KALPATHARU KRANTHI

ಕುರುಕ್ಷೇತ್ರ ನಾಟಕ ಮನುಷ್ಯನ ನಿಜ ಜೀವನದಲ್ಲಿ ಸನ್ಮಾರ್ಗದಲ್ಲಿ ನಡೆಯಲು.ದಾರಿ ದೀಪ: ನ್ಯಾಯಮೂರ್ತಿ ಆರೀಪ್ ಉಲ್ಲಾ

Spread the love

ತಿಪಟೂರು: ಕುರುಕ್ಷೇತ್ರ ಮಾಹಾಯುದ್ದ ನ್ಯಾಯ ಅನ್ಯಾಯಗಳ ನಡುವೆ ನಡೆದ ಮಹಾಕಾಳಗ,ಸತ್ಯ ನ್ಯಾಯ ಮಾರ್ಗದಲ್ಲಿ ನಡೆದರೆ ಮನುಷ್ಯನಿಗೆ ನೆಮ್ಮದಿ ದೊರೆಯುತ್ತದೆ,ಕಲಹದಿಂದ ಯಾರಿಗೂ ನೆಮ್ಮದಿ ಇಲ್ಲ ಎನ್ನುವುದನ್ನ ಪ್ರತಿಯೊಬ್ಬರು ಅರಿತು ಬದುಕಬೇಕು ಎಂದು ನ್ಯಾಯಾಧೀಶರಾದ ಅರೀಪ್ ಉಲ್ಲಾ ತಿಳಿಸಿದರು


ನಗರದ ಸರ್ಕಾರಿ ಬಾಲಕ ಪದವಿ ಪೂರ್ವ ಕಾಲೇಜು ಆವರಣದಲ್ಲಿ ತಿಪಟೂರು ಉಪವಿಭಾಗ ಪೊಲೀಸ್ ಇಲಾಖೆ ಸಿಬ್ಬಂದಿ ಶ್ರೀಮಾರುತಿ ಕೃಪಾಪೋಷಿತ ನಾಟಕ ಮಂಡಳಿ ಯಿಂದ ಅಭಿನಯಿಸಿದ ಕುರುಕ್ಷೇತ್ರ ಅಥವಾ ಧರ್ಮರಾಜ್ಯ ಸ್ಥಾಪನೆ ಪೌರಾಣಿಕ ನಾಟಕ ಉದ್ಘಾಟಿಸಿದ ನ್ಯಾಯಾಧೀಶರು ಮಾತನಾಡಿ ಕುರುಕ್ಷೇತ್ರ ನಾಟಕ ಮನುಷ್ಯನ ಜೀವನಕ್ಕೆ ಸರಿದಾರಿ ತೋರುತ್ತದೆ, ಕುರುಕ್ಷೇತ್ರ ಮಹಾಯುದ್ದದಲ್ಲಿ ಧರ್ಮಾ, ಅಧರ್ಮಗಳ ನಡೆದ ದಾಯಾದಿ ಕಲಹವಾಗಿದ್ದು,ಸತ್ಯಮಾರ್ಗದಲ್ಲಿ ನಡೆದರೆ ಶಾಂತಿ ಸನ್ಮಾರ್ಗದೊರೆಯುತ್ತದೆ ಎನ್ನುವುದನ್ನ ಕಾಣಬಹುದು.ಕುರುಕ್ಷೇತ್ರದಲ್ಲಿ ಶಸ್ತ್ರ, ಅಸ್ತ್ರಗಳ ನಡುವೆ ನಡೆದರೆ,ಕಲಿಯುಗದಲ್ಲಿ ಪೆನ್ನುಗಳ ನಡುವೆ ಯುದ್ದವಾಗುತ್ತಿದೆ,ಸ್ವಂತ ಒಡಹುಟ್ಟಿದವರ ನಡುವೆಯೇ,ಕೋರ್ಟ್ ಕೇಸು ಅಂತ ಹಲೆಯುವುದನ್ನ ಕಾಣುತ್ತಿದ್ದೆವೆ, ರಾಜೀಸಂಧಾನದ ಮೂಲಕ ವ್ಯಾಜ್ಯ ಬಗೆಹರಿಸಿಕೊಳ್ಳ ಹಲವಾರು ಮಾರ್ಗಗಳಿದರೂ,ದುರಾಸೆ ,ಪ್ರತಿಷ್ಠೆಯ ಕಾರಣಗಳಿಂದ ವ್ಯಾಜ್ಯಗಳು ಕೋರ್ಟ್ ಮೆಟ್ಟಿಲೇರುತ್ತಿರುವುದು, ಸರಿಯಲ್ಲ,ಎಲ್ಲಾ ಸಮಸ್ಯೆಗಳನ್ನು ರಾಜೀಸಂಧಾನದ ಮೂಲಕ ಬಗೆಹರಿಸಿಕೊಂಡರೆ ಶಾಂತಿ ನೆಮ್ಮದಿ ಜೀವನ ನಡೆಸಬಹುದು ಎಂದು ತಿಳಿಸಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಾಸಕ ಕೆ.ಷಡಕ್ಷರಿ ಮಾತನಾಡಿ ಪೊಲೀಸ್ ಇಲಾಖೆ ಸದಾ ಒತ್ತಡದ ನಡುವೆ ಕೆಲಸ ಮಾಡುತ್ತದೆ,ಒತ್ತಡದ ನಡುವೆಯೂ, ಮಾನಸಿಕ ನೆಮ್ಮದಿ ಹಾಗೂ ಮನೋರಂಜನೆ ಅಗತ್ಯವಾಗಿದ್ದು, ಕೆಲಸದ ನಡುವೆ ಬಿಡುವು ಮಾಡಿಕೊಂಡು ಕುರುಕ್ಷೇತ್ರ ನಾಟಕ ಕಲಿತು ಅಭಿನಯಿಸುತ್ತಿದ್ದಾರೆ, ಕಲೆಗೆ ಪ್ರೋತ್ಸಹಿಸುವುದು ಪ್ರತಿಯೊಬ್ಬರ ಜವಾಬ್ದಾರಿ,ಕಲೆಯನ್ನ ಶ್ರದ್ದೆಯಿಂದ ಕಲಿತರೆ ಕಲಾದೇವಿ ಒಲಿಯುತ್ತಾಳೆ ಎಂದು ತಿಳಿಸಿದರು
ಕಾರ್ಯಕ್ರಮದಲ್ಲಿ ಮುಖ್ಯಾತಿಥಿಗಳಾಗಿ ಭಾಗವಹಿಸಿದ ತಿಪಟೂರು ಉಪವಿಭಾಗ ಪೊಲೀಸ್ ಉಪ ಅಧೀಕ್ಷಕರಾದ ವಿನಾಯಕ ಎಸ್ ಶೆಟಗೇರಿ ನಮ್ಮ ಪೊಲೀಸ್ ಸಿಬ್ಬಂದಿ ಸದಾ ಒತ್ತಡದಲ್ಲಿ ಕೆಲಸ ಮಾಡುತ್ತಾರೆ, ಅವರಿಗೆ ಮಾನಸಿಕ ನೆಮ್ಮದಿಗಾಗಿ ಮನೋರಂಜನೆ ಅಗತ್ಯವಿದೆ, ನಮ್ಮ ಸಿಬ್ಬಂದಿ ಕುರುಕ್ಷೇತ್ರ ನಾಟಕಮಾಡುವುದ್ದಾಗಿ ಹೇಳಿದ್ದಾಗ ತುಂಬಾ ಖುಷಿಆಯ್ತು, ಅವರ ಕಲೆಗೆ ಪ್ರೊತ್ಸಾಹಿಸುವ ದೃಷ್ಠಿಯಿಂದ ಮೇಲಾಧಿಕಾರಿಗಳ ಅನುಮತಿ ಪಡೆದು. ನಾಟಕ ಪ್ರದರ್ಶನ ಮಾಡುತ್ತಿದ್ದೇ ,ನಾಟಕ ನೋಡಿ ಕಲೆಯನ್ನ ಪ್ರೋತ್ಸಾಹಿಸಿ, ಎಂದು ತಿಳಿಸಿದರು
ಕಾರ್ಯಕ್ರಮದಲ್ಲಿ ನ್ಯಾಯಾಧೀಶರಾದ ಶ್ರೀಮತಿ ಪುಷ್ಪಾವತಿ,ಮಾಜಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್,ತಿಪಟೂರು ಉಪವಿಭಾಗಾಧಿಕಾರಿ ಶ್ರೀಮತಿ ಸಪ್ತಶ್ರೀ,ತಹಸೀಲ್ದಾರ್ ಪವನ್ ಕುಮಾರ್,ಪೌರಾಯುಕ್ತ ವಿಶ್ವೇಶ್ವರಯ್ಯ ಬದರಗಡೆ,ಇಒ ಸುದರ್ಶನ್,ನಗರಸಭೆ ಅಧ್ಯಕ್ಷೆ ಶ್ರೀಮತಿ ಯಮುನಾಧರಣೇಶ್,ಉಪಾಧ್ಯಕ್ಷೆ ಮೇಘಶ್ರೀ ಭೂಷಣ್,ಜಿಲ್ಲಾ ಕಾಂಗ್ರೇಸ್ ಯುವ ಅಧ್ಯಕ್ಷ ನಿಖಿಲ್ ರಾಜಣ್ಣ ಸೇರಿದಂತೆ ಅನೇಕರು ಉಪಸ್ಥಿತರಿದರು
ಕಲಾಭಿಮಾನಿಗಳ ಮನಸೂರೆಗೊಂಡ ನಾಟಕ ಪ್ರದರ್ಶನ:

ವೃತ್ತಿಯಲ್ಲಿ ಪೊಲೀಸರಾದ್ರು ನಾಟಕದಲ್ಲಿ ಪರಕಾಯ ಪ್ರದರ್ಶನ ಮಾಡಿದವರಂತೆ ಪಾತ್ರಗಳಿಗೆ ಜೀವತುಂಬಿ ಅಭಿನಯಿಸಿದರು ಪ್ರೇಕ್ಷಕರು, ಶಿಳ್ಳೆ,ಚಪ್ಪಾಳೆ ಮೂಲಕ ಪ್ರೋತ್ಸಾಹಿಸಿದರು.ವೃತ್ತಿರಂಗಭೂಮಿ ಕಲಾವಿದರಂತೆ ನಾಟಕ ಪ್ರದರ್ಶನ ನೀಡಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು.

ಪೊಲೀಸ್ ಇಲಾಖೆಯ ಸಂಭ್ರಮ ಸಡಗರಕ್ಕೆ ಸಾರ್ವಜನಿಕರು ಫುಲ್ ಫಿದಾ:

ತಿಪಟೂರು ಉಪವಿಭಾಗಾ ಪೊಲೀಸ್ ಇಲಾಖೆಯಿಂದ ಅಭಿನಯಿಸಿದ ಕುರುಕ್ಷೇತ್ರ ನಾಟಕದ ವೇಳೆ ತಿಪಟೂರು ಉಪವಿಭಾಗಪೊಲೀಸ್ ಉಪವಿಭಾಗ ಪೊಲೀಸ್ ಅಧೀಕ್ಷಕರು ಎನ್ನುವ ಹಮ್ಮುಬಿಮ್ಮು ಮರೆತ ವಿನಾಯಕ ಶೆಟ್ಟಿಗೇರಿಯವರು ತಮ್ಮ ಸಹ ಸಿಬ್ಬಂದಿಯೊಂದಿಗೆ ಬೆರೆತು,ಸಂಡಗರದಿಂದ ನಾಟಕ ವ್ಯವಸ್ಥೆಗಳನ್ನ ನೋಡುತ್ತಿದ್ದರೆ ಸಹ ಎಲ್ಲಾ ವೃತ್ತ ನಿರೀಕ್ಷಕರು, ಸಬ್ ಇನ್ಸ್ಪೆಕ್ಟರ್ ಗಳು ಹಾಗೂ ಸಿಬ್ಬಂದಿಗಳು,ತಮ್ಮ ಮನೆಯ ಶುಭಕಾರ್ಯವೆನೋ ಎನ್ನುವಂತ್ತೆ ಕೆಲಸ ಮಾಡುತ್ತ,ಪಾತ್ರಾಧಾರಿಗಳಿಗೆ ಪ್ರೋತ್ಸಹಿಸಿ ,ಕಲಾಭಿಮಾನಿಗಳಿಗೆ ಉಮ್ಮಸುತುಂಬುತ್ತಿರುವುದು ಕಂಡ ಸಾರ್ವಜನಿಕರು ಫುಲ್ ಫಿದಾ ಆದರು.

Exit mobile version