ತಿಪಟೂರು: ಮಾ.20ರಂದುತುಮಕೂರಿನಲ್ಲಿ
ನಡೆಯಲಿರುವಭಾರತದಅಸ್ಪಶ್ಯರಮೊದಲಪ್ರತಿರೋಧ ಚಳವಳಿ, ಮಹಾಡ್ ಕೆರೆ ಸತ್ಯಾಗ್ರಹದ
ನೆನಪು ಕಾರ್ಯಕ್ರಮವನ್ನ ಕರ್ನಾಟಕ ದಲಿತ
ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಆಯೋಜನೆ ಮಾಡಿದ್ದು ದಲಿತ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ತಿಪಟೂರು ತಾಲೂಕು,ಸಂಚಾಲಕ ಗಡಬನಹಳ್ಳಿ ಚಂದ್ರಶೇಖರಯ್ಯ ತಿಳಿಸಿದರು

ನಗರದ ಕೌಸ್ತುಭ ಹೋಟೆಲ್ಸಭಾಂಗಣದಲ್ಲಿ ಆಯೋಜಿಸಿದ ಪತ್ರಿಕಾ ಘೋಷ್ಠಿಯಲ್ಲಿ ಮಾತನಾಡಿದ ಅವರು , ತುಮಕೂರಿನ ಜಿಲ್ಲಾ ಆಸ್ಪತ್ರೆಯಸಭಾಂಗಣದಲ್ಲಿ ಮಾ.20ರಂದು ನಡೆಯುತ್ತಿರುವಭಾರತದ ಅಸ್ಪೃಶ್ಯರ ಮೊದಲ ಪ್ರತಿರೋಧ ಚಳವಳಿಯ ನೆನಪು ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.
ತಿಪಟೂರು ತಾಲೂಕಿನಾದ್ಯಂತ ದಲಿತ ಸಂಘಟನೆಗಳ ಮುಖಂಡರು,ಹಿರಿಯಮಹಿಳೆಯರು ಸೇರಿದಂತೆ ನೂರಾರು ಜನ ಭೀಮ ಬಂಧುಗಳುಈ ಮಹಾಡ್
ಸತ್ಯಾಗ್ರಹ ನೆನಪು ಕಾರ್ಯಕ್ರಮದಲ್ಲಿ. ಭಾಗಹಿಸುತ್ತಿದ್ದಾರೆ. ಮಹಾಡ್ ಕೆರೆ ಸತ್ಯಾಗ್ರಹ ಆಧುನಿಕ ಭಾರತದ ಇತಿಹಾಸದಲ್ಲೇಅತ್ಯಂತ ಮಹತ್ವವಾಗಿದ್ದು ಭಾರತದ ಮಟ್ಟದಲ್ಲಿದಲಿತ ಚಳವಳಿಗೆ ಅಡಿಪಾಯ ಹಾಕಿದ ಘಟನೆಎಂದು ಕರೆಯಲಾಗುತ್ತದೆ. ಬಾಬಾ ಸಾಹೇಬರುಈಮೂಲಕಮಾನವಹಕ್ಕುಗಳನ್ನುಎತ್ತಿಹಿಡಿದರು.1927ರಲ್ಲಿ ಬಾಬಾ ಸಾಹೇಬರು ಸಾರ್ವಜನಿಕಸ್ಥಳದಲ್ಲಿ ನೀರನ್ನು ಬಳಸುವ ಹಕ್ಕುಗಳನ್ನ,ಪ್ರತಿಪಾದಿಸಲು ಮಹಾಡ್ಆರಂಭಿಸಿದರು.ಸತ್ಯಾಗ್ರಹವನ್ನು1927 ಮಾ. 20 ರಂದು ಸಾವಿರಾರುಅಸ್ಪೃಶ್ಯರೊಂದಿಗೆ ಮಹಾಡ್ ಕೆರೆಗೆ ಹೋಗಿ ಅಲ್ಲಿನನೀರನ್ನು ಮುಟ್ಟುವುದರ ಮೂಲಕ ಮಾನವಹಕ್ಕುಗಳನ್ನು ಎತ್ತಿ ಹಿಡಿದರು. ಈ ನಿಟ್ಟಿನಲ್ಲಿಮಹಾಡ್ ಸತ್ಯಾಗ್ರಹ ಭಾರತ ಇತಿಹಾಸದಲ್ಲಿ
ಚಿರಸ್ಥಾಯಿಯಾಗಿ ಉಳಿಯಿತು. ಈ ಚಳವಳಿ
ನಡೆದು ಇಂದಿಗೆ 98 ವರ್ಷಗಳು ತುಂಬುತ್ತಿದೆ. 98
ವರ್ಷ ಕಳೆದರೂ ಕೂಡ ನೀರಿನ ವಿಷಯದಲ್ಲಿ, ಬಟ್ಟೆ
ವಿಷಯದಲ್ಲಿ ದಲಿತರ ವಿಷಯದಲ್ಲಿ ದಿನನಿತ್ಯ
ಕೊಲೆ ಸುಲಿಗೆ ಅತ್ಯಾಚಾರಗಳು ನಿರಂತರವಾಗಿ
ನಡೆಯುತ್ತಲೇ ಇವೆ. ದೇಶವು ಸಮಾನತೆಯ ಕಡೆಗೆ
ಎಲ್ಲಿ ನಡೆಯುತ್ತಿದೆ, ಬರೀ ಅಸಮಾನತೆಯ ದ್ವೇಷ
ವಿಕೃತಿಯ ಕಡೆಗೆ ನಡೆಯುತ್ತಿದೆ ಎಂಬುದನ್ನು
ತೋರುತ್ತಿದೆ ಎಂದರು.ಪತ್ರಿಕಾ ಘೋಷ್ಠಿಯಲ್ಲಿ ತಾಲ್ಲೋಕು ಸಂಘಟನಾ ಸಂಚಾಲಕ ಉಗ್ರನರಸಿಂಹಯ್ಯ, ಯಗಚೀಕಟ್ಟೆ. ಮಾತನಾಡಿ ತುಮಕೂರಿನಲ್ಲಿ ನಡೆಯುವ ಸತ್ಯಾಗ್ರಹ ನೆನಪು ಕಾರ್ಯಕ್ರಮಕ್ಕೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್, ರಾಜ್ಯಸಮಿತಿ ಸದಸ್ಯ ಕುಂದೂರು ತಿಮ್ಮಯ್ಯ ಸೇರಿಅನೇಕ ಚಿಂತಕರು ಸಾಹಿತಿಗಳು ಸೇರಿ ಅನೇಕ ಗಣ್ಯರು ಭಾಗವಹಿಸಲಿದ್ದಾರೆ ಎಂದರು ಪತ್ರಿಕಾ ಘೋಷ್ಠಿಯಲ್ಲಿ ಮುಖಂಡರಾದ ಶಿವಪುರ ರಮೇಶ್,ಶೆಟ್ಟಿಹಳ್ಳಿ ಮಹೇಶ್,ಸೋಮಶೇಖರ್ ಈಚನೂರು, ಲಕ್ಕಿಹಳ್ಳಿ ತಿಮ್ಮಯ್ಯ, ಮಂಜುಳ ರಂಗಸ್ವಾಮಿ ಕುಪ್ಪಾಳು,ಚಿಗ್ಗಾವಿ ಲೋಕೇಶ್,ಮನೋಹರ್ ಕೆರೆಗೋಡಿ ಸೇರಿದಂತೆ ಅನೇಕರುಭಾಗವಹಿಸಿದ್ದರು.
ವರದಿ :ಮಂಜುನಾಥ್ ಹಾಲ್ಕುರಿಕೆ