Year: 2025

ತುಮಕೂರು ಜಿಲ್ಲೆ ತುರುವೇಕೆರೆ ನಗರದ ಡಾ//ಬಿ.ಆರ್ ಅಂಬೇಡ್ಕರ್ ಭವನದ ಮುಂಭಾಗ ಭೀಮಾಕೋರೆಗಾವ್ ವಿಜಯ ಸ್ಮಾರಕದ ಪ್ರತಿಕೃತಿ ರಚಿಸಿದ ದಲಿತ ಸಂಘಟನೆಗಳ ಮುಖಂಡರು ಸಂವಿಧಾನ ಶಿಲ್ಪಿ ಡಾ//ಬಿ.ಆರ್ ಅಂಬೇಡ್ಕರ್ ಹಾಗೂ ಭೀಮಾಕೋರೆಗಾವ್ ವಿಜಯಸ್ಮಾರಕಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಮೊಹರ್ ಸೈನಿಕರಿಗೆ ನಮನ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ, ಅಂಬೇಡ್ಕರ್ ವಾದ ತಾಲೂಕು ಸಂಚಾಲಕ ಕೃಷ್ಣ ಮಾದರ್, ಮಾತನಾಡಿ ಭೀಮಾಕೋರೆಗಾವ್ ಭಾರತದಲ್ಲಿ ದಲಿತರು ಶೋಷಿತರು ಆತ್ಮಾಭಿಮಾನದ ಯುದ್ದ, ಸಾವಿರಾರು ವರ್ಷಗಳ ಅಸ್ಪೃಷ್ಯತೆಯ ಜ್ವಾಲೆಯ ಪ್ರತಿಕಾರವಾಗಿ ಹೊರಹೊಮ್ಮಿದ ಮಹರ್ ಸೈನಿಕರು, ತಮಗೆ ಆಗುತ್ತಿರುವ ಅನ್ಯಾಯದ ವಿರುದ್ದಿ ಹೋರಾಡಿ ಮನುವಾದಿಗಳಿಗೆ ದಿಟ್ಟ ಉತ್ತರ ನೀಡಿದ್ದಾರೆ, ಅವರ ಜೀವದಾನದ ಫಲ ಇಂದು ಕೋಟ್ಯಾನು ಕೋಟಿ ದಲಿತ ಬಂಧುಗಳಿಗೆ ಸಾಮಾಜಿಕ ನ್ಯಾಯಕ್ಕೆ ಮುನ್ನಡಿ ನೀಡಿದೆ ಎಂದು ತಿಳಿಸಿದರು.
ಚಲವಾದಿ ಮಹಾಸಭಾ ಅಧ್ಯಕ್ಷ ಕುಣಿಕೇನಹಳ್ಳಿ ಜಗದೀಶ್ ಮಾತನಾಡಿ ಭೀಮಾಕೋರೆಗಾವ್ ಯುದ್ದ ಸ್ಮಾರಕ ದಲಿತರ ಸ್ವಾಭಿಮಾನದ ಸಂಕೇತ ಸಾವಿರಾರು ವರ್ಷಗಳಿಂದ ಅಟ್ಟಹಾಸ ಮೆರಯುತ್ತಿದ ಮನುವಾದಿ ಪೇಶ್ವೆಗಳ ದುಷ್ಟತನದ ವಿರುದ್ದ ಮಹರ್ ಸೈನಿಕರು ಆತ್ಮಾಭಿಮಾನದಿಂದ ಹೋರಾಟ ಮಾಡಿ ಜಯಗಳಿಸಿದ ವಿಜಯದಿನ ಡಾ//ಬಿ.ಆರ್ ಅಂಬೇಡ್ಕರ್ ರವರಿಗೆ ಸ್ಪುರ್ತಿಯ ಸ್ಥಳವಾಗಿತ್ತು, ಪ್ರತಿವರ್ಷ ಜನವರಿ ಒಂದನೇ ತಾರೀಕು ,ಬಾಬಾ ಸಾಹೇಬರ್ ಭೀಮಾಕೋರೆಗಾವ್ ಗೆ ಭೇಟಿನೀಡಿ ನಮನ ಸಲ್ಲಿಸುತ್ತಿದರು. ಸರ್ಕಾರ ಪ್ರತಿ ವರ್ಷ ವಿಜಯೋತ್ಸವ ಆಚರಿಸಬೇಕು, ಹಾಗೂ ಪಠ್ಯಪುಸ್ತಕಗಳಲ್ಲಿ ಭೀಮಾಕೋರೆಗಾವ್ ಇತಿಹಾಸ ಅಳವಡಿಸಬೇಕು ಎಂದು ತಿಳಿಸಿದರು

ಸಮಾಜ ಸೇವಕ ರಾಘು ಮಾತನಾಡಿ , ಭೀಮಾ ಕೋರೇಗಾoವ್ ಒಂದು ನೆನಪು ಬಾಬಾ ಸಾಹೇಬರು ಪ್ರತಿಬಾರಿ ಭೇಟಿ ನೀಡುತ್ತಿದ್ದ ಸ್ಥಳಗಳ ಪೈಕಿ ಕೋರೇಗಾoವ್ ಕೂಡಾ ಒಂದು.ದಾಸ್ಯದ ವಿರುದ್ಧ ಹಾಗೂ ಮನುವಾದಿಗಳ ಅಮಾನವೀಯ ಶೋಷಣೆಯ ವಿರುದ್ಧ ಮೊಟ್ಟ ಮೊದಲ ಬಾರಿಗೆ ಸ್ಪೋಟಗೊಂಡ ಈ ಹೋರಾಟವು ಭಾರತದ ಪಾಲಿಗೆ ಮೊದಲನೇ ಸಾಮಾಜಿಕ ಸ್ವಾತಂತ್ರ್ಯ ಸಂಗ್ರಾಮವೆಂದೇ ಹೆಸರಾಗಿದೆ ಎಂದರು,

ನಿವೃತ್ತ ಶಿಕ್ಷಕ ನೀರಗುಂದ ಮಹೇಶ್ ಮಾತನಾಡಿ ಇತಿಹಾಸದಲ್ಲಿ ಮುಚ್ಚಿಹೋದ ಸಾಹಸದ ಘಟನೆ 28,000 ಸೈನಿಕರನ್ನು ಕೇವಲ ಐದುನೂರು ಜನ ಸೈನಿಕರು ಸೋಲಿಸಿದ ಕದನ .ಪೇಶ್ವೆಗಳ ಆಡಳಿತದಲ್ಲಿದ್ದ ಜಾತಿ ಅಸ್ಪೃಶ್ಯತೆ ಮೇಲು ಕೀಳುಗಳ ವಿರುದ್ಧ ಸೆಟೆದು ನಿಂತು ಮಾನವೀಯ ಮೌಲ್ಯಗಳನ್ನು ಪಡೆದುಕೊಳ್ಳಲು ಹಂಬಲಿಸಿದ,ಮಹರ್ ಸೈನಿಕರ ಧೈರ್ಯ, ಸಾಹಸ, ಕೆಚ್ಚೆದೆಯ ಹೋರಾಟದಿಂದ ಗೆಲುವನ್ನು ಸಾಧಿಸಲಾಯಿತು ಈ ಯುದ್ಧ ಭೀಮಾತೀರದಲ್ಲಿ ನಡೆದಿದ್ದರಿಂದ ಇತಿಹಾಸದಲ್ಲಿ ಭೀಮ ಕೋರೆಗಾoವ್ ಯುದ್ಧವೆಂದೆ ಪ್ರಸಿದ್ಧವಾಗಿತ್ತು ಎಂದು ವಿವರಿಸಿದರು.
ಈ ಕಾರ್ಯಕ್ರಮದಲ್ಲಿ ಸೋಮೇನಹಳ್ಳಿ ಜಗದೀಶ್, ಸೋಮಣ್ಣ ಮಾರಪ್ಪನಹಳ್ಳಿ , ಅನ್ನಪೂರ್ಣಮ್ಮ ಜಗದೀಶ್ ಡಿಎಸ್ಎಸ್ ಮಹಿಳಾ ಸಂಘಟನೆಯ ಸಂಚಾಲಕರು, ಸಮಾಜ ಸೇವಕರು ಜಗದೀಶ್ ಸೋಮನಹಳ್ಳಿ, ಮಹಾದೇವಯ್ಯ ಬೀಚನಹಳ್ಳಿ ಶಿವಣ್ಣ, ಟೌನ್ ಬ್ಯಾಂಕ್ ನಿರ್ದೇಶಕರು ,
ಸೋಮಶೇಖರಯ್ಯ ಬಾಳೆಕಾಯಿ ಪುಟ್ಟರಾಜು ಬಿಗ್ಗೆನಹಳ್ಳಿ,
ಕುಮಾರ್ ಕಡಬ, ರಾಮಚಂದ್ರಯ್ಯ, ವಿಜಯ್ ಕುಮಾರ್ ರೈತ ಸಂಘಟನೆ,
ಶೇಖರ್ ಅರಳಿಕೆರೆ,ರಾಯಣ್ಣತುರುವೇಕೆರೆ, ನರಸಿಂಹಯ್ಯ,ತಿಮ್ಮಯ್ಯ,
ಶಿವಶೇಖರ್,ಪ್ರಸನ್ನಕುಮಾರ್,
ಲೋಕೇಶ್(ರಂಗನಾಥ ಪುರ)
ಲೋಕೇಶ್(ಅಜ್ಜನಹಳ್ಳಿ)
ಲೋಕೇಶ್(ಗೋವಿಂದಘಟ್ಟ)
ಆಕಾಶ್, ಶಶಿಧರ್, ಸತೀಶ್ ಕಾರ್ಮಿಕ ಮುಖಂಡರು ಮಾರುತಿ ತುರುವೇಕೆರೆ, ಕೇಶವ ಕೋಲಘಟ್ಟ ,
ಪುಟ್ಟರಾಜು,ದೇವರಾಜು,
ಸಾವಿತ್ರಮ್ಮ,ನಂದಿನಿ, ಇನ್ನು ಅನೇಕ ದಲಿತ ಪರ ರೈತಪರ ಮುಖಂಡರುಗಳು ಉಪಸ್ಥಿತರಿದ್ದರು,

ವರದಿ, ಮಂಜುನಾಥ್ ಕೆ ಎ ತುರುವೇಕೆರೆ.

ತಿಪಟೂರುನಗರದ ಶ್ರೀ ಶಾರದ ಗ್ರಾಫಿಕ್ಸ್ ನ ಸಂಘದ ಕಾರ್ಯಲಯದ ಆವರಣದಲ್ಲಿ ಬಯಲು ಸೀಮೆ ಸಾಮಾಜಿಕ ಸಾಂಸ್ಕೃತಿಕ ಸಂಘದ 24 ನೇ ವರ್ಷದ ಸಂಸ್ಥಾಪನಾ ದಿನವನ್ನ ಅದ್ದೂರಿಯಾಗಿ ಆಚರಿಸಲಾಯಿತು ಮಾಜಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು

ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಮಾತನಾಡಿ ಸಂಘ ಸಂಸ್ಥೆಗಳು ಸಮಾಜದ ಕಷ್ಟ ಸುಖಗಳನ್ನ ಆಡಳಿತ ವರ್ಗದೊಂದಿಗೆ ಬೆಸೆಯುವ ಕೊಂಡಿಯಾಗಿ ಕೆಲಸವಮಾಡಬೇಕು, ಸಮಾಜದ ಬೆಳವಣಿಗೆಗೆ ಅಗತ್ಯವಾದ ಹಲವಾರು ರಚನಾತ್ಮಕ ಕಾರ್ಯಕ್ರಮಗಳನ್ನ, ಹಮ್ಮಿಕೊಳ್ಳುವ ಮೂಲಕ, ಉತ್ತಮ ಕೆಲಸ ಮಾಡುವುದು ಅತಿಮುಖ್ಯ, ಮೊಬೈಲ್ ಮೋಹಕ್ಕೆ ಬಿದ್ದ ಯುವ ಪೀಳಿಗೆ ಸಾಮಾಜಿಕ ವ್ಯವಸ್ಥೆಯಿಂದ ದೂರ ಉಳಿದಿರುವ ಕಾಲದಲ್ಲಿ ಬಯಲು ಸೀಮೆ ಸಾಮಾಜಿಕ ಸಾಂಸ್ಕೃತಿಕ ಸಂಘ ಸಮಾಜಕ್ಕೆ,ಹಾಗೂ ಯುವ ಪೀಳಿಗೆಗೆ ಅಗತ್ಯವಿರುವ ಕೆಲಸಗಳನ್ನ ಮಾಡುತ್ತಿದೆ, ಮಕ್ಕಳಲ್ಲಿ ಸಾಹಿತ್ಯದ ಜಾಗೃತಿ, ಭಾವಗೀತೆ, ಜಾನಪದ ಗೀತೆ ಕಲಿಕೆ ಹಾಗೂ ಗಾಯನದಂತ ಕಾರ್ಯಕ್ರಮಗಳ ನಡೆಸುತ್ತಿದೆ,ಸಾಹಿತಿಗಳು ಕವಿಗಳು ಹಾಗೂ ಸಮಾಜದ ಸಾಧಕರನ್ನ ಕಾರ್ಯಕ್ರಮಗಳಿಗೆ ಆಹ್ವಾನಿಸಿ, ಅವರಿಂದ ಸ್ಪೂರ್ತಿದಾಯಕ, ಸಂದೇಶವನ್ನ ಯುವಪೀಳಿಗೆಗೆ ನೀಡುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ,ನಮ್ಮಲ್ಲಿ ಹಲವಾರು ಸಂಘ ಸಂಸ್ಥೆಗಳು ಹುಟ್ಟುತ್ತವೆ ಆದರೇ ದೀರ್ಘಕಾಲದವರೆಗೆ ಸಮಾಜಿ ಮುಖಿಯಾಗಿ ಕೆಲಸ ಮಾಡಲು, ಸಾಧ್ಯವಾಗದೇ,ಅಸ್ಥಿತ್ವಕಳೆದುಕೊಳ್ಳುತ್ತಿವೆ, ಇಂತಹ ಬೆಳವಣಿಗೆಗಳ ನಡುವೆ ನಮ್ಮ ತಾಲ್ಲೋಕಿನಲ್ಲಿ ಬಯಲು ಸೀಮೆ ಸಾಮಾಜಿಕ ಸಾಂಸ್ಕೃತಿಕ ಸಂಘ 24 ವರ್ಷಗಳಿಂದ ನಿರಂತರ ಸಮಾಜಮುಖಿ ಕಾರ್ಯಗಳೊಂದಿಗೆ ಸಾಗುತ್ತಿರುವುದು ಉತ್ತಮ ಬೆಳವಣಿಗೆ, ಸಂಘ ಇನ್ನೂ ಹೆಚ್ಚಿನ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಲಿಎಂದು ಆಶಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯಾತಿಥಿಗಳಾಗಿ ಭಾಗವಹಿಸಿದ ತಹಸೀಲ್ದಾರ್ ಪವನ್ ಕುಮಾರ್ ಮಾತನಾಡಿ ತಿಪಟೂರು ತಾಲ್ಲೋಕಿನಲ್ಲಿ ಹಲವಾರು ಸಂಸ್ಕೃತಿಕ ಚಟುವಟಿಕೆಗಳ ನಿರಂತರವಾಗಿ ನಡೆಯುತ್ತಿರುವೆ, ಆದರಿಂದಲ್ಲೆ ಉತ್ತಮ ಶಿಕ್ಷಣ ನೆಲಗಟ್ಟನು ಹೊಂದಿದೆ, ಸಂಸ್ಕೃತಿ ಸಂಸ್ಕಾರ ಬೆಳವಣಿಗೆಗೆ ಸಂಘ ಸಂಸ್ಥೆಗಳ ಪಾತ್ರ ಮುಖ್ಯ, ಕನ್ನಡ ಕಲಿಕೆಯಲ್ಲಿ ಮಕ್ಕಳು ಹಿಂದುಳಿಯುತ್ತಿರು ಸಮಯದಲ್ಲಿ ನಮ್ಮ ಭಾಷೆ ಉಳಿಯಬೇಕು. ನಮ್ಮ ಭಾಷೆಯ ವ್ಯಾಕರಣ ಜ್ಞಾನ ಮಕ್ಕಳಿಗೆ ದೊರೆಯಬೇಕು ಎಂದು, ಸರ್ಕಾರಿ ಶಾಲೆ ಮಕ್ಕಳಿಗೆ ವ್ಯಾಕರಣ ಪುಸ್ತಕ ವಿತರಣೆ ಮಾಡುತ್ತಿರುದು ಉತ್ತಮ ಕೆಲಸ, ಹಲವಾರು ಸಂಸ್ಕೃತಿ ಸಾಹಿತಿಕ ಕಾರ್ಯಕ್ರಮ ಆಯೋಜನೆ ಮಾಡುತ್ತಿರುವ ಸಂಘ ಉತ್ತಮ ದಾರಿಯಲ್ಲಿ ನಡೆಯಲಿ ಎಂದು ತಿಳಿಸಿದರು

ಕಾರ್ಯಕ್ರಮದಲ್ಲಿ ಮುಖ್ಯಾತಿಥಿಗಳಾಗಿ ಭಾಗವಹಿಸಿ ತಾಲ್ಲೋಕು ಪಂಚಾಯ್ತಿ ಕಾರ್ಯನಿರ್ವಾಹಣಾಧಿಕಾರಿ ಸುದರ್ಶನ್ ಮಾತನಾಡಿ ಸಂಸ್ಕೃತಿಕ ವಾಗಿ ಕೆಲಸ ನಿರ್ವಹಿಸುವ ಜೊತೆಗೆ ಸಾಮಾಜಿಕವಾಗಿಯೋ ತೊಡಗಿಸಿಕೊಂಡಿರುವ ಸಂಘ ಕೋವಿಡ್ ಸಮಯದಲ್ಲಿ ಸಂಕಷ್ಟದಲ್ಲಿರುವ ಜನರಿಗೆ ನೆರವು ನೀಡುವ ಮೂಲಕ ಮಾನವೀಯ ಸೇವೆ ಮಾಡಿದೆ ಎಂದರು


ಪೌರಾಯುಕ್ತ ವಿಶ್ವೇಶ್ವರಯ್ಯ ಬದರಗಡೆ ಮಾತನಾಡಿ ಸಮಾಜದಲ್ಲಿ ಸಂಘ ಸಂಸ್ಥೆಗಳು ಹಲವು ಕಾರಣಗಳಿಂದ ಹುಟ್ಟಿಕೊಳ್ಳುತ್ತವೆ.ಕೆಲವು ಸಂಘಗಳುಹಾಗೇಯೆ ಕಣ್ಮರೆಯಾಗುತ್ತವೆ,ತಿಪಟೂರು ಕಲೆ ಸಾಹಿತ್ಯ ಸಂಸ್ಕೃತಿಗೆ ಮೊದಲಿಂದಲ್ಲೂ ಮನ್ನಣೆ ನೀಡುತ್ತಿರುವ ನಾಡು, ಅದೇ ದಾರಿಯಲ್ಲಿ ಬಯಲು ಸೀಮೆ ಸಂಘತನ್ನ 24 ವರ್ಷಗಳ ಸುಧೀರ್ಘ ಸಮಾಜಮುಖಿ ಕಾರ್ಯಶ್ಲಾಘನೀಯ ಎಂದು ತಿಳಿಸಿದರು

ಎಸ್ ವಿಪಿ ಕಾಲೇಜು ಪ್ರಚಾರ್ಯ ರೇಣುಕಯ್ಯ ಮಾತನಾಡಿ ನಮ್ಮ ಸಂಘ ಯಾವುದೇ ನಾಯಕತ್ವದ ಲಾಲಸೆ ಇಲ್ಲದೆ, ಸಮಾಜಸೇವೆಯ ಗುರಿಯೊಂದಿಗೆ ಮುನ್ನಡೆಯುತ್ತಿದ್ದು, ಸಮಾಜ ಮನಸ್ಕರು ಸಮಾನ ಚಿಂತನೆಉಳ್ಳವರು, ಸಾರ್ವಜನಿಕರ ಸಹಕಾರದಿಂದ ಸಂಘ ನಡೆಯುತ್ತಿದೆ ಎಂದು ತಿಳಿಸಿದರು

ತಿಪಟೂರು ಸಹಾಯಕ ಸರ್ಕಾರಿ ಅಭಿಯೋಜಕ ವಸಂತಕುಮಾರ್ ಮಾತನಾಡಿ ಕಲೆ ಸಾಹಿತಿ ಸಂಸ್ಕೃತಿಗಳು ದೇಶದ ಶ್ರೀಮಂತಿಕೆಯ ಪ್ರತೀಕವಾಗಿ, ನಾವೂ ಎಷ್ಟೆ ಆರ್ಥಿಕವಾಗಿ ಶ್ರೀಮಂತರಾದರು ಸಾಂಸ್ಕೃತಿಕ ನೆಲೆಗಟ್ಟಿನ ಬದುಕು ಅತಿಮುಖ್ಯ, ಈ ನಿಟ್ಟಿನಲ್ಲಿ ಬಯಲು ಸೀಮೆ ಸಂಘ ಕಾರ್ಯೋನ್ಮುಖವಾಗಿರುವುದು ನಿಜಕ್ಕೂ ಶ್ಲಾಘನೀಯ ಎಂದರು

ಕಾರ್ಯಕ್ರಮದಲ್ಲಿಮುಖ್ಯಾತಿಥಿಗಳಾಗಿ ಗ್ರೇಡ್ 2 ತಹಸೀಲ್ದಾರ್ ಜಗನ್ನಾಥ್,ಅಧ್ಯಕ್ಷರಾದ ನಾಗರಾಜು ಸಂಸ್ಥಾಪಕರಾದ ಎನ್ ಬಾನುಪ್ರಶಾಂತ್. ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಶಾಂತ್ ಕರೀಕೆರೆ,ಕವಿ ಸತ್ಯನಾರಾಯಣ್ ಶ್ರೇಷ್ಠಿ,ಮುಂತ್ತಾದವರು ಉಪಸ್ಥಿತರಿದರು

ವರದಿ:ಮಂಜುನಾಥ್ ಹಾಲ್ಕುರಿಕೆ

ತಿಪಟೂರು ನಗರದ ಮಂಜುಳಮ್ಮ ಗಾರ್ಡ್ ನಲ್ಲಿ ನಡೆದ ಸರಗಳ್ಳತನ ಪ್ರಕರಣ ಬೇದಿಸಿದ ಪೊಲೀಸರ ತಂಡ, ಮಹಾರಾಷ್ಟ್ರದ ಪೂನಾ ಇರಾನಿ ಗ್ಯಾಂಗ್ ಗೆ ಹೆಡೆಮುರಿಕಟ್ಟಿದ್ದಾರೆ

ದಿನಾಂಕ 17-10-2024 ರಂದು ಸಂಜೆ ತಿಪಟೂರು ಟೌನ್ ಮಂಜುಳಮ್ಮ ಗಾರ್ಡನ್ ಏರಿಯಾ
ವಾಸಿಯಾದ ವೆಂಕಟಮ್ಮ ತಿಪಟೂರು ಇವರು ನೀಡಿದ ದೂರಿನ ಅಂಶವೇನೆಂದರೆ ಇದೇ ದಿನ ಮಧ್ಯಾಹ್ನ ಸುಮಾರು
12-00 ಗಂಟೆ ಸಮಯದಲ್ಲಿ ತನ್ನ ಮನೆ ಕಡೆಗೆ ಹೋಗುತಿದ್ದಾಗ, ಬಜಾಜ್ ಪಲ್ಸರ್ ಬೈಕ್ ನಲ್ಲಿ ಇಬ್ಬರು ಆಸಾಮಿಗಳು
ಹೋಗಿ, ಆಕೆಯ ಕೊರಳಿನಲ್ಲಿದ್ದ ಚಿನ್ನದ ಸರವನ್ನು ಬೈಕ್ ನ ಹಿಂಬದಿ ಸವಾರ ಕಿತ್ತುಕೊಳ್ಳಲು ಹೋದಾಗ ಆಕೆ
ಬಿಗಿಯಾಗಿ ಹಿಡಿದುಕೊಂಡಿದ್ದರಿಂದ ಅರ್ಧ ಚಿನ್ನದ ಸರವನ್ನು ಕಿತ್ತುಕೊಂಡು ಹೋಗಿರುವ ಸಂಬಂದ ತಿಪಟೂರು ನಗರ
ಪೊಲೀಸ್ ಠಾಣೆಯಲ್ಲಿ ಮೊ.ನಂ 184/2024 ಕಲಂ 309(4) ಬಿ ಎನ್ ಎಸ್ ರೀತ್ಯ ಪ್ರಕರಣ ದಾಖಲಿಸಿ ತನಿಖೆ
ಕೈಗೊಂಡಿರುತ್ತೆ.
ಈ ಪ್ರಕರಣದಲ್ಲಿ ಆರೋಪಿಯನ್ನು ಪತ್ತೆ ಮಾಡಲು ವಿಶೇಷ ತಂಡವನ್ನು ರಚಿಸಿ, ಈ ಪತ್ತೆ ತಂಡವು ಅಸ್ಟರ್
ಅಲಿ ಎಂಬುವನನ್ನು ದಸ್ತಗಿರಿ ಮಾಡಿ, ಆರೋಪಿಗಳು ಕೃತ್ಯಕ್ಕೆ ಉಪಯೋಗಿಸಿದ ಬಜಾಜ್ ಪಲ್ಸರ್ ಬೈಕ್
ಅಮಾನತ್ತುಪಡಿಸಿಕೊಂಡು, ಈತನು ನೀಡಿದ ಮಾಹಿತಿ ಮೇರೆಗೆ ಮತ್ತೊಬ್ಬ ಆರೋಪಿ ಮಹಾರಾಷ್ಟ್ರ ರಾಜ್ಯದ ಪೂನಾ
ನಗರದ ಇರಾನಿ ಗಲ್ಲಿಯಲ್ಲಿದ್ದ ಹೈದರ್ ಅಲಿ ಎಂಬಾತನನ್ನು ದಸ್ತಗಿರಿ ಮಾಡಿ ಸದರಿ ಆರೋಪಿಯಿಂದ ತಿಪಟೂರು
ನಗರದಲ್ಲಿ ಹಾಗೂ ಹುಳಿಯಾರು, ಚಿಕ್ಕನಾಯಕನಹಳ್ಳಿ ಮತ್ತು ಚನ್ನಪಟ್ಟಣ ಟೌನ್ ನಲ್ಲಿ ಸರಗಳ್ಳತನ ಮಾಡಿದ್ದ ಒಟ್ಟು
05 ಪ್ರಕರಣಗಳಲ್ಲಿ 7 ಲಕ್ಷ ರೂ ಬೆಲೆ ಬಾಳುವ 100 ಗ್ರಾಂ ತೂಕದ ಚಿನ್ನದ ಒಡವೆಗಳನ್ನು ಹಾಗೂ 1 ಲಕ್ಷ ರೂ
ಬೆಲೆ ಬಾಳುವ ಬಜಾಜ್ ಪಲ್ಸರ್ ಬೈಕ್‌ನ್ನು ಅಮಾನತ್ತು ಪಡಿಸಿಕೊಂಡು, ಆರೋಪಿಗಳನ್ನು ಘನ ನ್ಯಾಯಾಲಯದ
ಮುಂದೆ ಹಾಜರುಪಡಿಸಿದ್ದು, ಆರೋಪಿಗಳು ನ್ಯಾಯಾಂಗ ಬಂಧನದಲ್ಲಿ ಇರುತ್ತಾರೆ.
ಈ ಪ್ರಕರಣಗಳ ಆರೋಪಿ ಮತ್ತು ಮಾಲನ್ನು ಪತ್ತೆ ಹಚ್ಚಲು ಹೆಚ್ಚುವರಿ ಪೊಲೀಸ್ ಅಧೀಕ್ಷಕರುಗಳಾದ ವಿ
ಮರಿಯಪ್ಪ, ಅಬ್ದುಲ್ ಖಾದರ್ ರವರ ಮಾರ್ಗದರ್ಶನದಲ್ಲಿ ವಿಶೇಷ ತಂಡವನ್ನು ರಚನೆ ಮಾಡಿದ್ದು ತಂಡದಲ್ಲಿ
ತಿಪಟೂರು ಉಪ ವಿಭಾಗದ ವಿನಾಯಕ ಎನ್ ಶೆಟಗೆರಿ ರವರ ನೇತೃತ್ವದಲ್ಲಿ, ತಿಪಟೂರು ನಗರ ಪೊಲೀಸ್ ಠಾಣೆಯ
ಪಿ ಐ ಸಿ ವೆಂಕಟೇಶ್ ರವರು ಪಿ ಎಸ್ ಐ ಕೃಷ್ಣಪ್ಪ ಹಾಗೂ ಎ ಎಸ್ ಐ ರವರುಗಳಾದ ಚಿಕ್ಕಲಕ್ಕೇಗೌಡ, ಉಸ್ಮಾನ್
ಸಾಬ್ ಸಿಬ್ಬಂದಿಗಳಾದ ಮೋಹನ್ ಕುಮಾರ್, ಲೋಕೇಶ್, ಯತೀಶ್, ಮಂಜುನಾಥ್, ಸಾಗರ್, ಚಿರಂಜೀವಿ,
ವಸೀಂ ಜಛೇ, ಕಿರಣ್ ಮಹಿಳಾ ಸಿಬ್ಬಂದಿಗಳಾದ ಪಲ್ಲವಿ, ಸುಮಾ, ತನಿಖಾ ಸಹಾಯಕರಾಗಿ ಬೋರಲಿಂಗಯ್ಯ,
ಹಾಗೂ ಚಾಲಕರುಗಳಾದ ಸಂತೋಷ್, ಮನೋಜ್ ರವರುಗಳನ್ನು ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕರಾದ
ಅಶೋಕ್ ಕೆ ವಿ ಐ.ಪಿ.ಎಸ್ ರವರು ಶ್ಲಾಘಿಸಿದ್ದಾರೆ.

ವರದಿ:ಮಂಜುನಾಥ್ ಹಾಲ್ಕುರಿಕೆ

ತಿಪಟೂರು ಶಾಸಕ ಕೆ.ಷಡಕ್ಷರಿ ರವರ ಗೃಹ ಕಛೇರಿಯಲ್ಲಿ ಕೆ.ಷಡಕ್ಷರಿ ಅಭಿಮಾನಿ ಬಳಗದ ವತಿಯಿಂದ ಹೊರ ತಂದಿರುವ 2025ನೇ ವರ್ಷದ ವಾರ್ಷಿಕ ದಿನದರ್ಶಿಕೆ ಕ್ಯಾಲೆಂಡರ್ ಅನ್ನು ಶಾಸಕರಾದ ಕೆ.ಷಡಕ್ಷರಿ ಬಿಡುಗಡೆಗೊಳಿಸಿದರು

ಕ್ಯಾಲೆಂಡರ್ ಬಿಡುಗಡೆಗೊಳಿಸಿದ ಶಾಸಕ ಕೆ.ಷಡಕ್ಷರಿ ಮಾತನಾಡಿ ಹೊಸವರ್ಷ ನಾಡಿಗೆ ಸುಖ ಸಮೃದ್ದಿ ಸುಭಿಕ್ಷತೆ ಉಂಟುಮಾಡಲಿ,ಪರಮದಯಾಪರನಾದ ಪರಮಾತ್ಮ ಸರ್ವರಿಗೂ ಒಳ್ಳೆದು ಮಾಡಲಿ ಎಂದು ತಿಳಿಸಿದರು.

ಯುವ ಮುಖಂಡ ನಿಖಿಲ್ ರಾಜ್, ನಗರಸಭಾ ಅಧ್ಯಕ್ಷರಾದ ಯಮುನಾ ಧರಣೇಶ್,ಮಾಜಿ ತಾ.ಪಂ ಅಧ್ಯಕ್ಷ ಶಿವಸ್ವಾಮಿ. ಮಣಕೀಕೆರೆ ರವಿಕಿಮಾರ್ ಎಂ.ಡಿ .ಮಾಜಿ ಉಪಾಧ್ಯಕ್ಷರಾದ ಎನ್ ಶಂಕರ್ ,ಮಾಜಿ ನಗರಸಭಾ ಸದಸ್ಯ ನಾಗರಾಜು ಮುಖಂಡರಾದ ಪ್ರಸನ್ನಕುಮಾರ್. ನಗರಸಭಾ ಸದಸ್ಯರು ಮತ್ತು ಅಭಿಮಾನಿ ಬಳಗದ ಲೋಕನಾಥ್ ಸಿಂಗ್.
ನಗರಸಭಾ ಸದಸ್ಯರಾದ ಎಂ ಎಸ್ ಯೋಗೀಶ್ , ವಿ ಯೋಗೇಶ್ ಮಹೇಶ್ ,ಮುಖಂಡರುಗಳಾದ ಶಂಕ್ರಣ್ಣ ಪ್ರಕಾಶ್ ನಾಗರಾಜು ಧರಣೇಶ್ ದಿನೇಶ್ ಕಾಂತರಾಜು.ಮಲ್ಲೇನಹಳ್ಳಿ, ಎಂ.ಸಿ
ನಟರಾಜ್ ಮುಂತ್ತಾದವರು ಉಪಸ್ಥಿತರಿದ್ದರು

ವರದಿ:ಮಂಜುನಾಥ್ ಹಾಲ್ಕುರಿಕೆ

ಜಾಹಿರಾತು:

error: Content is protected !!