ಕಷ್ಟದ ಅನುಭವ ಇರುವವರು ಮಾತ್ರ ಕಷ್ಟದಲ್ಲಿ ಇರುವವರಿಗೆ ಸ್ವಂದಿಸಲು ಸಾಧ್ಯ,ನೊಂದವರ ಸಮಸ್ಯೆಗೆ ತಮ್ಮ ಕೈಲಾದ ಸೇವೆ ಮಾಡಿದರೆ ಹೆಚ್ಚು ಆತ್ಮತೃಪ್ತಿ ದೊರೆಯುತ್ತದೆ,ಕಷ್ಟದಲ್ಲಿ ಇರುವ ಮನುಷ್ಯ ಸಹಾಯದೊರೆತ್ತಾಗ ಮಾಡುವ ನಮಸ್ಕಾರ ಹಾಗೂ ಅವನ ನಗು ಸಾವಿರ ಸನ್ಮಾನಕ್ಕೆ ಸಮನಾಗುತ್ತದೆ ಎಂದು ಖ್ಯಾತ ವೈದ್ಯರು ಹಾಗೂ ಕುಮಾರ್ ಆಸ್ಪತ್ರೆ ಅಡಳಿತಾಧಿರಿಗಳಾದ ಕಲ್ಪತರು ರತ್ನ ಡಾ//ಶ್ರೀಧರ್ ಅಭಿಪ್ರಾಯಪಟ್ಟರು

ಡಾ//ಶ್ರೀಧರ್ ರವರಿಗೆ ನಗರದ ನಮ್ರತಾ ಅಯಿಲ್ ರಿಫೈನರಿ ಪ್ರವೈಟ್ ಲಿಮಿಡೆಟ್ ವತಿಯಿಂದ ಆಯೋಜಿಸಿದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ//ಶ್ರೀಧರ್ ರವರು ನಾವೂ ಗಳಿಸಿದ ಹಣದಲ್ಲಿ ಸ್ಪಲ್ಪಭಾಗವನ್ನ ಸಮಾಜಕ್ಕೆ ವಿನಿಯೋಗಿಸುವ ಮನಸ್ಥಿತಿ ಬೆಳಸಿಕೊಳ್ಳಬೇಕು,ಕಷ್ಟದಲ್ಲಿ ಇರುವ ಮನಷ್ಯನಿಗೆ ಸಹಾಯ ಮಾಡಿದರೆ,ಹೆಚ್ಚು ತೃಪ್ತಿದೊರೆಯುತ್ತದೆ, ನಾವೂ ಮಾಡುವ ಕೆಲಸ ಪ್ರಾಮಾಣಿಕವಾಗಿದ್ದರೆ, ಸಮಾಜ ನಮ್ಮಜೊತೆ ಇರುತ್ತದೆ ,ನಾನು ಹಲವಾರು ಸಮಾಜಮುಖಿ ಕೆಲಸಗಳಿಗೆ ಮುಂದಾದಗ,ಹಲವಾರು ಜನ ಕೈ ಜೊಡಿಸಿದ್ದಾರೆ, ಅಂತಹ ಸಹೃದಯರಲ್ಲಿ ನಮ್ರತಾ ಆಯಿಲ್ ರಿಫೈನರಿ ಮಾಲೀಕರಾದ ಶಿವಪ್ರಸಾದ್ ಹಾಗೂ ಡಾ//ವಿವೇಚನ್ ಕೂಡ ಯಾವಾಗಲೂ ನಮ್ಮ ಜೊತೆಗಿರುತ್ತಾರೆ,ಕೋವಿಡ್ ಸಂಕಷ್ಟದ ಸಮಯದಲ್ಲಿ ನಮ್ಮ ಆಸ್ಪತ್ರೆಯಲ್ಲಿ ರೋಗಿಗಳಿಗೆ ಅನುಕೂಲವಾಗುವಂತೆ ಆಕ್ಸಿಜನ್ ಪ್ಲಾಂಟ್ ಹಾಕಲು ಹೊರಟಾಗ ಎಷ್ಟೊ ಜನ ನನಗೆ ಅರಿವಿಲ್ಲದಂತೆ ಕೈ ಜೋಡಿಸಿದರು, ರಾಜ್ಯದಲ್ಲಿಯೇ ಖಾಸಗೀ ಆಸ್ಪತ್ರೆ ಸಂಕಷ್ಟ ಸಮಯದಲ್ಲಿ ಆಕ್ಸಿಜನ್ ಪ್ಲಾಂಟ್ ಮಾಡಿ ರೋಗಿಗಳ ಆರೈಕೆ ಮಾಡಿದೆ,ಎನ್ನ ಬಹುದು,ನಾವೂ ಯಾವುದೇ ಪ್ರತಿಫಲಾಫೇಕ್ಷೆ ಇಲ್ಲದೆ ಕೆಲಸ ಮಾಡಿದರೆ ಜನ ನಮ್ಮೊಂದಿಗೆ ಇರುತ್ತಾರೆ, ತೋರಿಕೆಗಾಗಿ ಮಾಡುವ ಸೇವೆ ಜಾಸ್ತಿದಿನ ಉಳಿಯುವುದಿಲ್ಲ,ಪ್ರಾಮಾಣಿಕ ಸೇವೆ ದೇವರ ಕೆಲಸವಿದ್ದಂತೆ ಎಂದು ತಿಳಿಸಿದರು.
ನಮ್ರತಾ ಆಯಿಲ್ ರಿಫೈನರಿ ಮಾಲೀಕರಾದ ಶಿವಪ್ರಸಾದ್ ಮಾತನಾಡಿ ಡಾ//ಶ್ರೀಧರ್ ರವರಿಗೆ ಜೀ ಕನ್ನಡ ಪ್ರಶಸ್ತಿ ದೊರೆತ್ತಿರುವುದು , ತಾಲ್ಲೋಕಿನ ಹೆಮ್ಮಯ ವಿಷಯವಾಗಿದೆ,ಅವರ ಸಮಾಜಮುಖಿ ಸೇವಾಕಾರ್ಯಗಳು ಸದಾ ಅವಿಸ್ಮರಣೀಯ, ಹಾಗೂ ಅನುಕರಣೀಯವಾಗಿವೆ,ಅವರ ಜೊತೆ,ಸ್ನೇಹಿತರಾಗಿ,ಜನಸೇವೆಮಾಡುವಅವಕಾಶದೊರೆತಿರುವುದು,ಸಂತೋಷದ ವಿಚಾರವಾಗಿದೆ.ದೇವರು ಅವರಿಗೆ ಹೆಚ್ಚಿನ ಶಕ್ತಿ ನೀಡಲಿ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ ಡಾ//ಜಿ.ಬಿ ವಿವೇಚನ್ ಮಾತನಾಡಿ ವಯುಕ್ತಿಕ ಕೆಲಸಗಳ ಒತ್ತಡದ ಜೊತೆ ಡಾ//ಶ್ರೀಧರ್ ಸಮಾಜದ ಬಗ್ಗೆ ಹೆಚ್ಚು ಕಳಕಳಿ ಹೊಂದಿದ್ದಾರೆ,ಆಸ್ಪತ್ರೆಯಲ್ಲಿ ರೋಗಿಗಳ ಆರೈಕೆ ಹಾಗೂ ಚಿಕಿತ್ಸೆಜೊತೆ,ತೊಂದರೆಯಲ್ಲಿ ಇರುವ ಜನರಿಗೂ ಕೈಲಾದ ಸಹಾಯ ಮಾಡುತ್ತಿದ್ದಾರೆ,ಪ್ರತಿಫಲಾಫೇಕ್ಷೆ ಇಲ್ಲದೆ ಸಮಾಜದ ಬಗ್ಗೆ ಕಾಳಜಿಯಿಂದ ಮಾಡುವ ಸೇವೆ,ಆತ್ಮತೃಪ್ತಿಯ ಕೆಲಸ ಎಂದು ಮಾಡುತ್ತಿದ್ದು, ಜನಸೇವೆಯಲ್ಲಿಯೇ ಹೆಚ್ಚು ಸಂತೋಷಪಡೆಯುತ್ತಿದ್ದಾರೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ನಮ್ರತಾ ಆಯಿಲ್ ರಿಫೈನರಿ ಸಿಬ್ಬಂದಿ ಹಾಗೂ ಕಲಾಕೃತಿ ಸದಸ್ಯರು ಉಪಸ್ಥಿತರಿದರು
ವರದಿ:ಮಂಜುನಾಥ್ ಹಾಲ್ಕುರಿಕೆ