Year: 2025

ಈ ವರ್ಷದ ಆರಂಭದಲ್ಲಿ ಬಿಡುಗಡೆಗೊಂಡಿರುವ ಈ ಪುಸ್ತಕ ಓದುಗರ ವಲಯದಲ್ಲಿ ಹೊಸ ಅಲೆಯನ್ನು ಎಬ್ಬಿಸುತ್ತಿದೆ. ಏಕೆಂದರೆ ಈ ಪುಸ್ತಕದ ವಿಶೇಷತೆ
ಯೌವ್ವನದ ಹೊಳೆಯನ್ನು ದಾಟಿ ಬಂದಿರುವ ಇಂದಿನ ಪೋಷಕರಿಗೆ… ಇಂದು ಆ ಹೊಳೆಯಲ್ಲಿ ಈಜುತ್ತಿರುವ ನಾಳೆಯ ಪೋಷಕರಿಗೆ ಇಬ್ಬರಿಗೂ ಮುಕ್ತವಾಗಿ ಅವರವರ ಪ್ರಶ್ನೆಗಳು ಹಾಗೂ ಅವುಗಳಿಗೆ ಉತ್ತರಗಳನ್ನು ತೆರೆದಿಡುತ್ತದೆ. ‘ಕಡ್ಡಾಯವಾಗಿ ಪೋಷಕರಿಗೆ ಮಾತ್ರ!’ ಈ ಕೃತಿಯ ಶೀರ್ಷಿಕೆ ಕೇಳಿಯೇ, ಒಂದಷ್ಟು ಮಂದಿಗೆ ಇದೇನೋ ವಿಶೇಷವಾಗಿದೆ ಅನಿಸಿದರೆ ಮತ್ತೆ ಕೆಲವರಿಗೆ ಇದೆಂತಾ ಶಿರೋನಾಮ ಅಂತನಿಸಿರುತ್ತದೆ. ವಾಸ್ತವಕ್ಕೆ, ಇದು ಕಡ್ಡಾಯವಾಗಿ ಪ್ರತಿಯೊಬ್ಬರು ಓದಲೇಬೇಕಾದ ಪುಸ್ತಕವಾಗಿದೆ

ಈ ಪುಸ್ತಕದ ವಿಶೇಷತೆ ಏನು?

ಬೆಳೆದು ನಿಂತ ಮಕ್ಕಳ ಸ್ವಾತಂತ್ರ್ಯ Vs ಪೋಷಕರೆಂಬ ಅಡ್ಡಗೋಡೆಗಳ ಮಧ್ಯೆ ಪ್ರತಿಯೊಬ್ಬರ ಜೀವನವನ್ನು ಈ ಪುಸ್ತಕ ವಿಶ್ಲೇಷಿಸುತ್ತದೆ. ಮಕ್ಕಳು ಬೆಳದಂತೆ ಒಂದೆಡೆ ಆನಂದ ಇನ್ನೊಂದು ಕಡೆ ಪೋಷಕರಾಗಿ ನಿಮಗೊಂದು ಸಹಜ ಆತಂಕ. ನಿಮಗೆ ಅವರುಗಳ ಮೇಲೆ ಅಪಾರವಾದ ಪ್ರೀತಿ-ಪ್ರೇಮ, ಅನುರಾಗ, ಬಾಂಧವ್ಯ ಜೊತೆಗೆ ಅವರುಗಳಿಗಿಂತ, ಅವರುಗಳ ಜೀವನದ ಬಗ್ಗೆ ನಿಮ್ಮಲ್ಲಿ ಅನೇಕ ತರದ ಕನಸುಗಳಿವೆ. ಎಷ್ಟೇ ಆಗಲಿ ನೀವು ಅವರಿಗೆ ತಂದೆ- ತಾಯಿಗಳು!

ನಿಮಗಿರುವ ಭಯ, ಆತಂಕವೆಲ್ಲ ಈಗ ಅವರು ಹದಿಹರೆಯಕ್ಕೆ ಬಂದಿದ್ದಾರೆ, ಯೌವ್ವನದ ಹೊಳೆಯಲ್ಲಿ ಈಜಲೆಂದು ಧುಮುಕಿದ್ದಾರೆ. ‘ಅದ್ಹೇಗೆ ಈಜಿ, ಸುಲಭವಾಗಿ ಅದರಿಂದ ಹೊರಬರ್ತಾರೆ’ ಎಂಬ ಸಹಜವಾದ ಆತಂಕ ನಿಮ್ಮಗಳದು. ಯೌವ್ವನದ ಹೊಳೆಯಲ್ಲಿ ಪ್ರಾಯದ ಬದುಕು ಕೊಚ್ಚಿ ಹೋಗುವುದು ಅಂತ ಕಷ್ಟಕರವಾದ ಸಂಗತಿ ಏನಲ್ಲ. ವಾಸ್ತವಕ್ಕೆ, ನಿಜಕ್ಕೂ ಕಷ್ಟಕರವಾದದ್ದು ಪ್ರಾಯವನ್ನು ಕಾಪಾಡಿಕೊಂಡು ಪ್ರಬುದ್ಧರಾಗಿ ಬೆಳೆದು ಬದುಕನ್ನು ಕಟ್ಟಿಕೊಳ್ಳುವುದು. ಹದಿಹರೆಯವೆಂದರೆ ದಾರಿ ತಪ್ಪುವ ದಿನಗಳು. ನಿಮ್ಮಲ್ಲಿ ಕೂಡ ಅನೇಕ ಪೋಷಕರು ಆ ವಯಸ್ಸಿನಲ್ಲಿ ದಾರಿ ತಪ್ಪಿದವರೇ, ನಂತರದ ಸಮಯದಲ್ಲಿ ದಿಕ್ಕು ತಪ್ಪಿಸಿದ್ದ ಯೌವ್ವನವನ್ನು, ಆ ಹೊಳೆಯನ್ನು ದಾಟಿ ವಯಸ್ಕರಾದ (25 ವರ್ಷ) ನಂತರ ಪ್ರಾಯಕ್ಕೆ ಅಂತಿಮ ಪ್ರಣಾಮಗಳನ್ನು ಸಲ್ಲಿಸಿ, ಸಂಪಾದನೆಗೆ ಅಡಿಪಾಯವನ್ನು ಹಾಕಿಕೊಂಡು, ಬದುಕಿಗೊಂದು ಸರಿಯಾದ ಮಾರ್ಗವನ್ನು ಆಯ್ಕೆ ಮಾಡಿಕೊಂಡು ಬದಲಾಗಿರುತ್ತೀರಿ.

ಈಗ ಪೋಷಕರಾಗಿ ನಿಮಗಿರುವ ಆತಂಕವೆಲ್ಲ, ‘ಎಲ್ಲಿ ನಮ್ಮ ಮಕ್ಕಳು ದಾರಿ ತಪ್ಪಿ ಹೋಗುತ್ತಾರೋ,’ ಹಿಂದೆ
ಇದೇ ಭಯ-ಆತಂಕ ನಿಮ್ಮಗಳ ವಿಷಯದಲ್ಲಿ ನಿಮ್ಮ ಪೋಷಕರಿಗೂ ಸಹ ಇತ್ತು. ಹದಿಹರೆಯದ ಕಾಲವನ್ನು ದಾಟಿಕೊಂಡು ಗೌರವಪೂರ್ವಕವಾದ ಬದುಕನ್ನು ಕಟ್ಟಿಕೊಂಡು ಜೀವನ ನಡೆಸುತ್ತಿರುವ ನಿಮಗೆ ನಿಮ್ಮಂತೆ ಅಥವಾ ನಿಮಗಿಂತ ಎತ್ತರದ ಸ್ಥಾನದಲ್ಲಿ ನಿಮ್ಮ ಮಕ್ಕಳನ್ನು ಕಾಣಬೇಕೆಂಬ ಬಯಕೆ ಸಹಜವಾದದ್ದು. ನಿಮ್ಮಗಳ ವಿಷಯದಲ್ಲಿ ನಿಮ್ಮ ಪೋಷಕರಿಗಿದ್ದ ಆತಂಕವೇ, ಈಗ ನಿಮ್ಮ ಮಕ್ಕಳ ವಿಷಯದಲ್ಲಿ ನಿಮಗೂ ಸಹ ಇರುವಂತದ್ದು. ಆ ಆತಂಕಗಳಿಗೆ ಕಾರಣಗಳು ಹಲವು ಇರಬಹುದು.

ತುಂಬಾ ಮಂದಿ; ಮಕ್ಕಳು ಪ್ರಾಯಕ್ಕೆ ಬರುವುದೇ ತಡ, ‘ಮಕ್ಕಳ ಜೊತೆ ಕ್ಲೋಸ್ ಆಗಿರಬೇಕು, ಸ್ನೇಹಿತರಾಗಬೇಕು’ ಅಂತೆಲ್ಲ ಹೇಳುತ್ತಾರೆ. ಒಬ್ಬ ತಂದೆ ಅಥವಾ ತಾಯಿಯಾಗಿ ನೀವು ಮಾಡಬಹುದಾದ ಅತಿ ದೊಡ್ಡ ತಪ್ಪು ನಿಮ್ಮ ಮಕ್ಕಳಿಗೆ ಸ್ನೇಹಿತರಾಗಲು ಹೊರಡುವುದು. ಯಾವ ಮಗ ಅಥವಾ ಮಗಳು ನಿಮ್ಮನ್ನು ಫ್ರೆಂಡ್ ಆಗುವಂತೆ ಕೇಳಿಕೊಳ್ಳುವುದಿಲ್ಲ. ಅದರಲ್ಲೂ ಪ್ರಾಯದಲ್ಲಿರುವ ಅವರುಗಳಿಗೆ ಮುಕ್ತವಾದ ಭಾವನಾತ್ಮಕ ಪ್ರಪಂಚ ಬೇಕಿರುತ್ತದೆ. ಅವರಿಗೆ ಅವರ ವಯಸ್ಸಿನ ಆಲೋಚನೆಗಳಿಗೆ ತಕ್ಕಂತೆ ಸ್ನೇಹಿತರ ಗುಂಪು ಇರುತ್ತದೆ. ಅವರಿಗೆ ಜೀವನದಲ್ಲಿ ಸ್ನೇಹಿತರಾಗಲು ತುಂಬಾ ಮಂದಿ ಇದ್ದಾರೆ. ಪೋಷಕರಾಗಲು ನಿಮ್ಮನ್ನು ಬಿಟ್ಟು ಬೇರೆ ಯಾರಿದ್ದಾರೆ? ನಿಮಗೆ ತಾನೆ ಅವರನ್ನು ಬಿಟ್ಟು ಬೇರೆ ಮಕ್ಕಳು ಅಂತ ಯಾರಿದ್ದಾರೆ?

‘ಅಪ್ಪ-ಅಮ್ಮ’ ಎಂದರೆ ಮಕ್ಕಳ ಜೀವನದಲ್ಲಿ ಎರಡು ನಿರ್ಣಯಾಧಿಕಾರ ಕೇಂದ್ರಗಳು. ಹೀಗಾಗಿಯೇ ಬಹುತೇಕ ಅವರ ಬದುಕಿನ ನಿರ್ಣಯಗಳನ್ನು ನೀವುಗಳೇ ನಿರ್ಣಯಿಸುತ್ತೀರಿ ಮತ್ತವರು ಅದನ್ನು ಪಾಲಿಸುತ್ತಾರೆ.
ಹಾಗೆ ಅವರು ಪಾಲಿಸಲಿಕ್ಕೆ ಬಹು ಮುಖ್ಯ ಕಾರಣಗಳೆಂದರೆ, ಅವರುಗಳಿಗೆ ನಿಮ್ಮನ್ನು ಕಂಡರೆ ‘ಭಯ- ಪ್ರೀತಿ ಮತ್ತು ಗೌರವ’ ಗಳಿದೆ!. ಆದರೆ, ಸ್ನೇಹಿತರಾಗುವ ಮೂಲಕ ಈ ಮೂರನ್ನು ಯಾಕೆ ಕಳೆದುಕೊಳ್ಳಲು ಇಚ್ಚಿಸುತ್ತೀರಿ?. ಅವರಿಗೆ ಪ್ರೌಢಾವಸ್ಥೆಯಲ್ಲಿ ಬೇಕಿರುವುದು ನಿಮ್ಮ ಸ್ನೇಹವಲ್ಲ, ಬದಲಾಗಿ ಸರಿಯಾದ ನಿಮ್ಮ ಮಾರ್ಗದರ್ಶನ. ಅವರ ಭವಿಷ್ಯದ ಕನಸುಗಳಿಗೆ ನಿಮ್ಮ ಸಹಕಾರ. ಪೋಷಕರಾಗಿ ನಿಮ್ಮ ಆದ್ಯತೆಗಳು, ಟೀನೇಜರ್ ಗಳಾದ ಅವರ
ಆಸೆ, ಆಕಾಂಕ್ಷೆ, ಬಯಕೆಗಳು ಉತ್ತರ- ದಕ್ಷಿಣಾಭಿಮುಖವಾಗಿರುತ್ತವೆ. ಒಂದಷ್ಟು ಸಮಯದಲ್ಲಿ ಎರಡು ಹೊಂದಾಣಿಕೆ ಆಗಬಹುದು, ಆದರೆ ಬಹುತೇಕ ಸಂದರ್ಭಗಳಲ್ಲಿ ಒಂದು ಇನ್ನೊಂದಕ್ಕೆ ತದ್ವಿರುದ್ಧವಾಗಿರುತ್ತದೆ.

ಬೆಳೆದು ನಿಂತ ಮಕ್ಕಳ ವಿಷಯದಲ್ಲಿ, ಅವರುಗಳ ಮುಂದಿನ ಭವಿಷ್ಯದ ಸಂಗತಿಗಳಲ್ಲಿ ಪೋಷಕರಾದ ನಿಮಗೆ ತಾಳ್ಮೆ- ಸಂಯಮ ಬಹಳಷ್ಟು ಬೇಕಿರುತ್ತದೆ. ಮಕ್ಕಳು ದುಡಿಕಿ ತಪ್ಪು ಮಾಡಬಹುದು, ಆದರೆ ಪೋಷಕರಾದ ನೀವುಗಳು ಯಾವುದೇ ಕಾರಣಕ್ಕೂ ಸಹ ದುಡುಕಬಾರದು. ದುಡಿಕಿ ಮಕ್ಕಳು ಮಾಡುವ ತಪ್ಪನ್ನೇ ನೀವು ಮಾಡುವುದಾದರೆ ಅವರಿಗೂ ನಿಮಗೂ ಯಾವುದೇ ವ್ಯತ್ಯಾಸ ಉಳಿಯುವುದಿಲ್ಲ. ಹೌದು ಕಾಲೇಜು ಹಂತದಲ್ಲಿ ಅವರ ಆಯ್ಕೆಯ ಕೋರ್ಸ್ ಅಥವಾ ಇತರ ಚಟುವಟಿಕೆಗಳಲ್ಲಿ ಅವರು ಗೊಂದಲಕ್ಕೆ ಒಳಗಾಗಿರಬಹುದು, ದುಡುಕಿ ನಿರ್ಣಯಕ್ಕೆ ಸಹ ಬಂದು ಬಿಟ್ಟಿರಬಹುದು. ಅದು ಸರಿಯೋ…ತಪ್ಪೋ… ಎಂಬುದನ್ನು ಪಕ್ಕಕ್ಕಿಟ್ಟು ಎದುರಾಗುವ ಸಮಸ್ಯೆಯನ್ನು ಹೇಗೆ ಸಮಾಧಾನ ಚಿತ್ತರಾಗಿ ಬಗೆಹರಿಸಬೇಕೆಂದು ಪೋಷಕರಾದ ನೀವು ಆಲೋಚಿಸಬೇಕಾಗುತ್ತದೆ.

ಅಷ್ಟೇ ಹೊರತು ‘ನಿನಗೇನು ಗೊತ್ತಾಗಲ್ಲ, ನಾನ್ ಹೇಳಿದ್ದನ್ನೇ ಮಾಡು ‘ ಅಂತೇಳಿ ಸಿಂಹ, ಜಿಂಕೆಯ ಮೇಲೆ ಎರಗಿ ಬೀಳುವಂತೆ, ಮಕ್ಕಳ ಮೇಲೆ ಎರಗಿ ಬೀಳಬೇಡಿ. ನಿಮ್ಮ ತಂದೆ-ತಾಯಿಗಳಿಗಿಂತ ನಿಮಗೆ ತುಂಬಾ ವಿಷಯಗಳು ಗೊತ್ತಿತ್ತು. ಅವರ ಕಾಲಕ್ಕೆ ನೀವು ಆಧುನಿಕರು. ಈಗ ನಿಮ್ಮ ಕಾಲಕ್ಕೆ ನಿಮ್ಮ ಮಕ್ಕಳು ನಿಮಗಿಂತ ತುಂಬಾ ವಿಷಯಗಳನ್ನು ತಿಳಿದುಕೊಂಡಿದ್ದಾರೆ. ನಿಮಗಿಂತ ಹೆಚ್ಚು ಆಧುನಿಕರಾಗಿದ್ದಾರೆ. ಅವರನ್ನು ನೀವು ಅಪಾರವಾಗಿ ಪ್ರೀತಿಸುತ್ತೀರಿ, ಅಂದಮೇಲೆ ಅವರ ಅಭಿಪ್ರಾಯಕ್ಕೊಂದು ಗೌರವ ಮತ್ತು ಮನ್ನಣೆ ನೀಡಿ. ‘ನಾವುಗಳೇ ಸರಿ, ನೀವುಗಳು ತಪ್ಪು’ ಎಂಬ ಧೋರಣೆಯನ್ನು ಮೊದಲು ಬಿಡಿ. ‘ನಾವು ಸರಿ ,ನೀವು ಸರಿ. ಇಬ್ಬರೂ ಸೇರಿ ಒಂದು ಸಮಾಧಾನಕರವಾದ ಉತ್ತರ ಹುಡುಕೋಣ’ ಅಂತ ಅವರೊಟ್ಟಿಗೆ ಹೆಜ್ಜೆ ಹಾಕಿ.

ಅವರೀಗ ಪ್ರಾಯಕ್ಕೆ ಬಂದವರು, ಹದಿಹರೆಯದ ಆಕಾಶದಲ್ಲಿ ಹಾರಾಡಲು ಸನ್ನದ್ಧರಾಗಿದ್ದಾರೆ. ಸಮಸ್ಯೆಯ ಮೂಲ ಇದೆ, ಆ ರೆಕ್ಕೆಗಳು ಬಲಿತು ನಿಮ್ಮ ಮಾತುಗಳನ್ನು ಅವರು ನಿರ್ಲಕ್ಷಿಸುತ್ತಿದ್ದಾರೆ ಎಂಬುದು ನಿಮ್ಮ ಘನ ಘೋರವಾದ ಆರೋಪ. ‘ಅರೇ! ರೆಕ್ಕೆ ಬಲಿತಿದೆ, ಬದುಕು ಸುಂದರವಾಗಿ ಅರಳುತ್ತಿದೆ. ಭಾವನೆಗಳು ಬೇರೆ ಸುಮ್ಮನೆ ಒಂದೆಡೆ ಕೂರದಂತೆ ಮಾಡಿದೆ. ನಾವೀಗ ಹಾರಬೇಕು, ಸ್ವಚ್ಛಂದವಾಗಿ ಹಾರಾಡುತ ಬದುಕನ್ನು ಕಾಣಬೇಕು’ ಅಂತ ಅವರುಗಳು ತಮ್ಮ ಪ್ರಾಯದ ಅಭಿಪ್ರಾಯವನ್ನು ಹೇಳುತ್ತಿದ್ದಾರೆ. ಹಿಂದೆ ಪ್ರಾಯದಲ್ಲಿ ಇದೇ ಅಭಿಪ್ರಾಯ ನಿಮ್ಮದೂ ಸಹ ಆಗಿತ್ತು. ಇರಲಿ ಆ ಪ್ರಾಯ ಮತ್ತೆ ನಿಮ್ಮ ಜೀವನದಲ್ಲಿ ಮರಳಿ ಬರದು. ಈಗ ಬಂದಿರುವ ಮಕ್ಕಳ ಬದುಕಿನಲ್ಲಿನ ಈ ಕಾಲವನ್ನು ಅನಗತ್ಯವಾದ ಭಯ, ಒತ್ತಡ, ಆತಂಕಗಳ ಮೂಲಕ ಅವರದನ್ನು ಎದುರಿಸಲಾರರೆಂಬಂತೆ ನೀವು ಅವರನ್ನು ನೋಡುವ ಮತ್ತದನ್ನವರು ಮುಕ್ತವಾಗಿ ಎದುರಿಸಲು ಬಿಡದಿರುವ ನಿಮ್ಮ ಧೋರಣೆ ಮೊದಲು ಬದಲಾಯಿಸಿಕೊಳ್ಳಿ.ಕಾಲದ ಜೊತೆಯಲ್ಲಿ ಅನೇಕ ಬದಲಾವಣೆಗಳಾಗುತ್ತವೆ. ನಿಮ್ಮಲ್ಲೂ ಬದಲಾವಣೆಗಳಾಗಿವೆ, ನಿಮ್ಮ ಮಕ್ಕಳು ಸಹ ಬದಲಾವಣೆಯನ್ನು ಕಾಣುತ್ತಿದ್ದಾರೆ.

ಮಕ್ಕಳ ವಿಷಯದಲ್ಲಿ ಮುಕ್ತರಾಗಿರಿ! ಅವರು ನಿಮ್ಮ ಮಕ್ಕಳು, ‘ಅವರು ಹೇಗೆ?’ ಅಂತ ನಿಮಗೆ ಚೆನ್ನಾಗಿ ಗೊತ್ತಿರಬೇಕು, ಅಲ್ಲವೇ? ನಿಮ್ಮ ಮಕ್ಕಳನ್ನು ಜಗತ್ತು ವಿಶ್ವಾಸಿಸಬೇಕಾದ ಅಗತ್ಯವೇನಿಲ್ಲ. ಅವರನ್ನು ವಿಶ್ವಾಸಿಸಬೇಕಾದದ್ದು ನೀವುಗಳು ಮಾತ್ರ, ನೀವುಗಳು ಅವರನ್ನು ವಿಶ್ವಾಸಿಸಿದರೆ ಅದವರಿಗೆ ಸಾವಿರ ಆನೆಗಳ ಬಲವನ್ನು ಕೊಡುತ್ತದೆ. ‘ಏನಾದರೂ ಮಾಡು ಆದರೆ ಅದರಲ್ಲೊಂದು ನೀತಿ ಇರಲಿ, ಏನಾದರೂ ಕಲಿ ಆದರೆ ಕಲಿಕೆಯಲ್ಲಿ ಆಸಕ್ತಿ ಇರಲಿ, ಕೌಶಲ್ಯತೆ ವೃದ್ಧಿಯಾಗಲಿ. ಜೀವನದಲ್ಲಿ ನೀತಿ ತಪ್ಪಬೇಡ, ದಾರಿ ತಪ್ಪಬೇಡ, ಮಾಡುವ ಯಾವುದೇ ಕೆಲಸದ ಬಗ್ಗೆ ಅಭಿಮಾನ ಬಿಟ್ಟುಕೊಡಬೇಡ, ಅಸಡ್ಡೆ ತೋರಬೇಡ, ಯಾವುದೇ ಕೆಲಸವನ್ನು ಪೋಸ್ಟ್ ಫೋನ್ ಮಾಡಬೇಡ’ ಇಷ್ಟನ್ನಷ್ಟೇ ಅವರಿಗೆ ಹೇಳಿ ‘ನಿನ್ನ ಭವಿಷ್ಯ ನಿನ್ನ ಕೈಯಲ್ಲಿದೆ. ಸರಿಯಾದ ದಾರಿಯನ್ನೇ ನೀನು ಆಯ್ಕೆ ಮಾಡಿಕೊಳ್ಳುವೆ ಅನ್ನುವ ವಿಶ್ವಾಸ ನಮ್ಮದು. ನಿನ್ನ ದಾರಿ ಸರಿ ಇದ್ದರೆ ನಮಗೂ ನೆಮ್ಮದಿ, ನಿನಗೂ ಸಮೃದ್ಧಿ.
ನೀನು ದಾರಿ ತಪ್ಪಿದರೆ ನಿನ್ನೊಂದಿಗೆ ನಮ್ಮ ಜೀವನ ಕೂಡ ಪಾತಾಳ ಮುಖಿ. ನಿನ್ನ ಭವಿಷ್ಯದಲ್ಲಿ ನಮ್ಮೆಲ್ಲರ ಬದುಕು ಕೂಡ ಅಡಗಿದೆ ಎಂಬುದನ್ನು ಯಾವ ಕಾಲಕ್ಕೂ ಮರೆಯಬೇಡ’ ಅಂತ ಒಂದು ಎಚ್ಚರಿಕೆಯ ಮಾತನ್ನು ಅದರೊಂದಿಗೆ ರವಾನಿಸಿ.

‘ಏನೇ ಆಗಲಿ, ಅಂತಹ ಪರಿಸ್ಥಿತಿ ಬರಲಿ, ನಿನ್ನೊಂದಿಗೆ ನಾವಿದ್ದೇವೆ. ಏಕೆಂದರೆ ನಾವು ನಿನ್ನ ತಂದೆ-ತಾಯಿ. ನಿನ್ನ ಸುಂದರ ಭವಿಷ್ಯಕ್ಕಾಗಿ ನಮ್ಮೆಲ್ಲಾ ಆಸ್ತಿ ಆಸ್ತಿ ಕೊನೆಗೆ ನಮ್ಮ ಜೀವಗಳನ್ನು ಮುಡಿಪಿಟ್ಟಿರುವ ಜೀವಗಳು’ ಅಂತ ಹೇಳಿ ಭಾವನಾತ್ಮಕವಾಗಿಯೂ ಅವರನ್ನು ಸೆರೆಹಿಡಿದು, ‘ಹೋಗು ಜಗತ್ತು ವಿಶಾಲವಾಗಿದೆ ನಿನಗೆ ಇಷ್ಟವಾದದನ್ನು ಆಯ್ಕೆ ಮಾಡಿಕೋ’ಅಂತ ಹೇಳಿ ಬೆನ್ನು ತಟ್ಟಿದರೆ ನಿಮ್ಮ ಬದುಕು ಸುಂದರ, ಅವರ ನಾಳೆಯ ಜೀವನವು ಮಧುರ.

ಇಷ್ಟೊಂದು ಧನಾತ್ಮಕವಾದ ಹಾಗೂ ವಿಸ್ತಾರವಾದ ಮತ್ತೊಂದು ಪುಸ್ತಕ ಇತ್ತೀಚಿನ ದಿನಗಳಲ್ಲಿ ಯಾವ ಭಾಷೆಯಲ್ಲಿಯೂ ಬಂದಿಲ್ಲ. ಪೋಷಕರ ತಪ್ಪುಗಳು ಮತ್ತು ಆತಂಕಗಳನ್ನು, ಮಕ್ಕಳ ಯೌವ್ವನ ಮತ್ತು ಅವರ ಭವಿಷ್ಯದ ಬಗ್ಗೆನ 248 ಪುಟಗಳಲ್ಲಿ, ಪ್ರತಿ ಪುಟ್ಟದಲ್ಲೂ ಒಂದೊಂದು ಛಾಯಾಚಿತ್ರದ ಮೂಲಕ ವಿಷಯವನ್ನು ಪ್ರಸ್ತುತ ಪಡಿಸಿರುವ ಲೇಖಕರ ಪ್ರಯತ್ನ ಅಭಿನಂದನಾರ್ಹ. ಇದರಲ್ಲಿ ಇದುವರೆಗೆ ನಾವು ಕೇಳಿರದ, ಕಂಡೀರದ ಅನೇಕ ಸಂಗತಿಗಳ ಕೂಡ (ಉದಾಹರಣೆಗೆ; ಪುರುಷರಲ್ಲಿನ ಮುಟ್ಟು) ಇದರಲ್ಲಿ ನಮಗೆ ಓದಿ ತಿಳಿಯುವುದಕ್ಕೆ ಸಿಗುತ್ತದೆ. ಲೇಖಕ ರವೀಂದ್ರ ಕೊಟಕಿ ಅವರ ಈ ಪ್ರಯತ್ನ ಕನ್ನಡದ ಓದುಗರಿಗೆ ಒಂದು ವಿಶೇಷವಾದ ಹಾಗೂ ಕಡ್ಡಾಯವಾಗಿ ತಿಳಿಯಲೇಬೇಕಾದ ಹಲವು ಸಂಗತಿಗಳನ್ನು ಪರಿಚಯಿಸುತ್ತದೆ. ಪ್ರತಿಯೊಬ್ಬರೂ ಈ ಪುಸ್ತಕವನ್ನು ಓದಲೇಬೇಕು. ಈ ಪುಸ್ತಕ ಪ್ರತಿಯೊಬ್ಬರ ಜೀವನವನ್ನು ಪ್ರತಿನಿಧಿಸುತ್ತದೆ. ಇದೊಂದು ಅಪರೂಪದ ಅವಶ್ಯವಾಗಿ ಓದಲೇಬೇಕಾದ ಪುಸ್ತಕವಾಗಿದೆ.

ಪುಸ್ತಕದ ಹೆಸರು: ಕಡ್ಡಾಯವಾಗಿ ಪೋಷಕರಿಗೆ ಮಾತ್ರ!
ಲೇಖಕರು: ರವೀಂದ್ರ ಕೊಟಕಿ
ಪ್ರಕಾಶಕರು: ಚಿನ್ಮಯ ಪ್ರಕಾಶನ
ಪುಸ್ತಕದ ಬೆಲೆ: 270 (ಅಂಚೆ ವೆಚ್ಚ ಪ್ರತ್ಯೇಕ)

ಎಲ್ಲಿ ದೊರೆಯುತ್ತದೆ: ಶ್ರೀನಿಧಿ ಪಬ್ಲಿಕೇಶನ್, ಬೆಂಗಳೂರು.
ಹೆಚ್ಚಿನ ಮಾಹಿತಿ ಹಾಗೂ ಪುಸ್ತಕಕ್ಕಾಗಿ ಸಂಪರ್ಕಿಸಬೇಕಾದ WhatsApp number: 9972778646

ಸಹಕಾರ ಹಾಗೂ ವರದಿ: ಡಿ.ಆರ್ ದಯಾನಂದ ಸ್ವಾಮಿ ಸಹ ಸಂಪಾದಕರು
ಪತ್ರಕರ್ತರು, ತಿಪಟೂರು.

ರಾಜ್ಯಸರ್ಕಾರದ ಜಾರಿಗೆ ತಂದಿರುವ ಮಹತ್ವಾಕಾಂಕ್ಷೆಯ ಭೂ ಸುರಕ್ಷ ಯೋಜನೆಗೆ ತಿಪಟೂರು ಶಾಸಕ ಕೆ.ಷಡಕ್ಷರಿ ಪೂಜೆಸಲ್ಲಿಸುವ ಮೂಲಕ ಚಾಲನೆ ನೀಡಿದರು.

ತಿಪಟೂರು ಆಡಳಿತ ಸೌಧದ ಅಭಿಲೇಖನಾಲಯದಲ್ಲಿ ಕಂದಾಯ ಇಲಾಖೆ ಹಾಗೂ ಸರ್ವೆ ಇಲಾಖೆ ಭೂ ದಾಖಲೆಗಳ ಡಿಜಿಟಲಿಕರಣ ಪ್ರಕ್ರಿಯೆಗೆ ಪೂಜೆಸಲ್ಲಿ ಚಾಲನೆ ನೀಡಿದರು.

ತಾಲ್ಲೋಕು ಆಡಳಿತ ಸೌಧದ ಆವರಣದಲ್ಲಿ ಆಯೋಜಿಸಿದ ಕಾರ್ಯಕ್ರಮವನ್ನ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದ ಶಾಸಕರು ಮಾತನಾಡಿ ರಾಜ್ಯಸರ್ಕಾರ ಕಂದಾಯ ಇಲಾಖೆಯ ಭೂ ದಾಖಲೆಗಳನ್ನ ಸ್ಕ್ಯಾನಿಂಗ್ ಮಾಡಿ ಡಿಜಿಟಲಿಕರಣಗೊಳಿಸುತ್ತಿರುವುದು,ಅತ್ಯತ್ತಮ ಕಾರ್ಯಕ್ರಮವಾಗಿದೆ.ನೂರಾರು ವರ್ಷಗಳ,ಭೂದಾಖಲೆಗಳು ಕಂದಾಯ ಇಲಾಖೆಯ ಅಭಿಲೇಖನಾಲಯದಲ್ಲಿ ಅಡಕವಾಗಿವೆ.ಕಾಲಾಂತರದಲ್ಲಿ ಶಿಥಿಲವಾಗುವ ಅಪಾಯವೇ ಹೆಚ್ಚು,ಇನ್ನೂ ಸರ್ಕಾರದ ಭೂ ದಾಖಲೆಗಳು ರೈತರಿಗೆ, ಸುಲಭವಾಗಿ ದೊರೆಯದ ಕಾರಣ,ಸಾವಿರಾರು ರೈತರು ಭೂ ಒಡೆತನ ಹೊಂದುವುದು ಕಷ್ಟವಾಗಿದ್ದು, ರೈತರ ಸಂಕಷ್ಟ ಅರಿತ ಸರ್ಕಾರ ಬಗರ್ ಹುಕ್ಕು ಸಾಗುವಳಿ ಚೀಟಿ ನೀಡಿ ತಾವು ಉಳಿಮೆ ಮಾಡುತ್ತಿರುವ ಭೂಮಿಗೆ ಮಾಲೀಕನನ್ನಾಗಿ ಮಾಡಿದೆ,ತಿಪಟೂರು ತಾಲ್ಲೋಕಿನಲ್ಲಿ ನಾನು ಮೊದಲ ಭಾರೀ ಶಾಸಕನಾಗಿದ್ದ ಅವಧಿಯಲ್ಲಿ ಸುಮಾರುಎಂಟುಸಾವಿರ ರೈತರಿಗೆ ಸಾಗುವಳಿ ಚೀಟಿ ನೀಡಿದ ಆತ್ಮತೃಪ್ತಿಇದೆ.ರೈತ ತಾನು ಸಾಗುವಳಿ ಮಾಡುವ ಜಮೀನಿಗೆ ಮಾಲಿಕತ್ವ ಹೊಂದುವುದು ಅತಿಮುಖ್ಯ ಆದರೆ ದಾಖಲೆಗಳು ಸುಲಭವಾಗಿ ಲಭ್ಯವಾಗದ ಕಾರಣ,ಎಷ್ಟೋ ರೈತರು ಮಾಲೀಕತ್ವವನ್ನೇ ಹೊಂದಲು ಸಾಧ್ಯವಾಗಿಲ್ಲ,ರಾಜ್ಯಸರ್ಕಾರ ನೂರಾರು ವರ್ಷಗಳ ರೈತರ ಸಮಸ್ಯೆಗಳಿಗೆ ಮುಕ್ತಿನೀಡಲು ಮುಂದಾಗಿದ್ದು,ತಾಲ್ಲೋಕು ಅಭಿಲೇಖನಾಲಯದಲ್ಲಿ ಇರುವ ಇರುವ ದಾಖಲೆಗಳನ್ನ ಸ್ಕ್ಯಾನಿಂಗ್ ಮಾಡಿ ಡಿಜಿಟಲೀಕರಣಗೊಳಿಸುತ್ತಿದ್ದು.ಡಿಜಿಟಲ್ ಪ್ರಕ್ರಿಯೆಯಿಂದ,ರೈತರಿಗೆ ಸುಲಭ ಹಾಗೂ ತ್ವರಿತವಾಗಿ ದಾಖಲೆಗಳು ದೊರೆಯುತ್ತವೆ,ಹಾಗೂ ದಾಖಲೆಗಳನ್ನ ಕಳ್ಳವು ಮಾಡಲು,ನಾಶಗೊಳಿಸಲು ಸಾಧ್ಯವಾಗುದಿಲ್ಲ.ಆದರಿಂದ ಉತ್ತಮ ಯೋಜನೆಗೆ ಜನರು ಸಹಕಾರ ನೀಡಬೇಕು ಎಂದು ತಿಳಿಸಿದರು

ಕಾರ್ಯಕ್ರಮದಲ್ಲಿ ಉಪಸ್ಥಿತರಿದ ತಿಪಟೂರು ಉಪವಿಭಾಗಾಧಿಕಾರಿ ಶ್ರೀಮತಿ ಸಪ್ತಶ್ರೀ ಮಾತನಾಡಿ ಭೂ ದಾಖಲೆಗಳ ಡಿಜಿಲಿಕರಣದಿಂದ ಸಾರ್ವಜನಿಕರಿಗೆ ಉತ್ತಮ ಹಾಗೂ ತ್ವರಿತಗತಿ ಸೇವೆ ನೀಡಲು ಸಾಧ್ಯವಾಗುತ್ತದೆ,ಸರ್ಕಾರದ ಆದೇಶದಂತೆ ತಾಲ್ಲೋಕು ಕಚೇರಿಯ ಭೂ ದಾಖಲೆಗಳನ್ನ ವರ್ಗೀಕರಿಸಿ,ಸ್ಕ್ಯಾನಿಂಗ್ ಪ್ರಕ್ರಿಯೆ ಮಾಡಲಾಗುತ್ತಿದೆ,ಹೋಬಳಿವಾರು ಸ್ಕ್ಯಾನಿಂಗ್ ಮಾಡುವಾಗ ಸಾರ್ವಜನಿಕರಿಗೆ ಸ್ಪಲ್ಪ ತೊಂದರೆಯಾಗಬಹುದು,ಸ್ಕ್ಯಾನಿಂಗ್ ನಡೆಯುವ ದಾಖಲೆಗಳನ್ನ, ಸಾರ್ವಜನಿಕರಿಗೆ ಕೊಡಲು ಸಾಧ್ಯವಾಗುವುದಿಲ್ಲ,ಅಂತಹ ಸಂದರ್ಭದಲ್ಲಿ ಸಾರ್ವಜನಿಕರು ಸಹಕರಿಸಬೇಕು,ಸರ್ಕಾರದ ನಿರ್ದೇಶನದಂತೆ ಶೀಘ್ರವಾಗಿ ಸ್ಕ್ಯಾನಿಂಗ್ ಪ್ರಕ್ರಿಯೆಗೆ ಪೂರ್ಣಗೊಂಡು ಸಾರ್ವಜನಿಕರಿಗೆ ಭೂ ದಾಖಲೆಗಳನ್ನ ಕೈಗೆಟ್ಟಕುತ್ತವೆ ಎಂದು ತಿಳಿಸಿದರು
ತಹಸೀಲ್ದಾರ್ ಪವನ್ ಕುಮಾರ್ ಮಾತನಾಡಿ ರಾಜ್ಯ ಸರ್ಕಾರದ ಭೂ ಸುರಕ್ಷ ಯೋಜನೆ ಉತ್ತಮ ಯೋಜನೆಯಾಗಿದ್ದು ಈ ಯೋಜನೆಯಿಂದ ಆಡಳಿತ ವರ್ಗದ ಮೇಲಿನ ಒತ್ತಡ ಕಡಿಮೆಯಾಗುವ ಜೊತೆಗೆ, ನಿಮ್ಮ ಜಮೀನುಗಳು ಸುರಕ್ಷ ಹಾಗೂ ಸುಭದ್ರವಾಗುತ್ತವೆ ಶಿಥಿಲವಾಗುವ ಹಾಗೂ ಕಳ್ಳತನವಾಗುವ ಅತಂಕವಿರುವುದಿಲ್ಲ, ತಮ್ಮ ತಾಲ್ಲೋಕು ಕಚೇರಿಯಲ್ಲಿ 1894 ರಿಂದಲ್ಲೂ ಭೂ ದಾಖಲೆಗಳು ಲಭ್ಯವಿದೆ. ಅವುಗಳನ್ನ ಎಬಿಸಿಡಿ ಎಂಬುದಾಗಿ ವರ್ಗೀಕರಿಸಿದ್ದು,ಸ್ಕ್ಯಾನಿಂಗ್ ಮಾಡಿ ಸುರಕ್ಷವಗಿಡಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಗ್ರೇಡ್ 2 ತಹಸೀಲ್ದಾರ್ ಜಗನ್ನಾಥ್,ಶೀರಸ್ತೆದಾರ್ ರವಿಕುಮಾರ್ ಅಶೋಕ್ , ಆಹಾರ ನಿರೀಕ್ಷಕ ರೇಣುಕಪ್ರಸಾದ್ ಮುಂತ್ತಾದವರು ಉಪಸ್ಥಿತರಿದರು.

ವರದಿ : ಮಂಜುನಾಥ್ ಹಾಲ್ಕುರಿಕೆ

ಗುಬ್ಬಿ: ರೈಲ್ವೆ ರಸ್ತೆ ಅಂಡರ್ ಪಾಸ್ ಕಾಮಗಾರಿಗಳಿಗೆ ಇತ್ತೀಚಿಗಷ್ಟೇ ಸಂಪಿಗೆ ರೋಡ್ ರೈಲ್ವೇ ಸ್ಟೇಷನ್ ಕಾರ್ಯಕ್ರಮಕ್ಕೆ ರೈಲ್ವೇ ಸಚಿವ ವಿ ಸೋಮಣ್ಣ ಭೇಟಿ ನೀಡಿ ವೇಗ ತುಂಬಿದ್ದರು ಇದರ ಬೆನ್ನಲ್ಲೇ ತಾಲ್ಲೂಕಿನ ಕಡಬಾ ಹೋಬಳಿಯ ಬಾಡೇನಹಳ್ಳಿ ರೈಲ್ವೆ ಗೇಟ್ 64 ನಲ್ಲಿ ರೈಲ್ವೇ ಅಂಡರ್ ಪಾಸ್ ಕಾಮಗಾರಿ ನಡೆಯುತ್ತಿದ್ದು ಬಾಡೇನಹಳ್ಳಿ ಗ್ರಾಮಸ್ಥರು ಅಂದಿನಿಂದ ಕೆರೆ, ಕಾವಲ್ ಮತ್ತು ಬೀದಿಗಳಿಗೆ ತೆರಳಲು ಬಳಸುತ್ತಿದ್ದ ರಸ್ತೆಗಳನ್ನು ತಡೆಯಲಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ, ಗ್ರಾಮಸ್ಥರಾದ ಮಂಜುನಾಥ್ ಬಿ.ಡಿ ಮಾತನಾಡಿ ಸದರಿ ಕಾಮಗಾರಿಯ ಎಸ್ಟಿಮೇಟ್ ನಲ್ಲಿ ನಮ್ಮ ಗ್ರಾಮದ ಕೆರೆ, ಕಾವಲ್ ಮತ್ತು ನಮ್ಮ ಛಲವಾದಿ ಕಾಲೋನಿಗಳಿಗೆ ತಿರುಗಾಡಲು ಅಂದಿನಿಂದ ಇದ್ದ ರಸ್ತೆಗಳನ್ನು ಕೈ ಬಿಡಲಾಗಿದೆ ಅಲ್ಲದೆ ಸದರಿ ಕಾಮಗಾರಿಯ ನಿರ್ಧಾರಗಳಿಂದ ನಮ್ಮ ಗ್ರಾಮಸ್ಥರು ರಸ್ತೆಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಸಂಬಂಧ ಪಟ್ಟ ರೈಲ್ವೇ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ ನಮಗೆ ಸೂಕ್ತ ರಸ್ತೆ ಕಲ್ಪಿಸುವವರೆಗೂ ಹೋರಾಟ ಕೈ ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು ಮತ್ತೂಬ್ಬ ಗ್ರಾಮಸ್ಥ ಶಶಿಕುಮಾರ್ ಮಾತನಾಡಿ ಅಂದಿನಿಂದ ರಸ್ತೆಗಳು ನಾವು ಬಳಸುತ್ತಿದ್ದೇವೆ ಇದೇ ರಸ್ತೆಗಳನ್ನು ಮುಂದುವರೆಸಬೇಕು ಇಲ್ಲ ಬದಲಿ ಸೂಕ್ತ ರಸ್ತೆ ವ್ಯವಸ್ಥೆ ಮಾಡಲಿ ಆದರೆ ಸಂಬಂಧ ಪಟ್ಟ ಈ ರೈಲ್ವೇ ಅಧಿಕಾರಿಗಳ ಗಮನ ಕಾಮಗಾರಿ ಪೂರ್ಣಗೊಳಿಸಲು ಒತ್ತು ನೀಡುತ್ತಾರೆ ನಮ್ಮ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ಅಸಮಾದಾನ ವ್ಯಕ್ತಪಡಿಸಿದರು.

ವರದಿ: ಸಂತೋಷ್ ಓಬಳ. ಗುಬ್ಬಿ

ಗುಬ್ಬಿ: ರೈಲ್ವೆ ರಸ್ತೆ ಅಂಡರ್ ಪಾಸ್ ಕಾಮಗಾರಿಗಳಿಗೆ ಇತ್ತೀಚಿಗಷ್ಟೇ ಸಂಪಿಗೆ ರೋಡ್ ರೈಲ್ವೇ ಸ್ಟೇಷನ್ ಕಾರ್ಯಕ್ರಮಕ್ಕೆ ರೈಲ್ವೇ ಸಚಿವ ವಿ ಸೋಮಣ್ಣ ಭೇಟಿ ವೇಗ ತುಂಬಿದ್ದರು ಇದರ ಬೆನ್ನಲ್ಲೇ ತಾಲ್ಲೂಕಿನ ಕಡಬಾ ಹೋಬಳಿಯ ಬಾಡೇನಹಳ್ಳಿ ರೈಲ್ವೆ ಗೇಟ್ 64 ನಲ್ಲಿ ರೈಲ್ವೇ ಅಂಡರ್ ಪಾಸ್ ಕಾಮಗಾರಿ ನಡೆಯುತ್ತಿದ್ದು ಬಾಡೇನಹಳ್ಳಿ ಗ್ರಾಮಸ್ಥರು ಅಂದಿನಿಂದ ಕೆರೆ, ಕಾವಲ್ ಮತ್ತು ಬೀದಿಗಳಿಗೆ ತೆರಳಲು ಬಳಸುತ್ತಿದ್ದ ರಸ್ತೆಗಳನ್ನು ತಡೆಯಲಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ, ಗ್ರಾಮಸ್ಥರಾದ ಮಂಜುನಾಥ್ ಬಿ.ಡಿ ಮಾತನಾಡಿ ಸದರಿ ಕಾಮಗಾರಿಯ ಎಸ್ಟಿಮೇಟ್ ನಲ್ಲಿ ನಮ್ಮ ಗ್ರಾಮದ ಕೆರೆ, ಕಾವಲ್ ಮತ್ತು ನಮ್ಮ ಛಲವಾದಿ ಕಾಲೋನಿಗಳಿಗೆ ತಿರುಗಾಡಲು ಅಂದಿನಿಂದ ಇದ್ದ ರಸ್ತೆಗಳನ್ನು ಕೈ ಬಿಡಲಾಗಿದೆ ಅಲ್ಲದೆ ಸದರಿ ಕಾಮಗಾರಿಯ ನಿರ್ಧಾರಗಳಿಂದ ನಮ್ಮ ಗ್ರಾಮಸ್ಥರು ರಸ್ತೆಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಸಂಬಂಧ ಪಟ್ಟ ರೈಲ್ವೇ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ ನಮಗೆ ಸೂಕ್ತ ರಸ್ತೆ ಕಲ್ಪಿಸುವವರೆಗೂ ಹೋರಾಟ ಕೈ ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು ಮತ್ತೂಬ್ಬ ಗ್ರಾಮಸ್ಥ ಶಶಿಕುಮಾರ್ ಮಾತನಾಡಿ ಅಂದಿನಿಂದ ರಸ್ತೆಗಳು ನಾವು ಬಳಸುತ್ತಿದ್ದೇವೆ ಇದೇ ರಸ್ತೆಗಳನ್ನು ಮುಂದುವರೆಸಬೇಕು ಇಲ್ಲ ಬದಲಿ ಸೂಕ್ತ ರಸ್ತೆ ವ್ಯವಸ್ಥೆ ಮಾಡಲಿ ಆದರೆ ಸಂಬಂಧ ಪಟ್ಟ ಈ ರೈಲ್ವೇ ಅಧಿಕಾರಿಗಳ ಗಮನ ಕಾಮಗಾರಿ ಪೂರ್ಣಗೊಳಿಸಲು ಒತ್ತು ನೀಡುತ್ತಾರೆ ನಮ್ಮ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ಅಸಮಾದಾನ ವ್ಯಕ್ತಪಡಿಸಿದರು.

ವರದಿ: ಸಂತೋಷ್ ಓಬಳ

ತಿಪಟೂರು :ಮೈಕ್ರೋ ಫೈನಾನ್ಸ್ ಸಾಲಗಾರರ ಕಿರುಕುಳ ತಾಳಲಾರದ ವಿಡಿಯೋ ಮಾಡಿ ,ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತುಮಕೂರು ಜಿಲ್ಲೆ ತಿಪಟೂರು ನಗರದ ಗಾಂಧೀನಗರ ಬೋವಿ ಕಾಲೊನಿ 13ನೇ ಕ್ರಾಸ್ ನಲ್ಲಿ ನಡೆದಿದೆ,

ಗಾಂಧೀ ನಗರ ಬೋವಿ ಕಾಲೋನಿ ವಾಸಿಯಾದ 42ವರ್ಷ ವಯಸ್ಸಿನ ಸಾಧಿಕ ಬೇಗಂ ಆತ್ಮಹತ್ಯೆಗೊಳಗಾದ ಮೃತ ದುರ್ದೈವಿ

ಮೈಕ್ರೋಫೈನಾನ್ಸ್ ಗಳು ಹಾಗೂ ಸ್ಥಳೀಯವಾಗಿ ಬಡ್ಡಿ ನೀಡುವ ವ್ಯಕ್ತಿಗಳಿಂದ ಸಾಧಿಕ ಬೇಗಂ ಸಾಲ ಮಾಡಿದರು ಎನ್ನಲಾಗಿದ್ದು, ಮೈಕ್ರೋ ಫೈನಾನ್ಸ್ ನವರು ಮನೆ ಬಳಿ ಸಾಲವಸೂಲಿಗೆ ಬಂದು ಕಿರುಕುಳ ನೀಡುದ್ದಾರೆ ಎನ್ನಲಾಗಿದ್ದು.ಮೈಕ್ರೋಫೈನಾನ್ಸ್ ಕಿರುಕುಳಕೊಳಗಾದ ಮಹಿಳೆ ತಮ್ಮ ಪತಿ ಸಯೀದ್ ನಯಾಜ್ ಗೆ ಪೋನ್ ಮಾಡಿ ವಿಚಾರ ತಿಳಿಸಿದ್ದು, ಸಾಲಮಾಡಿತಪ್ಪು ಮಾಡಿದ್ದೇನೆ.ಸಾಲಗಾರರ ಕಿರುಕುಳ ಜಾಸ್ತಿಯಾಗಿದೆ ಎಂದು ಅವಲತ್ತುಕೊಂಡಿದ್ದಾಳೆ.

ಹಾಸನದಲ್ಲಿ ಕೆಲಸ ಮಾಡುತ್ತಿದ್ದ ಪತಿ ನಾನು ಊರಿಗೆ ಬರುತ್ತೇನೆ ಸಾಲ ಎಷ್ಟಿದರೂ ತೀರಿಸುತ್ತೇನೆ ಧೈರ್ಯವಾಗಿರು,ಹೆದರ ಬೇಡಎಂದು ಧೈರ್ಯ ಹೇಳಿದರು.ಮಹಿಳೆ ನಾಲೆಗೆ ಬಿದ್ದು ಸಾವನ್ನಪ್ಪಿದ್ದಾರೆ.

ಸೋಮವಾರ ಮಹಿಳೆ ಮೈಕ್ರೋಪೈನಾನ್ಸ್ ಗಳು ಹಾಗೂ ಸಾಲಗಾರರಿಂದ ಕಿರುಕಿಳವಾಗುತ್ತಿರುವ ಬಗ್ಗೆ ವಿಡಿಯೋ ಮಾಡಿಟ್ಟು ಮನೆಯಿಂದ ಕಾಣಿಯಾಗಿದ್ದಾರೆ.ಮನೆಗೆ ಬಂದ ಪತಿ ಸಯಿದಾ ನಯಾಜ್ ಪತ್ನಿ ಕಾಣದಿದ್ದಾಗ, ಎಲ್ಲಕಡೆ ಹುಡುಕಲು ಆರಂಭಿಸಿದ್ದು, ಮನೆಪತ್ತೆಯಾಗದ ಕಾರಣ ಬುದವಾರ ತಿಪಟೂರು ನಗರಠಾಣೆಗೆ ಮಹಿಳೆ ಕಾಣಿಯಾದ ಬಗ್ಗೆ ದೂರು ನೀಡಿದ್ದು, ಪತಿಯ ದೂರಿನಂತೆ ತಿಪಟೂರು ನಗರಪೊಲೀಸ್ ಠಾಣೆಯಲ್ಲಿ ಮಹಿಳೆ ಕಾಣಿಯಾದ ಬಗ್ಗೆ ದೂರು ದಾಖಲಿಸಲಾಗಿದ್ದು.ಇಂದು ತಿಪಟೂರು ತಾಲ್ಲೋಕಿನ ಕಿಬ್ಬನಹಳ್ಳಿ ಹೋಬಳಿ ಕಲ್ಲುಶೆಟ್ಟಿಹಳ್ಳಿ ಬಳಿ ಶವ ದೊರೆತ್ತಿದೆ.

ಕೊನೆ ಭಾರೀ ದೇವರಲ್ಲಿ ಕ್ಷಮೆಯಾಚಿಸಿದ ಮಹಿಳೆ:ಮೈಕ್ರೋಪೈನಾನ್ಸ್ ಹಾಗೂ ಸಾಲಗಾರರು ಕಿರುಕುಳದಿಂದ ಮನನೊಂದಿದ್ದೇನೆ ,ನನ್ನ ಪತಿ ಹಾಗೂ ಮಕ್ಕಳು ನನನ್ನು ಚೆನ್ನಾಗಿ ನೋಡಿಕೊಂಡಿದ್ದಾರೆ.ದೇವರೇ ನನನ್ನು ಕ್ಷಮಿಸು ಎಂದು ಕೇಳಿಕೊಂಡಿದ್ದಾಳೆ

ಕೆ.ಬಿ ಕ್ರಾಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಕೈಗೊಳ್ಳಲಾಗಿದೆ.

ವರದಿ: ಮಂಜುನಾಥ್ ಹಾಲ್ಕುರಿಕೆ

ತಿಪಟೂರು ಕಲ್ಲೆಗೌಡನಪಾಳ್ಯ ಬಳಿ ಅರಣ್ಯ ಇಲಾಖೆ ಬೋನಿಗೆ ಬಿದ್ದ ಚಿರತೆ .ಕಳೆದ ಹಲವಾರುವ ದಿನಗಳಲ್ಲಿ ಕಲ್ಲೇಗೌಡನಪಾಳ್ಯ, ರಾಮಶೆಟ್ಟಿಹಳ್ಳಿ, ಈಡೇನಹಳ್ಳಿ ಭಾಗದಲ್ಲಿ ಮೂರು ಚಿರತೆಗಳು ಕಾಣಿಸಿಕೊಂಡಿದ್ದು,ಗ್ರಾಮಸ್ಥರಲ್ಲಿ ಭಯ ಆತಂಕ ಉಂಟುಮಾಡಿತ್ತು. ಆದರೆ ಕಲ್ಲೇಗೌಡನಪಾಳ್ಯ ರೇಷ್ಮೆ ಇಲಾಖೆ ಫಾರಂ ಬಳಿ ಅರಣ್ಯ ಇಲಾಖೆ ಇಟ್ಟಿದ್ದ ಬೋನ್ ಗೆ ಚಿರತೆ ಬಿದ್ದಿದ್ದೆ.

ಮೂರು ಚಿರತೆಗಳ ಪೈಕಿ ಒಂದು ಚಿರತೆ ಬೋನಿಗೆ ಬಿದ್ದಿದ್ದು ಇನ್ನೂ ಎರಡು ಚಿರತೆಗಳು ಹೊರಗೆ ಉಳಿದಿರುವುದು ಗ್ರಾಮಸ್ಥರಲ್ಲಿ ಆತಂಕ ಉಂಟುಮಾಡಿದೆ,

ಉಪ ಅರಣ್ಯಸಂರಕ್ಷಣಾಧಿಕಾರಿ ಅನುಪಮ ಮಾರ್ಗದರ್ಶನದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಭರತ್ ಡಿ.ವಲಯ ಅರಣ್ಯಾಧಿಕಾರಿ ಕೆ.ಎಲ್ ಮಧು‌.ಉಪ ಅರಣ್ಯಾಧಿಕಾರಿ ಪ್ರದೀಪ್ ನೇತೃತ್ವದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಸಿಕ್ಕಿರುವ ಚಿರತೆ ಸ್ಥಳಾಂತರ ಮಾಡಿದ್ದು ಉಳಿದ ಚಿರತೆಗಳ ಹಿಡಿಯಲು ಕಾರ್ಯಚರಣೆ ನಡೆಸಲಾಗುತ್ತಿದೆ.

ವರದಿ :ಮಂಜುನಾಥ್ ಹಾಲ್ಕುರಿಕೆ

ತುಮಕೂರು ಜಿಲ್ಲೆ ತುರುವೇಕೆರೆ ತಾಲ್ಲೊಕು ದಬ್ಬೆಘಟ್ಟ ಹೊಬಳಿ ಗೋಣಿ ತುಮಕೂರು ಗ್ರಾಮದ ಅರಣಸಮ್ಮ ದೇವಾಲಯ ಬಳಿ ಬೈಕ್ ಗೆ ಕೆ,ಎಸ್,ಆರ್,ಟಿ ಸಿ ಬಸ್ ಡಿಕ್ಕಿಯಾಗಿ ಬೈಕ್ ಸವಾರರು ಸಾವನ್ನಪ್ಪಿರುವ ಘಟನೆ ನಡೆದಿದೆ,

ತುರುವೇಕೆರೆ ಕದಬಳ್ಳಿ ಮಾರ್ಗದ ಕೆ.ಎಸ್ ಆರ್ ಟಿಸಿ. ಬಸ್ ಗೋಣಿ ತುಮಕೂರು ಬಳಿ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಇಡುಮಾರನಹಳ್ಳಿ ಗ್ರಾಮದ ದೀಪಕ್ ಹಾಗೂ ಪುಟ್ಟಸ್ವಾಮಿ ಅಪಘಾತದಲ್ಲಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾರೆ,

ತುರುವೇಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ವರದಿ: ಸಂಪಿಗೆ ಮೂರ್ತಿ

ತುರುವೇಕೆರೆ ತಾಲ್ಲೊಕು ಬಿಜೆಪಿ ಮಾಜಿ ಅಧ್ಯಕ್ಷ ದುಂಡ ರೇಣುಕಪ್ಪ ನಿಧನರಾದ ಹಿನ್ನಲೆ ತುರುವೇಕೆರೆ ತಾಲ್ಲೊಕು ಬಿಜೆಪಿ ವತಿಯಿಂದ ಭಾವಪೂರ್ಣ ನುಡಿನಮನ ಸಲ್ಲಿಸಲಾಯಿತು.
ತುರುವೇಕೆರೆ ನಗರದ ಶ್ರೀಗುರು ಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ಅಯೋಜಿಸಿದ ನುಡಿನಮನ ಕಾರ್ಯಕ್ರಮದಲ್ಲಿ ಮೃತ ರೇಣುಕಪ್ಪ ನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಶ್ರದಾಂಜಲಿ ಅರ್ಪಿಸಲಾಯಿತು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ ಮಾಜಿ ಶಾಸಕ ಎಂ.ಡಿ ಲಕ್ಷ್ಮಿನಾರಾಯಣ್ ಮಾತನಾಡಿ ದುಂಡ ರೇಣುಕಪ್ಪ ಹಾಗೂ ಬವರಾಜು ಗೆಳೆಯರು ಬಿಜೆಪಿ ಶಿಸ್ತಿನ ಸಿಪಾಯಿಗಳಾಗಿ ಕಟ್ಟಾಳುಗಳಂತೆ ಕೆಲಸ ಮಾಡಿದ್ದಾರೆ,ಅವರ ಅಕಾಲಿಕ ನಿಧನ ಪಕ್ಷಕ್ಕೆ ನಷ್ಟ ಉಂಟುಮಾಡಿದೆ,ಮುಂದಿನ ದಿನಗಳಲ್ಲಿ ಪಕ್ಷಕ್ಕೆ ಸೂಕ್ತವಾಗಿ ಸಂಘಟನೆ ಮಾಡಬಲ್ಲ ವ್ಯಕ್ತಿಯನ್ನ ಎಲ್ಲರೂ ಸೇರಿ ನೇಮಕ ಮಾಡಿ,ಪಕ್ಷದ ಸಂಘಟನೆಗೆ ಕೆಲಸ ಮಾಡೋಣ,ಬಿಜೆಪಿ ರಾಜ್ಯ ಹಾಗೂ ರಾಷ್ಟ್ರ ನಾಯಕ ಮಾರ್ಗದರ್ಶನದಲ್ಲಿ ಕೆಲಸ ಮಾಡೋಣ ಎಂದು ತಿಳಿಸಿದರು.
ಮಾಜಿ ಶಾಸಕ ಮಸಾಲೆ ಜಯರಾಮ್ ಮಾತನಾಡಿ ಬಿಜೆಪಿ ಕಾರ್ಯಕರ್ತರ ಶ್ರಮದಿಂದ ಬೆಳೆದ ಪಕ್ಷ ತಾಲ್ಲೋಕಿನ ಪಕ್ಷ ಸಂಘಟನೆಗೆ ದುಂಡ ರೇಣುಕಪ್ಪ ,ಬಸವರಾಜುರ,ರಾಮೇಗೌಡ,ಚಂದ್ರಶೇಖರ್ ಶಿಸ್ತಿನಿಂದ ಕೆಲಸ ಮಾಡಿ,ಪಕ್ಷಕಟ್ಟುವಲ್ಲಿ ನೆರವಾಗಿದ್ದಾರೆ,ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ತಿಳಿಸಿದರು
ಕಾರ್ಯಕ್ರಮದಲ್ಲಿ ಬಿಜೆಪಿ ವಕ್ತಾರ ಚಂದ್ರಶೇಖರ್ ,ಮುಖಂಡರಾದ ನಂಜೇಗೌಡ.ಮೂರ್ತಿ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದರು

ವರದಿ : ಸಂಪಿಗೆ ಮೂರ್ತಿ

ತುರುವೇಕೆರೆ ನಗರದ ಡಾ//ಬಿ.ಆರ್ ಅಂಬೇಡ್ಕರ್ ಭವನದ ಜಾಗವನ್ನ ಕೆಲವು ಪ್ರಭಾವಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿದ್ದು,ಅನಾಧೀಕೃತವಾಗಿ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ,ಒತ್ತುವರಿಯಾಗಿರುವ ಸರ್ಕಾರಿ ಜಾಗವನ್ನು ಕೂಡಲೇ ತೆರವುಗೊಳಿಸಬೇಕು,ಎಂದು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾಗೂ ದಲಿತಪರ ಸಂಘಟನೆಗಳಿಂದ ಆಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಲಾಗುತ್ತಿದೆ,

ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ತಾಲ್ಲೊಕ್ ಸಂಚಾಲಕ ಕೃಷ್ಣ ಮಾದಿಗ ಮಾತನಾಡಿ, ಅಂಬೇಡ್ಕರ್ ಭವನದ ಜಾಗವನ್ನ ಒತ್ತುವರಿ ಮಾಡಿರುವ ಬಗ್ಗೆ ಪಟ್ಟಣ ಪಂಚಾಯಿತಿಗೆ ಹಲವರು ದೂರು ಕೊಟ್ಟರು ಏನು ಪ್ರಯೋಜವಾಗಿಲ್ಲ, ಪಟ್ಟಣಪಂಚಾಯ್ತಿಗೆ ಸೇರಿದ ಸ್ವತ್ತನ್ನ ರಕ್ಷಣೆ ಮಾಡಲು ಪಟ್ಟಣ ಪಂಚಾಯ್ತಿ ವಿಫಲವಾಗಿದೆ.ಸಾರ್ವಜನಿಕರಿಗೆ ಸೇರಿದ ಸ್ಥಳವನ್ನ ಅತಿಕ್ರಮಿಸಿದ್ದರೂ,ಪಟ್ಟಣಪಂಚಾಯ್ತಿ ಅಧಿಕಾರಿಗಳು ಪ್ರಬಾವಿಗಳ ಒತ್ತಡಕ್ಕೆ ಮಣಿದು ಕೈಕಟ್ಟಿಕುಳಿತ್ತಿದ್ದಾರೆ.ದಲಿತಪರ ಸಂಘಟನೆಗಳ ಮುಖಂಡರು ಅನೇಕಬಾರಿ ಅಧಿಕಾರಿಗಳ ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗಿಲ್ಲ, ಅಂಬೇಡ್ಕರ್ ಭವನದ ಜಾಗ ಅತಿಕ್ರಮಿಸಿ ಅನಾಧೀಕೃತ ಕಟ್ಟಡ ನಿರ್ಮಿಸಲಾಗಿದೆ‌.ಅಂಬೇಡ್ಕರ್ ಭವನಕ್ಕೆ ಸಂಬಂದಿಸಿದ ಎಲ್ಲಾ ದಾಖಲೆಗಳೊಂದಿಗೆ ಮೇಲಧಿಕಾರಿಗಳಿಗೂ ದೂರು ನೀಡಲಾಗಿದೆ. ಅಂಬೇಡ್ಕರ್ ಭವನದ ಜಾಗ ಒತ್ತುವರಿಯಾಗಿದ್ದು ತೆರವು ಮಾಡುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ, ಪಟ್ಟಣ ಪಂಚಾಯ್ತಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದರೆ.ಸರ್ಕಾರ ಕೂಡಲೇ ಅಂಬೇಡ್ಕರ್ ಭವನದ ಸರ್ಕಾರಿ ಸ್ವತ್ತು ರಕ್ಷಣೆ ಮಾಡಲು ವಿಫಲವಾದ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿಗಳನ್ನ ಅಮಾನತ್ತುಗೊಳಿಸಬೇಕು ಹಾಗೂ ಕೂಡಲೇ ಒತ್ತುವರಿ ತೆರವುಗೊಳಿಸುವ ವರೆಗೂ ನಮ್ಮ ಹೋರಾಟ ಮುಂದುವರೆಯುತ್ತದೆ ಎಂದು ತಿಳಿಸಿದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಜಿಲ್ಲಾಸಂಘಟನಾ ಸಂಚಾಲಕ ಕುಂದೂರು ಮುರುಳಿ ಮಾತನಾಡಿ ಸ ನಾಲ್ಕೈದು ವರ್ಷಗಳಿಂದಲೂ ಇದರ ಬಗ್ಗೆ ಹಲವು ಬಾರಿ ಪಟ್ಟಣ ಪಂಚಾಯಿತಿಗೆ ದೂರು ಕೊಟ್ಟರು ಏನು ಪ್ರಯೋಜನವಾಗಿಲ್ಲ ಜೊತೆಗೆ ಉಪ ವಿಭಾಗಾಧಿಕಾರಿಗಳು ಸಿಇಓ, ಹಾಗೂ ಜಿಲ್ಲಾಧಿಕಾರಿಗಳಿಗೂ ದೂರು ನೀಡಲಾಗಿದೆ. ಜನಸ್ಪಂದನ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳು ಸಹ ಜಾಗ ಒತ್ತೂವರಿಯಾಗಿರುವ ಬಗ್ಗೆ ಮಾಹಿತಿ ಪಡೆದುಕೊಂಡು ಅಧಿಕಾರಿಗಳಿಗೆ ಕೂಡಲೇ ಈ ಜಾಗವನ್ನು ತೆರೆವು ಗೊಳಿಸಬೇಕೆಂದು ಸೂಚನೆ ಸಹ ನೀಡಿದ್ದಾರೆ, ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿ ನಿರ್ಲಕ್ಷ್ಯ ಹೊಂದಿದ್ದಾರೆ.ಮೇಲಾಧಿಕಾರಿಗಳ, ಆದೇಶಕ್ಕೂ ತಲೆಕೆಡಿಸಿಕೊಳ್ಳದೆ.ಕೈಕಟ್ಟಿಕುಳಿತ್ತಿದ್ದಾರೆ, ಸರ್ಕಾರ ಕೂಡಲೆ ಒತ್ತುವರಿ ತೆರವು ಮಾಡದೆ ನಿರ್ಲಕ್ಷ್ಯ ಮಾಡಿರುವ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿಯನ್ನ ಅಮಾನತ್ತುಗೊಳಿಸಬೇಕು ಹಾಗೂಅಂಬೇಡ್ಕರ್ ಭವನದ ಜಾಗದ ಒತ್ತುವರಿ ತೆರವುಮಾಡಬೇಕು ನಮ್ಮ ಹೋರಾಟ ನ್ಯಾಯದ ಪರವಾಗಿದ್ದು, ನಮ್ಮ ಹೋರಾಟಕ್ಕೆ ನ್ಯಾಯ ಸಿಗಯವವರೆಗೂ ಹೋರಾಟದಿಂದ ಹಿಂದೆಸರಿಯುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು

ಪ್ರತಿಭಟನೆಯಲ್ಲಿ ಶಿವರಾಜ್, ಸುನಿಲ್, ಪ್ರಸಾದ್, ಇನ್ನೂ ಮುಂತ್ತಾದವರು ಉಪಸ್ಥಿತರಿದ್ದರು.

ವರದಿ:ಸಂಪಿಗೆ ಮೂರ್ತಿ,

ರುರುಮಕೂರು ಜಿಲ್ಲೆ ತಿಪಟೂರು ತಾಲ್ಲೋಕಿನ ಕುಂದೂರು ಬಳಿ ವ್ಯಕ್ತಿಯೋರ್ವ ಬೈಕ್ ಸಮೇತ ಹೇಮಾವತಿ ನಾಲೆಗೆ ಬಿದ್ದಿರುವ ಬಗ್ಗೆ ಸ್ಥಳೀಯರು ಕೆ.ಬಿ ಕ್ರಾಸ್ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ಆಗಮಿಸಿದ ಕೆ.ಬಿ ಕ್ರಾಸ್ ಪೊಲೀಸರು ಹಾಗೂ ಅಗ್ನಿ ಶಾಮಕ ಠಾಣೆ ತಂಡ ನುರಿತ ಈಜುಗಾರರು ಹಾಗೂ ಬೋಟ್ ಸಹಾಯದಿಂದ ಶವಕ್ಕಾಗಿ ಹುಡುಕ್ಕಾಟ ನಡೆಸಿದ್ದರು, ಮೂರು ನಾಲ್ಕು ದಿನಗಳಾದರು ಶವ ಪತ್ತೆಯಾಗಿರುವುದಿಲ್ಲ, ಆದರೆ ಸೋಮಲಾಪುರ ಬಳಿ ಶವ ಪತ್ತೆಯಾಗಿದೆ.

ಅಜೀಬ್ ವುಲ್ಲಾ(33) ಖಾನ್ ಮೃತ ದುರ್ದೈವಿ. ಹೇಮಾವತಿ ನಾಲೆಯಿಂದ 28 ಕಿಲೋಮೀಟರ್ ದೂರದಲ್ಲಿ ಮೃತ ದೇಹ ಪತ್ತೆಯಾಗಿದೆ.

ಕುಂದೂರು ಬಳಿ ಹೇಮಾವತಿ ನಾಲೆಗೆ ಬಿದ್ದ ಅಜೀಬ್ ವುಲ್ಲಾ ಖಾನ್ ತಿಪಟೂರು ತಾಲ್ಲೂಕು ಕೆ.ಬಿ.ಕ್ರಾಸ್ ನಿವಾಸಿಯಾಗಿದ್ದಾರೆ. ಜ.2ನೇ ತಾರೀಕು ಅಜೀಬ್ ವುಲ್ಲಾ ನಾಲೆಗೆ ಬಿದ್ದಿದ್ದಾರೆ. ಕುಂದೂರು ಬಳಿಯ ನಾಲೆಯಲ್ಲೆ ಬೈಕ್ ಪತ್ತೆಯಾಗಿದೆ.

ಗುಬ್ಬಿ ತಾಲ್ಲೂಕಿನ ಸೋಮಲಾಪುರದ ಬಳಿ ಪತ್ತೆಯಾದ ಮೃತ ದೇಹ ಪತ್ತೆಯಾಗಿದೆ. ಮೃತ ದೇಹ ನಾಲೆಯಿಂದ ಹೊರ ತೆಗೆಯಲು ನಿನ್ನೆಯಿಂದ ಹರಸಾಹಸ ಪಡುವಂತಾಗಿದೆ. ನಿನ್ನೆಯೇ ಮೃತದೇಹ ನಾಲೆಯಲ್ಲಿ ಪತ್ತೆಯಾಗಿದೆ.

ವರದಿ:ಮಂಜುನಾಥ್ ಹಾಲ್ಕುರಿಕೆ

Your Attractive Heading

error: Content is protected !!