ತುಮಕೂರು ಜಿಲ್ಲೆ ತಿಪಟೂರು ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಚಿರತೆ ಬಿದ್ದಿರುವ ಘಟನೆ ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ಹುಲಿಹಳ್ಳಿ ಗ್ರಾಮದಲ್ಲಿ ನಡೆದಿದೆ.
ಸುಮಾರು ಎರಡು ವರ್ಷ ವಯಸ್ಸಿನ ಗಂಡು ಚಿರತೆ ಅನೇಕ ದಿನಗಳಿಂದ ಹುಲಿಹಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರಲ್ಲಿ ಭೀತಿ ಉಂಟು ಮಾಡಿತು
ದನ ಹಾಗೂ ಕುರಿಗಳ ಮೇಲೆ ದಾಳಿ ಮಾಡಿ,ತಿಂದುಹಾಕಿದ್ದ ಚಿರತೆ ಗ್ರಾಮಸ್ಥರಲ್ಲಿ ಆತಂಕ ಉಂಟುಮಾಡಿತ್ತು,ಗ್ರಾಮಸ್ಥರ ದೂರಿನಹಿನ್ನೆಲೆ ಅರಣ್ಯ ಇಲಾಖೆ ಬೋನ್ ಇರಿಸಿತ್ತು , ಆಹಾರ ಅರಸಿಬಂದ ಚಿರತೆ,ಬೋನಿನಲ್ಲಿ ಸೆರೆಯಾಗಿದೆ,
ವರದಿ :ಮಂಜುನಾಥ್ ಹಾಲ್ಕುರಿಕೆ
