KALPATHARU KRANTHI

ಪತ್ರಕರ್ತರ ಸಮಯ ಪ್ರಜ್ಞೆ:ತಿಪಟೂರು ನಗರದಲ್ಲಿ ಭಿಕ್ಷಾಟನೆ ಮಾಡುತ್ತಿದ್ದ ಮಕ್ಕಳು ಬಾಲ ಮಂದಿರಕ್ಕೆ

Spread the love

ನಗರದ ಸಿಂಗ್ರಿ ನಂಜಪ್ಪ ವೃತ್ತದ ಬಳಿ ಹಾಗೂ ಇತರೆ ಪ್ರದೇಶಗಳ ಹತ್ತಿರ ಸಾರ್ವಜನಿಕರಿಂದ ಭಿಕ್ಷಾಟನೆ ಮಾಡುವಾಗ ಮಕ್ಕಳ ಚಲನಚಲನ ಗಮನಿಸಿದ ಪತ್ರಕರ್ತರು ಅಧಿಕಾರಿಗಳ ಸಮಕ್ಷಮ ಬಾಲಮಂದಿರಕ್ಕೆ ಒಪ್ಪಿಸಿರುವ ಘಟನೆ ನಡೆದಿದೆ.


ತಿಪಟೂರಿನ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಆರ್ ಪ್ರಶಾಂತ್ ಹಾಗೂ (ಪ್ರಶಾಂತ್ ಕರೀಕೆರೆ) ಮತ್ತು ಹೊಸದಿಗಂತ ವರದಿಗಾರ ಮನೋಹರ ರಂಗಾಪುರ ಮಗಳನ್ನ ಗಮನಿಸಿ.ಮಾಹಿತಿ ಸಂಗ್ರಹಿಸಿದ್ದು ಭಿಕ್ಷಾಟನೆಯಲ್ಲಿ ತೊಡಗಿರುವ ಮಕ್ಕಳ ಶಾಲೆ ಬಿಟ್ಟು ಭಿಕ್ಷಾಟನೆಯಲ್ಲಿ ತೊಡಗಿದ್ದಾರೆ ಎಂದು ದೊರೆತ ಮಾಹಿತಿಯಂತೆ ತಕ್ಷಣ ತಿಪಟೂರು ನಗರಪೊಲೀಸ್ ಠಾಣೆ .ಶಿಶು ಅಭಿವೃದ್ದಿ ಇಲಾಖೆ ಹಾಗೂ ತುಮಕೂರು ಬಾಲಮಂದಿರಕ್ಕೆ ಮಾಹಿತಿ ನೀಡಿ.ಮಕ್ಕಳು ಓಡಿಹೋಗದಂತೆ ತಿಂಡಿಕೊಟ್ಟು ಮಾತನಾಡಿಸಿ ಅವರ ಪೂರ್ವ ಹಿನ್ನಲೆಯನ್ನು ವಿಚಾರಿಸಿದಾಗ ತಂದೆ ತೀರಿಕೊಂಡಿದ್ದು ತಾಯಿ ವಿಪರೀತ ಕುಡಿತದಿಂದ ಮಕ್ಕಳನ್ನು ಕೈಬಿಟ್ಟಿದ್ದು ತಿಳಿದು ಬಂದಿದೆ.
ಹರಿಹರ ತಾಲೂಕಿನ ರೈಲ್ವೆ ಸ್ಟೇಷನ್ ಹತ್ತಿರ ಆಟವಾಡುತ್ತಿದ್ದ ಮಕ್ಕಳನ್ನು ಪ್ರದೀಪ್ ಎಂಬಾತ ಕರೆದುಕೊಂಡು ಬಂದು ಸುಮಾರು ಆರು ಏಳು ತಿಂಗಳ ಹಿಂದೆ ತಿಪಟೂರಿನಲ್ಲಿ ಒಂದು ಚಿಕ್ಕ ಮನೆಯಲ್ಲಿ ಆಶ್ರಯವನ್ನು ನೀಡಿದ್ದರು. ಆದರೆ ಮಗುವಿನ ಶೈಕ್ಷಣಿಕ ಶಾಲೆ ಬಿಟ್ಟಮಕ್ಕಳು, ಪೌಷ್ಟಿಕಾಂಶವುಳ್ಳ ದೈಹಿಕ ಬೆಳವಣಿಗೆಯಲ್ಲಿ ಕುಂಠಿತಗೊಂಡಿದು.ನಗರದ ಹಲವೆಡೆ ಭಿಕ್ಷಾಟನೆಯಲ್ಲಿ ತೊಡಗಿರುತ್ತಾರೆ.


ತದನಂತರ ತಿಪಟೂರು ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ನಗರ ಪೊಲೀಸ್ ಠಾಣೆಗೆ, ಶಿಕ್ಷಣ ಇಲಾಖೆಗೆ ಸಂಬಂಧಪಟ್ಟಂತೆ ಫೋನ್ ಮೂಲಕ ವಿಚಾರವನ್ನು ಮುಟ್ಟಿಸಿದಾಗ ಶಿಶು ಅಭಿವೃದ್ಧಿ ಅಧಿಕಾರಿಗಳ ಮೂಲಕ ತುಮಕೂರಿನ ಬಾಲ ಮಂದಿರಕ್ಕೆ ಮಕ್ಕಳನ್ನು ಕರೆದುಕೊಂಡು ಹೋಗಿ ಆಶ್ರಯ ನೀಡಲಾಗಿದೆ.ಆದರೆ ಮಕ್ಕಳು ಶಾಲೆ ಬಿಟ್ಟು ಭಿಕ್ಷಾಟನೆಯಲ್ಲಿ ತೊಡಗಿದರೂ ಶಿಕ್ಷಣ ಇಲಾಖೆ ಶಾಲೆ ಬಿಟ್ಟಮಕ್ಕಳ ಗಣತಿ ನಡೆಸದೆ,ಇರುವುದು ಶಿಕ್ಷಣ ಇಲಾಖೆ ಕಾರ್ಯವೈಖರಿಗೆ ಹಿಡಿದ ಕನ್ನಡಿಯಾಗಿದೆ ನೂರಾರು ಮಕ್ಕಳು ಶಾಲೆ ಬಿಟ್ಟು ಭಿಕ್ಷಾಟನೆ ಹಾಗೂ ಬಾಲ ಕಾರ್ಮಿಕ ಕೆಲಸದಲ್ಲಿ ತೊಡಗಿದ್ದಾರೆ ಇಂತಹ ಮಕ್ಕಳ ಚಲನವಲನಗಳ ಮೇಲೆ ಗಮನಹರಿಸಬೇಕುಎಂದು ಪ್ರಶಾಂತ್ ಕರೀಕೆರೆ ಒತ್ತಾಯಿಸಿದ್ದಾರೆ.ಪತ್ರಕರ್ತರ ಸಮಯಪ್ರಜ್ಞೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ವರದಿ:ಮಂಜುನಾಥ್ ಹಾಲ್ಕುರಿಕೆ

Exit mobile version