Month: December 2024

ತಿಪಟೂರು ರೋಟರಿ ಭವನದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನ ತಾಲ್ಲೋಕು ಕನ್ನಡ ಸಾಹಿತ್ಯ ಪರೀಷತ್ ಅಧ್ಯಕ್ಷ ಬಸವರಾಜಪ್ಪ, ರೋಟರಿ ಸಂಸ್ಥೆ ಅಧ್ಯಕ್ಷ ಗವಿಯಣ್ಣ,ಸರ್ಕಾರಿ ಬಾಲಕರ ಪದವಿಪೂರ್ವ ಕಾಲೇಜು ಪ್ರಾಚಾರ್ಯ,ಶಿವಕುಮಾರ್ ಉದ್ಘಾಟಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ತಿಪಟೂರು ತಾಲ್ಲೋಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಸವರಾಜಪ್ಪ ಮಾತನಾಡಿ ಕನ್ನಡ ಭಾಷೆಗೆ ಮನಸ್ಸುಗಳನ್ನ ಬೆಸೆಯುವ ಶಕ್ತಿಯಿದೆ,ನಾವೂ ಎಷ್ಟೆ ಎತ್ತರಕ್ಕೆ ಬೆಳೆದರೂ ನಮ್ಮ ತಾಯಿಯನ್ನ ಹೇಗೆ ಮರೆಯಲು ಸಾಧ್ಯವಿಲ್ಲವೋ, ಹಾಗೇಯೆ,ತಾಯ್ನಾಡು, ತಾಯಿ ಭಾಷೆಯನ್ನ ಮರೆಯಬಾರದು, ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಶಿವಕುಮಾರ್ ಮಾತನಾಡಿ ನಮ್ಮ ನಾಡು ನುಡಿ ರಕ್ಷಣೆಗೆ ಎಲ್ಲರೂ ಒಗ್ಗೂಡಿ ಕೆಲಸ ಮಾಡಬೇಕಿದೆ, ಈ ಭಾರಿ ಕೆ.ಬಿ ಕ್ರಾಸ್ ರಂಭಾಪುರಿ ಶಾಲೆ ಆವರಣದಲ್ಲಿ ತಾಲ್ಲೋಕು ಸಾಹಿತ್ಯ ಸಮ್ಮೇಳನ ಆಯೋಜಿಸಿದ್ದು, ಈ ಸಮ್ಮೇಳನ ಅವೀಸ್ಮರಣೀಯವಾಗಿಸಲು, ಎಲ್ಲರೂ ಕೆಲಸ ಮಾಡೋಣ ಎಂದು ತಿಳಿಸಿದರು

ಕಾರ್ಯಕ್ರಮದ ಅಧ್ಯಕ್ಷರಾದ ರೋಟರಿ ಅಧ್ಯಕ್ಷ ಗವಿಯಣ್ಣ ಮಾತನಾಡಿ ರೋಟರಿ ಸಂಸ್ಥೆ ಹಲವಾರು ಸಮಾಜಮುಖಿ ಕೆಲಸಗಳಿಗೆ ತೊಡಗಿಸಿಕೊಂಡಿದೆ.ಸಮಾಜದಲ್ಲಿ ಉತ್ತಮ ಕೆಲಸ ಮಾಡಬೇಕು, ಎನ್ನುವ ಮಾನೋಭಾವ ಉಳ್ಳವರಿಗೆ ಉತ್ತಮವೇದಿಕೆ ರೋಟರಿ ಸಂಸ್ಥೆ,ನಮ್ಮ ಸಂಸ್ಥೆಯಿಂದ ಕನ್ನಡ ಶಾಲೆಗಳಿಗೆ ನೆರವು ನೀಡುವ ಕೆಲಸ ಮಾಡಲಾಗುತ್ತಿದೆ,ಎಂದು ತಿಳಿಸಿದರು

ಕಾರ್ಯಕ್ರಮದಲ್ಲಿ ರೋಟರಿ ಕಾರ್ಯದರ್ಶಿ,ಅಶೋಕ್ ಮಾಜಿ ಅಧ್ಯಕ್ಷರಾದ ಕೃಷ್ಣಪ್ರಸಾದ್ ಮಾಜಿ ಕಾರ್ಯದರ್ಶಿಗಳಾದ ವನಿತಾ ಪ್ರಸನ್ ಪಬ್ಲಿಕ್ ಇಮೇಜ್ ನಿರ್ದೇಶಕರಾದ ಪ್ರಕಾಶ್ ಕ್ಯಾತನಹಳ್ಳಿ, ಹಿರಿಯ ರೋಟರಿನ್ಗಳಾದ ಉಮೇಶ್.. ಪ್ರಭುಸ್ವಾಮಿ.. ಅಣ್ಣಿ.ಧರ್ಮಪ್ಪ.ಶಂಕ್ರಣ್ಣ..ಅಪ್ಪಿ ಗೌಡ..ಪ್ರಕಾಶ.. ಕಿಶೋರಿ.ಲೊಕೇಶನ್..ರೋನಕ್ ಗೋಯಲ್. ಮಹಾವೀರ್ ಕಟಾರಿಯ.ನಟರಾಜು.ಮುಂತ್ತಾದವರು ಉಪಸ್ಥಿತರಿದರು

ವರದಿ : ಮಂಜುನಾಥ್ ಹಾಲ್ಕುರಿಕೆ

ತುಮಕೂರು ಜಿಲ್ಲಾ ಜಾಗೃತಿ ಮತ್ತು ಮೇಲುಸ್ತುವಾರಿ ಸಮಿತಿಗೆ ಸದಸ್ಯರಾಗಿ,ಜಿಲ್ಲಾಡಳಿತ ಆಯ್ಕೆ ಮಾಡಿದ ಹಿನ್ನಲೆ ತಿಪಟೂರು ಗೆಳೆಯರ ಬಳಗದಿಂದ ಆತ್ಮೀಯವಾಗಿ ಸನ್ಮಾನ ಮಾಡಲಾಯಿತು

ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲ್ಲೋಕು ಅಧ್ಯಕ್ಷ ಬೆಣ್ಣೇನಹಳ್ಳಿ ರಾಜು.ಜಿಲ್ಲಾ ಉಪಾಧ್ಯಕ್ಷ ಶೆಟ್ಟಿಹಳ್ಲಿ ಕಲ್ಲೇಶ್,ಮಂಜುನಾಥ್ ಹಾಲ್ಕುರಿಕೆ,ಡಿ ಕುಮಾರ್ ಟಿ.ಎಂ ಮಂಜುನಾಥ್ ನಗರ,ಧರಣೇಶ್ ಕುಪ್ಪಾಳು,ಕಿರಣ್ ರಾಜ್ ಅರ್ಚನಹಳ್ಳಿ,ಡಾ//ಬಿ.ಆರ್ ಅಂಬೇಡ್ಕರ್ ಕಟ್ಟಡ ಹಾಗೂ ಇತರ ನಿರ್ಮಾಣ ಕಾರ್ಮಿಕ ಸಂಘದ ಅಧ್ಯಕ್ಷ ಚಂದ್ರಶೇಖರ್ ,ಉಮೇಶ್ ಕರೀಕೆರೆ,ಮುಂತ್ತಾದವರು ಉಪಸ್ಥಿತರಿದರು

ತಿಪಟೂರು: ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕೆ ಎಲ್ ಎ ಸ್ಕೂಲ್ ಆಫ್ ಲಾ ಕಾಲೇಜಿನಿಂದ ಆಯೋಜಿಸಿದ್ದ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷೀಯ ಭಾಷಣವಹಿಸಿ ಮಾತನಾಡಿದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶಿವಕುಮಾರ್ ಇತ್ತೀಚಿಗೆ ಬಾಂಗ್ಲಾದೇಶದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಇಂತಹ ಉಲ್ಲಂಘನೆಳಿಗೆ ಮಾನವ ಹಕ್ಕುಗಳ ಅರಿವು ಅಗತ್ಯವಾಗಿದೆ, ಕಾರ್ಮಿಕರ ಮಕ್ಕಳಿಗಾಗಿ ಹಲವಾರು ಶೈಕ್ಷಣಿಕ ಸೌಲಭ್ಯಗಳನ್ನು ಸರ್ಕಾರ ಒದಗಿಸುತ್ತಿದೆ ಇದು ಕೂಡ ಮಾನವೀಯ ಹಕ್ಕುಗಳ ಪ್ರಯೋಜನವಾಗಿದೆ, ನಮ್ಮ ಮೂಲಭೂತ ಹಕ್ಕುಗಳಿಗೆ ಧಕ್ಕೆ ಬಾರದಂತೆ ಮಾನವೀಯ ಹಕ್ಕುಗಳ ಅರಿತು ರಕ್ಷಣೆ ಮಾಡ‌ಬೇಕಾದ ಹೊಣೆಗಾರಿಕೆ ನಮ್ಮೆಲ್ಲರಿಗೂ ಇದೆ ಎಂದರು. ಕೆ ಎಲ್ ಎ ಸ್ಕೂಲ್ ಆಫ್ ಲಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಪ್ರೊ ಪ್ರಸನ್ನ ಹೆಚ್ ಎನ್ ಮಾತನಾಡಿ ಮಾನವ ಹಕ್ಕುಗಳ ಉಗಮ ಮತ್ತು ಇತಿಹಾಸದ ಹಂತಗಳನ್ನು ತಿಳಿಸಿ ಬದುಕುಳಿದಿರುವ ವ್ಯಕ್ತಿಯಿಂದ ಬಂಧನಕ್ಕೆ ಒಳಗಾದ ವ್ಯಕ್ತಿ ಗಳವರೆಗೂ ಮಾನವೀಯ ಹಕ್ಕುಗಳ ಬಲವಿದೆ ಇಂತಹ ಮಾನವೀಯ ಹಕ್ಕುಗಳ ಅರಿವು ಅಗತ್ಯವಾಗಿದೆ ವಿಶ್ವಸಂಸ್ಥೆಯ ಅಂಗಸಂಸ್ಥೆಯಾದ ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆಯನ್ನು(UDHR) 1948 ಡಿಸೆಂಬರ್ 10 ರಂದು ನಾಗರೀಕರಿಗೆ ಮಾನವೀಯ ಹಕ್ಕುಗಳನ್ನು ರಕ್ಷಿಸಲು ಜಾಗತೀಕವಾಗಿ ಜಾರಿಗೆ ತರಲಾಯಿತು. ಅಂತೆಯೇ ರಾಷ್ಟ್ರೀಯ ಹಾಗೂ ರಾಜ್ಯ ಮಾನವ ಹಕ್ಕುಗಳ ಆಯೋಗಳು ಸಕ್ರಿಯವಾಗಿವೆ. ಇಂದು” ನಮ್ಮ ಹಕ್ಕುಗಳು, ನಮ್ಮ ಭವಿಷ್ಯ, ಇದೀಗ” ಎಂಬ ಶಿರ್ಷಿಕೆಯಲ್ಲಿ ಆಚರಣೆ ಮಾಡಲಾಗುತ್ತಿದೆ, ನಮಗೆ ಸಾಂವಿಧಾನಿಕವಾಗಿ ದೊರೆಯಲ್ಪಟ್ಟ ಮೂಲಭೂತ ಹಕ್ಕುಗಳ ರಕ್ಷಣೆಗೆ ಮಾನವೀಯ ಹಕ್ಕುಗಳು ರಕ್ಷೆಯಾಗಿವೆ ಎಂದರು .
ಕಾರ್ಯಕ್ರಮದಲ್ಲಿ ಕೆ ಎಲ್ ಎ ಸ್ಕೂಲ್ ಆಫ್ ಲಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಪ್ರೊ ಪ್ರಸನ್ನ ಹೆಚ್ ಎನ್, ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶಿವಕುಮಾರ್ ಮತ್ತು ದೈಹಿಕ ಉಪನ್ಯಾಸಕರಾದ ಷಡಾಕ್ಷರಿ ಮತ್ತು ಇತಿಹಾಸ ಉಪನ್ಯಾಸಕರಾದ ಅಭಿಷೇಕ್ ಮತ್ತು ರಾಜ್ಯಶಾಸ್ತ್ರ ಉಪನ್ಯಾಸಕರಾದ ಪ್ರಕಾಶ್ ರವರು ಉಪಸ್ಥಿತರಿದ್ದರು ಹಾಗೂ ಸದರಿ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಕೆ ಎಲ್ ಎ ಸ್ಕೂಲ್ ಆಫ್ ಲಾ ಕಾಲೇಜಿನ ಕಾನೂನು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವರದಿ: ಸಂತೋಷ್ ಓಬಳ. ಗುಬ್ಬಿ

ತಿಪಟೂರು ತಾಲೋಕಿನ ಹೊನ್ನವಳ್ಳಿ ಗ್ರಾಮದ ಶ್ರೀ ಗುರು ರೇವಣಸಿದೇಶ್ವ ಸ್ವಾಮಿಯ ಕಡೆ ಕಾರ್ತಿಕಕೋತ್ಸವದ ಅಂಗವಾಗಿ ಊರಿನ ಪ್ರಮುಖ ಬೀದಿಗಳಲ್ಲಿ ಕಾಗೀನೆಲೆ ಹೊಸದುರ್ಗ ಕನಕ ಗುರುಪೀಠ ಶಾಖಾಮಠದ ಪೀಠಾಧ್ಯಕರಾದ ಶ್ರೀಶ್ರೀ ಈಶ್ವರಾನಂದ ಪುರಿ ಮಹಾಸ್ವಾಮೀಗಳ ದಿವ್ಯಸಾನಿಧ್ಯದಲ್ಲಿ ಉತ್ಸವ ನಡೆಸಲಾಯಿತು. ಉತ್ಸವದಲ್ಲಿ ಸಾನಿಧ್ಯವಹಿಸಿದ ಶ್ರೀಗಳು ನಾಡಿನ ಸುಭೀಕ್ಷತೆಗೆ ಶುಭಹಾರೈಸಿದರು.

ಹೊನ್ನವಳ್ಳಿಯ ದೊಡ್ಡಹಟ್ಟಿ, ಶ್ರೀರಾಮನಗರ,ಶ್ರೀ ಮಂಜುನಾಥ ಬಡಾವಣೆ, ಕಂಚುಗಾರನಹಳ್ಳಿಯ ಕುರುಬಮಂಡಳಿಯವರಿಂದ ಸೋಮವಾರ ಶ್ರೀಗುರು ರೇವಣಸಿದೇಶ್ವ ಸ್ವಾಮಿ,ಕಾರ್ತಿಕಕ್ಕೆ ಆಗಮಿಸಿದ್ದ ಗ್ರಾಮ ದೇವರುಗಳು, ಬೀರದೇವರುಗಳಿಗೆ ಕುರುಬ ಮಂಡಳಿಯಿಂದ ವಿಶೇಷ ಪೂಜೆ ಸಲ್ಲಿಸಲಾಯಿತು.

ಮಂಗಳವಾರ ಹೊನ್ನವಳ್ಳಿ ರಾಜ ಬೀದಿಗಳಲ್ಲಿ ಶ್ರೀ ರೇವಸಿದ್ದೆಶ್ವರ ಸ್ವಾಮಿ,ಶ್ರೀ ಹೀರೆಕಲ್ ಬೆಟ್ಟದ ಸಿದೇಶ್ವರ ಸ್ವಾಮಿ ಹೊನ್ನವಳ್ಳಿ ಉಡಸಲಮ್ಮ ದೇವಿ,ಕೊಲ್ಹಾಪುರದಮ್ಮದೇವಿ. ಚಿಕ್ಕಮ್ಮದೇವಿ, ಧೂತರಾಯ, ಕಂಚಿನಭೂತ, ಶ್ರೀ ಬನಶಂಕರಮ್ಮದೇವಿ, ಶ್ರೀ ಯಲ್ಲಮ್ಮದೇವಿ,ಶ್ರೀ ಅಣ್ಣಪ್ಪಸ್ವಾಮಿ, ಮತ್ತು ಗ್ಯಾರಘಟ್ಟ, ಸೂರನಹಳ್ಳಿ, ಚೌಲಿಹಳ್ಳಿ,ಅದಿಹಳ್ಳಿ ಬೀರ ದೇವರುಗಳು,ಶ್ರೀ ಮೈಲಾರ ಲಿಂಗೇಶ್ವರ ಸ್ವಾಮಿ,ಅದ್ದೂರಿಯಾಗಿ ಉತ್ಸವಮಾಡಲಾಯಿತು
ಶ್ರೀ ಗುರುರೇವಣ್ಣಸಿದೇಶ್ವರ ಸ್ವಾಮಿ ಮಠ ಹಾಗು ಕುರುಬರ ಮಂಡಳಿ ಅಧ್ಯಕ್ಷರಾದ ಚಂದ್ರೇಗೌಡ, ಹೆಚ್. ಕೆ. ನಿಂಗಪ್ಪ ಹೊನ್ನವಳ್ಳಿ ಬಸವರಾಜ ಒಡೆಯರ್.ಸೇರಿದಂತೆ ಅನೇಕರು ಉಪಸ್ಥಿತರಿದರು

ವರದಿ :ಮಂಜುನಾಥ್ ಹಾಲ್ಕುರಿಕೆ

ಕಲ್ಪತರು ನಾಡಿನ ನಾಡಹಬ್ಬ,ಐತಿಹಾಸಿಕ ಪ್ರಸಿದ್ದ ತಿಪಟೂರು ಶ್ರೀಸತ್ಯಗಣಪತಿ ವಿಸರ್ಜನ ಮಹೋತ್ಸವ ಅದ್ದೂರಿಯಾಗಿ ವೈಭವದಿಂದ ನಡೆಯಿತು,ಗಣೇಶ ಚತುರ್ಥಿಯಂದು,ಸಕಲ ಪೂಜಾಕೈಂಕರರ್ಯಗಳೊಂದಿಗೆ ಶಿಲ್ಪಗಳಿಂದ ತಯಾರಾಗಿ ಪ್ರತಿಷ್ಠಾಪನೆಗೊಂಡಿದ ಶ್ರೀಸತ್ಯಗಣಪತಿ 90 ದಿನಗಳ ಕಾಲ ಪೂಜಿಸಲ್ಪಟ್ಟು,95ನೇ ವರ್ಷದ ಶ್ರೀಸತ್ಯಗಣಪತಿ ವಿಸರ್ಜನಾ ಮಹೋತ್ಸವ ವೈಭವಯುತವಾಗಿ ನಡೆಯಿತು, ಶ್ರೀಸತ್ಯಗಣಪತಿಯನ್ನ ತಿಪಟೂರು ಅಮಾನೀಕೆರೆಯಲ್ಲಿ ವಿಸರ್ಜನೆ ಮಾಡಲಾಯಿತು.

ಶ್ರೀಸತ್ಯಗಣಪತಿ ಜಾತ್ರೆ, ಮೈಸೂರು ದಸರ, ಬೆಂಗಳೂರು ಕರಗ,ಸೇರಿದಂತೆ ರಾಜ್ಯದ ಹಲವಾರು ವಿಶೇಷ ಜಾತ್ರಾ ಮಹೋತ್ಸವಗಳಂತೆ.ಹೆಸರುವಾಸಿಯಾಗಿರುವ ತಿಪಟೂರು ಶ್ರೀಸತ್ಯಗಣಪತಿ ಜಾತ್ರೆ,ಕಲ್ಪತರು ನಾಡಹಬ್ಬವಾಗಿದೆ,ದೇಶ ಹಾಗೂ ವಿವಿಧ ಭಾಗಗಳಿಂದ ಜಾತ್ರೆಗೆ ಭಕ್ತಸಮೂಹವೇ ಸೇರಿದ ಜಾತ್ರೆಯಲ್ಲಿ 2ದಿನಗಳ ಕಾಲ ವೈಭವದಿಂದ ನಡೆಯಿತು,

ಶ್ರೀ ಸತ್ಯಗಣಪತಿ ಆಸ್ಥಾನ ಮಂಟಪದಲ್ಲಿ ವಿಶೇಷಪೂಜೆಯೊಂದಿಗೆ ಆರಂಭವಾದ ಉತ್ಸವ,ದೊಡ್ಡಪೇಟೆ.ಕನ್ನಿಕಾಪರಮೇಶ್ವರಿ ದೇವಾಲಯ ರಸ್ತೆ, ಕಾರೋನೇಷನ್ ರಸ್ತೆ, ಎಲೆ ಆಸರ,ರೈಲ್ವೆ ಸ್ಟೇಷನ್ ರೋಡ್. ಗಾಂಧೀ ನಗರ,ಬಿ.ಹೆಚ್ ರಸ್ತೆ ಕೆ.ಆರ್ ಬಡಾವಣೆ ಸೇರಿದಂತೆ ವಿವಿಧ ಬೀದಿಗಳಲ್ಲಿ ಅದ್ದೂರಿಯಾಗಿ ,ಮೆರವಣಿಗೆ ನಡೆಸಲಾಯಿತು.

ಶ್ರೀ ಸತ್ಯಗಣಪತಿ ಆಸ್ಥಾನ ಮಂಟಪದಲ್ಲಿ ವಿಶೇಷಪೂಜೆಯೊಂದಿಗೆ ಆರಂಭವಾದ ಉತ್ಸವ,ದೊಡ್ಡಪೇಟೆ.ಕನ್ನಿಕಾಪರಮೇಶ್ವರಿ ದೇವಾಲಯ ರಸ್ತೆ, ಕಾರೋನೇಷನ್ ರಸ್ತೆ, ಎಲೆ ಆಸರ,ರೈಲ್ವೆ ಸ್ಟೇಷನ್ ರೋಡ್. ಗಾಂಧೀ ನಗರ,ಬಿ.ಹೆಚ್ ರಸ್ತೆ ಕೆ.ಆರ್ ಬಡಾವಣೆ ಸೇರಿದಂತೆ ವಿವಿಧ ಬೀದಿಗಳಲ್ಲಿ ಅದ್ದೂರಿಯಾಗಿ ,ಮೆರವಣಿಗೆ ನಡೆಸಲಾಯಿತು.

ಶ್ರೀ ಸತ್ಯಗಣಪತಿ ಉತ್ಸವ ಸಾಗುವ ಮಾರ್ಗಗಳಲ್ಲಿ,ವಿವಿಧ ಸಂಘಸಂಸ್ಥೆಗಳು.ವರ್ತಕರು.ಭಕ್ತರು ವಿವಿಧ ಬಗೆಯ ತರಹೇವಾರಿ ,ಹೂವಿನ ಹಾರಗಳು ಸ್ವಾಮಿಯವರಿಗೆ ಅರ್ಪಿಸಿದರು ಕಡುಬು,ಕಜ್ಜಾಯ, ಸೇರಿದಂತೆ ವಿವಿಧ ಬಗೆಯ ಖಾದ್ಯಗಳ ಹಾರದ ಜೊತೆಗೆ, ಭಕ್ಷ್ಯ. ಭೋಜನಗಳಲ್ಲಿ ಅರ್ಪಿಸಿ ಪೂಜೆಸಲ್ಲಿಸಿದರು.ಉತ್ಸವ ಸಾಗಿದ ಮಾರ್ಗಗಳಲ್ಲಿ ಉಚಿತ ಪ್ರಸಾದ ಫಾನಕ,ಫಲಹಾರ ಮಜ್ಜಿಗೆ ನೀರು,ವಿತರಿಸಿ ಭಕ್ತಿ ಸಮರ್ಪಿಸಿದರು.

ಉತ್ಸವದಲ್ಲಿ ಸಂಸ್ಕೃತಿಕ ಕಲಾತಂಡಗಳು.ಕೇರಳದ ಚಂಡೇವಾದ್ಯ, ಚಿಟ್ಟಿಮೇಳ, ಕರಡೇವು ವಾದ್ಯ, ನಾದಸ್ವರ,ಲಿಂಗದ ವೀರರ ಕುಣಿತ. ನಾಸೀಕ್ ಡೋಲ್.ಅಣ್ಣಮ್ಮನ ತಮಟೆವಾದ್ಯ,ಸೇರಿದಂತೆ ಹಲವಾರು ಕಲಾತಂಡಗಳು ಹಾಗೂ ಕಣ್ಮನಕೊರೈಸುವ,ಡಿಜೆ. ಜಾತ್ರೆಗೆ ಮೆರಗುನೀಡಿದವು. ಇಡೀ ತಿಪಟೂರು ನಗರವೇ ಮದುವಣಗಿತ್ತಿಯಂತೆ ಸಿಂಗಾರಗೊಂಡು, ವಿದ್ಯುತ್ ದೀಪಾಲಂಕಾರಗಳಿಂದ ಕಂಗೊಳಿಸಿತು.ರಾಜಬೀದಿಗಳಲ್ಲಿ ಅದ್ದೂರಿಯಾಗಿ ಉತ್ಸವ ನಡೆದು ಶ್ರೀಸತ್ಯಗಣಪತಿಯನ್ನ ತಿಪಟೂರು ಅಮಾನೀಕೆರೆಯಲ್ಲಿ ವಿಸರ್ಜನೆ ನೆರವೇರಿಸಲಾಯಿತು.
ಶ್ರೀ ಸತ್ಯಗಣಪತಿ ಸೇವಾಟ್ರಸ್ಟ್ ಅಧ್ಯಕ್ಷರಾದ ಶ್ರೀಕಂಠ.ವಿಸರ್ಜನಾ ಮಹೋತ್ಸವದ ಪೂಜಾ ವಿಧಿವಿಧಾನಗಳನ್ನ ನೆರವೇರಿಸಿದರು

ಜಾತ್ರೆಯ ಅಂಗವಾಗಿ ಶಾಸಕ ಕೆ.ಷಡಕ್ಷರಿ .ಮಾಜಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್, ಮಾಜಿ ಶಾಸಕ ಬಿ ನಂಜಾಮರಿ.ನಿವೃತ್ತಪೊಲೀಸ್ ಅಧಿಕಾರಿ ಲೋಕೇಶ್ವರ್ ನಗರಸಭೆ ಅಧ್ಯಕ್ಷರಾದ ಯಮುನಾ ಧರಣೇಶ್.ಉಪಾಧ್ಯಕ್ಷರಾದ ಮೇಘನಾ ಭೂಷಣ್ .

ತುಮಕೂರು ಜಿಲ್ಲಾಪೋಲಿಸ್ ವರಿಷ್ಠಾಧಿಕಾರಿ ಅಶೋಕ್ .ಅಡಿಷನಲ್ ಎಸ್ಪಿ ಮರಿಯಪ್ಪ.ತಿಪಟೂರು ಡಿವೈಎಸ್ಪಿ ವಿನಾಯಕ ಶೆಟ್ಟಿಗೇರಿ,ತಹಸೀಲ್ದಾರ್ ಪವನ್ ಕುಮಾರ್.ಪೌರಾಯುಕ್ತ ವಿಶ್ವೇಶ್ವರಯ್ಯ ಬದರಗಡೆ,ಖ್ಯಾತ ವೈದ್ಯರಾದ ಡಾ//ಶ್ರೀಧರ್ ಯುವಮುಖಂಡ ನಿಖಿಲ್ ರಾಜಣ್ಣ.ಪ್ರಸನ್ನಕುಮಾರ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿ,ಪೂಜೆಸಲ್ಲಿಸಿದರು.

ವರದಿ:ಮಂಜುನಾಥ್ ಹಾಲ್ಕುರಿಕೆ

ಕಲ್ಪತರು ನಾಡಿನ ನಾಡಹಬ್ಬ,ಐತಿಹಾಸಿಕ ಪ್ರಸಿದ್ದ ತಿಪಟೂರು ಶ್ರೀಸತ್ಯಗಣಪತಿ ವಿಸರ್ಜನ ಮಹೋತ್ಸವ ಅದ್ದೂರಿಯಾಗಿ ವೈಭವದಿಂದ ನಡೆಯಿತು,ಗಣೇಶ ಚತುರ್ಥಿಯಂದು,ಸಕಲ ಪೂಜಾಕೈಂಕರರ್ಯಗಳೊಂದಿಗೆ ಶಿಲ್ಪಗಳಿಂದ ತಯಾರಾಗಿ ಪ್ರತಿಷ್ಠಾಪನೆಗೊಂಡಿದ ಶ್ರೀಸತ್ಯಗಣಪತಿ 90 ದಿನಗಳ ಕಾಲ ಪೂಜಿಸಲ್ಪಟ್ಟು,95ನೇ ವರ್ಷದ ಶ್ರೀಸತ್ಯಗಣಪತಿ ವಿಸರ್ಜನಾ ಮಹೋತ್ಸವ ವೈಭವಯುತವಾಗಿ ನಡೆಯಿತು, ಶ್ರೀಸತ್ಯಗಣಪತಿಯನ್ನ ತಿಪಟೂರು ಅಮಾನೀಕೆರೆಯಲ್ಲಿ ವಿಸರ್ಜನೆ ಮಾಡಲಾಯಿತು.

ಶ್ರೀಸತ್ಯಗಣಪತಿ ಜಾತ್ರೆ, ಮೈಸೂರು ದಸರ, ಬೆಂಗಳೂರು ಕರಗ,ಸೇರಿದಂತೆ ರಾಜ್ಯದ ಹಲವಾರು ವಿಶೇಷ ಜಾತ್ರಾ ಮಹೋತ್ಸವಗಳಂತೆ.ಹೆಸರುವಾಸಿಯಾಗಿರುವ ತಿಪಟೂರು ಶ್ರೀಸತ್ಯಗಣಪತಿ ಜಾತ್ರೆ,ಕಲ್ಪತರು ನಾಡಹಬ್ಬವಾಗಿದೆ,ದೇಶ ಹಾಗೂರಾಜ್ಯ ದ ವಿವಿಧ ಭಾಗಗಳಿಂದ ಜಾತ್ರೆಗೆ ಭಕ್ತಸಮೂಹವೇ ಸೇರಿದಜಾತ್ರೆ, 2ದಿನಗಳ ಕಾಲ ವೈಭವದಿಂದ ನಡೆಯಿತು,

ಶ್ರೀ ಸತ್ಯಗಣಪತಿ ಆಸ್ಥಾನ ಮಂಟಪದಲ್ಲಿ ವಿಶೇಷಪೂಜೆಯೊಂದಿಗೆ ಆರಂಭವಾದ ಉತ್ಸವ,ದೊಡ್ಡಪೇಟೆ.ಕನ್ನಿಕಾಪರಮೇಶ್ವರಿ ದೇವಾಲಯ ರಸ್ತೆ, ಕಾರೋನೇಷನ್ ರಸ್ತೆ, ಎಲೆ ಆಸರ,ರೈಲ್ವೆ ಸ್ಟೇಷನ್ ರೋಡ್. ಗಾಂಧೀ ನಗರ,ಬಿ.ಹೆಚ್ ರಸ್ತೆ ಕೆ.ಆರ್ ಬಡಾವಣೆ ಸೇರಿದಂತೆ ವಿವಿಧ ಬೀದಿಗಳಲ್ಲಿ ಅದ್ದೂರಿಯಾಗಿ ,ಮೆರವಣಿಗೆ ನಡೆಸಲಾಯಿತು.

ಶ್ರೀ ಸತ್ಯಗಣಪತಿ ಉತ್ಸವ ಸಾಗುವ ಮಾರ್ಗಗಳಲ್ಲಿ,ವಿವಿಧ ಸಂಘಸಂಸ್ಥೆಗಳು.ವರ್ತಕರು.ಭಕ್ತರು ವಿವಿಧ ಬಗೆಯ ತರಹೇವಾರಿ ,ಹೂವಿನ ಹಾರಗಳು ಸ್ವಾಮಿಯವರಿಗೆ ಅರ್ಪಿಸಿದರು ಕಡುಬು,ಕಜ್ಜಾಯ, ಸೇರಿದಂತೆ ವಿವಿಧ ಬಗೆಯ ಖಾದ್ಯಗಳ ಹಾರದ ಜೊತೆಗೆ, ಭಕ್ಷ್ಯ. ಭೋಜನಗಳಲ್ಲಿ ಅರ್ಪಿಸಿ ಪೂಜೆಸಲ್ಲಿಸಿದರು.ಉತ್ಸವ ಸಾಗಿದ ಮಾರ್ಗಗಳಲ್ಲಿ ಉಚಿತ ಪ್ರಸಾದ ಫಾನಕ,ಫಲಹಾರ ಮಜ್ಜಿಗೆ ನೀರು,ವಿತರಿಸಿ ಭಕ್ತಿ ಸಮರ್ಪಿಸಿದರು.

ಉತ್ಸವದಲ್ಲಿ ಸಂಸ್ಕೃತಿಕ ಕಲಾತಂಡಗಳು.ಕೇರಳದ ಚಂಡೇವಾದ್ಯ, ಚಿಟ್ಟಿಮೇಳ, ಕರಡೇವು ವಾದ್ಯ, ನಾದಸ್ವರ,ಲಿಂಗದ ವೀರರ ಕುಣಿತ. ನಾಸೀಕ್ ಡೋಲ್.ಅಣ್ಣಮ್ಮನ ತಮಟೆವಾದ್ಯ,ಸೇರಿದಂತೆ ಹಲವಾರು ಕಲಾತಂಡಗಳು ಹಾಗೂ ಕಣ್ಮನಕೊರೈಸುವ,ಡಿಜೆ. ಜಾತ್ರೆಗೆ ಮೆರಗುನೀಡಿದವು. ಇಡೀ ತಿಪಟೂರು ನಗರವೇ ಮದುವಣಗಿತ್ತಿಯಂತೆ ಸಿಂಗಾರಗೊಂಡು, ವಿದ್ಯುತ್ ದೀಪಾಲಂಕಾರಗಳಿಂದ ಕಂಗೊಳಿಸಿತು.ರಾಜಬೀದಿಗಳಲ್ಲಿ ಅದ್ದೂರಿಯಾಗಿ ಉತ್ಸವ ನಡೆದು ಶ್ರೀಸತ್ಯಗಣಪತಿಯನ್ನ ತಿಪಟೂರು ಅಮಾನೀಕೆರೆಯಲ್ಲಿ ವಿಸರ್ಜನೆ ನೆರವೇರಿಸಲಾಯಿತು.
ಶ್ರೀ ಸತ್ಯಗಣಪತಿ ಸೇವಾಟ್ರಸ್ಟ್ ಅಧ್ಯಕ್ಷರಾದ ಶ್ರೀಕಂಠ.ವಿಸರ್ಜನಾ ಮಹೋತ್ಸವದ ಪೂಜಾ ವಿಧಿವಿಧಾನಗಳನ್ನ

ನೆರವೇರಿಸಿದರುಜಾತ್ರೆಯ ಅಂಗವಾಗಿ ಶಾಸಕ ಕೆ.ಷಡಕ್ಷರಿ .ಮಾಜಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್, ಮಾಜಿ ಶಾಸಕ ಬಿ ನಂಜಾಮರಿ.ನಿವೃತ್ತಪೊಲೀಸ್ ಅಧಿಕಾರಿ ಲೋಕೇಶ್ವರ್ ನಗರಸಭೆ ಅಧ್ಯಕ್ಷರಾದ ಯಮುನಾ ಧರಣೇಶ್.ಉಪಾಧ್ಯಕ್ಷರಾದ ಮೇಘನಾ ಭೂಷಣ್

ತುಮಕೂರು ಜಿಲ್ಲಾಪೋಲಿಸ್ ವರಿಷ್ಠಾಧಿಕಾರಿ ಅಶೋಕ್ .ಅಡಿಷನಲ್ ಎಸ್ಪಿ ಮರಿಯಪ್ಪ.ತಿಪಟೂರು ಡಿವೈಎಸ್ಪಿ ವಿನಾಯಕ ಶೆಟ್ಟಿಗೇರಿ,ತಹಸೀಲ್ದಾರ್ ಪವನ್ ಕುಮಾರ್.ಪೌರಾಯುಕ್ತ ವಿಶ್ವೇಶ್ವರಯ್ಯ ಬದರಗಡೆ,ಖ್ಯಾತ ವೈದ್ಯರಾದ ಡಾ//ಶ್ರೀಧರ್ ಯುವಮುಖಂಡ ನಿಖಿಲ್ ರಾಜಣ್ಣ.ಪ್ರಸನ್ನಕುಮಾರ್ ಮಾಜಿ ನಗರಸಭಾ ಅಧ್ಯಕ್ಷ ರಾಮ್ ಮೋಹನ್, ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿ ಪೂಜೆ ಸಲ್ಲಿಸಿದರು.

ವರದಿ:ಮಂಜುನಾಥ್ ಹಾಲ್ಕುರಿಕೆ

ತಿಪಟೂರು ಶ್ರೀ ಸತ್ಯಗಣಪತಿ ಗಾಂಧೀನಗರದಕ್ಕೆ ಪ್ರವೇಶ ಪಡೆದ ಹಿನ್ನೆಲೆ ತಿಪಟೂರು ಗಾಂಧೀನಗರ,ವಿವೇಕನಂದ ನಗರ, ಬಸವೇಶ್ವರ ನಗರ,ಬೋವಿಕಾಲೋನಿ. ಸ್ವೀಪರ್ಸ್ ಕಾಲೋನಿ,ತಮಿಳ್ ಕಾಲೋನಿ, ಚಾಮುಂಡೇಶ್ವರಿ ಬಡಾವಣೆ,ಸೇರಿದಂತೆ ಗಾಂಧೀ ನಗರದ ಭಾಗದ ಬಡಾವಣೆಗಳ ಭಕ್ತಸಮೂಹ ಗಾಂಧೀ ನಗರ ಪೋಲಿಸ್ ಚೌಕಿ ಸರ್ಕಲ್,ಸರ್ಕಾರಿ ಹಿರಿಯಪಾಠಶಾಲೆ ಆವರಣದಲ್ಲಿ ಪೂಜೆಸಲ್ಲಿಸಲಾಯಿತು, ಶ್ರೀಸತ್ಯಗಣಪತಿ ಉತ್ಸವ ಗಾಂಧೀನಗರ ಜಾಮೀಯ ಮಸೀದಿ ಬಳಿ ಮುಸ್ಲೀಂ ಬಾಂದವರು ಬೃಹತ್ ಗಾತ್ರದ ಹೂವಿನ ಹಾರ ಸಮರ್ಪಿಸಿ,ಪೂಜೆಸಲ್ಲಿಸಿದರು

ಜಾಮೀಯ ಮಸೀದಿ ಬಳಿ ಸೌಹಾರ್ದ ಕೂಟ ಆಚರಿಸಲಾಯಿತು.
ತುಮಕೂರು ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ ಅಶೋಕ್,ತಹಸೀಲ್ದಾರ್ ಪವನ್ ಕುಮಾರ್,ಖ್ಯಾತ ವೈದ್ಯರಾದ ಡಾ//ಶ್ರೀಧರ್,ಡಾ//ವಿವೇಚನ್,ಯುವಮುಖಂಡ ನಿಖಿಲ್ ರಾಜಣ್ಣ,ನಗರಸಭಾ ಸದಸ್ಯರಾದ ನದೀಮ್ ಪಾಷ,ಮತಾವಲ್ಲಿಗಳಾದ ಮಹಮದ್ ದಸ್ತಗಿರ್,ಮುನಾವರ್ ಪಾಷ,ಪೌರಾಯುಕ್ತ ವಿಶ್ವೇಶ್ವರಯ್ಯ ಬದರಗಡೆ,ಮಾಜಿ ನಗರಸಭಾ ಸದಸ್ಯ ಪ್ರಸನ್ನ ಕುಮಾರ್ ಮುಂತ್ತಾದವರು ಉಪಸ್ಥಿತರಿದರು.
ಮಸೀದಿ ಕಮಿಟಿಯಿಂದ ಗಣ್ಯರನ್ನ ಸನ್ಮಾನಿಸಲಾಯಿತು.

ವರದಿ:ಮಂಜುನಾಥ್ ಹಾಲ್ಕುರಿಕೆ

ಕಲ್ಪತರು ನಾಡಿನ ಪ್ರಸಿದ್ದ ನಾಡಹಬ್ಬ ತಿಪಟೂರು ಶ್ರೀಸತ್ಯಗಣಪತಿ ವಿಸರ್ಜನಾ ಮಹೋತ್ಸದ ಅಂಗವಾಗಿ ನಡೆದ ಪಟಾಕಿ,ಮದ್ದುಗುಂಡು ,ಪ್ರದರ್ಶನ ಭಕ್ತಸಮೂಹದ ಮನಸೂರೆಗೊಂಡಿತು.

ತಿಪಟೂರು ಶ್ರೀ ಸತ್ಯಗಣಪತಿ ವಿಸರ್ಜನ ಮಹೋತ್ಸವ ಕನ್ನಡ ನಾಡಿನ ಪ್ರಮುಖ ಆಚರಣೆಗಳಲ್ಲಿ ಒಂದು ಎಂದರೆ ತಪ್ಪಲ್ಲ,ಮೈಸೂರು, ದಸರ,ಬೆಂಗಳೂರು ಕರಗದಂತೆ ತಿಪಟೂರು ಶ್ರೀಸತ್ಯಗಣಪತಿ ಜಾತ್ರೆಯೂ ವಿಶೇಷವಾಗಿದೆ. ಈ ಜಾತ್ರೆಯಲ್ಲಿ ಸಂಪ್ರದಾಯಗಳಜೊತೆ ಆಧುನಿಕ ಆಚರಣೆಗಳೂ ಕಮ್ಮಿಇಲ್ಲ,ಪ್ರತಿವರ್ಷದಂತೆ ಡಿಜೆ ಹಾಗೂ ಪಟಾಕಿ ಮದ್ದು ಗುಂಡುಗಳ ಪ್ರದರ್ಶನಕ್ಕೂ ವಿಶೇಷ ಸ್ಥಾನವಿದೆ, ಪಟಾಕಿಯ ಪ್ರದರ್ಶನ ನೋಡಲೇಂದೆ,ರಾಜ್ಯದ ವಿವಿಧ ಭಾಗಗಳಿಂದ ಜನ ಜಾತ್ರೆಗೆ ಬರುತ್ತಾರೆ, ತಿಪಟೂರು ಶ್ರೀಸತ್ಯಗಣಪತಿ ಆಸ್ಥಾನಮಂಟಪದಿಂದ ಹೊರಟ ಮೆರವಣಿಗೆ ದೊಡ್ಡಪೇಟೆ,ಕನ್ನಿಕಾ ಪರಮೇಶ್ವರಿ ದೇವಾಲಯ ರಸ್ತೆ, ಎಲೆ ಆಸರ, ಮೂಲಕ ಸಾಗಿ ಕೋಡಿಸರ್ಕಲ್ ಗೆ ಆಗಮಿಸುತ್ತಿದ್ದಂತೆ,ತಿಪಟೂರು ಅಮಾನೀಕೆರೆ ಎರಿಯ ಮೇಲೆ ಚಿತ್ತಾಕರ್ಷಕವಾದ ಪಟಾಕಿ ಸದ್ದು, ಭಕ್ತಜನ ಸಮೂಹದ, ಮನಸೂರೆಗೊಳ್ಳುವಂತೆ ಮಾಡಿತು.ಸುಮಾರು ಅರ್ಥಗಂಟೆಗಳ ಕಾಲ ಭಾರೀ ಶಬ್ದದ ಪಟಾಕಿ ಭಕ್ತಮನಕ್ಕೆ ಮುದನೀಡಿದರೆ, ಕೇರಳ ಮೂಲದ ಪಟಾಕಿ ತಯಾರಕರು, ತಯಾರಿಸಿದ ,ಬಣ್ಣ,ಬಣ್ಣದ ಚಿತ್ತಾರದ ಪಟಾಕಿ ಬಾನಂಗಳದಲ್ಲಿ ಆರ್ಭಟಿಸಿ ಭಕ್ತ ಸಮೂಹಕ್ಕೆ,ಮುದನೀಡಿದವು,ರಂಗುರಂಗಿನ ಪಟಾಕಿ ಕಲರವ ಕಂಡ ಭಕ್ತ ಸಮೂಹ ಜಯಘೋಷ ಕೂಡಿ ಹರ್ಷ ವ್ಯಕ್ತಪಡಿಸಿದರು.

ವರದಿ:ಮಂಜುನಾಥ್ ಹಾಲ್ಕುರಿಕೆ

ತಿಪಟೂರು ಐತಿಹಾಸಿಕ ಪ್ರಸಿದ್ದ ಕಲ್ಪತರು ನಾಡಹಬ್ಬ ಶ್ರೀಸತ್ಯಗಣಪತಿ ವಿಸರ್ಜನಾ ಮಹೋತ್ಸವದ ಅಂಗವಾಗಿ ಉತ್ಸವಕ್ಕೆ ಅದ್ದೂರಿ ಚಾಲನೆ ನೀಡಲಾಯಿತು.

ಶ್ರೀ ಸತ್ಯಗಣಪತಿ ಆಸ್ಥಾನ ಮಂಟಪದಲ್ಲಿ ವಿಶೇಷಪೂಜೆಸಲ್ಲಿಸಿ ನಂತರ ಹೂವಿನಿಂದ ಅಲಂಕೃತವಾದ ಉತ್ಸವದಲ್ಲಿ ಕೂರಿಸಿ, ಶಾಸಕರಾದ ಕೆ.ಷಡಕ್ಷರಿ,ಮಾಜಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್, ಶ್ರೀಸತ್ಯಗಣಪತಿ ಸೇವಾ ಟ್ರಸ್ಟ್ ಅಧ್ಯಕ್ಷ ಶ್ರೀಕಂಠ ಶ್ರೀ ಸತ್ಯಗಣಪತಿಯವರಿಗೆ ಪೂಜೆಸಲ್ಲಿಸಿ ಚಾಲನೆ ನೀಡಿದರು.

ಶ್ರೀಸತ್ಯಗಣಪತಿ ಆಸ್ಥಾನದಿಂದ ಹೊರಟ ಉತ್ಸವ,ದೊಡ್ಡಪೇಟೆ, ಕನ್ನಿಕಾ ಪರಮೇಶ್ವರಿ ದೇವಾಸ್ಥಾನ ರಸ್ತೆ ಎಲೆ ಆಸರ,ಮಡಕೆ ಆಸರ, ಮೂಲಕ ಅದ್ದೂರಿ ಉತ್ಸವ ನಡೆಸಲಾಯಿತು, ಮಂಗಳವಾದ್ಯ,ಚಂಡೆವಾಧ್ಯ ತಮಟೆವಾಧ್ಯ, ನಾದಸ್ವರ, ಡಿಜೆ ಉತ್ಸವಕ್ಕೆ ಮೆರಗು ನೀಡಿದವು.ಲಕ್ಷಾಂತರ ಜನ ಭಕ್ತಾಧಿಗಳು ಉತ್ಸವದಲ್ಲಿ ಭಾಗವಹಿಸಿದರು
ಗಣೇಶ ಉತ್ಸವ ಸಾಗುವ ಮಾರ್ಗದಲ್ಲಿ ಸ್ವಾಮಿಯವರಿಗೆ ವಿಶೇಷವಾದ ಫಲಹಾರ, ವಿವಿಧ ನೈವೇದ್ಯಗಳು,ಹಣ್ಣು ಹಾರ ಸಮರ್ಪಿಸಿ ಪೂಜೆಸಲ್ಲಿಸಿದರು ಮನಮೋಹಕ ಡಿಜೆಸೌಂಡ್ಸ್ ಗೆ ಸಾವಿರಾರು ಯುವಕ ಯುವತಿಯರು ಕುಣಿದು ಕುಪ್ಪಳಿಸಿದರು,

ನಗರದಾದ್ಯಂತ ಜಗಮಗಿಸುವ ವಿದ್ಯುತ್ ದೀಪಾಲಂಕಾರದಿಂದ ಅಲಂಕರಿಸಿದ್ದು, ವಿಶೇಷವಾದ ಅಮ್ಯೂಸ್ ಮೆಂಟ್ ಪಾರ್ಕ್.ಹಾಗೂ ಮಾರಾಟ ಮಳಿಗೆಗಳು ಜಾತ್ರೆಗೆ ರಂಗು ನೀಡಿದೆ .ಉತ್ಸವ ಅದ್ದೂರಿಯಾಗಿ ನಡೆಯುತ್ತಿದ್ದು ನಾಳೆ ತಿಪಟೂರು ಅಮಾನೀಕೆರೆ ಕಲ್ಯಾಣಿಯಲ್ಲಿ ವಿಸರ್ಜನಾ ಮಹೋತ್ಸವ ನಡೆಯಲಿದೆ.

ವರದಿ:ಮಂಜುನಾಥ್ ಹಾಲ್ಕುರಿಕೆ

ತಿಪಟೂರು ನಗರದ ಡಾ//ಬಿ.ಆರ್ ಅಂಬೇಡ್ಕರ್ ವೃತ್ತದಲ್ಲಿ ಡಾ//ಬಿ.ಆರ್ ಅಂಬೇಡ್ಕರ್ ಪರಿನಿರ್ವಾಣದಿನ ಆಚರಿಸಲಾಯಿತು,ದಲಿತ ಹಾಗೂಪ್ರಗತಿಪರ ಸಂಘಟನೆ ಮುಖಂಡರು ಅಂಬೇಡ್ಕರ್ ಭಾವಚಿತ್ರಕ್ಕೆ,ಪುಷ್ಪಾರ್ಚನೆಮಾಡಿ,ಕ್ಯಾಂಡಲ್ ಬೆಳಗಿಸಿ ಗೌರವ ಅರ್ಪಿಸಲಾಯಿತು.

ತಿಪಟೂರು: ವಿಶ್ವಶ್ರೇಷ್ಠ ಜ್ಞಾನಿ ಡಾ//ಬಿ.ಆರ್ ಅಂಬೇಡ್ಕರ್ ನವ ಭಾರತದ ನಿರ್ಮಾತೃ, ತನ್ನ ಅಗಾದ ಜ್ಞಾನ ಸಂಪತ್ತಿನಿಂದ, ಶೋಷಿತರು, ಮಹಿಳೆಯರು, ಸೇರಿದಂತೆ ಕೋಟ್ಯಾನುಕೋಟಿ ಜನರ ಬಾಳಿಗೆ ಬೆಳಕಾಗಿದ್ದಾರೆ, ಎಂದು ಮಾಜಿ ಎಪಿಎಂಸಿ ನಿರ್ದೇಶಕ ಬಜಗೂರು ಮಂಜುನಾಥ್ ತಿಳಿಸಿದರು

ನಗರದ ಡಾ//ಬಿ.ಆರ್ ಅಂಬೇಡ್ಕರ್ ವೃತ್ತದಲ್ಲಿ ದಲಿತಪರ ಹಾಗೂ ಪ್ರಗತಿಪರ ಸಂಘಟನೆಗಳಿಂದ ಆಯೋಜಿಸಿದ ಸಂವಿಧಾನ ಶಿಲ್ಪಿ ಡಾ//ಬಿ.ಆರ್ ಅಂಬೇಡ್ಕರ ರವರ ಪರಿನಿರ್ವಾಣದಿನದ ಅಂಗವಾಗಿ ಡಾ//ಬಿ..ಅರ್ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಮಾತನಾಡಿದ ಅವರುಅಂಬೇಡ್ಕರ್ ತತ್ವ ಚಿಂತನೆಗಳನನ್ನ ರೂಡಿಸಿಕೊಂಡು ಸಮಾಜದ ಮುಖ್ಯವಾಹಿನಿಯಲ್ಲಿ ಸ್ವಾಭಿಮಾನದಿಂದ ಬದುಕಿದಾಗ ಅದು ಅಂಬೇಡ್ಕರ್ ರವರಿಗೆ ಸಲ್ಲಿಸುವ ಗೌರವ,ವಿಶ್ವ ಜ್ಞಾನಿ ಅಂಬೇಡ್ಕರ್ ರವರು ತಮ್ಮ ಜೀವಿತಾವಧಿಯನ್ನ ಅಧ್ಯಯನದ ಮೂಲಕ ಜಗತ್ತಿಗೆ ಜ್ಞಾನದ ಬೆಳಕು ನೀಡಿದ್ದಾರೆ,ಸಾವಿರಾರು ವರ್ಷಗಳಿಂದ ವರ್ಣಾಶ್ರಮದ ಕತ್ತಲೆ ಕೂಪದಲ್ಲಿ ಬೇಯುತ್ತಿದ ಭಾರತಕ್ಕೆ ಸಂವಿಧಾನದ ಮೂಲಕ ಬೆಳಕು ನೀಡಿದ ಮಹಾಜ್ಯೋತಿ, ಡಿಸೆಂಬರ್ 6ರಂದು ಪರಿನಿಬ್ಬಣಗೊಂಡು ವಿಶ್ವಚೈತನ್ಯವಾಗಿದ್ದೆ ಎಂದು ತಿಳಿಸಿದರು.
ಡಿ.ಎಸ್.ಎಸ್ ಮುಖಂಡ ಹರೀಶ್ ಗೌಡ ಮಾತನಾಡಿ ಡಾ// ಅಂಬೇಡ್ಕರ್ ರವರು ವಿಶ್ವದ ಮಹಾ ಚೇತನ, ತಮ್ಮ ಜೀವನ ಪೂರ್ತಿ ಬಡವರು,ನೊಂದವರು, ಶೋಷಿತರ ಹೇಳಿಗೆಗಾಗಿ ವ್ಯಯಿಸಿದ್ದಾರೆ, ಎಂದು ತಿಳಿಸಿದರು
ಮಾಜಿ ನಗರಸಭಾ ಸದಸ್ಯ ತರಕಾರಿ ಗಂಗಾಧರ್ ಮಾತನಾಡಿ ಡಾ//ಅಂಬೇಡ್ಕರ್ ಒಂದು ಜಾತಿ ಧರ್ಮಕ್ಕೆ ಸೀಮಿತರಾದ ವ್ಯಕ್ತಿಯಲ್ಲ, ವಿಶ್ವಕ್ಕೆ ಬೆಳಕು ನೀಡಿದ ಮಹಾನ್ ಚೇತನ ,ಅವರು ಹಾಕಿಕೊಟ್ಟದಾರಿಯಲ್ಲಿ ನಡೆದರೆ ಮನುಕುಲದ ಉದ್ದಾರ ಸಾಧ್ಯವಾಗುತ್ತದೆ,ಅವರ ಅದರ್ಶಗಳನ್ನ ಎಲ್ಲರೂ ಪಾಲಿಸೋಣ ಎಂದು ತಿಳಿಸಿದರು
ಕಾರ್ಯಕ್ರಮದಲ್ಲಿ ಸವಿತ ಸಮಾಜದ ಮುಖಂಡ ಗೋವಿಂದರಾಜು. ದೀಲಿಪ್ ಕುಮಾರ್, ತಡಸೂರು ರೇಣು,ಕೊರಚ ಸಮಾಜದ ಅಧ್ಯಕ್ಷ ಸತೀಶ್,ದಲಿತ ಮುಖಂಡರಾದ ಬಿ.ಟಿ ಕುಮಾರ್. ಮಂಜುನಾಥ್ ಹಾಲ್ಕುರಿಕೆ, ಬಸವರಾಜು.ಮುಂತ್ತಾದವರು ಉಪಸ್ಥಿತರಿದರು

ವರದಿ:ಮಂಜುನಾಥ್ ಹಾಲ್ಕುರಿಕೆ

error: Content is protected !!