ತಿಪಟೂರು:ನಗರ ಬಾಲಕರ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಮಾರ್ಚ್ 15ರಂದು ಶವಿವಾರ ರಾತ್ರಿ 08 ಗಂಟೆಗೆ ಶ್ರೀ ಮಾರುತಿ ಕೃಪಾಪೋಷಿತ ನಾಟಕ ಮಂಡಳಿ, ತಿಪಟೂರು ಉಪವಿಭಾಗ ಪೋಲೀಸ್ ಇಲಾಖೆಯಿಂದ ಕುರುಕ್ಷೇತ್ರಹಾಗೂ ಧರ್ಮರಾಜ್ಯ ಸ್ಥಾಪನೆ ನಾಟಕ ಏರ್ಪಡಿಸಲಾಗಿದ್ದು.ದಿವ್ಯ ಸಾನಿಧ್ಯವನ್ನ ಕೆರೆಗೋಡಿ ರಂಗಾಪೂರ ಭೂಸುಕ್ಷೇತ್ರಾಧ್ಯಕ್ಷರಾದ ಶ್ರೀ ಗುರುಪರದೇಶಿಕೇಂದ್ರ ಮಹಾಸ್ವಾಮೀಜಿಗಳು ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಕೇಂದ್ರ ವಲಯ ಪೊಲೀಸ್ ಮಹಾನಿರ್ದೇಶಕರಾದ ಶ್ರೀಲಾಬೂರಾಮ್ ಐಪಿಎಸ್ ರವರು ಹಾಗೂ ತುಮಕೂರು ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿ,ಅಶೋಕ್ ಕೆ.ಪಿ.ಐಪಿಎಸ್ ರವರು ಹಾಗೂ ತುಮಕೂರು ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿ.ಮರಿಯಪ್ಪ ಕೆಎಸ್ಪಿಎಸ್,ಶ್ರೀ ಬಿ.ಎಸ್ ಅಬ್ದುಲ್ ಖಾದರ್ .ಕೆಎಸ್ಪಿಎಸ್.ತಿಪಟೂರು ಉಪವಿಭಾಗ ಪೊಲೀಸ್ ಉಪ ಅಧೀಕ್ಷಕರಾದ ಶ್ರೀ ವಿನಾಯಕ ಎಸ್ ಶಟಗೇರಿ ಸೇರಿದಂತೆ ತಿಪಟೂರು ಉಪವಿಭಾಗ ವ್ಯಪ್ತಿಯ ಎಲ್ಲಾ ಪೊಲೀಸ್ ಅಧಿಕಾರಿಗಳು ಭಾಗವಹಿಸುತ್ತಿದ್ದು,ಕಲಾಸಕ್ತರು ಹಾಗೂ ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರೋತ್ಸಾಹಿಸ ಬೇಕಿದೆ.
ವರದಿ:ಮಂಜುನಾಥ್ ಹಾಲ್ಕುರಿಕೆ