Year: 2025

ತಿಪಟೂರು: ತಿಪಟೂರು ನ್ಯಾಯಾಲಯದ ಆವರಣದಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದ ಮೇರೆಗೆ ನಗರದ ತಿಪಟೂರಿನ ನ್ಯಾಯಾಲಯಗಳು ಮತ್ತು ತಾಲ್ಲೂಕು ಕಾನೂನು ಸೇವಾ ಪ್ರಾಧಿಕಾರ ಸಮಿತಿಯ ವತಿಯಿಂದ 2025-26ನೇ ಸಾಲಿನ ಪ್ರಥಮ ರಾಷ್ಟ್ರೀಯ ಲೋಕ ಅದಾಲತ್ ಯಶಸ್ವಿಯಾಗಿ ಜರುಗಿತು. ಲೋಕ ಅದಾಲತ್ ನಲ್ಲಿ 969 ಬಾಕಿ ಪ್ರಕರಣಗಳು, 13,017 ವ್ಯಾಜ್ಯ ಪೂರ್ವ ಪ್ರಕರಣಗಳು, ಒಂದು ವಿಚ್ಛೇದನ ಪ್ರಕರಣ ಯಶಸ್ವಿಯಾಗಿ ಪುನಃ ಒಂದಾಗುವಲ್ಲಿ ಇತ್ಯರ್ಥವಾಗಿದೆ.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಗೌರವಾನ್ವಿತ 5ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀಮತಿ ಪುಷ್ಪಾವತಿ ವಿ., ಮಾತನಾಡಿ ಇಂದು ಸಮಾಜದಲ್ಲಿ ವಿಚ್ಛೇದ ಪ್ರಕರಣಗಳು ವಿಪರೀತವಾಗಿವೆ. ಇಂತಹ ಪ್ರಕರಣಗಳನ್ನು ತಡೆಯಲು ನಮ್ಮ ಸಂಪ್ರದಾಯ ಮತ್ತು ಸಂಸ್ಕೃತಿಯನ್ನು ಬಿಂಬಿಸುವ ಕೌಟುಂಬಿಕ ಮೌಲ್ಯಗಳ ಕುರಿತು ಶಾಲಾ-ಕಾಲೇಜು ಪಠ್ಯಕ್ರಮಗಳಲ್ಲಿ ಅಳವಡಿಸಿ ಯುವ ಜನರಲ್ಲಿ ಅರಿವು ಮೂಡಿಸುವುದು ತುರ್ತು ಅಗತ್ಯವಾಗಿದೆ. ಗಂಡಹೆಂಡತಿ ಇಬ್ಬರು ಸಮಾನಭಾವದಿಂದ ಹೊಂದಾಣಿಕೆಯಿಂದ ಬದುಕಬೇಕು, ಸಮಾಜದಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗಬಾರದು. ಕಾನೂನಿನ ಬಗ್ಗೆ ಸಾರ್ವಜನಿಕರಲ್ಲಿ ಹೆಚ್ಚಿನ ಅರಿವು ಉಂಟಾದರೆ ಅಪರಾಧ ಪ್ರಕರಣ ತಡೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರಶಿಕ್ಷಣಾರ್ಥಿಗಳಾಗಿ ಆಗಮಿಸಿದ ತಿಪಟೂರು ಕೆ.ಎಲ್.ಎ ಸ್ಕೂಲ್ ಆಫ್ ಲಾ ಕಾಲೇಜು ವಿದ್ಯಾರ್ಥಿಗಳಿಗೆ ಲೋಕ ಅದಾಲತ್ ಕುರಿತು ಸಾಕ್ಷಾಚಿತ್ರ ವೀಕ್ಷಣೆ ಮಾಡಲಾಯಿತು. ಗೌರವಾನ್ವಿತ 5ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಶ್ರೀಮತಿ ಪುಷ್ಪಾವತಿ ವಿ, ರವರು., ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜೆ. ಎಂ. ಎಫ.ಸಿ ರವರಾದ ಶ್ರೀ ಮಹಮ್ಮದ್ ಆರಿಫುಲ್ಲ ಸಿ.ಎಫ್. ರವರು ಹಾಗು ಗೌರವಾನ್ವಿತ ಅಧಿಕ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಮ್. ಎಫ್.ಸಿ ನ್ಯಾಯಾಧೀಶರಾದ ಶ್ರೀಮತಿ ಮಧು ಶ್ರೀ ಜಿ. ಎಸ್ ರವರು ವಕೀಲರ ಸಂಘದ ಅಧ್ಯಕ್ಷರಾದ ಶ್ರೀ ಬಿ ಎನ್ ಅಜಯ್, ವಕೀಲರ ಸಂಘದ ಕಾರ್ಯದರ್ಶಿಗಳಾದ ಬಿ. ಮಲ್ಲಿಕಾರ್ಜುನಯ್ಯ, ಕೆ.ಎಲ್.ಎ ಸ್ಕೂಲ್ ಆಫ್ ಲಾ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ವಿನೀತ ಪಿ.ಕೆ ಸಹಾಯಕ ಪ್ರಾಧ್ಯಾಪಕರಾದ ಶ್ರೀ ಪ್ರಸನ್ನ ಕುಮಾರ್ ಸಹಾಯಕ ಪ್ರಾಧ್ಯಾಪಕರಾದ ಶ್ರೀ ಪುನೀತ್ ಕುಮಾರ್ ಮುಂತಾದವರು ಉಪಸ್ಥಿತರಿದರು.

ವರದಿ :ಸಂತೋಷ್ ಓಬಳ. ಗುಬ್ಬಿ

ತಿಪಟೂರು ಜೆಡಿಎಸ್ ಮುಖಂಡ ಹಾಗೂ ಜೆಡಿಎಸ್ ಪಾರಾಜಿತ ಅಭ್ಯಾರ್ಥಿ ಕೆ.ಟಿ ಶಾಂತಕುಮಾರ್ ನೇತೃತ್ವದಲ್ಲಿ ನಡೆಯುತ್ತಿರು, ತಿಪಟೂರಿನ ಜನರ ಕುಡಿಯುವ ನೀರಿನ ಸಮಸ್ಯೆಗಳ ಕುರಿತ ಹೋರಾಟ,ಹಲವಾರು ಅನುಮಾನಗಳನ್ನ ಹುಟ್ಟಿಹಾಕಿದೆ.

ತಿಪಟೂರಿನ ಮಟ್ಟಿಗೆ ಜೆಡಿಎಸ್ ಪಕ್ಷದ ಪ್ರಭಾವಿ ನಾಯಕರು ಹಾಗೂ ಮೈತ್ರಿ ನಾಯಕರಾಗಿರುವ ಕೆ.ಟಿ ಶಾಂತಕುಮಾರ್,ಕಳೆದ ವಿಧಾನಸಭೆ ಚುನಾವಣೆ ಜೆಡಿಎಸ್ ಪಕ್ಷದ ಅಭ್ಯಾರ್ಥಿಯಾಗಿದರು,ಹಾಗೂ ಲೋಕಸಭೆ ಚುನಾವಣೆಯಲ್ಲಿ ಮೈತ್ರಿಧರ್ಮಪಾಲಿಸಿ ಪಕ್ಷದ ಸೂಚನೆಯಂತೆ ಸೋಮಣ್ಣನ ಪರವಾಗಿ ಕೆಲಸಮಾಡಿದರು,ಚುನಾವಣಾ ಪೂರ್ವದಲ್ಲಿ ಪಕ್ಷದ ಸಂಘಟನೆಗೆ ಹೆಚ್ಚು ಒತ್ತು ನೀಡುತ್ತಿದ್ದ ಅವರ ಯಾಕೋ ನಂತರದ ದಿನಮಾನಗಳಲ್ಲಿ ಮಂಕಾಗಿದ್ದಾರೆ.

ಪಕ್ಷದ ಮುಖವಾಣಿಯಾಗಿ ತಾಲ್ಲೋಕಿನಲ್ಲಿ ತಾಂಡವವಾಡುತ್ತಿರುವ ಸಮಸ್ಯೆಗಳ ಬಗ್ಗೆ ಧ್ವನಿಎತ್ತಬೇಕಿತ್ತು, ಆದರೆ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರೊಂದಿಂಗೆ ಅಂತರ ಕಾಯ್ದುಕೊಳ್ಳುತ್ತಿದ್ದಾರೆ,ಎನ್ನುವ ಅನುಮಾನದ ಮಾತುಗಳು ಕಾರ್ಯಕರ್ತರ ಮೊಗಸಾಲೆಯಲ್ಲಿ ಕೇಳಿಬರುತ್ತಿವೆ,ಸಾರ್ವಜನಿಕರ ಮಾತಿಗೆ ಇಂಬುನೀಡುವಂತೆ ,ಕೆಲ ತಿಂಗಳುಗಳ ಹಿಂದೆ ಬಿಜಿಎಸ್ ಸಮುದಾಯ ಭವನದಲ್ಲಿ ಕೆ.ಟಿ ಶಾಂತಕುಮಾರ್ ಆಯೋಜಿಸಿದ ಶಾಂತಕುಮಾರ್ ಸ್ನೇಹ ಸಮ್ಮಿಲನ ಕಾರ್ಯಕ್ರಮಕ್ಕೆ ಬಹುತೇಕ ಜೆಡಿಎಸ್ ಪ್ರಭಾವಿ ನಾಯಕರುಗಳಿಗೆ ಆಹ್ವಾನ ನೀಡಿಲ್ಲ,ಕೆಲ ಆಯ್ದ ವ್ಯಕ್ತಿಗಳನ್ನ ಮಾತ್ರಕರೆದಿದ್ದಾರೆ,ಚುನಾವಣೆಯಲ್ಲಿ ಪಕ್ಷ ಹಾಗೂ ಪಕ್ಷದ ನಾಯಕರಿಗಾಗಿ ಹಗಲಿರುಳು ಶ್ರಮಿಸಿದ ಮುಖಂಡರು ಹಾಗೂ ಕಾರ್ಯಕರ್ತರನ್ನ ಕಡೆಗಣಿಸಲಾಗಿದೆ,ಎನ್ನುವ ಆರೋಪಗಳು ಕೇಳಿ ಬಂದಿತ್ತು. ಸ್ನೇಹ ಸಮ್ಮಿಲನ ಕಾರ್ಯಕ್ರಮಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು,ಎಲ್ಲಾ ಕಾರ್ಯಕರ್ತರನ್ನ ಒಗ್ಗೂಡಿಸಿ ಮುಂದಿನ ಚುನಾವಣೆಗಾದರೂ ಭದ್ರನೆಲೆ ಕಂಡುಕೊಳ್ಳುತ್ತಾರೆ,ಎನ್ನುವಾಗ ಕೆ.ಟಿ ಶಾಂತಕುಮಾರ್ ,ನೇತೃತ್ವದಲ್ಲಿ ಸೋಮವಾರ ನಡೆಯುತ್ತಿರು ಪ್ರತಿಭಟನೆಯ ಕರಪತ್ರ ಹಲವಾರು ಅನುಮಾನಗಳನ್ನ ಹುಟ್ಟಿಹಾಕಿದ್ದೇವೆ,ಕರಪತ್ರದಲ್ಲಿ ಜೆಡಿಎಸ್ ಪಕ್ಷದ ಚಿಹ್ನೆಯಾಗಲಿ ಅಥವಾ ಜೆಡಿಎಸ್ ವರೀಷ್ಠಾ ನಾಯಕ ದೇವೆಗೌಡ್ರು ಹಾಗೂ ಹೆಚ್.ಡಿ ಕುಮಾರಸ್ವಾಮಿ ಸೇರಿ ಯಾವ ನಾಯಕರ ಭಾವಚಿತ್ರವಿಲ್ಲದಂತೆ, ಆಗಿರುವುದು ತಾಲ್ಲೂಕಿನಲ್ಲಿ ಸಾರ್ವಜನಿಕರಲ್ಲಿ ಎದ್ದಿರುವ ಅನುಮಾನಗಳಿಗೆ ಇಂಬುನೀಡುತ್ತಿದೆ,ಕೆ.ಟಿ ಶಾಂತ ಕುಮಾರ್ ಜೆಡಿಎಸ್ ನಿಂತ ಅಂತರ ಕಾಯ್ದುಕೊಳ್ತಿದ್ದಾರಾ..?, ಅಥವಾ ಜೆಡಿಎಸ್ ಗೆ ಅಲರ್ಜಿಯಾದ್ರ ಶಾಂತಕುಮಾರ್ ಅನೋ ಅನುಮಾನ ಮೊಳಕೆಯೊಡೆಯ ತೊಡಗಿದೆ. ಕೆಲ ಜೆಡಿಎಸ್ ನಾಯಕರಂತು, ಬಹಿರಂಗವಾಗಿಯೇ ಬೇಸರ ವ್ಯಕ್ತಪಡಿಸುತ್ತಿದ್ದಾರೆ, ಎಲ್ಲಾ ಸಾರ್ವಜನಿಕರ ಅನುಮಾನಗಳಿಗೆ ಶಾಂತಕುಮಾರ್ ಮುಂದಿನ ದಿನಗಳಲ್ಲಿ ಯಾವ ದಾರಿಯಲ್ಲಿ ಉತ್ತರ ನೀಡ್ತಾರೆ ಕಾದುನೋಡಬೇಕಿದೆ….!

ತಿಪಟೂರು ತಾಲ್ಲೋಕಿ ಕಸಬಾ ಹೋಬಳಿ ಬೆನ್ನಾಯಕನಹಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಕೆ.ಆರ್ ಮೋಹನ್ ಹಾಗೂ ಉಪಾಧ್ಯಕ್ಷರಾಗಿ ಗುರುಸ್ವಾಮಿ ಈಡೇನಹಳ್ಳಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ತುಮಕೂರು ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ನಿಖಿಲ್ ರಾಜಣ್ಣ ನೂತನ ಅಧ್ಯಕ್ಷರು ಉಪಾಧ್ಯಕ್ಷರನ್ನ ಅಭಿನಂದನೆ ಸಲ್ಲಿಸಲಾಯಿತು
ಕಾರ್ಯಕ್ರಮದಲ್ಲಿ ಹುಚ್ಚಗೊಂಡನಹಳ್ಳಿ ಗ್ರಾಮಪಂಚಾಯ್ತಿ ಅಧ್ಯಕ್ಷ ಬಿ.ಬಿ ಬಸವರಾಜು,ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕರಾದ ಉಮಾಶಂಕರ್ ‌ಮುಖಂಡರಾದ ಎಂ.ಸಿ ಮಂಜುನಾಥ್ ನೂತನ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ನಿರ್ದೇಶಕರನ್ನ ಅಭಿನಂದಿಸಿದರು

ವರದಿ :ಮಂಜುನಾಥ್ ಹಾಲ್ಕುರಿಕೆರೆ

ತಿಪಟೂರು ತಾಲ್ಲೂಕಿನ ನೊಣವಿನಕೆರೆಯಲ್ಲಿ ಶ್ರೀ ಕ್ಷೇತ್ರ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ಯಾತ್ರೀಕೃತ ಭತ್ತ ನಾಟಿ ಕಾರ್ಯಕ್ರಮ ನಡೆಸಲಾಯಿತು,

ದಿವ್ಯ ಸಾನಿಧ್ಯವಹಿಸಿದ ವಹಿಸಿದ ನೊಣವಿನಕೆರೆ ಶ್ರೀಕಾಡಸಿದ್ದೇಶ್ವರ ಮಠದ ಅಭಿನವ ಶ್ರೀಕಾಡಸಿದ್ದೇಶ್ವರ ಮಹಾಸ್ವಾಮೀಜಿ ಭತ್ತದ ಪೈರನ್ನು ರೈತರಿಗ ಹಸ್ತಾಂತರ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು, ತುಮಕೂರು ಜಿಲ್ಲೆಯ ನಿರ್ದೇಶಕರಾದ ಯುತ ಸತೀಶ್ ಸುವರ್ಣ ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಮ್ಮೂರು ನಮ್ಮ ಕೆರೆ ಅಭಿವೃದ್ಧಿ ಕಾರ್ಯಕ್ರಮಗಳು ಸಿರಿ ಧಾನ್ಯ ಬೇಸಾಯ ಮತ್ತು ಯೋಜನೆಯ ಸಮುದಾಯ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಮಾತನಾಡಿದರು, ಗ್ರಾಮ ಅಭಿವೃದ್ಧಿ ಯೋಜನೆಯ ಯಂತ್ರಶ್ರೀ ಕಾರ್ಯಕ್ರಮದ ಯೋಜನಾಧಿಕಾರಿಗಳದ ಶ್ರೀಯುತ ಸುಧೀರ್ ಜೈನ್ ಮಾತನಾಡಿ ನೊಣವಿನಕೆರೆ ಭಾಗದ ರೈತರು ಹಲವಾರು ವರ್ಷಗಳಿಂದ ಭತ್ತ ಬೇಸಾಯ ಮಾಡುವುದನ್ನು ಬಿಟ್ಟಿದ್ದರು 2023ರಲ್ಲಿ ಪ್ರಾಯೋಗಿಕವಾಗಿ 20 ರೈತರಲ್ಲಿ 32 ಯಾಂತ್ರಿಕೃತ ಭತ್ತ ಬೇಸಾಯ ಮಾಡಲಾಗಿತ್ತು 2024ರಲ್ಲಿ 450 ಎಕರೆ ಭತ್ತ ಬೇಸಾಯ ಮಾಡಲಾಗಿದ್ದು 2025ರಲ್ಲಿ 650ಕ್ಕೂ ಹೆಚ್ಚಿನ ಎಕ್ರೆಗಳಲ್ಲಿ ಬತ್ತ ಬೇಸಾಯ ಮಾಡಲಾಗುತ್ತಿದೆ, ಆಧುನಿಕ ಕೃಷಿಯತ್ತ ರೈತರು ಒಲವನ್ನು ತೋರಿಸುತ್ತಿರುವುದು. ಒಳ್ಳೆಯ ಬೆಳವಣಿಗೆ ಆಗಿದೆ ಎಂದು ಅಭಿಪ್ರಾಯಪಟ್ಟರು., ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ್ ಪಂಚಾಯತ್ ಅಧ್ಯಕ್ಷ ರಾದ ಶ್ರೀಮತಿ ಜಯಮ್ಮ ಅವರು ವಹಿಸಿದ್ದರು , ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಶ್ರೀಮತಿ ದಿವ್ಯ ಪ್ರಗತಿಪರ ಕೃಷಿಕರಾದ ಶ್ರೀಯುತ ಸ್ವಾಮಿ ಜಮೀನಿನ ಮಾಲೀಕರಾದ ಶ್ರೀಯುತ ಪ್ರಕಾಶ್ ವಲಯದ ಮೇಲ್ವಿಚಾರಕರಾದ ಶ್ರೀಯುತ ಮುನಿಕೃಷ್ಣ JVKಸಮನ್ವಯಾಧಿಕಾರಿ ಶ್ರೀಮತಿ ಭಾಗ್ಯಲಕ್ಷ್ಮಿ ಉಪಸ್ಥಿತರಿದ್ದರು ಯೋಜ ನಾಧಿಕಾರಿ ಶ್ರೀಯುತ ಸುರೇಶ್ ಸ್ವಾಗತಿಸಿದರು

ವರದಿ :ಮಂಜುನಾಥ್ ಹಾಲ್ಕುರಿಕೆ

ತಿಪಟೂರು ತಾಲ್ಲೂಕಿನ ನೊಣವಿನಕೆರೆಯಲ್ಲಿ ಶ್ರೀ ಕ್ಷೇತ್ರ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ಯಾತ್ರೀಕೃತ ಭತ್ತ ನಾಟಿ ಕಾರ್ಯಕ್ರಮ ನಡೆಸಲಾಯಿತು,

ದಿವ್ಯ ಸಾನಿಧ್ಯವಹಿಸಿದ ವಹಿಸಿದ ನೊಣವಿನಕೆರೆ ಶ್ರೀಕಾಡಸಿದ್ದೇಶ್ವರ ಮಠದ ಅಭಿನವ ಶ್ರೀಕಾಡಸಿದ್ದೇಶ್ವರ ಮಹಾಸ್ವಾಮೀಜಿ ಭತ್ತದ ಪೈರನ್ನು ರೈತರಿಗ ಹಸ್ತಾಂತರ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು, ತುಮಕೂರು ಜಿಲ್ಲೆಯ ನಿರ್ದೇಶಕರಾದ ಯುತ ಸತೀಶ್ ಸುವರ್ಣ ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಮ್ಮೂರು ನಮ್ಮ ಕೆರೆ ಅಭಿವೃದ್ಧಿ ಕಾರ್ಯಕ್ರಮಗಳು ಸಿರಿ ಧಾನ್ಯ ಬೇಸಾಯ ಮತ್ತು ಯೋಜನೆಯ ಸಮುದಾಯ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಮಾತನಾಡಿದರು, ಗ್ರಾಮ ಅಭಿವೃದ್ಧಿ ಯೋಜನೆಯ ಯಂತ್ರಶ್ರೀ ಕಾರ್ಯಕ್ರಮದ ಯೋಜನಾಧಿಕಾರಿಗಳದ ಶ್ರೀಯುತ ಸುಧೀರ್ ಜೈನ್ ಮಾತನಾಡಿ ನೊಣವಿನಕೆರೆ ಭಾಗದ ರೈತರು ಹಲವಾರು ವರ್ಷಗಳಿಂದ ಭತ್ತ ಬೇಸಾಯ ಮಾಡುವುದನ್ನು ಬಿಟ್ಟಿದ್ದರು 2023ರಲ್ಲಿ ಪ್ರಾಯೋಗಿಕವಾಗಿ 20 ರೈತರಲ್ಲಿ 32 ಯಾಂತ್ರಿಕೃತ ಭತ್ತ ಬೇಸಾಯ ಮಾಡಲಾಗಿತ್ತು 2024ರಲ್ಲಿ 450 ಎಕರೆ ಭತ್ತ ಬೇಸಾಯ ಮಾಡಲಾಗಿದ್ದು 2025ರಲ್ಲಿ 650ಕ್ಕೂ ಹೆಚ್ಚಿನ ಎಕ್ರೆಗಳಲ್ಲಿ ಬತ್ತ ಬೇಸಾಯ ಮಾಡಲಾಗುತ್ತಿದೆ, ಆಧುನಿಕ ಕೃಷಿಯತ್ತ ರೈತರು ಒಲವನ್ನು ತೋರಿಸುತ್ತಿರುವುದು. ಒಳ್ಳೆಯ ಬೆಳವಣಿಗೆ ಆಗಿದೆ ಎಂದು ಅಭಿಪ್ರಾಯಪಟ್ಟರು., ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ್ ಪಂಚಾಯತ್ ಅಧ್ಯಕ್ಷ ರಾದ ಶ್ರೀಮತಿ ಜಯಮ್ಮ ಅವರು ವಹಿಸಿದ್ದರು , ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಶ್ರೀಮತಿ ದಿವ್ಯ ಪ್ರಗತಿಪರ ಕೃಷಿಕರಾದ ಶ್ರೀಯುತ ಸ್ವಾಮಿ ಜಮೀನಿನ ಮಾಲೀಕರಾದ ಶ್ರೀಯುತ ಪ್ರಕಾಶ್ ವಲಯದ ಮೇಲ್ವಿಚಾರಕರಾದ ಶ್ರೀಯುತ ಮುನಿಕೃಷ್ಣ JVKಸಮನ್ವಯಾಧಿಕಾರಿ ಶ್ರೀಮತಿ ಭಾಗ್ಯಲಕ್ಷ್ಮಿ ಉಪಸ್ಥಿತರಿದ್ದರು ಯೋಜ ನಾಧಿಕಾರಿ ಶ್ರೀಯುತ ಸುರೇಶ್ ಸ್ವಾಗತಿಸಿದರು

ವರದಿ :ಮಂಜುನಾಥ್ ಹಾಲ್ಕುರಿಕೆ

ಗುಬ್ಬಿ: ತಾಲ್ಲೂಕಿನ ಕಡಬ ಹೋಬಳಿಗೆ ಒಳಪಡುವ ತಾಲ್ಲೂಕಿಗೆ ಚಿಟ್ಟೆ ಮೇಳ ಹಾಗೂ ಅರೆ ವಾದ್ಯ ಕಲೆ ಪರಂಪರೆಯ ಹೆಗ್ಗುರುತಾದ ಹರಗಲದೇವಿ ಗುಡ್ಡದ ಕಾವಲ್ ಗ್ರಾಮದ ಛಲವಾದಿ ಚಾಲುಕ್ಯ ವಂಶದವರ ಆರಾಧ್ಯ ದೇವಿ ಶ್ರೀ ಆದಿಶಕ್ತಿ ಮಾರಮ್ಮ ಮತ್ತು ಕಾಳಘಟಮ್ಮ ದೇವಿಯ ವಾರ್ಷಿಕ ಜಾತ್ರಾ ಮಹೋತ್ಸವವು ಮಾ.04 ರಿಂದ ಮಾ.05 ದರ ವರೆಗೆ ಅದ್ದೂರಿಯಾಗಿ ವಿಜೃಂಭಣೆಯಿಂದ ನಡೆಯಿತು,ಮೊದಲ ದಿನ ದೇವಿಯನ್ನು ರಾಜ ಬೀದಿಗಳಲ್ಲಿ ಮೆರವಣಿಗೆಯೊಂದಿಗೆ ಮೆರೆಸಿ ಗಂಗಾ ಪೂಜೆ ಸಲ್ಲಿಸಿ ನಂತರ ಛಲವಾದಿ ಕುಟುಂಬಸ್ಥರ ಆರತಿ ಮೆರವಣಿಗೆನ್ನು ಚಿಟ್ಟೆ ಮೇಳದಿಂದ ಮತ್ತು ಅರೆ ವಾದ್ಯದೊಂದಿಗೆ ದೇವಿಯ ಆರಾಧಿಸಿ, ಶ್ರೀ ಕೆಂಚರಾಯ ಮತ್ತು ಶ್ರೀ ವೀರಭದ್ರ ಸ್ವಾಮಿಯ ಸೋಮನ ಕುಣಿತದೊಂದಿಗೆ ವಿಜೃಂಭಣೆಯಿಂದ ಮೆರವಣೆಗೆ ಮಾಡಿ ದೇವಿಯ ಗದ್ದುಗೆ ಮಾಡಲಾಗಿತ್ತದೆ, ನಂತರ ಎಡೆ ಅರ್ಪಣೆ ಮಾಡಿ ಛಲವಾದಿ ಪ್ರತಿ ಕುಟುಂಬಕ್ಕೆ ಸರಗು ಹಾಗೂ ಪದ್ಧತಿ ರೂಢಿಯಲ್ಲಿದೆ ಎರಡನೇ ದಿನ ದೇವಿಗೆ ಮಡಲಕ್ಕಿ ಸೇವೆಯನ್ನು ಮೆರವಣಿಗೆಯೊಂದಿಗೆ ಪಡೆದು ಭಕ್ತರ ಮನಸೂರೆಗೊಳ್ಳುವ ಸೋಮನ ಕುಣಿತ ನಡೆಸಿ ಭಕ್ತರ ಕೋರಿಕೆ ಈಡೇರಿಕೆಗೆ ಕುರುವು ಕೇಳುವ ವಿಶೇಷ ಆಚರಣೆ ಪದ್ಧತಿ ರೂಢಿಯಲ್ಲಿದೆ ಈ ರೀತಿ ಹಲವಾರು ತಮ್ಮ ಕಷ್ಟಗಳ ನಿವಾರಿಸಲು ಕುರುವನ್ನು ದೇವಿಗೆ ಇಟ್ಟು ಫಲವನ್ನು ಪಡೆದಿದ್ದಾರೆ, ನಂತರ ಅಂತಿಮವಾಗಿ ದೇವಿಗೆ ಮತ್ತೊಂದು ವಿಶೇಷ ಆಚರಣೆ ಮಣೆವು ಮಾಡಿ ದೇವಿಯ ಪೂಜಿಸಿ,ಕುಣಿಸಿ, ಆರಾಧಿಸಿ ಅಂತಿಮಗೊಳಿಸಲಾಗುತ್ತದೆ, ಸದರಿ ಗ್ರಾಮದ ಶ್ರೀ ಮಾರಮ್ಮ ದೇವಿಯ ಅರ್ಚಕರಾದ ಶಿವಣ್ಣ ಮಾತನಾಡಿ ನಮ್ಮ ಛಲವಾದಿ ಸಮುದಾಯದ 24 ಮನೆಗಳು ಇದ್ದು ಪ್ರತಿ ವರ್ಷವೂ ಜಾತ್ರೆಯನ್ನು ಅದ್ದೂರಿಯಾಗಿ ಮಾಡಲಾಗಿತ್ತದೆ ಅಂತೆಯೇ ಈ ವರ್ಷವೂ ಜಾತ್ರೆಯು ವಿಜೃಂಭಣೆಯಿಂದ ನಡೆಯಿತು ನಮ್ಮ ಕುಟುಂಬದ ಮೂರು ತಲೆಮಾರುಗಳಿಂದ ದೇವಿಯ ಅರ್ಚಕರ ವೃತ್ತಿ ಮಾಡುತ್ತಿದ್ದೇವೆ ನಮ್ಮ ಈ ಜಾತ್ರೆಯು ಪ್ರತಿ ಶಿವರಾತ್ರಿ ಹಬ್ಬವಾದ 5 ದಿನಕ್ಕೆ ಪ್ರಾರಂಭವಾಗುತ್ತದೆ ನಮ್ಮ ಗ್ರಾಮದ ಜಾತ್ರೆಗೆ ಸುತ್ತಮುತ್ತಲ ಗ್ರಾಮಸ್ಥರು ಸೇರಿದಂತೆ ಬೇರೆ ತಾಲ್ಲೂಕು ಜಿಲ್ಲೆಗಳಿಂದ ನೂರಾರು ಭಕ್ತರು ಆಗಮಿಸುತ್ತಾರೆ ನಮ್ಮ ಸಮುದಾಯವು ಚಿಟ್ಟೆ ಮೇಳ ಹಾಗೂ ಅರೆ ವಾದ್ಯ ಕಲೆ, ಸಂಸ್ಕೃತಿಗೆ ಹೆಸರಾಗಿದೆ ಸರ್ಕಾರದಿಂದ ನಮ್ಮ ಸಮುದಾಯದ ಕಲಾವಿದರಿಗೆ ನೆರವು ದೊರೆತರೆ ಯುವ ಕಲಾವಿದರು ಹೊರಬರಲು ಹಾಗೂ ನಮ್ಮ ಕಲೆಯನ್ನು ನೆಲೆ ಗೊಳಿಸಲು ಅನುವಾಗುತ್ತದೆ ಎಂದರು.

ಸದರಿ ಶ್ರೀ ಆದಿಶಕ್ತಿ ಮಾರಮ್ಮ ದೇವಿ ಮತ್ತು ಶ್ರೀ ಕಾಳಘಟಮ್ಮ ದೇವಿಯ ಜಾತ್ರಾ ಮಹೋತ್ಸವದಲ್ಲಿ ಗುಡಿ ಗೌಡರಾದ ಯೋಗೀಶ್, ಬಸವರಾಜು , ಭೀಮರಾಜು, ವಾದ್ಯ ಗೋಷ್ಠಿಗೆ ದಿವಂಗತ ವಾದ್ಯ ಶಂಕರಯ್ಯನವರ ಕುಟುಂಬಸ್ಥರಾದ ಸತೀಶ್ ಕುಮಾರ್ ಮತ್ತು ಕಲಾ ತಂಡ, ಸಮುದಾಯದ ಹಿರಿಯ ಮುಖಂಡರು ಹಾಗೂ ಗ್ರಾಮದ ಭಕ್ತರು ಸೇರಿದಂತೆ ನೆರೆ ಹೊರೆಯ ನೂರಾರು ಭಕ್ತರು ಶ್ರೀ ದೇವಿಯ ಕೃಪೆಗೆ ಪಾತ್ರರಾದರು.

ವರದಿ: ಸಂತೋಷ್ ಓಬಳ. ಗುಬ್ಬಿ

ತಿಪಟೂರು ತಾಲ್ಲೂಕಿನ ಮದ್ಲೇಹಳ್ಳಿ ಗ್ರಾಮದಲ್ಲಿ ಅರಣ್ಯ ಇಲಾಖೆ ಇಟ್ಟಿದ ಬೋನಿಗೆ ಆಹಾರ ಅರಸಿಬಂದ ಚಿರತೆ ಸೇರೆಯಾಗಿದ್ದು, ಬೋನಿನಲ್ಲಿ ಸೆರೆಯಾಗಿದ್ದ ಚಿರತೆ, ಅಗ್ನಿಅವಘಡದಲ್ಲಿ ಸಾವನ್ನಪ್ಪಿರುವ ಬಗ್ಗೆ ಕಲ್ಪತರು ಕ್ರಾಂತಿ ಡಾಟ್ ಕಾಂ ನಲ್ಲಿ ವರದಿ ಪ್ರಸಾರವಾಗಿತ್ತು,

ಕಲ್ಪತರು ಕ್ರಾಂತಿ ಸೇರಿದಂತೆ ಮಾಧ್ಯಮಗಳ ವರದಿಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಅರಣ್ಯ ಸಚಿವ ಈಶ್ವರ್ ಖಂಡ್ರೆ ರವರು,ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಕರ್ತವ್ಯ ಲೋಪದ ಬಗ್ಗೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ದರ್ಜೆ ಅಧಿಕಾರಿಗಳಿಂದ ತನಿಖೆಗೆ ಆದೇಶಿಸಿದ್ದಾರೆ,

ಪತ್ರಿಕೆ ಬಳಗವು ಅರಣ್ಯ ಸಚಿವರ ಮಾನವೀಯ ನಡೆತೆ ಹಾಗೂ ಅರಣ್ಯ ಸಂಪತ್ತು,ವನ್ಯಜೀವಿಗಳ ಬಗೆಗಿನ ಕಾಳಜಿಗೆ ಅಭಿನಂದನೆ ಸಲ್ಲಿಸಿದೆ.

ವರದಿ:ಮಂಜುನಾಥ್ ಹಾಲ್ಕುರಿಕೆ

ತಿಪಟೂರು ತಾಲ್ಲೂಕಿನ ಮದ್ಲೇಹಳ್ಳಿ ಗ್ರಾಮದಲ್ಲಿ ಅರಣ್ಯ ಇಲಾಖೆ ಇಟ್ಟಿದ ಬೋನಿಗೆ ಆಹಾರ ಅರಸಿಬಂದ ಚಿರತೆ ಸೇರೆಯಾಗಿದ್ದು, ಬೋನಿನಲ್ಲಿ ಸೆರೆಯಾಗಿದ್ದ ಚಿರತೆ, ಅಗ್ನಿಅವಘಡದಲ್ಲಿ ಸಾವನ್ನಪ್ಪಿರುವ ಬಗ್ಗೆ ಕಲ್ಪತರು ಕ್ರಾಂತಿ ಡಾಟ್ ಕಾಂ ನಲ್ಲಿ ವರದಿ ಪ್ರಸಾರವಾಗಿತ್ತು,

ಕಲ್ಪತರು ಕ್ರಾಂತಿ ಸೇರಿದಂತೆ ಮಾಧ್ಯಮಗಳ ವರದಿಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಅರಣ್ಯ ಸಚಿವ ಈಶ್ವರ್ ಖಂಡ್ರೆ ರವರು,ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಕರ್ತವ್ಯ ಲೋಪದ ಬಗ್ಗೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ದರ್ಜೆ ಅಧಿಕಾರಿಗಳಿಂದ ತನಿಖೆಗೆ ಆದೇಶಿಸಿದ್ದಾರೆ,ಪತ್ರಿಕೆ ಬಳಗವು ಅರಣ್ಯ ಸಚಿವರ ಮಾನವೀಯ ನಡೆತೆ ಹಾಗೂ ಅರಣ್ಯ ಸಂಪತ್ತು,ವನ್ಯಜೀವಿಗಳ ಬಗೆಗಿನ ಕಾಳಜಿಗೆ ಅಭಿನಂದನೆ ಸಲ್ಲಿಸಿದೆ.

ವರದಿ :ಮಂಜುನಾಥ್ ಹಾಲ್ಕುರಿಕೆ

ತಿಪಟೂರು :ತಾಲ್ಲೂಕಿನ ಮತ್ತಿಹಳ್ಳಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ವತಿಯಿಂದ ಕೆರೆ ಜೀರ್ಣೋದಾರ ಕಾಮಗಾರಿಯ ಗುದ್ದಲಿಪೂಜೆಯನ್ನುನೆರವೇರಿಸಲಾಯಿತು.

ತುಮಕೂರು ಹಾಲು ಒಕ್ಕೂಟದ ತಿಪಟೂರು ತಾಲ್ಲೂಕು ನಿರ್ದೇಶಕರಾದ ಮಾದಿಹಳ್ಳಿ ಪ್ರಕಾಶ್ ರವರು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯು ಕೆರೆ ಕಾಮಗಾರಿಗಳನ್ನು ನೆಡಿಸಿ ರಾಜ್ಯದ ಅನೇಕ ರೈತರಕೃಷಿಚಟುವಟಿಕೆಗಳಿಗೆ,ಜೀವಜಂತುಗಳ ಕುಡಿಯುವ ನೀರಿನ ಸೌಕರ್ಯಗಳನ್ನು ಮಾಡಿಕೊಡುವ ಅತ್ಯಂತ ಪುಣ್ಯ ಕೆಲಸವನ್ನು ಮಾಡುತ್ತಿದೆ.ತಾಲ್ಲೂಕಿನಲ್ಲಿ ಯೋಜನೆಯ ವತಿಯಿಂದ ಇದುವರೆಗೂ 9 ಕೆರೆ ಕಾಮಗಾರಿಗಳನ್ನು ಪುನಶ್ಚೇತನಗೊಳಿಸಿದ್ದು ಪ್ರಸ್ತುತ ಮತ್ತಿಹಳ್ಳಿ ಕೆರೆಯು 10 ನೇ ಕೆರೆಯಾಗಿದ್ದು ಎಲ್ಲಾ ಕೆರೆಗಳು ಮಾದರಿ ಕೆರೆಗಳಾಗಿವೆ.ಪೂಜ್ಯ ವೀರೇಂದ್ರ ಹೆಗ್ಗಡೆಯವರ ಇಂತಹ ನಿಸ್ವಾರ್ಥ ಸೇವೆ ನಿಜಕ್ಕೂ ಅತ್ಯದ್ಬುತ ಎಂದು ಶ್ಲಾಘಿಸಿದರು.ಮತ್ತಿಹಳ್ಳಿ ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿಯವರಾದ ಶಿವರಾಜ್ ರವರು ಮಾತನಾಡಿ ಧರ್ಮಸ್ಥಳ ಗ್ರಾಮಭಿವೃದ್ದಿ ಯೋಜನೆಯ ಕಾರ್ಯಗಳು ಅತ್ಯುತ್ತಮವಾಗಿದ್ದು ಗ್ರಾಮಸ್ಥರು ಯಾವುದೇ ರಾಜಕೀಯಕ್ಕೆ ಆಸ್ಪದ ಕೊಡದೆ ಒಗ್ಗಟ್ಟಿನಿಂದ ಸಹಕಾರ ನೀಡಿದರೆ ಕೆರೆ ಅಭಿವೃದ್ದಿ ಶತಸಿದ್ದ ಎಂದು ಶುಭ ಹಾರೈಸಿದರು.


ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ತುಮಕೂರು-1 ಜಿಲ್ಲೆಯ ಜಿಲ್ಲಾ ನಿರ್ದೇಶಕರಾದ ಸತೀಶ್ ಸುವರ್ಣ ರವರು ಮಾತನಾಡಿ ಯೋಜನೆಯ ಕೆರೆ ಅಭಿವೃದ್ದಿಕಾಮಗಾರಿಯ ಕಾರ್ಯವೈಖರಿ ಹಾಗೂ ಕೆರೆ ಸ್ವಚ್ಛತೆಯ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು.ಕೆರೆ ಕಾಮಗಾರಿ ಗುದ್ದಲಿಪೂಜಾ ಕಾರ್ಯಕ್ರಮದಲ್ಲಿ ಮತ್ತಿಹಳ್ಳಿ ಗ್ರಾ.ಪ.ಅದ್ಯಕ್ಷರಾದ ಜ್ಯೋತಿ,ಗ್ರಾ.ಪ.ಸದಸ್ಯರಾದ ಹರೀಶ್ ಗೌಡ,ರೇಣುಕಮ್ಮ,ಹರೀಶ್,ರೂಪ,ಯೋಜನಾಧಿಕಾರಿ ಉದಯ್.ಕೆ,ಕೆರೆ ಸಮಿತಿ ಅದ್ಯಕ್ಷರಾದ ಹರೀಶ್,ಪಟೇಲ್ ಜಯಣ್ಣ,ಕೃಷಿ ಮೇಲ್ವಿಚಾರಕ ಪ್ರಮೋದ್,ಮೇಲ್ವಿಚಾರಕಿ ಅನಿತ,ಜನಜಾಗೃತಿ ವೇದಿಕೆ ಸದಸ್ಯರಾದ ಶ್ಯಾಮ್ ಸುಂದರ್,ಮಲ್ಲಿಗಪ್ಪಾಚಾರ್,ಸೇವಾಪ್ರತಿನಿಧಿ ಕಮಲಮ್ಮ ಹಾಗೂ ಮತ್ತಿಹಳ್ಳಿ ಗ್ರಾಮಸ್ಥರು ಉಪಸ್ಥಿತರಿದ್ದರು.

ವರದಿ :ಮಂಜುನಾಥ್ ಹಾಲ್ಕುರಿಕೆ

ತಿಪಟೂರು ತಾಲ್ಲೋಕಿನ ಹೊನ್ನವಳ್ಳಿ ಹೋಬಳಿ ಹಾಲ್ಕುರಿಕೆ ಗ್ರಾಮದ ಮುಜರೆ ಹೆಚ್ ಮುದ್ದೇನಹಳ್ಳಿ ಪ್ರಸಿದ್ದ ಕ್ಷೇತ್ರ ಶ್ರೀ ರೇವಣ ಸಿದ್ದೇಶ್ವರ ಬೆಟ್ಟದಲ್ಲಿ ಸರ್ಕಾರ ಮಹತ್ವಾಕಾಂಕ್ಷೇಯ ಸೋಲಾರ್ ಪವರ್ ಪ್ರಾಜೆಕ್ಟ್ ಪೂರ್ಣಗೊಳ್ಳುವ ಹಂತದಲ್ಲಿದೆ, ಶ್ರೀ ರೇವಣಸಿದ್ದೇಶ್ವರ ಬೆಟ್ಟದಿಂದ ಸೋಲಾರ್ ಕೇಂದ್ರದಿಂದ ಹಾಲ್ಕುರಿಕೆ ಗ್ರಾಮದ ಉಪಸ್ಥಾವರಕ್ಕೆ ವಿದ್ಯುತ್ ಲೈನ್ ಎಳೆಯಲು ರೈತರು ಭಾರೀ ವಿರೋಧ ವ್ಯಕ್ತಪಡಿಸಿದ್ದು, ರೈತರು ಹಾಗೂ ಬೆಸ್ಕಾಂ ಸಿಬ್ಬಂದಿಯ ನಡುವೆ ವಾಗ್ವಾದಕ್ಕೆ ಕಾರಣವಾಗಿದ್ದು, ವಿದ್ಯುತ್ ಕಂಬ ನೆಡಲು ವಿರೋಧ ವ್ಯಕ್ತಪಡಿಸಿದ ರೈತರು ಬೆಸ್ಕಾಂ ಇಲಾಖೆ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.


ಬೆಸ್ಕಾಂ ಇಲಾಖೆ ಶ್ರೀ ರೇವಣಸಿದ್ದೇಶ್ವರ ಬೆಟ್ಟದ ಸೋಲಾರ್ ಪವರ್ ಪ್ಲಾಂಟ್ ನಿಂದ ಹಾಲ್ಕುರಿಕೆ ಉಪಸ್ಥಾವರಕ್ಕೆ ವಿದ್ಯುತ್ ಲೈನ್ ಎಳೆಯುವುದರಿಂದ ಸಣ್ಣ ಪುಟ್ಟ ರೈತರ ತುಂಡು ಭೂಮಿಗಳು, ವ್ಯವಸಾಯ ಮಾಡದಂತ್ತಾಗುತ್ತದೆ, ಶ್ರೀ ರೇವಣ ಸಿದ್ದೇಶ್ವರ ಬೆಟ್ಟದಿಂದ ಹಾಲ್ಕುರಿಕೆ ವರೆಗೆ ಹತ್ತಾರು ಜನ ಬಡ ರೈತರ ಜಮೀನಿನಲ್ಲಿ ರೈತರಿಗೆ ಯಾವುದೇ ಮಾಹಿತಿ ನೀಡದೇ ಲೈನ್ ಎಳೆಯುತ್ತಿದ್ದಾರೆ,ಇದರಿಂದ ನಮ್ಮ ಭೂಮಿ ಹಾಳಾಗುತ್ತದೆ, ಅಲ್ಲದೇ ತೋಟ ತುಡಿಕೆ ಮಾಡಲು ಸಾಧ್ಯವಾಗುವುದಿಲ್ಲ, ಹಾಗೂ ನಮ್ಮ ಜಮೀನುಗಳು ಹಾಲ್ಕುರಿಕೆ ಗ್ರಾಮಕ್ಕೆ ಹೊಂದಿಕೊಂಡಂತ್ತಿದ್ದು ಇದರಿಂದ ಭೂಮಿಯ ಬೆಲೆ ಕಡಿಮೆಯಾಗುತ್ತದೆ, ಯಾವುದೇ ಕಾರಣಕ್ಕೂ ವಿದ್ಯುತ್ ಕಂಬ ಹಾಕಲು ಬಿಡುವುದಿಲ್ಲ. ಸೋಲಾರ್ ಪವರ್ ಪ್ಲಾಂಟ್ ಗೆ ನಮ್ಮ ವಿರೋಧವಿಲ್ಲ, ಪ್ಲಾಂಟ್ ಸ್ಥಳದಲ್ಲೇ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳ ಬೇಕು, ಒಂದುವೇಳೆ ರೈತರ ಜಮೀನಿನಲ್ಲೇ ವಿದ್ಯುತ್ ಲೈನ್ ತೆಗೆದುಕೊಂಡು ಹೋಗಬೇಕು ಎನ್ನುವುದ್ದಾರೆ, ನಮಗೆ ಸೂಕ್ತ ಪರಿಹಾರ ನೀಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.


ಯೋಜನೆಯಿಂದ ತೊಂದರೆಗೊಳಗಾದ ರೈತ ಪರಮೇಶ್ವರಯ್ಯ ಹೆಚ್.ಇ ಮಾತನಾಡಿ ನಾವೂ ಇಲ್ಲಿ ನಮ್ಮ ಪಿತ್ರಾರ್ಜಿತವಾಗಿ ಬಂದ ತುಂಡುಭೂಮಿ ಹೊಂದಿದ್ದೇವೆ ಇರುವ 20ಗುಂಟೆ ಜಾಗದಲ್ಲಿ ಮೂರ್ನಾಲ್ಕು ವಿದ್ಯುತ್ ಲೈನ್ ಎಳೆದರೆ,ನಾವೂ ಬೆಳೆ ಬೆಳೆಯಲು ಸಾಧ್ಯವಾಗುವುದಿಲ್ಲ, ಅಲ್ಲದೆ ಮನೆ ನಿರ್ಮಾಣೈ೬ಯ ಮಾಡಲು ಉದೇಶಿಸಿದ್ದು ಬೆಸ್ಕಾಂ ಇಲಾಖೆ ಕಂಬ ನೆಟ್ಟು ಲೈನ್ ಎಳೆದು ಕೈ ತೊಳೆದುಕೊಳ್ಳುತ್ತಾರೆ, ಮನೆ ನಿರ್ಮಿಸಿದ್ದಾಗ ,ಲೈನ್ ಅಡ್ಡ ಬಂದರೆ, ನಮಗೆ ತೊಂದರೆಯಾಗುತ್ತದೆ,ಆಗ ನಮಗಾಗುವ ನಷ್ಟಕ್ಕೆಯಾರು ಜವಾಬ್ದಾರರು, ಇರುವ ಭೂಮಿ ಕಳೆದುಕೊಂದು ಬೀದಿಗೆ ಬೀಳಬೇಕ್ಕಾಗುತ್ತದೆ, ಆದರಿಂದ ನಮ್ಮ ಜಮೀನಿನಲ್ಲಿ ಲೈನ್ ಎಳೆಯಲು ಅವಕಾಶ ನೀಡುವುದಿಲ್ಲ, ಸರ್ಕಾರ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು,
ಸ್ಥಳಕ್ಕೆ ಆಗಮಿಸಿದ ಬೆಸ್ಕಾಂ ಇಲಾಖೆ ಕಿರಿಯ ಅಭಿಯಂತರರಾದ ಮಂಜುನಾಥ್ ಮಾತನಾಡಿ ಸೋಲಾರ್ ಪವರ್ ಪ್ರಜೆಕ್ಟ್ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆ,ಸರ್ಕಾರದ ನಿರ್ದೇಶನದಂತೆ ಕಾಮಗಾರಿ ಮಾಡುತ್ತೇವೆ,ವಿದ್ಯುತ್ ಲೈನ್ ನಿಂದ ರೈತರು ತೊಂದರೆಯಾಗುವುದಾಗಿ ಹೇಳಿದ್ದಾರೆ, ರೈತರು ನೀಡುವ ಮಾಹಿತಿಯನ್ನ ಮೇಲಾಧಿಕಾರಿಗಳ ಗಮನಕ್ಕೆ ತಂದು ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದರು

ವರದಿ :ಮಂಜುನಾಥ್ ಹಾಲ್ಕುರಿಕೆ

error: Content is protected !!