Year: 2025

ತಿಪಟೂರು ನಗರದ ಮಾವಿನತೋಪು ಬಡಾವಣೆಯ ಶ್ರೀ ಪ್ಲೇಗಿನಮ್ಮ ದೇವಿ ದೇವಾಲಯದ ಬೀಗ ಮುರಿದು ಚಿನ್ನಾಭರಣ ಸೇರಿ ಸುಮಾರು ಲಕ್ಷ ಮೌಲ್ಯದ ವಸ್ತುಗಳನ್ನ ಕಳ್ಳತನ ಮಾಡಿರುವ ಘಟನೆ ನಡೆದಿದೆ,
ರಾತ್ರಿ ದೇವಾಲಯದ ಬೀಗ ಮುರಿದ ಕಳ್ಳರು,ಶ್ರೀ ಪ್ಲೇಗಿನಮ್ಮ ದೇವಿಯವರ ಮೇಲಿದ್ದ ಉಂಗುರ, ಬಂಗಾರದ ತಾಳಿ,ತಡೆ ಬಳೆ,ಬೆಳ್ಳಿ ಛತ್ರಿ, ನಗದು ಸೇರಿ ಸುಮಾರು ಒಂದು ಲಕ್ಷ ಮೌಲ್ಯದ ವಸ್ತುಗಳನ್ನ ಕಳ್ಳತನ ಮಾಡಲಾಗಿದೆ, ಸ್ಥಳಕ್ಕೆ ತಿಪಟೂರು ನಗರಠಾಣೆ ಪೊಲೀಸರು ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ,
ಇನ್ನೂ ದೇವಾಲಯದ ಪಕ್ಕದಲ್ಲೆ ಇದ್ದ ಶಿವಣ್ಣ ಎಂಬುವವರ ಮನೆಯಲ್ಲಿ ಯಾರು ಇಲ್ಲ ಎಂಬುದನ್ನ ಗಮನಿಸಿ ಮನೆ ಬೀಗಮುರಿದು ಹಣ ಕಳ್ಳತನ ಮಾಡಲಾಗಿದೆ.

ವರದಿ :ಮಂಜುನಾಥ್ ಹಾಲ್ಕುರಿಕೆ

ಕಾಂಗ್ರೇಸ್ ಪಕ್ಷದ ಹಿರಿಯ ಮುತ್ಸದಿ ರಾಜಕಾರಣಿ ಹಾಗೂ ತಿಪಟೂರು ಶಾಸಕರು ಹಾಗೂ ರಾಜ್ಯ ಭೂ ಅಭಿವೃದ್ದಿ ಬ್ಯಾಂಕ್ ಅಧ್ಯಕ್ಷರಾದ ಕೆ.ಷಡಕ್ಷರಿ ಯವರಿಗೆ ಸಚಿವ ಸ್ಥಾನ ಕೈ ತಪ್ಪಲು ಸಮುದಾಯದ ಪ್ರಭಾವಿ ಸ್ವಾಮೀಜಿಯೊಬ್ಬರ ಒತ್ತಡ ಕಾರಣವಾಗಿದೆ ಎನ್ನುವ ಸುದ್ದಿ ಕೆ.ಷಡಕ್ಷರಿ ಅಭಿಮಾನಿಗಳು ಹಾಗೂ ತಿಪಟೂರು ಜನತೆಯ ಬೇಸರಕ್ಕೆ ಕಾರಣವಾಗಿದೆ.

ಕಳೆದ ಕಾಂಗ್ರೇಸ್ ಜೆಡಿಎಸ್ ಮೈತ್ರಿ ಸರ್ಕಾರದ ಅವಧಿಯಲ್ಲಿ ಹಿರಿತನ ಹಾಗೂ ಲಿಂಗಾಯಿತ ಸಮುದಾಯದ ಪ್ರಭಾವಿ ಶಾಸಕ ಎನ್ನುವ ಕಾರಣಕ್ಕೆ ಸಚಿವ ಸ್ಥಾನ ನೀಡಲಾಗುದು ಎನ್ನುವ ಮಾತು ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತು,ಶಾಸಕ ಕೆ.ಷಡಕ್ಷರಿಯವರು ಸಹ ತಮಗೆ ಸಚಿವ ಸ್ಥಾನ ದೊರೆಯುತ್ತದೆ ಎನ್ನುವ ಆಶಾವಾದದ ಮಾತುಗಳನಾಡಿದರೂ, ಆದರೆ ಪ್ರಮಾಣವಚನದ ಕೊನೆಕ್ಷಣದಲ್ಲಿ ಸಚಿವ ಸ್ಥಾನದ ಪಟ್ಟಿಯಲ್ಲಿ ಶಾಸಕ .ಕೆ.ಷಡಕ್ಷರಿ ಹೆಸರು ಇಲ್ಲದೇ ಇರುವುದು ತಾಲ್ಲೋಕಿನ ಜನತೆ ಹಾಗೂ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿತ್ತು, ಆದರೆ ಸಿದ್ದರಾಮಯ್ಯ ನವರ ನೇತೃತ್ವದ ಸರ್ಕಾರದಲ್ಲಿ ಶಾಸಕ ಕೆ.ಷಡಕ್ಷರಿ ಸಚಿವರಾಗುತ್ತಾರೆ ಎನ್ನುವ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿಬಂದವು,ಜಿಲ್ಲೆಯಿಂದ ಗೃಹ ಸಚಿವ ಡಾ//ಜಿ.ಪರಮೇಶ್ವರ್ ಹಾಗೂ ಸಹಕಾರಿ ಸಚಿವ ಕೆ.ಎನ್ ರಾಜಣ್ಣ ಮಂತ್ರಿಗಳಾದ ಕಾರಣ ಸಚಿವ ಸ್ಥಾನ ಕೈ ತಪ್ಪಿತು, ಪಕ್ಷ ನಿಷ್ಟೆ,ಹಿರಿತನ ಎಲ್ಲಾ ಇದ್ದರು, ನಮ್ಮ ಶಾಸಕರಿಗೆ ಸಚಿವ ಸ್ಥಾನದೊರೆಯುತ್ತಿಲ್ಲ,ಎಂದು ಹಲವಾರು ಸಭೆ ಸಮಾರಂಭಗಳಲ್ಲಿ ಬೇಸರ ವ್ಯಕ್ತಪಡಿಸಿ ,ಸಚಿವ ಸ್ಥಾನಕ್ಕೆ ಒತ್ತಾಯ ಮಾಡುತ್ತಿರುವ ಅಭಿಮಾನಿಗಳು ಇಂದು ತಿಪಟೂರು ಎಪಿಎಂಸಿ ಆವರಣದಲ್ಲಿ ನಡೆದ ನಂದಿನಿ ಕ್ಷೀರಭವನ ಉದ್ಘಾಟನೆ ಸಾರ್ವಜನಿಕ ಸಮಾರಂಭದಲ್ಲಿ ಮುಖ್ಯಾತಿಥಿಗಳಾಗಿದ ಕೆ.ಎನ್ ರಾಜಣ್ಣ ಮಾತನಾಡುವಾಗ ಸಾರ್ವಜನಿಕರು ಹಾಗೂ ಕೆ.ಷಡಕ್ಷರಿ ಅಭಿಮಾನಿಗಳು ಶಾಸಕ ಕೆ.ಷಡಕ್ಷರಿ ಯವರಿಗೆ ಸಚಿವ ಸ್ಥಾನ ನೀಡಿ ಎಂದು ಕೂಗಿದ್ದಾಗ, ಸಚಿವ ಕೆ.ಎನ್ ರಾಜಣ್ಣ ನಿಮ್ಮ ಶಾಸಕ ಕೆ.ಷಡಕ್ಷರಿಯವರಿಗೆ ಸಚಿವ ಸ್ಥಾನ ಕೈತಪ್ಪಲು ನನಾಗಲಿ ಅಥವಾ ಗೃಹ ಸಚಿವರಾದ ಡಾ//ಜಿ ಪರಮೇಶ್ವರ್ ಅವರಾಗಲಿ ಕಾರಣರಲ್ಲ,ನಿಮ್ಮ ಸಮುದಾಯದ ಪ್ರಭಾವಿ ಮಠಾಧೀಶರೊಬ್ಬರ ಒತ್ತಡದ ಕಾರಣದಿಂದ ಸಚಿವ ಸ್ಥಾನ ಕೈ ತಪ್ಪಿದೆ. ಶಾಸಕ ಕೆ.ಷಡಕ್ಷರಿಯವರಿಗೆ ಸಚಿವ ಸ್ಥಾನದೊರೆತರೆ, ನಮಗೂ ಸಂತೋಷ,ಎಂದರು ಕೆ.ಎನ್ ರಾಜಣ್ಣ ನವರ ಮಾತಿನಿಂದ ಶಾಸಕರ ಅಭಿಮಾನಿಗಳಿಗೆ ಆತಂಕ ಹಾಗೂ ನಿರಾಸೆ ಉಂಟುಮಾಡಿದೆ, ಸಮುದಾಯದ ಪ್ರಭಾವಿ ಸ್ವಾಮೀಜಿಗಳಿಗೆ ನಮ್ಮ ಶಾಸಕರ ಮೇಲೆ ಏಕೆ ಬೇಸರ ,ಅಸಮಾಧಾನ,ಸಮುದಾಯವನ್ನ ತಿದ್ದಿ ಮುನ್ನಡೆಸಬೇಕಾದ ಮಠಾಧೀಶರೇ ಜನನಾಯಕರ ಕಾಲೆಳೆದರೆ,ಮುಂದೆ ಬೆಳೆಯುವ ಮುಖಂಡರ ಪಾಡೇನು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ವರದಿ:ಮಂಜುನಾಥ್ ಹಾಲ್ಕುರಿಕೆ

ಸಹಕಾರಿ ಅಂದೋಲನ ಸಾರ್ವಜನಿಕರಿಗೆ ಅತಿಸುಲಭವಾಗಿ ಸೇವೆ ಮಾಡುವ ಕ್ಷೇತ್ರವಾಗಿದೆ ಸಹಕಾರಿ ಆಂದೋಲನದಲ್ಲಿ ಎಲ್ಲಾ ಸಮುದಾಯದ ಜನ ಭಾಗವಹಿಸಬೇಕು ಎನ್ನುವ ದೃಷ್ಠಿಯಿಂದ ಮೀಸಲಾತಿಯನ್ನ ಶೀಘ್ರದಲ್ಲಿಯೇ ಜಾರಿಗೊಳಿಸಲಾಗುವುದು ಎಂದು ಸಹಕಾರಿ ಸಚಿವ ಕೆ.ಎನ್ ರಾಜಣ್ಣ ತಿಳಿಸಿದರು


ನಗರದ ಎಪಿಎಂಸಿ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ನಂದಿನಿ ಕ್ಷೀರಭವನ ಉದ್ಘಾಟಿಸಿ, ಸಾರ್ವಜನಿಕ ಸಮಾರಂಭ ಉದ್ಘಾಟಿಸಿದ ಅವರು ಮಾತನಾಡಿ
ಸಹಕಾರಿ ಸಚಿವ ಕೆ.ಎನ್ ರಾಜಣ್ಣ ಮಾತನಾಡಿ
ಸಿದ್ದರಾಮಯ್ಯ ನವರ ಸರ್ಕಾರ ಜನಪರವಾಗಿ ಆಡಳಿತ ನಡೆಸುತ್ತಿದೆ,ಎಲ್ಲಾ ಸಮುದಾಯಗಳ ಜನ ಸಹಕಾರಿ ಆಂದೋಲನದಲ್ಲಿ ಭಾಗವಹಿಸಬೇಕು ಎನ್ನುವುದು ನಮ್ಮ ಸರ್ಕಾರದ ಆಶಯವಾಗಿದ್ದು ಎಸ್.ಸಿ ಎಸ್ ಟಿ ಒಬಿಸಿ ಗಳು ಸಹಕಾರಿ ಆಂದೋಲನದಲ್ಲಿ ಪಾಳ್ಗೊಳಲ್ಲಿ ಎನ್ನುವ ದೃಷ್ಠಿಯಿಂದ ಸದ್ಯದಲ್ಲಿಯೇ ಪ್ರಾಥಮಿಕ ಕೃಷಿ ಸಹಕಾರ ಸಂಘಗಳು ಹಾಗೂ ಹಾಲು ಉತ್ವಾದಕರ ಸಹಕಾರ ಸಂಘಗಳು ಸೇರಿದಂತೆ ಸಹಕಾರಿ ಕ್ಷೇತ್ರಗಳಲ್ಲಿಯೂ ಮೀಸಲು ನಿಗಧಿಗೊಳಿಸಬೇಕು ಹಾಗೂ ಅಲ್ಲಿಯೂ ಸಹ ಅಧ್ಯಕ್ಷರು ಉಪಾಧ್ಯಕ್ಷರು ಮೀಸಲು ಆಧಾರದಲ್ಲಿ ನಿಗಧಿಯಾಗ ಬೇಕು ಎನ್ನುವುದೇ ಸರ್ಕಾರದ ಆಶಯವಾಗಿದ್ದು, ಕಳೆದ ವಿಧಾನ ಸಭೆಯಲ್ಲಿ ಹಲವಾರು ಬಿಲ್ ಗಳು,ಪಾಸ್ ಆಗಿವೆ,ಸದ್ಯದಲ್ಲಿಯೇ ಮೀಸಲು ನಿಗದಿ ಮಾಡುತ್ತೇವೆ.ಸಹಕಾರಿ ಕ್ಷೇತ್ರ ಉತ್ತಮವಾಗಿ ಬೆಳೆಯಲು ಸರ್ಕಾರ ರೈತರ ಸಾಲಕ್ಕೆ ಬಡ್ಡಿ ನೀಡುತ್ತಿದೆ,ಹಾಲು ಉತ್ವಾದಕರಿಗೆ ನೆರವಾಗುವ ದೃಷ್ಠಿಯಿಂದ ಕ್ಷೀರಭಾಗ್ಯ ಯೋಜನೆ ಆರಂಭಿಸಿ ಶಾಲಾ ಮಕ್ಕಳಿಗೆ ಹಾಲು ನೀಡುತ್ತಿದೆ,ಹಾಲಿಗೆ 5ರೂಪಾಯಿ ಸಹಾಯಧನ ನೀಡುತ್ತಿದ್ದು,ತುಮಕೂರು ಒಕ್ಕೂಟದಿಂದ ಹೆಚ್ಚುವರಿಯಾಗಿ 2ರೂಪಾಯಿ ಹಣ ನೀಡುವ ಚಿಂತನೆಇದ್ದು, ,ಸರ್ಕಾರ ಗ್ರಹಕರಿಗೆ ಹೊರೆಯಾಗದಂತೆ 5ರೂಪಾಯಿ ಸಹಾಯಧನ ನೀಡುವ ಚಿಂತನೆ ನಡೆಯುತ್ತಿದೆ,ನಂದಿನಿ ಹಾಲು ಒಕ್ಕೂಟ ರೈತರ ಆರ್ಥಿಕ ನೆರವಿಗೆ,ನೆರವಾಗುತ್ತಿದ್ದು ರೈತನ ಉತ್ವಾದನಾ ವೆಚ್ಚಕ್ಕೆ ಸರಿತೂಗುವಂತೆ,ಬೆಲೆ ನೀಡುಬೇಕು, ಸಹಕಾರಿ ಸಂಘಗಳು ರಾಸುಗಳಿಗೆ ನೀಡುತ್ತಿರುವ ಪಶುಆಹಾರ ಕಳಪೆಗುಣಮಟ್ಟದಿಂದ ಕೂಡಿದೆ ಎನ್ನುವ ದೂರುಗಳಿದ್ದು,ಗುಣಮಟ್ಟದ ಆಹಾರ ನೀಡಲು ಸೂಕ್ತಕ್ರಮಕೈಗೊಳ್ಳ ಬೇಕು. ರೈತರಿಗೆ ಯಾವುದೇ ಕಾರಣಕ್ಕೂ ಅನ್ಯಾಯವಾಗಬಾರದು ಎನ್ನುವುದು ನಮ್ಮ ಉದೇಶ,ಹಾಲು ಗುಣಮಟ್ಟ ಪರೀಕ್ಷೆಕ್ಕೆ ಗಣಕೀಕೃತ ವ್ಯವಸ್ಥೆ ಜಾರಿಗೊಳಿಸಲಾಗಿದೆ ,ಒಂದು ಅಂದಾಜಿನ ಪ್ರಕಾರ ಮುವತ್ತೈದು ಸಾವಿರ ಲೀಟರ್ ನೀರು ಮಿಕ್ಸ್ ಆಗುತ್ತಿದೆ ರೈತರು ಗುಣಮಟ್ಟದ ಹಾಲು ಪೂರೈಕೆ ಮಾಡಬೇಕು ಎಂದು ತಿಳಿಸಿದರು


ಕಾರ್ಯಕ್ರಮ ಉದ್ಘಾಟಿಸಿದ ಗೃಹಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ//ಜಿ ಪರಮೇಶ್ವರ್ ಮಾತನಾಡಿ ರೈತರು ಅಭಿವೃದ್ದಯಾದರೆ ದೇಶದ ಅಭಿವೃದ್ದಿಯಾಗುತ್ತದೆ, ಕೃಷಿಯ ಜೊತೆಗೆ ಹೈನುಗಾರಿಕೆ ಕೈಗೊಂಡರೆ ರೈತ ಆರ್ಥಿಕ ಸಂಕಷ್ಟದಿಂದ ಮೇಲೆ ಬರಬಹುದು, ಸಿಲ್ಕ್ ಹಾಗೂ ಮಿಲ್ಕ್ ರೈತರ ಆಧಾರದ ಮೂಲಗಳು ನಮ್ಮ ಸರ್ಕಾರ ಹೈನುಗಾರಿಕೆ ಅಭಿವೃದ್ದಿಗೆ ಹಲವಾರು ಕ್ರಮಗಳನ್ನ ಕೈಗೊಂಡಿದೆ, ಕ್ಷೀರಕ್ರಾಂತಿಯಲ್ಲಿ ನಮ್ಮ ರಾಜ್ಯ ಉತ್ತಮ ಸಾಧನೆ, ಮಾಡುತ್ತಿದ್ದು ಇನ್ನೂ ಹೆಚ್ಚಿನಸಾಧನೆ ಮಾಡಬೇಕು,ಸರ್ಕಾರ ಕ್ಷೀರಭಾಗ್ಯ ಯೋಜನೆ ಮೂಲಕ ಅನ್ನದಾತರಿಗೆ ನೆರವಾಗಿದೆ 5ರೂಪಾಯಿ ಪ್ರೋತ್ಸಹ ಧನ ನೀಡುವುದರಿಂದ ರೈತರಿಗೆ ಸಹಕಾರವಾಗುತ್ತಿದ್ದು ,ಪ್ರೋತ್ಸಾಹ ಧನ ಹೆಚ್ಚಿಸುವ ಪ್ರಸ್ಥಾವನೆ ಸರ್ಕಾರದ ಮುಂದಿದೆ,ಎಂದ ಅವರು ತಿಪಟೂರು ಜಿಲ್ಲೆ ಮಾಡುವಂತ್ತೆ ಶಾಸಕ ಕೆ.ಷಡಕ್ಷರಿ ಒತ್ತಡ ಮಾಡುತ್ತಿದ್ದಾರೆ,ನಾವೂ ಮಧುಗಿರಿ ಜಿಲ್ಲೆ ಮಾಡುವಂತ್ತೆ ಕೇಳಿದ್ದೇವೆ,ಸರ್ಕಾರ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ನೋಡೋಣ ನಿಮ್ಮ ಹೋರಾಟಕ್ಕೆ ಶುಭವಾಗಲಿ,ಎಂದರು
ಕಾರ್ಯಕ್ರಮದಲ್ಲಿ ಉಪಸ್ಥಿತರಿದ ಶಾಸಕ ಕೆ.ಷಡಕ್ಷರಿ ಮಾತನಾಡಿ ನಮ್ಮ ಸರ್ಕಾರ ಸಹಕಾರಿ ಸಂಘಗಳಲ್ಲಿ ಐದು ಲಕ್ಷದ ವರೆಗೆ ಸಾಲ ಸೌಲಭ್ಯ ನೀಡುವ ಯೋಜನೆ ಮಾಡುತ್ತಿದೆ ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಪ್ರಸ್ಥಾವನೆ ಸಲ್ಲಿಸಿದ್ದೇವೆ,ಪಿಎಲ್ ಡಿ ಬ್ಯಾಂಕ್ ನಂತೆ ಸಹಕಾರಿ ಬ್ಯಾಂಕ್ ನಲ್ಲೂ ಸಾಲನೀಡಲಾಗುವುದು,ತಿಪಟೂರಿಗೆ ಸಬ್ ಜೈಲ್ ಮುಂಜೂರಾಗಿತ್ತು 8ಕೋಟಿ ಅನುದಾನ ನೀಡಿದರು ಆದರೆ ಹಿಂದಿನ ಶಾಸಕರು ಪರಪ್ಪನ ಅಗ್ರಹಾರಕ್ಕೆ ಅನುದಾನ ತೆಗೆದುಕೊಂಡು ಹೋಗಲು ಬಿಟ್ಟುಕೊಟ್ಟ ಕಾರಣ ,ತಿಪಟೂರಿಗೆ ಜೈಲ್ ಇಲ್ಲದಾಗಿದ್ದೆ ಗೃಹಸಚಿವರು ಶೀಘ್ರದಲ್ಲೆ ಹಣ ಬಿಡುಗಡೆ ಮಾಡಬೇಕು, ಎಂದು ತಿಳಿಸಿದರು


ಕಾರ್ಯಕ್ರಮದಲ್ಲಿ ತುಮಕೂರು ಹಾಲು ಒಕ್ಕೂಟದ ಅಧ್ಯಕ್ಷ ವೆಂಕಟೇಶ್ ತುಮಕೂರು ಜಿಲ್ಲಾಧಿಕಾರಿ ಶುಭಾ ಕಲ್ಯಾಣ್, ಸಿಇಒ ಪ್ರಭು, ಎಸ್ಪಿ ಅಶೋಕ್,ತುಮುಲ್ ನಿರ್ದೇಶಕರಾದ ಮಾದಿಹಳ್ಳಿ ಪ್ರಕಾಶ್ ಕೃಷ್ಣಕುಮಾರ್,ಮಹಾಲಿಂಗಯ್ಯ,ಶಿವಪ್ರಕಾಶ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದರು

ವರದಿ :ಮಂಜುನಾಥ್ ಹಾಲ್ಕುರಿಕೆ

ಅಕಾಶವೇ ಹೊದಿಕೆ, ಭೂಮಿಯೇ ಹಾಸಿಕೆ ಕುಡಿಯಲು ನೀರಿಲ್ಲ, ಉಣ್ಣಲು,ಕೂಳಿಲ್ಲ, ತುತ್ತು ಅನ್ನಕ್ಕಾಗಿ,ಅಂಗಲಾಚುತ್ತಿರುವ ಅಲೆಮಾರಿಗಳು, ಅಲೆಮಾರಿಗಳ ದುಸ್ಥಿತಿಗೆ,ಮರುಕಪಟ್ಟು,ಸಾರ್ವಜನಿಕರು ನೆರವು ನೀಡಿದರೇ ಜಿಲ್ಲಾಡಳಿತ ಮಾತ್ರ ಕನಿಷ್ಟ ಮಾನವೀಯತೆ ತೋರದೆ ನಿರ್ಲಕ್ಷ್ಯ ಮಾಡಿರುವ ಘಟನೆ, ತುಮಕೂರು ಜಿಲ್ಲೆ ಚಿಕ್ಕನಾಯ್ಕನಹಳ್ಳಿ ತಾಲ್ಲೋಕಿನ ಹಂದನಕೆರೆ ಹೋಬಳಿ ಕುಪ್ಪೂರು ಗ್ರಾಮಪಂಚಾಯ್ತಿ ವ್ಯಾಪ್ತಿಯ ಗಾಂಧೀನಗರ ಕ್ರಾಸ್ ನಲ್ಲಿ (ಕೈ ಮರ) ನಡೆದಿದೆ.

, ಚಿಕ್ಕನಾಯ್ಕನಹಳ್ಳಿ ಗಾಂಧೀ ನಗರ ಕ್ರಾಸ್ ನಿಂದ (ಕೈ ಮರ)ಕಾಮಸಮುದ್ರಕ್ಕೆ ಹೋಗುವ ರಸ್ತೆಯಲ್ಲಿ ವಾಸವಾಗಿದ್ದ ಸುಮಾರು 15ಕ್ಕೂ ಹೆಚ್ಚು ಕೊರಚ ಜನಾಂಗದ ಅಲೆಮಾರಿ ಕುಟುಂಬಗಳು,ರಸ್ತೆ ಬದಿ ಜೋಪಡಿ ನಿರ್ಮಿಸಿಕೊಂಡು ವಾಸ ಮಾಡುತ್ತಿದ್ದರು,ಕೆಲವರು ಕೂದಲು ವ್ಯಾಪಾರ ಮಾಡಿದರೆ, ಕೆಲವರು ಹಂದಿ ಸಾಕಾಣಿಕೆ ಮಾಡಿಕೊಂಡು ಬಡತನದಲ್ಲಿ ನೆಮ್ಮದಿ ಜೀವನ ನಡೆಸುತ್ತಿದ್ದರು,ಆದರೆ ದಿನಾಂಕ 14 .03.2025ರಂದು ರಾತ್ರಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಸುಮಾರು14 ಗುಡಿಸಲುಗಳು ಸಂಪೂರ್ಣವಾಗಿ ಭಸ್ಮವಾಗಿವೆ, ಗುಡಿಸಲಿನಲ್ಲಿ ವ್ಯಾಪಾರಕ್ಕೆ ಇಟ್ಟಿದ ,ಹಣ, ದವಸಧಾನ್ಯ,ಪಾತ್ರೆ,ಪಡಗ,ಬಟ್ಟೆ ಬರೆ ಸಂಪೂರ್ಣ ಸುಟ್ಟು ಭಸ್ಮವಾಗಿದ್ದು, ಇಡೀ ಕುಟುಂಬಗಳ ಜೀವನ ಸಂಪೂರ್ಣ ಅಕ್ಷರ ಸಹ ನಾಶವಾಗಿದ್ದು, ಜೀವನ ಬೀದಿಗೆ ಬಿದ್ದಿದೆ,ಹುಡಲು ಬಟ್ಟೆಇಲ್ಲ. ತಿನ್ನಲು ಊಟವಿಲ್ಲ, ಹೆಂಗಸರು ಮಕ್ಕಳು,ತುತ್ತು ಅನ್ನಕ್ಕಾಗಿ ಆಹಾಕಾರ ಪಡುತ್ತಿದ್ದಾರೆ,ಮಾನವೀಯ ನೆಲೆಯಲ್ಲಿ ನಿರ್ಗತೀಕರಿಗೆ ಅನ್ನ ,ಆಶ್ರಯ ಸೂರು ನೀಡಬೇಕಾದ ಜಿಲ್ಲಾಡಳಿತ ಕನಿಷ್ಟ ನಿರಾಶ್ರೀತ ಕುಟುಂಬಗಳಿಗೆ ನೆರವೂ ನೀಡಿಲ್ಲ ಎಂದು ಸಾರ್ವಜನಿಕರುಆಕ್ರೋಶ ವ್ಯಕ್ತಪಡಿಸಿದ್ದಾರೆ

ಅಲೆಮಾರಿಗಳು ಗಡಿಸಲು ಬೆಂಕಿಗಾಹುತಿಯಾದ ಸ್ಥಳಕ್ಕೆ ದಲಿತ ಮುಖಂಡರ ಭೇಟಿ :

ಗಾಂಧೀನಗರ ಕ್ರಾಸ್ ಕೈಮರದ ಬಳಿ ಅಗ್ನಿ ಅವಘಡದಲ್ಲಿ ಗುಡಿಸಲು ಸುಟ್ಟು ಹೋಗಿರುವ ಸ್ಥಳಕ್ಕೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲ್ಲೋಕು ಸಂಚಾಲಕ ಜಕ್ಕನಹಳ್ಳಿ ಮೋಹನ್,ತಿಪಟೂರು ತಾಲ್ಲೋಕು ಕೊರಚ ಸಮಾಜದ ಅಧ್ಯಕ್ಷ ಮಾರನಗೆರೆ ಸತೀಶ್,ಉಪಾಧ್ಯಕ್ಷ ಮಂಜುನಾಥ್ ಸ್ಥಳಕ್ಕೆ ಭೇಟಿ ನೀಡಿ ನೊಂದಕುಟುಂಬಗಳಿಗೆ ಸಾಂತ್ವಾನ ಹೇಳಿದರು.

ಕೊರಚ ಸಮಾಜದ ಮುಖಂಡ ಸತೀಶ್ ಮಾತನಾಡಿ ಜಿಲ್ಲಾಡಳಿತಕ್ಕೆ ಕನಿಷ್ಠ ಮಾನವೀಯತೆ ಇಲ್ಲವಾಗಿದೆ ಬೆಂಕಿ ಅವಘಡದಲ್ಲಿ ಆಶ್ರಯ ಕಳೆದುಕೊಂಡ ಕುಟುಂಬಗಳು ತುತ್ತು ಊಟಕ್ಕೆ ಆಹಾಕಾರ ಪಡುತ್ತಿದೆ,ಮಾನವೀಯ ನೆಲೆಯಲ್ಲಿ ತುರ್ತಾಗಿ ಉಳಿದುಕೊಳ್ಳಲು ವ್ಯವಸ್ಥೆ ಕಲ್ಪಿಸಬೇಕು, ಹಾಗೂ ಸರ್ಕಾರ ಕೂಡಲೇ ಅಗತ್ಯ ಜಾಗ ಗುರ್ತಿಸಿ ನಿವೇಷನ ಮನೆ ಹಾಗೂ ಮೂಲಸೌಕರ್ಯ ನೀಡಬೇಕು,ಸರ್ಕಾರ ಅಗತ್ಯ ಸೌಲಭ್ಯ ನೀಡದಿದ್ದರೆ, ಚಿಕನಾಯ್ಕನಹಳ್ಳಿ ತಾಲ್ಲೋಕು ದಲಿತ ಸಂಘಟನೆಗಳು ಹಾಗೂ ಅಲೆಮಾರಿ ಸಂಘಟನೆಗಳು ಸೇರಿ ಉಗ್ರ ಹೋರಾಟ ನಡೆಸಲಾಗುವುದು ಎಂದರು ತಿಳಿಸಿದರು

ವರದಿ :ಮಂಜುನಾಥ್ ಹಾಲ್ಕುರಿಕೆ

ಅಕಾಶವೇ ಹೊದಿಕೆ, ಭೂಮಿಯೇ ಹಾಸಿಕೆ ಕುಡಿಯಲು ನೀರಿಲ್ಲ,ಉಣ್ಣಲು,ಕೂಳಿಲ್ಲ,ತುತ್ತುಅನ್ನಕ್ಕಾಗಿ,ಅಂಗಲಾಚುತ್ತಿರುವ ಅಲೆಮಾರಿಗಳು, ಅಲೆಮಾರಿಗಳ ದುಸ್ಥಿತಿಗೆ,ಮರುಕಪಟ್ಟು,ಸಾರ್ವಜನಿಕರು ನೆರವು ನೀಡಿದರೇ ಜಿಲ್ಲಾಡಳಿತ ಮಾತ್ರ ಕನಿಷ್ಟ ಮಾನವೀಯತೆ ತೋರದೆ ನಿರ್ಲಕ್ಷ್ಯ ಮಾಡಿರುವ ಘಟನೆ, ತುಮಕೂರು ಜಿಲ್ಲೆ ಚಿಕ್ಕನಾಯ್ಕನಹಳ್ಳಿ ತಾಲ್ಲೋಕಿನ ಹಂದನಕೆರೆ ಹೋಬಳಿ ಕುಪ್ಪೂರು ಗ್ರಾಮಪಂಚಾಯ್ತಿ ವ್ಯಾಪ್ತಿಯ ಗಾಂಧೀನಗರ ಕ್ರಾಸ್ ನಲ್ಲಿ (ಕೈಮರ)ನಡೆದಿದೆ,

ಚಿಕ್ಕನಾಯ್ಕನಹಳ್ಳಿ ಗಾಂಧೀ ನಗರ ಕ್ರಾಸ್ ನಿಂದ ಕೈ ಮರದಿಂದ ಕಾಮಸಮುದ್ರಕ್ಕೆ ಹೋಗುವ ರಸ್ತೆಯಲ್ಲಿ ವಾಸವಾಗಿದ್ದ ಸುಮಾರು 15ಕ್ಕೂ ಹೆಚ್ಚು ಕೊರಚ ಜನಾಂಗದ ಅಲೆಮಾರಿ ಕುಟುಂಬಗಳು ರಸ್ತೆ ಬದಿ ಜೋಪಡಿ ನಿರ್ಮಿಸಿಕೊಂಡು ವಾಸ ಮಾಡುತ್ತಿದ್ದರು,ಕೆಲವರು ಕೂದಲು ವ್ಯಾಪಾರ ಮಾಡಿದರೆ, ಕೆಲವರು ಹಂದಿ ಸಾಕಾಣಿಕೆ ಮಾಡಿಕೊಂಡು ಬಡತನದಲ್ಲಿ ನೆಮ್ಮದಿ ಜೀವನ ನಡೆಸುತ್ತಿದ್ದರು,ಆದರೆ ದಿನಾಂಕ 14 .03.2025ರಂದು ರಾತ್ರಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಸುಮಾರು14 ಗುಡಿಸಲುಗಳು ಸಂಪೂರ್ಣವಾಗಿ ಭಸ್ಮವಾಗಿವೆ, ಗುಡಿಸಲಿನಲ್ಲಿ ವ್ಯಾಪಾರಕ್ಕೆ ಇಟ್ಟಿದ ,ಹಣ, ದವಸಧಾನ್ಯ,ಪಾತ್ರೆ,ಪಡಗ,ಬಟ್ಟೆ ಬರೆ ಸಂಪೂರ್ಣ ಸುಟ್ಟು ಭಸ್ಮವಾಗಿದ್ದು, ಇಡೀ ಕುಟುಂಬಗಳ ಜೀವನ ಸಂಪೂರ್ಣ ಅಕ್ಷರ ಸಹ ನಾಶವಾಗಿದ್ದು, ಜೀವನ ಬೀದಿಗೆ ಬಿದ್ದಿದೆ,ಹುಡಲು ಬಟ್ಟೆಇಲ್ಲ. ತಿನ್ನಲು ಊಟವಿಲ್ಲ, ಹೆಂಗಸರು ಮಕ್ಕಳು,ತುತ್ತು ಅನ್ನಕ್ಕಾಗಿ ಆಹಾಕಾರ ಪಡುತ್ತಿದ್ದಾರೆ,

ಮಾನವೀಯ ನೆಲೆಯಲ್ಲಿ ನಿರ್ಗತೀಕರಿಗೆ ಅನ್ನ ,ಆಶ್ರಯ ಸೂರು ನೀಡಬೇಕಾದ ಜಿಲ್ಲಾಡಳಿತ ಕನಿಷ್ಟ ನಿರಾಶ್ರೀತ ಕುಟುಂಬಗಳಿಗೆ ನೆರವೂ ನೀಡಿಲ್ಲ ಎಂದು ಸಾರ್ವಜನಿಕರುಆಕ್ರೋಶ ವ್ಯಕ್ತಪಡಿಸಿದ್ದಾರೆ

ಅಲೆಮಾರಿಗಳು ಗಡಿಸಲು ಬೆಂಕಿಗಾಹುತಿಯಾದ ಸ್ಥಳಕ್ಕೆ ದಲಿತ ಮುಖಂಡರ ಭೇಟಿ :

ಗಾಂಧೀನಗರ ಕ್ರಾಸ್ ಕೈಮರದ ಬಳಿ ಅಗ್ನಿ ಅವಘಡದಲ್ಲಿ ಗುಡಿಸಲು ಸುಟ್ಟು ಹೋಗಿರುವ ಸ್ಥಳಕ್ಕೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲ್ಲೋಕು ಸಂಚಾಲಕ ಜಕ್ಕನಹಳ್ಳಿ ಮೋಹನ್,ತಿಪಟೂರು ತಾಲ್ಲೋಕು ಕೊರಚ ಸಮಾಜದ ಅಧ್ಯಕ್ಷ ಮಾರನಗೆರೆ ಸತೀಶ್,ಉಪಾಧ್ಯಕ್ಷ ಮಂಜುನಾಥ್ ಸ್ಥಳಕ್ಕೆ ಭೇಟಿ ನೀಡಿ ನೊಂದಕುಟುಂಬಗಳಿಗೆ ಸಾಂತ್ವಾನ ಹೇಳಿದರು.

ಕೊರಚ ಸಮಾಜದ ಮುಖಂಡ ಸತೀಶ್ ಮಾತನಾಡಿ ಜಿಲ್ಲಾಡಳಿತಕ್ಕೆ ಕನಿಷ್ಠ ಮಾನವೀಯತೆ ಇಲ್ಲವಾಗಿದೆ ಬೆಂಕಿ ಅವಘಡದಲ್ಲಿ ಆಶ್ರಯ ಕಳೆದುಕೊಂಡ ಕುಟುಂಬಗಳು ತುತ್ತು ಊಟಕ್ಕೆ ಆಹಾಕಾರ ಪಡುತ್ತಿದೆ,ಮಾನವೀಯ ನೆಲೆಯಲ್ಲಿ ತುರ್ತಾಗಿ ಉಳಿದುಕೊಳ್ಳಲು ವ್ಯವಸ್ಥೆ ಕಲ್ಪಿಸಬೇಕು, ಹಾಗೂ ಸರ್ಕಾರ ಕೂಡಲೇ ಅಗತ್ಯ ಜಾಗ ಗುರ್ತಿಸಿ ನಿವೇಷನ ಮನೆ ಹಾಗೂ ಮೂಲಸೌಕರ್ಯ ನೀಡಬೇಕು,ಸರ್ಕಾರ ಅಗತ್ಯ ಸೌಲಭ್ಯ ನೀಡದಿದ್ದರೆ, ಚಿಕನಾಯ್ಕನಹಳ್ಳಿ ತಾಲ್ಲೋಕು ದಲಿತ ಸಂಘಟನೆಗಳು ಹಾಗೂ ಅಲೆಮಾರಿ ಸಂಘಟನೆಗಳು ಸೇರಿ ಉಗ್ರ ಹೋರಾಟ ನಡೆಸಲಾಗುವುದು ಎಂದರು ತಿಳಿಸಿದರು

ವರದಿ :ಮಂಜುನಾಥ್ ಹಾಲ್ಕುರಿಕೆ

ತಿಪಟೂರು:ತಾಲ್ಲೋಕಿನ ರಂಗಾಪುರ ಗ್ರಾಮಪಂಚಾಯ್ತಿ ಮುಂಭಾಗ ಮಾರ್ಚ್ 20ರಂದು ಅಧ್ಯಕ್ಷರು ಹಾಗೂ ಪಿಡಿಒ ಮೇಲೆ ಆರೋಪಹೊರಿಸಿ ಪ್ರತಿಭಟನೆ ನಡೆಸಿರುವುದು ನಿರಾಧಾರವಾಗಿದ್ದು,ನಮ್ಮ ಗ್ರಾಮಪಂಚಾಯ್ತಿಯಲ್ಲಿ ಯಾವುದೇ ರೀತಿಯ ಅವ್ಯವಹಾರ ಕಳ್ಳತನ ನಡೆದಿಲ್ಲ,ಎಂದು ರಂಗಾಪುರ ಗ್ರಾಮಪಂಚಾಯ್ತಿ ಅಧ್ಯಕ್ಷ ವಿಶ್ವನಾಥ್ ತಿಳಿಸಿದರು


ನಗರದ ಖಾಸಗೀ ಹೋಟೆಲ್ ಪತ್ರಿಕಾ ಘೋಷ್ಠಿ ಉದೇಶಿಸಿ ಮಾತನಾಡಿದ ಅವರು ರಂಗಾಪುರ ಗ್ರಾಮಪಂಚಾಯ್ತಿಯಲ್ಲಿ ಯಾವುದೇ ಅಕ್ರಮ ಹಾಗೂ ಕಳ್ಳತನ ನಡೆದಿಲ್ಲ, ಸರ್ಕಾರದ ನಿಯಮದಂತೆ, ಗ್ರಾಮಪಂಚಾಯ್ತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗಬಾರದು,ಎನ್ನುವ ಕಾರಣಕ್ಕೆ ನಿರುಪಯುಕ್ತವಾಗಿ ಉಳಿದಿದ್ದ ಬೋರ್ವೆಲ್ ನಿಂದ ಮೋಟರ್ ತೆಗೆದು,ಮೀಸಲು ಇಡುವ ಉದೇಶದಿಂದ ಪಂಚಾಯ್ತಿ ಗುತ್ತಿಗೆದಾರನಿಂದ ಮೋಟರ್ ಎತ್ತಿಸಲಾಗಿತ್ತು, ಆದರೆ ಕೆಲವರು ಆಧಾರ ರಹಿತವಾಗಿ ಸುಳ್ಳು ಆರೋಪ ಮಾಡಿ,ಪ್ರತಿಭಟನೆ ಮಾಡಿರುವುದುಸರಿಯಲ್ಲ, ನಾವು ಪ್ರಮಾಣಿಕವಾಗಿ ಕೆಲಸ ಮಾಡಿತ್ತಿದ್ದೇವೆ,ಯಾವುದೇ ಕಳ್ಳತನ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು
ಬಿಜೆಪಿ ಮುಖಂಡ ಸುಗುಣೇಂದ್ರ ಪಾಟೀಲ್ ಮಾತನಾಡಿ ನಮ್ಮ ಗ್ರಾಮಪಂಚಾಯ್ತಿಯಲ್ಲಿ ಯಾವುದೇ ಕಳ್ಳತನ, ಅಧಿಕಾರ ದುರುಪಯೋಗ ನಡೆದಿಲ್ಲ, ಸುಳ್ಳು ಪ್ರತಿಭಟನೆ ನಡೆಸಿ ದೂರು ನೀಡಿರುವ ಬಗ್ಗೆ ತಾಲ್ಲೋಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿಗಳು ತನಿಖೆ ನಡೆಸುತ್ತಿದ್ದು, ಸತ್ಯಾಂಶ ಹೊರಬರಲಿದೆ,ರಾಜಕೀಯ ಪ್ರೇರಿತವಾಗಿ ಪ್ರತಿಭಟನೆ ನಡೆಸಿರುವುದು ಸರಿಯಲ್ಲ ಎಂದರು


ಪತ್ರಿಕಾ ಘೋಷ್ಠಿಯಲ್ಲಿ ವಿ.ಎಸ್ಎಸ್ಎನ್ ಅಧ್ಯಕ್ಷ ಕೆರೆಗೋಡಿ ದೇವರಾಜು, ಗ್ರಾಮಪಂಚಾಯ್ತಿ ಸದಸ್ಯರಾದ ಆನಂದಪ್ಪ,ಮಮತ,ಬಿಂದುಶ್ರೀ,ಇಂದ್ರಾಣಿ ದಯಾನಂದ್, ಮಾಜಿ ಅಧ್ಯಕ್ಷರಾದ ರೂಪ.ಮುಖಂಡರಾದ ಹರೀಶ್,ವಿಜಯ್ ಕುಮಾರ್,ಮುಂತ್ತಾದವರು ಉಪಸ್ಥಿತರಿದರು

ವರದಿ :ಮಂಜುನಾಥ್ ಹಾಲ್ಕುರಿಕೆ

ತಿಪಟೂರು ತಾಲ್ಲೋಕಿನ ಬಾಗುವಾಳ ಗೊಲ್ಲರಹಟ್ಟಿ ಗ್ರಾಮದಲ್ಲಿ ಹುಡುಗಿಯರನ್ನ ಚುಡಾಯಿಸಿದ ಪುಂಡನಿಗೆ ಬುದ್ದಿಹೇಳಿದವರಿಗೆ ಗಲಾಟೆ ಮಾಡಿ ಚಾಕುವಿನಿಂದ ಇರಿದಿರುವ ಘಟನೆ ನಡೆದಿದೆ,


ತಿಪಟೂರು ತಾಲ್ಲೋಕಿನ ಗುಂಡಿಗೊಂಡಹಳ್ಳಿ ಗ್ರಾಮದ ಕಾಂತರಾಜು ಎಂಬ ವ್ಯಕ್ತಿ ಬಾಗುವಾಳ ಗೊಲ್ಲರಹಟ್ಟಿ ಗ್ರಾಮದ ಹುಡುಗಿಯರನ್ನ ಅಸಭ್ಯವಾಗಿ ಚುಡಾಯಿಸಿದ್ದಾನೆ,ಗೊಲ್ಲರಹಟ್ಟಿ ಗ್ರಾಮಸ್ಥರು ಕಾಂತರಾಜುಗೆ ಬುದ್ದಿಹೇಳಿದ್ದಾರೆ, ಗ್ರಾಮಸ್ಥರ ಬುದ್ದಿ ಮಾತಿನಿಂದ ಕುಪಿತಗೊಂಡ ಕಾಂತರಾಜು ಗೊಲ್ಲರಹಟ್ಟಿ ಗ್ರಾಮದಲ್ಲಿ ಗಲಾಟೆ ಮಾಡಿ ಬಾಗುವಾಳ ಗೊಲ್ಲರಹಟ್ಟಿ ಗ್ರಾಮದ ಜಯಣ್ಣ 25ವರ್ಷ ಹಾಗೂ ನಟರಾಜು 24ವರ್ಷ ಇಬ್ಬರಿಗೆ ಚಾಕುವಿನಿಂದ ಇರಿದು ಹಲ್ಲೆ ಮಾಡಲಾಗಿದ್ದು, ಜಯಣ್ಣ ಎಂಬುವವರ ಸೊಂಟ್ಟದ ಭಾಗಕ್ಕೆ ಹಾಗೂ ನಟರಾಜು ಕೈಗೆ ಚಾಕು ಇರಿತಕೊಳ್ಳಗಾಗಿದ್ದು ತಕ್ಷಣ ಗಾಯಳುಗಳನ್ನ ತಿಪಟೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ

, ಹೊನ್ನವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಆರೋಪಿ ಕಾಂತರಾಜು ವನ್ನು ದಸ್ತಗಿರಿ ಮಾಡಿದ್ದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ

ವರದಿ :ಮಂಜುನಾಥ್ ಹಾಲ್ಕುರಿಕೆ

ತಿಪಟೂರು ರಾಗಿ ಕೇಂದ್ರ ಅಕ್ರಮವಾಗಿ ರೈತರಿಂದ 2.5 ಕೆ.ಟಿ ರಾಗಿಯನ್ನ ವಸೂಲಿ ಮಾಡಲಾಗುತ್ತಿದೆ, ಹಮಾಲಿ ಖರ್ಚು ಎಂದು ಅಕ್ರಮವಾಗಿ ಇಪ್ಪತ್ತು ರೂಪಾಯಿ ಸಂಗ್ರಹ ಮಾಡಲಾಗುತ್ತದೆ, ಎಂದು ರೈತರು ಆರೋಪಿಸಿದ್ದಾರೆ.


ಸರ್ಕಾರ ರೈತರಿಂದ ರಾಗಿ ಖರೀದಿ ಮಾಡಲು ಆದೇಶ ನೀಡಿ ಖರೀದಿ ಕೇಂದ್ರ ಪ್ರರಂಭವಾದಾಗಿನಿಂದ ಒಂದಿಲೊಂದು ಅಚಾರ್ತುದಲ್ಲಿಯೇ ನಡೆಯುತ್ತಿದೆ, ಆರಂಭದಲ್ಲಿ ತಿಪಟೂರು ಎಪಿಎಂಸಿ ಮಾರುಕಟ್ಟೆಯಲ್ಲಿಯ ವಿಸ್ತಾರವಾದ ಗೋದಾಮುಗಳು ಸುಸಜ್ಜಿತ ಬಿಲ್ಡಿಂಗ್ ಗಳು ಇದ್ದರು, ಖಾಸಗೀ ಬಿಲ್ಡಿಂಗ್ ಮಾಲೀಕರಿಂದ ಬಾಡಿಗೆ ಕಟ್ಟಡ ಪಡೆದು ಖರೀದಿ ಆರಂಭಿಸಿದರು,ಆದರೆ ಸಾರ್ವಜನಿಕರಿಂದ ಭಾರೀ ಅಕ್ಷೇಪ ವ್ಯಕ್ತವಾದ ಹಿನ್ನೆಲೆ ತಿಪಟೂರು ಎಪಿಎಂಸಿ ಆವರಣದಲ್ಲಿ ರಾಗಿಖರೀದಿ ಕೇಂದ್ರ ಆರಂಭಿಸಲಾಯಿತು,ಮತ್ತೆ ಹಮಾಲರು ಪ್ರತಿಭಟನ ನಡೆಸಿ ಖರೀದಿ ಸ್ಥಿಗಿತಗೊಳಿಸಲಾಯಿತು .ಎಪಿಎಂಸಿ ಆವರಣದಲ್ಲಿ ಸರ್ಕಾರಿ ವೇಬ್ರಡ್ಜ್ ಇದ್ದರು , ಖಾಸಗೀ ವೇಬ್ರಡ್ಜ್ ನಲ್ಲಿ ತೂಕ ಮಾಡಿಸಿ ನಂತರ ಮಾರಾಟ ಮಾಡಬೇಕ್ಕಾಗಿತ್ತು, ಲಕ್ಷಾಂತರ ರೂಪಾಯಿ ಖರ್ಚುಮಾಡಿ ಸರ್ಕಾರ ವೇಬ್ರಿಡ್ಜ್ ನಿರ್ಮಿಸಿದರೂ ಖಾಸಗೀ ಗೆ ವೇಬ್ರಡ್ಜ್ ಯಾಕೆ ಎಂದು ರೈತರು ಪ್ರಶ್ನೆ ಮಾಡಿದ ಕಾರಣ ನೆನ್ನೆಯಿಂದ ಎಪಿಎಂಸಿ ವೇ ಬ್ರಿಡ್ಜ್ ನಲ್ಲಿ ತೂಕ ಹಾಕಿಸಲಾಗುತ್ತಿದ್ದು, ರಾಗಿ ಮಾರಾಟ ಕೇಂದ್ರದಲ್ಲಿ ಮಾರಾಟಕ್ಕೆ ರಾಗಿ ತರುವ ರೈತರಿಂದ ಚೀಲಕ್ಕೆ ಒಂದು ಕೆ.ಜಿ580 ಗ್ರಾಂ ರಾಗಿ ತೆಗೆದುಕೊಳ್ಳುತ್ತಿದ್ದಾರೆ

ಎಂದು ರೈತರು ಆರೋಪಿಸಿದ್ದು, ಹಮಾಲರ ಖರ್ಚು ಎಂದು ಪ್ರತಿ ಚೀಲಕ್ಕೆ 20ರೂಪಾಯಿ ಯಂತೆ ಹಣ ಪೀಕಲಾಗುತ್ತದೆ, ಕಷ್ಟಪಟ್ಟು ರಾಗಿ ಬೆಳೆದಿರುವ ರೈತ,ರಾಗಿ ಖರೀದಿ ಕೇಂದ್ರದ ಅಧಿಕಾರಿಗಳ ಜೇಬು ತುಂಬಿಸುವ ಕೆಲಸ ಮಾಡಲಾಗುತ್ತಿದೆ. ಎಂದು ರೈತರು ಆರೋಪಿಸಿದ್ದಾರೆ, ತಿಪಟೂರು ನ್ಯಾಪೇಡ್ ಕೇಂದ್ರದಲ್ಲಿ ಪ್ರಸಕ್ತ ಸಾಲಿನಲ್ಲಿ ರಾಗಿ ಮಾರಾಟಕ್ಕೆ 9472ಜನ ರೈತರು,140049 ಕ್ವಿಂಟಲ್ ರಾಗಿ ಮಾರಾಟಕ್ಕೆ ಹೆಸರು ನೋಂದಣಿಯಾಗಿದೆ, ಹಾಲಿ 1159 ಜನ ರೈತರು 18988 ಕ್ವಿಂಟಲ್ ರಾಗಿ ಮಾರಾಟ ಮಾಡಲಾಗಿದೆ,

ಎಂದು ರೈತರು ಆರೋಪಿಸಿದ್ದು, ಅಂದಾಜಿನ ಪ್ರಕಾರ 140049 ಕ್ವಿಂಟಲ್ ರಾಗಿ ಖರೀದಿಯಾದರೆ 280098 ಎರಡು ಲಕ್ಷದ ಎಂಬತ್ತು ಸಾವಿರ ಕೆ.ಜಿ ರಾಗಿ ಅಕ್ರಮವಾಗಿ ರಾಗಿ ಯಂತೆ ಒಂದುಕೋಟಿ ಹದಿನೇಳು ಲಕ್ಷ ಅರವತ್ತ ನಾಲ್ಕು ಸಾವಿರ ರೂಪಾಯಿ ಖರೀದಿ ಕೇಂದ್ರದ ಅಧಿಕಾರಿಗಳ ಕಿಸೆಸೇರುತ್ತದೆ,ಹಮಾಲರ ಹೆಸರಿಗಳಲ್ಲಿ ಸಂಗ್ರಮ ಮಾಡುತ್ತಿರುವ ಹಣ ಕ್ವಿಂಟಲ್ ಗೆ ಇಪತ್ತು ರೂಪಾಯಿಯಂತೆ ಲೆಕ್ಕ ಹಾಕಿದರೂ ,ಐವತ್ತಾರು ಲಕ್ಷ ರೂಪಾಯಿ ಆಗುತ್ತದೆ, ಈ ಹಣ ಯಾವುದು ಸರ್ಕಾರದ ಲೆಕ್ಕಕ್ಕೆ ಸೇರೋದೆ ಇಲ್ಲ, ಅಧಿಕಾರಿಗಳಿಗೆ ಇಷ್ಟುಹಣ ವಾಮಮಾರ್ಗದಲ್ಲಿ ಸೇರುತ್ತದೆ ಎಂದು ಆರೋಪಿಸಿದ್ದು ಕೂಡಲೇ ಸರ್ಕಾರ ಹಾಗೂ ಜಿಲ್ಲಾಡಳಿತ ತನಿಖೆ ನಡೆಸಬೇಕು ಹಾಗೂ ವಾಮ ಮಾರ್ಗದಲ್ಲಿ ರೈತರ ಜೇಬಿಗೆ ಬೀಳುತ್ತಿರುವ ಕತ್ತರಿ ತಪ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.

ವರದಿ :ಮಂಜುನಾಥ್ ಹಾಲ್ಕುರಿಕೆ

ತಿಪಟೂರು : ಕುಡಿಯುವ ನೀರಿಗಾಗಿ ಅಳವಡಿಸಿರುವ ಮೋಟರ್ ಪಂಪ್ ಸೆಟ್‌ನ್ನು ಪಂಚಾಯತಿಯ ಪಿಡಿಓ ಹಾಗೂ ಸದಸ್ಯರ ಗಮನಕ್ಕೆ ಮಾಹಿತಿ ನೀಡದೆ ಏಕಾಏಕಿ ಮೋಟರ್ ಎತ್ತಿ ಮಾರಾಟ ಮಾಡಲು ಯತ್ನಿಸಲಾಗಿದೆ ಎಂದು ಆರೋಪಿಸಿ ಗ್ರಾಮಪಂಚಾಯ್ತಿ ಮುಂಭಾಗ ಪ್ರತಿಭಟನೆ ನಡೆಸಿರುವ ಘಟನೆ ನಡೆದಿದೆ.


ರಂಗಾಪುರ ಗ್ರಾಮಪಂಚಾಯ್ತಿ ವ್ಯಾಪ್ತಿಯಲ್ಲಿ ಮೋಟರ್ ಎತ್ತುವ ಕೆಲಸ ನಿರ್ವಹಿಸುತ್ತಿದ್ದ ಯತೀಶ್ ಎಂಬ ವ್ಯಕ್ತಿ ಏಕಾಏಕಿ ಯಾರಿಗೂ ಮಾಹಿತಿ ನೀಡದೆ ಮೋಟರ್ ಎತ್ತಿ ಸ್ಥಳಾಂತರ ಮಾಡಿದ್ದು, ಚೆನ್ನಾಗಿರುವ ಮೋಟರ್ ಎತ್ತುವ ಔಚಿತ್ಯವೇನು ,ಮಾರಾಟ ಮಾಡುವ ಉದೇಶದಿಂದ ಮೋಟರ್ ಎತ್ತಿ ಸ್ಥಳಾಂತರ ಮಾಡಲಾಗಿದೆ ಎಂದು ಪಂಚಾಯಿತಿ ವ್ಯಾಪ್ತಿಯ ಸದಸ್ಯರು ಹಾಗೂ ಗ್ರಾಮಸ್ಥರು ಪ್ರತಿಭಟನೆ ನಡೆಸಿ ಪಿಡಿಓ ಹಾಗೂ ಅಧ್ಯಕ್ಷರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಘಟನೆ ರಂಗಾಪುರ ಗ್ರಾಮ ಪಂಚಾಯತಿಯ ಎದುರು ಗುರುವಾರ ನಡೆಯಿತು.

ಪಂಚಾಯಿತಿ ವ್ಯಾಪ್ತಿಯ ಹೊಸಹಳ್ಳಿ ಗ್ರಾಮದಲ್ಲಿರುವ ಎರಡು ವರ್ಷಗಳಿಂದ ನಿಷ್ಕಿçಯವಾಗಿದ್ದ ಕುಡಿಯುವ ನೀರಿನ ಕೊಳವೆ ಬಾವಿಯ 15 ಹೆಚ್.ಪಿ ಮೋಟರ್ ಪಂಪ್ ಸೆಟ್, 41 ಜಿಐ ಪೈಪ್ ಹಾಗೂ 500ಮೀ ಕೇಬಲ್ ವೈರ್‌ನ್ನು ಮಾರ್ಚ್ 17ರಂದು ಸಂಜೆ 4 ಗಂಟೆಯ ಸಮಯದಲ್ಲಿ ವ್ಯಾಪ್ತಿಯ ಮೋಟರ್ ಎತ್ತುವ ವ್ಯಕ್ತಿ ಎತ್ತಿ ಬೇರೆ ಯಾವುದೇ ಕೊಳವೆ ಬಾವಿಗೆ ಸರಬರಾಜು ಮಾಡದೆ, ಮಾರಾಟ ಮಾಡಲು ಯತ್ನಿಸುತ್ತಿದ್ದ ಸಂದರ್ಭದಲ್ಲಿ ಗ್ರಾಮಸ್ಥರ ಮಾಹಿತಿಯಿಂದಾಗಿ ಸ್ಥಳೀಯ ಪಿಡಿಓಗೆ ತಿಳಿಸಲಾಗಿ, ಮತ್ತೆ ಅದೇ ಜಾಗಕ್ಕೆ ಮೋಟರ್ ಪಂಪ್ ಸೆಟ್ ಬಿಡಸಲಾಗಿದ್ದು ಈ ಪ್ರಕರಣ ಕುರಿತು ಸದಸ್ಯರು ಮತ್ತು ಸಾರ್ವಜನಿಕರು ರಂಗಾಪುರ ಗ್ರಾಮ ಪಂಚಾಯತಿ ಎದುರು ಅಧ್ಯಕ್ಷ ಹಾಗೂ ಪಿಡಿಓ ಮತ್ತು ಗ್ರಾಮಪಂಚಾಯ್ತಿ ಆಡಳಿತ ಮಂಡಳಿ ವಿರುದ್ಧ ಪ್ರತಿಭಟಿಸಿ ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ಧೇಶಕರಿಗೆ ಮನವಿ ಸಲ್ಲಿಸಲಾಯಿತು.

ಪಂಚಾಯಿತಿ ಸದಸ್ಯ ಜಯಣ್ಣ ಮಾತನಾಡಿ ಪಂಪ್ ಸೆಟ್ ಎತ್ತುವ ವಿಚಾರ ಸದಸ್ಯರ ಗಮನಕ್ಕೆ ಬಾರದೆ ಹಾಗು ಪಂಚಾಯಿತಿಯ ವಾಟ್ಸಪ್ ಗ್ರೂಪ್ ಗೆ ಮಾಹಿತಿ ನೀಡದೆ ಏಕಾಏಕಿ ಈ ಕೃತ್ಯವನ್ನು ಮಾಡಿದ್ದಾರೆ. ಇಲ್ಲಿ ಅಧ್ಯಕ್ಷ ಏಕಪಕ್ಷೀಯವಾಗಿ ವರ್ತಿಸುತ್ತಿದ್ದು, ಪಿಡಿಓ ಸದಸ್ಯರ ಗಮನಕ್ಕೆ ವಿಷಯಗಳನ್ನು ಬಹಿರಂಗಪಡಿಸದೆ ತೀರ್ಮಾನಗಳನ್ನು ತೆಗೆದುಕೊಂಡಿರುತ್ತಾರೆ. ಹೊಸಹಳ್ಳಿ ಗ್ರಾಮದ ಮೋಟರ್ ಪಂಪ್ ಸೆಟ್ ಬಗ್ಗೆ ತಾಲ್ಲೂಕು ಕಾರ್ಯನಿರ್ವಹಣಾಧಿಕಾರಿ ಸೂಕ್ತ ತನಿಖೆ ನಡೆಸಬೇಕು ಎಂದು ಒತ್ತಾಯ ಮಾಡಿದರು.

ಗ್ರಾ ಪಂ ಸದಸ್ಯ ಶಿವಶಂಕರ್ ಮಾತನಾಡಿ ಅಧಿಕಾರಿಗಳ ಇಲ್ಲದ ಸಮಯದಲ್ಲಿ ಮೋಟರ್ ಪಂಪ್‌ಗಳನ್ನು ಎತ್ತಿದ್ದು, ಯಾರು ಇಲ್ಲದ ಸಮಯದಲ್ಲಿ ಪಿಡಿಒ ಮತ್ತೆ ಬಿಡಲು ಹೇಳಿ, ತದ ನಂತರ ದಾಖಾಲೆಗೊಸ್ಕರ ಪದೇ ಪದೇ ಕೊಳವೆಬಾವಿ ಮೋಟರ್ ಬಿಟ್ಟಿದ್ದು ಸುಮ್ಮನೆ ಗ್ರಾ ಪಂ ಹಣವು ಸುಖಾಸುಮ್ಮನೆ ದುರೋಪಯೋಗ ಮಾಡಲಾಗಿದೆ, ಯಾವುದೇ ರಿಪೇರಿ ಮಾಡದೆ ಮತ್ತೆ ಅದೇ ಕೊಳವೆ ಬಾವಿಗೆ ಅಳವಡಿಸಲಾಗಿದೆ ಇದರ ಬಗ್ಗೆ ತನಿಖೆಯನ್ನು ಮಾಡಬೇಕು ಎಂದರು.

ಗ್ರಾ.ಪಂ ಸದಸ್ಯೆ ತ್ರಿವೇಣಿಸೀತಾರಾಮ್ ಮಾತನಾಡಿ ಮೋಟರ ಪಂಪ್‌ಸೆಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸಹಳ್ಳಿ ಗ್ರಾಮದ ಸದಸ್ಯೆನಾಗಿದ್ದರೂ ಸಹ ನಮ್ಮ ಗಮನಕ್ಕೆ ತಂದಿರುವುದಿಲ್ಲ. ಈ ವಿಚಾರವಾಗಿ ಪಿಡಿಒರವರಿಗೆ ದೂರವಾಣಿ ಮೂಲಕ ಸಂಪರ್ಕಸಿದರೂ ಸಹ ಉತ್ತರ ನೀಡುವುದಿಲ್ಲ ಪಿಡಿಒ ಏಕಾಏಕಿ ಗ್ರಾಮಕ್ಕೆ ತೆರಳಿ ಕಾಮಗಾರಿಗಳನ್ನು ಮಾಡುತ್ತಾರೆ ಇದರ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಕೆರಗೋಡಿ ಸಂತೋಷ್ ಮಾತನಾಡಿ ನಮ್ಮ ಗ್ರಾಮದಲ್ಲಿ ನಾಲ್ಕು ದಿನಕೊಮ್ಮೆ ನೀರು ಸರಬರಾಜು ಮಾಡಲಾಗುತ್ತಿದ್ದು ನೀರಿನ ಸಮಸ್ಯೆಯ ಬಗ್ಗೆ ಇನ್ನೂರು ಗ್ರಾಮಸ್ಥರ ಸಹಿಯೊಂದಿಗೆ ಪಿಡಿಒಗೆ ದೂರು ನೀಡಿದರೂ ಸಹ ಯಾವುದೇ ಕ್ರಮವನ್ನು ತೆಗೆದುಕೊಳ್ಳದೆ ಉದಾಸೀನ ತೋರಿದ್ದಾರೆ
ಪ್ರತಿಭಟನಾ ಸ್ಥಳಕ್ಕೆ ಸಹಾಯಕ ನಿರ್ಧೇಶಕ (ಗ್ರಾಮೀಣ ಉದ್ಯೋಗ )ಶಿವಕುಮಾರ್ ಆಗಮಿಸಿ ಪ್ರತಿಭಟನೆ ನಿರತರನ್ನು ಉದ್ದೇಶಿಸಿ ಮಾತನಾಡಿ ಮೋಟರ್ ಪಂಪ್ ಸೆಟ್ ವಿಚಾರವಾಗಿ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು.

ಧರಣಿಯಲ್ಲಿ ಗ್ರಾ.ಪಂ ಸದಸ್ಯರಾದ ನಟರಾಜ್, ಕೇಶವ ಹಾವೇನಹಳ್ಳಿ, ಶೇಖರ್ ಚಿಕ್ಕರಂಗಾಪುರ, ಕೃಷಿಕ ಸಮಾಜದ ನಿರ್ಧೇಶಕ ಬಸವರಾಜು, ಶ್ರೇಷ್ಟನಾಥ್‌ಸ್ವಾಮಿ, ಹೋಘನಗಟ್ಟ ಶಶಿವಧನ, ಶಂಕರಮೂರ್ತಿ, ವಸಂತ್ ಬಳ್ಳೆಕಟ್ಟೆ, ಗಂಗಾಧರ್ ಹೊಸಹಳ್ಳಿ, ಮೂರ್ತಿ, ಮನೋಹರ್. ಸತೀಶ್,
ಆನಂದ್, ಲೋಹಿತಾಶ್ವ, ಆಲದಹಳ್ಳಿ ಹರೀಶ್, ಯೋಗನಂದಸ್ವಾಮಿ, ಲೋಹಿತ್, ಕೆರಗೋಡಿ ನಿಂಗಪ್ಪ, ಮಂಜುನಾಥ್, ಸಚ್ಚಿದಾನಂದ, ಸೇರಿದಂತೆ ನೂರಾರು ಸಾರ್ವಜನಿಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ವರದಿ :ಮಂಜುನಾಥ್ ಹಾಲ್ಕುರಿಕೆ

ತಿಪಟೂರು ತಾಲ್ಲೋಕಿನ ಹೊನ್ನವಳ್ಳಿ ಹೋಬಳಿ ಘಟಕಿನಕೆರೆ ಜಾತ್ರೆಯಲ್ಲಿ ಪೊಲೀಸ್ ಇಲಾಖೆಯಿಂದ ಜೂಜು ಆಡಿಸಲು ಅನುಮತಿ ಪಡೆದಿದ್ದೇವೆ ಅಂದು ಊರಿನಾಚೆ ತೋಟದಲ್ಲಿ ಇಸ್ಪೀಟ್ ಆಡಿಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಹೊನ್ನವಳ್ಳಿ ಪೊಲೀಸರು ದಾಳಿ ನಡೆಸಿದ್ದು, ಪೊಲೀಸರನ್ನ ಕಂಡ ತಕ್ಷಣ ನಮ್ಮ ಊರಿನ ಜಾತ್ರೆ ನಮ್ಮ ಇಷ್ಟವೆಂದು ಗಲಾಟೆ ಮಾಡಿದ್ದು, ಮಪ್ತಿಯಲ್ಲಿದ್ದ ಪೊಲೀಸ್ ಸಿಬ್ಬಂದಿ ಸೇರಿದಂತೆ ಪೊಲೀಸರ ಮೇಲೆ ಗಲಾಟೆ ಮಾಡಿ, ಹಲ್ಲೇ ನಡೆಸಿದ್ದಾರೆ

.ತಕ್ಷಣ ಹೊನ್ನವಳ್ಳಿ ಸಬ್ ಇಸ್ಪೆಕ್ಟರ್ ರಾಜೇಶ್ ಹಾಗೂ ಸಿಬ್ಬಂದಿ ಗಾಯಗೊಂಡ ಸಿಬ್ಬಂದಿಯನ್ನ ಆಸ್ಪತ್ರೆಗೆ ದಾಖಲಿಸಿದ್ದಾರೆ, ಚಿಕಿತ್ಸೆ ಪಡೆಯುತ್ತಿದ್ದು, ಇಬ್ಬರು ಆರೋಪಿಗಳನ್ನ ಬಂಧಿಸಿ ಪ್ರಕರಣ ದಾಖಲಿಸಲಾಗಿದ್ದು, 13ಜನ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.

error: Content is protected !!