Month: January 2025

ತಿಪಟೂರು ನಗರಕ್ಕೆ ನೀರುಪೂರೈಸುವ ಈಚನೂರು ಕೆರೆಗೆ ಕಲೂಷಿತ ನೀರು ಸೇರಿರುವ ಪರಿಣಾಮ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಿದೆ, ನಗರಕ್ಕೆ ಕುಡಿಯುವ ನೀರು ಪೂರೈಕೆ ಬಗ್ಗೆ ನಗರಸಭೆ ಸದಸ್ಯ ಜೊತೆ ಚರ್ಚಿಸಲು ನಗರಸಭೆ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ವಿಶೇಷ ಸಾಮಾನ್ಯ ಸಭೆ ಕರೆಯಲಾಗಿತ್ತು, ಆದರೆ ವಿರೋದ ಪಕ್ಷದ ಸದಸ್ಯರು ಸಭೆಯಲ್ಲಿ ಗದ್ದಲ ಉಂಟುಮಾಡಿದ ಕಾರಣ,ಸಭೆಯಲ್ಲಿ ಸೂಕ್ತವಾಗಿ ಚರ್ಚೆ ಮಾಡಲು ಸಾಧ್ಯವಾಗಿಲ್ಲ,ಸಧ್ಯಕ್ಕೆ ನಗರದಲ್ಲಿ ನೀರಿನ ಅಭಾವ ಆಗದಂತೆ ಸೂಚನೆ ನೀಡಿದೇನೆ ಎಂದರು

ನಗರದ ನಗರಸಭೆ ಸಭಾಂಗಣದಲ್ಲಿ ಆಯೋಜಿಸಿದ ಪತ್ರಿಕಾ ಘೋಷ್ಟಿಯಲ್ಲಿ ಮಾತನಾಡಿದ ಶಾಸಕ ಕೆ.ಷಡಕ್ಷರಿ ಯವರು

ತಿಪಟೂರು ನಗರಕ್ಕೆ ಕುಡಿಯುವ ನೀರು ಪೂರೈಸುತ್ತಿದ್ದ ಈಚನೂರು ಕೆರೆಯಲ್ಲಿ ತಾಲ್ಲೋಕಿನಲ್ಲಿ ಸುರಿದ ಭಾರೀ ಮಳೆಯಿಂದ ಮಳೆನೀರಿನೊಂದಿಗೆ ಯುಜಿಡಿ ನೀರು ಸೇರಿ,ಕೆರೆನೀರು ಕಲೂಷಿತವಾಗಿದೆ,ತಿಪಟೂರು ನಗರದಲ್ಲಿ ಜನಸಂಖ್ಯೆ ದಿನೆದಿನೆ ಜಾಸ್ತಿಯಾಗುತ್ತಿದ್ದು,ನಗರ ಬೆಳೆಯುತ್ತಿರುವ ಕಾರಣ ಹೆಚ್ಚು ನೀರಿನ ಅಗತ್ಯವಿದ್ದು,ಈಚನೂರು ಕೆರೆ ನೀರು ಶೇಖರಣ ಸಾಮರ್ಥ್ಯ ಕಡಿಮೆ ಇದ್ದು, ಮುಂದಿನ ದಿನಗಳಲ್ಲಿ ನೀರಿನ ಅಭಾವ ಎದುರಾಗಲಿದೆ.ಎನ್ನುವುದನ್ನ ಅರಿತು, ತಾಲ್ಲೋಕಿಗೆ ನೈಸರ್ಗಿಕವಾಗಿ ನೀರು ಹರಿಯುವ ನೊಣವಿನಕೆರೆ ಕೆರೆಯಿಂದ ನೀರು ತರುವ ಯೋಜನೆ ರೂಪಿಸಲಾಗಿತ್ತು,ಅಚ್ಚುಕಟ್ಟು ಪ್ರದೇಶದ ರೈತರಿಗೆ ತೊಂದರೆಯಾಗದಂತೆ ಹೆಚ್ಚುವರಿ ಹಂಚಿಕೆ ಮಾಡಲಾಗಿತ್ತು,ಆದರೆ ನೊಣವಿನಕೆರೆ ಭಾಗದ ರೈತರು ಹಾಗೂ ಅಚ್ಚುಕಟ್ಟುದಾರರಿಗೆ ಸುಳ್ಳುವದಂತಿ ಹಬ್ಬಿದ ಕಾರಣ, ಮಠಾಧೀಶರು ಸೇರಿದಂತೆ ಈ ಭಾಗದ ಕೆಲ ನಾಯಕರು,ಯೋಜನೆ ವಿರುದ್ದ ಹೋರಾಟನಡೆಸಿದರು,ನ್ಯಾಯಾಲಯದಲ್ಲಿ ಮೊಕದ್ದಮೆ ಕೂಡ ದಾಖಲು ಸಹ ಮಾಡಲಾಗಿತ್ತು.ಆದರೆ ಸುಪ್ರೀಂಕೋರ್ಟ್ ನಿರ್ದೇಶನದಂತೆ ಕುಡಿಯುವ ನೀರಿಗೆ ತೊಂದರೆ ಮಾಡುವಂತ್ತಿಲ್ಲ,ನೊಣವಿನಕೆರೆ ಅಚ್ಚುಕಟ್ಟುದಾರರಿಗೆ ತೊಂದರೆಯಾಗದಂತೆ ನೀರು ನಿಗದಿ ಮಾಡಲಾಗಿದೆ ಎಂದು ನ್ಯಾಯಾದೀಶರು ತಿಳಿಸಿದ ಪರಿಣಾಮ ನ್ಯಾಯಾಲಯದಲ್ಲಿ ಇದ್ದ ಪ್ರಕರಣ ವಾಪಾಸ್ ಪಡೆಯಲಾಗಿದ್ದು,ನ್ಯಾಯಾಲಯದ ಪ್ರಕರಣ ಸಹ ವಜಾವಾಗಿದೆ,ಆದರಿಂದ ಜಿಲ್ಲಾಡಳಿತ .ನೀರಾವರಿ ಇಲಾಖೆ ಮುಖ್ಯ ಇಂಜಿನಿಯರ್ ಜನವರಿ 15ರ ನಂತರ ಸೂಕ್ತ ಕ್ರಮವಹಿಸಲು ಚರ್ಚೆ ನಡೆಸಿದ್ದೇನೆ ನಗರದ ಜನರಿಗೆ ತೊಂದರೆಯಾಗದಂತೆ ಕ್ರಮವಹಿಸಲು ಸೂಚಿಸಿದ್ದೇನೆ ಎಂದರು

ವರದಿ: ಮಂಜುನಾಥ್ ಹಾಲ್ಕುರಿಕೆ

ತುರುವೇಕೆರೆ: ತಾಲ್ಲೂಕಿನಾದ್ಯಂತ ವೆಂಕಟೇಶ್ವರ ಮತ್ತು ಶ್ರೀನಿವಾಸ ದೇವಾಲಯಗಳಲ್ಲಿ ವಿಶೇಷ ಪೂಜಾ ಕೈಂಕರ್ಯ ಶುಕ್ರವಾರ ಜರುಗಿದವು.ತಾಲ್ಲೂಕಿನ ದಂಡಿನಶಿವರ ಹೋಬಳಿ ಸಂಪಿಗೆ ಗ್ರಾಮದ ಎರಡನೇ ತಿರುಪತಿ ಎಂದೇ ಖ್ಯಾತರಾಗಿರುವ ಶ್ರೀನಿವಾಸ, ದೇವಾಲಯದಲ್ಲಿ ಭಕ್ತರು ವೈಕುಂಠ ಏಕಾದಶಿಯನ್ನು ಅದ್ದೂರಿಯಾಗಿ ಆಚರಿಸಿದರು.ಸಂಪಿಗೆಯ ಶ್ರೀನಿವಾಸ ದೇವಾಲಯದಲ್ಲಿ ಮುಂಜಾನೆ ಸಾಲು ಸಾಲಾಗಿ ಅಪಾರ ಸಂಖ್ಯೆಯ ಭಕ್ತಾಧಿಗಳು ದೇವರ ದರ್ಶನಕ್ಕೆ ಕಾದು ನಿಂತಿದ್ದರು. ಭಕ್ತರಿಗೆ ಬೃಹತ್ ಶಾಮಿಯಾನ ಹಾಕಿ ಫಲಹಾರದ ವ್ಯವಸ್ಥೆಯನ್ನು ಮಾಡಲಾಗಿತ್ತು. ಗೋವುಗಳನ್ನು ಪ್ರವೇಶ ಮಾಡಿಸುವ ಮೂಲಕ ವೈಕುಂಠ ದ್ವಾರ ತೆರೆಯಲಾಯಿತು.ರಾತ್ರಿ ವೇಳೆಗೆ 50 ಸಾವಿರಕ್ಕೂ ಹೆಚ್ಚು ಭಕ್ತರು ಸಂಪಿಗೆ ಶ್ರೀನಿವಾಸ ದೇವಾಲಯಕ್ಕೆ ಆಗಮಿಸಿದ್ದರು ಭಕ್ತರಿಗೆ ಲಘು ಉಪಹಾರ ವ್ಯವಸ್ಥೆ ಸಹ ಮಾಡಲಾಗಿತ್ತು.

ಮಾಜಿ ಜಿಲ್ಲಾಪಂಚಾಯ್ತಿ ಸದಸ್ಯ ಹಾಗೂ ಶಾಸಕ ಕೆ.ಷಡಕ್ಷರಿ ಸೋದರ ದಿವಂಗತ ಕೆ.ರಾಜಶೇಖರ್,(ರಾಜು ಬೈಯಾ) ರವರ 14ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮವನ್ನ ತಿಪಟೂರು ನಗರದ ಎಸ್,ಎನ್ ,ಎಸ್ ಕನ್ವೆಷನ್ ಹಾಲ್ ನಲ್ಲಿ ಕೆ.ರಾಜಶೇಖರ್ ಅಭಿಮಾನಿ ಬಳಗದಿಂದ ಬೃಹತ್ ಉಚಿತ ಆರೋಗ್ಯ ಶಿಭಿರ ಹಾಗೂ ರಕ್ತದಾನ ಶಿಬಿರ ಹಾಗೂ ಪೌರಕಾರ್ಮಿಕರಿಗೆ ಜರ್ಕಿನ್ ವಿತರಣೆ ಮಾಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.

ತಿಪಟೂರು ಶಾಸಕ ಕೆ.ಷಡಕ್ಷರಿ ಯವರು ದಿವಂಗತ ಕೆ.ರಾಜಶೇಖರ್ ಹಾಗೂ ಕೆ.ಜಯಣ್ಣ ನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಪುಣ್ಯಸ್ಮರಣೆ ಹಾಗೂ ಉಚಿತ ಆರೋಗ್ಯ ಶಿಭಿರಕ್ಕೆ ಚಾಲನೆ ನೀಡಿದರು
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕ ಕೆ.ಷಡಕ್ಷರಿ ನನ್ನ ಸೋದರ ಕೆ.ರಾಜಶೇಖರ್ ಧಣಿವರಿಯದ ಜನ ನಾಯಕ, ತಮ್ಮ ಜೀವಿತಾವದಿಯುದ್ದಕ್ಕೂ ಜನಸೇವೆಯಲ್ಲಿ ಇದ್ದವರು,ದೀನ ದಲಿತರು, ಕಾರ್ಮಿಕರು,ಬಡವರ ಜನಸೇವೆ ಮೂಲಕ ಜನಮನಗೆದ್ದ ಜನ ಸೇವಕ, ಅವರ ನಿಧನ ನಮ್ಮ ಕುಟಂಬ ಅನುಯಾಯಿಗಳಿಗೆ ಅತೀವ ನೋವುಂಟು ಮಾಡಿದೆ.ಸದಾ ಜನರ ಕಷ್ಟ ಸುಖಗಳಿಗೆ ಸ್ಪಂದಿಸುತ್ತಿದ್ದ ರಾಜಶೇಖರ್ ,ಕಾರ್ಯವೈಖರಿ ನೋಡಿ ನಾನು ಮತ್ತು ನನ್ನ ತಂದೆ ಇಬ್ಬರು ಬೈಯುತ್ತಿದೆವು, ನಿನ್ನ ವಯುಕ್ತಿಕ ಕೆಲಸಗಳಿಗೆ ಆಧ್ಯತೆನೀಡುವಂತೆ ಹೇಳುತ್ತಿದ್ದೆವು, ಆದರೇ ದೇವರ ಇಚ್ಚೆಯಂತೆ ಅವರ ನಿಧನದ ದಿನ ಜನರ ಅರ್ಶೂತರ್ಪಣಾ ನೋಡಿ ಅವರ ಸೇವೆಯ ಮಹತ್ವ ಅರಿವಾಯಿತು,ಅವರ ಸೇವಾಕಾರ್ಯ ಮುಂದುವರೆಸಿ ,ರಾಜುಬೈಯ್ ಆತ್ಮಕ್ಕೆ ಶಾಂತಿಕೋರಬೇಕು ಎನ್ನುವ ದೃಷ್ಠಿಯಿಂದ ರಾಜುಬೈಯ್ ಅಭಿಮಾನಿಗಳು,ಪ್ರತಿವರ್ಷ ಪುಣ್ಯಸ್ಮರಣೆಯಂದು, ಆರೋಗ್ಯಶಿಭಿರ ರಕ್ತದಾನ ಶಿಬಿರ ಹಮ್ಮಿಕೊಳ್ಳುತ್ತಾ ಬಂದಿದ್ದೇವೆ ಎಂದು ತಿಳಿಸಿದರು

ಕಾರ್ಯಕ್ರಮದಲ್ಲಿ ಉಪಸ್ಥಿತರಿದ ಖ್ಯಾತವೈದ್ಯರಾದ ಡಾ//ಶ್ರೀಧರ್ ಮಾತನಾಡಿ ಕೆ.ರಾಜಶೇಖರ್ ಜನಸೇವೆಗೆ ತಮ್ಮ ಜೀವನ ಮುಡುಪಾಗಿಟ್ಟ ನಾಯಕ,ಹೆಚ್ಚು ಜನಸೇವೆ ಮಾಡಬೇಕು ಎನ್ನುವ ದೃಷ್ಠಿಯಿಂದ ಜಿಲ್ಲಾಪಂಚಾಯ್ತಿ ಚುನಾವಣೆಗೆ ಸ್ವರ್ಥಿಸಿ ಗೆದ್ದರು,ಆದರೇ ಅಧಿಕಾರ ಸ್ವೀಕರಿಸಿ ಜನರ ಸೇವೆ ಮಾಡುವ ಮೊದಲೇ ವಿಧಿಯಾಟದಂತೆ ದೈವಾಧೀನರಾದರು.ಅವರ ಸ್ಮರಣಾರ್ಥ ಉಚಿತ ಆರೋಗ್ಯ ತಪಾಸಣಾ ಶಿಭಿರ ಆಯೋಜನೆ ಮಾಡಲಾಗಿದೆ ಎಂದು ತಿಳಿಸಿದರು

ಕಾರ್ಯಕ್ರಮದಲ್ಲಿ ಖ್ಯಾತವೈದ್ಯರಾದ ಡಾ//ಶ್ರೀಧರ್.ಡಾ//ವಿವೇಚನ್.ಮುಖಂಡರಾದ ಎಂ.ಆರ್ ಸಂಗಮೇಶ್.ತರಕಾರಿ ಪ್ರಕಾಶ್.ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಎಂ.ಎನ್ ಕಾಂತರಾಜು,ಬಜಗೂರು ಮಂಜುನಾಥ್.ಕೊಪ್ಪ ಶಾಂತಪ್ಪ ಗ್ರಾ.ಪಂ ಅಧ್ಯಕ್ಷ ಬಿ.ಬಿ ಬಸವರಾಜು ಧರಣೇಶ್ ಮಾದಿಹಳ್ಳಿ ರೇಣು ನಾಗರಾಜು ತರಕಾರಿ ಕಿಟ್ಟಿ ಕಿಟ್ಟಿಮಾಸ್ಟರ್ . ಶಿವರ ನಾಗರಾಜು.ಮುಂತ್ತಾದವರು ಉಪಸ್ಥಿತರಿದರು

ವರದಿ : ಮಂಜುನಾಥ್ ಹಾಲ್ಕುರಿಕೆ

ತಿಪಟೂರು ನಗರದ ಕೋಟೆ ಶ್ರೀ ವೆಂಕಟೇಶ್ವರಸ್ವಾಮಿ ದೇವಾಲಯದಲ್ಲಿ ವೈಕುಂಠ ಏಕಾದಶಿ ಅಂಗವಾಗಿ ಶ್ರೀ ವೆಂಕಟೇಶ್ವರ ಸ್ವಾಮಿ,ಶ್ರೀಮಹಾಲಕ್ಷ್ಮಿಹಾಗೂ ಪದ್ಮಾವತಿ ಅಮ್ಮನವರಿಗೆ ವಿಶೇಷ ಅಲಂಕಾರ ಹಾಗೂ ಪೂಜಾಕೈಂಕರ್ಯ ನೆರವೇರಿಸಲಾಯಿತು. ವೈಕುಂಠ ಏಕಾದಶಿ ಅಂಗವಾಗಿ ಶ್ರೀವೆಂಕಟೇಶ್ವರಸ್ವಾಮಿಗೆ ರಜತ ಕಿರೀಟಧಾರಣೆ, ರಜತ ತ್ರಿಪುಂಡ್ರ ನಾಮಧಾರಣೆ ,ಸ್ವರ್ಣಪಾಧುಕೆಧಾರಣೆ ವಿಶೇಷ ಅಲಂಕಾರ ನೆರವೇರಿಸಲಾಯಿತು
ಏಕಾದಶಿಯಂದು ಉತ್ತರವೈಕುಂಠದ್ವಾರದ ವಿಶೇಷ ದರ್ಶನ ಹಾಗೂ ಪ್ರವೇಶಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು ದ್ವಾದಶಿಯಂದು ಶ್ರೀ ವೆಂಕಟೇಶ್ವರ ದೇವಾಲಯದಲ್ಲಿ ಹೋಮ ಹವನ ವಿಶೇಷ ಪೂಜಾಕೈಂಕರ್ಯಗಳನ್ನ ನೆರವೇರಿಸಲಾಗುತ್ತಿದೆ,ಶ್ರೀಕ್ಷೇತ್ರಕ್ಕೆ ಭೇಟಿ ನೀಡಿದ ಭಕ್ತ ಸಮೂಹ ಗೋವಿಂದ ನಾಮಸ್ಮರಣೆಗೊಂದಿಗೆ ಪೂಜೆಸಲ್ಲಿಸಿ ಕೃತಾರ್ಥರಾದರು.

ಶ್ರೀಕ್ಷೇತ್ರ ಭಕ್ತರು ಹಾಗೂ ದೇವಾಲಯ ಸಮಿತಿಯ ಅಶೋಕ್ ಮಾತನಾಡಿ ಭಕ್ತಪರಾದೀನ ಶ್ರೀವೆಂಕಟೇಶ್ವರ ಸ್ವಾಮಿಯ ಭಕ್ತರ ಅಭಿಷ್ಠೆಗೋಸ್ಕರ 33ವರ್ಷಗಳ ಹಿಂದೆ ಕುಲಬಂಧುಗಳು ಸೇರಿ ಸಿಂಗ್ರಿ ನಂಜಪ್ಪ ನವರ ಶ್ರೀ ಮಲ್ಲಿಕಾರ್ಜುನಸ್ವಾಮಿ ದೇವಾಲಯ ಆವರಣದಲ್ಲಿಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯ ಸ್ಥಾಪನೆ ಮಾಡಿದ್ದು,ಸರ್ವಜನರ ಅಭಿಲಾಷೆಯಂತೆ ಪೂಜಾಕೈಂಕರ್ಯಗಳು ನಡೆಯುತ್ತಿದ್ದು,ಶ್ರೀಕ್ಷೇತ್ರ ತಿಪಟೂರು ಜನರ ಆರಾಧ್ಯದೈವವಾಗಿ ಭಕ್ತರ ಇಷ್ಟಾರ್ಥ ನೆರವೇರಿಸುತ್ತಾ ಬಂದಿದೆ.33 ವರ್ಷಗಳಿಂದ ವೈಕುಂಠ ಏಕಾದಶಿ ಆಚರಣೆ ಮಾಡಲಾಗುತ್ತಿದ್ದು, ಪ್ರತಿವರ್ಷದಂತೆ ಈ ವರ್ಷವೂ ಸಹ ಶ್ರೀಸ್ವಾಮಿಯವರಿಗೆ ವಿಶೇಷ ಅಲಂಕಾರ ಪೂಜೆ ಹಾಗೂ ಹವನಗಳನ್ನ ಏರ್ಪಡಿಸಿದ್ದು, ಉತ್ತರ ವೈಕುಂಠ ದರ್ಶನ ಹಾಗೂ ಪ್ರವೇಶಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು

ವರದಿ :ಮಂಜುನಾಥ್ ಹಾಲ್ಕುರಿಕೆ

Your Attractive Heading

ತಿಪಟೂರು ತಾಲ್ಲೋಕಿನ ಕಸಬಾ ಹೋಬಳಿ ಶಿವಮೊಗ್ಗ ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 206ರ ಮಾದಿಹಳ್ಳಿ ಕಬ್ಬಿಣದ ಸೇತುವೆ ಬಳಿ ಬೈಕ್ ಗಳ ನಡುವೆ ಭೀಕರ ಅಪಘಾತ ಉಂಟಾಗಿದ್ದು ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ.

ರಾತ್ರಿ 8.ಗಂಟೆ ಸಮಯದಲ್ಲಿ kA 44 J8554ಹಾಗೂ KK44 EB 3486 ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೈಕ್ ಸವಾರರಿಗೆ ತೀವ್ರಗಾಯಗಳಾಗಿದ್ದು. ಚಿಕಿತ್ಸೆಗಾಗಿ ತಿಪಟೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.ಗಾಯಳುಗಳ ವಿಳಾಸ ಹೆಸರು ಪತ್ತೆಯಾಗಿರುವುದಿಲ್ಲ.ಸ್ಥಳಕ್ಕೆ ತಿಪಟೂರು ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು,ಗಾಯಾಳುಗಳನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ.

ವರದಿ:ಮಂಜುನಾಥ್ ಹಾಲ್ಕುರಿಕೆ

ಮಾಜಿ ಜಿಲ್ಲಾಪಂಚಾಯ್ತಿ ಸದಸ್ಯ ಹಾಗೂ ಶಾಸಕ ಕೆ.ಷಡಕ್ಷರಿ ಸೋದರ ದಿವಂಗತ ಕೆ.ರಾಜಶೇಖರ್,(ರಾಜು ಬೈಯಾ) ರವರ 14ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ದಿನಾಂಕ 11.01.2025 ರಂದು ಶನಿವಾರ ತಿಪಟೂರು ನಗರದ ಈಡೇನಹಳ್ಳಿ ಗೇಟ್ ಬಳಿ ಇರುವ ಎಸ್ಎನ್ ಎಸ್ ಕನ್ವೆಷನ್ ಹಾಲ್ ನಲ್ಲಿ ಕೆ.ರಾಜಶೇಖರ್ ಅಭಿಮಾನಿ ಬಳಗದಿಂದ ಬೃಹತ್ ಉಚಿತ ಆರೋಗ್ಯ ಶಿಭಿರ ಹಾಗೂ ರಕ್ತದಾನ ಶಿಬಿರ ಆಯೋಜನೆ ಮಾಡಲಾಗಿದೆ.

ತಿಪಟೂರು ನಗರದ ವೈಭವ್ ಕಚೇರಿಯಲ್ಲಿ ಆಯೋಜಿಸಿದ ಪತ್ರಿಕಾ ಘೋಷ್ಠಿಯಲ್ಲಿ ಮಾತನಾಡಿದ ನಗರಸಭಾ ಸದಸ್ಯ ತರಕಾರಿ ಪ್ರಕಾಶ್ , ಮಾಜಿ ಜಿಲ್ಲಾಪಂಚಾಯ್ತಿ ಸದಸ್ಯ ಕೆ.ರಾಜಶೇಖರ್ ಧಣಿವರಿಯದ ಜನ ನಾಯಕ, ತಮ್ಮ ಜೀವಿತಾವದಿಯುದ್ದಕ್ಕೂ ಜನಸೇವೆಯಲ್ಲಿ ಇದ್ದವರು, ಜನಸೇವೆ ಮೂಲಕ ಜನಮನಗೆದ್ದ ರಾಜುಬೈಯ್ ನಿಧನ ಅವರ ಅನುಯಾಯಿಗಳಿಗೆ ಅತೀವ ನೋವುಂಟು ಮಾಡಿದ್ದು, ಅವರ ಸೇವಾಕಾರ್ಯ ಮುಂದುವರೆಸಿ ,ರಾಜುಬೈಯ್ ಆತ್ಮಕ್ಕೆ ಶಾಂತಿಕೋರಬೇಕು ಎನ್ನುವ ದೃಷ್ಠಿಯಿಂದ ರಾಜುಬೈಯ್ ಅಭಿಮಾನಿಗಳು,ಪ್ರತಿವರ್ಷ ಪುಣ್ಯಸ್ಮರಣೆಯಂದು, ಆರೋಗ್ಯಶಿಭಿರ ರಕ್ತದಾನ ಶಿಬಿರ ಹಮ್ಮಿಕೊಳ್ಳುತ್ತಾ ಬಂದಿದ್ದು.14ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ದಿನಾಂಕ 11.01.2025ರಂದು ಶನಿವಾರ ತಿಪಟೂರು ನಗರದ ಎಸ್.ಎನ್.ಎಸ್ ಕನ್ವೆಷನ್ ಹಾಲ್ ನಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನೇತ್ರತಪಾಸಣೆ,ಮತ್ತು ಶ್ರದ್ದಾ ಐಕೇರ್ ಸಹಯೋಗದಲ್ಲಿ ಶಸ್ತ್ರ ಚಿಕಿತ್ಸಾ ಶಿಭಿರ ಆಯೋಜಿಸಿದ್ದು, ನಾಗರೀಕರು ಶಿಬಿರದ ಸೌಲಭ್ಯ ಪಡೆಯಬೇಕು ಎಂದು ತಿಳಿಸಿದರು

ಕಾಂಗ್ರೇಸ್ ಮುಖಂಡ ಲೋಕನಾಥ್ ಸಿಂಗ್ ಮಾತನಾಡಿ ರಾಜುಬೈಯ್ ಪುಣ್ಯಸ್ಮರಣೆ ಅಂಗವಾಗಿ ತಿಪಟೂರಿನ ಶ್ರೀ ರಂಗ ಆಸ್ಪತ್ರೆ, ಕುಮಾರ್ ಆಸ್ಪತ್ರೆ ವೈಭವಿ ಮಕ್ಕಳ ಆಸ್ಪತ್ರೆ, ತಿಪಟೂರು ಹೆಲ್ತ್ ಸೆಂಟರ್ ಸೇರಿದಂತೆ ಅನುಭವಿ ತಜ್ಞ ವೈದ್ಯರ ತಂಡದೊಂದಿಗೆ ಆರೋಗ್ಯ ಶಿಬಿರ ನಡೆಸಲಾಗುತ್ತಿದೆ.ಉಚಿತ ಹೃದಯ ರೋಗ ತಪಾಸಣೆ,ಅಪೆಂಡಿಕ್ಸ್ ಪರೀಕ್ಷೆ,ಕೀಲು ಮತ್ತು ಮೂಳೆ ಪರೀಕ್ಷೆ,ಕಿಡ್ನಿಕಲ್ಲು ಹಾಗೂ ಪ್ರೊಸೈಡ್ ಪರೀಕ್ಷೆ.ಸ್ತ್ರೀ ರೋಗ ಹಾಗೂ ಗರ್ಭಕೋಶ ಸಂಬಂದಿಸಿದ ಪರೀಕ್ಷೆಗಳು ಸೇರಿದಂತೆ ತಪಾಸಣೆ ಶಿಬಿರ ನಡೆಸಲಾಗುತ್ತದೆ ಎಂದು ತಿಳಿಸಿದರು
ಪತ್ರಿಕಾ ಘೋಷ್ಠಿಯಲ್ಲಿ ಮುಖಂಡರಾದ ಧರಣೇಶ್, ಅಣ್ಣಯ್ಯ,ಮಾದಿಹಳ್ಳಿ ರೇಣು. ಎಂ.ಎಸ್ ಯೋಗೆಶ್,ವಗ್ಗನಘಟ್ಟ ಯೋಗಾನಂದಸ್ವಾಮಿ,ಎಂ.ಸಿ ನಟರಾಜ್, ಶಂಕರಮೂರ್ತಿ,ಕುಮಾರ್.ಮುಂತ್ತಾದವರು ಉಪಸ್ಥಿತರಿದರು

ವರದಿ:ಮಂಜುನಾಥ್ ಹಾಲ್ಕುರಿಕೆ

ತುಮಕೂರು ಜಿಲ್ಲೆ ತಿಪಟೂರು ನಗರಕ್ಕೆ ಕುಡಿಯುವ ನೀರು ನಿಲ್ಲಿಸಿದ್ದು, ನಗರದ ಜನ ಕುಡಿಯುವ ನೀರಿಗೂ ತತ್ಪರ ಪಡುವಂತ್ತಾಗಿದೆ, ಸರ್ಕಾರ ಹಾಗೂ ನಗರಸಭೆಗೆ ಅನೇಕ ಭಾರೀ ಮನವಿ ಮಾಡಲಾಗಿದೆ ಮಧ್ಯಮಗಳಲ್ಲೂ ವರದಿಗಳು ಬಂದಿವೆ, ನಗರ ಆಡಳಿತ ಹಾಗೂ ಪೌರಾಯುಕ್ತರು, ನಗರದ ಜನರಿಗೆ ಕುಡಿಯುವ ನೀರು ನೀಡದೆ, ನಗರದ ಜನಕ್ಕೆ ತೊಂದರೆ ಮಾಡಲಾಗುತ್ತಿದೆ ಕೂಡಲೇ ನಗರಸಭೆ ಆಡಳಿತ ಉತ್ತರ ನೀಡಬೇಕು ಎಂದು ಒತ್ತಾಯಿಸಿ ನಗರಸಭೆ ವಿರೋಧ ಪಕ್ಷದ ನಾಯಕ ರಾಮ್ ಮೋಹನ್ ನೇತೃತ್ವದಲ್ಲಿ ನಗರಸಭೆ ವಿಶೇಷ ಸಾಮಾನ್ಯ ಸಭೆ ಬಹಿಷ್ಕರಿಸಿ ನಗರಸಭೆ ಮುಂಭಾಗ ಧರಣಿ ಸತ್ಯಾಗ್ರಹ ನಡೆಸಲಾಯಿತು.

ತಿಪಟೂರು ನಗರಸಭೆ ಅಧ್ಯಕ್ಷರಾದ ಶ್ರೀಮತಿ ಯಮುನಾ ಧರಣೇಶ್, ಅಧ್ಯಕ್ಷತೆಯಲ್ಲಿ ಶಾಸಕರಾದ ಕೆ.ಷಡಕ್ಷರಿಯವರ ಉಪಸ್ಥಿತಿಯಲ್ಲಿ ವಿಶೇಷ ಸಾಮಾನ್ಯ ಸಭೆ ನಡೆಸಲಾಯಿತು, ಸಭೆ ಆರಂಭವಾಗುತ್ತಿದ್ದಂತೆ, ಬಿಜೆಪಿ ಸದಸ್ಯರು ತಿಪಟೂರಿನಲ್ಲಿ ಕುಡಿಯುವ ನೀರಿಗೆ ಆಹಾಕಾರವಿದೆ, ತಿಪಟೂರು ನಗರಕ್ಕೆ ಕುಡಿಯುವ ನೀರು ಪೂರೈಸುವ ಈಚನೂರು ನಗರಕ್ಕೆ ನೀರುಪೂರೈಸುವ ನೀರು ನಿಲ್ಲಿಸಲಾಗಿದೆ,ಈಚನೂರು ಕೆರೆ ನೀರಿಗೆ ಯುಜಿಡಿ ಕೊಳಚೆ ನೀರು ಸೇರಿ, ಕಲುಷಿತವಾಗಿದ್ದು.ಕುಡಿಯಲು ಯೋಗ್ಯವಾಗಿಲ್ಲ ಎನ್ನಲಾಗಿದ್ದು.ನಗರಸಭೆ ಆಡಳಿತ ನಗರದ ಜನರಿಗೆ ಕುಡಿಯುವ ನೀರೊದಗಿಸಲು, ಪರ್ಯಾಯವಾಗಿ ಯಾವ ವ್ಯವಸ್ಥೆ ಮಾಡಿಕೊಳ್ಳಲಾಗಿದೆಯಾ ಎಂದು ಸಭೆಯಲ್ಲಿ ಬಿಜೆಪಿ ಸದಸ್ಯರು ಪ್ರಶ್ನೆ ಮಾಡಿದ್ದಾಗ ಅಡಳಿತ ಪಕ್ಷದ ಸದಸ್ಯರು ಹಾಗೂ ವಿರೋಧ ಪಕ್ಷದ ಸದಸ್ಯರು ನಡುವೆ ವಾಗ್ವಾದ ನಡೆಯಿತು, ಶಾಸಕ ಕೆ.ಷಡಕ್ಷರಿ ಮಾತನಾಡಿ ತಾಲ್ಲೋಕಿನಲ್ಲಿ ಹೆಚ್ಚು ಮಳೆಯಾದ ಕಾರಣ ಈಚನೂರು ಕೆರೆಗೆ ಮಳೆನೀರಿನೊಂದಿಗೆ ಯುಜಿಡಿ ನೀರು ಸೇರಿ, ಕಲುಷಿತವಾಗಿದೆ, ಈಚನೂರು ಕೆರೆ ನೀರನ್ನ ಲ್ಯಾಬ್ ಗೆ ಕಳುಹಿಸಲಾಗಿದ್ದು. ತಜ್ಞಾರ ವರದಿಯಂತೆ ಮುಂದಿನ ಕ್ರಮವಹಿಸುತ್ತೇವೆ. ನಗರದ ಜನರಿಗೆ ತೊಂದರೆಯಾಗದಂತೆ ನಗರಕ್ಕೆ ನೀರುಕೊಡಲು ಪರ್ಯಾಯ ಮಾರ್ಗಗಳನ್ನ ಯೋಚನೆ ಮಾಡಿ ಕ್ರಮಕೈಗೊಳ್ಳುಲಾಗುವುದು ಎಂದು ತಿಳಿಸಿದರು, ಶಾಸಕರ ಉತ್ತರದಿಂದ ತೃಪ್ತರಾಗದ ಬಿಜೆಪಿ ಸದಸ್ಯರು ಸಭೆ ಬಹಿಷ್ಕಾರಿಸಿ ನಗರಸಭೆ ಮುಂಭಾಗ ಧರಣಿ ನಡೆಸಿ ನಗರಸಭೆ ವಿರುದ್ದ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಧರಣಿ ನಿರತ ಸದಸ್ಯರ ಬಳಿ ಆಗಮಿಸಿದ ನಗರಸಭೆ ಅಧ್ಯಕ್ಷೆ ಶ್ರೀಮತಿ ಯಮುನಾ ಧರಣೇಶ್ ಮಾತನಾಡಿ ತಿಪಟೂರು ನಗರಕ್ಕೆ ಕುಡಿಯುವ ನೀರು ಪೂರೈಕೆ ಮಾಡುವುದು ನಮ್ಮ ಮೊದಲ ಆಧ್ಯತೆ, ಈಚನೂರು ಕೆರೆ ನೀರು ಕಲುಷಿತವಾಗಿದೆ,ನಗರದ ಜನರಿಗೆ ತೊಂದರೆಯಾಗದಂತೆ ಪರ್ಯಾಯ ಮೂಲಗಳಿಂದ ನೀರುಪೂರೈಸಲು, ಎಲ್ಲಾ ಸದಸ್ಯರು ಸಹಕಾರ ನೀಡಿ. ನಿಮ್ಮ ವಾರ್ಡ್ ಸಮಸ್ಯೆಗಳನ್ನ ಮುಕ್ತವಾಗಿ ಚರ್ಚೆ ಮಾಡಿ, ಎಲ್ಲರ ಸಮಸ್ಯೆಗಳಿಗೂ ಸೂಕ್ತವಾಗಿ ಸ್ಪಂದಿಸುತ್ತೇವೆ ಎಂದರು

ನಗರಸಭೆ ಬಿಜೆಪಿ ವಿರೋಧ ಪಕ್ಷದ ನಾಯಕ ಮಾಜಿ ನಗರಸಭೆ ಅಧ್ಯಕ್ಷ ರಾಮ್ ಮೋಹನ್ ಮಾತನಾಡಿ ಬೇಸಿಗೆ ಆರಂಭವಾಗುವ ಮೊದಲೆಡ ತಿಪಟೂರಿನಲ್ಲಿ ಕುಡಿಯುವ ನೀರಿಗೆ ಆಹಾಕಾರ ಪಟುವಂತ್ತಾಗಿದೆ,ನಗರದ ಜನ ಟ್ಯಾಂಕರ್ ಮೊರೆಹೋಗುತ್ತಿದ್ದಾರೆ.ನಗರದ ಜನರಿಗೆ ಕುಡಿಯುವ ನೀರು ಪೂರೈಸಬೇಕ್ಕಾದ ನಗರ ಆಡಳಿತ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದು ಸದಸ್ಯರ ವಾರ್ಡ್ ಗಳ ಸಮಸ್ಯೆಗಳಿಗೆ ಪೌರಾಯುಕ್ತರು ಸ್ಪಂದಿಸುತ್ತಿಲ್ಲ.ಸಮಸ್ಯೆಯ ಆರಂಭದಲ್ಲೆ ನಗರದ ಜನರಿಗೆ ಕುಡಿಯುವ ನೀರು ಪೂರೈಕೆ ಮಾಡಲು, ಯಾವುದೇ ಮುಂದಾಲೋಚನೆ ಮಾಡದೆನಿರ್ಲಕ್ಷ್ಯ ವಹಿಸಲಾಗಿದೆ.ನಗರದ ಜನರಿಗೆ ಮುಂದಿನ ನೀರುಪೂರೈಸಲು ,ಯಾವಕ್ರಮಕೈಗೊಳ್ಳಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು

ಸಭೆಯಲ್ಲಿ ಪೌರಾಯುಕ್ತ ವಿಶವೇಶ್ವರಯ್ಯ ಬದರಗಡೆ ಸಭೆಯಲ್ಲಿ ಉಪಸ್ಥಿತರಿದರು.
ಪ್ರತಿಭಟನೆಯಲ್ಲಿ ನಗರಸಭೆ ಸದಸ್ಯರಾದ ರಾಮ್ ಮೋಹನ್. ಸಂಗಮೇಶ್,ಪ್ರಸನ್ನ ಕುಮಾರ್.ಸಂಧ್ಯಾಕಿರಣ್,ಶ್ರೀನಿವಾಸ್.ಮಲ್ಲೇಶ್ ನಾಯ್ಕ,ಶಶಿಕಿರಣ್.ಲತಾ ಲೋಕೇಶ್.ಜಯಲಕ್ಷ್ಮಿ,ಓಹಿಲಾಗಂಗಾಧರ್ ಮುಂತ್ತಾದವರು ಉಪಸ್ಥಿತರಿದರು

ವರದಿ: ಮಂಜುನಾಥ್ ಹಾಲ್ಕುರಿಕೆ

ಈ ವರ್ಷದ ಆರಂಭದಲ್ಲಿ ಬಿಡುಗಡೆಗೊಂಡಿರುವ ಈ ಪುಸ್ತಕ ಓದುಗರ ವಲಯದಲ್ಲಿ ಹೊಸ ಅಲೆಯನ್ನು ಎಬ್ಬಿಸುತ್ತಿದೆ. ಏಕೆಂದರೆ ಈ ಪುಸ್ತಕದ ವಿಶೇಷತೆ
ಯೌವ್ವನದ ಹೊಳೆಯನ್ನು ದಾಟಿ ಬಂದಿರುವ ಇಂದಿನ ಪೋಷಕರಿಗೆ… ಇಂದು ಆ ಹೊಳೆಯಲ್ಲಿ ಈಜುತ್ತಿರುವ ನಾಳೆಯ ಪೋಷಕರಿಗೆ ಇಬ್ಬರಿಗೂ ಮುಕ್ತವಾಗಿ ಅವರವರ ಪ್ರಶ್ನೆಗಳು ಹಾಗೂ ಅವುಗಳಿಗೆ ಉತ್ತರಗಳನ್ನು ತೆರೆದಿಡುತ್ತದೆ. ‘ಕಡ್ಡಾಯವಾಗಿ ಪೋಷಕರಿಗೆ ಮಾತ್ರ!’ ಈ ಕೃತಿಯ ಶೀರ್ಷಿಕೆ ಕೇಳಿಯೇ, ಒಂದಷ್ಟು ಮಂದಿಗೆ ಇದೇನೋ ವಿಶೇಷವಾಗಿದೆ ಅನಿಸಿದರೆ ಮತ್ತೆ ಕೆಲವರಿಗೆ ಇದೆಂತಾ ಶಿರೋನಾಮ ಅಂತನಿಸಿರುತ್ತದೆ. ವಾಸ್ತವಕ್ಕೆ, ಇದು ಕಡ್ಡಾಯವಾಗಿ ಪ್ರತಿಯೊಬ್ಬರು ಓದಲೇಬೇಕಾದ ಪುಸ್ತಕವಾಗಿದೆ

ಈ ಪುಸ್ತಕದ ವಿಶೇಷತೆ ಏನು?

ಬೆಳೆದು ನಿಂತ ಮಕ್ಕಳ ಸ್ವಾತಂತ್ರ್ಯ Vs ಪೋಷಕರೆಂಬ ಅಡ್ಡಗೋಡೆಗಳ ಮಧ್ಯೆ ಪ್ರತಿಯೊಬ್ಬರ ಜೀವನವನ್ನು ಈ ಪುಸ್ತಕ ವಿಶ್ಲೇಷಿಸುತ್ತದೆ. ಮಕ್ಕಳು ಬೆಳದಂತೆ ಒಂದೆಡೆ ಆನಂದ ಇನ್ನೊಂದು ಕಡೆ ಪೋಷಕರಾಗಿ ನಿಮಗೊಂದು ಸಹಜ ಆತಂಕ. ನಿಮಗೆ ಅವರುಗಳ ಮೇಲೆ ಅಪಾರವಾದ ಪ್ರೀತಿ-ಪ್ರೇಮ, ಅನುರಾಗ, ಬಾಂಧವ್ಯ ಜೊತೆಗೆ ಅವರುಗಳಿಗಿಂತ, ಅವರುಗಳ ಜೀವನದ ಬಗ್ಗೆ ನಿಮ್ಮಲ್ಲಿ ಅನೇಕ ತರದ ಕನಸುಗಳಿವೆ. ಎಷ್ಟೇ ಆಗಲಿ ನೀವು ಅವರಿಗೆ ತಂದೆ- ತಾಯಿಗಳು!

ನಿಮಗಿರುವ ಭಯ, ಆತಂಕವೆಲ್ಲ ಈಗ ಅವರು ಹದಿಹರೆಯಕ್ಕೆ ಬಂದಿದ್ದಾರೆ, ಯೌವ್ವನದ ಹೊಳೆಯಲ್ಲಿ ಈಜಲೆಂದು ಧುಮುಕಿದ್ದಾರೆ. ‘ಅದ್ಹೇಗೆ ಈಜಿ, ಸುಲಭವಾಗಿ ಅದರಿಂದ ಹೊರಬರ್ತಾರೆ’ ಎಂಬ ಸಹಜವಾದ ಆತಂಕ ನಿಮ್ಮಗಳದು. ಯೌವ್ವನದ ಹೊಳೆಯಲ್ಲಿ ಪ್ರಾಯದ ಬದುಕು ಕೊಚ್ಚಿ ಹೋಗುವುದು ಅಂತ ಕಷ್ಟಕರವಾದ ಸಂಗತಿ ಏನಲ್ಲ. ವಾಸ್ತವಕ್ಕೆ, ನಿಜಕ್ಕೂ ಕಷ್ಟಕರವಾದದ್ದು ಪ್ರಾಯವನ್ನು ಕಾಪಾಡಿಕೊಂಡು ಪ್ರಬುದ್ಧರಾಗಿ ಬೆಳೆದು ಬದುಕನ್ನು ಕಟ್ಟಿಕೊಳ್ಳುವುದು. ಹದಿಹರೆಯವೆಂದರೆ ದಾರಿ ತಪ್ಪುವ ದಿನಗಳು. ನಿಮ್ಮಲ್ಲಿ ಕೂಡ ಅನೇಕ ಪೋಷಕರು ಆ ವಯಸ್ಸಿನಲ್ಲಿ ದಾರಿ ತಪ್ಪಿದವರೇ, ನಂತರದ ಸಮಯದಲ್ಲಿ ದಿಕ್ಕು ತಪ್ಪಿಸಿದ್ದ ಯೌವ್ವನವನ್ನು, ಆ ಹೊಳೆಯನ್ನು ದಾಟಿ ವಯಸ್ಕರಾದ (25 ವರ್ಷ) ನಂತರ ಪ್ರಾಯಕ್ಕೆ ಅಂತಿಮ ಪ್ರಣಾಮಗಳನ್ನು ಸಲ್ಲಿಸಿ, ಸಂಪಾದನೆಗೆ ಅಡಿಪಾಯವನ್ನು ಹಾಕಿಕೊಂಡು, ಬದುಕಿಗೊಂದು ಸರಿಯಾದ ಮಾರ್ಗವನ್ನು ಆಯ್ಕೆ ಮಾಡಿಕೊಂಡು ಬದಲಾಗಿರುತ್ತೀರಿ.

ಈಗ ಪೋಷಕರಾಗಿ ನಿಮಗಿರುವ ಆತಂಕವೆಲ್ಲ, ‘ಎಲ್ಲಿ ನಮ್ಮ ಮಕ್ಕಳು ದಾರಿ ತಪ್ಪಿ ಹೋಗುತ್ತಾರೋ,’ ಹಿಂದೆ
ಇದೇ ಭಯ-ಆತಂಕ ನಿಮ್ಮಗಳ ವಿಷಯದಲ್ಲಿ ನಿಮ್ಮ ಪೋಷಕರಿಗೂ ಸಹ ಇತ್ತು. ಹದಿಹರೆಯದ ಕಾಲವನ್ನು ದಾಟಿಕೊಂಡು ಗೌರವಪೂರ್ವಕವಾದ ಬದುಕನ್ನು ಕಟ್ಟಿಕೊಂಡು ಜೀವನ ನಡೆಸುತ್ತಿರುವ ನಿಮಗೆ ನಿಮ್ಮಂತೆ ಅಥವಾ ನಿಮಗಿಂತ ಎತ್ತರದ ಸ್ಥಾನದಲ್ಲಿ ನಿಮ್ಮ ಮಕ್ಕಳನ್ನು ಕಾಣಬೇಕೆಂಬ ಬಯಕೆ ಸಹಜವಾದದ್ದು. ನಿಮ್ಮಗಳ ವಿಷಯದಲ್ಲಿ ನಿಮ್ಮ ಪೋಷಕರಿಗಿದ್ದ ಆತಂಕವೇ, ಈಗ ನಿಮ್ಮ ಮಕ್ಕಳ ವಿಷಯದಲ್ಲಿ ನಿಮಗೂ ಸಹ ಇರುವಂತದ್ದು. ಆ ಆತಂಕಗಳಿಗೆ ಕಾರಣಗಳು ಹಲವು ಇರಬಹುದು.

ತುಂಬಾ ಮಂದಿ; ಮಕ್ಕಳು ಪ್ರಾಯಕ್ಕೆ ಬರುವುದೇ ತಡ, ‘ಮಕ್ಕಳ ಜೊತೆ ಕ್ಲೋಸ್ ಆಗಿರಬೇಕು, ಸ್ನೇಹಿತರಾಗಬೇಕು’ ಅಂತೆಲ್ಲ ಹೇಳುತ್ತಾರೆ. ಒಬ್ಬ ತಂದೆ ಅಥವಾ ತಾಯಿಯಾಗಿ ನೀವು ಮಾಡಬಹುದಾದ ಅತಿ ದೊಡ್ಡ ತಪ್ಪು ನಿಮ್ಮ ಮಕ್ಕಳಿಗೆ ಸ್ನೇಹಿತರಾಗಲು ಹೊರಡುವುದು. ಯಾವ ಮಗ ಅಥವಾ ಮಗಳು ನಿಮ್ಮನ್ನು ಫ್ರೆಂಡ್ ಆಗುವಂತೆ ಕೇಳಿಕೊಳ್ಳುವುದಿಲ್ಲ. ಅದರಲ್ಲೂ ಪ್ರಾಯದಲ್ಲಿರುವ ಅವರುಗಳಿಗೆ ಮುಕ್ತವಾದ ಭಾವನಾತ್ಮಕ ಪ್ರಪಂಚ ಬೇಕಿರುತ್ತದೆ. ಅವರಿಗೆ ಅವರ ವಯಸ್ಸಿನ ಆಲೋಚನೆಗಳಿಗೆ ತಕ್ಕಂತೆ ಸ್ನೇಹಿತರ ಗುಂಪು ಇರುತ್ತದೆ. ಅವರಿಗೆ ಜೀವನದಲ್ಲಿ ಸ್ನೇಹಿತರಾಗಲು ತುಂಬಾ ಮಂದಿ ಇದ್ದಾರೆ. ಪೋಷಕರಾಗಲು ನಿಮ್ಮನ್ನು ಬಿಟ್ಟು ಬೇರೆ ಯಾರಿದ್ದಾರೆ? ನಿಮಗೆ ತಾನೆ ಅವರನ್ನು ಬಿಟ್ಟು ಬೇರೆ ಮಕ್ಕಳು ಅಂತ ಯಾರಿದ್ದಾರೆ?

‘ಅಪ್ಪ-ಅಮ್ಮ’ ಎಂದರೆ ಮಕ್ಕಳ ಜೀವನದಲ್ಲಿ ಎರಡು ನಿರ್ಣಯಾಧಿಕಾರ ಕೇಂದ್ರಗಳು. ಹೀಗಾಗಿಯೇ ಬಹುತೇಕ ಅವರ ಬದುಕಿನ ನಿರ್ಣಯಗಳನ್ನು ನೀವುಗಳೇ ನಿರ್ಣಯಿಸುತ್ತೀರಿ ಮತ್ತವರು ಅದನ್ನು ಪಾಲಿಸುತ್ತಾರೆ.
ಹಾಗೆ ಅವರು ಪಾಲಿಸಲಿಕ್ಕೆ ಬಹು ಮುಖ್ಯ ಕಾರಣಗಳೆಂದರೆ, ಅವರುಗಳಿಗೆ ನಿಮ್ಮನ್ನು ಕಂಡರೆ ‘ಭಯ- ಪ್ರೀತಿ ಮತ್ತು ಗೌರವ’ ಗಳಿದೆ!. ಆದರೆ, ಸ್ನೇಹಿತರಾಗುವ ಮೂಲಕ ಈ ಮೂರನ್ನು ಯಾಕೆ ಕಳೆದುಕೊಳ್ಳಲು ಇಚ್ಚಿಸುತ್ತೀರಿ?. ಅವರಿಗೆ ಪ್ರೌಢಾವಸ್ಥೆಯಲ್ಲಿ ಬೇಕಿರುವುದು ನಿಮ್ಮ ಸ್ನೇಹವಲ್ಲ, ಬದಲಾಗಿ ಸರಿಯಾದ ನಿಮ್ಮ ಮಾರ್ಗದರ್ಶನ. ಅವರ ಭವಿಷ್ಯದ ಕನಸುಗಳಿಗೆ ನಿಮ್ಮ ಸಹಕಾರ. ಪೋಷಕರಾಗಿ ನಿಮ್ಮ ಆದ್ಯತೆಗಳು, ಟೀನೇಜರ್ ಗಳಾದ ಅವರ
ಆಸೆ, ಆಕಾಂಕ್ಷೆ, ಬಯಕೆಗಳು ಉತ್ತರ- ದಕ್ಷಿಣಾಭಿಮುಖವಾಗಿರುತ್ತವೆ. ಒಂದಷ್ಟು ಸಮಯದಲ್ಲಿ ಎರಡು ಹೊಂದಾಣಿಕೆ ಆಗಬಹುದು, ಆದರೆ ಬಹುತೇಕ ಸಂದರ್ಭಗಳಲ್ಲಿ ಒಂದು ಇನ್ನೊಂದಕ್ಕೆ ತದ್ವಿರುದ್ಧವಾಗಿರುತ್ತದೆ.

ಬೆಳೆದು ನಿಂತ ಮಕ್ಕಳ ವಿಷಯದಲ್ಲಿ, ಅವರುಗಳ ಮುಂದಿನ ಭವಿಷ್ಯದ ಸಂಗತಿಗಳಲ್ಲಿ ಪೋಷಕರಾದ ನಿಮಗೆ ತಾಳ್ಮೆ- ಸಂಯಮ ಬಹಳಷ್ಟು ಬೇಕಿರುತ್ತದೆ. ಮಕ್ಕಳು ದುಡಿಕಿ ತಪ್ಪು ಮಾಡಬಹುದು, ಆದರೆ ಪೋಷಕರಾದ ನೀವುಗಳು ಯಾವುದೇ ಕಾರಣಕ್ಕೂ ಸಹ ದುಡುಕಬಾರದು. ದುಡಿಕಿ ಮಕ್ಕಳು ಮಾಡುವ ತಪ್ಪನ್ನೇ ನೀವು ಮಾಡುವುದಾದರೆ ಅವರಿಗೂ ನಿಮಗೂ ಯಾವುದೇ ವ್ಯತ್ಯಾಸ ಉಳಿಯುವುದಿಲ್ಲ. ಹೌದು ಕಾಲೇಜು ಹಂತದಲ್ಲಿ ಅವರ ಆಯ್ಕೆಯ ಕೋರ್ಸ್ ಅಥವಾ ಇತರ ಚಟುವಟಿಕೆಗಳಲ್ಲಿ ಅವರು ಗೊಂದಲಕ್ಕೆ ಒಳಗಾಗಿರಬಹುದು, ದುಡುಕಿ ನಿರ್ಣಯಕ್ಕೆ ಸಹ ಬಂದು ಬಿಟ್ಟಿರಬಹುದು. ಅದು ಸರಿಯೋ…ತಪ್ಪೋ… ಎಂಬುದನ್ನು ಪಕ್ಕಕ್ಕಿಟ್ಟು ಎದುರಾಗುವ ಸಮಸ್ಯೆಯನ್ನು ಹೇಗೆ ಸಮಾಧಾನ ಚಿತ್ತರಾಗಿ ಬಗೆಹರಿಸಬೇಕೆಂದು ಪೋಷಕರಾದ ನೀವು ಆಲೋಚಿಸಬೇಕಾಗುತ್ತದೆ.

ಅಷ್ಟೇ ಹೊರತು ‘ನಿನಗೇನು ಗೊತ್ತಾಗಲ್ಲ, ನಾನ್ ಹೇಳಿದ್ದನ್ನೇ ಮಾಡು ‘ ಅಂತೇಳಿ ಸಿಂಹ, ಜಿಂಕೆಯ ಮೇಲೆ ಎರಗಿ ಬೀಳುವಂತೆ, ಮಕ್ಕಳ ಮೇಲೆ ಎರಗಿ ಬೀಳಬೇಡಿ. ನಿಮ್ಮ ತಂದೆ-ತಾಯಿಗಳಿಗಿಂತ ನಿಮಗೆ ತುಂಬಾ ವಿಷಯಗಳು ಗೊತ್ತಿತ್ತು. ಅವರ ಕಾಲಕ್ಕೆ ನೀವು ಆಧುನಿಕರು. ಈಗ ನಿಮ್ಮ ಕಾಲಕ್ಕೆ ನಿಮ್ಮ ಮಕ್ಕಳು ನಿಮಗಿಂತ ತುಂಬಾ ವಿಷಯಗಳನ್ನು ತಿಳಿದುಕೊಂಡಿದ್ದಾರೆ. ನಿಮಗಿಂತ ಹೆಚ್ಚು ಆಧುನಿಕರಾಗಿದ್ದಾರೆ. ಅವರನ್ನು ನೀವು ಅಪಾರವಾಗಿ ಪ್ರೀತಿಸುತ್ತೀರಿ, ಅಂದಮೇಲೆ ಅವರ ಅಭಿಪ್ರಾಯಕ್ಕೊಂದು ಗೌರವ ಮತ್ತು ಮನ್ನಣೆ ನೀಡಿ. ‘ನಾವುಗಳೇ ಸರಿ, ನೀವುಗಳು ತಪ್ಪು’ ಎಂಬ ಧೋರಣೆಯನ್ನು ಮೊದಲು ಬಿಡಿ. ‘ನಾವು ಸರಿ ,ನೀವು ಸರಿ. ಇಬ್ಬರೂ ಸೇರಿ ಒಂದು ಸಮಾಧಾನಕರವಾದ ಉತ್ತರ ಹುಡುಕೋಣ’ ಅಂತ ಅವರೊಟ್ಟಿಗೆ ಹೆಜ್ಜೆ ಹಾಕಿ.

ಅವರೀಗ ಪ್ರಾಯಕ್ಕೆ ಬಂದವರು, ಹದಿಹರೆಯದ ಆಕಾಶದಲ್ಲಿ ಹಾರಾಡಲು ಸನ್ನದ್ಧರಾಗಿದ್ದಾರೆ. ಸಮಸ್ಯೆಯ ಮೂಲ ಇದೆ, ಆ ರೆಕ್ಕೆಗಳು ಬಲಿತು ನಿಮ್ಮ ಮಾತುಗಳನ್ನು ಅವರು ನಿರ್ಲಕ್ಷಿಸುತ್ತಿದ್ದಾರೆ ಎಂಬುದು ನಿಮ್ಮ ಘನ ಘೋರವಾದ ಆರೋಪ. ‘ಅರೇ! ರೆಕ್ಕೆ ಬಲಿತಿದೆ, ಬದುಕು ಸುಂದರವಾಗಿ ಅರಳುತ್ತಿದೆ. ಭಾವನೆಗಳು ಬೇರೆ ಸುಮ್ಮನೆ ಒಂದೆಡೆ ಕೂರದಂತೆ ಮಾಡಿದೆ. ನಾವೀಗ ಹಾರಬೇಕು, ಸ್ವಚ್ಛಂದವಾಗಿ ಹಾರಾಡುತ ಬದುಕನ್ನು ಕಾಣಬೇಕು’ ಅಂತ ಅವರುಗಳು ತಮ್ಮ ಪ್ರಾಯದ ಅಭಿಪ್ರಾಯವನ್ನು ಹೇಳುತ್ತಿದ್ದಾರೆ. ಹಿಂದೆ ಪ್ರಾಯದಲ್ಲಿ ಇದೇ ಅಭಿಪ್ರಾಯ ನಿಮ್ಮದೂ ಸಹ ಆಗಿತ್ತು. ಇರಲಿ ಆ ಪ್ರಾಯ ಮತ್ತೆ ನಿಮ್ಮ ಜೀವನದಲ್ಲಿ ಮರಳಿ ಬರದು. ಈಗ ಬಂದಿರುವ ಮಕ್ಕಳ ಬದುಕಿನಲ್ಲಿನ ಈ ಕಾಲವನ್ನು ಅನಗತ್ಯವಾದ ಭಯ, ಒತ್ತಡ, ಆತಂಕಗಳ ಮೂಲಕ ಅವರದನ್ನು ಎದುರಿಸಲಾರರೆಂಬಂತೆ ನೀವು ಅವರನ್ನು ನೋಡುವ ಮತ್ತದನ್ನವರು ಮುಕ್ತವಾಗಿ ಎದುರಿಸಲು ಬಿಡದಿರುವ ನಿಮ್ಮ ಧೋರಣೆ ಮೊದಲು ಬದಲಾಯಿಸಿಕೊಳ್ಳಿ.ಕಾಲದ ಜೊತೆಯಲ್ಲಿ ಅನೇಕ ಬದಲಾವಣೆಗಳಾಗುತ್ತವೆ. ನಿಮ್ಮಲ್ಲೂ ಬದಲಾವಣೆಗಳಾಗಿವೆ, ನಿಮ್ಮ ಮಕ್ಕಳು ಸಹ ಬದಲಾವಣೆಯನ್ನು ಕಾಣುತ್ತಿದ್ದಾರೆ.

ಮಕ್ಕಳ ವಿಷಯದಲ್ಲಿ ಮುಕ್ತರಾಗಿರಿ! ಅವರು ನಿಮ್ಮ ಮಕ್ಕಳು, ‘ಅವರು ಹೇಗೆ?’ ಅಂತ ನಿಮಗೆ ಚೆನ್ನಾಗಿ ಗೊತ್ತಿರಬೇಕು, ಅಲ್ಲವೇ? ನಿಮ್ಮ ಮಕ್ಕಳನ್ನು ಜಗತ್ತು ವಿಶ್ವಾಸಿಸಬೇಕಾದ ಅಗತ್ಯವೇನಿಲ್ಲ. ಅವರನ್ನು ವಿಶ್ವಾಸಿಸಬೇಕಾದದ್ದು ನೀವುಗಳು ಮಾತ್ರ, ನೀವುಗಳು ಅವರನ್ನು ವಿಶ್ವಾಸಿಸಿದರೆ ಅದವರಿಗೆ ಸಾವಿರ ಆನೆಗಳ ಬಲವನ್ನು ಕೊಡುತ್ತದೆ. ‘ಏನಾದರೂ ಮಾಡು ಆದರೆ ಅದರಲ್ಲೊಂದು ನೀತಿ ಇರಲಿ, ಏನಾದರೂ ಕಲಿ ಆದರೆ ಕಲಿಕೆಯಲ್ಲಿ ಆಸಕ್ತಿ ಇರಲಿ, ಕೌಶಲ್ಯತೆ ವೃದ್ಧಿಯಾಗಲಿ. ಜೀವನದಲ್ಲಿ ನೀತಿ ತಪ್ಪಬೇಡ, ದಾರಿ ತಪ್ಪಬೇಡ, ಮಾಡುವ ಯಾವುದೇ ಕೆಲಸದ ಬಗ್ಗೆ ಅಭಿಮಾನ ಬಿಟ್ಟುಕೊಡಬೇಡ, ಅಸಡ್ಡೆ ತೋರಬೇಡ, ಯಾವುದೇ ಕೆಲಸವನ್ನು ಪೋಸ್ಟ್ ಫೋನ್ ಮಾಡಬೇಡ’ ಇಷ್ಟನ್ನಷ್ಟೇ ಅವರಿಗೆ ಹೇಳಿ ‘ನಿನ್ನ ಭವಿಷ್ಯ ನಿನ್ನ ಕೈಯಲ್ಲಿದೆ. ಸರಿಯಾದ ದಾರಿಯನ್ನೇ ನೀನು ಆಯ್ಕೆ ಮಾಡಿಕೊಳ್ಳುವೆ ಅನ್ನುವ ವಿಶ್ವಾಸ ನಮ್ಮದು. ನಿನ್ನ ದಾರಿ ಸರಿ ಇದ್ದರೆ ನಮಗೂ ನೆಮ್ಮದಿ, ನಿನಗೂ ಸಮೃದ್ಧಿ.
ನೀನು ದಾರಿ ತಪ್ಪಿದರೆ ನಿನ್ನೊಂದಿಗೆ ನಮ್ಮ ಜೀವನ ಕೂಡ ಪಾತಾಳ ಮುಖಿ. ನಿನ್ನ ಭವಿಷ್ಯದಲ್ಲಿ ನಮ್ಮೆಲ್ಲರ ಬದುಕು ಕೂಡ ಅಡಗಿದೆ ಎಂಬುದನ್ನು ಯಾವ ಕಾಲಕ್ಕೂ ಮರೆಯಬೇಡ’ ಅಂತ ಒಂದು ಎಚ್ಚರಿಕೆಯ ಮಾತನ್ನು ಅದರೊಂದಿಗೆ ರವಾನಿಸಿ.

‘ಏನೇ ಆಗಲಿ, ಅಂತಹ ಪರಿಸ್ಥಿತಿ ಬರಲಿ, ನಿನ್ನೊಂದಿಗೆ ನಾವಿದ್ದೇವೆ. ಏಕೆಂದರೆ ನಾವು ನಿನ್ನ ತಂದೆ-ತಾಯಿ. ನಿನ್ನ ಸುಂದರ ಭವಿಷ್ಯಕ್ಕಾಗಿ ನಮ್ಮೆಲ್ಲಾ ಆಸ್ತಿ ಆಸ್ತಿ ಕೊನೆಗೆ ನಮ್ಮ ಜೀವಗಳನ್ನು ಮುಡಿಪಿಟ್ಟಿರುವ ಜೀವಗಳು’ ಅಂತ ಹೇಳಿ ಭಾವನಾತ್ಮಕವಾಗಿಯೂ ಅವರನ್ನು ಸೆರೆಹಿಡಿದು, ‘ಹೋಗು ಜಗತ್ತು ವಿಶಾಲವಾಗಿದೆ ನಿನಗೆ ಇಷ್ಟವಾದದನ್ನು ಆಯ್ಕೆ ಮಾಡಿಕೋ’ಅಂತ ಹೇಳಿ ಬೆನ್ನು ತಟ್ಟಿದರೆ ನಿಮ್ಮ ಬದುಕು ಸುಂದರ, ಅವರ ನಾಳೆಯ ಜೀವನವು ಮಧುರ.

ಇಷ್ಟೊಂದು ಧನಾತ್ಮಕವಾದ ಹಾಗೂ ವಿಸ್ತಾರವಾದ ಮತ್ತೊಂದು ಪುಸ್ತಕ ಇತ್ತೀಚಿನ ದಿನಗಳಲ್ಲಿ ಯಾವ ಭಾಷೆಯಲ್ಲಿಯೂ ಬಂದಿಲ್ಲ. ಪೋಷಕರ ತಪ್ಪುಗಳು ಮತ್ತು ಆತಂಕಗಳನ್ನು, ಮಕ್ಕಳ ಯೌವ್ವನ ಮತ್ತು ಅವರ ಭವಿಷ್ಯದ ಬಗ್ಗೆನ 248 ಪುಟಗಳಲ್ಲಿ, ಪ್ರತಿ ಪುಟ್ಟದಲ್ಲೂ ಒಂದೊಂದು ಛಾಯಾಚಿತ್ರದ ಮೂಲಕ ವಿಷಯವನ್ನು ಪ್ರಸ್ತುತ ಪಡಿಸಿರುವ ಲೇಖಕರ ಪ್ರಯತ್ನ ಅಭಿನಂದನಾರ್ಹ. ಇದರಲ್ಲಿ ಇದುವರೆಗೆ ನಾವು ಕೇಳಿರದ, ಕಂಡೀರದ ಅನೇಕ ಸಂಗತಿಗಳ ಕೂಡ (ಉದಾಹರಣೆಗೆ; ಪುರುಷರಲ್ಲಿನ ಮುಟ್ಟು) ಇದರಲ್ಲಿ ನಮಗೆ ಓದಿ ತಿಳಿಯುವುದಕ್ಕೆ ಸಿಗುತ್ತದೆ. ಲೇಖಕ ರವೀಂದ್ರ ಕೊಟಕಿ ಅವರ ಈ ಪ್ರಯತ್ನ ಕನ್ನಡದ ಓದುಗರಿಗೆ ಒಂದು ವಿಶೇಷವಾದ ಹಾಗೂ ಕಡ್ಡಾಯವಾಗಿ ತಿಳಿಯಲೇಬೇಕಾದ ಹಲವು ಸಂಗತಿಗಳನ್ನು ಪರಿಚಯಿಸುತ್ತದೆ. ಪ್ರತಿಯೊಬ್ಬರೂ ಈ ಪುಸ್ತಕವನ್ನು ಓದಲೇಬೇಕು. ಈ ಪುಸ್ತಕ ಪ್ರತಿಯೊಬ್ಬರ ಜೀವನವನ್ನು ಪ್ರತಿನಿಧಿಸುತ್ತದೆ. ಇದೊಂದು ಅಪರೂಪದ ಅವಶ್ಯವಾಗಿ ಓದಲೇಬೇಕಾದ ಪುಸ್ತಕವಾಗಿದೆ.

ಪುಸ್ತಕದ ಹೆಸರು: ಕಡ್ಡಾಯವಾಗಿ ಪೋಷಕರಿಗೆ ಮಾತ್ರ!
ಲೇಖಕರು: ರವೀಂದ್ರ ಕೊಟಕಿ
ಪ್ರಕಾಶಕರು: ಚಿನ್ಮಯ ಪ್ರಕಾಶನ
ಪುಸ್ತಕದ ಬೆಲೆ: 270 (ಅಂಚೆ ವೆಚ್ಚ ಪ್ರತ್ಯೇಕ)

ಎಲ್ಲಿ ದೊರೆಯುತ್ತದೆ: ಶ್ರೀನಿಧಿ ಪಬ್ಲಿಕೇಶನ್, ಬೆಂಗಳೂರು.
ಹೆಚ್ಚಿನ ಮಾಹಿತಿ ಹಾಗೂ ಪುಸ್ತಕಕ್ಕಾಗಿ ಸಂಪರ್ಕಿಸಬೇಕಾದ WhatsApp number: 9972778646

ಸಹಕಾರ ಹಾಗೂ ವರದಿ: ಡಿ.ಆರ್ ದಯಾನಂದ ಸ್ವಾಮಿ ಸಹ ಸಂಪಾದಕರು
ಪತ್ರಕರ್ತರು, ತಿಪಟೂರು.

ರಾಜ್ಯಸರ್ಕಾರದ ಜಾರಿಗೆ ತಂದಿರುವ ಮಹತ್ವಾಕಾಂಕ್ಷೆಯ ಭೂ ಸುರಕ್ಷ ಯೋಜನೆಗೆ ತಿಪಟೂರು ಶಾಸಕ ಕೆ.ಷಡಕ್ಷರಿ ಪೂಜೆಸಲ್ಲಿಸುವ ಮೂಲಕ ಚಾಲನೆ ನೀಡಿದರು.

ತಿಪಟೂರು ಆಡಳಿತ ಸೌಧದ ಅಭಿಲೇಖನಾಲಯದಲ್ಲಿ ಕಂದಾಯ ಇಲಾಖೆ ಹಾಗೂ ಸರ್ವೆ ಇಲಾಖೆ ಭೂ ದಾಖಲೆಗಳ ಡಿಜಿಟಲಿಕರಣ ಪ್ರಕ್ರಿಯೆಗೆ ಪೂಜೆಸಲ್ಲಿ ಚಾಲನೆ ನೀಡಿದರು.

ತಾಲ್ಲೋಕು ಆಡಳಿತ ಸೌಧದ ಆವರಣದಲ್ಲಿ ಆಯೋಜಿಸಿದ ಕಾರ್ಯಕ್ರಮವನ್ನ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದ ಶಾಸಕರು ಮಾತನಾಡಿ ರಾಜ್ಯಸರ್ಕಾರ ಕಂದಾಯ ಇಲಾಖೆಯ ಭೂ ದಾಖಲೆಗಳನ್ನ ಸ್ಕ್ಯಾನಿಂಗ್ ಮಾಡಿ ಡಿಜಿಟಲಿಕರಣಗೊಳಿಸುತ್ತಿರುವುದು,ಅತ್ಯತ್ತಮ ಕಾರ್ಯಕ್ರಮವಾಗಿದೆ.ನೂರಾರು ವರ್ಷಗಳ,ಭೂದಾಖಲೆಗಳು ಕಂದಾಯ ಇಲಾಖೆಯ ಅಭಿಲೇಖನಾಲಯದಲ್ಲಿ ಅಡಕವಾಗಿವೆ.ಕಾಲಾಂತರದಲ್ಲಿ ಶಿಥಿಲವಾಗುವ ಅಪಾಯವೇ ಹೆಚ್ಚು,ಇನ್ನೂ ಸರ್ಕಾರದ ಭೂ ದಾಖಲೆಗಳು ರೈತರಿಗೆ, ಸುಲಭವಾಗಿ ದೊರೆಯದ ಕಾರಣ,ಸಾವಿರಾರು ರೈತರು ಭೂ ಒಡೆತನ ಹೊಂದುವುದು ಕಷ್ಟವಾಗಿದ್ದು, ರೈತರ ಸಂಕಷ್ಟ ಅರಿತ ಸರ್ಕಾರ ಬಗರ್ ಹುಕ್ಕು ಸಾಗುವಳಿ ಚೀಟಿ ನೀಡಿ ತಾವು ಉಳಿಮೆ ಮಾಡುತ್ತಿರುವ ಭೂಮಿಗೆ ಮಾಲೀಕನನ್ನಾಗಿ ಮಾಡಿದೆ,ತಿಪಟೂರು ತಾಲ್ಲೋಕಿನಲ್ಲಿ ನಾನು ಮೊದಲ ಭಾರೀ ಶಾಸಕನಾಗಿದ್ದ ಅವಧಿಯಲ್ಲಿ ಸುಮಾರುಎಂಟುಸಾವಿರ ರೈತರಿಗೆ ಸಾಗುವಳಿ ಚೀಟಿ ನೀಡಿದ ಆತ್ಮತೃಪ್ತಿಇದೆ.ರೈತ ತಾನು ಸಾಗುವಳಿ ಮಾಡುವ ಜಮೀನಿಗೆ ಮಾಲಿಕತ್ವ ಹೊಂದುವುದು ಅತಿಮುಖ್ಯ ಆದರೆ ದಾಖಲೆಗಳು ಸುಲಭವಾಗಿ ಲಭ್ಯವಾಗದ ಕಾರಣ,ಎಷ್ಟೋ ರೈತರು ಮಾಲೀಕತ್ವವನ್ನೇ ಹೊಂದಲು ಸಾಧ್ಯವಾಗಿಲ್ಲ,ರಾಜ್ಯಸರ್ಕಾರ ನೂರಾರು ವರ್ಷಗಳ ರೈತರ ಸಮಸ್ಯೆಗಳಿಗೆ ಮುಕ್ತಿನೀಡಲು ಮುಂದಾಗಿದ್ದು,ತಾಲ್ಲೋಕು ಅಭಿಲೇಖನಾಲಯದಲ್ಲಿ ಇರುವ ಇರುವ ದಾಖಲೆಗಳನ್ನ ಸ್ಕ್ಯಾನಿಂಗ್ ಮಾಡಿ ಡಿಜಿಟಲೀಕರಣಗೊಳಿಸುತ್ತಿದ್ದು.ಡಿಜಿಟಲ್ ಪ್ರಕ್ರಿಯೆಯಿಂದ,ರೈತರಿಗೆ ಸುಲಭ ಹಾಗೂ ತ್ವರಿತವಾಗಿ ದಾಖಲೆಗಳು ದೊರೆಯುತ್ತವೆ,ಹಾಗೂ ದಾಖಲೆಗಳನ್ನ ಕಳ್ಳವು ಮಾಡಲು,ನಾಶಗೊಳಿಸಲು ಸಾಧ್ಯವಾಗುದಿಲ್ಲ.ಆದರಿಂದ ಉತ್ತಮ ಯೋಜನೆಗೆ ಜನರು ಸಹಕಾರ ನೀಡಬೇಕು ಎಂದು ತಿಳಿಸಿದರು

ಕಾರ್ಯಕ್ರಮದಲ್ಲಿ ಉಪಸ್ಥಿತರಿದ ತಿಪಟೂರು ಉಪವಿಭಾಗಾಧಿಕಾರಿ ಶ್ರೀಮತಿ ಸಪ್ತಶ್ರೀ ಮಾತನಾಡಿ ಭೂ ದಾಖಲೆಗಳ ಡಿಜಿಲಿಕರಣದಿಂದ ಸಾರ್ವಜನಿಕರಿಗೆ ಉತ್ತಮ ಹಾಗೂ ತ್ವರಿತಗತಿ ಸೇವೆ ನೀಡಲು ಸಾಧ್ಯವಾಗುತ್ತದೆ,ಸರ್ಕಾರದ ಆದೇಶದಂತೆ ತಾಲ್ಲೋಕು ಕಚೇರಿಯ ಭೂ ದಾಖಲೆಗಳನ್ನ ವರ್ಗೀಕರಿಸಿ,ಸ್ಕ್ಯಾನಿಂಗ್ ಪ್ರಕ್ರಿಯೆ ಮಾಡಲಾಗುತ್ತಿದೆ,ಹೋಬಳಿವಾರು ಸ್ಕ್ಯಾನಿಂಗ್ ಮಾಡುವಾಗ ಸಾರ್ವಜನಿಕರಿಗೆ ಸ್ಪಲ್ಪ ತೊಂದರೆಯಾಗಬಹುದು,ಸ್ಕ್ಯಾನಿಂಗ್ ನಡೆಯುವ ದಾಖಲೆಗಳನ್ನ, ಸಾರ್ವಜನಿಕರಿಗೆ ಕೊಡಲು ಸಾಧ್ಯವಾಗುವುದಿಲ್ಲ,ಅಂತಹ ಸಂದರ್ಭದಲ್ಲಿ ಸಾರ್ವಜನಿಕರು ಸಹಕರಿಸಬೇಕು,ಸರ್ಕಾರದ ನಿರ್ದೇಶನದಂತೆ ಶೀಘ್ರವಾಗಿ ಸ್ಕ್ಯಾನಿಂಗ್ ಪ್ರಕ್ರಿಯೆಗೆ ಪೂರ್ಣಗೊಂಡು ಸಾರ್ವಜನಿಕರಿಗೆ ಭೂ ದಾಖಲೆಗಳನ್ನ ಕೈಗೆಟ್ಟಕುತ್ತವೆ ಎಂದು ತಿಳಿಸಿದರು
ತಹಸೀಲ್ದಾರ್ ಪವನ್ ಕುಮಾರ್ ಮಾತನಾಡಿ ರಾಜ್ಯ ಸರ್ಕಾರದ ಭೂ ಸುರಕ್ಷ ಯೋಜನೆ ಉತ್ತಮ ಯೋಜನೆಯಾಗಿದ್ದು ಈ ಯೋಜನೆಯಿಂದ ಆಡಳಿತ ವರ್ಗದ ಮೇಲಿನ ಒತ್ತಡ ಕಡಿಮೆಯಾಗುವ ಜೊತೆಗೆ, ನಿಮ್ಮ ಜಮೀನುಗಳು ಸುರಕ್ಷ ಹಾಗೂ ಸುಭದ್ರವಾಗುತ್ತವೆ ಶಿಥಿಲವಾಗುವ ಹಾಗೂ ಕಳ್ಳತನವಾಗುವ ಅತಂಕವಿರುವುದಿಲ್ಲ, ತಮ್ಮ ತಾಲ್ಲೋಕು ಕಚೇರಿಯಲ್ಲಿ 1894 ರಿಂದಲ್ಲೂ ಭೂ ದಾಖಲೆಗಳು ಲಭ್ಯವಿದೆ. ಅವುಗಳನ್ನ ಎಬಿಸಿಡಿ ಎಂಬುದಾಗಿ ವರ್ಗೀಕರಿಸಿದ್ದು,ಸ್ಕ್ಯಾನಿಂಗ್ ಮಾಡಿ ಸುರಕ್ಷವಗಿಡಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಗ್ರೇಡ್ 2 ತಹಸೀಲ್ದಾರ್ ಜಗನ್ನಾಥ್,ಶೀರಸ್ತೆದಾರ್ ರವಿಕುಮಾರ್ ಅಶೋಕ್ , ಆಹಾರ ನಿರೀಕ್ಷಕ ರೇಣುಕಪ್ರಸಾದ್ ಮುಂತ್ತಾದವರು ಉಪಸ್ಥಿತರಿದರು.

ವರದಿ : ಮಂಜುನಾಥ್ ಹಾಲ್ಕುರಿಕೆ

ಗುಬ್ಬಿ: ರೈಲ್ವೆ ರಸ್ತೆ ಅಂಡರ್ ಪಾಸ್ ಕಾಮಗಾರಿಗಳಿಗೆ ಇತ್ತೀಚಿಗಷ್ಟೇ ಸಂಪಿಗೆ ರೋಡ್ ರೈಲ್ವೇ ಸ್ಟೇಷನ್ ಕಾರ್ಯಕ್ರಮಕ್ಕೆ ರೈಲ್ವೇ ಸಚಿವ ವಿ ಸೋಮಣ್ಣ ಭೇಟಿ ನೀಡಿ ವೇಗ ತುಂಬಿದ್ದರು ಇದರ ಬೆನ್ನಲ್ಲೇ ತಾಲ್ಲೂಕಿನ ಕಡಬಾ ಹೋಬಳಿಯ ಬಾಡೇನಹಳ್ಳಿ ರೈಲ್ವೆ ಗೇಟ್ 64 ನಲ್ಲಿ ರೈಲ್ವೇ ಅಂಡರ್ ಪಾಸ್ ಕಾಮಗಾರಿ ನಡೆಯುತ್ತಿದ್ದು ಬಾಡೇನಹಳ್ಳಿ ಗ್ರಾಮಸ್ಥರು ಅಂದಿನಿಂದ ಕೆರೆ, ಕಾವಲ್ ಮತ್ತು ಬೀದಿಗಳಿಗೆ ತೆರಳಲು ಬಳಸುತ್ತಿದ್ದ ರಸ್ತೆಗಳನ್ನು ತಡೆಯಲಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ, ಗ್ರಾಮಸ್ಥರಾದ ಮಂಜುನಾಥ್ ಬಿ.ಡಿ ಮಾತನಾಡಿ ಸದರಿ ಕಾಮಗಾರಿಯ ಎಸ್ಟಿಮೇಟ್ ನಲ್ಲಿ ನಮ್ಮ ಗ್ರಾಮದ ಕೆರೆ, ಕಾವಲ್ ಮತ್ತು ನಮ್ಮ ಛಲವಾದಿ ಕಾಲೋನಿಗಳಿಗೆ ತಿರುಗಾಡಲು ಅಂದಿನಿಂದ ಇದ್ದ ರಸ್ತೆಗಳನ್ನು ಕೈ ಬಿಡಲಾಗಿದೆ ಅಲ್ಲದೆ ಸದರಿ ಕಾಮಗಾರಿಯ ನಿರ್ಧಾರಗಳಿಂದ ನಮ್ಮ ಗ್ರಾಮಸ್ಥರು ರಸ್ತೆಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಸಂಬಂಧ ಪಟ್ಟ ರೈಲ್ವೇ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ ನಮಗೆ ಸೂಕ್ತ ರಸ್ತೆ ಕಲ್ಪಿಸುವವರೆಗೂ ಹೋರಾಟ ಕೈ ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು ಮತ್ತೂಬ್ಬ ಗ್ರಾಮಸ್ಥ ಶಶಿಕುಮಾರ್ ಮಾತನಾಡಿ ಅಂದಿನಿಂದ ರಸ್ತೆಗಳು ನಾವು ಬಳಸುತ್ತಿದ್ದೇವೆ ಇದೇ ರಸ್ತೆಗಳನ್ನು ಮುಂದುವರೆಸಬೇಕು ಇಲ್ಲ ಬದಲಿ ಸೂಕ್ತ ರಸ್ತೆ ವ್ಯವಸ್ಥೆ ಮಾಡಲಿ ಆದರೆ ಸಂಬಂಧ ಪಟ್ಟ ಈ ರೈಲ್ವೇ ಅಧಿಕಾರಿಗಳ ಗಮನ ಕಾಮಗಾರಿ ಪೂರ್ಣಗೊಳಿಸಲು ಒತ್ತು ನೀಡುತ್ತಾರೆ ನಮ್ಮ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ಅಸಮಾದಾನ ವ್ಯಕ್ತಪಡಿಸಿದರು.

ವರದಿ: ಸಂತೋಷ್ ಓಬಳ. ಗುಬ್ಬಿ

error: Content is protected !!