್ತಾರೆ,ದೇಶಕ್ಕೆ ಸ್ವಾತಂತ್ರ್ಯ ಬಂದು 60 ವರ್ಷ ಕಳೆದರು ಹಾಲ್ಕುರಿಕೆಯಲ್ಲಿ ಮಾತ್ರ ಇನ್ನೂ ಸ್ವತಂತ್ರ್ಯ ಪೂರ್ವದ ವ್ಯವಸ್ಥೆಯೇ ಇದೆ,ಇಲ್ಲಿ ನಡೆಯುತ್ತಿರುವ ಅವ್ಯವಹಾರ ಅನ್ಯಾಯದ ವಿರುದ್ದ ಸರ್ಕಾರ ಸೂಕ್ತ ಕ್ರಮಕೈಗೊಳ್ಳ ಬೇಕಿದೆ ಎಂದು ತಿಳಿಸಿದರು
ಪತ್ರಿಕಾ ಘೋಷ್ಠಿಯಲ್ಲಿ ಮುಖಂಡರಾದ ಆನಂದ್, ರವಿ,ಕಾಂತರಾಜು,ಚೇತನ್ ದಿನೇಶ್,ಮುಂತ್ತಾದವರು ಉಪಸ್ಥಿತರಿದರು

ವರದಿ :ಮಂಜುನಾಥ್ ಹಾಲ್ಕುರಿಕೆ

error: Content is protected !!