Year: 2025

ಗುಬ್ಬಿ: ಗುರುವಿನ ಗುಲಾಮರಾಗಿ ಗುರುವಿನ ಸದ್ಗುಣಗಳನ್ನು ಬೆಳೆಸಿಕೊಳ್ಳಬೇಕು ಅವರ ನೀತಿ ಪಾಠಗಳಿಂದ ಅವರಂತಾಗಲು ಪ್ರಯತ್ನಿಸಬೇಕು ಎಂದು ಶ್ರೀ ಕ್ಷೇತ್ರ ಕೆರೆಗೋಡಿ ರಂಗಾಪುರ ಮಠದ ಶ್ರೀ ಶ್ರೀ ಶ್ರೀ ಗುರು ಪರದೇಶಿಕೇಂದ್ರ ಮಹಾಸ್ವಾಮಿಗಳು ಮಾತನಾಡಿದರು, ತಾಲ್ಲೂಕಿನ ಕಡಬ ಹೋಬಳಿಯ ಅತ್ತಿಕಟ್ಟೆ ಗ್ರಾಮದ ಶ್ರೀ ಶಂಕರೇಶ್ವರ ಪ್ರೌಢಶಾಲೆಯಲ್ಲಿ 1992-93ನೇ ಸಾಲಿನ ಹಿರಿಯ ವಿದ್ಯಾರ್ಥಿಗಳು ಆಯೋಜಿಸಿದ್ದ ಗುರುವಂದನಾ ಮತ್ತು ಸ್ನೇಹ ಕೂಟ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಈ ಕಾರ್ಯಕ್ರಮವು ವಿಶೇಷ ಕಾರ್ಯಕ್ರಮವಾಗಿದೆ 37 ವರ್ಷಗಳ ನಂತರವೂ ಗುರುಗಳ ಭಾವನೆ ವಿದ್ಯಾರ್ಥಿಗಳಲ್ಲಿ ಮೂಡಲು ಆ ಗುರುಗಳ ಪ್ರೇರಣೆ ತಮ್ಮಲ್ಲಿ ಮೂಡಿ ಇಂತಹ ಕಾರ್ಯಕ್ರಮ ಹೊರಹೊಮ್ಮಿದೆ ಇದು ಕೇವಲ ಸನ್ಮಾನ ಸಮಾರಂಭವಲ್ಲ ಬದಲಾಗಿ ಗುರುಗಳಿಗೆ ನೀವು ನೀಡುವ ಗೌರವ ಕಾರ್ಯಕ್ರಮ ಗುರುಗಳೇ ತಂದೆ ತಾಯಿ ದೇವರು ಎಂಬ ಭಾವನೆಯಿಂದ ಸಮಾಜದಲ್ಲಿ ಬೆಳೆಯಬೇಕು ಎಂದರು.

ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಪ್ರದಾನ ಭಾಷಣ ವಹಿಸಿ ಮಾತನಾಡಿದ ಸದರಿ ಶಾಲೆಯ ಹಿರಿಯ ಮುಖ್ಯೋಪಾಧ್ಯಾಯರಾದ ಶ್ರೀ ಹೆಚ್. ಜಿ. ಮಂಜಪ್ಪನವರು ಮಾತನಾಡಿ ನಾನು ಈ ಶಾಲೆಗೆ 36 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿದ್ದೇನೆ ನನ್ನ ವೃತ್ತಿ ನಿವೃತ್ತಿ ಎರಡು ಇದೇ ಶಾಲೆಯಲ್ಲಿ ದೊರೆಯಲು ಪೂಜ್ಯ ಗುರುಗಳ ಆಶೀರ್ವಾದದೊಂದಿಗೆ ಲಭಿಸಿದೆ. 1984 ರಲ್ಲಿ ಕೇವಲ 34 ವಿದ್ಯಾರ್ಥಿಗಳಿಂದ ಹಾಗೂ ಹಳೆಯ ಕಟ್ಟಡದಿಂದ ಪ್ರಾರಂಭವಾದ ಈ ಶಾಲೆ ಇಂದು ಭವ್ಯ ಕಟ್ಟಡದಿಂದ ನಿರ್ಮಾಣವಾಗಿದೆ, ಅಕ್ಕಪಕ್ಕದ ಶಾಲೆಗಳಲ್ಲಿ ನಮ್ಮ ಶಾಲೆಯು ಪ್ರಥಮ ಫಲಿತಾಂಶ ತರುವಲ್ಲಿ ಯಶಸ್ವಿಯಾಗುತ್ತಿದೆ, ಗುಬ್ಬಿ ತಾಲ್ಲೂಕಿನಲ್ಲೇ ವಿಶಾಲವಾದ ಮೈದಾನವಿರುವು ನಮ್ಮ ಶಾಲೆಯಲ್ಲೇ ಹಿರಿಯ ವಿದ್ಯಾರ್ಥಿಗಳಿಂದ ಇಂತಹ ಕಾರ್ಯಕ್ರಮಗ ಆಯೋಜಿಸಿರುವುದು ನನಗೆ ಖುಷಿ ತಂದಿದೆ, ಮಕ್ಕಳಲ್ಲಿ ಕೇವಲ ಅಕ್ಷರ ಮಾತ್ರವಲ್ಲ ಸಂಸ್ಕಾರ, ಶಿಸ್ತು ಇಂದಿನ ಶಿಕ್ಷಕರು ಬೆಳೆಸಬೇಕು ಎಂದರು.

ಸದರಿ ಶಾಲೆಯ ಹಿರಿಯ ಶಿಕ್ಷಕರಾದ ಎ ಎನ್ ನಟರಾಜುರವರು ಮಾತನಾಡಿ ನಾನು ಈ ಶಾಲೆಗೆ 1986 ರಲ್ಲಿ ಇಂಗ್ಲಿಷ್ ಶಿಕ್ಷಕನಾಗಿ ಬಂದಿದ್ದೆ, ಇಂದಿನ ಶಿಕ್ಷಕರು ಆತ್ಮಸಾಕ್ಷಿಯಾಗಿ ಕೆಲಸಮಾಡಬೇಕು. ವಿದ್ಯಾಭ್ಯಾಸದಲ್ಲಿ ಶ್ರದ್ಧೆ ಆಸಕ್ತಿ ಬೆಳೆಸಿಕೊಳ್ಳಬೇಕು ಇದಕ್ಕೆ ಮೊಬೈಲ್ ಎಂಬ ಸಾಂಕ್ರಾಮಿಕ ರೋಗ ಆಗಮಿಸಿದೆ ಅದನ್ನು ಮನಸ್ಸಿನಿಂದ ಅಷ್ಟೇ ಹೊಗಲಾಡಿಸಬೇಕು, ನಾವು ಮಾಡುವ ಕೆಲಸ ನಡೆ ನುಡಿ ಸರಿಯಾಗಿರಬೇಕು ಇದರಿಂದ ಮಕ್ಕಳಲ್ಲಿ ಜ್ಞಾನಾರ್ಜನೆ ಹೆಚ್ಚಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದರು

ಸದರಿ ಶಾಲೆಯ ಮತ್ತೊಬ್ಬ ಶಿಕ್ಷಕರಾದ ಲೋಕೇಶ್ ಮಾತನಾಡಿ ನನ್ನ ಜೀವನ ಕಡುಬಡತಲ್ಲಿತ್ತು 1984 ರಲ್ಲಿ ಗುರುಗಳ ಆಶೀರ್ವಾದಿಂದ ನೇಮಕಾತಿ ಸೇರಿದೆ ನನ್ನ ಗಣಿತದ ಗುರುಗಳ ಪ್ರೇರಣೆಯಿಂದ ನಾನು ಗಣಿತ ಶಿಕ್ಷಕನಾದೆ. ನಾನು ಪ್ರಾರಂಭದಲ್ಲಿ ವಿದ್ಯಾರ್ಥಿಗಳ ಕಲಿಕೆ ಚುರುಕುಗೊಳಿಸಿಲು ದಂಡಿಸುವುದು ಅನಿವಾರ್ಯವಾಗಿತ್ತು ಆದರೆ ಇಂದು ವಿದ್ಯಾರ್ಥಿಗಳನ್ನು ಸ್ನೇಹ ಪ್ರೀತಿಗೆ ಪರಿವರ್ತಿಸಿ ಕಲಿಸಲು ಅನಿವಾರ್ಯವಾಗ ಬೇಕಿದೆ. ನಾವು ಅಂದು ತರಗತಿಗಳನ್ನು ತೆಗೆದುಕೊಳ್ಳಲು ಸಹೋದ್ಯೋಗಿಗಳೊಂದಿಗೆ ಜಗಳವಾಡುತ್ತಿದ್ದೆವು ಆದರೆ ಎಂದು ಸಂಬಳಕ್ಕಾಗಿ ಅಲ್ಲ. ವಿದ್ಯಾರ್ಥಿಗಳಲ್ಲಿ ಗುರಿ ಇರಬೇಕು ಗುರಿ ಮುಟ್ಟುವವರೆಗೂ ಪ್ರಯತ್ನಿಸಬೇಕು ನಮ್ಮಲ್ಲಿ ನಡವಳಿಕೆನ್ನು ನಮ್ಮ ಪೂಜ್ಯರಿಂದ ಕಲಿತಿದ್ದೇನೆ ಹಾಗೂ ಕೊಟ್ಟಿದ್ದಾರೆ ಎಂದರು

ಸದರಿ ಶಾಲೆಯ ಹಾಲಿ ಮುಖ್ಯ ಶಿಕ್ಷಕರಾದ ಬಸವರಾಜು ಮಾತನಾಡಿ ವಿದ್ಯಾರ್ಥಿ ಗುರುಗಳ ಸಂಬಂಧ ಕೊನೆಯಾಗುತ್ತಿಲ್ಲ ಬದಲಾಗಿ ಗಟ್ಟಿಯಾಗುತ್ತಿದೆ ಎಂಬುದುಕ್ಕೆ ಇಂತಹ ಕಾರ್ಯಕ್ರಮಗಳೇ ಸಾಕ್ಷಿಯಾಗಿದೆ. ಗುರುಗಳು ಎಂದರೆ ಕೇವಲ ವಿದ್ಯೆ ಕಲಿಸಲು ಮಾತ್ರವಲ್ಲ ಸಮಾಜದಲ್ಲಿ ಒಳ್ಳೆಯ ಮಾರ್ಗದರ್ಶನ ನೀಡುವ ಪ್ರತಿಯೊಬ್ಬರು ಗುರುಗಳೇ ನಮ್ಮ ಈ ಶಾಲೆಯ ಪರಂಪರೆ ಹೀಗೆ ಮುಂದುವರಿಯಲಿ ಎಂದರು.

ಇದೇ ಸಂದರ್ಭದಲ್ಲಿ 1992-93ನೇ ಸಾಲಿನ ಹಿರಿಯ ವಿದ್ಯಾರ್ಥಿಗಳಿಂದ ಸದರಿ ಶಾಲೆಗೆ ಜೆರಾಕ್ಸ್ ಪ್ರಿಂಟರ್ ಸಾಧನ ಕೊಡುಗೆ ನೀಡಲಾಯಿತು ಮತ್ತು ವಿದ್ಯಾರ್ಥಿಗಳಿಗೆ ಪುಸ್ತಕ ಪೆನ್ನು ವಿತರಿಸಲಾಯಿತು

ಕಾರ್ಯಕ್ರಮದಲ್ಲಿ ಕೆರೆಗೋಡಿ ರಂಗಾಪುರ ಮಠದ ಶ್ರೀ ಶ್ರೀ ಶ್ರೀ ಗುರುಪರದೇಶಿಕೇಂದ್ರ ಮಹಾಸ್ವಾಮಿಗಳು, ಹಿರಿಯ ಮುಖ್ಯ ಶಿಕ್ಷಕರಾದ ಶ್ರೀ ಹೆಚ್ ಜಿ ಮಂಜಪ್ಪ, ಹಿರಿಯ ಶಿಕ್ಷಕರಾದ ಶ್ರೀ ಬಿ.ಎನ್. ಸಂಗಪ್ಪ, ಹಿರಿಯ ಹಿಂದಿ ಭಾಷೆ ಶಿಕ್ಷಕರಾದ ಶ್ರೀ ಡಿ. ಶಿವಗಂಗಾಧರ ಸ್ವಾಮಿ, ಹಿರಿಯ ಇಂಗ್ಲಿಷ್ ಶಿಕ್ಷಕರಾದ ಎ.ಎನ್. ನಟರಾಜು, ಹಿರಿಯ ಗಣಿತ ಶಿಕ್ಷಕರಾದ ಜಿ.ಎನ್. ಲೋಕೇಶ್ , ಹಿರಿಯ ಟೈಲರ್ ವೃತ್ತಿ ಶಿಕ್ಷಕಿಯಾದ ಶ್ರೀಮತಿ ಕೆ.ಆರ್. ಸುಶೀಲಮ್ಮ, ಸದರಿ ಶಾಲೆಯ ಹಾಲಿ ಮುಖ್ಯಶಿಕ್ಷಕರಾದ ಬಸವರಾಜು ಉಪಸ್ಥಿತರಿದ್ದರು ಹಾಗೂ 1992-93 ನೇ ಸಾಲಿನ ಹಿರಿಯ ವಿದ್ಯಾರ್ಥಿಗಳು ಮತ್ತು ಶಾಲಾ ಬೋಧಕ ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಭಾಗವಹಿಸಿದ್ದರು

ವರದಿ: ಸಂತೋಷ್ ಓಬಳ. ಗುಬ್ಬಿ

ತಿಪಟೂರು: ತಾಲೂಕಿನ ಕರಡಿ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಕರಡಿ ದೇವರಾಜು ಸತತ ೫ನೇ ಬಾರಿಗೆ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಈ ಸಂದರ್ಭದಲ್ಲಿ ಮಾತನಾಡಿದ ಕೆ.ಆರ್ ದೇವರಾಜು ಸಂಘದ ಸದಸ್ಯರು ನಮ್ಮ ಮೇಲೆ ಅಭಿಮಾನವಿಟ್ಟು ಆಡಳಿತ ಮಂಡಳಿಗೆ ಬಹುಮತದಿಂದ ಆಯ್ಕೆ ಮಾಡಿದ್ದು ಅವರೆಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸುವುದಾಗಿ ತಿಳಿಸಿದರು. ಹಾಗೆಯೇ ನಮ್ಮಗಳ ಸಹಕಾರಿ ಮುಖಂಡರಾದ ಸಹಕಾರ ಸಚಿವರಾದ ಶ್ರೀ ಕೆ ಎನ್ ರಾಜಣ್ಣನವರ ಮಾರ್ಗದರ್ಶನದಲ್ಲಿ ಸದಸ್ಯರಿಗೆ ಹಾಗೂ ರೈತ ಬಾಂಧವರಿಗೆ ಹೆಚ್ಚಿನ ಸೇವೆ ಸಲ್ಲಿಸುವುದಾಗಿ ತಿಳಿಸಿದರು ಹಾಗೂ ನಮ್ಮ ಸಂಘದ ರೈತರಿಗೆ ಹೆಚ್ಚಿನ ಸಾಲ ಸೌಲಭ್ಯ ಹಾಗೂ ನೆರವನ್ನು ನೀಡುವಂತೆ ಸಹಕಾರ ಸಚಿವರು ಹಾಗೂ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಕೆ ಎನ್ ರಾಜಣ್ಣನವರನ್ನು ಈ ಸಂದರ್ಭದಲ್ಲಿ ಕೋರಿಕೊಂಡರು. ಉಪಾಧ್ಯಕ್ಷರಾಗಿ ನ್ಯಾಕೇನಹಳ್ಳಿ ವೀರಣ್ಣ ಅವಿರೋಧವಾಗಿ ಆಯ್ಕೆಯಾದರು . ಈ ಸಂದರ್ಭದಲ್ಲಿ ಸಂಘದ ನೂತನ ನಿರ್ದೇಶಕರುಗಳಾದ ಕರುಡಾಳು ಬಸವರಾಜು, ಕೊಟ್ಟಿಗೆಹಳ್ಳಿ ಶಿವಮೂರ್ತಿ, ಉಪ್ಪಿನಳ್ಳಿ ಜಯಣ್ಣ, ಕಟ್ಟೆಹಳ್ಳಿ ದೊಡ್ಡಲಿಂಗಯ್ಯ, ಶಿವಪುರ ಶೇಷಣ್ಣ, ಮಲ್ಲಿಪಟ್ಟಣ ಅಮೃತ ಶ್ರೀ, ಕೊಂಡ್ಲಿಘಟ್ಟ ಭಾರತಿ, ಮಲ್ಲಿಪಟ್ಟಣ ಮಲ್ಲೇಶಯ, ಅಣ್ಣ ಮಲ್ಲೇನಹಳ್ಳಿ ಕೃಷ್ಣಯ್ಯ, ಶಿಡ್ಲೆಹಳ್ಳಿ ಜಯಣ್ಣ ಸೇರಿದಂತಹ ಸಂಘದ ಸದಸ್ಯರು ಹಾಜರಿದ್ದರು.ಚುನಾವಣಾ ಅಧಿಕಾರಿಯಾಗಿ ಸಹಕಾರ ಇಲಾಖೆಯ ರಂಗನಾಥ್ ಕರ್ತವ್ಯ ನಿರ್ವಹಿಸಿದರು. ಮುಖ್ಯಕಾರ್ಯನಿರ್ವಹಣಾದಿಕಾರಿ ಮನು ಎಸ್.ಎಂ ಹಾಗೂ ಸಿಬ್ಬಂದಿ ವರ್ಗ ಚುನಾವಣೆಯಲ್ಲಿ ಕಾರ್ಯನಿರ್ವಹಿಸಿದರು.

ವರದಿ: ಸಂತೋಷ್ ಓಬಳ. ಗುಬ್ಬಿ

ತಿಪಟೂರು ನಗರದ ದೀಕ್ಷಾ ಹೇರಿಟೇಜ್ ಶಾಲೆಯ ೩೨ ವಿದ್ಯಾರ್ಥಿಗಳು ಬೆಂಗಳೂರಿನ ಕಗ್ಗದಾಸಪುರದಲ್ಲಿ ನಡೆದ ರಾಜ್ಯಮಟ್ಟದ ದಿ ಪ್ರಿನ್ಸ್ ಕಪ್ ಟ್ವೆಕ್ವಾಂಡೋ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿ ೯ ಚಿನ್ನ, ೧೧ ಬೆಳ್ಳಿ, ೧೩ ಕಂಚು ಪದಕ ಪಡೆದು ಸಮಗ್ರ ಪ್ರಶಸ್ತಿಯನ್ನು ಪಡೆದಿದ್ದಾರೆ.ಚಿನ್ನದ ಪದಕವನ್ನು ಕಿಶನ್, ಕಿಶೋರ್, ಪ್ರಣನ ಲೋಕೇಶ್, ಮಹಮದ್ ಅರಮಾನಶರೀಫ್, ಧನುಶ್.ಎಮ್, ಉಜ್ವಲ್.ಕೆ, ನೂತನ್.ಬಿ.ವಾಯ್, ಉತ್ತಮ, ಬೆಳ್ಳಿಯ ಪದಕವನ್ನು ನಂದನ.ಟಿ.ಭಟ, ಮಯೂರ, ಶ್ರೇಯಾಂಕ, ಪಣೀಕೃತಾ, ಎಸ್.ಎಸ್. ಶ್ರೇಯಸ್, ಚೇತನ.ಎಚ್.ಆರ್, ಯಶಸ್, ಕುಶಾಲ್, ಶಿವಾಂಕ್, ಕಂಚಿನ ಪದಕವನ್ನು ತರುಣ್, ಬಿಲವಾತ, ಮಂಜುನಾಥ್, ವೇಹನ, ಶ್ರೀನಿಧಿನಾಯಕ, ಧುಶಯಾಂತ್, ವಿನಯ್, ವಿಲಾಸ್, ತಮನ್ನಾ, ಕುಶಾನ್ ನಂದನ, ಪುನೀತ, ದೃಪದ, ಮೋಹಮದ್ ರ‍್ಹಾನ್, ಶಮಂತರಾಜ, ಭಾಗವಹಿಸಿದ್ದು, ಶಾಲೆಯ ಕಾರ್ಯದರ್ಶಿ ನವೀನ್.ಬಿ.ಎಚ್, ಪ್ರಾಂಶುಪಾಲ ಗೀತಾ, ತರಬೇತುದಾರರ ವಿನಯ್ ಕುಮಾರ್, ಸಿಬ್ಬಂದಿ ವರ್ಗ ಹಾಗೂ ಪೋಷಕರ ವರ್ಗ ಅಭಿನಂದಿಸಿದರು.

ವರದಿ: ಸಂತೋಷ್ ಓಬಳ. ಗುಬ್ಬಿ

ತುಮಕೂರು ಜಿಲ್ಲೆ ಕಲ್ಪತರು ನಾಡಿ ಶಕ್ತಿಪೀಠ ತಿಪಟೂರು ತಾಲ್ಲೋಕಿನ ದಸರೀಘಟ್ಟ ಶ್ರೀ ಚೌಡೇಶ್ವರ ದೇವಾಲಯದಲ್ಲಿ ಮಕರ ಸಂಕ್ರಾಂತಿ ಹಬ್ಬವನ್ನ ಸಂಭ್ರಮ ಸಡಗರದಿಂದ ಆಚರಿಸಲಾಯಿತು.
ಸಂಕ್ರಾಂತಿ ಅಂಗವಾಗಿ ಶ್ರೀ ಚೌಡೇಶ್ವರಿ ದೇವಿ ಹಾಗೂ ಶ್ರೀ ಕರಿಯಮ್ಮ ದೇವಿಯವರಿಗೆ ವಿಶೇಷ ಅಲಂಕಾರ ಹಾಗೂ ಪೂಜೆ ನೆರವೇರಿಸಲಾಯಿತು.ಆದಿಚುಂಚನಗಿರಿ ದಸರೀಘಟ್ಟ ಶಾಖಾಮಠದ ಶ್ರೀ ಶ್ರೀ ಚಂದ್ರಶೇಖರ ನಾಥ ಮಹಾಸ್ವಾಮಿಗಳು ಶ್ರೀ ಚೌಡೇಶ್ವರಿ ಹಾಗೂ ಶ್ರೀಕರಿಯಮ್ಮ ದೇವಿಯವರಿಗೆ ವಿಶೇಷ ಪೂಜೆಸಲ್ಲಿಸಿ ನಂತರ ಮಠದ ಆವರಣದಲ್ಲಿ ಹೊಸ ಸುಗ್ಗಿಯ ಧಾನ್ಯಗಳನ್ನ ರಾಶಿಹಾಕಿ,ರಾಶಿಪೂಜೆ ನೆರವೇರಿಸಿದರು.ನಂತರ ಗೋವುಗಳಿಗೆ ಪೂಜೆಸಲ್ಲಿಸಿ ಕಿಚ್ಚು ಆಯಿಸಲಾಯಿತು.

ರಾಶಿಪೂಜೆ ನೆರವೇರಿಸಿ ಮಾತನಾಡಿದ ಶ್ರೀ ಚಂದ್ರಶೇಖರನಾಥ ಮಹಾಸ್ವಾಮೀಜಿಗಳು ಸಂಕ್ರಾಂತಿ ಹಬ್ಬ ನಮ್ಮ ಗ್ರಾಮೀಣ ಸೊಗಡಿನ ಪ್ರತೀಕ ವರ್ಷವಿಡಿ,ದುಡಿದ ರೈತ ತಾವುಬೆಳೆದ ದವಸ ಧಾನ್ಯಗಳಿಗೆ ಪೂಜೆಸಲ್ಲಿಸುವ ಸಂಪ್ರದಾಯಿಕ ಹಬ್ಬ,ಜನಪದ ಸಂಪ್ರದಾಯಗಳ ಜೊತೆ, ಧಾರ್ಮಿಕವಾಗಿ ಮಕರ ಸಂಕ್ರಾಂತಿ ವಿಶೇಷತೆ ಪಡೆದಿದ್ದು, ಸೂರ್ಯ ತನ್ನ ಪಥಬದಲಿಸುವ ಕಾರಣ, ಈ ಹಬ್ಬಕ್ಕೆ ಮಹತ್ವ ಜಾಸ್ತಿ, ನಮ್ಮ ಸಂಪ್ರದಾಯ ಆಚರಣೆಗಳು ಮನುಷ್ಯನ ಶಾಂತಿ ನೆಮ್ಮದಿಗೆ,ಮಾಡಿಕೊಂಡ ಆಚರಣೆಗಳು, ಎಂದು ತಿಳಿಸಿದರು
ಕಾರ್ಯಕ್ರಮದಲ್ಲಿ ಶ್ರೀಚೌಡೇಶ್ವರಿ ದೇವಾಲಯದ ಧರ್ಮದರ್ಶಿಗಳು ನೂರಾರು ಸಂಖ್ಯೆಯಲ್ಲಿ ಗ್ರಾಮಸ್ಥರು ಉಪಸ್ಥಿತರಿದರು.

ವರದಿ :ಮಂಜುನಾಥ್ ಹಾಲ್ಕುರಿಕೆ

ತಿಪಟೂರು ತಾಲ್ಲೋಕಿನ ಹೊನ್ನವಳ್ಳಿ ಹೋಬಳಿ ತಿಪಟೂರು ಹಾಲ್ಕುರಿಕೆ ರಸ್ತೆಯ ವಿರುಪಾಕ್ಷಿಪುರ ಗೇಟ್ ಬಳಿ KA 44 8018 ಮಾರುತಿಸ್ವಿಪ್ಟ್ ಡಿಜೇರೋಹಾಗೂ KA 16 N5260 ಸಂಖ್ಯೆಯ. ಮಾರುತಿ ಬ್ರಿಜಾ ಕಾರುಗಳ ನಡುವೇ ಮುಖಾಮುಖಿ ಡಿಕ್ಕಿಯಾಗಿದ್ದು ಬ್ರೀಜಾ ಕಾರಿನಲ್ಲಿ ಪ್ರಯಾಣಿಸುತ್ತದ್ದ, ತಿಪಟೂರು ನಗರದ ಗೋವಿನಪುರ ವಾಸಿಯಾದ ಸುಮಾರು 65ವರ್ಷ ವಯಸ್ಸಿನ ಭಾಗ್ಯಮ್ಮ ಎಂಬುವವರಿಗೆ ಅಪಘಾತದಲ್ಲಿ ತೀವ್ರ ಅಸ್ವಸ್ಥಗೊಂಡಿದ್ದು, ರಮೇಶ್ ಎಂಬುವವರಿಗೆ ಅಪಘಾತದಲ್ಲಿ ಗಾಯಗಾಳಾಗುರುತ್ತದೆ.ಗಾಯಾಳುಗಳನ್ನ ತಿಪಟೂರು ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.


ಕಾಲು ನೋವಿನಿಂದ ಬಳಲುತ್ತಿದ್ದ ಭಾಗ್ಯಮ್ಮ ನನ್ನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು, ಚಿಕಿತ್ಸೆ ಮುಗಿಸಿ ವಾಪಾಸ್ ಬರುವಾಗ ವಿರುಪಾಕ್ಷಿಪುರ ಗೇಟ್ ಬಳಿ ಅಪಘಾತ ಸಂಭವಿಸಿದೆ.
ಕಾರುಗಳು ಡಿಕ್ಕಿಯಾದ ರಭಸಕ್ಕೆ ಸ್ವಿಪ್ಟ್ ಡಿಜೇರ್ ಕಾರಿನ ಚಕ್ರ ಹಾಗೂ ಆಕ್ಸೆಲ್ ಕಿತ್ತುಕೊಂಡು ಸುಮಾರು 15 ಮೀಟರ್ ದೂರ ಬಿದ್ದಿದ್ದು, ಕಾರು ಸಂಪೂರ್ಣ ಜಖಂಗೊಂಡಿದೆ. ಮಾರುತಿ ಬ್ರಿಜಾ ಕಾರು ಸಹ ಸಂಪೂರ್ಣ ಜಖಂಗೊಂಡಿದ್ದು, ಏರ್ ಬ್ಯಾಗ್ ಓಪನ್ ಆದಕಾರಣ ಭಾರೀ ಅಪಾಯ ತಪ್ಪಿದಂತ್ತಾಗಿದ್ದು ಹಿಂಬದಿಯಲ್ಲಿ ಕುಳಿತ್ತಿದ್ದ ಭಾಗ್ಯಮ್ಮ ಎಂಬುವವರಿಗೆ ತೀವ್ರಗಾಯಗಳಾಗಿ ಅಸ್ಪಸ್ಥಗೊಂಡಿರುತ್ತಾರೆ
ಸ್ಥಳಕ್ಕೆ ಹೊನ್ನವಳ್ಳಿ ಪೊಲೀಸ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿರುತ್ತಾರೆ.

ವರದಿ: ಮಂಜುನಾಥ್ ಹಾಲ್ಕುರಿಕೆ

ತಿಪಟೂರು ನಗರದ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ 206 ಹುಚ್ಚಗೊಂಡನಹಳ್ಳಿ ಬಳಿ ಇರುವ ಶ್ರೀನಿಧಿ ಡಾಬ ಹತ್ತಿರ ರೋಡ್ ಡಿವೈಡರ್ ಗೆ ಕಾರುಡಿಕ್ಕಿ ಹೊಡೆದು ಕಾರುಚಾಲಕ ಸಾವನ್ನಪ್ಪಿರುವ ಘಟನೆ ನಡೆದಿದೆ.


ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದ ಮೂರು ಜನರ ಪೈಕಿ ಒಬ್ಬ ಸ್ಥಳದಲ್ಲೇ ಸಾವನ್ನಪ್ಪಿದು, ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಗಾಯಾಳುಗಳನ್ನ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ತಿಪಟೂರು ನಗರದ ಟಿ.ಎಂ ಮಂಜುನಾಥ ನಗರ ವಾಸಿ ಅರುಣ್ ಕುಮಾರ್ 31ವರ್ಷ ಮೃತ ದುರ್ದೈವಿ.
ಅಪಘಾತದಲ್ಲಿ ತಿಪಟೂರು ಕಂಚಾಘಟ್ಟ ವಾಸಿಗಳಾದ ಬಂಗಾರಿ 30 ವರ್ಷ ಹಾಗೂ ಅಮಿತ್ 32 ವರ್ಷ ತೀವ್ರವಾಗಿ ಗಾಯಗೊಂಡಿದ್ದು, ತಿಪಟೂರು ಸಾರ್ವಜನಿಕ ಆಸ್ಪತ್ರೆ ನೀಡಿ, ಹೆಚ್ಚನ ಚಿಕಿತ್ಸೆಗಾಗಿ ಬೆಂಗಳೂರು ಆಸ್ಪತ್ರೆಗೆ ಕೊಂಡೊಯಲಾಗಿದ್ದು
ತಿಪಟೂರು ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ವರದಿ:ಮಂಜುನಾಥ್ ಹಾಲ್ಕುರಿಕೆ

ತಿಪಟೂರು ನಗರದ ತಾಲ್ಲೊಕು ಆಡಳಿತ ಸೌಧದ ಆವರಣದಲ್ಲಿ ಶ್ರೀಶ್ರೀಗುರುಸಿದ್ದರಾಮೇಶ್ವರರ 852ನೇ ಜಯಂತಿಯನ್ನ ತಾಲ್ಲೋಕು ಆಡಳಿತದಿಂದ ಆಚರಿಸಲಾಯಿತು

ತಹಸೀಲ್ದಾರ್ ಪವನ್ ಕುಮಾರ್ ಶ್ರೀಶ್ರೀ ಗುರು ಸಿದ್ದರಾಮೇಶ್ವರರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಚಾಲನೆ ನೀಡಿದರು
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಅವರು ಶ್ರೀಸಿದ್ದರಾಮೇಶ್ವರರು ತಮ್ಮ ಕಾಯಕದ ಮೂಲಕ ಕಾಯಕ ಯೋಗಿಯಾಗಿ ಭಕ್ತರ ಮನಸ್ಸಿನಲ್ಲಿ ನೆಲೆಸಿರುವ ನಿಜ ಶರಣರು,ನಾಡಿನಾದ್ಯಂತ ಸಂಚರಿಸಿ ಕೆರೆಕಟ್ಟೆ ಕಲ್ಯಾಣಿಗಳ ನಿರ್ಮಾಣ ಜಲಮೂಲಗಳ ರಕ್ಷಣೆ, ಮರಗಿಡಗಳ ಬೆಳೆಸಿ, ಗುಡಿಗುಂಡಾರ ಗುಂಡುತೋಪುಗಳ ನಿರ್ಮಾಣ ಮಾಡಿ ಕಾಯಕದ ಮೂಲಕ ದೇವರನ್ನ ಕಾಣಬೇಕು,ಎನ್ನುವ ತತ್ವ ಸಾರಿದ್ದಾರೆ,ಮಹಾರಾಷ್ಟ್ರದ ಸೊನ್ನಲಿಗೆಯಲ್ಲಿ ಜನಿಸಿ,ಅಲ್ಲಮಪ್ರಭುಗಳಿಂದ ಲಿಂಗದೀಕ್ಷೆಪಡೆದರು.ಭಕ್ತರ ಉದ್ದಾರಕ್ಕಾಗಿ ರಾಜ್ಯದಾದ್ಯಂತ ಸಂಚಾರಮಾಡಿ,ಭಕ್ತಕೋಟಿ ಉದ್ದಾರ ಮಾಡಿದ್ದಾರೆ,ಶ್ರೀಸಿದ್ದರಾಮೇಶ್ವರರ ಕಾಯಕ ನಿಷ್ಠೆಯನ್ನ ಎಲ್ಲರೂ ಅನುಸರಿಸಬೇಕು ಎಂದು ತಿಳಿಸಿದರು
ಕಾರ್ಯಕ್ರಮದಲ್ಲಿ ಗ್ರೇಡ್ 2ತಹಸೀಲ್ದಾರ್ ಜಗನ್ನಾಥ್ ಸಿರಸ್ತೇದಾರ್ ರವಿಕುಮಾರ್,ರಂಗಪ್ಪ

ವರದಿ :ಮಂಜುನಾಥ್ ಹಾಲ್ಕುರಿಕೆ


  • ತಿಪಟೂರು:ತಾಲ್ಲೋಕಿನ ಹೊನ್ನವಳ್ಳಿ ಹೋಬಳಿ ಮೀಸೆತಿಮ್ಮನಹಳ್ಳಿ ಬಳಿ ಇರುವ ಮಾನ್ಯ ಶ್ರೀ ಕೋಕನೆಟ್ ಫ್ಯಾಕ್ಟರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಬಿಹಾರ ಮೂಲದ ಕಾರ್ಮಿಕರ ಮಗು ಫ್ಯಾಕ್ಟರಿಯ ಸಮೀಪ ಇರುವ ಕಾಯಿನೀರಿನ ಗುಂಡಿಗೆ ಬಿದ್ದು ಎರಡು ವರ್ಷದ ಮಗು ದುರ್ಮರಣ.ಹೊಂದಿರುವ ಘಟನೆ ನಡೆದಿದೆ.

ಮದ್ಯಾಹ್ನ 2=00ರ ಸಮಯದಲ್ಲಿ ಕುಸುಮಕುಮಾರಿ (2). ಎಂಬ ಹೆಣ್ಣು ಮಗು ಕಾಯಿ ನೀರಿನಗುಂಡಿಗೆ ಬಿದ್ದು ಸಾವನಪ್ಪಿರುವ ದುರ್ದೈವಿ.
ಮಾನ್ಯಶ್ರೀ ಕೋಕೋನೆಟ್ ಫ್ಯಾಕ್ಟರಿಯಲ್ಲಿ ತಂದೆ ತಾಯಿ ತೆಂಗಿನ ಕಾಯಿಹೊಡೆಯುವಾಗ,ಪಕ್ಕದಲ್ಲೇ
ಆಟವಾಡುತ್ತಿದ್ದ ಮಗು ಕಾಣದೇ ಇದ್ದಾಗ ಪೋಷಕರು ಹುಡುಕಾಟ ಪ್ರಾರಂಭಿಸಿದಾಗ ಗುಂಡಿ ಒಳಗೆ ಬಿದ್ದಿರುವುದನ್ನು ಗಮನಿಸಿ ಮಗುವನ್ನು ಮೇಲೆ ಎತ್ತಲಾಗಿದೆ.

ನಂತರ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಧ್ಯದಲ್ಲೇ ಸಾವನಪ್ಪಿರುತ್ತದೆ ಎಂದು ತಿಳಿದು ಬಂದಿದೆ.ಸ್ಥಳಕ್ಕೆ ಹೊನ್ನವಳ್ಳಿ ಪೊಲೀಸರು ಭೇಟಿ ನೀಡಿದ್ದು. ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಕೈಗೊಳ್ಳಲಾಗಿದೆ.

error: Content is protected !!