Month: November 2024

ತಿಪಟೂರು ನಗರದ ಹಾಲ್ಕುರಿಕೆ ರಸ್ತೆ ಧನಲಕ್ಷ್ಮಿ ಕೋಕೋ ನೆಟ್ ಫ್ಯಾಕ್ಟರಿ ಬಳಿ ತಿಪಟೂರು ತಾಲ್ಲೋಕಿನ ಈಡೇನಹಳ್ಳಿ ಪಾಳ್ಯ ನಿವಾಸಿ ಎನ್ ಚೇತನ್ ಎಂಬ ಯುವಕನ ಕೊಲೆ ನಡೆದಿದೆ

ಚೇತನ್ ಕೊಲೆಯಾದ ಯುವಕ

ತಿಪಟೂರು ಈಡೇನಹಳ್ಳಿ ಪಾಳ್ಯವಾಸಿ ಚೇತನ್ ತಿಪಟೂರು ನಗರದ ಗುಬ್ಬಿ ಲೇಔಟ್ ವಾಸಿಯಾಗಿದ ಚೇತನ್ ಈ ಹಿಂದೆ ಶಿವಮೊಗ್ಗ ಮೂಲದ ನಂದಿನಿ ಎಂಬ ಮಹಿಳೆಯೊಂದಿಗೆ ಮದುವೆಯಾಗಿದ್ದು, ಕೌಟುಂಬಿ ಕಲಹದಿಂದ ಬೇರ್ಪಟಿದರು
ಸ್ವಂತ ಲಾರಿಹೊಂದಿದ ಚೇತನ್ ತಿಪಟೂರಿನ ಕಾಯಿ ಪ್ಯಾಕ್ಟರಿಗಳಿಂದ ಕಾಯಿ ಟ್ರಾನ್ಸ್ ಪೋರ್ಟ್ ಮಾಡುತ್ತಿದ್ದ,ಆದರೆ ಚೇತನ್ ಆಲೂರು ಗ್ರಾಮದ ಯುವತಿ ಲವ್ ಮಾಡುತ್ತಿದ್ದಳು ಪರಸ್ಪರ ಪ್ರೀತಿಸುತ್ತಿದ ಇಬ್ಬರೂ
ಮದುವೆಯಾಗಲು ನಿರ್ದರಿಸಿದರು,ಎನ್ನಲಾಗಿದು, ನೆನ್ನೆ ಪಾನಮತ್ತನಾದ ಚೇತನ್, ತಿಪಟೂರು ತಾಲ್ಲೋಕಿನ ಹಾಲ್ಕುರಿಕೆರಸ್ತೆ ಧನಲಕ್ಷ್ಮಿ ಕಾಯಿ ಪ್ಯಾಕ್ಟರಿ ಬಳಿ ಇರುವ ಯುವತಿಯ ಅಪ್ಪ ಲೋಕೇಶಪ್ಪ.ನವರ ಬಳಿ ಹೋಗಿ ನಿಮ್ಮ ಮಗಳನುಕೊಡಿ ಮದುವೆಯಾಗುತ್ತೇವೆ,ಎಂದು ಗಲಾಟೆ ಮಾಡಿದ್ದಾನೆ ಗಲಾಟೆ ವೇಳೆ ನಾವೂ ನಿನಗೆ ಮಗಳನು ಕೊಡುವುದಿಲ್ಲ ಎಂದಾಗಿ ಚೇತನ್ ಹಾಗೂ ಲೋಕೇಶಪ್ಪ ಹಾಗೂ ಆತನ ಹೆಂಡತಿ ಕಲಾವತಿ ಮಧ್ಯ ವಾಗ್ವಾದ ನಡೆದು, ಲೋಕೇಶಪ್ಪ ಹಾಗೂ ಕಲಾವತಿ ಯಾವುದೋ ಆಯುಧದಿಂದ ಹೊಡೆದ ಪರಿಣಾಮ ಚೇತನ್ ಮೃತಪಟ್ಟಿರುತ್ತಾನೆ.
ಸ್ಥಳಕ್ಕೆ ಹೊನ್ನವಳ್ಳಿ ಪೊಲೀಸ್ ಠಾಣೆ ಪೊಲೀಸರು ಭೇಟಿ ನೀಡಿ ಶವವನ್ನು ತಿಪಟೂರು ಸಾರ್ವಜನಿಕ ಆಸ್ಪತ್ರೆ ಶವಾಗಾರಕ್ಕೆ ಸಾಗಿಸಲಾಗಿದ್ದು
ತಿಪಟೂರು ಡಿವೈಎಸ್ಪಿ ವಿನಾಯಕ ಶೆಟ್ಟಿಗೇರಿ,ಗ್ರಾಮಾಂತರ ವೃತ್ತನಿರೀಕ್ಷಕ ಸಿದ್ದರಾಮೇಶ್ವರ್,ಹೊನ್ನವಳ್ಳಿ ಸಬ್ ಇನ್ಪೆಕ್ಟರ್ ರಾಜೇಶ್. ಹಾಗೂ ತಜ್ಞರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು
ಹೊನ್ನವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಕೈಗೊಳ್ಳಲಾಗಿದೆ.

ವರದಿ: ಮಂಜುನಾಥ್ ಹಾಲ್ಕುರಿಕೆ

ತುಮಕೂರು ಜಿಲ್ಲೆ ತಿಪಟೂರು ನಗರದ ಹಾಲ್ಕುರಿಕೆ ರಸ್ತೆ ಇರುವ ಹೊರವಲಯದಲ್ಲಿ ಧನಲಕ್ಷ್ಮಿ ತೆಂಗಿನ ಫ್ಯಾಕ್ಟರಿಯ ಬಳಿ ವ್ಯಕ್ತಿ ಶವವು ಮದ್ಯ ರಾತ್ರಿ 11=45 ರಲ್ಲಿ ಪತ್ತೆಯಾಗಿದೆ.

Your Attractive Heading

ಸುಮಾರು 45 ವರ್ಷ ವ್ಯಕ್ತಿ ಅಂದಾಜಿಸಲಾಗಿದೆ. ತಲೆಗೆ ಗಾಯವಾಗಿದ್ದು ಮರಣೋತ್ತರ ಪರೀಕ್ಷೆಗೆ ಸಾರ್ವಜನಿಕ ಆಸ್ಪತ್ರೆಗೆ ಶವವನ್ನು ರವಾನಿಸಲಾಗಿದೆ.

ಸ್ಥಳಕ್ಕೆ ಡಿವೈಎಸ್ಪಿ ವಿನಾಯಕ್ ಶೇಟಗೆರಿ, ವೃತ್ತ ನಿರೀಕ್ಷಕ ಸಿದ್ದರಾಮೇಶ್ವರ, ವಿಶೇಷ ತನಿಖಾ ತಂಡ ಹಾಜರಿದ್ದರು. ಈ ಪ್ರಕರಣವು ತಿಪಟೂರು ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ದಾಖಲಾಗಿದೆ.

ವರದಿ :ಮಂಜುನಾಥ್ ಹಾಲ್ಕುರಿಕೆ

ಸೊಗಡು ಜನಪದಹೆಜ್ಜೆ ತಿಪಟೂರು(ರಿ) ಹಾಗೂ ಶಾಲಾ ಶಿಕ್ಷಣ ಇಲಾಖೆ ತಿಪಟೂರು ಸಹಯೋಗದಲ್ಲಿ ನಗರದ ಎಸ್.ವಿ.ಪಿಪ್ರೌಡಶಾಲಾ ಆವರಣದಲ್ಲಿ ವಿದ್ಯಾರ್ಥಿಗಳಿಗೆ, ರಸಪ್ರಶ್ನೆ ಕಾರ್ಯಕ್ರಮ ನಡೆಸಿ ವಿಜೇತ ವಿದ್ಯಾರ್ಥಿಗಳಿಗೆ ಕಲ್ಪತರು ವಿದ್ಯಾರ್ಥಿ ರತ್ನ, ಬಹುಮಾನ ನೀಡಲಾಯಿತು

ಸ್ಪರ್ಧೆಯಲ್ಲಿ 150 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದರು,
ತಿಪಟೂರಿನ ಸಮಾಜ ಸೇವಕ ವ್ಯಕ್ತಿಗಳಾ ಸ್ಮರಣಾರ್ಥ ನೀಲಕಂಠಸ್ವಾಮಿ ತಂಡ ,ಸಿಂಗ್ರಿನಂಜಪ್ಪ ತಂಡ,ಪಲ್ಲಾಗಟ್ಟಿ ಅಡವಪ್ಪ,,ಸಾಲುಮರದ ಬೀರಜ್ಜ ತಂಡ, ಷಡಕ್ಷರ ದೇವರುತಂಡ ಹೆಸರಿನಲ್ಲಿ 5 ತಂಡ ರಚಿಸಿ
ಸ್ಪರ್ಧೆ ನಡೆಸಲಾಯಿತು.

ಸಿಂಗ್ರಿ ನಂಜಪ್ಪ ತಂಡ ಕಲ್ಪತರು ವಿದ್ಯಾರ್ಥಿ ರತ್ನ ಪ್ರಶಸ್ತಿಗೆ ಬಾಜನರಾದರು. ಸಿಂಗ್ರಿ ನಂಜಪ್ಪ ತಂಡದ ಶ್ರೀ ವಿವೇಕಾನಂದ ಇಂಟರ್ನ್ಯಾಷನಲ್ ಸ್ಕೂಲ್ ನ ವಿದ್ಯಾರ್ಥಿ ಭುವನ್ .ಎಸ್ ಮತ್ತು ನಳಂದ ಹೈಯರ್ ಪ್ರೈಮರಿ ಸ್ಕೂಲ್ ನ ವಿದ್ಯಾರ್ಥಿನಿಯರಾದ ಪೂರ್ವಿ ಎಂ,ಯುಗಶ್ರೀ ಜಿ ಡಿ .ಪ್ರಶಸ್ತಿಗೆ ಆಯ್ಕೆಯಾದರು,
ಸೋಗಡು ಜನಪದ ಹೆಜ್ಜೆ ತಿಪಟೂರು ಅಧ್ಯಕ್ಷರು ಮಾತನಾಡಿ ಈ ಮೂರು ವಿದ್ಯಾರ್ಥಿಗಳಿಗೆ ದಿನಾಂಕ 26.01.2025ರ ಗಣರಾಜ್ಯೋತ್ಸವ ದಿನದಂದು ಕಲ್ಪತರು ಕ್ರೀಡಾಂಗಣದಲ್ಲಿ ನಾಡಿನ ಗಣ್ಯರ, ಸಮ್ಮುಖದಲ್ಲಿ ಕಲ್ಪತರು ವಿದ್ಯಾರ್ಥಿ ರತ್ನ ಪ್ರಶಸ್ತಿ ಹಾಗೂ ಪ್ರತಿ ವಿದ್ಯಾರ್ಥಿ 25 ಗ್ರಾಂ ಬೆಳ್ಳಿ ಪದಕವನ್ನು ನೀಡಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಸಿರಿಗಂಧ ಗುರು, ಉಪಾಧ್ಯಕ್ಷರಾದ ನಿಜಗುಣ, ಕಾರ್ಯದರ್ಶಿಗಳಾದ ಚಿದಾನಂದ,ರವಿ, , ನಿವೃತ್ತ ಲೀಡ್ ಬ್ಯಾಂಕ್ ಮುಖ್ಯ ವ್ಯವಸ್ಥಾಪಕರಾದ ಜ್ಯೋತಿ ಗಣೇಶ್ ,
ನಗರಸಭಾ ಸದಸ್ಯರಾದ
ಡಾ. ಓಹಿಲಾ ತರಕಾರಿ ಗಂಗಾಧರ್, ಜೆಮ್ಸ್ ಫೌಂಡೇಶನ್ ಕಾರ್ಯದರ್ಶಿ ತರಕಾರಿ ಗಂಗಾಧರ್,ಎಸ್ ವಿ ಪಿ ಶಾಲೆಯ ಉಪನ್ಯಾಸಕರಾದ ರೇಣುಕಪ್ಪ, ಉಪ್ನಳ್ಳಿ ದ್ರಾಕ್ಷಣಮ್ಮ, ಪ್ರಭಾ ವಿಶ್ವನಾಥ್, ಮಂಜುಳಾ ತಿಮ್ಮೇಗೌಡ್ರು, ಇನ್ನಿತರರು ಉಪಸ್ಥಿತರಿದ್ದರು.

ವರದಿ :ಮಂಜುನಾಥ್ ಹಾಲ್ಕುರಿಕೆ

ಕರ್ನಾಟಕ ವಿಧಾನಸಭಾ ಉಪಚುನಾವಣೆ, ಚನ್ನಪಟ್ಟಣ, ಸಂಡೂರು & ಶಿಗ್ಗಾಂವಿ ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಾದ ಸಿ,ಪಿ ಯೋಗೀಶ್ವರ್, ಶ್ರೀಮತಿ ಅನ್ನಪೂರ್ಣ ತುಕಾರಾಂ & ಪಠಾಣ ಯಾಸೀರ್ ಅಹ್ಮದ್ ಖಾನ್ ಜಯಭೇರಿಗಳಿಸಿದ ಹಿನ್ನೆಲೆ ಹಾಗೂ ಜಾರ್ಖಂಡ್ ಕಾಂಗ್ರೆಸ್ ಸರ್ಕಾರ ಜಯಗಳಿಸಿರುವ ಹಿನ್ನೆಲೆಯಲ್ಲಿ ತಿಪಟೂರು ನಗರದ ನಗರಸಭಾ ವೃತ್ತದಲ್ಲಿ ಶಾಸಕ ಕೆ.ಷಡಕ್ಷರಿ ನೇತೃತ್ವದಲ್ಲಿ ಪಟಾಕಿ ಸಿಡಿಸಿ, ಸಿಹಿವಿತರಿಸುವ ಮೂಲಕ,ವಿಜಯೋತ್ಸವ ಆಚರಿಸಲಾಯಿತು.

ವಿಜಯೋತ್ಸವದಲ್ಲಿ ಮಾತನಾಡಿದ ಶಾಸಕ ಕೆ.ಷಡಕ್ಷರಿ ಚನ್ನಪಟ್ಟಣ, ಸಂಡೂರು,ಶಿಗ್ಗಾವಿ ಮತಕ್ಷೇತ್ರದ ಜಯ ಜನಪರ ಆಡಳಿತಕ್ಕೆ ಸಂದಜಯ,ಕಾಂಗ್ರೇಸ್ ಪಕ್ಷ ನೀಡಿರುವ,ಜನಪರ ಕಾರ್ಯಕ್ರಮಗಳು ಹಾಗೂ ಜನಪರ ಆಡಳಿತಕ್ಕೆ ಜನ ಮತನೀಡಿದ್ದಾರೆ.
ನಮ್ಮ ಸರ್ಕಾರದ ಪಂಚಗ್ಯಾರಂಟಿ ಯೋಜನೆಗಳು ಜನರಿಗೆ ಸಹಾಯವಾಗಿವೆ,ಗೃಹಲಕ್ಷ್ಮಿ, ಅನ್ನಭಾಗ್ಯ,ಗೃಹಜ್ಯೋತಿ,ಶಕ್ತಿಯೋಜನೆ ಅನ್ನಭಾಗ್ಯ ಯೋಜನೆಗಳಿಂದ ಶ್ರೀ ಸಾಮನ್ಯ ಜನರಿಗೆ ಅನುಕೂಲವಾಗುತ್ತಿದೆ,
ನಮ್ಮ ಜನಪರ ಆಡಳಿತದಿಂದ ಚುನಾವಣೆಯಲ್ಲಿ ನಮ್ಮ ಅಭ್ಯಾರ್ಥಿಗಳು ಜಯಗಳಿಸಿದ್ದಾರೆ ಎಂದು ತಿಳಿಸಿದರು.

ವಿಜಯೋತ್ಸವದಲ್ಲಿ ನಗರಸಭೆ ಅಧ್ಯಕ್ಷೆ ಶ್ರೀಮತಿ ಯಮುನಾ ಧರಣೇಶ್,ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಮಡೇನೂರು ಕಾಂತರಾಜು,ನಗರಕಾಂಗ್ರೇಸ್ ಅಧ್ಯಕ್ಷ ತರಕಾರಿ ಪ್ರಕಾಶ್,ನಗರಸಭೆ ಸದಸ್ಯರಾದ ಹೂರ್ ಬಾನು.,ವಿನುತಾ ತಿಲಕ್,ಯೋಗೇಶ್ ,ಮಹೇಶ್,ಮುಖಂಡರಾದ,ಮಾಜಿ ತಾ.ಪಂ ಅಧ್ಯಕ್ಷ ನ್ಯಾಕೇನಹಳ್ಳಿ ಸುರೇಶ್, ಎಂ.ಡಿ ರವಿಕುಮಾರ್,ಮಾದಿಹಳ್ಳಿ ರೇಣು,ಸೈಫುಲ್ಲ,ಮಾದಿಹಳ್ಳಿರೇಣು.ವಗ್ಗನಘಟ್ಟ ಯೋಗಾನಂದ್,ಲೋಕನಾಥ್ ಸಿಂಗ್ ಮುಂತ್ತಾದವರು ಉಪಸ್ಥಿತರಿದರು

ವರದಿ :ಮಂಜುನಾಥ್ ಹಾಲ್ಕುರಿಕೆ

ಗುಬ್ಬಿ: ತಾಲ್ಲೂಕಿನ ಕಡಬ ಹೋಬಳಿಯ ಜನಕದೇವನಹಳ್ಳಿ ಗ್ರಾಮದಲ್ಲಿ ಸರಳವಾಗಿ ಕನಕದಾಸರ ಜಯಂತಿ ಆಚರಿಸಲಾಗಿತ್ತು, ಗ್ರಾಮದ ಕುರುಬ ಸಮಾಜದ ಮುಖಂಡರಾದ ಚಿಕ್ಕಣ್ಣ ಮಾತನಾಡಿ ನಮ್ಮ ಗ್ರಾಮದಲ್ಲಿ ಪ್ರತಿ ವರ್ಷವೂ ಕನಕ ದಾಸರ ಜಯಂತಿನ್ನು ಕುರುಬ ಸಮಾಜಕ್ಕೆ ಸೀಮಿತವಾಗದೆ ಎಲ್ಲಾ ಸಮುದಾಯದವರು ಒಟ್ಟಾಗಿ ಆಚರಿಸುತ್ತೇವೆ, ನಮ್ಮ ನಾಡು ದೇಶಕ್ಕೆ ಕೀರ್ತಿ ತಂದಿದ್ದಾರೆ ನಾವು ಅವರ ಹಾದಿಯಲ್ಲಿ ಹೋಗಬೇಕು ಮುಂದಿನ ದಿನಗಳಲ್ಲಿ ನಮ್ಮ ಗ್ರಾಮದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಶಾಸಕರಿಗೆ ಮನವಿ ಮಾಡಿದ್ದೇವೆ ಎಂದರು ಮತ್ತೊಬ್ಬರು ಮಾತನಾಡಿ ಕನಕ ದಾಸರ ಆಚಾರ ವಿಚಾರಗಳನ್ನು ನಾವು ಪಾಲಿಸಬೇಕು ಎಲ್ಲಾರೂ ಒಗ್ಗಟ್ಟಾಗಿ ಬೆಳೆಯಬೇಕು ಎಂದರು ಕಾರ್ಯಕ್ರಮದಲ್ಲಿ ಕುರುಬ ಸಮಾಜ ಸಂಘಟನೆಯ ಮುಖಂಡರು, ಗ್ರಾಮಸ್ಥರು ಹಾಜರಿದ್ದರು.

ವರದಿ: ಸಂತೋಷ್ ಓಬಳ. ಗುಬ್ಬಿ

ತಿಪಟೂರು ಮಾರನಗೆರೆ ಸಮುದಾಯ ಭವನ ವಿಸ್ತರಣೆ ಹಾಗೂ ಅಭಿವೃದ್ದಿ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸುತ್ತಿರುವ ಶಾಸಕ.ಕೆ.ಷಡಕ್ಷರಿ ಹಾಗೂ ನಗರಸಭಾ ಅಧ್ಯಕ್ಷೆ ಶ್ರೀಮತಿ ಯಮುನಾಧರಣೇಶ್,

ತಿಪಟೂರು ನಗರದ ವಾರ್ಡ್ ನಂಬರ್ 3 ರ ಚಿಕ್ಕಮಾರ್ಕೇಟ್ ನಿಂದ ಕಾರೋನೆಷನ್ ರಸ್ತೆ ವರೆಗೆ ರಸ್ತೆ ಅಭಿವೃದ್ದಿ ಕಾಮಗಾರಿ,ವಾರ್ಡ್ ನಂಬರ್ 7ರಲ್ಲಿ 3ಮತ್ತು 4 ರಸ್ತೆ ಅಭಿವೃದ್ದಿ ಕಾಮಗಾರಿ,ವಾರ್ಡ್ ನಂಬರ್ 13ರಲ್ಲಿ ರಸ್ತೆ ಅಭಿವೃದ್ದಿ ಕಾಮಗಾರಿ.ವಾರ್ಡದ ನಂಬರ್ 14 ರಲ್ಲಿ ರಸ್ತೆ ಅಭಿವೃದ್ದಿ ಕಾಮಗಾರಿ,ಕಂಚಾಘಟ್ಟ ವಾರ್ಡ್ ನಂಬರ್15ರಲ್ಲಿ ರಸ್ತೆ ಅಭಿವೃದ್ದಿ ಕಾಮಗಾರಿ, ಅಗ್ನಿಶಾಮಕ ಠಾಣೆ ಮುಂಬಾಗದ ಪೊಲೀಸ್ ಕ್ವಾಟ್ರಸ್ ರಸ್ತೆ ಅಭಿವೃದ್ದಿ,ವಾರ್ಡ್ ನಂಬರ್ 17 ರ ರಸ್ತೆ ಅಭಿವೃದ್ದಿ,ವಿನಾಯಕನಗರ ಬಡಾವಣೆ ರಸ್ತೆ ಅಭಿವೃದ್ದಿ,ವಾರ್ಡ್ ನಂಬರ್ 16ರ ಮಾರನನಗೆರೆ ಕಾಲೋನಿ ಸಮುದಾಯ ಭವನ ವಿಸ್ತರಣೆ ಕಾಮಗಾರಿ,ವಾರ್ಡ್ ನಂಬರ್ 18ರ ಇಂದಿರಾನಗರ ಎಂ.ಆರ್ ರಾಮಣ್ಣ ಲೇಔಟ್ ರಸ್ತೆ ಅಭಿವೃದ್ದಿ,ಇಂದಿರಾ ನಗರ ಮುಖ್ಯರಸ್ತೆ ಅಭಿವೃದ್ದಿ,ವಾರ್ಡ್ ನಂಬರ್ 21ರ ಗಾಂಧೀನಗರ 3 ಮತ್ತು 4 ಅಡ್ಡರಸ್ತೆ ಅಭಿವೃದ್ದಿ.ವಾರ್ಡ್ ನಂಬರ್ 23 ರ ಆಲ್ ಅಮೀನ್ ನಗರ ಚರಂಡಿ ನಿರ್ಮಾಣ.ವಾರ್ಡ್ ನಂಬರ್ 27ರ ವಿವೇಕಾನಂದ ನಗರ 1ನೇ ಕ್ರಾಸ್ ನಿಂದ 5ನೇ ಕ್ರಾಸ್ ವರೆಗೆ ಇಂಟರ್ ಲಾಕ್ ಕಾಮಗಾರಿ.ಡಬ್ಲ್ಯೂ ಟಿವಿ ಕಾಂಪೋಡ್ ಕಾಮಗಾರಿ,ನಗರಸಭೆ ವ್ಯಾಪ್ತಿಯಲ್ಲಿ ಬಸ್ ಶಲ್ಟರ್ ನಿರ್ಮಾಣ,35 ಲಕ್ಷ ವೆಚ್ಚದ 24×7 ಕುಡಿಯುವ ನೀರಿನಯೋಜನೆಯಲ್ಲಿ ಬಿಟ್ಟುಹೋಗಿರುವ ವಾರ್ಡ್ ಗಳಿಗೆ ನೀರುಪೂರೈಕೆ ಯೋಜನೆಗೆ ಗುದ್ದಲಿಪೂಜೆ ನೆರವೇರಿಸಿದರು

ಕಾಮಗಾರಿಗೆ ಚಾಲನೆ ನೀಡಿಮಾತನಾಡಿದ ಶಾಸಕ ಕೆ.ಷಡಕ್ಷರಿ ತಿಪಟೂರು ನಗರದಲ್ಲಿ ಸುಮಾರು 2ಕೋಟಿ 50ಲಕ್ಷದ ವಿವಿಧ ಕಾಮಗಾರಿಗಳಿಗೆ ಶಾಸಕರ ವಿಶೇಷ ಅನುದಾನದಲ್ಲಿ ನೀಡಿದ್ದೇನೆ,ನಗರಸಭೆ ವ್ಯಾಪ್ತಿಯಲ್ಲಿ ಮೂಲಸೌಕರ್ಯಗಳಿಗೆ ಆಧ್ಯತೆ ನೀಡುತ್ತಿದ್ದು, ಅಗತ್ಯವಿರುವ ಕಡೆ,ರಸ್ತೆ ನಿರ್ಮಾಣ ಹಾಗೂ ಸಿಮೆಂಟ್ ಚರಂಡಿ ನಿರ್ಮಾಣಕ್ಕೆ ಅನುದಾನ ನೀಡಿದ್ದು, ಗುದ್ದಲಿಪೂಜೆ ನೆರವೇರಿಸಿದ್ದೇವೆ. ಗುಣಮಟ್ಟದ ಕಾಮಗಾರಿ ಮಾಡಲು ಗುತ್ತಿಗೆದಾರರಿಗೆ ಸೂಚಿಸಿದ್ದೇನೆ,ಅಲ್ಲದೆ ನಗರಕ್ಕೆ ಕುಡಿಯುವ ನೀರಿನ ಪೈಪ್ ಲೈನ್ ದುರಸ್ತಿ,24×7ಕುಡಿಯುವ ನೀರಿನ ಯೋಜನೆ ವ್ಯಾಪ್ತಿಯಿಂದ ಬಿಟ್ಟು ಹೋಗಿರುವ ಬಡಾವಣೆಗಳಿಗೆ ನೀರುಪೂರೈಸುವ,ಯೋಜನೆ ಸೇರ್ಪಡೆಗೆ ಹಣ ನೀಡಲಾಗಿದೆ, ಜನರಿಗೆ ಅಗತ್ಯವಿರುವ ಕೆಲಸಗಳಿಗೆ ಅನುದಾನ ನೀಡುತ್ತೇನೆ ಎಂದು ತಿಳಿಸಿದರು

ನಗರಸಭೆ ಅಧ್ಯಕ್ಷೆ ಶ್ರೀಮತಿ ಯಮುನಾಧರಣೇಶ್ ಮಾತನಾಡಿ ತಿಪಟೂರು ನಗರದಲ್ಲಿ ಹಲವಾರು ಅಭಿವೃದ್ದಿ ಕಾಮಗಾರಿಗಳಿಗೆ ಶಾಸಕರ ಅನುದಾನದಲ್ಲಿ ಹಣ ನೀಡಲಾಗಿದೆ, ನಗರದ ಅಭಿವೃದ್ದಿಗೆ ಶಾಸಕರು ಹೆಚ್ಚಿನ ಒತ್ತುನೀಡಿದ್ದಾರೆ, ಶಾಸಕರ ಸಹಕಾರದಿಂದ ನಗರಸಭೆ ಅಭಿವೃದ್ದಿಗೆ ಹೆಚ್ಚು ಒತ್ತುನೀಡಲಾಗುವುದು, ನಗರದಲ್ಲಿ ಜನರಿಗೆ ತೊಂದರೆಯಾಗದಂತೆ ಜನರಸಮಸ್ಯೆಗಳಿಗೆ ಸ್ಪಂದಿಸಲು ಅಧಿಕಾರಿಗಳಿಗೆ ಸೂಚಿಸಿದ್ದು, ನಗರದ ಮೂಲಸೌಕರ್ಯಗಳ ಅಭಿವೃದ್ದಿಗೆ ಆಧ್ಯತೆ ನೀಡುವುದಾಗಿ ತಿಳಿಸಿದರು,

ಕಾರ್ಯಕ್ರಮದಲ್ಲಿ ಮಾಜಿ ನಗರಸಭೆ ಅಧ್ಯಕ್ಷ ಆರ್.ಡಿ ಬಾಬು, ಸದಸ್ಯರಾದ ಮಹೇಶ್ ಸಂಜೀವಯ್ಯ,ಪದ್ಮಶಿವಣ್ಣ,ಯೋಗೇಶ್ ಮುಖಂಡರಾದ ,ಧರಣೇಶ್,ಲೋಕನಾಥ್ ಸಿಂಗ್,ಗಾರೆ ಶಿವಣ್ಣ, ಶಿವಲಿಂಗಯ್ಯ ಸುಜಿತ್ ಭೂಷಣ್ ಚನ್ನರಾಜು.ಮಧುಸೂಧನ್.ಮುಂತ್ತಾದವರು ಉಪಸ್ಥಿತರಿದರು

ವರದಿ :ಮಂಜುನಾಥ್ ಹಾಲ್ಕುರಿಕೆ

ತಿಪಟೂರು:ನಗರದ ಗ್ರಂಥಾಲಯದಲ್ಲಿ ಗ್ರಂಥಾಲಯ ಸಪ್ತಾಹ ಆಚರಿಸಲಾಯಿತು

ನಿವೃತ್ತ ಶಿಕ್ಷಕರಾದ ಸೋಮಶೇಖರ್, ಸಪ್ತಾಹಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಪುಸ್ತಕಗಳು ಮನುಷ್ಯನಿಗೆ ಉತ್ತಮ ಸ್ನೇತ ಇದ್ದಹಾಗೆ,ಓದುವ ಹಾವ್ಯಾಸ ರೂಡಿಸಿಕೊಂಡರೆ ಮಾನಸಿಕ ನೆಮ್ಮದಿ ಪಡೆಯ ಬಹುದು, ಕೆಟ್ಟ ಚಟಗಳಿಂದ ದೂರವಾಗಿ ನೆಮ್ಮದಿ ಪಡೆಯುಲು ಪುಸ್ತಕಗಳ ಓದುವ ಹವ್ಯಾಸಬೆಳಸಿಕೊಳ್ಳಬೇಕು ಎಂದು ತಿಳಿಸಿದರು

ಸವಿತಾ ಸಮಾಜದ ಮುಖಂಡ ಗೋವಿಂದ ರಾಜು ಮಾತನಾಡಿ ಗ್ರಂಥಾಲಯಗಳು ದೇವಾಲಯಗಳಂತೆ,ಜ್ಞಾನ ಸಂಪಾದನೆಗೆ ಉತ್ತಮ ತಾಣಗಳು ದುಶ್ಚಟಗಳಿಂದ ವಿದ್ಯಾರ್ಥಿಗಳಿಗೆ,ದೂರವಾಗಲು ಹೆಚ್ಚುಸಮಯ ಗ್ರಂಥಾಲಯದಲ್ಲಿ ಕಳೆಯಬೇಕು,ಹೆಚ್ವು ಹೆಚ್ಚು ಓದಿದಂತೆ ಹೆಚ್ಚು ಹೆಚ್ಚು ಜ್ಞಾನ ವೃದ್ದಿಯಾಗುತ್ತದೆ,ವಿದ್ಯಾರ್ಥಿಗಳು ಗ್ರಂಥಾಲಯಕ್ಕೆ ನೀವು ಬನ್ನಿ, ನಿಮ್ಮವರನ್ಮು ಕರೆತನ್ನಿ, ಎಂಬ ಘೋಷವಾಕ್ಯ ದೊಂದಿಗೆ ಕರೆ ಕೊಟ್ಟರು, ಮಹಾಲಿಂಗಪ್ಪ ನಿವೃತ್ತ ಶಿಕ್ಷಕರು, ಶಿಕ್ಷಕರಾದ ಲೋಕೇಶ್ ಗ್ರಂಥಾಲಯ ಪ್ರಭಾರಕರಾದ ಡಿ.ಎಸ್ .ಚಂದ್ರಶೇಖರ್ ಕವಿತಾ, ಶೋಭಾ ಹೆಚ್.ಟಿ ಹಾಗೂ ವಿದ್ಯಾರ್ಥಿಗಳು ಓದುಗರು,ಭಾಗವಹಿಸಿದ್ದರು

ತಿಪಟೂರು: ದೇಶ, ರಾಜ್ಯದಲ್ಲಿ ಚುನಾವಣೆಗಳು ಆರಂಭವಾಗುತ್ತಿದ್ದಂತೆ ಜನರಲ್ಲಿ ಸೋಲು ಗೆಲುವಿನ ಲೆಕ್ಕಾಚಾರಗಳು ಸರ್ವೆ ಸಮಾನ್ಯ, ಕ್ಷೇತ್ರ ಇತಿಹಾಸ, ಅಭ್ಯರ್ಥಿ, ಪಕ್ಷ, ಜಾತಿ ಹೀಗೆ ಒಬ್ಬೊಬ್ಬರು ಒಂದೊಂದು ವಿಚಾರಗಳನ್ನ ಮುಂದಿಟ್ಟುಕೊಂಡು ತಮ್ಮದೇ ಆದ ರೀತಿಯಲ್ಲಿ ಅಭ್ಯರ್ಥಿಗಳ ಸೋಲು ಗೆಲುವಿನ ವಿಶ್ಲೇಷಣೆ ಮಾಡುತ್ತಾರೆ.
ಅಭಿಮಾನಿಗಳು ಪಕ್ಷದ ಕಾರ್ಯಕರ್ತರುಗಳು ತಮ್ಮ ನಾಯಕನ ಗೆಲುವಿಗಾಗಿ ದೇವರ ಮೊರೆ ಹೋಗುವುದು, ಪೂಜೆ ಪುನಸ್ಕಾರಗಳನ್ನ ಮಾಡುವುದು ನಡೆಯುತ್ತಿದೆ. ಇದರ ಜೊತೆಗೆ ಜ್ಯೋತಿಷಿಗಳು ಚುನಾವಣೆಯ ಫಲಿತಾಂಶಗಳನ್ನ ಮೊದಲೇ ಭವಿಷ್ಯ ಹೇಳುವ ಪರಿಪಾಠ ಈ ಹಿಂದಿನಿಂದಲೂ ನಡೆಯುತ್ತಲೇ ಬಂದಿದೆ.

ರಾಜ್ಯದಲ್ಲಿ ನಡೆದ ಶಿಗ್ಗಾವಿ. ಸಂಡೂರು.ಹಾಗೂ ಚನ್ನಪಟ್ಟಣ ವಿಧಾನಸಭಾ ಉಪಚುನಾವಣೆಯ ಭಾರಿ ಸದ್ದು ಮಾಡಿದೆ. ಮೂರು ವಿಧಾನಸಭಾ ಕ್ಷೇತ್ರಗಳ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದ್ದು ನ.23 ರಂದು ತೆರೆಬೀಳಲಿದೆ. ಈ ಪೈಕಿ ತೀವ್ರ ಕುತೂಹಲ ಕೆರಳಿಸಿರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಫಲಿತಾಂಶಕ್ಕೆ ರಾಜ್ಯದ ಜನರು ಕಾತರದಿಂದ ಕಾಯುತ್ತಿದ್ದಾರೆ. ಎನ್ ಡಿಎ ಮೈತ್ರಿ ಪಕ್ಷದಿಂದ ಕೇಂದ್ರ ಸಚಿವ ಕುಮಾರಸ್ವಾಮಿ ಪುತ್ರ, ಮಾಜಿ ಪ್ರಧಾನಿ ದೇವೆಗೌಡರ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಒಂದು ಕಡೆಯಾದರೆ ಮತ್ತೊಂದೆಡೆ ಬಿಜೆಪಿಯಿಂದ ಕಾಂಗ್ರೇಸ್ ಪಕ್ಷ ಸೇರ್ಪಡೆಗೊಂಡಿರುವ ಮಾಜಿ ಸಚಿವ ಸಿಪಿ ಯೋಗೇಶ್ವರ್ ಸ್ಪರ್ಧೆ ಭಾರಿ ಕುತೂಹಲ ಕೆರಳಿಸಿದೆ. ಇಡೀ ರಾಜ್ಯದ ಜನ ಚನ್ನಪಟ್ಟಣ ಉಪಚುನಾಣೆ ಫಲಿತಾಂಶಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. ಮತ್ತೊಂದೆಡೆ ಜೆಡಿಎಸ್ ಕಾರ್ಯಕರ್ತರು ನಿಖಿಲ್ ಕುಮಾರಸ್ವಾಮಿ ಗೆಲುವಿಗೆ ಭದ್ರಕಾಳಿ ಅಮ್ಮನ ಮೊರೆ ಹೋಗಿದ್ದಾರೆ.

ತುಮಕೂರು ಜಿಲ್ಲೆ ತಿಪಟೂರು ತಾಲ್ಲೋಕಿನ ಬೆನಾಯ್ಕನಹಳ್ಳಿ ಗೇಟ್ ಬಳಿ ಇರುವ ಶಕ್ತಿ ದೇವತೆ ಶ್ರೀ ವೀರಭದ್ರೇಶ್ವರ ಹಾಗೂ ಭದ್ರಕಾಳಿ ಅಮ್ಮ ನವರ ಬಳಿ ಬರವಣಿಗೆ ಶಾಸ್ತ್ರ ಹಾಗೂ ಶ್ರೀ ಕಾಳಿ ರುದ್ರಪೀಠದ ಶ್ರೀ ರೇಣುಕಾ ಗುರೂಜಿ ಬಳಿ ಜೆಡಿಎಸ್ ಕಾರ್ಯಕರ್ತರು ಪ್ರಾಚೀನ ತಾಳೆಗರಿ ಶಾಸ್ತ್ರ, ರಂಗೋಲಿ ಮೇಲೆ ಭದ್ರಕಾಳಿ ಅಮ್ಮನವರು ಭರವಣಿಗೆಯ ಮೂಲಕ ಹೇಳುವ ಶಾಸ್ತ್ರ ಕೇಳಿದ್ದಾರೆ.

ದೇವಿ ಬರವಣಿಗೆ ಶಾಸ್ತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಗೆಲುವು ಖಚಿತ ಎಂದು ರಂಗೋಲಿ ಮೇಲೆ ಬರೆಯುವ ಮೂಲಕ ಅಭಯ ನೀಡಿದ್ದಾಳಂತೆ.

ತಾಳೇಗರಿ ಶಾಸ್ತ್ರದಲ್ಲಿಯೂ ಸಹ ನಿಖಿಲ್ ಕುಮಾರಸ್ವಾಮಿಗೆ ರಾಜಯೋಗ ಪ್ರಪ್ತಿಯಾಗಲಿದೆ, ತಾಂಬೂಲದೊಂದಿಗೆ , ಶ್ವೇತವರ್ಣದಾರಿಯಾಗಿ ರಾಜಗದ್ದುಗೆ ಏರಲಿದ್ದಾನೆ ಎಂಬುದಾಗಿ ಬರೆಯಲಾಗಿದೆ,
ಆಗಾಗಿ ತಾಳೇಗರಿ ಶಾಸ್ತ್ರದ ಪ್ರಕಾರ ರಾಜಗದ್ದುಗೆ ನಿಖಿಲ್ ಕುಮಾರಸ್ವಾಮಿಗೆ ಪ್ರಾಪ್ತಿಯಾಗಲಿದೆ, ಈ ಚುನಾವಣೆಯಲ್ಲಿ ಅವರು ಗೆದ್ದೆಗೆಲ್ಲುತ್ತಾರೆ. ನಿಖಿಲ್ ಕುಮಾರಸ್ವಾಮಿಗೆ ಮುಂದಿನ ದಿನಗಳಲ್ಲಿ ಉತ್ತಮ ರಾಜಕೀಯ ಭವಿಷ್ಯ ದೊರೆಯಲಿದೆ ಎಂದು ಶ್ರೀರೇಣುಕಾ ಗುರೂಜಿ ತಿಳಿಸಿದ್ದಾರೆ.

ಶ್ರೀ ಭದ್ರಕಾಳಿ ಅಮ್ಮನವರೂ ಮತದಾನದ ಪೂರ್ವದಲ್ಲೇ ನುಡಿದ ಭವಿಷ್ಯದಿಂದ ಜೆಡಿಎಸ್ ಮುಖಂಡರು ಶ್ರೀ ವೀರಭದ್ರೇಶ್ವರ ಹಾಗೂ ಭದ್ರಕಾಳಿ ಅಮ್ಮನವರ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆಸಲ್ಲಿಸಿದ್ದಾರೆ. ನಾಳೆ ಮತ ಎಣೆಕೆ ನಡೆಯಲಿದ್ದು ಪಕ್ಷದ ಕಾರ್ಯಕರ್ತರು, ಜನರ ಕುತೂಹಲಕ್ಕೆಅಂತಿಮ ತೆರೆ ಬೀಳಲಿದೆ.

ವರದಿ : ಮಂಜುನಾಥ್ ಹಾಲ್ಕುರಿಕೆ

ತುಮಕೂರು ಜಿಲ್ಲೆ ತಿಪಟೂರು ನಗರದ ಕೆ.ಆರ್ ಬಡಾವಣೆಯಲ್ಲಿರು ಮಾಜಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ರವರ ನಿವಾಸಕ್ಕೆ ಭೇಟಿ ನೀಡಿ ಆರೋಗ್ಯವಿಚಾರಿಸಿದರು

ಮಾಜಿ ಕೇಂದ್ರಸಚಿವ ಬಸನಗೌಡಪಾಟೀಲ್ ಯತ್ನಾಳ್, ಬೆಳಗಾವಿ ಶಾಸಕ ಸಾಹುಕಾರ್ ರಮೇಶ್ ಜಾರಕಿಹೋಳಿ, ಕುಮಾರ್ ಬಂಗಾರಪ್ಪ, ಮೈಸೂರು ಮಾಜಿ ಸಂಸದ ಪ್ರತಾಪಸಿಂಹ,ಮಾಜಿ ಸಚಿವ ಅರವಿಂದ ಲಿಂಬಾವಳಿ,ಸೇರಿದಂತೆ ಅನೇಕ ಮುಖಂಡರು ಭೇಟಿ ನೀಡಿದರು

ನಂತರ ತಿಪಟೂರು ನಗರದಲ್ಲಿ ನಡೆಯುತ್ತಿರುವ ಅರಸೀಕೆರೆ ಜೆಡಿಎಸ್ ಮುಖಂಡ ಎನ್. ಆರ್ ಸಂತೋಷ್ ಸೋದರನ ಮದುವೆ ಕಾರ್ಯಕ್ರಮಕ್ಕೆ ಭೇಟಿ ನೀಡಿದರು

ವರದಿ: ಮಂಜುನಾಥ್ ಹಾಲ್ಕುರಿಕೆ

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಹಾಗೂ ಜಿಲ್ಲಾಡಳಿತ ತುಮಕೂರು, ಜಿಲ್ಲಾಪಂಚಾಯ್ತಿ ತುಮಕೂರು ಮಹಾನಗರಪಾಲಿಕೆ ತುಮಕೂರು,ವತಿಯಿಂದ ಕರ್ನಾಟಕ ಸುವರ್ಣ ಸಂಭ್ರಮ’ದ ಅಂಗವಾಗಿ ತುಮಕೂರು ನಗರದ ಮಹತ್ಮಗಾಂಧೀ ಕ್ರೀಡಾಂಗಣದಲ್ಲಿ ‘ರಾಜ್ಯ ಮಟ್ಟದ ಪತ್ರಕರ್ತರ ಕ್ರೀಡಾಕೂಟ’ ಆಯೋಜಿಸಿದ್ದು, ಕ್ರೀಡಾಕೂಟದ ಅಂಗವಾಗಿ ತುಮಕೂರಿನಿಂದ ಪ್ರರಂಭವಾದ “ಕ್ರೀಡಾಜ್ಯೋತಿಯನ್ನು ತಿಪಟೂರಿನಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಯಿತು

ತಿಪಟೂರು ಗ್ರಾಮದೇವತೆ ಶ್ರೀ ಕೆಂಪಮ್ಮ ದೇವಿ ದೇವಾಲಯದ ಆವರಣದಲ್ಲಿ ಶಾಸಕ ಕೆ.ಷಡಕ್ಷರಿ, ನಗರಸಭಾ ಅಧ್ಯಕ್ಷರಾದ ಶ್ರೀಮತಿ ಯಮುನಾಧರಣೇಶ್. ಕ್ರೀಡಾಜ್ಯೋತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಸ್ವಾಗತಿಸಿದರು.

ಕ್ರೀಡಾಜ್ಯೋತಿ ಸ್ವಾಗತಿ ಮಾತನಾಡಿದ ಶಾಸಕ ಕೆ.ಷಡಕ್ಷರಿ ಕ್ರೀಡೆ ಮನುಷ್ಯನ ಆರೋಗ್ಯ ವೃದ್ದಿಗೆ ಸಹಕಾರಿ ಸದಾ ಒತ್ತಡದಲ್ಲಿರುವ ಪತ್ರಕರ್ತರು ನಿಯಮಿತ ವ್ಯಾಯಾಮದಲ್ಲಿ ತೊಡಗಿಸಿಕೊಂಡು, ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು,
ತುಮಕೂರಿನಲ್ಲಿ ರಾಜ್ಯಮಟ್ಟದ ಕ್ರೀಡಾಕೂಟ ನಡೆಯುತ್ತಿರುವುದು ಸಂತೋಷದ ವಿಷಯ ಎಲ್ಲರೂ ಒಗ್ಗಟಿನಿಂದ ಕ್ರೀಡಾಕೂಟದಲ್ಲಿ ಭಾಗವಹಿಸಿ ಕ್ರೀಡಾಕೂಟ ಯಶಸ್ವಿಯಾಗಲಿ ಎಂದು ತಿಳಿಸಿದರು

ತಹಸೀಲ್ದಾರ್ ಪವನ್ ಕುಮಾರ್, ಇಒ ಸುದರ್ಶನ್, ಪೌರಾಯುಕ್ತ ವಿಶ್ವೇಶ್ವರಯ್ಯ ಬದರಗಡೆ,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಾದ ಅಶೋಕ್, ಜಿಲ್ಲಾಪ್ರಧಾನ ಕಾರ್ಯದರ್ಶಿ ಟಿ.ಇ ರಘುರಾಮ್, ಕ್ರೀಡಾ ಸಮಿತಿ ಅಧ್ಯಕ್ಷ ಎನ್.ಡಿ ರಂಗರಾಜು. ಹಿರಿಯಪತ್ರಕರ್ತರಾದ ಸುರೇಶ್, ಎನ್ ಬಾನುಪ್ರಶಾಂತ್,ಟಿ.ಸಿ ಎಸ್ ಮೂರ್ತಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಶಾಂತ್ ಕರೀಕೆರೆ ಪ್ರಧಾನ ಕಾರ್ಯದರ್ಶಿ ಡಿ.ಕುಮಾರ್,ಉಪಾಧ್ಯಕ್ಷ ರವೀಂದ್ರ ಕುಮಾರ್ ಜಿಲ್ಲಾ ಸಮಿತಿ ಸದಸ್ಯ ಮಂಜುನಾಥ್ ಹಾಲ್ಕುರಿಕೆ,ಕಾರ್ಯದರ್ಶಿ ಸಿದ್ದೇಶ್ವರ್, ಖಜಾಂಚಿ ಎ.ಆರ್ ಕುಮಾರಸ್ವಾಮಿ ,ನಿರ್ದೇಶಕರಾದ ಆನಂದ್. ರಂಗನಾಥ್ ಪಿ. ನಂದಿನಿ. ಕಲ್ಲೇಶ್ ಶೆಟ್ಟಿಹಳ್ಳಿ ಮನೋಹರ್ .ಟಿ.ಎಸ್ ದಯಾನಂದ್ ಸೋಮನಾಥ್ ಬಿ.ಟಿ ಕುಮಾರ್ .ಕಿರಣ್ , ಮಿಥುನ್,ಪ್ರಕಾಶ್.ನಾಗರಾಜು,ರವಿ ಮುಂತ್ತಾದವರು ಉಪಸ್ಥಿತರಿದರು.

ವರದಿ: ಮಂಜುನಾಥ್ ಹಾಲ್ಕುರಿಕೆ

error: Content is protected !!